Sunday, 18 August 2013

ಯಕ್ಷಗಾನದಲ್ಲಿ ನಾಯಕನ ಆರಾಧನೆ - Dr.Shreepad Bhat

      ಕೆಲದಿನಗಳ ಹಿಂದೆ ಕುಮಟಾದಲ್ಲಿ ಜರುಗಿದ್ದ ಯಕ್ಷಗಾನ ಪ್ರದರ್ಶವೊಂದಕ್ಕೆ ಹೋಗಿದ್ದೆ . ಆಗ ಆಲ್ಲಿ ಆಟ ಪ್ರದರ್ಶನಗೊಂಡ ಬಗೆ ಅಲ್ಲಿಯ ಪ್ರೇಕ್ಷಕ ವರ್ಗದ ನಡವಳಿಕೆಯನ್ನು ನೋಡಿ ನಿಜಕ್ಕೂ ಬೆಚ್ಚಿ ಬಿದ್ದೆ ! ತಮ್ಮ ನೆಚ್ಚಿನ ನಟನ ಪ್ರತಿ ಕುಣಿತಕ್ಕೂ ಪ್ರತಿ ನಿಮಿಷವೂ ಅವರು ಚೀರುತ್ತಿದ್ದ ರೀತಿ ಉಳಿದ ಯಾವ ಪಾತ್ರಗಳನ್ನೂ ನೋಡಲು ಕೇಳಲು ಕೊಡದ ನೀತಿ ಅಭಿಮಾನಿಗಳ ಮಾಫಿಯಾವನ್ನು ನೆನಪಿಗೆ ತರುತ್ತಿತ್ತು. ಅವರನ್ನು ಆ ರೀತಿ ಪ್ರೇರಿಸುತ್ತಿದ್ದ, ಚೀರುವಿಕೆಯಿಂದ ಪುಳಕಗೊಳ್ಳುವ ಕಲಾವಿದರು ಕಲೆಯ ಶವ ಪೆಟ್ಟಿಗೆಯ ಮೊಳೆ ಯಂತಿದ್ದರು. ಯಕ್ಷಗಾನದ ಇಂದಿನ ಸಂದರ್ಭವನ್ನು ಹತ್ತಿರದಿಂದ ಬಲ್ಲವರಿಗೆ ಈ ಮಾತು ಅರ್ಥವಾಗುತ್ತದೆ! ಬೆಂಗಳೂರಿನ ಕೆಲ ಚಲನಚಿತ್ರ ಗೃಹಗಳಲ್ಲಿ ಡಾ. ರಾಜಕುಮಾರರ ಚಿತ್ರಗಳನ್ನು ನೋಡು ವಾಗ ಅಲ್ಲಿನ ಕೆಲ ಪ್ರೇಕ್ಷಕರ ನಡವಳಿಕೆ ಹೀಗೇ ಇರುತ್ತದೆ! ಅಲ್ಲಿ ಶಾಂತವಾಗಿ ಚಲನಚಿತ್ರ ನೋಡುವುದೇ ಅಸಾಧ್ಯ. ಅಲ್ಲಿಗೆ ಮತ್ತು ಇಲ್ಲಿಗೆ ವ್ಯತ್ಯಾಸ ಒಂದಿದೆ! ಅಲ್ಲಿ ಪರದೆಯ ಮೇಲೆ ತನ್ನ ನಾಯಕನನ್ನು ನೋಡುತ್ತಿದ್ದಂತೆ ಚಿಲ್ಲರೇ ನಾಣ್ಯ ಎಸೆದರೆ ಇಲ್ಲಿ ಎಸೆದಿಲ್ಲ ಅಷ್ಟೆ!   ಪ್ರೇಕ್ಷಕರ ಅಸಹನೀಯ ಗದ್ದಲದಿಂದಾಗಿ ಪ್ರದರ್ಶನದಿಂದ ಅರ್ಧಕ್ಕೆ ವಾಪಸಾಗಬೇಕಾಯಿತು. 

     ಹೀಗೆ ಪ್ರೇಕ್ಷಕರಿಂದ ಅಭಿಮಾನದ ರೂಪದಲ್ಲಿ ವ್ಯಕ್ತಗೊಳ್ಳುವ ಈ ಬಗೆಯ ನಡವಳಿಕೆ ಯಕ್ಷಗಾನದಲ್ಲಿ ನಾಯಕನ ಆರಾಧನೆ ಕುರಿತು ಚಿಂತಿಸುವುದಕ್ಕೆ ಕಾರಣ. ಯಕ್ಷರಂಗದಲ್ಲಿ ತಾರೆಗಳ ಉದಯ, ಅವರ ಜವಾಬ್ದಾರಿ ರಹಿತ ನಡತೆ, ಪ್ರೇಕ್ಷಕರ ಅತಿರೇಕ ವರ್ತನೆಗಳು, ಇವೆಲ್ಲವುಗಳಿಂದ ಕಲೆಯ ಮೇಲಾಗುವ ಪರಿಣಾಮದ ಕುರಿತು ಆ ಕ್ಷಣದ ಅನಿಸಿಕೆಗಳನ್ನಷ್ಟೆ ದಾಖಲಿಸುತ್ತಿದ್ದೇನೆ. ನಾನು ಅತೀವವಾಗಿ ಪ್ರೀತಿಸುತ್ತಿರುವ ಕಲಾ ವ್ಯವಹಾರವೊಂದರ ವ್ಯಾಕರಣವೇ ವ್ಯತ್ಯಯವಾಗಿ ಹೋಗುತ್ತಿರುವ ದಿಗ್ಭ್ರಮೆಯಲ್ಲಿ..............

    ಯಕ್ಷಗಾನವೊಂದು ಸಾಮುದಾಯಿಕ ಕಲೆ. ಸೆಮಿಕ್ಲಾಸಿಕ್ ರೂಪ ತಳೆದಿದ್ದರೂ ತನ್ನ ಸಂವಹನದ ಶಕ್ತಿಯಲ್ಲಿ ಸಮ್ಮೋಹಕತೆಯಲ್ಲಿ ಜಾನಪದ ವೈಲಕ್ಷಣವನ್ನು ಗರ್ಭದಲ್ಲಿರಿಸಿಕೊಂಡ ಕಲಾ ಪ್ರಕಾರ. ಸಾಮೂಹಿಕ ನಿರ್ವಹಣೆಯ ಮೂಲಕವೇ ಅದರ ಪರಿಣಾಮ ಸಿದ್ದಿಸುತ್ತದೆ. ಹಾಗಾಗಿ ಈ ಪ್ರದರ್ಶನಾತ್ಮಕ ಕಲೆಗೆ, ಚಲನಚಿತ್ರದಲ್ಲಿರುವಂತಹ, ಕಂಪನಿ ನಾಟಕಗಳಲ್ಲಿ ಕಂಡುಬರುವಂತಹ ತಾರೆಗಳ ಅವಶ್ಯಕತೆ ಇಲ್ಲ. ನಾಯಕನ ಆರಾಧನೆಯಿಂದ ವ್ಯಕ್ತಿಪೂಜೆ ಆರಂಭವಾಗುತ್ತದೆ. ಕಲಾವಿದ ಆ ಕಲಾ ಪ್ರಕಾರಗಳಿಂದ ಹೊರನಿಂತು, ವೈಯಕ್ತಿಕವಾಗಿ ಕಾಣಿಸಿಕೊಳ್ಳುವ, ಪ್ರತ್ಯೇಕಗೊಳ್ಳುವ ವ್ಯವಹಾದಲ್ಲಿ ಈ ತಾರೆಗಳ ಅಸ್ತಿತ್ವ. ಆದರೆ ಯಕ್ಷಗಾನ ಕಲಾವಿದ ವ್ಯವಹರಿಸುವುದು ಆ ಪ್ರಕಾರ(ಖಿಥಿಠಿಜ) ದ ಮೂಲಕವಾಗಿ ಆದ್ದರಿಂದಲೇ ಈ ತಾರೆಗಳು ಯಕ್ಷಗಾನದ ಪರಿಣಾವನ್ನೇ ಹದಗೆಡಿಸುವಲ್ಲಿ ಕಾರಣರಾಗುತ್ತಾರೆ! 

     ಬಹುಶಹ ಟೆಂಟ್ಮೇಳಗಳ ಆವಿಷ್ಕಾರದೊಂದಿಗೆ ಅಂದರೆ ಕಲೆಯೊಂದು ಪೂರ್ಣಪ್ರಮಾಣದಲ್ಲಿ ಉದ್ದಿಮೆಯಾದನಂತರ ಈ ತಾರಾಮೌಲ್ಯ ಪ್ರಚಲಿತಕ್ಕೆ ಬಂದಿತು ಅನಸುತ್ತದೆ. ಆರಾಧನೆಯ ಹೊರತಾದ ಪ್ರದರ್ಶನ ತನ್ನ ಪ್ರದರ್ಶನೀಯತೆಯಿಂದಲೇ ಪ್ರೇಕ್ಷರನ್ನು ಸೆರೆ ಹಿಡಿಯಬೇಕಾಗಿರುವುದರಿಂದ ಸಹಜವಾಗಿ ಕೆಲವು ಪ್ರೇಕ್ಷಣೀಯ ಅಂಶಗಳನ್ನು ಗುರುತಿಸಿ, ಟೆಂಟ್ ಯಜಮಾನ ಅವುಗಳನ್ನು ಕ್ಯಾಶ್ ಮಾಡಿಕೊಳ್ಳತೊಡಗಿದ. ಈ ಹಿನ್ನಲೆಯಲ್ಲಿಯೇ ಇಂತಹ ಪಾತ್ರ ಇಂಥವರೇ ನಿರ್ವಹಿಸುವರೆಂಬ ಪ್ರಚಾರ,  ಅದನ್ನು ನೋಡಲೆಂದೇ ಪ್ರೇಕ್ಷಕರು ಬರುವಂತೆ ಮಾಡಲಾಯಿತು. ಇದೇ ಮುಂದೆ ಪಟ್ಟಭದ್ರತೆ, ಕಲಾವಿದರ ಬೆಳವಣಿಗೆಯ ಸ್ಥಗಿತತೆ ಇವೆಲ್ಲಕ್ಕೂ ಕಾರಣವಾಯಿತು.

           ಕಲಾವಿದನ ಸ್ವಗತದಲ್ಲಿ ಯಕ್ಷ ಕಲಾವಿದ ಜಲವಳ್ಳಿ ವೆಂಕಟೇಶರು ಈ ಕುರಿತು ಮಾತನಾಡುತ್ತ
ಆಟವೇ ಪ್ರಧಾನವಾಗಿದ್ದಾಗ ಒಬ್ಬ ಕಲಾವಿದ ಎರಡು-ಮೂರು ಪಾತ್ರಗಳನ್ನು ನಿಭಾಯಿಸುತ್ತಿದ್ದ.... ಇಂಥ ಪಾತ್ರ ಇಂಥವರೇ ಮಾಡಬೇಕೆಂಬ ಮೀಸಲಾತಿ ಇರುತ್ತಿರಲಿಲ್ಲ. ಸಂದಭರ್ಾನುಸಾರ ಆಯಾ ಪಾತ್ರಗಳನ್ನು ಮಾಡುವ ಅವಕಾಶ ಸಿಗುತ್ತಿತ್ತು. ಇದರಿಂದ ಒಬ್ಬ ಕಲಾವಿದ ಪೂರ್ಣ ಪ್ರಮಾಣದಲ್ಲಿ ರೂಪುಗೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇಂದು ಹೀಗಿಲ್ಲ ಎನ್ನುತ್ತಾರೆ. ಕಲೆಕ್ಷನ್ ಮಾತ್ರ ಪ್ರಧಾನವಾಗಿರುವ ಉದ್ದೇಶದ ಪ್ರದರ್ಶನದಲ್ಲಿ ಇದಕ್ಕೆ ವ್ಯತಿರಿಕ್ತವಾದ ಅನುಭವ ಸಹಜವಾಯಿತು.

       ಕಾಲದ ಹೋಯ್ಲಿಗೆ ಸಿಕ್ಕ ಯಾವ ಕಲೆಯಾದರೂ ತನ್ನ ಮೂಲ ಸ್ವರೂಪದಲ್ಲಿ ಉದ್ದೇಶದಲ್ಲಿ ವ್ಯತ್ಯಯ ಇಲ್ಲದಂತೆ ಮುಂದುವರಿಯಲು ಸಾಧ್ಯವಿಲ್ಲ. ಈ ಕುರಿತು ನಾವು ಸಿನಿಕರಾಗಬೇಕಿಲ್ಲ. ಆದರೆ ಇದೇ ಕಾರಣಕ್ಕೆ ಕಲಾ ಸಂಸ್ಥೆ ಪ್ರೇಕ್ಷಕರ ಅಭಿರುಚಿಯನ್ನೇ ಕೆಡಿಸದಿರುವ ವಿವೇಕ ಬೆಳಸಿಕೊಳ್ಳಬೇಕಾದ ಬಗ್ಗೆ ಚಿಂತಿಸಬೇಕಾಗಿದೆ. ಅದರಲ್ಲೂ ಸೂಕ್ಷ್ಮರೂ, ಸಂವೇದಿಗಳೂ ಅನ್ನಿಸಿಕೊಂಡ ಕಲಾವಿದರು ಈ ಹೋಯ್ಲಿನಲ್ಲಿ ತಾವೇ ಸೆಳೆದು ಹೋಗುತ್ತ ತಮ್ಮ ಅಸ್ತಿತ್ವನ್ನು ಪ್ರತ್ಯೇಕವಾಗಿ ಕಾಣಿಸಿ ಚಪ್ಪಾಳೆಗಾಗಿಯೇ ರಂಗದ ಮೇಲೆ ಬದುಕುವ ರೀತಿ ಶೋಚನೀಯ ಎನಿಸಿಬಿಡುತ್ತದೆ. 
ಈ ಹಿಂದೆ ಕೆಲವು ಕಲಾವಿದರು ತಮ್ಮ ಪ್ರತಿಭೆ ಮತ್ತು ಅವಕಾಶಗಳಿಂದಾಗಿ ಯಕ್ಷಗಾನದಲ್ಲಿ ನಾಯಕಮಣಿಗಳಾಗಿ ಕಂಗೊಳಿಸಿದ್ದಿದೆ. ಆದರೆ ವಿವಿಧ ಪಾತ್ರಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಒಟ್ಟು ಪರಿಣಾಮದಲ್ಲಿ ಯಕ್ಷಗಾನದ ಪ್ರಕಾರ ದಿಂದ ಬೇರೆಡೆ ಫ್ರೇಂ ಆಗದಿರುವಿಕೆ, ಅವರನ್ನು ತಾರೆಗಳನ್ನಾಗಿಸಲಿಲ್ಲ. 

     ಈ ಸಂದರ್ಭದಲ್ಲಿ ಕೆ.ವಿ.ಅಕ್ಷರ ಅವರು ರಂಗ ಪ್ರಪಂಚ ಪುಸ್ತಕದಲ್ಲಿ ಉಲ್ಲೇಖಿಸಿದ 18ನೇ ಶತಮಾನದಲ್ಲಿಯ  ನಾಟಕ ರಂಗಭೂಮಿಯ ತಾರಾ ಮೌಲ್ಯದ ಉದಯ ಮತ್ತು ಕಲೆಯ ಅವನತಿ ಬಗೆಗಿನ ದಾಖಲೆಗಳನ್ನು ಹೋಲಿಕೆಗಾಗಿ ಇಲ್ಲಿ ನೀಡುತ್ತಿದ್ದೇನೆ. ಪ್ರೇಕ್ಷಕರು ನಾಟಕ ನೋಡಲಿಕ್ಕಾಗಿ ಹೋಗದೆ ತಮ್ಮ ನೆಚ್ಚಿನ ನಟರನ್ನು ನೋಡಲಿಕ್ಕಾಗಿ ಹೋಗುತ್ತಿದ್ದರು.... ನಟ ತನ್ನ ದೇಹ ಧ್ವನಿ ಮಾತುಗಳನ್ನು ಪ್ರೇಕ್ಷಕರಿಗೆ ಆಕರ್ಷಕವೆನಿಸುವ ಹಾಗೆ, ಚಾಣಾಕ್ಷವೆನಿಸುವ ಹಾಗೆ ಬಳಸಿಕೊಳ್ಳತಿದ್ದ. ಇಂಥ ಒಂದೊಂದು ಅಭಿನಯ ಭಾಗವನ್ನು ಮುಗಿಸುತ್ತಲೂ ಪ್ರೇಕ್ಷರಿಂದ ಕರತಾಡತನವನ್ನು ಸ್ವೀಕರಿಸಿ ಆಮೇಲೆ ಮುಂದಿನ ಭಾಗಕ್ಕೆ ಹೋಗುತ್ತಿದ್ದ... 

       ನಮ್ಮ ಯಕ್ಷ ತಾರೆಗಳು ಸಹ ಹೀಗೆಯೇ  ಬಾವ ಕೈಯ ಮುಗಿವೆ........ ಎಂಬ ಪದ್ಯವನ್ನು ಭಾಗವತರು ಹಾಡುತ್ತಿದ್ದರೆ ನೆಲಕ್ಕೆ ತಲೆ ಹೊಸೆಯುವವರೆಗೂ ಬಗ್ಗಿ, ಚಪ್ಪಾಳೆ ಬಿದ್ದ ಮೇಲೆಯೇ ತಲೆ ಎತ್ತುತ್ತಾರೆ. ಉಂಡ ಮೊಲೆಯ ಮರೆತು .......... ಪದಾಭಿನಯದಲ್ಲಿ ಮೊಲೆಯನ್ನು ವಿಕೃತವಾಗಿ ತೋರುತ್ತ ಪದ್ಯದ ಧ್ವನಿಯನ್ನೆ ಗ್ರಹಿಸದೇ ಚಪ್ಪಾಳೆ ಬೀಳುವವರೆಗೂ ಕುಣಿಯುತ್ತಾರೆ. ಒಂದು ಪ್ರದರ್ಶನ ಮುಗಿಯುವ ಹೊತ್ತಿಗೆ ಇಂತಹ ಹಲವು ಹತ್ತು ಉದಾಹರಣೆಗಳನ್ನು ಯಾರು ಬೇಕಾದರು ಗುರುತಿಸಬಹುದು, ಅದರಲ್ಲೂ ಇಂತಹ ಅಭಿನಯಗಳು ತುಂಬಾ ರೂಕ್ಷವಾಗಿ ಅಭಿನಯಿಸಲ್ಪಡುತ್ತವೆ; ಕಂಪನಿ ನಾಟಕದ ಅನೌಚಿತ್ಯ ಹಾಸ್ಯಗಳಿಗಿಂತ ಕಡೆಯಾಗಿ........... ಅರ್ಥ ಸಂವಹನದ ಗರಿಷ್ಟ ಸಾಧ್ಯಗಳಿಗಾಗಿ ಬಳಕೆಯಾಗುವ ಪುನಾರಾಭಿನಯ ಪರಂಪರೆ ಇಂಥವರ ಕೈಗೆ ಸಿಕ್ಕು ಹೇಗೆ ವಿರೂಪಗೊಳ್ಳುತ್ತಿದೆ ಎಂಬುದನ್ನು ಇಂಥ ಉದಾಹರಣೆಗಳಲ್ಲಿ ಚೆನ್ನಾಗಿ ಗಮನಿಸಬಹುದು.

     ಅಕ್ಷರ ಅವರು ಅದೇ ಲೇಖನದಲ್ಲಿ ಹೇಳಿದ ಈ ಹೇಳಿಕೆಯನ್ನು ಗಮನಿಸಿ. ನಾಟಕ ರಂಗದ ನಟರ ಅಸಾಧಾರಣ ಪ್ರಸಿದ್ದಿಯೇ ಆ ಶತಮಾನದ ನಾಟಕ ಸಾಹಿತ್ಯಕ್ಕೆ ಮುಳುವಾಯಿತು. ನಟ ತನ್ನನ್ನು ನೋಡಲೆಂದು ಬಂದ ಪ್ರೇಕ್ಷಕನಿಗಾಗಿಯೇ ತನ್ನ ಅಭಿನಯವನ್ನು ಒಗ್ಗಿಸಿಕೊಂಡಿದ್ದ. ಮ್ಯಾನೇಜರರು ತನ್ನ ಕಂಪನಿ ನಟನಿಗೆ ಹೊಂದುವಂತೆ ಏಕವ್ಯಕ್ತಿ ಪ್ರಧಾನ ನಾಟಕಗಳನ್ನು ಬರೆಸಿ ಆಡುತ್ತಿದ್ದರು. 

    ಹದಿನೆಂಟನೇ ಶತಮಾನದ ಈ ರಂಗ ಇತಿಹಾಸದ ದಾಖಲೆ ಇಂದಿನ ಯಕ್ಷಗಾನ ಕಂಪನಿಗಳಿಗೆ ಎಷ್ಟು ಚೆನ್ನಾಗಿ ಅನ್ವಯವಾಗುತ್ತದೆ ಗಮನಿಸಿ. ಮುಖ್ಯವಾಗಿ ಚಿಂತಿಸ ಬೇಕಾದದ್ದು ಇದು - ಇದನ್ನೆಲ್ಲ ತುಂಬಾ ಖುಷಿಯಿಂದ ಅನುಭವಿಸುವ ನಟ ತಾನು ಬೆಳೆಯುವುದಿಲ್ಲ. ಪಾತ್ರಕ್ಕಿಂತ ನಟನೇ ಪ್ರಧಾನನಾದಲ್ಲಿ ಪಾತ್ರಕ್ಕೆ ಹೊಂದುವಂತೆ ನಟ ಬದಲಾಗುವುದಿಲ್ಲ.  
ಈ ಅಚ್ಚಿನ ಅಭಿನಯದ ನಟರು, ಅವರ ಏಕವ್ಯಕ್ತಿ ಪ್ರಧಾನ ಪ್ರಸಂಗ ಪ್ರದರ್ಶನ, ಈ ಪ್ರದರ್ಶನಗಳು ಸೃಷ್ಟಿಸಿದ ಶಿಳ್ಳೆ ಪ್ರೇಕ್ಷಕರು - ಇಲ್ಲದರಿಂದ ಆಟ ನೋಡುವುದು ಒಂದು ಅನುಭವವಾಗಿ ಮಾರ್ಪಡುವುದು ಸಾಧ್ಯವೇ? ಇದರಲ್ಲಿ ಯಾರ್ಯಾರ ಕೊಡುಗೆ ಎಷ್ಟೆಷ್ಟಿದೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬಹುದೇ .
                                                                       Dr.Shreepad Bhat

ಕಾರ್ನಾಡರ ನಾಟಕಗಳಲ್ಲಿ ಸ್ತ್ರೀಪಾತ್ರ -ಶ್ರೀಪಾದ ಭಟ್ಟ್

         ಶ್ರೇಣೀಕೃತ, ಸಾಂಪ್ರದಾಯಿಕ, ಪಿತೃ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ ಮತ್ತು ಸಾಧ್ಯತೆ ಕಾರ್ನಾಡರನ್ನು ಬಹುವಾಗಿ ಆಕರ್ಗಷಿಸಿದ ಸಂಗತಿ. ಈ ಆಶಯವನ್ನು ಅವರು ನಿರ್ವಹಿಸಿದ ಬಗೆ, ಸ್ತ್ರೀ ಪಾತ್ರಗಳ ನಿರ್ಮಿತಿಯ ಹಿಂದಿನ ನಿಲುವು, ಈ ನಿಲುವುಗಳು ನಾಟಕದ ಕ್ರಿಯೆಯನ್ನು ನಡೆಸಿದ ರೀತಿ ಇದನ್ನು ಅಧ್ಯಯನ ಮಾಡುವುದು ಈ ಲೇಖನದ ಉದ್ದೇಶ. ಸ್ತ್ರೀ ಪಾತ್ರಗಳ ನಡೆಯ ಮೂಲಕವೇ ಈ ಅಂಶಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಕೇಂದ್ರದಲ್ಲಿದ್ದ ಪುರುಷ ಯಜಮಾನಿಕೆ ಪರಿಧಿಯತ್ತ ಸರಿಯುತ್ತ, ಈ ಪುರುಷ ಪಾತ್ರಗಳ ಸುತ್ತ ಗಿರಕಿ ಹೊಡೆಯುತ್ತವೆ ಎಂದು ಕೊಳ್ಳುವ ಸ್ತ್ರೀ ಪಾತ್ರಗಳು ಕೇಂದ್ರವನ್ನಾವರಿಸುವ ಒಂದು ಬಗೆಯ ಚಲನೆ ಇಲ್ಲಿಯ ನಾಟಕದಲ್ಲಿರುವದರಿಂದ, ಪಾತ್ರಗಳ ನಡೆಯ ಚಚರ್ೆ, ನಾಟಕದ ಚಚರ್ೆಯಾಗಿಯೂ ಇಲ್ಲಿ ಮಾರ್ಪಟ್ಟಿದೆ. ಈ ಚಚರ್ೆಗೆ ಯಯಾತಿ, ಹಿಟ್ಟಿನಹುಂಜ, ಅಂಜುಮಲ್ಲಿಗೆ, ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ ನಾಟಕಗಳನ್ನು ಆಯ್ದುಕೊಂಡಿದ್ದೇನೆ.
                  ಹೆಣ್ಣು ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮಾಡುವ ವಿವಿದಣ ನೆಲೆಯ ಹೋರಾಟವನ್ನು ಅಸ್ತಿತ್ವವಾದಿ ತಾತ್ವಿಕತೆಯ ಮೂಲಕವೇ ಕಟ್ಟ ಹೊರಟ ಪ್ರಯತ್ನ ಯಯಾತಿಯಲ್ಲಿದೆ. ದೇವಯಾನಿ ಬ್ರಾಹ್ಮಣ ಕನ್ಯೆ. ಕಚನಿಂದ ನಿರಾಕರಿಸಲ್ಪಟ್ಟ ಆಕೆಗೆ ಯಯಾತಿಯಿಂದೊಂದು ಅಸ್ತಿತ್ವ ಸಿಕ್ಕಿತು. ಆ ಕಾರಣಕ್ಕಾಗಿಯೇ ಯಯಾತಿಯ ಎಲ್ಲ ತೆವಲುಗಳನ್ನು ಆಕೆ ಸಹಿಸುತ್ತ ಬಂದಳು. ಆದರೆ ಯಾವ ಅಸ್ತಿತ್ವಕ್ಕಾಗಿ ಯಯಾತಿಯನ್ನು ಆಕೆ ಸಹಿಸಿದ್ದಳೋ ಅದಕ್ಕೆ ಧಕ್ಕೆ ಬಂದಾಗ ಮಾಂಗಲ್ಯವನ್ನು ಕಿತ್ತು ಬಿಸುಟು ಹೊರನಡೆಯುತ್ತಾಳೆ. ಶರ್ಮಿಷ್ಟೆ ರಾಜನ ಮಗಳಾಗಿದ್ದರೂ ಒಂದು ಕಾಲಕ್ಕೆ ಗೆಳತಿಯಾಗಿದ್ದ, ಬ್ರಾಹ್ಮಣ ರಾಣಿಯ ದಾಸಿಯಾದವಳು. ಕ್ಷತ್ರಿಯ ರಾಜ ಯಯಾತಿಯನ್ನು ತನ್ನ ಬೌದ್ಧಿಕತೆ ಮತ್ತು ಲೈಂಗಿಕತೆಯಿಂದ ಗೆದ್ದು ದೇವಯಾನಿಯ ಸ್ಥಾನಕ್ಕೆ ಬರುತ್ತಾಳೆ. ಆದರೆ ಒಮ್ಮೆ ಆ ಸ್ಥಾನಕ್ಕೆ ಬಂದ ನಂತರ ಯಯಾತಿಗೆ ನಿಷ್ಠಳಾಗುತ್ತಾಳೆ. ಈ ಹೊಸ ಅಸ್ತಿತ್ವ ಯಯಾತಿಯೊಂದಿಗಿನ ವಾನಪ್ರಸ್ಥಕ್ಕೂ ಅವಳನ್ನು ಸಿದ್ದಗೊಳಿಸುತ್ತದೆ.
      ಕ್ಷತ್ರಿಯತ್ವದ ದಮ್ಮಿಲ್ಲದ ಪುರುವಿನ ಕೈ ಹಿಡಿದು ಅರಮನೆ ಪ್ರವೇಶಿಸಿದ ಚಿತ್ರಲೇಖೆಯನ್ನು ಸ್ವಾಗತಿಸಿದ್ದು ದೇವಯಾನಿ ಕಿತ್ತೆಸೆದ ಮಾಂಗಲ್ಯ. ಈ ಮಾಂಗಲ್ಯದ ಕಾರಣಕ್ಕಾಗಿ ಗಂಡನ ಮುದಿತನವನ್ನು ಆಕೆ ಸಹಿಸಲಾರಳು. ರಾಜತ್ವದ ಅಧಿಕಾರ ಕೂಡ ಆಕೆಯನ್ನು ಬಗ್ಗಿಸಲಾರದು. ಹೊಸ ಓದು ತಂದುಕೊಟ್ಟ ಎಚ್ಚರ, ಅವಳ ಸಮಕಾಲೀನ ಚಿಂತನೆಗೆ ಕಾರಣವಾಗಿದೆ.
ಯಯಾತಿಗೆ ಆಕೆ ಹಾಕುವ ಸವಾಲು ಇದು ..... ನಿಮ್ಮ ಸೊಸೆ ವೇದಾಧ್ಯಯನ ಮಾಡಿರಬೇಕು. ಗೃಹಕೃತ್ಯದಲ್ಲಿ ನುರಿತವಳಾಗಿರಬೇಕು ಎಂದೆ ಅಲ್ಲವೆ? ನಾನು ಅಸ್ತ್ರವಿದ್ಯೆ ಬೇರೆ ಕಲಿತಿದ್ದೆ. ಇಂಥ ವಿದ್ಯೆಯ ಪುತ್ಥಳಿಯನ್ನು ಮನೆಗೆ ತಂದು ಅವಳ ಕಾಲಿಗೆ ಸನಾತನ ಶೃಂಖಲೆಯನ್ನು ತೊಡಿಸುವ ಆಟ ನಿಮ್ಮದು. ಅಣ್ಣಂದಿರಿಂದ ನಾನು ವನ್ಯ ಪಶುಗಳಿಗೆ ಬೆದರಬಾರದೆಂದು ಕಲಿತಿದ್ದೇನೆ. ನಿಮಗೆ ನಾನು ಹೆದರಲೇ?
                ನಾಟಕದಲ್ಲಿ, ವರ್ಣ ಸಂಘರ್ಷದ ರಾಜಕೀಯಕ್ಕೆ ಹೆಣ್ಣು ತನ್ನನ್ನು ಒಡ್ಡಿಕೊಂಡ ಬಗೆ ಬಹು ಮಹತ್ವದ್ದು. ಯಯಾತಿಯ ಮೊದಲ ಹೆಂಡತಿ ಪುರುವಿನ ತಾಯಿ ಅಸುರ ಕನ್ಯೆ, ತನಗೆ ತಿಳಿಯದೇ ಆದ ಮದುವೆ ಅದು ಎಂಬುದು ಅವನ ಅಳಲು. ದಿಗ್ವಿಜಯದಲ್ಲಿ ಸಿಕ್ಕಿದ ಆಕೆ ಯಯಾತಿಯ ಅಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತಾಳೆ. ಯಯಾತಿ, ರಾಕ್ಷಸ ಕನ್ಯೆಯ ರಕ್ತವನ್ನು ಪುರುವಿನ ನರನಾಡಿಗಳಿಂದಲೇ ಮರೆಯಾಗಿಸುವ ಪ್ರಯತ್ನ ಮಾಡುತ್ತಾನೆ. ಶರ್ಮಿಷ್ಟೆ ಅಸುರಕನ್ಯೆ. ಆಕೆಯ ಬೌದ್ಧಿಕತೆ ಅವಳನ್ನು ಗೆಲ್ಲುವ ಚಪಲತೆಯನ್ನು ಯಯಾತಿಗೆ ತಂದುಕೊಡುತ್ತದೆ. ಅಸುರ ಕನ್ಯೆಯಿಂದ ಅವಮಾನಕ್ಕೀಡಾದ ಅಹಂಕಾರ ಶಮರ್ಿಷ್ಠೆಯನ್ನು ಹೊಂದುವ ತವಕಕ್ಕೆ ಇಂಬು ನೀಡುತ್ತದೆ. ಹೀನೈಸಲಾಗುತ್ತಿದ್ದ ಅಸುರ ಸ್ಥಾನದಿಂದ ಕ್ಷತ್ರಿಯ ಸ್ಥಾನಕ್ಕೇರಿದ ಶಮರ್ಿಷ್ಠೆ ಬ್ರಾಹ್ಮಣ ಒಡತಿಯನ್ನು ಅವಳ ಸ್ಥಾನ ಬಿಡಿಸುತ್ತಾಳೆ.
                  ಕೊನೆಗೂ ಯಯಾತಿಯ ಮುಕ್ತಿಗೆ ಅಸುರ ಹೆಣ್ಣು  ಶರ್ಮಿಷ್ಟೆಯೇ ಒದಗಿ ಬರಬೇಕಾಗುತ್ತದೆ. ಲಿಂಗಭೇದ ತಂದಿರುವ ಹೀನತೆಯಿಂದ ಮಾತ್ರವಲ್ಲ ವರ್ಣಭೇದದ ಹೀನತೆಯಿಂದಲೂ ಹೆಣ್ಣು ಬಿಡುಗಡೆ ಹೊಂದಲು ಪ್ರಯಾಸಪಡುತ್ತಲೇ ಇರಬೇಕಾಗುತ್ತದೆ.
               ಈ ಬಿಡುಗಡೆಗಾಗಿಯೇ ದೇವಯಾನಿ ಮಾಂಗಲ್ಯ ಕಿತ್ತೆಸೆದು ಕುಟುಂಬ ವ್ಯವಸ್ಥೆಯಿಂದ ಹೊರ ಸಾಗಿದರೆ, ಶಮರ್ಿಷ್ಠೆ ದೇವಯಾನಿಯ ಸ್ಥಾನಕ್ಕೆ ಬರುವುದರ ಮೂಲಕ ದಾಸತ್ವದಿಂದ, ಅಸುರತ್ವದಿಂದ ಬಿಡುಗಡೆ ಪಡೆಯುತ್ತಾಳೆ. ಸ್ವರ್ಣಲತೆ ತಾನು ಶೀಲ ಭಂಗಕ್ಕೆ ಒಳಗಾಗಿದ್ದೇನೆ ಎಂದು ಗಂಡನಿಗೆ ಸುಳ್ಳು ಹೇಳುವುದರ ಮೂಲಕ ಅವನ ಸಂಶಯದ ನರಕದಿಂದ ಬಿಡುಗಡೆ ಹೊಂದಿದರೆ, ಚಿತ್ರಲೇಖೆ ವಿಷದ ಕರಂಡಿಕೆಗೆ ಈಡಾಗಬೇಕಾಗುತ್ತದೆ. ಅವಳ ಸಾವು ಯಯಾತಿಯನ್ನು ಪುರುವನ್ನೂ ಅವರ ಭ್ರಮೆಗಳಿಂದ ಬಿಡುಗಡೆ ಗೊಳಿಸುತ್ತದೆ.
                  ಪುರುಷ ಯಜಮಾನ್ಯ ಲೈಂಗಿಕ ಲಾಂಛನವನ್ನಾಧರಿಸಿದೆ. ಯಯಾತಿಯ ಪುರುಷತ್ವದ ಅಹಮಿಕೆಗೆ ಲೈಂಗಿಕತೆ ಸಾಧನವಾಗಿರುತ್ತದೆ.  ಶರ್ಮಿಷ್ಟೆಯ  ಜತೆಗಿನ ಲೈಂಗಿಕತೆಯ ವ್ಯವಹಾರದಿಂದ ಆಕೆಯ ಬೌದ್ಧಿಕತೆಯನ್ನು ಗೆಲ್ಲುವ ಹಾಗೂ ಬ್ರಾಹ್ಮಣತಿ ದೇವಯಾನಿಯ ಮೇಲೆ ವಿಜಯ ಸಾಧಿಸಿದ ತೆವಲು ಯಯಾತಿಗೆ. ಆದರೆ ಯಾವ ಲೈಂಗಿಕತೆ ಅಧಿಕಾರದ ಕೇಂದ್ರವಾಗಿತ್ತೋ, ಅದೇ ಲೈಂಗಿಕ ಆಹ್ವಾನದ ಮೂಲಕ ಚಿತ್ರಲೇಖೆ ಅವನ ಅಧಿಕಾರ ಕೇಂದ್ರವನ್ನು ಚೂರು ಚೂರು ಮಾಡುತ್ತಾಳೆ. ಆ ಮೊದಲೇ ಪುರುವಿನ ತಾಯಿ ಲೈಂಗಿಕತೆಯ ಮೂಲಕವೇ ಯಯಾತಿಯ ಅಧಿಕಾರ ಕೇಂದ್ರವನ್ನು ಛಿದ್ರಗೊಳಿಸಿದ್ದಳು.
                ಯಯಾತಿ : ..... ಅವಳು ನಮ್ಮೆಲ್ಲರನ್ನು ಮೋಸಗೊಳಿಸಿದಳು. ರಾಜಪುರೋಹಿತರಿಂದ ಹಿಡಿದು ನಮ್ಮ ಅಶ್ವಶಾಲೆಯ ಆಳು ಮಗನವರೆಗೆ ಎಲ್ಲರ ಕಣ್ಣಲ್ಲೂ ಧೂಳೆರಚಿ ಹೋದಳು.
ಲೈಂಗಿಕ ಅಪಚಾರದ ಸಂಶಯದಿಂದಲೇ ಸ್ವರ್ಣಲತೆಯ ಗಂಡ ಆಕೆಯನ್ನು ಹಿಂಸಿಸುತ್ತಿದ್ದ. ಯಾವಾಗ ಆಕೆ ತಾನು ಲೈಂಗಿಕ ಸ್ವೇಚ್ಛಾಚಾರ ಮಾಡಿದ್ದೇನೆ ಎಂದು ಪ್ರಕಟಿಸುತ್ತಾಳೋ ಆಗ ಊರನ್ನೇ ಬಿಡುತ್ತಾನೆ.
                ಯಯಾತಿ ಕುಟುಂಬದ ಹಿರಿಯತನ, ಪಿತೃತ್ವ ತಂದುಕೊಡುವ ಅಧಿಕಾರದ ವಾರಸುದಾರ. ಆದರೆ ತಂದೆತನದ ಜವಾಬ್ದಾರಿ ಹೊರಲಾರ. ಹಾಗಾಗಿ ಮಗನ ಯೌವನವನ್ನು ಆತ ಕೇಳಬಲ್ಲ. ಅದಕ್ಕೆಂದೇ ಚಿತ್ರಲೇಖೆ ಆತನನ್ನು ಮಾವನೆಂದು ಸ್ವೀಕರಿಸಲು ಒಪ್ಪುವುದಿಲ್ಲ. ಕೌಟುಂಬಿಕ ನ್ಯಾಯ ಮೀರಿದ ಯಯಾತಿಗೆ ಅದೇ ತರ್ಕದ ಹಿನ್ನೆಲೆಯಲ್ಲಿ ತನ್ನನ್ನು ಸ್ವೀಕರಿಸಲು ಹೇಳುತ್ತಾಳೆ. ದುರ್ಬಲ ಗಂಡನನ್ನು ಅಂತಃಪುರ ಸೇರಿಸಲು ಆಕೆ ಒಪ್ಪುವುದಿಲ್ಲ. ರಾಜತ್ವದ ಅಧಿಕಾರದಿಂದ ಪುರುವನ್ನು ಸ್ವೀಕರಿಸಲು ಯಯಾತಿ ಹೇಳಿದಾಗ ಸಾವಿನಿಂದ ಆತನನ್ನು ಸೋಲಿಸುತ್ತಾಳೆ. ವ್ಯವಸ್ಥೆಯ ಪಂಚಾಂಗವನ್ನು ಸಡಿಲಿಸುತ್ತಾಳೆ.
ಇಲ್ಲಿಯ ಪುರುಷ ಸಮಾಜ ಮಮರ್ಾಂಗದ ಮೂಲಕವೆ ಹೆಣ್ಣು ಕುಲವನ್ನು ಆಳಲು ಯತ್ನಿಸುತ್ತದೆ. ಆದರೆ ಸ್ತ್ರೀಯರು ಆ ಲೈಂಗಿಕ ಸ್ವಾತಂತ್ರ್ಯವನ್ನು ವಹಿಸಿಕೊಂಡಾಗ, ಮಮರ್ಾಂಗಕ್ಕೇ ಏಟು ಬಿದ್ದವರಂತೆ ಬೊಕ್ಕ ಬೋರಲು ಮಕಾಡೆ ಮಲಗಿಬಿಡುತ್ತದೆ.
             ಹಿಟ್ಟಿನ ಹುಂಜದ ಅಮೃತಮತಿ ಜೀವನದ ಒಂದು ಗಳಿಗೆಯ ಅಜ್ಞಾತಕ್ಕೆ, ತಾನು ತಾನಾಗಿ ಮಾತ್ರ ಇರುವುದಕ್ಕೆ ಹಂಬಲಿಸಿದವಳು. ತನ್ನತನದ ಪರಿಚಯವಾಗುವದಕ್ಕಿಂತ ಮೊದಲೇ ಮದುವೆಯಾಗಿ, ಬೇರೆಯವರಿಗಾಗಿ ಬದುಕಿದವಳು, ರಾಣಿವಾಸ ಬಂಧನದ ಬದುಕು, ಮನೆತನಕ್ಕಾಗಿ ಆಗ ಬೇಕಾದ ಬಸಿರ ಹಕ್ಕೊತ್ತಾಯಕ್ಕಾಗಿ, ತಾನು ಆರಿಸಿಕೊಂಡ ಒಂದು ಗಳಿಗೆಗಾಗಿ ಮಾವುತನನ್ನೂ ಆತನ ರಾಗವನ್ನೂ ಅಪ್ಪಿಕೊಂಡವಳು. ಈ ಲೈಂಗಿಕತೆ ಅವಳ ಸ್ವಂತದ ಆಯ್ಕೆ. ಅದರಲ್ಲಿ ಪಾಪದ ಸೋಂಕಿಲ್ಲ. ಹಾಗಾಗಿ ರಾಜನಾಗಲೀ, ರಾಜಮಾತೆಯಾಗಲೀ ಮಂಡಿಸುವ ಪಾಪದ ಮೀಮಾಂಸೆಯನ್ನು ಆಕೆ ಒಪ್ಪುವುದಿಲ್ಲ. ಭೌತಿಕವಾಗಿ ತನ್ನ ಕಡೆಗಿದ್ದರೂ ಬೌದ್ಧಿಕವಾಗಿ ಇನ್ನೂ ಹಿಂಸೆಯ ಪರ ಇರುವ ಅತಂತ್ರ ಮನಸ್ಥಿತಿಯ ನಪುಂಸಕ ಗಂಡ, ಸಮಯ ಸಿಕ್ಕಾಗಲೆಲ್ಲ ಧರ್ಮದ ಹೆಸರಿನಲ್ಲಿ ತನ್ನನ್ನು ಮಟ್ಟ ಹಾಕಲು ನಿಂತ ಕುಸ್ತಿ ಪಟುವಿನಂತೆ ವತರ್ಿಸುವ ಅತ್ತೆಯ ನಡುವೆ ಅವಳು ಅವಳಾಗುವ ಆ ಪ್ರಜ್ಞಾಪೂರ್ವಕ ಆಯ್ಕೆಯನ್ನು ಹಿಂಸಿಸಲು ನಡೆದ ಹುನ್ನಾರವನ್ನು ಆಕೆ ಪ್ರತಿಭಟಿಸುತ್ತಾಳೆ. ಆಕೆಗೆ ದೈಹಿಕ ಕ್ರಿಯೆ ಮತ್ತು ಮಾನಸಿಕ ಕ್ರಿಯೆಯ ನಡುವೆ ವ್ಯತ್ಯಾಸವಿಲ್ಲ. ಹಾಡು ಮೆಚ್ಚಿಕೊಂಡಂತೆ ಹಾಡುಗಾರನನ್ನು ಹಚ್ಚಿಕೊಳ್ಳುವ ತರ್ಕದ ಹಿನ್ನೆಲೆಯಲ್ಲಿಯೇ ಹಿಟ್ಟಿನ ಹುಂಜ ಮತ್ತು ಅದನ್ನು ಬಲಿಕೊಡುವ ಮನಸ್ಥಿತಿಯನ್ನು ಆಕೆ ಅಥರ್ೈಸಬಲ್ಲಳು. ಆಕೆಯ ಸ್ವಂತಿಕೆಯ ಕ್ಷಣಗಳನ್ನು ಹಿಂಸಿಸಲು ಯತ್ನಿಸಿದ ರಾಜ, ಹಠದಿಂದ ಹಿಟ್ಟಿನ ಹುಂಜವನ್ನು ಬಲಿಕೊಡಲು ಯತ್ನಿಸಿದ ನಾದರೂ ಹಿಟ್ಟಿನ ಹುಂಜದಲ್ಲಿ ಪ್ರಾಣಸಂಚಾರವಾಗುವದರ ಮೂಲಕ ಅಪ್ರತಿಹತನಾಗುತ್ತಾನೆ. ತೀರ ಸಹಜವಾಗಿ ಹುಂಜಕ್ಕೆ ಕಾಳು ನೀಡುವ ಕ್ರಿಯೆಯ ಮೂಲಕ ರಾಣಿಯ ಬದುಕಿನ ಮೀಮಾಂಸೆ ಗೆಲುವು ಪಡೆಯುತ್ತದೆ. ದೇಹ ಮನಸ್ಸಿನ ನಡುವೆ ಎರಡು ಬಗೆಯದ ರೀತಿಯಲ್ಲಿ ಬದುಕ ಯತ್ನಿಸಿದ ಆಕೆ ಅಮೃತಮತಿಯಾಗುತ್ತಾಳೆ. ನಾಟಕದ ಕೊನೆಯಲ್ಲಿ ರಾಜ ಅಮೃತಮತಿಯೆಂದು ಚೀರುವದು ಹೀಗೆ ಔಚಿತ್ಯಪೂರ್ಣವಾಗಿ ಬಿಡುತ್ತದೆ. ಪಾಪದ ಸೋಂಕನ್ನು ತಗಲಿಸಿಕೊಳ್ಳದ ಅಮೃತಮತಿಯ ಈ ಲೈಂಗಿಕ ಆಯ್ಕೆ ಹಯವದನದ ಪದ್ಮಿನಿಯಲ್ಲಿ ಇನ್ನೂ ನಿಚ್ಚಳವಾಗುತ್ತದೆ.
ಸಾಂಪ್ರದಾಯಿಕವಾದ ಖಾಸಗಿ ಆಸ್ತಿಯ ಪರಿಕಲ್ಪನೆಯ ದಾಂಪತ್ಯದ ಎಲ್ಲೆಯನ್ನು ದಾಟಿ ಪ್ರೀತಿ ಯಾಕೆ ಒಂದೇ ದೇಹದ ಜತೆ ಅಂಟಿರಬೇಕು? ಎನ್ನುವ ಮೂಲಭೂತ ಪ್ರಶ್ನೆಯ ಜತೆ ಸಾಗುತ್ತದೆ ಹಯವದನ.
       ಚಿಂತನೆ ಮತ್ತು ಕ್ರಿಯೆಯ ನಡುವಿನ ಬಿರುಕನ್ನು ದಾಟಲು ಯತ್ನಿಸುವ ಪದ್ಮಿನಿ ಅವರೆರಡರ ಸಂಕೇತವಾಗಿ ನಿಲ್ಲುವ ದೇವದತ್ತ ಮತ್ತು ಕಪಿಲರ ನಡುವೆ ಮಾಡಿಕೊಳ್ಳುವ ಆಯ್ಕೆ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬ್ರಾಹ್ಮಣನ ತಲೆ, ಶೂದ್ರನ ದೇಹ ಒಂದು ಪ್ರಯೋಗ, ಆದರೆ ತಲೆ ಎಲ್ಲವನ್ನೂ ಆಳುತ್ತದೆ. ಹಾಗಾಗಿ ದೇವದತ್ತನ ತಲೆ ಕಪಿಲನ ದೇಹವನ್ನು ಮೆತ್ತಗಾಗಿಸಿಬಿಡುತ್ತದೆ. ಕೊನೆಗೆ ಅದೇ ತರ್ಕದ ಹಿನ್ನೆಲೆಯಲ್ಲಿ ದೇವದತ್ತನ ದೇಹವನ್ನು ಬಗ್ಗಿಸಿದ ಕಪಿಲನನ್ನು ಆಕೆ ಸೇರುತ್ತಾಳೆ. ಕಪಿಲನ ದೇಹದ ಜತೆ ಸೇರಿದ್ದರೂ ತಲೆ ದೂರವೇ ಉಳಿದಿತ್ತು. ಕಪಿಲನ ತಲೆ ಇರುವ ದೇಹ ಸೇರಿ ಆಕೆ ಕಪಿಲನ ಪೂರ್ಣತ್ವ ಪಡೆಯುತ್ತಾಳೆ. ದಾಂಪತ್ಯದ ಚೌಕಟ್ಟಿನ ಒಳಗೆ ಆಕೆ ದೇಹವನ್ನು ಅದಲು ಬದಲು ಮಾಡುವುದರ ಮೂಲಕ ನಡೆಸಿದ ಪ್ರಯೋಗದಲ್ಲಿ ಗೆಲವು ಕಾಣದೇ ಚೌಕಟ್ಟಿನ ಹೊರಗೆ ಇಚ್ಛೆ ಸಾಧಿಸುತ್ತಾಳೆ.
     ಪದ್ಮಿನಿ ಆಕಸ್ಮಿಕಗಳಿಗೆ ಬಲಿಯಾದವಳಲ್ಲ. ಬದುಕಿನ ಪ್ರತಿಯೊಂದೂ ತಿರುವಿನಲ್ಲೂ ಆಯ್ಕೆ ಅವಳದೇ. ಆಕೆ ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದವಳೇ ಅಲ್ಲ. ಹಾಗಾಗಿ ಕಾಳಿಯ ಎದುರು ತನ್ನ ಹಾದರವನ್ನು ಚಚರ್ಿಸಬಲ್ಲಳು. ಆಕೆಯೆದುರು ಸತ್ಯವನ್ನು ಹೇಳಿದವಳು ಅವಳೊಬ್ಬಳೇ. ಪಠ್ಯದಲ್ಲಿಯ ಆಕೆಯ ಮಾತುಗಳೆಲ್ಲ ಪೂರ್ವ ನಿರ್ಧರಿತ ಅನಿಸಿಕೆಯ ಅಂಗವಾಗಿದೆ. ಎಲ್ಲ ಮಾತುಗಳೂ ಆತ್ಮ ವಿಶ್ವಾಸದಿಂದ ನುಡಿಯಲ್ಪಟ್ಟಿವೆ. ಕೊನೆಯ ದುರಂತ ಸಹ ಆಕೆಯ ಆಯ್ಕೆ. ಹೆಣ್ಣನ್ನು ಉಪಭೋಗದ ಆಸ್ತಿಯನ್ನಾಗಿಸಿಕೊಂಡುದರ ಫಲವಾಗಿ ಹರಣವಾದ ಸ್ವಾತಂತ್ರ್ಯವನ್ನು ಆಕೆ ಮತ್ತೆ ಪಡೆದುಕೊಳ್ಳುತ್ತಾಳೆ. ``ಪ್ರೀತಿಗೆ ಯಾಕೆ ಒಂದೇ ಜೀವದ ಬಂಧನ ಎಂದು ಆಕೆ ಸವಾಲೆಸೆಯುತ್ತಾಳೆ. ಕ್ರಿಯೆಗಳನ್ನು ತನ್ನಿಚ್ಛೆಯಂತೆ ಎಸಗುತ್ತಾಳೆ. ಉದ್ದೇಶಿತ ಕಾರ್ಯ ಸಾಧಿಸುವಲ್ಲಿ ಆಕೆಗೆ ಸೋಲೆಂಬುದಿಲ್ಲ. ಹಾಗಾಗಿ ದುರಂತ ಅವಳನ್ನು ಕಂಗೆಡಿಸುವುದಿಲ್ಲ.
     ತೊಗಲಿಗೆ ಅದರದ್ದೆ ಆದ ನೆನಪಿರುತ್ತದೆ. ಅದಕ್ಕೆ ಅದರದ್ದೆ ಆದ ಅಸ್ತಿತ್ವವೂ ಇದೆ. ಆದರೆ ತಲೆಯ ಆಡಳಿತದಿಂದ ಅದು ತಪ್ಪಿಸಿಕೊಳ್ಳಲಾರದು. ಹಾಗಾಗಿ ದುರಂತ ಅನಿವಾರ್ಯ. ಹಯವದನ, ಕಾಳಿಯಲ್ಲಿ ಪೂಣರ್ಾಂಗವನ್ನು ಬೇಡುತ್ತಾನೆ. ಆದರೆ ಆತ ತನ್ನ ದೇಹವಿದ್ದಂತೆ ಮನುಷ್ಯನಾಗಲಿಲ್ಲ, ತಲೆಯಿದ್ದಂತೆ ಹಯವೇ ಆದ. ಅದಕ್ಕೆಂದೇ ಇದು ಹಯವದನ. ಪದ್ಮಿನಿಯ ಆಯ್ಕೆ ಇಲ್ಲಿ ತುಂಬಾ ಮುಖ್ಯ. ಆಕೆಯ ಮಗ ಹಯವದನನನ್ನು ಪೂರ್ಣವಾಗಿ ಹಯವಾಗಿಸಲು ಕಾರಣನಾಗುತ್ತಾನೆ. ಪೂರ್ಣತ್ವ ನೀಡುತ್ತಾನೆ. ಆತ ಪದ್ಮಿನಿಯ ಮಗ.
       ನದಿ-ದಡ ಇದು ಸಾಂಪ್ರದಾಯಿಕ ಉಪಮೆ. ನದಿಗೆ ವ್ಯವಸ್ಥೆಯ ದಡದ ಮಧ್ಯ ಹರಿಯಬೇಕಾದ ಅನಿವಾರ್ಯತೆ ಇದೆ. ನದಿ ದಡವನ್ನು  ಮೀರಲಾರಳು, ಆದರೆ ಅದನ್ನು ಕೆತ್ತಿ ಗಾಯಗೊಳಿಸಿಯಾಳು. ಆದ್ರೆ ಇಲ್ಲಿ ಮುಖ್ಯವಾಗುವದು ನೀರಿನ ಮೇಲೆ ಚಿತ್ರ ಬರೆಯೋಕಾಗಲ್ಲ ಎನ್ನುವದು.
ಹೆಣ್ಣು ಹೆಣ್ಣಾಗಿರುವವರೆಗೆ ಯಾವ ತೊಂದರೆಯೂ ಇಲ್ಲ. ಆದರೆ ಆಕೆ ತಾಯಿಯೋ ತಂಗಿಯೋ ಮತ್ತೊಂದೋ ಆದಾಗ ಸಂಬಂಧಗಳ ನಡುವೆ ಕರ್ಷಣ ಆರಂಭಗೊಳ್ಳುತ್ತದೆ. ಮಿಥ್ಗಳ ಮೂಲಕ ಈ ಕರ್ಷಣವನ್ನು, ವ್ಯವಸ್ಥೆ, ಸಂಬಂಧಗಳ ನಡುವೆ ಆದೇಶಿಸುವ ನಿಷೇಧಗಳು ಉಂಟು ಮಾಡುವ ಸಂಘರ್ಷದ ಹಿನ್ನೆಲೆಯಲ್ಲಿ ಕಾನರ್ಾಡ್ ಚಿತ್ರಿಸಿದ್ದಾರೆ. ಈ ಬಗೆಯ ಒಂದು ಪಠ್ಯ ಅಂಜುಮಲ್ಲಿಗೆಯದು.
       ನಾಟಕದ ಆರಂಭಕ್ಕೂ ಮೊದಲೆ ಕಾನರ್ಾಡರು ಋಗ್ವೇದ ಸಂಹಿತೆಯಲ್ಲಿ ಬರುವ ಯಮ-ಯಮಿಯರ ಸಂವಾದದ ಸಾಲನ್ನು ಉಲ್ಲೇಖಿಸುತ್ತಾರೆ. ಈ ಉಲ್ಲೇಖವೇ ನಾಟಕದ ಒಂದು ಬಗೆಯ ಓದನ್ನು ಸೂಚಿಸಿಬಿಡುತ್ತದೆ. ಋಗ್ವೇದದ ಹತ್ತನೆಯ ಮಂಡಲದ ಹತ್ತನೆಯ ಮಂತ್ರದಲ್ಲಿ ಈ ಸಂಭಾಷಣೆ ಬರುತ್ತದೆ. ಪ್ರಪಂಚದಲ್ಲಿ ವಾಸಿಸುತ್ತಿದ್ದವರು ಈ ಯಮ ಮತ್ತು ಯಮಿ ಇಬ್ಬರೇ, ಅವರು ಅಣ್ಣ ತಂಗಿಯರು: ಹಾಗೆಯೇ ಗಂಡಸು ಮತ್ತು ಹೆಂಗಸು. ಯಮಿ ಯಮನಲ್ಲಿ ಪ್ರಣಯವನ್ನು ಯಾಚಿಸುತ್ತಾಳೆ.....
        ಅಂಜುಮಲ್ಲಿಗೆಯ ನಾಯಕಿ ಯಾಮಿನಿ ಆಗಿರುವುದು ಈ ಹಿನ್ನೆಲೆಯಲ್ಲಿಯೇ. ಅವಳ ತಮ್ಮ ಸತೀಶ. ಇಂಗ್ಲೆಂಡಿಗೆ ಬಂದು ರೂಪಾಂತರಗೊಂಡವ. ಯಮನ ಬೆನ್ನುಹತ್ತಿ ಇಂಗ್ಲೆಂಡಿಗೆ ಬಂದ ಯಾಮಿನಿ ಇಲ್ಲಿ ಆತನ ಬದಲಾದ ಹೊಸ ಬದುಕು, ಹೊಸ ಪ್ರೇಯಸಿಯರಿಂದ ಕಂಗೆಟ್ಟಿದ್ದಾಳೆ, ತನ್ನನ್ನು ಬೇಕೆಂದೇ ದೂರ ಸರಿಸುತ್ತಿರುವ ಸತೀಶನನ್ನು ಆವರಿಸಲು ಸಾಕಷ್ಟು ಯತ್ನ ಮಾಡುತ್ತಾಳೆ. ಸತೀಶ ಬಿಳಿ ಹುಡುಗಿಯ ಜತೆ ಸಂಬಂಧ ಬೆಳೆಸಿರುವುದರಿಂದ, ಸತೀಶ ವಿರೋಧಿಸಬಹುದಾದ ವ್ಯಕ್ತಿತ್ವದ ಕರಿಯ ಡೇವಿಡ್ನ ಜತೆ ಕೂಡುತ್ತಾಳೆ. ಯಮನ ಹ್ಯಾಂಗೋವರ್ನಿಂದ ಹೊರಬರಲು ನಡೆಸಿದ ವಿಫಲ ಪ್ರಯತ್ನ ಅದು.
ಡೇವಿಡ್ನಲ್ಲಿ ಆಕೆ ಅಂತಾಳೆ: - 
 ``ನೀನನ್ನೋದು ಖರೆ. ಕರಿಯರಿಂದ ಬಿಳಿಯರು ದೂರ ಇರಬೇಕು.... ಜಾತಿಯಿಂದ ಜಾತಿ ಬೇರೆ. ಕುಟುಂಬದಿಂದ ಕುಟುಂಬ ಬೇರೆ. ಆಗೋದೇನಿದೆ ಅದೆಲ್ಲ ಕುಟುಂಬದ ಒಳಗಡೇನೆ ಆಗಬೇಕು. ಆಕೆ ಡೇವಿಡ್ನಿಗೆ ಆತನನ್ನು ಆಯ್ಕೆ ಮಾಡಿಕೊಂಡ ಕಾರಣವನ್ನು ಸ್ಪಷ್ಟವಾಗಿ ಹೇಳುತ್ತಾಳೆ. ``ನನ್ನ ಕುಡಿ ಮುರಿದರೆ ನಿನ್ನ ದೊಡ್ಡಸ್ತಿಕೆ ಅಂದುಕೊಳ್ಳಬೇಡ ಇಲ್ಲೀತನಕ ನನ್ನ ಗೆಳೆಯರೆಲ್ಲ ನಮ್ಮ ದೇಶದವರೆ ಇದ್ರು. ಅದಕ್ಕೇ ಹೀಗೆ ಹಸಿ ಕುಮಾರಿಯಾಗಿ ಕಳೆದೆ. ನೀನು ಕೀಳು ದಜರ್ೆಯ ಕೆಳವರ್ಗದ ಹೊಲಸು ಆಂಗ್ಲ. ಅದಕ್ಕೇ ನಿನ್ನನ್ನೀಗ ಮಾಡಗೊಡುತ್ತಿದ್ದೇನೆ ತಿಳಕೋ 
         ಯಾಮಿನಿ ಹುಡುಕುತ್ತಿದ್ದುದು ಯಮನನ್ನು. ಆದರೆ ಆತ ಆಗಲೇ ಸತೀಶನಾಗಿ  ಬಿಟ್ಟಿದ್ದ. ಹಾಗಾಗಿ ವಾಸ್ತವದಲ್ಲಿ ಸಿಗದ ಯಮನನ್ನು ಕನಸಿನಲ್ಲಿ ಭೇಟಿಯಾಗುತ್ತಾಳೆ. ತನ್ನ ಮತ್ತು ಸತೀಶನ ನಡುವಿನ ಲೈಂಗಿಕ ಸಂಬಂಧದ ಇತಿಹಾಸ ನಂಬಿದ ಜ್ಯುಲಿಯಾ ಆತ್ಮ ಹತ್ಯೆಯ ಪ್ರಯತ್ನ ಮಾಡಿದ ಸಂಗತಿ ಕೇಳಿ ಆಕೆ ಅನ್ನುತ್ತಾಳೆ.
ಆತ್ಮ ಹತ್ಯೆಯ ಪ್ರಯತ್ನ ಮಾಡುತ್ತಾಳೇನು? ಹೂಂ ಯಮರಾಜಾ ನಿನ್ನ ದನಿಯ ಗುರುತೂ ಇಲ್ಲದ ಈ ಬಿಳೇ ಕೋತಿ ಅದೇನು ಮಾಡಿಕೋತದೆ ಆತ್ಮಹತ್ಯೆ? ನಾ ತೋರಸತೇ ನಾಕಿಗೆ. ಯಾಮಿನಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
       ಯಾಮಿನಿಯ ಸಮಸ್ಯೆಯನ್ನು ಅರ್ಥ ಮಾಡಿಕೊಂಡವಳು ಜ್ಯೂಲಿಯಾ ಮಾತ್ರ. ಆಕೆ ವಾಸ್ತವವನ್ನು ಅರ್ಥಮಾಡಿಕೊಳ್ಳುವ ಮೂಲಕ ಬಿಡುಗಡೆಗೆ ಯತ್ನಿಸುತ್ತಾಳೆ.... ಅವಳು ಮಾಡಿದ್ದಾದರೂ ಏನು? ಯಾವ ತಪ್ಪು ಮಾಡಿದಳು? ನಿನ್ನ ಅಕ್ಕ ಆಗಿ ಹುಟ್ಟಿ ಹೆಂಗಸಂತೆ ನಿನ್ನನ್ನು ಬಯಸಿದಳು ಅಷ್ಟೇ ಅಲ್ವೇನು? ನನ್ನ ಹಾಗೇ ನಿನ್ನಷ್ಟೇ ಬಯಸಿದಳು. ಹೌದು ಅವಳು ನಿನ್ನನ್ನು ಪ್ರೀತಿಸಿದಳು. ಅದರಲ್ಲಿ ತಪ್ಪೇನು? ನಾವಿದನ್ನು ಒಪ್ಪಿಕೊಳ್ಳುವತನಕ ನಮಗೂ ಎಂದೂ ಬಿಡುಗಡೆ ಸಿಗೋದಿಲ್ಲ.
ಹೆಣ್ಣನ್ನ ಹೆಣ್ಣಾಗಿ ನೋಡುವತನಕ ಆಕೆ ಸಹಜವಾಗಿ ಹೂ ಬಿಡುವ ಮಲ್ಲಿಗೆಯಾಗ್ತಾಳೆ. ಆಕೆಯ ವಿವಿಧ ಬಗೆಯ ಪಾತ್ರ ನಿರ್ವಹಣೆ ಬಲವಂತವಾಗಿ ಹೂ ಬಿಡುವ ಕಾಯಕಕ್ಕೆ ಒತ್ತಾಯಿಸುತ್ತದೆ. ಆಕೆ ಅಂಜುಮಲ್ಲಿಗೆಯಾಗುತ್ತಾಳೆ.
ಪಿತೃ ಪ್ರಧಾನ ಸಮಾಜದಲ್ಲಿ ಹೆಣ್ಣು, ವ್ಯವಸ್ಥೆ ಸೂಚಿಸಿದ ಪಾತ್ರ ನರ್ವಹಿಸಬೇಕಾಗುತ್ತದೆ. ಈ ಪಾತ್ರ ಮಾಡಬೇಕಾದ ಹೆಣ್ತನ ಸಮಸ್ಯೆಗೀಡಾಗುತ್ತದೆ. ಹಾಗಾಗಿ ಹೆಣ್ಣು ಕಲ್ಪಿತ ಮತ್ತು ವಾಸ್ತವ ಹೀಗೆ ಏಕಕಾಲದಲ್ಲಿ ಎರಡು ಜಗತ್ತಿನಲ್ಲಿ ಬದುಕಲು ಯತ್ನಿಸುತ್ತಾಳೆ. ಆದರೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿ ಬಂದಾಗ ಆಕೆ ದುರಂತ ನಾಯಕಿಯಾಗಿಬಿಡುತ್ತಾಳೆ. ಯಾಮಿನಿಯ ದುರಂತ ಇರುವದು ಇಲ್ಲಿಯೇ.
              ಈ ಕಲ್ಪನೆ ಮತ್ತು ವಾಸ್ತವವನ್ನು ಒಂದಾಗಿಸಿ ಗೆದ್ದವಳು ನಾಗಮಂಡಲದ ರಾಣಿ. ತನ್ನ ಸುತ್ತ ಕಟ್ಟಿದ ಕೋಟೆಯನ್ನು, ಕೋಟೆಯಂತಹ ಮನೆಯನ್ನು, ಹುತ್ತವನ್ನು ಬಗೆದು ತನ್ನ ಕನಸಿಗೆ ರೂಪಕೊಟ್ಟ ರಾಣಿಯ ಕತೆ ನಾಗಮಂಡಲದ್ದು. ಹಗಲು ರಾತ್ರಿ ಇಲ್ಲಿ ವಾಸ್ತವ ಮತ್ತು ಕನಸಿನ ವೈರುಧ್ಯವವನ್ನು ಸಾಂಕೇತಿಸುತ್ತದೆ. ತನ್ನ ಕನಸನ್ನು ನನಸು ಮಾಡಿಕೊಳ್ಳುವ ರಾಣಿ ರಾತ್ರಿಯ ಕನಸನ್ನು ಹಗಲಿನ ವಾಸ್ತವವನ್ನಾಗಿಸುತ್ತಾಳೆ. ಶೀಲಕ್ಕೆ ಬೀಗ ಜಡಿದ (ಅಣ್ಣಪ್ಪ ಅವಳನ್ನು ಸದಾಕಾಲ ಬೀಗ ಜಡಿದ ಮನೆಯಲ್ಲಿಯೇ ಇರಿಸುತ್ತಾನೆ) ಮದುವೆಯ ದಮನಕಾರಿ ವ್ಯವಸ್ಥೆಯಲ್ಲೇ ಉಳಿದರೂ ತಾನು ಬಯಸಿದ ಬದುಕನ್ನು ರೂಪಿಸಿಕೊಂಡು ತನ್ನ ಪ್ರಿಯಕರನನ್ನು (ನಾಗನನ್ನು) ತನ್ನ ಬಳಿಯೇ (ಕೂದಲಿನಲ್ಲಿಯೇ) ಇರಿಸಿಕೊಳ್ಳುವ ಆಕೆ ಆ ಕೂದಲನ್ನು ಮಾಂಗಲ್ಯಕ್ಕೆ ಹೋಲಿಸುತ್ತಾಳೆ.
ರಾಣಿಯೊಬ್ಬಳೇ ಕುಳಿತು ಕಟ್ಟಿಕೊಳ್ಳುವ ಕನಸಿನಲ್ಲೂ ಕೋಟೆ ಒಡೆಯುವಂತೆ ಬಂದ ನೆರೆ, ತಿಮಿಂಗಿಲ ಏರಿ ನೆರೆ ದಾಟುವದು, ಮಾಯರೂಪಿನ ರಾಜಕುಮಾರನನ್ನು ಕಾಣುವುದು..... ಇವೆಲ್ಲಾ ಸಾಂಕೇತಿಕತೆಗಳು ಬಿಡುಗಡೆಯ ಆಶಯವನ್ನೇ ಹೊಂದಿವೆ. ಈ ಕಥೆಗಳ ಆಶಯದ ಜತೆಗೆ ರಾಣಿ ತನ್ನ ವಾಸ್ತವವನ್ನು ಸಮೀಕರಿಸಿಕೊಳ್ಳುತ್ತಾಳೆ. 
ಕುರುಡವ್ವ ಆಕೆಯ ವ್ಯಕ್ತಿತ್ವದ ಇನ್ನೊಂದು ರೂಪಾಂತರ. ನಾಟಕದಲ್ಲಿಯ ಈ ರೂಪಾಂತರ ಪ್ರಕ್ರಿಯೆ ವಾಸ್ತವವಾಗಿ ಅಪ್ಪಣ್ಣನದಲ್ಲ, ಅದನ್ನು ಆಗುವಂತೆ ಮಾಡಿದ ರಾಣಿಯದು.
              ಸಮಾಜ ಶೀಲಕ್ಕೆ ಹಾಕಿದ ಬೀಗಮುದ್ರೆ ಒಡೆದು ಅದೇ ಸಮಾಜದಿಂದ ಮನ್ನಣೆಗೆ ಒಳಗಾಗಬಲ್ಲ ಶಕ್ತಿ ಸಹ ಆಕೆಗಿದೆ. ಈ ಶಕ್ತಿಯ ಅರಿವಿಲ್ಲದ ಕಪ್ಪಣ್ಣನಂತಹ ಕುರುಡವ್ವನ ಮಕ್ಕಳು ಶಾಕ್ಗೆ ಒಳಗಾಗುತ್ತಾರೆ. ಹೆಣ್ಣಿನ ಈ ಶಕ್ತಿಯನ್ನು ದಕ್ಕಿಸಿಕೊಳ್ಳಲಾರದೇ ಕಪ್ಪಣ್ಣ ಕುರುಡವ್ವನಿಂದ ಹೋಳಾಗಿ ಹೋಗುತ್ತಾನೆ. ಇಲ್ಲಿ ತನ್ನಿಚ್ಛೆಯ ಬದುಕನ್ನು ಉಪಾಯದಿಂದ ಆಯ್ಕೆ ಮಾಡಿಕೊಳ್ಳುವ ರಾಣಿ ಹಯವದನದ ಪದ್ಮಿನಿಯ ಕಥೆಯ ಮುಂದುವರಿದ ರೂಪ. 
ಗಂಡನ ಜೊತೆಗಿನ ಅಸಹನೀಯತೆಯಿಂದಾಗಿ ದೇವಯಾನ ಮಾಂಗಲ್ಯವನ್ನು ಕಿತ್ತು ಎಸೆದರೆ, ಪದ್ಮಿನಿ ಮಾಂಗಲ್ಯದ ಭಾರದಿಂದ ದುರಂತವನ್ನಪ್ಪುತ್ತಾಳೆ. ಆದರೆ ರಾಣಿ ಈ ಮಾಂಗಲ್ಯದ ಜೊತೆಗೆ ಕೇಶ ಮಾಂಗಲ್ಯವೆಂಬ ಪರಿಕಲ್ಪನೆ ಹುಟ್ಟುಹಾಕಿ ದುರಂತವನ್ನು ಗೆಲ್ಲುತ್ತಾಳೆ. ಹಾಗಾಗಿ ತಾನೇ ಹೋಳಾಗುತ್ತಾಳೆ: ಸೀಳಿಕೊಳ್ಳುತ್ತಾಳೆ. ಆದರೆ ಈ ಸೀಳುವಿಕೆಯಲ್ಲಿ ದುರಂತವಿಲ್ಲ. ಆಯ್ಕೆಯ ಸ್ವಾತಂತ್ರ್ಯವಿದೆ.
                ಈ ಕತೆಯ ಮೂರು ಬಗೆಯ ಅಂತ್ಯವೂ ಹೆಣ್ಣಿನ ಸ್ಥಿತಿ ಮತ್ತು ಸಾಧ್ಯತೆಯ ಮೂರು ಮಾರ್ಗಗಳು. ಸಾಂಪ್ರದಾಯಿಕ ಕಥನ ನೀಡುವ ಕೊನೆಯಿಂದ ಸಮಾಧಾನ ಹೊಂದದ ನಾಟಕದೊಳಗಿನ ನಾಟಕಕಾರ, ಮಾಂಗಲ್ಯ ಕೇಶಮಾಂಗಲ್ಯ ಎಂಬ ತರ್ಕ ಹುಟ್ಟು ಹಾಕಿ ಇನ್ನೊಂದು ಬಗೆಯ ಸಾಧ್ಯತೆಯನ್ನು ಮುಂದಿಡುತ್ತಾನೆ.
ಅಗ್ನಿ ಮತ್ತು ಮಳೆ ಜಾತಿಗಳ ಮೇಲುಕೀಳಿನ ಸ್ತರಗಳಲ್ಲಿಯ ಹೆಣ್ಣಿನ ಬದುಕು ಬವಣೆಯ ಗೆಲುವು, ಜೀವಂತಿಕೆಯ ಕತೆ. ಬೆಂಕಿ ನಾಶವನ್ನು, ಜಲ ಹುಟ್ಟನ್ನು, ಸಂಕೇತಿಸುತ್ತ ಹೋಗುತ್ತದೆ. ಇಲ್ಲಿ ವಿಶಾಖಾ ಅಗ್ನಿ ಸಂಸ್ಕೃತಿಯನ್ನು, ನಿತ್ತಿಲೆ ಜಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾಳೆ. ವಿಶಾಖಾ ತಾನೂ ಉರಿಯುತ್ತಾ ಎಲ್ಲವನ್ನೂ ಉರಿಸುತ್ತಾಳೆ. ನಿತ್ತಿಲೆ ಈ ಅಗ್ನಿಗೆ ಸವಾಲಾಗುತ್ತಾಳೆ; ಮಳೆಗೆ ಕಾರಣಳಾಗುತ್ತಾಳೆ.       
             ಬೆಂಕಿಯ ವಿರಾಟ ರೂಪವೇ ಇಲ್ಲಿದೆ. ಹತ್ತು ವರ್ಷದ ದೇಹದ, ದೇಶದ ಬರಗಾಲ ಒಂದು ಬೆಂಕಿ, ವಿಶಾಖ ಮತ್ತು ಯವಕ್ರೀತರ ನಡುವಿನ ಬೆಂಕಿ, ಯವಕ್ರೀ-ರೈಭ್ಯ್ಚರ ನಡುವಿನ ಬೆಂಕಿ, ರೈಭ್ಯ-ವಿಶಾಖರ ನಡುವಿನ ಬೆಂಕಿ, ಹೀಗೆ.....
ಮೇಲ್ವರ್ಗಕ್ಕೆ ಹೆಣ್ಣು ಅವರ ಸಾಧನೆಗೆ, ದ್ವೇಷಕ್ಕೆ, ಪ್ರಯೋಗಕ್ಕೆ, ಪ್ರಶಸ್ತಿಗೆ, ಮುಕ್ತಿಗೆ, ಹೀಗೆ ಗಂಡಿಗೆ ಸಾಧನವಾಗಿ ಮಾತ್ರ. ವಿಶಾಖ ಹೇಳುತ್ತಾಳೆ: ಅವನು ನನ್ನ ಶರೀರದ ರಂದ್ರಗಳನ್ನೆಲ್ಲ ಅಗೆದುಹೋದ. ನಿನಗೆ ಹೆಣ್ಣು ಅಂದರೆ ಅರ್ಧಂಬರ್ದ ಬಲಿತ ಎರಡು ಮೊಲೆ..... ವಿಶಾಖಾ ಈ ವ್ಯವಸ್ಥೆಯ ವಿರುದ್ಧ ಉರಿಯುತ್ತಾಳೆ; ಉರಿಸುತ್ತಾಳೆ. ಈಕೆ ಒಂದು ಮಾದರಿ.
ನಿತ್ತಿಲೆ ಕೆಳವರ್ಗದವಳು. ಅವಳಲ್ಲಿ ಹಾದರದ ಸೋಂಕಿಲ್ಲ. ಅವಳಿಂದಾಗಿ ಅರವಸು ಕೆಳವಗರ್ಿಕರಣ ಹೊಂದುವನು. ನಿತ್ತಿಲೆ ಅರವಸುರ ನಡುವಣ ಪ್ರೀತಿ ಲೈಂಗಿಕತೆಯನ್ನು ಮೀರಿದ ಆದರ್ಶ ಸ್ಥಿತಿ ತಲುಪಿ ಕಾವ್ಯಮಯ ವೃತ್ತಿಗೇರುತ್ತದೆ. ಗಂಡು ಹೆಣ್ಣಿನ ನಡುವಿನ ಅಕರ್ಿಟೈಪಲ್ ಮಾದರಿಗಳನ್ನು ಕಾನರ್ಾಡ್ ಇಲ್ಲಿ ಒಡೆಯುತ್ತಾರೆ. ಗಂಡನನ್ನು ಬಿಟ್ಟು ಅರವಸುವಿನ ಸಂಕಟಕ್ಕೊದಗಲು ಓಡಿಬಂದ ನಿತ್ತಿಲೆ ಅರವಸುವಿನೊಡನೆ ಬದುಕು ನಿಶ್ಚಯಿ ಸಿದ್ದರೂ ಲೈಂಗಿಕ ಸಂಬಂಧವನ್ನು ನಿರಾಕರಿಸುತ್ತಾಳೆ. ಆಕೆಯ ಆಯ್ಕೆ ಬದುಕುವ, ಬದುಕಿಸುವ ನೆಲೆಯದ್ದು. ಅವಳ ನೈತಿಕತೆ ಮಾನವೀಯವಾದದ್ದು.
ಅರವಸುವಿಗೆ ಆಕೆ ಅನ್ನುತ್ತಾಳೆ. ನಿನ್ನ ಅಣ್ಣ ನೀಚನಾದ ಅಂತ ನೀನು ಅವನಷ್ಟೇ ನೀಚನಾಗುವದಕ್ಕಿಂತ ಷಂಡನಾಗುವದರಲ್ಲಿ ಏನು ತಪ್ಪು?
                ಸ್ಥಾಪಿತ ಮೌಲ್ಯಗಳ ವಿರುದ್ಧ ನಿತ್ತಿಲೆ ಯಾವಾಗಲೂ ನಿಲ್ಲುತ್ತಾಳೆ. ಆಕೆಗೆ ಇಂದ್ರನಿಗಿಂತ ವೃತ್ತ ಪ್ರೀತಿ. ಸಾವು ಗೊತ್ತಿಲ್ಲದವನು ಏನನ್ನೂ ಹುಟ್ಟಿಸಲಾರ ಎಂಬ ನಂಬಿಕೆ ಆಕೆಯದು. ಅಗ್ನಿ ಪೂಜಾ ರೈಭ್ಯನ ಮಗನನ್ನು ಆಕೆ ಜಲಪೂಜೆಗೆ ಅಣಿಗೊಳಿಸುತ್ತಾಳೆ. ನಿನ್ನ ಕುಣಿತಕ್ಕೆ ಮಳೆಯಾಗಬೇಕು ಎಂದು ಅರವಸುವಿಗೆ ಆಕೆ ಹೇಳುತ್ತಾಳೆ. ಅರವಸು, ನಿತ್ತಿಲೆಯ ಶವ ಎತ್ತಿಕೊಂಡು ಅಗ್ನಿ ಪ್ರವೇಶ ಮಾಡಿದಾಗ ಅಗ್ನಿ ಆರಿಹೋಗುತ್ತದೆ. ನಿತ್ತಿಲೆ ಇನ್ನೊಂದು ಬಗೆಯ ಮಾದರಿ. 
            ಹೀಗೆ ವಿಶಾಖಾ ಮತ್ತು ನಿತ್ತಿಲೆ ಹೆಣ್ಣಿನ ಬಿಡುಗಡೆಯ ಎರಡೂ ಸಾಧ್ಯತೆಗಳನ್ನು ಸೂಚಿಸುವ ಸಂಕೇತಗಳಾಗಿ ನಿಲ್ಲುತ್ತಾರೆ.ಇವಿಷ್ಟು ಚಚರ್ೆಯ ಹಿನ್ನೆಲೆಯಲ್ಲಿ ಸ್ತ್ರೀತ್ವದ ಕುರಿತು ಕಾನರ್ಾಡರಿಗೆ ಇರುವ ಗ್ರಹಿಕೆ ಬಗ್ಗೆ ವಿವೇಚಿಸಬಹುದು. ಇದುವರೆಗೆ ನಾನಿಲ್ಲಿ ಚಚರ್ಿಸಿದ ಅವರ ನಾಟಕಗಳ ಸ್ತ್ರಿ ಪಾತ್ರಗಳ ನಿಮರ್ಿತಿಯ ವ್ಯಾಕರಣ ಇದಕ್ಕೆ ಸಹಾಯಕವಾಗಬಹುದಾಗಿದೆ. ಯಾವ ಅಸ್ತ್ರದಿಂದ ಪಿತೃ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಬಂಧನದಲ್ಲಿಡಲು ಯತ್ನಿಸುವದೋ ಅದೇ ಅಸ್ತ್ರದಿಂದ ಇಲ್ಲಿಯ ಹೆಣ್ಣು ಸ್ವತಂತ್ರಳಾಗಲು ಬಯಸುತ್ತಾಳೆ.. ಕಾನರ್ಾಡರ ತಾಕರ್ಿಕ ಚಿಂತನೆಯ ಫಲ ಇದು. ಇಲ್ಲಿಯ ಸ್ತ್ರೀ ಪಾತ್ರಗಳನ್ನು ನಿದರ್ಿಷ್ಟ ತರ್ಕದ ಹಿನ್ನೆಲೆಯಲ್ಲಿ ಕಟ್ಟಿ ನಿಲ್ಲಿಸಲಾಗಿದೆ.
               ವಾಸ್ತವದಲ್ಲಿ ಇಲ್ಲದ ಬಿಡುಗಡೆಯನ್ನು ಅವರು ತರ್ಕದ ಮೂಲಕವೇ ಪಡೆಯುತ್ತಾರೆ. ನಾಗಮಂಡಲದ ರಾಣಿ ನಾಗದಿವ್ಯ ಮಾಡುವಾಗ ನಾನು ಈ ನಾಗನ ಹೊರತಾಗಿ ಬೇರೆ ಪುರುಷನ ಕೈಹಿಡಿಯಲಿಲ್ಲ ಎಂದು ತಾಕರ್ಿಕವಾಗಿ ಮಾತನಾಡಿದ ಜಾಣ್ಮೆ ಕೇವಲ ಈ ನಾಟಕದ ಕತೆಯ ಕ್ರಿಯೆಯ ಅಂಗವಾಗಿ ಬಂದದ್ದಲ್ಲ. ನಾಗನನ್ನು ಪುರುಷನನ್ನಾಗಿ ಗ್ರಹಿಸಿದ, ಆ ಕೈ ಹಿಡಿದ ನೆನಪು ಅದು ತೊಗಲಿಗೂ ಇರುವ ನೆನಪಿನದ್ದು. ಈ ನೆನಪಿನ ಹಿಂದೆ ಪದ್ಮಿನಿ, ಅಮೃತಮತಿ ಮುಂತಾದವರಿದ್ದಾರೆ.
                      ಹೀಗೆ ನೈಜ ಸನ್ನಿವೇಶದಲ್ಲಿ ಇಲ್ಲಿಯ ಪಾತ್ರಗಳು ಹುಟ್ಟುವದಿಲ್ಲ, ಬೆಳೆಯುವುದಿಲ್ಲ. ಇವು ಕಟ್ಟಲ್ಪಟ್ಟವು, ರಚಿತಗೊಂಡವು. ಇವು ನಾಟಕದ ಕ್ರಿಯೆಯೊಡನೆ ಬೆಳೆಯದ, ಆಶಯಕ್ಕನುಗುಣವಾಗಿ ಮಾತ್ರ ಸಿದ್ಧಗೊಂಡವು. ಕಾನರ್ಾಡರ ನಿದರ್ಿಷ್ಟ ನಿಲುವುಗಳನ್ನು ಹೇಳಲು ರೂಪುಗೊಂಡ ಈ ಪಾತ್ರಗಳು ತಮ್ಮ ತರ್ಕವನ್ನು ಮುಚ್ಚಿಡಲು ಕಾವ್ಯಮಯ ಭಾಷೆ ಬಳಸುತ್ತವೆ. ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದ ಸಂದರ್ಭದಲ್ಲೆಲ್ಲ ಸ್ತ್ರೀ ಪಾತ್ರಗಳು ಕಾವ್ಯಮಯವಾಗಿ ಮಾತನಾಡುವುದನ್ನು ನಾವು ಗಮನಿಸಬಹುದು. ಇಲ್ಲಿ ಕಾವ್ಯಾತ್ಮಕ ಭಾಷೆ ಮಾತುಗಳ ಅರ್ಥವಂತಿಕೆ, ಆಳ, ಸೆಳವು, ಸಂಕೀರ್ಣತೆಯನ್ನು ನಿಭಾಯಿಸುವದಕ್ಕಿಂತ ತಾಕರ್ಿಕತೆಯನ್ನು ನಿಭಾಯಿಸುವ ಗುರಾಣಿಯಾಗಿ ಬಂದಿದೆ.
          ಭವಿತವ್ಯದ ಬೆಂಕಿಯಲ್ಲಿ ಮೀಯಲು ಸದಾ ಸಿದ್ಧವಾಗಿರುವ, ಸಹಜತೆಗಿಂತಲೂ ಹೆಚ್ಚು ಖಚಿತವಾಗಿ, ಆತ್ಮ ವಿಶ್ವಾಸದಿಂದ ಮಾತನಾಡುವ ಇಲ್ಲಿಯ ಸ್ತ್ರೀ ಆ ಕಾರಣಕ್ಕಾಗಿ ಓದುಗರ ಮೆಚ್ಚುಗೆ ಗಳಿಸುತ್ತಾಳಾದರೂ ಎಲ್ಲಿಯೂ ಆಕೆ ತನ್ನ ಅನನ್ಯತೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಸ್ವ ಅನನ್ಯತೆಗಿಂತ ಹೆಚ್ಚಾಗಿ ಪುರುಷ ವರ್ಗದಿಂದ ಮುದ್ರೆ ಹಾಕಿಸಿಕೊಂಡು ಕೃತಕೃತ್ಯರಾಗುವ ಇರಾದೆ ಇವಳದು. ಇವಳಿಗೆ ತನ್ನದೆಲ್ಲವನ್ನೂ ಕೊಟ್ಟು ಬರಿದಾಗುವ ತವಕ. ಕೆಲವೆಡೆಯಂತೂ ತ್ಯಾಗ ಮಾಡುವದರಲ್ಲೇ ಸುಖ ಕಾಣುವ ಭಾರತೀಯ ಮಹಿಳೆಯ ಪ್ರಾಗ್ರೂಪ, ಇಲ್ಲಿ ಹೊಸತನದಿಂದ ಒಡಮೂಡಿದೆಯೇನೋ ಎಂಬ ಗುಮಾನಿ ಕಾಡುವುದು ಸುಳ್ಳಲ್ಲ 
.ಶ್ರೀಪಾದ ಭಟ್ಟ್

Saturday, 17 August 2013

ವೃತ್ತಿ + ಹವ್ಯಾಸಿ = ರಂಗಭೂಮಿ --ಶ್ರೀಪಾದ ಭಟ್ಟ್

                    ವೃತ್ತಿ +  ಹವ್ಯಾಸಿ  = ರಂಗಭೂಮಿ 
            ಆಧುನಿಕ ರಂಗಭೂಮಿ, ತನ್ನೆಲ್ಲ ಬದ್ಧತೆಗಳ ನಡುವೆಯೂ ಜನಪ್ರಿಯತೆಯ ಮಾನದಲ್ಲಿ ತೀವ್ರ ಕೆಳಮುಖವನ್ನು ಅನುಭವಿಸುತ್ತಿದೆ. ರಂಗಭೂಮಿಯ ಸಾಮಾಜಿಕ ಅವಶ್ಯಕತೆಯನ್ನು ಮನಗಂಡ ರಂಗತಜ್ಞರು, ರಂಗಭೂಮಿಯನ್ನು ಮತ್ತೆ ಜನರ ಅವಶ್ಯಕತೆಯನ್ನಾಗಿ ಮಾಡುವ ತೀವ್ರ ಪ್ರಯತ್ನದಲ್ಲಿದ್ದಾರೆ. ವರ್ತಮಾನದ ಗಾಯಗಳಿಗೆ ಗತಕಾಲದಲ್ಲಿ ಉಪಚಾರ ದೊರೆಯಬಹುದೆನೋ ಎಂಬ ಆಸೆ ಸಹಜವಾದದ್ದು. ಹಾಗಾಗಿ ಒಮ್ಮೆ ಜನಪ್ರಿಯತೆಯ ಉತ್ತುಂಗದಲ್ಲಿದ್ದ ವೃತ್ತಿರಂಗಭೂಮಿ ಅಥವಾ ಕಂಪನಿ ನಾಟಕಗಳು ಗೆದ್ದಿರುವ ಕಾರಣಗಳೇನು? ಮತ್ತು ನಾವು ಆಧುನಿಕರು ಸೋಲುತ್ತಿರುವುದೆೆಲ್ಲಿ ಎಂಬುದನ್ನು ಒಟ್ಟೊಟ್ಟಿಗೆ ಇಟ್ಟು ನೋಡುವ ಪ್ರಯತ್ನ ಈ ಲೇಖನದ್ದು.
            ಕಂಪನಿ ನಾಟಕ ಅಥವಾ ವೃತ್ತಿರಂಗಭೂಮಿಯ ಹಾಗೂ ಹವ್ಯಾಸಿ ರಂಗಭೂಮಿಯ ಅನ್ವಯಿಕ ಸಾಧ್ಯತೆಗಳ ಕುರಿತು ನನ್ನ ಟಿಪ್ಪಣೆಗಳನ್ನು ಮಂಡಿಸುವ ಆರಂಭದಲ್ಲೇ ಈ ಪರಿಕಲ್ಪನೆಗಳಿಗಿರುವ ತೊಡಕುಗಳನ್ನು ತಮ್ಮ ಮುಂದಿಡುತ್ತಿದ್ದೇನೆ.
ಒಂದನೇ ತೊಡಕು ವಗರ್ಿಕರಣಕ್ಕೆ ಸಂಬಂಧಿಸಿದ್ದು. ಯಾವುದನ್ನು ನಾವು ಈಗ `ವೃತ್ತಿ ರಂಗಭೂಮಿ ಎಂದು ಕರೆಯುತ್ತಿದ್ದೇವೋ ಮತ್ತು ಯಾವುದನ್ನು ನಾವು `ಹವ್ಯಾಸಿ ರಂಗ ಭೂಮಿ ಎಂದು ಕರೆಯುತ್ತಿದ್ದೇವೊ ಅವು ಒಂದು ಸಿದ್ಧ ಪ್ರೊಡಕ್ಟ್ ಗಳಲ್ಲ. ಅದರಲ್ಲಿ  ಹಲವಾರು ಬೆಳವಣಿಗೆಯ ಅಂಶಗಳಿವೆ. ವೃತ್ತಿ ರಂಗಭೂಮಿ ಆರಂಭದಲ್ಲಿ  ಸ್ವೀಕರಿಸಿದ ಜನಪದ ಆಟಗಳಾಗಿರಬಹುದು ಅಥವಾ ಸ್ಥಳೀಯ ವಿವಿಧ ಮಾದರಿಗಳಿರಬಹುದು,  ಅವನ್ನೆಲ್ಲ ಬೇರೆ ಬೇರೆ ಕಾಲಘಟ್ಟದಲ್ಲಿ ಸೇರಿಸಿಕೊಳ್ಳುತ್ತ  ಬೆಳವಣಿಗೆ ಹೊಂದುತ್ತ ಬಂದಿದೆ. ಈಗ ನಾವು ಇಲ್ಲಿ ಪ್ರಸ್ತಾಪಿಸುವ ಕಂಪನಿನಾಟಕಗಳು, ಯಾವುದನ್ನು ನಾವು ಲೆಜೆಂಡ್ ಆಗಿ ನೋಡುತ್ತಿದ್ದೇವೆಯೋ ಅವು ಅದರ ಉಚ್ಛ್ರಾಯ ಕಾಲದಲ್ಲಿ,  ಸಿದ್ಧರೂಪವಾಗಿ ನಿಂತ ಕಾಲಘಟ್ಟಕ್ಕೆ ಸೇರಿದುದಾಗಿದೆ. ಅದನ್ನು ಮಾತ್ರ ಉಲ್ಲೇಖಿಸಲು ಸಾಧ್ಯ; ಹೊರತು ಈ ರೂಪದ ಹಿಂದಿನ ಬೆಳವಣಿಗೆಯ ಹಂತಗಳನ್ನಲ್ಲ.
ಅದೇ ರೀತಿ `ಹವ್ಯಾಸಿ ರಂಗಭೂಮಿ ಅಂತ ಕರೆಯುವಾಗ ಕೂಡ ಒಂದು ಸರ್ವ ಗ್ರಾಹ್ಯ ಆದ ಘಟ್ಟ ಅಂತ ಸಿಗೋದಿಲ್ಲ. ಅದೂ ಸಹ ಬೆಳವಣಿಗೆ ಹೊಂದುತ್ತಲೇ ಇದೆ. ಹಾಗಾಗಿ ನಾವು ಮಾತನಾಡುವಾಗ ಅವುಗಳ ಈ ಓಘವನ್ನು ಕಡೆಗಣಿಸಿ ಒಂದುಕಡೆ ಸ್ಥಗಿತಗೊಳಿಸಿ ಮಾತನಾಡಬೇಕಾಗುತ್ತದೆ. ಈಗ ನೋಡಿ ಜನಪದ ರಂಗಭೂಮಿಯ ಅಂಶಗಳನ್ನು, ಸಂವಹನೆಯ ಮಾದರಿಗಳನ್ನು ಅರಗಿಸಿಕೊಳ್ಳುತ್ತ ಕಂಪನಿ ನಾಟಕ ಹೊಸ ಆಕೃತಿಯೊಡನೆ ಬಂತು. ಹಾಗಾಗಿ ಇದನ್ನು ಪ್ರತ್ಯೇಕವಾಗಿ ಒಡೆಯುವುದು ಹೇಗೆ? ಅಲ್ಲದೇ ಹವ್ಯಾಸಿ ರಂಗಭೂಮಿಯಲ್ಲಿಯೇ ನಗರದ  ರಂಗಚಟುವಟಿಕೆಗಳಿಗೂ, ಗ್ರಾಮೀಣ ರಂಗ ಚಟುವಟಿಕೆಗಳಿಗೂ ಅಗಾಧವಾದ ವ್ಯತ್ಯಾಸಗಳಿವೆ. ಯಾವುದರ ಲಕ್ಷಣಗಳನ್ನು ಹಿಡಿದಿರಿಸುವುದು? ಇದರರ್ಥ. ಅಂತದ್ದೊಂದು ಲಕ್ಷಣಗಳೇ ಈ ಎಲ್ಲ ರಂಗಭೂಮಿಗೂ  ಇಲ್ಲ ಅಂತಲ್ಲ. ಆದರೆ ನಾವಂದುಕೊಂಡಷ್ಟು  ಪ್ರತ್ಯೇಕವಾದ `ಈಸ್ಥೆಟಿಕ್ ಇದರ ಹಿಂದಿದೆಯೇ ಎಂಬುದು ಅನುಮಾನ. ವಗರ್ಿಕರಣದ ಈ ನಮೂನೆಯನ್ನು ಸಧ್ಯ ಅಧ್ಯಯನದ ಅನುಕೂಲಕ್ಕಾಗಿ ಮಾತ್ರವೇ ಸ್ವೀಕರಿಸಿ ನಂತರ ಅದನ್ನು ವಿಸಜರ್ಿಸಲೇ ಬೇಕಾಗುತ್ತದೆ.
                 ಎರಡನೇಯದಾಗಿ ಪಾರಿಭಾಷಿಕ ಪದಕ್ಕೆ ಸಂಬಂಧಿಸಿದ ತೊಡಕು. ಇದನ್ನು ವಿಸ್ತರಿಸಲು ಹೋಗುವುದಿಲ್ಲ. ಈ ಪ್ರಬಂಧದ ಮಟ್ಟಿಗೆ ವೃತ್ತಿ ರಂಗಭೂಮಿ = ಕಂಪನಿ ನಾಟಕಗಳು ಅಂತಲೂ, ಹವ್ಯಾಸಿ ರಂಗಭೂಮಿ = ಆಧುನಿಕ ರಂಗಭೂಮಿ ಅಂತಲೂ ಇಟ್ಟು ಮಾತನಾಡಲು ಬಯಸುತ್ತೇನೆ. ಆಧುನಿಕ ರಂಗಭೂಮಿ ಅಂದಾಗ ಅದು ವಸಾಹತು ಕಾಲಕ್ಕೆ ಸಂಬಂಧಿಸಿದ್ದರಿಂದ ಕಂಪನಿ ನಾಟಕಗಳೂ ಅದರಲ್ಲೇ ಬರುತ್ತವೆ ಎಂಬ ಎಚ್ಚರ ನನಗಿದೆ. ಆದಾಗ್ಯೂ ಅದನ್ನು ನವ್ಯ ಫೇಸ್ನ ಕಾಲಘಟ್ಟ ಅಂತ ಗುರುತಿಸಲು ಇಷ್ಟಪಡುತ್ತೇನೆ. ಮತ್ತು ಈ ಟಿಪ್ಪಣಿ ಮುಗಿದಕೂಡಲೇ ನೀವು ಈ ಪಾರಿಭಾಷಿಕ ಪದದ ಒಪ್ಪಂದವನ್ನು ಸಹ ವಿಸರ್ಜಿಸಬಹುದು..
             ಹವ್ಯಾಸಿ ರಂಗಭೂಮಿಯ ಆದ್ಯರಾದ ರಂಗಾಚಾರ್ಯರು ಅಂದರೆ ಶ್ರೀರಂಗರ ರಂಗಪ್ರಜ್ಞೆಯನ್ನು ರೂಪಿಸಿದ್ದು, ಅವರೂರಿನಲ್ಲಿ ನಡೆದ ಹರಿಶ್ಚಂದ್ರದಂತ ಆಟಗಳು, ವಿಜಾಪುರದಲ್ಲಿ ಅವರ ಮೇಲೆ ಅಪಾರ ಪ್ರಭಾವ ಬೀರಿದ ನಾರಂಗಿ ನಿಶಾನ್ನಂತಹ ಮರಾಠಿ ಕಂಪನಿ ನಾಟಕಗಳು. ಈ ಕಾಲಘಟ್ಟದ ನಮ್ಮ ನಡುವಿನ ಹೆಮ್ಮೆಯ ಗಿರಿಶ್ ಕಾನರ್ಾಡರು ನಾನು ಆಧುನಿಕ ನಾಟಕ ಎಂದು ಯೋಚನೆ ಮಾಡಿದರೂ ಕಂಪನಿ ನಾಟಕದಿಂದಲೇ ಹೊರಟು ಬರಬೇಕು ಅನ್ನುತ್ತಾರೆ. ಅವರ ರಚನೆಯ ಹಿಂದಿನ ಸ್ಪೂತರ್ಿಯನ್ನು, ಆಕೃತಿಯನ್ನು ನಾವು ಹೀಗೆ ಗೃಹಿಸಲು ಸಾಧ್ಯ. ಕಾರಂತರಂತೂ ಆಧುನಿಕವಾದ ತಮ್ಮ ಪ್ರಯೋಗಕ್ಕೆ ಕಂಪನಿ ನಾಟಕದ ಮಾಂತ್ರಿಕ ಸ್ಪರ್ಶ ನೀಡಿದ ಉದಾಹರಣೆ ನಮ್ಮ ಕಣ್ಣೆದುರಿಗೇ ಇದೆ.
                ಈ ಹಿನ್ನೆಲೆಯಲ್ಲಿ ನಾನು ಈ ಎರಡೂ ರಂಗಭೂಮಿಯ ಶಕ್ತಿ ಮತ್ತು ಮಿತಿಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಮಂಡಿಸುತ್ತಿದ್ದೇನೆ : ಮತ್ತು ಕನರ್ಾಟಕದ ಸಂದರ್ಭವನ್ನು ಮಾತ್ರ ಪರಿಗಣಿಸಿ ಮಾತನಾಡುತ್ತಿದ್ದೇನೆ. ಅಲ್ಲದೇ ನಾನು ವೃತ್ತಿರಂಗಭೂಮಿಯಿಂದ ಕಲಿತುಕೊಳ್ಳಬಹುದಾದ ಸಂಗತಿಗಳ ಕುರಿತು ಹೇಳುವಾಗ ನಿಮಗೆ ಕಂಪನಿ ನಾಟಕ ಅಂದರೆ ಸವರ್ಾಲಂಕಾರ ಭೂಷಿತ,  ಸರ್ವಗುಣ ದೋಷರಹಿತವಾದ ಒಂದು ಆತ್ಯಂತಿಕ ಸ್ಥಿತಿಯ ರಂಗಭೂಮಿ ಅಂತಲೂ, ಹವ್ಯಾಸಿ ರಂಗಭೂಮಿ ಎಂದರೆ ಪರಮ ಭ್ರಷ್ಟಾತಿ ಭ್ರಷ್ಟವಾದ ಆಶಾದಾಯಕವೇ ಅಲ್ಲದ ರಂಗ ಅಭ್ಯಾಸವೆಂತಲೂ ಕಂಡುಬರುವ ಅಪಾಯವಿದೆ. ಆದರೆ ಹಾಗೇನು ಅಲ್ಲ ಎಂಬುದನ್ನು ಆರಂಭದಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ಈ ಸಂದರ್ಭದ ಅಧ್ಯಯನದ ಚೌಕಟ್ಟಿನ ಮಿತಿಯಲ್ಲಿ ವೃತ್ತಿ ರಂಗಭೂಮಿಯ ಶಕ್ತಿ ಹಾಗೂ ಹವ್ಯಾಸಿ ರಂಗಭೂಮಿಯ ಮಿತಿ ಇವೆರಡನ್ನೂ ಮಾತ್ರ ಒತ್ತುಕೊಟ್ಟು ಮಾತನಾಡುತ್ತಿದ್ದೇನೆ. ಅಂದರೆ ಇಲ್ಲಿ ಹವ್ಯಾಸಿ ರಂಗಭೂಮಿಯ ಸಾಧನೆಯನ್ನು, ವೃತ್ತಿರಂಗಭೂಮಿಯ ಮಿತಿಯನ್ನು ಎಲ್ಲೂ ಚರ್ಚಿಸುತ್ತಿಲ್ಲ.. ಅದು ಸಧ್ಯದ ನನ್ನ ತುರ್ತಲ್ಲ.

                ಕಂಪನಿ ನಾಟಕ ನಮಗೆ ಬಹಳ ಮುಖ್ಯವಾಗಿ ರಂಗಭೂಮಿಯ ಸಂಭ್ರಮವನ್ನು ಕಾಣಿಸಿತು. ರಂಗಭೂಮಿಗೆ ಇರುವ ಅದರ ರೋಚಕತೆಯನ್ನು ಅನುಭವವಾಗಿಸಿತ್ತು. ಹವ್ಯಾಸಿ ರಂಗಭೂಮಿಯ ಪ್ರಧಾನವಾದ ದೌರ್ಬಲ್ಯವೇ ಅದರ ಅತಿವಾಸ್ತವತೆ. ವಾಸ್ತವದ ನಮ್ಮ ಕಣ್ಣ ನೇರದ ಸಂಗತಿಗಳ ಆಚೆ ಏನೂ ಇಲ್ಲ ಎಂದು ನಂಬಿಕೊಂಡ ಗೃಹಿಕೆ ಅದು. ಈ ಅತಿವಾಸ್ತವತೆಯ ವ್ಯಾಮೋಹ ನವ್ಯ ಹೇಳಿಕೊಟ್ಟ ಪಶ್ಚಿಮದ ರ್ಯಾಶನಾಲಿಸ್ಟ್ ಧೋರಣೆಗೆ ಸಂಬಂಧಿಸಿದ್ದು,  ಇದಕ್ಕೆ  ಭವಿಷ್ಯದ ಕನಸಿಲ್ಲ. ಗತಕಾಲದ ಕುರಿತು ಅತ್ಯಂತಿಕ ತಿರಸ್ಕಾರ ಇದೆ. ತೀರ ಕೌಟುಂಬಿಕವಾದ ಪಠ್ಯಗಳಾಚೆ ಉಳಿದ ಪಠ್ಯಗಳನ್ನು ಅದು ನಿರಾಕರಿಸತೊಡಗುತ್ತದೆ. ಹಾಗಾಗಿ ಇದೆಲ್ಲದರ ಆಚೆ ಬೇರೊಂದು ಪ್ರಪಂಚವೂ ಇದೆ ಎಂಬುದನ್ನು ಅದು ನಿರಾಕರಿಸಿತು. ಆ ಇತರ ಜಗತ್ತಿನವರಿಗೆ ಇಲ್ಲಿ ಪ್ರವೇಶ ಸಾಧ್ಯವಾಗಲೇ ಇಲ್ಲ. ಪಶ್ಚಿಮದ ಕಲಿತ ಬುದ್ದಿ ಆಡಿಸಿದ ನುಡಿ ನಾಟಕದ ನಾಡಿಯನ್ನು ಆಡಿಸತೊಡಗಿತು. ಹವ್ಯಾಸಿ ರಂಗಭೂಮಿಯನ್ನು ಉದ್ಘೋಷಿಸಿದ ಶ್ರೀರಂಗರು ಅಂತೆಯೇ ಕೈಲಾಸಂ ಇಂಗ್ಲೇಂಡಿಗೆ ಹೋಗಿ ಬಂದದ್ದು, ಅವರ ಚಟುವಟಿಕೆಗಳ ಬೆನ್ನ ಹಿಂದೆಯೇ ನವ್ಯ ಮೂಮೆಂಟ ಇಲ್ಲಿ ಬೆಳವಣಿಗೆ ಹೊಂದಿದ್ದು, ಜನಪ್ರಿಯತೆಯನ್ನು ಅನುಮಾನಿಸುವ ದೃಷ್ಟಿ ಇವೆಲ್ಲ ರಂಗಭೂಮಿ ಇತಿಹಾಸ ಬಲ್ಲವರಿಗೆ ಗೊತ್ತು. ಆದರೆ ಬಹುಮುಖ್ಯ ಸಂಗತಿ ಎಂದರೆ ನಾಟಕದ ಒಳಗಡೆಯೇ ಅವರು ವೃತ್ತಿರಂಗಭೂಮಿಗೆ ಹೊಡೆದ ಹೊಡೆತ ಸಾಮಾನ್ಯವಾದದ್ದಲ್ಲ. ಅವರ ನಾಟಕಗಳು ತಲುಪಿದ್ದು, ತೀರ ಎಲೈಟ್ ಆದ ಮಧ್ಯಮವರ್ಗದ ಬುದ್ದಿಜೀವಿಗಳನ್ನು ಎಂದಾದರೂ ಅವರ ಅಭಿಪ್ರಾಯ ಜನಾಭಿಪ್ರಾಯ ರೂಪಿಸಿದ್ದು ಸುಳ್ಳಲ್ಲ. ನಮ್ಮ ವಸಾಹತು ಬದುಕಿನ ಸಂದರ್ಭದಲ್ಲಿ ಇಂಗ್ಲೆಂಡಿನಿಂದ ಬಂದವರ ಮಾತಿಗೊಂದು ತೂಕ ಒದಗುವದು ಆಶ್ಚರ್ಯವೇನಲ್ಲ. ಅದು  ಎಷ್ಟರಮಟ್ಟಿಗೆ ಆಯಿತೆಂದರೆ ಕಂಪನಿ ನಾಟಕ ನೋಡುವುದೇ ಒಂದು ಪಾಪ ಎಂಬಷ್ಟರ ಮಟ್ಟಿಗೆ ಹೋಯಿತು.
  ಈ ಅತಿವಾಸ್ತವದ ರೋಗ ಬಡಿದಿದ್ದರಿಂದ ಆದ ಮೊದಲ ಸಮಸ್ಯೆಯೇ ರಂಗಭೂಮಿ ಎನಿಮಿಕ್ ಆಗಿದ್ದು, ತನ್ನೆಲ್ಲ ಜೀವರಸವನ್ನು ಕಳೆದುಕೊಂಡಿದ್ದು. ಅದಕ್ಕೆ ಅನಂತರದ ರಸಸ್ಪರ್ಶ ಕಂಪನಿ ಪ್ರಭಾವದ ಕಾರಂತರಿಂದ ಆಯಿತು. ಆದರೆ ಕಾರಂತರು ಆ ಸಮಯದಲ್ಲಿ ಎಷ್ಟೆಲ್ಲ ನಿಂದೆಗೂ ಗುರಿಯಾಗಬೇಕಾಯಿತು. ನವ್ಯ ವಲಯ ಅವರ ಪ್ರಯೋಗವನ್ನು ಗಿಮಿಕ್ ಎಂದೂ, ಹಾಡು ಹಸೆಯಲ್ಲಿ ಆದ ಪಲಾಯನವಾದವೆಂದೂ, ಕೇವಲ ಅಲಂಕರಣ ಎಂದೂ ಮೂದಲಿಸಿತ್ತು. 80 ರ ನಂತರ ಕಾರಂತರ ಮಹತ್ವ ಅರಿವಾಗತೊಡಗಿದೆ.
                ಯುನಿವಸರ್ಿಟಿ ವಿಟ್ ಎಂದು ಕರೆಯಲ್ಪಡುವ ವಿಶ್ವವಿದ್ಯಾಲಯದ ರಂಗ ವಿಮರ್ಶಕರ ಗುಂಪು ಷೇಕ್ಸ್ಪಿಯರನ್ ಕಾಲದಲ್ಲೂ ಹೀಗೆ ವತರ್ಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಮಾತಿನ ಮಧ್ಯ ಹಾಡನ್ನು ತಂದ ಆತನನ್ನು `ಬೇರೆ ಬೇರೆ ಗರಿಗಳನ್ನು ಸಿಕ್ಕಿಸಿಕೊಂಡ ಕಾಗೆ ಅಂತ ಕರೆದಿದ್ದುಂಟು. ಆದರೆ ಕಂಪನಿ ನಾಟಕದ  ಷೇಕ್ಸ್ಪಿಯರ್ ಇಂದು ಯುನಿರ್ವಸಿಟಿಯ ಪಠ್ಯದಲ್ಲಿದ್ದಾನೆ.

               ವೃತ್ತಿ ರಂಗಭೂಮಿಯ ಒಂದು ಶಕ್ತಿ ಎಂದರೆ ಅದರ ಸ್ಥಿತಿ ಸ್ಥಾಪಕತ್ವದಗುಣ ಹಾಗೂ ಒಳಗೊಳ್ಳುವ ಗುಣ. ಕಾಲಕಾಲಕ್ಕೆ ಸಮಾಜದಲ್ಲಾದ ಬದಲಾವಣೆಗಳನ್ನು ಒಳಗೊಳ್ಳುತ್ತಾ ಪ್ರತಿಕ್ರಿಯಿಸುತ್ತಾ ಬಂದ ಈ ರಂಗಭೂಮಿ ಬೇಕಾದರೆ ದ್ರೌಪದಿ ವಸ್ತ್ರಾಪಹರಣದಲ್ಲಿ ಖಾದಿ ಮಹತ್ವದ ಕುರಿತು ಮಾತನಾಡುತ್ತದೆ. ಜನರಿಗೆ ಅದರಲ್ಲಿ ಜೀವಂತಿಕೆ ಕಾಣುವ ಹಾಗೆ, ನಮ್ಮದೇ ಜೀನವದ ಅಂಗ ಅದರಲ್ಲಿ ಪ್ರತಿನಿಧಿಸಲ್ಪಡುತ್ತದೆ ಅಂತ ಅನ್ನಿಸುವ ಹಾಗೆ ಅದು ಮಾಡಿತು. ಅದರ ಒಳಗೊಳ್ಳುವ ಕ್ರಿಯೆ ಬಹಳ ಆಸಕ್ತಿದಾಯಕವಾದದ್ದು.
 ಕಂಪನಿ ನಾಟಕದ ಕುರಿತು ನನ್ನಲ್ಲಿ ಅಪಾರವಾದ ಆಸಕ್ತಿ ಮೂಡಿಸಿದ ಒಂದು ಚಿಕ್ಕ ಕಂಪನಿ ಕರಾವಳಿ ತೀರದ ನನ್ನೂರಿಗೆ ಬಂದಿತ್ತು. ಅದೊಂದು ಅಲೆಮಾರಿಗಳ ರಂಗತಂಡ. ಹಗಲಿನಲ್ಲಿ ಮನೆ ಮನೆಗಳಿಗೆ ಹೋಗಿ ಬಟ್ಟೆ, ಅಕ್ಕಿ, ಕಾಯಿಗಳನ್ನು ಬೇಡುತ್ತ, ರಾತ್ರಿ ನಾಟಕ ಪ್ರದಶರ್ಿಸುತ್ತಿತ್ತು. ಆಯಾದಿನ ಸಂಗ್ರಹಿಸಿದ ಹಳೆ ಬಟ್ಟೆಗಳನ್ನು ನಾಟಕದಲ್ಲಿ ಹೊಸರೂಪದೊಂದಿಗೆ ಅವರು ಬಳಸುತ್ತಿದ್ದರು. ಆಗ ಸದಾರಮೆ ನಾಟಕ ಮಾಡುತ್ತಿದ್ದರು. ನಾನು ನನ್ನಮ್ಮನ ಸೀರೆಯೊಂದನ್ನು (ಸ್ವಲ್ಪ ಚೆನ್ನಾಗಿರೋದು) ಅವರಿಗೆ ಕದ್ದು ಕೊಟ್ಟಿದ್ದೆ. ಅವತ್ತಿಂದ ನನಗೆ ನಾಟಕಕ್ಕೆ ಫ್ರೀ ಪಾಸ್, ಆದಿನ ಆ ಸೀರೆಯ ಅಂಚನ್ನು ತೆಗೆದು ಹಳೆಯ ಸೀರೆಯ ಬಾರ್ಡರ್ ಅಂಟಿಸಿಕೊಂಡು ಸದಾರಮೆ ಫ್ರೆಶ್ ಆಗಿ ನಗುತ್ತ ನಾಟಕಕ್ಕೆ ಕಳೆ ಏರಿಸಿದ್ದಳು. ಇದೊಂದು ರೂಪಕವಾಗಿ ನನಗೆ ಈ ಹೊತ್ತು ಕಾಣಿಸುತ್ತಿದೆ. ಆಧುನಿಕ ರಂಗಭೂಮಿಯ ಅಪಾರ ಮಡಿವಂತಿಕೆ ಒಂದು ಬಗೆಯ ಟ್ರಿಮ್ ಮಾಡಿದಂತಿರುವ ಅತಿ ಶಿಸ್ತು ಈ ಯಾವ ಒಳಗೊಳ್ಳುವಿಕೆಯನ್ನೂ ಬಯಸುವುದಿಲ್ಲ.

              ಕಂಪನಿ ನಾಟಕಗಳು ಭಾರತದ ರಂಗಸಂಪ್ರದಾಯಗಳ ಕಥನವನ್ನು ಮುಂದುವರಿಸಿ ಕೊಂಡು ಬಂದವು. ನಿರೂಪಣಾತ್ಮಕವಾದ ರಂಗಭೂಮಿ ಅದು. ಆದರೆ ನಾವು ಆಧುನಿಕರು, ಪ್ರಸ್ತುತ ಪಡಿಸುತ್ತಿರುವುದು ವ್ಯಾಖ್ಯಾನ ಪ್ರಧಾನ ರಂಗಭೂಮಿಯನ್ನು. ನಿರೂಪಣೆಯೇ ವ್ಯಾಖ್ಯಾನವೂ ಆಗಬಲ್ಲದು ಎಂಬುದನ್ನೂ,  ಒಂದು ಕಥೆಯನ್ನು ನಾವು ಹೇಗೆ ನಿರೂಪಿಸುತ್ತೇವೆ ಎಂಬುದೇ ಅದರ ವ್ಯಾಖ್ಯಾನವು ಕೂಡ ಆಗುತ್ತದೆ ಎಂಬುದನ್ನೂ ಮರೆತು, ವ್ಯಾಖ್ಯಾನಕ್ಕಾಗಿಯೇ ಇಡೀ ನಾಟಕವನ್ನು ಹವ್ಯಾಸಿ ರಂಗಭೂಮಿ ದುಡಿಸಿಕೊಳ್ಳುತ್ತದೆ.  ಹೀಗಾಗಿ ಪ್ರೇಕ್ಷಕರಿಗಾಗಿ ಏನನ್ನೂ ಬಿಡದೆ ಒಂದು ಸಿದ್ದ ಪ್ರಾಡೆಕ್ಟನ್ನು ಇದು ನೀಡುತ್ತಿದೆ. ಹಾಗಾದಾಗ ಅದರ ಜೀವಂತಿಕೆಯೇ ಮರೆಯಾಗುತ್ತದೆ. ನಿದರ್ೆಶಕ ಕೊಟ್ಟ ಒಂದೇ ಬಗೆಯ ವ್ಯಾಖ್ಯಾನದಿಂದಾಗಿ ಪ್ರದರ್ಶನ ತೆರೆದಿಡುವ ಹಲವಾರು ವ್ಯಾಖ್ಯಾನಗಳು, ಸಾಧ್ಯತೆಗಳು ಮುಚ್ಚಿ ಹೋಗುತ್ತವೆ. ಎಲ್ಲ ನಟರೂ ನಿದರ್ೆಶಕರಂತೆ ಮಾತನಾಡುತ್ತಾರೆ. ಮುಂದುವರಿದು ನಿದರ್ೆಶಕರ ಲೋಕಗೃಹಿಕೆಯೇ ನಾಟಕದ ಲೋಕಗೃಹಿಕೆಯೂ ಆಗುವ ಹಾಗೆ, ಅದನ್ನು ಪ್ರೇಕ್ಷಕ ಒಪ್ಪುವ ಹಾಗೆ ಅದು ಒತ್ತಾಯಿಸುತ್ತದೆ. ಕಥನದ ನೂರೆಂಟು ಸಾಧ್ಯತೆಗಳು ಮಾಯವಾಗುತ್ತಿವೆ.

                ಒಂದು ನಿರ್ದಿಷ್ಟ ವೈಚಾರಿಕ ಆಕೃತಿಗೆ ಮಾತ್ರವೇ ಮಾತು ಕೊಡುವ ಇರಾದೆ ಹೊಂದಿದ ಹವ್ಯಾಸಿ ರಂಗಭೂಮಿ ಆ ಕಾರಣಕ್ಕಾಗಿಯೇ ಶುಷ್ಕವಾದ ಅಭಿನಯವನ್ನು ಆತುಕೊಳ್ಳುತ್ತಿದೆ. ನಟನಾದವನ ಜವಾಬ್ದಾರಿ ಈ ಕಲಿತ ಮಾತುಗಳನ್ನು ಒಪ್ಪಿಸುವುದು ಮಾತ್ರವಾಗಿರುವುದರಿಂದ ಅಭಿನಯ ಸಲೀಸಾಗುತ್ತದೆ. ಅದಕ್ಕಾಗಿ ಯಾವ ವಿಶೇಷ ರಿಯಾಜ್ಗಳೂ ಅಗತ್ಯ ಎನಿಸುತ್ತಿಲ್ಲ. ಬದಲಾಗಿ ನಾವು ಈಚಿನ ರಂಗಭೂಮಿಯವರು ಕಂಪನಿ ನಾಟಕದ ನಟರ ಅಭಿನಯವನ್ನು `ಮೆಲೋಡ್ರಾಮಾ, `ಭಾವಾತಿರೇಕ ಎಂದು ನಮಗೆ ಕಲಿಸಿಕೊಟ್ಟ ಮಾತುಗಳನ್ನೇ ಉರು ಹೊಡೆದು ಹೇಳುತ್ತ ಬಂದೆವು. ಭಾವ ತನ್ಮಯತೆಯನ್ನು ಬ್ರೆಕ್ಟನ ಹೆಸರಲ್ಲಿ ತಪ್ಪು ತಪ್ಪಾಗಿ, ಜಾಳು ಜಾಳಾಗಿ ವಿಶ್ಲೇಷಿಸಿ ಅದನ್ನೊಂದು ಅಪರಾಧ ಎನ್ನುವಂತೆ ನೋಡಿದೆವು. ಈ ತನ್ಮಯತೆ ಮತ್ತು  ವಾಸ್ತವ ಪ್ರಜ್ಞೆಗೆ ಸಂಬಂಧಿಸಿದ ಒಂದು ಸಂಗತಿ ಹೀಗಿದೆ. ಗರುಡರ ಕಂಪನಿಯಲ್ಲಿ ನಾಟಕ ಶಿಕ್ಷಕರಾಗಿ ಸೇರಿ ನಂತರ ಪ್ರಧಾನ ಪಾತ್ರವಹಿಸಿ ಮುಂದೆ `ಜಯಕನರ್ಾಟಕ ನಾಟಕ ತಂಡ ಕಟ್ಟಿದ ಹುಲಿಮನೆ ಸೀತಾರಾಮ ಶಾಸ್ತ್ರಿಯವರನ್ನು ಗೌರೀಶ ಕಾಯ್ಕಿಣಿಯವರು ಸಂದರ್ಶನ ಮಾಡಿದ್ದರು. ಆ ಕುರಿತ ಕಾಯ್ಕಿಣಿಯವರ ಬರೆಹವನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ..... ಹುಲಿಮನೆ ಶಾಸ್ತ್ರಿ ಅಸಾಮಾನ್ಯ ಅಭಿನಯಪಟು. ಅಭಿನಯವಲ್ಲ ಥೇಟು ಯತಾರ್ಥ. ಯಾವ ಪಾತ್ರವನ್ನೂ ಸಹ ಸಮರ್ಥವಾಗಿ ಸಜೀವಗೊಳಿಸುತ್ತಿದ್ದರು. ಪಾತ್ರಾಭಿನಯದಲ್ಲಿ ತನ್ಮಯರಾಗಿ ಕಾಣುತ್ತಿದ್ದರು. ಅಥರ್ಾತ್ ಪ್ರೇಕ್ಷಕರ ರೋಮಾಂಚಿತ ದೃಷ್ಟಿಗೆ. ಆ ಕುರಿತು ನಾನು ಅವರನ್ನು ಕೇಳಿದೆ ಶಾಸ್ತ್ರಿಗಳೇ ರಂಗದಲ್ಲಿ ಅಷ್ಟೊಂದು ತನ್ಮಯ ಭಾವದಿಂದಲೇ ನಟಿಸುತ್ತೀರಾ? ಅದಕ್ಕೆ ಅವರು ಅಂದರು  `ಹಾಗೆ ಅಭಿನಯಿಸುವುದು ಉಂಟು. ಯಾವ ಪಾತ್ರವೇ ಇರಲಿ ಅದರ ಪ್ರಭಾವಕ್ಕೆ ತಕ್ಕಂತೆ ಅಂತ ನಟರು ತನ್ಮಯರಾಗಿ ಬಿಡುತ್ತಾರೆ. ಆದರೆ ತಾನೇ ಆಯಾ ಪಾತ್ರದ ಭೂಮಿಕೆಯೊಡನೆ ಒಂದಾದರೆ ಅದು ನಟನೆಯಾದೀತೆ? ನಾನು ಅಥವಾ ಗರುಡ ಸದಾಶಿವರಾಯ ಹಾಗಲ್ಲ.  ನಮಗೆ ಎಂಥ ಅಮೋಘ ಅಭಿನಯದಲ್ಲಿಯೂ ಆತ್ಮಪ್ರಜ್ಞೆ ಜಾಗೃತವಾಗಿರುತ್ತಿತ್ತು. ಕೀಚಕವಧೆ ನಾಟಕದಲ್ಲಿ ನಾನು ಭೀಮ, ಗರುಡರು ಕೀಚಕ. ಭೀಮನು ಕೀಚಕನನ್ನು ರೋಷಾವೇಷದಲ್ಲಿ ಎತ್ತಿಹಿಡಿದಾಗ ಪ್ರೇಕ್ಷಕನು ಉಸಿರುಗಟ್ಟಿ ಹಿಡಿದು ನೋಡುತ್ತಿದ್ದಾಗ ಗರುಡರು `ಶಾಸ್ತ್ರಿ ನನ್ನನ್ನು ಗಟ್ಟಿ ಹಿಡಿ. ಬಿದ್ದೇನು ಎಂದು ಪಿಸುಗುಡುತ್ತಿದ್ದರು.
ಅಭಿನಯದ ಕುರಿತ ಈ ಚಿಂತನೆಯನ್ನು ನಾವು ಆಧುನಿಕರು ಏನೆಂದು ಗುರುತಿಸಿದ್ದೇವೆ?

           ನಮ್ಮ ರಂಗ ಪರಂಪರೆ ಕಾವ್ಯಾಭಿನಯಕ್ಕೆ ಸಂಬಂಧಿಸಿದ್ದು, ಕಾವ್ಯದೊಡನೆಯ ಸಾಹಚರ್ಯ ಅದರ ಅಭಿಯನದ ವ್ಯಾಕರಣವನ್ನು ರೂಪಿಸಿದೆ.  ಮಾತು-ಗೀತ ಇವೆರಡೂ ಒಡೆಯದ ಒಂದು ನಿದರ್ಿಷ್ಟ ಶ್ರುತಿಯಲ್ಲಿ ಇದನ್ನು ಮೇಳೈಸಿಕೊಂಡ ಅಭಿನಯ ಪರಂಪರೆ ನಮಗಿದೆ. ಮಾತು ಸಾಧಿಸಲಾರದ ಹಲವು ಭಾವಗಳನ್ನು ಗೀತ ಸಂವಹಿಸುತ್ತದೆ. ಕಂಪನಿ ನಾಟಕ ಇದನ್ನು ಚೆನ್ನಾಗಿ ನಿರ್ವಹಿಸಿಕೊಂಡು ಬಂದಿತು.ಆಧುನಿಕ ರಂಗಭೂಮಿಯ ಸಂಕಟ ಗದ್ಯಾಭಿನಯಕ್ಕೆ ಸಂಬಂಧಿಸಿದ್ದು. ಅವಾಸ್ತವ ಎಂದು ಮೊದಲ ಹಾಡನ್ನು ಪಕ್ಕಕ್ಕಿಟ್ಟ ಈ ರಂಗಭೂಮಿ ಅನಂತರ ಕಷ್ಟಪಟ್ಟು ಸಂಗೀತವನ್ನು ತೇಪೆ ಹಾಕಿಕೊಳ್ಳಲು ಆರಂಭಿಸಿದೆ. ಗದ್ಯಾಭಿನಯದ ವ್ಯಾಕರಣ ನಮಗಿನ್ನೂ ತಿಳಿದಿಲ್ಲ. ಹಾಗಾಗಿ ಸಂವಹನದ ಕೊರತೆ ನೀಗಿಸಲು ಅತಿಯಾದ ಪರಿಕರಗಳನ್ನು ರಂಗದಲ್ಲಿ ಇಡಿಕಿರಿಸಿದ್ದೇವೆ. ನಟನ ದೇಹಕ್ಕೆ ಅವಮಾನ ಮಾಡುವಷ್ಟು ಪರಿಕರಗಳನ್ನು ಆ ಸ್ಥಾನದಲ್ಲಿ  ತುಂಬಿದ್ದೇವೆ, ಇಲ್ಲವೇ ಅತಿಯಾದ ಶೈಲಿಕೃತ  ಅಭಿನಯಕ್ಕೆ ಮೊರೆಹೋಗುತ್ತಿದ್ದೇವೆ.
ಈ ಎಲ್ಲ ಹಿನ್ನೆಲೆಯಲ್ಲಿ ನಾವು ಆಧುನಿಕರು, ಹವ್ಯಾಸಿ ರಂಗ ಕಮರ್ಿಗಳು ನಾವು ಕಳೆದುಕೊಂಡದ್ದೇನು ಎಂಬುದನ್ನು ತಿರುಗಿ ನೋಡಲೇಬೇಕಿದೆ. ನಮ್ಮನ್ನು ನಾವು ಆಧುನಿಕಗೊಳಿಸಿಕೊಳ್ಳಲು ಇತಿಹಾಸದ ಏನೆಲ್ಲ ಅರಿವನ್ನು ಹೊರಗೆಸೆದಿದ್ದೇವೆ ಎಂಬುದನ್ನು ಮತ್ತೆ ಪರಿಶೀಲಿಸಬೇಕಿದೆ. ಅದಕ್ಕೇ ಈ ಅನ್ವಯ ಮಾರ್ಗದ ಶೋಧವನ್ನು ಪರಿಶೀಲಿಸಬೇಕಿದೆ. ಅದರೆ ಈ ದಾರಿ ಸುಲಭ ಸಾಧ್ಯವೇನಲ್ಲ. ಅನ್ವಯ ಮಾರ್ಗದ ಎರಡೂ ತುದಿಗಳ ತಾತ್ವಿಕತೆಯೇ ತೀರ ಭಿನ್ನವಾದುದು.

                ಮೂಲಭೂತವಾಗಿ ಕಂಪನಿ ನಾಟಕಗಳ ಹಿಂದಿನ ತಾತ್ವಿಕತೆ ಸದ್ಯಪರ ನಿವರ್ೃತಯೆ ಎಂಬ ಮಿಮಾಂಸೆಯದು. ಆಧುನಿಕ ರಂಗಭೂಮಿ `ಮರೆಯಬಾರದ ನೋವುಗಳನ್ನು ತಲ್ಲಣಗಳನ್ನು ಹಿಡಿದಿಡುವಂಥದ್ದು. ಇವೆರಡೂ ತಾತ್ವಿಕ ಮಾರ್ಗಗಳ ಅರಿವು ಈ ಅನ್ವಯ ಮಾರ್ಗದಲ್ಲಿ ನಡೆಯುವವನಿಗೆ ಸ್ಪಷ್ಟವಾಗಿ ಇರಬೇಕಾಗುತ್ತದೆ. ಇಲ್ಲವಾದರೆ ಶಿವರಾಮ ಕಾರಂತರು ಹೇಳುವ ಹಾಗೆ ರಂಗ ಪ್ರದರ್ಶನವೆಂಬುದು `ನಾವೆಲ್ಟಿ ಷೋ ಆಗಿ `ಜನತಾ ಬಜಾರ್ ಆಗಿ ಪರಿಣಮಿಸಿ ಬಿಡುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ನಡುವಿನ ಸಾಧ್ಯತೆಗಳನ್ನು ಶೋಧಿಸುವ ಪ್ರಯತ್ನ ನಡೆಯಬೇಕಿದೆ. ಕ್ರೀಡಾ ನೀಯಕ ವನ್ನು ಸ್ಥಾಪಿಸಿಕೊಳ್ಳುತ್ತ ನಮ್ಮ ಪರಂಪರೆಯಲ್ಲಿರುವ ಕಥನಗಳನ್ನು ಎತ್ತಿಕೊಳ್ಳಬೇಕಿದೆ. ಅಂದರೆ ನಾವು ಹವ್ಯಾಸಿ ರಂಗಭೂಮಿಯವರು ಮತ್ತೆ ಪರದೆ ಹಾಕಿಯೇ ನಾಟಕ ಮಾಡಬೇಕೆಂದಲ್ಲ .  ಆದರೆ ಅವರ ಪರದೆ ವ್ಯವಸ್ಥೆಯ ಹಿಂದಿನ ತಾತ್ವಿಕತೆಯನ್ನು, ಅದನ್ನು ಬಳಸಿಕೊಳ್ಳಬೇಕಾದ ಹೊಸ ಸಾಧ್ಯತೆಯನ್ನು ಗಮನಿಸಲೇಬೇಕಾಗಿದೆ.
ನಾವು ಇಂದು ಏಕಕಾಲದಲ್ಲಿ ಸಾಂಪ್ರದಾಯಿಕವೂ ಆಗುವ ಆಧುನಿಕವೂ ಆಗಬೇಕಾದ ಪಾಕವನ್ನು ಸಿದ್ಧಿಸಿಕೊಳ್ಳಬೇಕಿದೆ. ಇದನ್ನು ಸಾರಸಗಟಾಗಿ ಮಿಸಳಬಾಜಿ ಎಂದು ತಳ್ಳಿ ಹಾಕುವಂತಿಲ್ಲ. ನಾನು ನಿಮಗೆ ಈ ಕುರಿತು ಉದಾಹರಣೆಯೊಂದನ್ನು ನಿಡುತ್ತೇನೆ. ಯಕ್ಷಗಾನದಂತಹ ಸಂಪ್ರದಾಯಿಕ ಪ್ರಕಾರಗಳಲ್ಲಿ ಅತ್ಯುನ್ನತ ಸಿದ್ಧಿ ಸಾಧಿಸದ ನಟರೂ ಸಹ ರಂಗಭೂಮಿಯ ಅಂಶಗಳನ್ನು ಮೇಳೈಸಿಕೊಂಡು ಬೆಳೆದ ಉದಾಹರಣೆಗಳು ಇವು.  ರಾಷ್ಟ್ರಪ್ರಶಸ್ತಿ ಪಡೆದ ಶಿವರಾಮ ಹೆಗಡೆವರು ಶ್ರೀರಂಗರಂತವರ ಸಂಪರ್ಕ ಹೊಂದಿದ್ದರು. ಮಹಾಬಲ ಹೆಗಡೆಯವರು ಕೈಲಾಸಂ ಅವರು ಕಟ್ಟಿಕೊಟ್ಟ ಕೀಚಕನ್ನನ್ನು, ಕಂದಗಲ್ಲರ ರಕ್ತರಾತ್ರಿ ನಾಟಕದಲ್ಲಿ ನಿಮರ್ಿತಿಗೊಂಡ ಅಶ್ವತ್ಥಾಮನನ್ನು ಹಾಗೂ ಬಿ.ಎಂ.ಶ್ರೀಯವರ ಆಶ್ವತ್ಥಾಮ ನಾಟಕದ ಆಶ್ವತ್ಥಾಮ ನನ್ನು ಅನುಸರಿಸಿ ಆಯಾ ಪಾತ್ರಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಶಂಭು ಹೆಗಡೆಯವರು ಎನ್.ಎಸ್.ಡಿ.ಯಲ್ಲಿ ಪಡೆದ ಕೋರಿಯೋಗ್ರಪಿ ತರಬೇತಿ ಯಕ್ಷಗಾನ ರಂಗಕ್ಕೂ ಹೊಸಕಳೆ ತಂದಿತು.
ಕಂಪನಿ ನಾಟಕದ ಪ್ರಸಿದ್ಧ ಕಲಾವಿದರರಾಗಿದ್ದ ಏಕ್ಟರ್ ಜೋಶಿ ಮುಂದೆ ಯಕ್ಷಗಾನದಲ್ಲಿ ಪಾತ್ರವಹಿಸುತ್ತ ಅಲ್ಲಿಯೂ ಏಕ್ಟರ್ ಜೋಶಿಯಾಗಿಯೇ ಉಳಿದರು. ಮೂರೂರು ದೇವರು ಹೆಗಡೆ ಕಂಸನನ್ನು ಚಿತ್ರಿಸುವಾಗ ಅದ್ಭುತ ನಾಟಕೀಯ ತಂತ್ರಗಳನ್ನು ಬಳಸುತ್ತಿದ್ದರು. ಇವರೆಲ್ಲ ಯಕ್ಷಗಾನದ ಮೇರುನಟರೆನಿಸಿಕೊಂಡವರು ಎಂಬುದಕ್ಕಾಗಿಯೇ ಇಲ್ಲಿ ಉಲ್ಲೇಖಿಸಿದ್ದೇನೆ. ಪಾಸರ್ಿ ನಾಟಕದ ನಂಜುಂಡ ಎಂಬ ನಟ ಹನುಮಂತನ ಪಾತ್ರದಲ್ಲಿ ಅದ್ಭುತ ಹೆಸರುಗಳಿಸಿದ್ದ. ಆತನ ನಾಟಕಗಳು ಕರಾವಳಿಯಲ್ಲಿ ಪ್ರದರ್ಶನಗೊಂಡ ನಂತರ ಇಂದಿಗೂ ಯಕ್ಷಗಾನದ ಹನುಮಂತ ನಾಟಕದ ಹನುಮಂತನಾಗಿಯೇ ಜೀವ ಹಿಡಿದಿದ್ದಾನೆೆ ಎಂಬುದು ಕರಾವಳಿ ಯಕ್ಷಗಾನದ ಇತಿಹಾಸ ಬಲ್ಲವರಿಗೆಲ್ಲ ಗೊತ್ತು.
              ಈ ಉದಾಹರಣೆಗಳನ್ನು ನಾನು ಇಲ್ಲಿ ನೀಡುತ್ತಿರುವುದರ ಉದ್ದೇಶ ಈ ಒಳಗೊಳ್ಳುವಿಕೆ ಹೇಗೆ ಆಯಾ ಕಲಾಪ್ರಕಾರಗಳನ್ನು ಜನಪ್ರಿಯಗೊಳಿಸುತ್ತದೆ ಅಲ್ಲದೇ ಅವುಗಳ ವಿಸ್ತರಣೆಯ ಅಂಗವೂ ಆಗಿ ಪರಿಣಮಿಸುತ್ತದೆ ಎಂಬುದನ್ನು ಸೂಚಿಸಲು ಮಾತ್ರ.                                                              
                                                                                                                 -ಶ್ರೀಪಾದ ಭಟ್ಟ್

ಯಕ್ಷಗಾನದ ಜಾನಪದ ನೆಲೆ- ಶ್ರೀಪಾದ ಭಟ್

   ಯಕ್ಷಗಾನದ ಜಾನಪದ ನೆಲೆ- ಶ್ರೀಪಾದ ಭಟ್  
ನಾನು ಆಧುನಿಕ ರಂಗಭೂಮಿಯ ಒಬ್ಬ ವಿದ್ಯಾರ್ಥಿ. ನನ್ನ ಆಧುನಿಕ ರಂಗಭೂಮಿಯ ಪ್ರಯೋಗವನ್ನು ರೂಪಿಸಿರುವುದು ನಾನು ಕಂಡುಂಡು ಬಂದ ಯಕ್ಷಗಾನದ ಅನುಭವ. ಈ ಯಕ್ಷಗಾನವಲ್ಲದೆ ನಾನು ನೋಡಿ ಕಲಿತ ಆಡಿ ಕಲಿತ ಸುಗ್ಗಿ, ಹೂವಿನ ಮಕ್ಕಳ ಕುಣಿತ, ಹಗಣಗಳೇ ನನ್ನ ಇಂದಿನ ರಂಗಭೂಮಿಯ ಕಾಯಕದ ಹಿಂದೆ ನಿಂತು ಇದರ ವಿನ್ಯಾಸವನ್ನು, ಲಯವನ್ನು ನಿಯಂತ್ರಿಸುತ್ತದೆ; ನಿದರ್ೇಶಿಸುತ್ತದೆ. ಈ ಮಾತುಗಳನ್ನು ಹೇಳಲು ಕಾರಣವಿದೆ.
         ಯಕ್ಷಗಾನದ ಜಾನಪದ ನೆಲೆಯನ್ನು ಕುರಿತು ಮಾತನಾಡ ಹೊರಟ ನನ್ನ ಚಿಂತನಾ ಕ್ರಮದ ರೂಪುರೇಷೆ ಈ ಸಂಗತಿಯನ್ನು ಆಧರಿಸಿದೆ. ಯಕ್ಷಗಾನದ ಅಂಗ ಅಂಗವನ್ನು ಛೇದಿಸಿ ಇದರಲ್ಲಿ ಜನಪದ ಯಾವುದು, ಶಾಸ್ತ್ರೀಯ ಯಾವುದು ಎಂದು ಗುರುತು ಹಚ್ಚಿ ಹಣೆಚೀಟಿ ಅಂಟಿಸುವುದು ಈ ನನ್ನ ಪ್ರಬಂಧದ ಉದ್ದೇಶವಲ್ಲ. ಯಕ್ಷಗಾನದ ಜಾನಪದ ನೆಲೆಯನ್ನು ಕಂಡುಕೊಳ್ಳುವ ತಾತ್ವಿಕ ಸಂಗತಿಯೆಡೆಗೆ ಮಾತ್ರ ನನ್ನ ಗಮನ. ಸವರ್ಾಂಗ ಸುಂದರವಾಗಿ ನಮ್ಮ ಮುಂದೆ ರೂಪಿತವಾಗಿ ನಿಂತಿರುವ ಯಕ್ಷಗಾನವನ್ನು ಅರ್ಥಯಿಸುವ ನೆಲೆಯಲ್ಲಿ ಇದೂ ಒಂದು ಕ್ರಮ ಎಂದು ನಾನಂದುಕೊಂಡಿದ್ದೇನೆ.
                                                     1
          ಆರಂಭದಲ್ಲಿ ನಾನು ಯಕ್ಷಗಾನದ ಜಾನಪದ ನೆಲೆಯ ಚಿಂತನೆಯಲ್ಲಿ ಎದುರಾಗುವ ಕೆಲವು ತೊಡಕುಗಳನ್ನು ಪ್ರಸ್ತಾಪಿಸಬಯಸುತ್ತೇನೆ.
            ಯಕ್ಷಗಾನದ ಜಾನಪದ ನೆಲೆಯನ್ನು ಕುರಿತು ಚಿಂತನೆ ನಡೆಸುವಾಗ ಎದುರಾಗುವ ಮುಖ್ಯ ಸಮಸ್ಯೆಯೇ ಪರಿಭಾಷೆಯದು. ಈ ಪರಿಭಾಷೆಯ ಗೊಂದಲಗಳು ಚಿಂತನೆಯ ಗಾಢತೆಯನ್ನು ನಿರ್ಲಕ್ಷಿಸಿ ಕೆಲವು ಸರಳೀಕರಿಸಿದ ತೀಮರ್ಾನಕ್ಕೆ ನಮ್ಮನ್ನು ಒಯ್ದು ಬಿಡುತ್ತವೆ. ಆಧುನಿಕ ವಿಮಶರ್ೆಯ ಅನೇಕ ಪರಿಭಾಷೆಗಳು ಯಕ್ಷಗಾನ ವಿಮಶರ್ೆಯ ದಾರಿ ತಪ್ಪಿಸಿದ್ದುಂಟು. ಈಗ ಯಕ್ಷಗಾನದ ಮಾತು ಬಂದಾಗಲೆಲ್ಲ ಶಾಸ್ತ್ರಿಯ ಥ ಜಾನಪದ, ಶಿಷ್ಟ ಥ ಪರಿಶಿಷ್ಟ, ಮಾರ್ಗ ಥ ದೇಸಿ, ದೇಶಿ ಥ ದೇಸಿ, ಬ್ರಾಹ್ಮಣ ಥ ಶೂದ್ರ ಎಂದೆಲ್ಲ ಆಗಿ ಬಿಡುತ್ತದೆ. ಜನಸಮುದಾಯದ ಕಲೆಯೊಂದನ್ನು ಹೀಗೆ ವಿಭಾಗಿಸಿ, ಖಂಡಿಸಿ ನೋಡುವುದು ಕಲೆಯ ವಿಮಶರ್ೆಯ ಮಟ್ಟಿಗಂತೂ ಬಹು ಅಪಾಯಕಾರಿ ಅಂಶವಾಗಿದೆ. (ಕಲೆಗೇನೋ ತೊಂದರೆಯಿಲ್ಲ ಬಿಡಿ ಅವು ಏನು ನಮ್ಮಂಥ ವಿಮರ್ಶಕರ ಅಪ್ಪಣೆ ಕೇಳಿ ವಿಕಾಸ ಹೊಂದುವುದಿಲ್ಲ.) ಈ ಪರಿಭಾಷೆಗಳು ಹುಟ್ಟಿಕೊಂಡ ಸಂದರ್ಭ, ಕಾಲ ಇವುಗಳನ್ನು ಅಥರ್ೈಸದೇ ಸಾರಾಸಗಟಾಗಿ ಎಲ್ಲ ದೇಶಕಾಲ ಸಂಸ್ಕೃತಿಯ ಪರಿವೇಷಕ್ಕೆ ಅನ್ವಯ ಮಾಡುವಾಗ ಗೊಂದಲಗಳು ಏಳುವುದು ಸಹಜ. ಈಗ ಯಕ್ಷಗಾನವನ್ನೇ ನೋಡಿ. ಯಕ್ಷಗಾನ ಇವುಗಳಲ್ಲಿ ಯಾವುದು? ಹಾಗೆ ನೋಡಿದರೆ ಯಾವುದೂ ಇಲ್ಲ ಅಥವಾ ಎಲ್ಲವೂ ಹೌದು. ಮುಖ್ಯವಾಗಿ ಅದು ಆಟ. ಆಟ ಕಟ್ಟುವುದು ಬದುಕು ಕಟ್ಟುವುದರೊಂದಿಗೆ ಬೆಳೆದು ಬಂದಿರುತ್ತದೆ. ಪ್ರಖ್ಯಾತ ನಾಟ್ಯ ಶಾಸ್ತ್ರಜ್ಞೆ ಪದ್ಮಾ ಸುಬ್ರಹ್ಮಣ್ಯಂ, ತೆರುಕುತ್ತಿನ ಬಗ್ಗೆ ಅಧ್ಯಯನ ಮಾಡುತ್ತ ಕೊನೆಗೊಂದು ಮಾತು ಹೇಳುತ್ತಾರೆ. ತೆರುಕುತ್ತು ಚಿ ಜಿಠಟಞ ಣಜಚಿಣಡಿಜ ತಿಣ ಛಿಟಚಿಛಿಚಿಟ ಛಚಿಜ (ಶಾಸ್ತ್ರಿ ತಳಹದಿಯ ಜಾನಪದ ರಂಗಭೂಮಿ). ಇದು ಜಾಣತನದ ಮಾತು ಅಲ್ಲ ಎಂತಾದರೆ ಬಹುಶಃ ತೆರಕುತ್ತು, ಯಕ್ಷಗಾನದಂತಹ ರಂಗಭೂಮಿಯ ಕುರಿತು ಹೀಗೆ ಮಾತನಾಡುವುದು ಅನಿವಾರ್ಯವೇನೊ?
               ಈ ಸಂದರ್ಭದಲ್ಲಿ ನನಗೆ ಖ್ಯಾತ ರಂಗತಜ್ಞ ಕೆ.ಎನ್. ಫಣಿಕ್ಕರ್ ನೆನಪಾಗುತ್ತಾರೆ. ಅವರು ಭಾಸನ ನಾಟಕಗಳಲ್ಲಿ ವಿಶೇಷ ಪರಿಣಿತಿ ಸಾಧಿಸಿದವರು. ಅವರು ಹೇಳುವ ಪ್ರಕಾರ ಭಾಸನ ನಾಟಕಗಳು ಸಂಸ್ಕೃತದಲ್ಲಿ ಇರುವುದರಿಂದ ಅದನ್ನು ಅಭಿಜಾತ ಎಂದು ಹೇಳಲಾಗದು. ಪರಿಕಲ್ಪನಾತ್ಮಕವಾಗಿ ಜಾನಪದ ಎನ್ನಬಹುದಾದ ಎಷ್ಟೋ ಅಂಶಗಳು ಆ ನಾಟಕಗಳಲ್ಲಿವೆ. ಹಾಗಾಗಿ ಅವರು ಅಭಿಜಾತ ಮತ್ತು ಜಾನಪದ ಎಂಬ ವಗರ್ಿಕರಣವನ್ನೇ ಒಪ್ಪುವುದಿಲ್ಲ. ಈ ಜಾಡನ್ನು ಹಿಡಿದು ಕೆಲವರು ಯಕ್ಷಗಾನವನ್ನು ಅರೆಶಾಸ್ತ್ರೀಯ ಎಂದರು. ಭರತನ ನಾಟ್ಯ ಶಾಸ್ತ್ರವನ್ನು ಕೈಯಲ್ಲಿ ಹಿಡಿದು ಹುಟ್ಟಿ ಬಂದವರಿಗೆ ಕೋಪ ಬಂದು ನಾಟ್ಯಶಾಸ್ತ್ರದ ಅಕ್ಷರ ಅಕ್ಷರಗಳಲ್ಲೂ ಯಕ್ಷಗಾನವನ್ನು ತುರುಕಿ ಯಕ್ಷಗಾನ ಈ ಕಾರಣಕ್ಕೆ ಶಾಸ್ತ್ರೀಯ ಎನ್ನಬೇಕು ಎಂದು ಪಟ್ಟು ಹಿಡಿದರು. ಹೀಗೆ ಯಕ್ಷಗಾನ ಕುರಿತ ಚಿಂತನೆ ವಾದಗಳ ಆಖಾಡವಾಗಿ ಮಾತ್ರ ಬೆಳೆಯುತ್ತಿದೆ.
                 ಯಕ್ಷಗಾನದ ಜಾನಪದ ನೆಲೆಯನ್ನು ಗುರುತಿಸುವಾಗ ಇನ್ನೊಂದು ಅಪಾಯ ತಲೆದೋರುತ್ತದೆ. ಅದು ಪ್ರಾದೇಶಿಕ ಸ್ವರೂಪಕ್ಕೆ ಸಂಬಂಧಿಸಿದ್ದು. ಯಕ್ಷಗಾನದ ದೇಸಿ ಸ್ವರೂಪವನ್ನು ಅರಸುತ್ತ ಆಯಾ ಪ್ರದೇಶದ ಪ್ರಾದೇಶಿಕ ಕಲೆಯಲ್ಲಿಯ ಹಾಗೂ ಯಕ್ಷಗಾನದಲ್ಲಿಯ ಅಂಶಗಳನ್ನು ಸಮಾನ್ಯೀಕರಿಸಿ ಯಕ್ಷಗಾನ ಇದೇ ಪ್ರದೇಶದಿಂದ ಹುಟ್ಟಿತು ಎಂಬ ಪ್ರಾದೇಶಿಕ ದುರಭಿಮಾನವನ್ನು ಅನೇಕ ವಿದ್ವಾಂಸರು ಪ್ರದರ್ಸಿಶಿಸಿದ್ದುಂಟು.
             ಜಗತ್ತಿನಾದ್ಯಂತ ಮೂತರ್ಿಶಿಲ್ಪದಲ್ಲಿ ಹಲವಾರು ಸಮಾನ ಅಂಶಗಳು ಕಂಡುಬರುತ್ತವೆ. ಇಂಗ್ಲೆಂಡಿನ ಕೋಗಿಲೆಯೂ ಕುಕ್ಕೂ ಎನ್ನುತ್ತದೆ. ಭಾರತದ ಕೋಗಿಲೆಯೂ ಹಾಗೇ. ಗುಡುಗು ಮಿಂಚು ಬಂದರೆ ಹೆದರುವುದು, ಅದನ್ನು ದೈವತ್ವಕ್ಕೆ ಏರಿಸುವುದು ಇವು ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಇವೆ. ನೃತ್ಯ ನಾಟಕಗಳು ಹಾಗೆಯೇ. ಇವು ಮೂಲಭೂತವಾಗಿ ಮನುಷ್ಯನ ಚಲನವಲನಕ್ಕೆ ಸಂಬಂಧಿಸಿದ್ದು. ಇವುಗಳ ಮೂಲಕ ನಾವು ಮಾನವನ ವರ್ತನೆಗಳನ್ನು ಪ್ರದರ್ಸುಶಿಸುತ್ತೇವೆ. ಜಗತ್ತಿನ ಎಲ್ಲ ನೃತ್ಯಗಳನ್ನು ತೆಗೆದುಕೊಂಡರೂ ಸಾಹಿತ್ಯವನ್ನು, ಶಿಲ್ಪವನ್ನು ತೆಗೆದುಕೊಂಡರೂ ಕೆಲವು ಛಿಠಟಟಠಟಿ ಅಂಶಗಳನ್ನು ಹುಡುಕುವುದಕ್ಕೆ ಸಾಧ್ಯ. ಇಲ್ಲಿಯ ಲಕ್ಷಣವೇ ಎಲ್ಲ ಕಡೆಗೂ ಇದೆ ಎಂದೂ, ಎಲ್ಲವಕ್ಕೂ ಇದೇ ಮೂಲ ಎಂಬ ವಾದಕ್ಕೆ ಹೊರಡುವುದು ಪ್ರಾದೇಶಿಕ ದುರಭಿಮಾನವಾಗುತ್ತದೆ. ಕೆಲವೊಮ್ಮೆ ಇದು ಮೂಲಭೂತವಾದಕ್ಕೂ ಎಡೆಮಾಡಿಕೊಡುತ್ತದೆ. ಗಣಪತಿಯನ್ನು ಹೋಲುವ ಮೂತರ್ಿಶಿಲ್ಪವನ್ನು ಪಿತಾ ಮುಂತಾದ ಶಬ್ದಗಳನ್ನು ಜಗತ್ತಿನ ಬೇರೆ ಬೇರೆ ಕಡೆ ತೋರಿಸಿ ಪಿ. ಎನ್. ಓಕ್ ಎನ್ನುವ ಮಹಾನುಭಾವ ಜಗತ್ತು ಒಂದು ಕಾಲಕ್ಕೆ ಹಿಂದೂ ರಾಷ್ಟ್ರವಾಗಿತ್ತು ಎಂಬ ಹುಂಬ ಹೇಳಿಕೆ ನೀಡಿದ್ದ. ನಾವೂ ಹಾಗೇ ಹೊರಟರೆ ಜಾನಪದ ಮೂಲಕ ಹುಡುಕಾಟ ಮೂಲಭೂತವಾದದ ಕಡೆಗೆ ತಿರುಗುತ್ತದೆ.
                                                                       2
              ಯಾವುದೇ ಒಂದು ಕಲೆ ಅದು ಈಗ ಇರುವ ರೂಪದಲ್ಲಿಯೇ ಥಟ್ ಎಂದು ಆಕಾಶದಿಂದ ಉದುರಿ ಬೀಳುವುದಿಲ್ಲ. ಹೇಳಿ ಕೇಳಿ ಯಕ್ಷಗಾನವಂತೂ ಒಂದು ಅದ್ಭುತ ರಸಪಾಕ. ಅದನ್ನು ಪರಿಪೂರ್ಣ ರಂಗಭೂಮಿ ಎನ್ನುತ್ತೇವೆ. ಅಭಿನಯದ ಯಾವೆಲ್ಲ ಆಯಾಮಗಳಿದ್ದಾವೋ ಅವೆಲ್ಲವನ್ನೂ ಒಂದು ಸಮನಾದ ಹದದಲ್ಲಿ, ನಿದರ್ಿಷ್ಟ ಶ್ರುತಿಯಲ್ಲಿ ಔಚಿತ್ಯಪೂರ್ಣವಾಗಿ ಮಿಳಿತಗೊಂಡ ಒಂದು ಕಲೆ. ಅದರ ಬೇರುಗಳು ಹೀರಿಕೊಂಡ ಗೊಬ್ಬರದ ಕಂಪನಿಗಳನ್ನು ಹಾಗೇ ಲೇಬಲ್ ಹಚ್ಚಿ ನಿಲ್ಲಿಸಿ ಬಿಡುವುದು ಸಾಧ್ಯವೂ ಅಲ್ಲ; ಸಾಧುವೂ ಅಲ್ಲ. ಯಕ್ಷಗಾನದ ಶಿರೋಭೂಷಣವನ್ನೇ ನೋಡಿ ಅದು ತಲೆಯ ಮೇಲೆ ಇಟ್ಟ ಆಭರಣದಂತೆ ಕಾಣುವುದಿಲ್ಲ. ಬದಲಾಗಿ ತಲೆಯ ಜೊತೆಗೆ ಕಡೆದು ಕೆತ್ತಿ ರೂಪಿಸಿದ ಭಾಸ ಉಂಟಾಗುತ್ತದೆ. ವೇಷಭೂಷಣಗಳು ಒಂದು ಪಡಿಯಚ್ಚಿನಲ್ಲಿ ಹೊಯ್ದಂತೆ ತೋರುತ್ತದೆ. ಆಕೃತಿಯ ಸಾಂಗತ್ಯಕ್ಕೆ ಅತ್ಯುತ್ತಮ ನಿದರ್ಶನವಾಗಿ ಇದು ನಮ್ಮ ಮುಂದಿದೆ. ಇದರಂತೆ ಇದರ ಅಭಿನಯದ ಇನ್ನಿತರೆ ಸಂಗತಿಗಳು ಕೂಡಾ ಹಾಗೇ. ಆದರೆ ಇವೆಲ್ಲ ರಾತ್ರಿ ಬೆಳಗಾಗುವುದರೊಳಗೆ ಆದ ಸಿದ್ಧಿಯಲ್ಲ. ಈ ನೆಲದ ಬೆವರಿನೊಂದಿಗೆ ಬದುಕಿ ಬಂದಿದ್ದು. ಹೀಗಾಗಿ ಇದನ್ನು ರೂಪಿಸಿದ ಅಂತಃಸತ್ವವನ್ನು ಗುರುತಿಸುವುದು ಇಂತಹ ಚಿಂತನೆಗಳ ತಾತ್ವಿಕ ಉದ್ದೇಶ ಎಂದು ನಾನಂದುಕೊಂಡಿದ್ದೇನೆ.
                                                 3
            ಯಕ್ಷಗಾನದಲ್ಲಿ ಜಾನಪದ ನೆಲೆಯನ್ನು ಕುರಿತು ಈಗ ಚಿಂತಿಸುವ ಅಗತ್ಯವನ್ನೂ, ಅದರ ತಾತ್ವಿಕ ಜರೂರನ್ನೂ ಹೀಗೆ ಸ್ಪಷ್ಟಪಡಿಸಿಕೊಳ್ಳಬಹುದು.
            ನೋಡಿ ತಲೆಮಾರುಗಳ ಜ್ಞಾನವನ್ನು ನಾವು ಪುನಃ ಪುನಃ ನವೀಕರಿಸಿಕೊಳ್ಳುವುದು ಇಂದಿನ ನಮ್ಮ ಅಗತ್ಯವಾಗಿದೆ. ಮಾರುಕಟ್ಟೆಯ ರಾಜಕೀಯದಲ್ಲಿ ನಮ್ಮ ತಲೆಗಳು ಮಾರಿಹೋಗುತ್ತಿರುವುದರಿಂದ ನಾವು ತಲೆಮಾರುಗಳ ಅನುಭವವನ್ನು ಪುನಃ ಸೃಷ್ಟಿಸಿಕೊಳ್ಳಬೇಕಾಗುತ್ತದೆ.
            ಇಂದು ಜಾಗತೀಕರಣದ ಭರಾಟೆಯಲ್ಲಿ ಪರಿಕರಗಳೇ ಮನುಷ್ಯನನ್ನು ಆಳುತ್ತಿವೆ. ರಂಗಭೂಮಿಯನ್ನು ಕೂಡ ಈ ಪರಿಕರಗಳೇ ಆಳತೊಡಗಿದ್ದಾವೆ. ಜಾನಪದ ರಂಗಭೂಮಿ ಅಮೂರ್ತವನ್ನು ಮೂರ್ತವಾಗಿಯೂ, ಮೂರ್ತವನ್ನು ಅಮೂರ್ತವಾಗಿಯೂ ರೂಪಾಂತರಿಸುತ್ತದೆ. ಫಣಿಕ್ಕರ್ ಹೇಳುವ ಉದಾಹರಣೆ ಕೊಡುವದಾದರೆ ಅದು ಬೆಟ್ಟವನ್ನು ಶರೀರದಿಂದಲೂ, ಮನಸ್ಸಿನಿಂದಲೂ ಸೃಷ್ಟಿಸುತ್ತದೆ; ಆದರೆ ಅದೇ ಬೆಟ್ಟವಲ್ಲ. ಅಲ್ಲಿರುವುದು ಬೆಟ್ಟದತನ. ಕುದುರೆ ಸೃಷ್ಟಿಸುವುದಲ್ಲ; ಕುದುರೆತನವನ್ನು. ಇಲ್ಲಿ ಈ ಪುನರ್ಸೃಷ್ಟಿಯಲ್ಲಿ ಬೇಕಷ್ಟು ಠಿಚಿಛಿಜ ಗಳಿವೆ. ಕಲಾವಿದ, ಪ್ರೇಕ್ಷಕ ಅರಳಲು, ವಿಕಾಸ ಹೊಂದಲು ಸಾಕಷ್ಟು ಅವಕಾಶಗಳಿವೆ. ಸೃಷ್ಟ್ಯಾತ್ಮಕ ಅಂಶಗಳಿಗೆ ಅಗತ್ಯವಾದ ದನಿ, ಚಿತ್ರ ಎಲ್ಲ ಸೇರಿಸುತ್ತ ಹಿಗ್ಗಿಸಲು ಅವಕಾಶವಿದೆ. ಆದರೆ ನಾವಿಂದು ಯಕ್ಷಗಾನ ಪ್ರದರ್ಶನದಲ್ಲಿ ಸಿಂಹಾಸನವನ್ನೇ ರಂಗದ ಮೇಲಿಟ್ಟು ಈ ಹಿಗ್ಗಿಸುವ ಸಾಮಥ್ರ್ಯವನ್ನು ಕುಂದಿಸುತ್ತಿದ್ದೇವೆ. ರಥ, ಬೆಟ್ಟ, ಪಲ್ಲಂಗ, ಸಿಂಹಾಸನ ಏನೂ ಆಗಬಲ್ಲ ಸಾಮಥ್ರ್ಯದ ಜನಪದ ರಂಗಭೂಮಿಯ ಸತ್ವವನ್ನು ವಾಸ್ತವವಾದಿ ರಂಗಭೂಮಿಯ ಚೌಕಟ್ಟಿಗೆ ತಂದು ಹಾಳುಗೆಡವುತ್ತಿದ್ದೇವೆ.
ಅರ್ಥವನ್ನು ಕ್ರಿಯೆಯಾಗಿ, ಒಂದು ರಂಗಕ್ರಿಯೆಯಾಗಿ ಮಾಡಲು ಜನಪದ ರಂಗಭೂಮಿ ನಮಗೆ ನೆರವಾಗುತ್ತದೆ. ರಂಗಭೂಮಿ ಮೂಲತಃ ಒಂದು ಕತೆಗಾರಿಕೆ. ನಟ ಕತೆಯನ್ನು ಸಂವಹಿಸುತ್ತಿರುವಾಗ ಪಾತ್ರವಾಗಿ ಬದಲಾಗುತ್ತಾನೆ. ಸ್ಥಿತ್ಯಂತರ ಹೊಂದುತ್ತಾನೆ. ಸಂದರ್ಭವೊಂದನ್ನು ವಿಸ್ತರಿಸುವ ಪ್ರಕ್ರಿಯೆಯಲ್ಲಿ ಒಂದು ರೂಪದಿಂದ ಇನ್ನೊಂದಾಗಿ ಬದಲಾಗುತ್ತಾನೆ. ಪರಿಕರಗಳನ್ನು ಬದಲಾಯಿಸುತ್ತಾನೆ. ಇವೆಲ್ಲವೂ ಸೇರಿ ಒಂದು ಪರಿಣಾಮವನ್ನು ಉಂಟುಮಾಡುತ್ತದೆ. ರಂಗಭೂಮಿಯ ಈ ಮೂಲ ಸ್ವಭಾವವು ಜನಪದರ ದೈನಿಕ ಬದುಕಿನಲ್ಲಿ ಇಂದಿಗೂ ಕಂಡು ಬರುತ್ತದೆ.
                ನಮ್ಮ ತಲೆಮಾರಿನ ಜ್ಞಾನ ಪರಂಪರೆಯಲ್ಲಿ ಇಂತಹ ಅನೇಕ ಶ್ರೀಮಂತ ಸರಕುಗಳಿವೆ. ಅವನ್ನು ಯಥಾಯೋಗ್ಯವಾಗಿ ಬಳಸಲು, ಮರುಸೃಷ್ಟಿಸಲು, ಮುರಿದು ಕಟ್ಟಲು ನಮಗೆ ಇಂತಹ ಚಿಂತನೆಗಳು ಅಗತ್ಯ. ಹೀಗಾಗಿಯೇ ಯಕ್ಷಗಾನದಲ್ಲಿಯ ಜಾನಪದ ನೆಲೆಯನ್ನು ಅಥರ್ೈಸಲು ಪ್ರಯತ್ನಿಸಬೇಕಿದೆಯೇ ಹೊರತೂ ಯಕ್ಷಗಾನದಲ್ಲಿ ಶಾಸ್ತ್ರೀಯತೆ ಇಲ್ಲ ಎಂಬುದನ್ನು ಸಾಧಿಸಲು ಅಲ್ಲ.
                                                           4
        ಈಗ ಜನಪದ ರಂಗಭೂಮಿಯ ಕೆಲವು ಲಕ್ಷಣಗಳ ಜೊತೆ ಮತ್ತು ಸ್ಥಳೀಯವಾದ ಆಚರಣಾತ್ಮಕ ಕಲೆಗಳ ಕೆಲವು ಲಕ್ಷಣಗಳ ಜೊತೆ ಯಕ್ಷಗಾನವನ್ನು ಇಟ್ಟು ನೋಡೋಣ.
           ಜನಪದ ರಂಗಭೂಮಿಯ ಒಂದು ಪ್ರಮುಖವಾದ ಲಕ್ಷಣ ಶಿಥಿಲಬಂಧ ಮತ್ತು ಸ್ಥಿತಿಸ್ಥಾಪಕತ್ವ. ಇದು ಯಕ್ಷಗಾನದ ಪ್ರಧಾನ ಲಕ್ಷಣವೂ ಹೌದು. ಪ್ರಸಂಗವೊಂದರ ಸಂಕ್ಷೇಪ, ವಿಸ್ತಾರ ಎರಡೂ ಇಲ್ಲಿ ಔಚಿತ್ಯಪೂರ್ಣವಾಗಿರುತ್ತದೆ. ತಲೆಮಾರಿನಿಂದ ಬಂದ ಪ್ರದರ್ಶನ  ಜ್ಞಾನವನ್ನು ಕಲಾವಿದ ಮುರಿದು ಕಟ್ಟಲು ಇಲ್ಲಿ ಸಾಧ್ಯ. ಯಕ್ಷಗಾನದ ಕುಣಿತದ ಒಂದು ಉದಾಹರಣೆ ನೋಡೋಣ. ವೀರಾವೇಶದ ಕುಣಿತಕ್ಕೆ ಅಭಿವ್ಯಕ್ತಿ ಒದಗಿಸುವ ಮಂಡಿಕುಣಿತವನ್ನು ಶಂಭು ಹೆಗಡೆಯವರು ಭಕ್ತಿರಸ ಉದ್ದೀಪನೆಗೆ ತುಂಬ ಸುಂದರವಾಗಿ ಬಳಸುತ್ತಾರೆ. ಇದು ಕಲೆಯ ಅಪಚಾರವಾಗುವುದಿಲ್ಲ; ಬದಲಾಗಿ ವಿಸ್ತಾರವಾಗುತ್ತದೆ. ಯಕ್ಷಗಾನದಲ್ಲಿ ಇಂತಹ ವಿಕಾಸ, ವಿಸ್ತಾರಕ್ಕೆ ಬೇಕಷ್ಟು ಅವಕಾಶಗಳು ಇವೆ. ಇದು ತೆರೆದ ಮುಕ್ತಾಯವನ್ನು ಹೊಂದಿದೆ.
ಜನಪದ ಕಲೆ ಬಹುವಚನೀಯವಾದದ್ದು. ಯಕ್ಷಗಾನವೂ ಹಾಗೆ. ಜನಪದ ರಂಗಭೂಮಿಯ ಬಹುಮುಖ್ಯ ಅಂಶವೆಂದರೆ ಇಲ್ಲಿ ದೇವತೆಗಳೂ ಸಹ ಮಾನುಷ ಪರಿಸರದೊಂದಿಗೆ ಸಹಬಾಳ್ವೆ ಮಾಡುವುದು. ಮನುಷ್ಯ ಮತ್ತು ದೇವರ ಸಂಬಂಧ ಇಲ್ಲಿ ಈ ನೆಲದ ಮಣ್ಣಿನೊಂದಿಗೇ ಬದುಕುತ್ತದೆ. ಯಕ್ಷಗಾನದಲ್ಲಿಯ ಪುರಾಣ ಪಾತ್ರಗಳೂ ಹಾಗೆ. ಇಲ್ಲಿಯ ವಿದೂಷಕನಂತೂ ಅಟ್ಟಕ್ಕೇರಿದ ದೇವರುಗಳನ್ನು ತಟ್ಟನೆ ವಿಡಂಬಿಸುತ್ತಾನೆ. ಈ ಮಣ್ಣಿಗೆ ಇಳಿಸುತ್ತಾನೆ. ಸಾಮಾಜಿಕವಾದ ಬದುಕಿನೊಂದಿಗೆ ಮಿಳಿತಗೊಳಿಸುತ್ತಾನೆ.
               ಜನಪದ ರಂಗಭೂಮಿಗೆ ಕಾಲದ ಹಂಗಿಲ್ಲ. ಭೂತ, ವರ್ತಮಾನಗಳೆರಡನ್ನೂ ಅವು ಒಟ್ಟೊಟ್ಟಿಗೇ ಬೆಸೆಯುತ್ತದೆ. ಯಕ್ಷಗಾನದಲ್ಲಿ ನೋಡಿ ಭಾಗವತ ಇಂತೆಂದ ಎಂದ ಕೂಡಲೆ ಪಾತ್ರಧಾರಿ ನಾನು ದುಯರ್ೊಧನ ಹೇಳುತ್ತಿದ್ದೇನೆ ಅಂತ ಭೂತಕಾಲವನ್ನು ವರ್ತಮಾನಕ್ಕೆ ಹೊರಳಿಸಿ ಬಿಡುತ್ತಾನೆ. ಕಾಲಕ್ಕೆ ಮಾಡುವ ಕಾಯಕಲ್ಪವಿದು.
ಜನಪದ ರಂಗಭೂಮಿಯ ಇನ್ನೊಂದು ಶಕ್ತಿ ಅದರ ಶ್ರುತಿ ವ್ಯವಸ್ಥೆಯಲ್ಲಿದೆ. ಸ್ಥಾಯೀಯಾದ ಶ್ರುತಿಯಲ್ಲಿ ದೀರ್ಘವಾದ ಕಥಾನಕಗಳನ್ನು ನಿಭಾಯಿಸುವ, ಪ್ರೇಕ್ಷಕರನ್ನು ಆ ಶ್ರುತಿಯಲ್ಲಿ ಕರಗಿಸಿ ಬಿಡುವ ಶಕ್ತಿ ಅದರ ಸಂವಹನದಲ್ಲಿದೆ. ಯಕ್ಷಗಾನವಂತೂ ಶ್ರುತಿ ವ್ಯವಸ್ಥೆಯ ಒಂದು ಅದ್ಭುತ ರೂಪಕ. ದೇಹ-ಮನಸ್ಸು, ಮಾತು-ಗೀತ, ಕುಣಿತ-ಭಾವ, ನೋಟ-ಚಲನೆ, ಹಿಮ್ಮೇಳ-ಮುಮ್ಮೇಳ, ನಟ-ಪ್ರೇಕ್ಷಕ, ರೂಪ-ರೇಖೆ, ಲಯ-ಲಾಸ್ಯ, ಹೀಗೆ ಇದರ ಶ್ರುತಿ ಎಲ್ಲವನ್ನೂ ಒಂದಾಗಿಸುತ್ತದೆ.
ಜನಪದ ಕಲೆಗಳ ಸಂವಹನ ಮಾಧ್ಯಮ ಮುಖ್ಯವಾಗಿ ಮನುಷ್ಯನ ದೇಹ. ಯಕ್ಷಗಾನ ಮಾತನಾಡುವುದು ದೇಹ ಭಾಷೆಯ ಮೂಲಕವಾಗಿಯೇ. ದೇಹದ ಮೂಲಕ ಬುದ್ಧಿಯ ಕಡೆ ಅದರ ಚಲನೆ. ಯಕ್ಷಗಾನದ ಕಲಿಕೆ ಆರಂಭವಾಗುವುದು ವಾಚಕದಿಂದಲೋ, ಆಹಾರ್ಯದಿಂದಲೋ ಅಲ್ಲ. ಕುಣಿತಗಳ ಕಲಿಕೆಯಿಂದ. ಹೆಜ್ಜೆಗಳಿಂದ ದೇಹವನ್ನು ಮಣಿಸುವ, ಕುಣಿಸುವ ಅದು ಹೊರಡಿಸುವ ಧ್ವನಿ.
            ತರಂಗಗಳತ್ತ ಅದರ ಚಲನೆಯಿದೆ. ಆಧುನಿಕ ರಂಗಭೂಮಿ ವಿಚಾರದ ಮೂಲಕ ದೇಹದತ್ತ ಪ್ರಮಾಣ ಬೆಳೆಸಿದರೆ. ಯಕ್ಷಗಾನ ದೇಹದ ಮೂಲಕ ವಿಚಾರದತ್ತ ಸಾಗುತ್ತದೆ. ದೇಹ ಕಲಿಸಿದ ಮಾತನ್ನು ಬುದ್ಧಿ ಆಡುತ್ತದೆ. ದೇಹ ಶ್ರುತಿಗೊಂಡಾಗ ಮಾತೂ ಶ್ರುತಿಗೊಳ್ಳುತ್ತದೆ.
             ಅಟಚಿಛಿ ಎನ್ನಬಹುದಾದ ಕಲೆಯಲ್ಲಿ ಇರುವಂತೆ ಯಕ್ಷಗಾನದ ಮುದ್ರೆಗಳು ಅಕ್ಷರ ಅಕ್ಷರಗಳನ್ನು ವಿವರಿಸುವ ಉದ್ದೇಶ ಹೊಂದಿರುವುದಿಲ್ಲ. ಕೆಲವು ಸಾಮಾನ್ಯ ಬಹುಪರಿಚಿತ ಸಂಕೇತಗಳನ್ನು ಬಿಟ್ಟರೆ ಇವು ಪಾತ್ರಾಭಿನಯಕ್ಕೆ ಆ ಕ್ಷಣದಲ್ಲಿ ಒದಗುವ, ರೂಪುಗೊಳ್ಳುವ ದೈಹಿಕ ಅಭಿವ್ಯಕ್ತಿ ಆಗಿದೆ. ಇವು ಮನುಷ್ಯ ಕ್ರಿಯೆಯ ಅಸ್ಥಿಪಂಜರದ ರೂಪಗಳು. ನಟನ ನಿದರ್ಿಷ್ಟ ಮನೋದೈಹಿಕ ಕ್ರಿಯೆಯ ಅಭಿವ್ಯಕ್ತಿ. ಪದಾಭಿನಯಕ್ಕೆ ಹೆಸರಾಗಿದ್ದ, ನಾಟ್ಯ ಶಾಸ್ತ್ರವನ್ನು ಅಭ್ಯಸಿಸಿದ್ದರು ಎಂದು ಹೇಳಲಾಗಿದ್ದ ದಿ| ಮೂಡ್ಕಣಿ ನಾರಾಯಣ ಹೆಗಡೆಯವರು ಬೇಗನೆ ತ್ವರಿತವಾಗಿ ಎಂಬುದನ್ನು ಕೈಯಲ್ಲಿ ಚಿಟಿಕೆ ಹೊಡೆಯುವ ರೀತಿಯಲ್ಲಿ ಮುದ್ರೆಯ ಮೂಲಕ ತೋರಿಸುತ್ತಿದ್ದರು ಎಂಬ ಉಲ್ಲೇಖವು ದಾಖಲಾಗಿದೆ. ಶಂಭು ಹೆಗಡೆಯವರು ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಮುದ್ರೆಗಳನ್ನು ಬಳಸಬಹುದು ಎನ್ನುತ್ತಾರೆ. ಉದಾ: ವಿವಾಹ ಎಂಬುದನ್ನು ಪಾಣಿಗ್ರಹಣ, ಮಾಲಾರ್ಪಣೆ, ಕಂಠಸೂತ್ರ ಬಂಧನ ಮೊದಲಾದ ಅನೇಕ ಬಗೆಯಲ್ಲಿ ಕಾಣಿಸಬಹುದು ಎನ್ನುತ್ತಾರೆ.
ಆಧುನಿಕ ರಂಗಭೂಮಿ ನಿಶ್ಚಿತ ವರ್ಗದ ಪ್ರೇಕ್ಷಕರನ್ನು ಉದ್ದೇಶಿಸಿದ್ದು. ಆದರೆ ಜನಪದ ರಂಗಭೂಮಿ ಎಲ್ಲ ವರ್ಗದ, ಎಲ್ಲ ವಯೋಮಾನದ ಪ್ರೇಕ್ಷಕರನ್ನು ಒಳಗೊಳ್ಳುತ್ತದೆ. ಉದಾ: ಆಧುನಿಕ ರಂಗಭೂಮಿಯಲ್ಲಿ ಮಕ್ಕಳನ್ನೇ ಪ್ರೇಕ್ಷಕರನ್ನಾಗಿ ಉಳ್ಳ ಮಕ್ಕಳ ರಂಗಭೂಮಿ ಇದ್ದ ಹಾಗೆ ಯಕ್ಷಗಾನದಲ್ಲಿ ಇಲ್ಲ. ಅಲ್ಲದೇ ಪ್ರೇಕ್ಷಕರನ್ನು ಉದ್ದೇಶಿಸಿ ಅದನ್ನು ಲಂಬಿಸಲು, ಸಂಕ್ಷೇಪಗೊಳಿಸಲು ಸಾಧ್ಯ. ಅದಕ್ಕೆ ಸ್ಥಿತಿಸ್ಥಾಪಕತ್ವ ಗುಣ ಇದೆ. ಆಧುನಿಕ ರಂಗಭೂಮಿಗೆ ಆ ಶಕ್ತಿ ಇಲ್ಲ. ಇವೆಲ್ಲವನ್ನು ಯಕ್ಷಗಾನಕ್ಕೆ ಅನ್ವಯಿಸಿ ನೋಡಲು ಸಾಧ್ಯ.
                  ಜನಪದ ರಂಗಭೂಮಿಯಲ್ಲಿ ಅನೇಕ ಪಠ್ಯಗಳಿರುತ್ತವೆ. ಪ್ರತಿ ಪ್ರದರ್ಶನವೂ ಒಂದೊಂದು ಪಠ್ಯವೇ ಆಗಿಬಿಡುತ್ತದೆ. ಪಂಜುಲರ್ಿ ಭೂತ ತುಳುವಿನಲ್ಲಿ ಕಾಸರಗೋಡಿನ ಭೂತಕ್ಕಿಂತ ಬೇರೆ. ಎರಡೂ ಪಂಜುಲರ್ಿಯೇ ಆದರೂ ಪಠ್ಯ ಬೇರೆ. ಜಾನಪದದಲ್ಲಿ ಕಾಲ ದೇಶ ಸಂದರ್ಭಕ್ಕೆ ಅನುಗುಣವಾಗಿ ಪ್ರದರ್ಶನ ಪಠ್ಯ ಬೇರೆ ಬೇರೆ. ಯಕ್ಷಗಾನಕ್ಕಂತೂ ಈ ಹೇಳಿಕೆ ಹೇಳಿ ಮಾಡಿಸಿದ್ದು. ಒಂದೇ ಪ್ರಸಂಗವನ್ನು ಬೇರೆ ಬೇರೆ ನಟರು ಒಂದೇ ದಿನ ಪ್ರಯೋಗಿಸಿದರೂ ಪ್ರತಿ ನಟನಿಗನುಗುಣವಾಗಿ ಪ್ರಯೋಗ ಬೇರೆಯೇ ಆಗಿರುತ್ತದೆ. ಮಾತ್ರವಲ್ಲ ಪ್ರತಿ ಪ್ರಯೋಗದಲ್ಲೂ ನಟ ಪಾತ್ರಗಳನ್ನು ಬೇರೆ ಬೇರೆಯಾಗಿಯೇ ದಶರ್ಿಸುತ್ತಾನೆ.
                                                   5
         ವರ್ತಮಾನದಲ್ಲಂತೂ ಯಕ್ಷಗಾನ ಕರಾವಳಿಯ ಮುಖ್ಯ ಭಾಷೆಯೇ ಆಗಿದೆ. ಈ ನೆಲದ ಕಲೆ ಮತ್ತು ಪರಿಸರವನ್ನು ಹಿನ್ನೆಲೆಯಲ್ಲಿಟ್ಟು ಯಕ್ಷಗಾನವನ್ನು ನೋಡೋಣ.
            ಕರಾವಳಿಯ ಜನಪದ ಕುಣಿತದಲ್ಲಿ ಸೊಂಟ, ಕಾಲುಗಳು ಮತ್ತು ಪಾದಗಳು ಹೆಚ್ಚು ಪಾಲ್ಗೊಳ್ಳುತ್ತವೆ. ಕರಾವಳಿಯ ತೀರಾ ಮೆತ್ತಗೂ ಅಲ್ಲದ, ಬಿರುಸೂ ಅಲ್ಲದ ಮರಳು ಮಿಶ್ರಿತ ಕೆಂಪು ಮಣ್ಣು ನೆಲವನ್ನು ಬಡಿದು ಜಿಗಿಯುವ, ತೀವ್ರವಾಗಿ ಚಲಿಸುವ ಪಾದಗತಿಗಳಿಗೆ ತುಂಬ ಅನುಕೂಲಕರ. ಈ ಹಿನ್ನೆಲೆಯಲ್ಲಿ ಯಕ್ಷಗಾನವನ್ನು ನೋಡಬಹುದು. ಇಲ್ಲಿಯೂ ಎದೆ ಭಾಗಕ್ಕಿಂತ ಸೊಂಟ ಮತ್ತು ಕಾಲುಗಳು, ಪಾದಗಳು ಹೆಚ್ಚಾಗಿ ಪಾಲ್ಗೊಳ್ಳುತ್ತವೆ. ಅದರಲ್ಲೂ ಇಲ್ಲಿ ಹೆಜ್ಜೆಗಳೇ ಮಾತನಾಡುತ್ತವೆ. ಹಸ್ತ ಮತ್ತು ಮುಖಮುದ್ರೆಯಿಂದ ಏನ ಹೇಳಬಯಸುತ್ತೀರೋ ಅದನ್ನು ಇನ್ನಷ್ಟು ಸುಂದರಗೊಳಿಸಿ ಆ ಅರ್ಥಗಳನ್ನು ಹೆಜ್ಜೆಯೇ ಹೇಳುತ್ತದೆ. ಯಕ್ಷಗಾನ ಬಲ್ಲವರಿಗೆ ಗೊತ್ತು ಹೆಜ್ಜೆಯ ಮೇಲೆ ಹಾಕುವ ಭಾರ ಸಹ ಪಾತ್ರದ ಸ್ವಭಾವಕ್ಕೆ ಅನುಸಾರವಾಗಿ ಬೇರೆ ಬೇರೆ ಆಗಿರುತ್ತದೆ. ಉತ್ತಮ ನಟನನ್ನು ಹೊಗಳುವಾಗ `ಅವನ ಕಾಲಾಟ ಚೆನ್ನಾಗಿದೆ ಎನ್ನುವುದುಂಟು.
               ಇನ್ನೂ ಮೂಲಕ್ಕೆ ಹೋದರೆ ಯಕ್ಷಗಾನದಲ್ಲಿಯ ಬಣ್ಣಗಾರಿಕೆ ಇಲ್ಲಿಯ ಮುಖವಾಡ ಕುಣಿತದಂತೆ ಸ್ಥಾಯೀ ಭಾವವನ್ನು ಪ್ರದಶರ್ಿಸುತ್ತದೆ. ಬಹಳ ಹಿಂದೆ ಭಾಗವತರೂ ಸಹ ಪಾತ್ರಧಾರಿಗಳೊಡನೆ ಮುಂದಕ್ಕೆ ಹಿಂದಕ್ಕೆ ಚಲಿಸುತ್ತಿದ್ದರು. (ಜೋಗಿಯರ ಆಟದಂತೆ) ದೈನಂದಿನ ಸೀರೆಗಳನ್ನೇ ಹಿಂದೆ ಕಸೆಯಾಗಿಸಿದ್ದರು. ಪಗಡೆಗೆ ಬಟ್ಟೆಯ ಬದಲು ಹೂವು ಸುತ್ತುತ್ತಿದ್ದರು. (ಅಗೇರರ ಯಕ್ಷಗಾನದಲ್ಲಿ ಹೂವಿನ ಪಗಡೆಗಳಿದ್ದ ಬಗ್ಗೆ ಉಲ್ಲೇಖಗಳಿವೆ.) ಇದರ ಹಾಡುಗಳಲ್ಲಿ ತ್ರಿಪದಿಗಳು, ಜೋಗುಳಗಳು, ಸೋಬಾನೆಗಳು, ಭಜನೆಗಳು ಪ್ರಧಾನ ಮಟ್ಟುಗಳಾಗಿದ್ದವು. ಮೃದಂಗಗಳು ಮಣ್ಣಿನದಾಗಿದ್ದವು ಎನ್ನಲಾಗಿದೆ. ಮೃದಂಗ ಶಬ್ದದ ಅರ್ಥವೂ ಮಣ್ಣಿನಿಂದ ಮಾಡಿದ ವಾದ್ಯ ಎಂದೇ ಆಗುತ್ತದೆ. (ಹಾಲಕ್ಕಿ ಒಕ್ಕಲಿಗರ ಗುಮಟೆ ಎಂಬ ವಾದ್ಯವು ಇಂದಿಗೂ ಮಣ್ಣಿನಿಂದ ಮಾಡಿದವೇ ಆಗಿದೆ.)
            ಹೀಗೆ ಇಲ್ಲಿಯ ಅನೇಕ ಜನಪದ ಕಲೆಗಳು, ಆಚರಣೆಯ ಅಂಶಗಳು, ಸ್ಥಳೀಯ ಕಲೆಯ ಮಾದರಿಗಳು ಯಕ್ಷಗಾನದಲ್ಲಿ ಛದ್ಮವೇಷಧಾರಿಗಳಾಗಿವೆ. ಇದರಲ್ಲಿ ನಾಗನೃತ್ಯವಿದೆ: ಭೂತದ ಕೋಲವಿದೆ; ಹೂವಿನ ಮಕ್ಕಳ ಅಲಂಕರಣವಿದೆ; ಸುಗ್ಗಿ ಕುಣಿತದಲ್ಲಿಯ ಲಾಲಿ ಎಂಬ ಪ್ರಭೇದವಿದೆ; ಕೀರ್ತನೆಯಿದೆ; ಜನಪದ ಕಲೆಯ ಮೂಲವರ್ಣಗಳಾದ ಕೆಂಪು, ಹಳದಿಯ ಪ್ರಾಧಾನ್ಯವಿದೆ.
           ಇನ್ನೂ ಆಳದಲ್ಲಿ ಯಕ್ಷಗಾನದ ಒಟ್ಟೂ ಸಂವಹನೆಯಲ್ಲಿ ಇಲ್ಲಿಯ ಕಾಡಿದೆ, ಕಡಲಿದೆ. ಆರಾಧನಾ ರಂಗಭೂಮಿಯೊಂದು ಮನರಂಜನಾ ಉದ್ಯಮವಾಗಿ ಬೆಳೆದು ಬರುವ ಸಂದರ್ಭದಲ್ಲಿ ಅದು ತನ್ನ ಪ್ರದರ್ಶನೀಯತೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಮೂಲದ್ರವ್ಯವನ್ನು ರೂಪಾಂತರಿಸಿಕೊಂಡು ಹೊಸ ರಂಗಾಂಶಗಳಾಗಿ ಮೈದಾಳಿವೆ.
ಬಹುಶಃ ಇಷ್ಟು ಸಾಕು ಎನಿಸುತ್ತದೆ --ಶ್ರೀಪಾದ ಭಟ್

ಆರ ವಿ ಭಂಡಾರಿಯವ ನಾಟಕ ಸಾಹಿತ್ಯ - ಡಾ.ಶ್ರೀಪಾದ ಭಟ್ಟ್

ಆರ ವಿ ಭಂಡಾರಿಯವ  ನಾಟಕ ಸಾಹಿತ್ಯ - ಡಾ.ಶ್ರೀಪಾದ ಭಟ್ಟ್
ಮುಕರಿ ಮುತ್ತನಿಗೂ
ಪಾತು ಸಾತುವಿಗೂ
ಓದು ತಿಳಿಯಬೇಕು.
ಡಾ. ಆರ್.ವಿ.ಯವರು ಬರೆದ ಧ್ರುವ ಚರಿತ್ರೆ ನಾಟಕದ ಮೇಳ ಗೀತೆ ಇದು. ಸಮಾಜದ ಅಂಚಿನಲ್ಲಿರುವವರಲ್ಲಿ ಅರಿವು ಮೂಡಿಸುವ, ಸುತ್ತಣ ಬದುಕನ್ನು ಸಹ್ಯಗೊಳಿಸುವ ಆಶಯವನ್ನು ಈ ಹಾಡು ಹೊಂದಿದೆ.

ನಾಟಕ ಧ್ರುವ ಚರಿತ್ರೆಯೇ ಬೇಕಾದರೆ ಆಗಲಿ ಆರ್.ವಿ.ಯವರ ಗಮನ ಇರುವುದು ಚರಿತ್ರೆಯಲ್ಲಿ ನೆಮ್ಮದಿ ಬದುಕನ್ನು ಕಳೆದುಕೊಂಡ ಜನರಿಗೆ ಅರಿವು ಮೂಡಿಸುವುದು; ಬದುಕು ಕಟ್ಟಲು ನೆರವಾಗುವುದು. ಹಾಗೆ ನೋಡಿದರೆ ಅವರ ಈ ದೃಷ್ಟಿಕೋನ ಕೇವಲ ಅವರ ನಾಟಕಗಳಿಗೆ ಮಾತ್ರ ಸೀಮಿತವಲ್ಲ, ಅವರ ಇತರೆಲ್ಲ ಸಾಹಿತ್ಯ ನಿಮರ್ಿತಿಯ ಹಿಂದೆಯೂ ಇಂತದೊಂದು ಕನಸಿದೆ.

ಅವರ ಕಾಲದ ಇತರ ಸಾಹಿತಿಗಳಂತೆ ಆರ್.ವಿ. ಯವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿದ್ದಾರೆ. ಅದರಲ್ಲಿ ನಾಟಕ ಪ್ರಕಾರವೂ ಒಂದು. ಹಾಗಾಗಿ ಅವರ ನಾಟಕ ರಚನೆಯ ಹಿಂದೆ ಇಂತದೊಂದು ಪ್ರಕಾರ ನಿಷ್ಠೆಗಿಂತಲೂ ಹೆಚ್ಚಾಗಿ ಅವರ ತಾತ್ವಿಕ ನಿಷ್ಠೆಯೇ ಹೆಚ್ಚು ಕಾಣುವುದು ಸಹಜ. ಅದೇ ಕಾಲಕ್ಕೆ ಅವರ ನಾಟಕಗಳಲ್ಲಿ ಆ ಪ್ರಕಾರದಲ್ಲಿ ಗಟ್ಟಿಯಾದ ರಚನೆಗಳೂ ಇವೆ.

ಅವರ ನಾಟಕಗಳ ಅಧ್ಯಯನಕ್ಕೆ ಅವರ ಸೃಜನಶೀಲತೆಯ ಹಿಂದಿನ ತಾತ್ವಿಕತೆಯ ಅವಲೋಕನ ಪೂರಕ ಸಂಗತಿಯಾಗುವುದು ಎಂದು ನಾನಂದುಕೊಂಡಿದ್ದೇನೆ.

ಆರ್.ವಿ.ಯವರ ಯಾವ ಸೃಜನಾತ್ಮಕತೆಯೂ ನಿರುದ್ದಿಶ್ಯವಾದುದಲ್ಲ. ಕೇವಲ ಆನಂದ ಅವರ ಯಾವ ಬಗೆಯ ಕೃತಿಗಳ ಉದ್ದೇಶವಾಗಿಯೂ ಕಾಣುವುದಿಲ್ಲ. ಸದ್ಯಪರ ನಿವರ್ೃತಯೇ ಎಂಬ ಮೀಮಾಂಸೆ ಅವರದಲ್ಲ. ಕಳೆದ ದಿನಗಳ ಯಾತನೆ ಮತ್ತು ನಲಿವು ಅವರ ಸೃಷ್ಟಿ ಕ್ರಿಯೆಯ ಹಿಂದೆ ನಿಂತಿರುವುದನ್ನು ನಾವು ಕಾಣಲು ಸಾಧ್ಯ. ವರ್ತಮಾನದಲ್ಲಿ ನೋವುಣ್ಣುತ್ತಿರುವ ಜನಾಂಗದ ಸ್ಥಾನಪಲ್ಲಟಕ್ಕಾಗಿ ನಡೆಸುವ ಹೋರಾಟವನ್ನು ಅವರ ಬಹುತೇಕ ಕೃತಿಗಳಲ್ಲಿ ನಾವು ಗುರುತಿಸಬಹುದು. ಪರಿಧಿಯಲ್ಲಿರುವ ಸಾತು, ಪಾತು, ಮುಕ್ರಿ, ಮುತ್ತ ಇವರೆಲ್ಲ ಅವರ ಕೃತಿಗಳಲ್ಲಿ ಕೇಂದ್ರಕ್ಕೆ ಬರುತ್ತಾರೆ. ಅವರೆಲ್ಲರಿಗೆ `ಓದು ಕಲಿಸುವುದು ಅವರ ಇತರ ಕೃತಿಗಳಂತೆ ನಾಟಕ ರಚನೆಯ ಉದ್ದೇಶವೂ ಆಗಿದೆ.

ಉತ್ತರ ಕನ್ನಡದಲ್ಲಿ ಆಧುನಿಕ ರಂಗಭೂಮಿಯ ವ್ಯಾಕರಣವನ್ನು ಪರಿಚಯಿಸುವ ಮಹತ್ವದ ಕೆಲಸವನ್ನು ಅವರು ಮಾಡಿದ್ದಾರೆ. ಆಧುನಿಕತೆಗೆ ಕಿವಿ ಕಣ್ಣುಗಳನ್ನು ಎಚ್ಚರದಿಂದ ತೆರೆದಿಟ್ಟುಕೊಂಡು ತಾನು ಕಂಡುಂಡಿದ್ದನ್ನು ತನ್ನ ಸುತ್ತಣ ಜನರಿಗೆ ಪರಿಚಯಿಸುವ ಪ್ರೀತಿಯ ಕಾಯಕ ಅವರದು. ಈ ಹಿನ್ನಲೆಯಲ್ಲಿ ಅವರ ನಾಟಕಗಳು ಉತ್ತರ ಕನ್ನಡದ ಆಧುನಿಕ ನಾಟಕದ ಇತಿಹಾಸದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಅವರು ಪ್ರೋಸೀನಿಯಂ ನಾಟಕ, ಅಸಂಗತ ನಾಟಕ, ಬೀದಿನಾಟಕ, ಮಕ್ಕಳ ನಾಟಕ ಹೀಗೆ ರಂಗಭೂಮಿಯ ಎಲ್ಲ ಆಯಾಮಗಳಲ್ಲೂ ಕೃತಿ ರಚನೆ ಮಾಡಿರುವುದಕ್ಕೆ ಇದೂ ಒಂದು ಕಾರಣವಾಗಿದೆ. ಕೆಲವು ಕೃತಿಗಳು ಈ ರಂಗ ವ್ಯಾಕರಣದ ಪರಿಚಯದ ಮಟ್ಟದಲ್ಲೇ ನಿಂತು ಐತಿಹಾಸಿಕ ದಾಖಲೆ ಮಾತ್ರವೇ ಆಗುಳಿದರೆ, ಅವರು ರಚಿಸಿದ ಮಕ್ಕಳ ನಾಟಕಗಳು ಭವಿಷ್ಯದ ಮಕ್ಕಳ ರಂಗಭೂಮಿಯಲ್ಲಿ ಗಟ್ಟಿಯಾಗಿ ನಿಲ್ಲುವ ರಚನೆಗಳಾಗಿವೆ. ಒಟ್ಟಾರೆ ಅವರ ಈ ಎಲ್ಲ ರಚನೆಗಳನ್ನು ಉತ್ತರ ಕನ್ನಡದ ರಂಗಭೂಮಿಯ ಅಧ್ಯಯನ ಮರೆಯುವಂತಿಲ್ಲ.

ಆರ್.ವಿ.ಯವರು ಸುಮಾರು 20 ಮಕ್ಕಳ ನಾಟಕಗಳನ್ನು, 10 ಬೀದಿನಾಟಕಗಳನ್ನು, ಒಂದು ಅಸಂಗತ ನಾಟಕವನ್ನು, 5 ದೊಡ್ಡವರ ಪ್ರ್ರೊಸೀನಿಯಂ ಚೌಕಟ್ಟಿನ ನಾಟಕಗಳನ್ನು ಬರೆದಿದ್ದಾರೆ. ಬಹುತೇಕವಾಗಿ ಈ ನಾಟಕಗಳು ಪರಿಸರ, ಸ್ವಾತಂತ್ರ್ಯ, ಸಾಕ್ಷರತೆ, ಆದರ್ಶ ನಾಯಕತ್ವ, ಕೋಮು ಸೌಹಾರ್ದತೆ, ರಾಜಕೀಯ ವಿಡಂಬನೆ, ವರ್ಣ ಮತ್ತು ವರ್ಗ ಸಂಘರ್ಷದ ನೆಲೆಗಳ ಕುರಿತಾಗಿ ಇದೆ.

ಅವರ ನಾಟಕಗಳಲ್ಲಿಂದ ಕೆಲವು ವೈಚಾರಿಕ ಆಕೃತಿಗಳನ್ನು ಈಗ ನೋಡೋಣ.
ಇತಿಹಾಸ ಮತ್ತು ಪುರಾಣಗಳ ಮರುವಾಖ್ಯಾನ ಅವರ ಬಹಳ ನಾಟಕಗಳಲ್ಲಿ ಕಂಡು ಬರುತ್ತವೆ. ಯಾನ, ಮಹಿಷಾಸುರ ಮದರ್ಿನಿ, ಧರ್ಮವ್ಯಾಧ ನಾಟಕಗಳಲ್ಲದೇ ಬೆಳಕು ಹಂಚಿದ ಬಾಲಕ ದಂತಹ ನಾಟಕದಲ್ಲಿ ಅದು ಢಾಳಾಗಿ ಕಾಣಿಸಿಕೊಳ್ಳುತ್ತದೆ.

ಅವರ ಮಹಿಷಾಸುರ ಮದರ್ಿನಿ ನಾಟಕದ ಸೂತ್ರಧಾರ ಹೀಗೆನ್ನುತ್ತಾನೆ. ಪುರಾಣ ಕಾಲದ ಕಥನವನ್ನು ಚರಿತ್ರೆ ಪೂರ್ವ ಸಾಹಿತ್ಯಾಂಶಗಳ ಮೂಲಕ ಪ್ರವೇಶಿಸಿ ಅದನ್ನೇ ಪ್ರತಿಸೃಷ್ಟಿಸುವುದು ಕವಿಯ ಕೆಲಸ. ಪುರಾಣದ ಹಿಂದಿನ ಸಾಮಾಜಿಕ ಅರ್ಥವನ್ನು ಹುಡುಕುವ ಯತ್ನವನ್ನು ಅವರ ಈ ಕೃತಿಯಲ್ಲಿ ಕಾಣಲು ಸಾಧ್ಯ. ಸತ್ಯಾಗ್ರಹ ಬೀದಿನಾಟಕದ ಸೂತ್ರದಾರ ಹೀಗೆನ್ನುತ್ತಾನೆ ಇತಿಹಾಸ ಇಲ್ಲದವರಿಗೆ ಭವಿಷ್ಯವು ಇಲ್ಲ. ಇತಿಹಾಸವನ್ನು ನೋಡುವ ಕಣ್ಣನ್ನು ಅವರಿಗೆ ಮಾಕ್ಸರ್್ವಾದ ನೀಡಿದೆ.
ಆ ಕಾಲದ ಘಟನೆಗಳ ವಿವರಗಳು ಅವರಿಗೆ ಹೊರ ಆವರಣ ಮಾತ್ರ. ಮುಖ್ಯವಾಗಿ ಅವರ ಗಮನ ಅದರ ತಿರುಳಿನ ಕಡೆಗೆ. `ಇಂತಲ್ಲಿ ಹೀಗೆ ನಡೆದಿರಬಹುದು. ಇಷ್ಟು ತಿಳಿದರಾಯಿತು. ಒಂದು ಸಲ ಕಥೆಯ ಸೆಳವಿಗೆ ಸಿಕ್ಕಿದಾಗ ಈ ಹೊರ ಆವರಣವೆಲ್ಲ ಮರೆತು ಹೋಗುತ್ತದೆ. ಎನ್ನುವುದು ಅವರ ನಿಲುವು.
ಬೆಳಕು ಅವರ ನಾಟಕಗಳಲ್ಲಿ ಪದೇ ಪದೇ ಮೂಡಿ ಬರುವ ಶಕ್ತ ಪ್ರತಿಮೆ. ಬೆಳಕಿನ ಕುರಿತಾದ ಅವರ ದಾಹವನ್ನು ಅವರು ಚಿತ್ರಿಸಿದ ಹಲವಾರು ಪಾತ್ರಗಳಲ್ಲಿ ನಾವು ಕಾಣಬಹುದಾಗಿದೆ. ಅವರ ಎರಡು ಪ್ರಮುಖ ಮಕ್ಕಳ ನಾಟಕಗಳ ಹೆಸರುಗಳು ಹೀಗಿವೆ. ಬೆಳಕಿನೆಡೆಗೆ ಮತ್ತು ಬೆಳಕು ಹಂಚಿದ ಬಾಲಕ.

ಆರ್.ವಿ.ಯವರಿಗೆ ಬುದ್ದ ಬಹಳವಾಗಿ ಕಾಡುತ್ತಾನೆ. ಪ್ರೀತಿ ಅಹಿಂಸೆ ಅರಿವು ಹಂಚುವ ಬುದ್ಧ ಅವರ ವ್ಯಕ್ತಿತ್ವದ ಒಂದು ಅಂಗವೇ ಆಗಿ ಬಿಟ್ಟಿದ್ದಾನೆ. ಅವರ ಹಲವಾರು ನಾಟಕಗಳಲ್ಲಿ ಬುದ್ಧ ಪ್ರತ್ಯಕ್ಷವಾಗಿಯೂ ಅಥವಾ ಪಾತ್ರಗಳ ಪ್ರತಿರೂಪವಾಗಿಯೂ ಕಾಣಿಸಿಕೊಳ್ಳುತ್ತಾನೆ. ಉದಾಹರಣೆಗೆ ಕೊಲ್ಲುವವರು, ಕಾಯುವವರು, ಬೆಳಕು ಹಂಚಿದ ಬಾಲಕ ಬೆಳಕಿನಡೆಗೆ - ಈ ಎಲ್ಲಾ ನಾಟಕಗಳಲ್ಲೂ ಬುದ್ಧ ಮತ್ತೆ ಮತ್ತೆ ಮೇಲೆದ್ದು ಬರುತ್ತಾನೆ. ಮನಃಪರಿವರ್ತನೆಗೆ, ವ್ಯಕ್ತಿತ್ವದ ಬೆಳವಣಿಗೆಗೆ ಮೂಲ ಕಾರಣನಾಗುತ್ತಾನೆ. ಕೊಲ್ಲುವವರು ಕಾಯುವವರು ನಾಟಕದ ಬುದ್ಧ ಕಾಜಾಣದ ಕೀಳರಿಮೆ ಹೋಗಲಾಡಿಸುತ್ತಾನೆ. ಜಿಂಕೆ, ನರಿ, ಮೊಲಗಳಿಗೆ ಅಭಯ ನೀಡುತ್ತಾನೆ. ಹುಲಿಗೆ ಹಿಂಸೆ ಬಿಡಲು ತಾಕೀತು ಮಾಡುತ್ತಾನೆ.

ಬೆಳಕು ಹಂಚಿದ ಬಾಲಕ ನಾಟಕದಲ್ಲಿ ಅಂಬೇಡ್ಕರ್ ಶಾಲಾ ವಾಷರ್ಿಕೋತ್ಸವದಲ್ಲಿ ಬುದ್ಧನ ಪಾತ್ರ ವಹಿಸುತ್ತಾನೆ. ಬುದ್ಧನ ಮಾತುಗಳನ್ನು ಹೇಳುತ್ತಾ ಹೇಳುತ್ತಾ ಕೊನೆಗೆ ಪಾತ್ರವನ್ನು ಮೀರಿ ತನ್ನ ವ್ಯಕ್ತಿತ್ವದ ಮಾತುಗಳನ್ನಾಡುತ್ತಾನೆ. ನಾಟಕದಲ್ಲಿ ನಡೆಯುವ ಈ ಘಟನೆ ಆರ್.ವಿ.ಯವರ ಹಲವಾರು ನಾಟಕಗಳಲ್ಲಿ ನಾಟಕದ ಬಂಧವನ್ನು ಕೆಲವೊಮ್ಮೆ ಮೀರಿ ವೈಚಾರಿಕತೆ ಚಚರ್ೆ ವಿಜೃಂಭಿಸುವದಕ್ಕೆ ಸಂಕೇತವಾಗಿಯೂ ಕಾಣುತ್ತದೆ.

ಜಾಗತೀಕರಣದ ಪ್ರಕ್ರಿಯೆಯನ್ನು ಅದರ ಅನಿಷ್ಠಗಳನ್ನು ಅವರ ಅನೇಕ ನಾಟಕಗಳು ಚಚರ್ೆಗೆ ಎತ್ತಿಕೊಳ್ಳುತ್ತದೆ. ಚಿನ್ನದ ಅಮಲಿನಲ್ಲಿ ಮನುಷ್ಯ ಪ್ರೀತಿ ಕಳೆದುಕೊಳ್ಳುತ್ತಿರುವ ಬಗ್ಗೆ ದಟ್ಟ ವಿಷಾದ ಅವರ ಹಲವಾರು ನಾಟಕಗಳಲ್ಲಿ ಕಂಡು ಬರುತ್ತದೆ. ಹಕ್ಕಿಗಳೂ ಬಲೆಯೂ ನಾಟಕದಲ್ಲಿ ಹಕ್ಕಿಗಳು, ಮನುಷ್ಯ ದುಡ್ಡು ಮಾಡುತ್ತಾ ಮಾಡುತ್ತಾ ಯುದ್ಧದ ಅಮಲಿನಲ್ಲಿ ಬೀಳುವುದರ ಕುರಿತು ಮಾತನಾಡುತ್ತದೆ. `ಪ್ರೀತಿಯ ಕಾಳು ನಾಟಕವು ಚಿನ್ನದ ಕಾಳು ತುಂಬಿಸಿಕೊಳ್ಳುವ ಸಲುವಾಗಿ ಪ್ರೀತಿಯ ಕಾಳನ್ನು ಹೊರ ಚೆಲ್ಲಿದುದರ ಕುರಿತು ಚಚರ್ಿಸುತ್ತದೆ. ಯಾನ ನಾಟಕದಲ್ಲಿ ಶಂಕು ಮತ್ತು ಕುಸುಮ ಎಂಬ ಇಬ್ಬರು ಪ್ರೇಮಿಗಳ ಪ್ರೇಮ ಚಿನ್ನದ ಕಾರಣದಿಂದ ಕೆಟ್ಟು ಹೋಗುತ್ತದೆ. ಶಂಕು ಹೇಳುತ್ತಾನೆ. ಚಿನ್ನ ಬೇಕು ಅಂದ್ರೆ ಹೊಡೆದಾಡುವುದೇನು ದೊಡ್ಡದಲ್ಲ ಬಿಡು ಕುಸುಮ ತಿರುಗಿ ಹೇಳುತ್ತಾಳೆ ಚಿನ್ನದ ಭಕ್ಷಕರಾದವರು ರಾಕ್ಷಸರಾಗುತ್ತಾರೆ ಸಾಮ್ರಾಜ್ಯಶಾಹಿಯ ಆಸೆ ಬಡುಕತನಕ್ಕೆ ಬುಡಕಟ್ಟು ಜನಾಂಗದ ಪ್ರೀತಿ ಕುಸಿಯುವುದರ ಕುರಿತು ಯಾನ ಬೆಳಕು ಚೆಲ್ಲುತ್ತದೆ. ರಾಮನ ಆಯನದ ಹಿಂದಿನ ರಾಜಕೀಯಕ್ಕೆ ಸುಗ್ರೀವ ಬಲಿಯಾಗುತ್ತಾನೆ. ಋಷ್ಯಮೂಕ ಪರ್ವತದಲ್ಲಿ ಚಿನ್ನದ ಹುಚ್ಚಿನಲ್ಲಿ ಕುಟುಂಬಗಳು ಛಿದ್ರವಾಗುತ್ತವೆ.
ಆರ್.ವಿ.ಯವರ ಮಕ್ಕಳ ನಾಟಕಗಳು ಮಕ್ಕಳ ರಂಗಭೂಮಿಯಲ್ಲೊಂದು ಸೂಕ್ತ ಮಧ್ಯ ಪ್ರವೇಶಿಕೆ ಎನಿಸುತ್ತದೆ. ಒಂದೆಡೆ ಮಕ್ಕಳ ರಂಗಭೂಮಿ ಇನ್ನೂ ಕಲ್ಪಕತೆ ಭ್ರಾಮಕ ಅಂಶ. ಸುಳ್ಳು ನೀತಿ, ಮನರಂಜನೆ ಇವಿಷ್ಟನ್ನೆ ಅವಲಂಬಿಸಿ ಬೆಳೆಯುತ್ತಿದ್ದರೆ ಇನ್ನೊಂದೆಡೆ ಶಿಕ್ಷಣದಲ್ಲಿ ರಂಗಭೂಮಿ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ರಂಗಭೂಮಿ ಕುರಿತ ಕನಿಷ್ಠ ಜ್ಞಾನವೂ ಇಲ್ಲದ ತೀರ ಜಾಳು ಜಾಳಾದ ಪ್ರಯೋಗಗಳಿವೆ. ಈ ಮಧ್ಯೆ ಪಾಠವೂ ಆಗುವ ನಾಟಕವೂ ಆಗ ಬೇಕಾದ ಗಂಭೀರ ಹೊಣೆಗಾರಿಕೆ, ಸಾಮಾಜಿಕ ಜವಾಬ್ದಾರಿ. ಮಕ್ಕಳ ಲೋಕ ಗ್ರಹಿಕೆಯ ಹಿನ್ನೆಲೆಯಲ್ಲಿ ಆರ್.ವಿ.ಯವರ ನಾಟಕ ಮಹತ್ವ ಪಡೆಯುತ್ತವೆ. ಅವರ ನಾನು ಗಾಂಧಿ ಆಗ್ತೇನೆ, ಬೆಳಕು ಹಂಚಿದ ಬಾಲಕ, ಬೆಳಕಿನೆಡೆಗೆ, ಪ್ರೀತಿಯ ಕಾಳು ನಾಟಕಗಳು ನಿಸ್ಸಂದೇಹವಾಗಿ ಕನ್ನಡದ ಮಕ್ಕಳ ನಾಟಕಗಳಲ್ಲಿಯೇ ಮೇಲ್ಪಂಕ್ತಿಯಲ್ಲಿವೆ.

ಮಕ್ಕಳ ರಂಗಭೂಮಿ ಎಂದರೆ ಹೀಗಿರಬೇಕು ಎಂದು ತಮ್ಮ ನಾಟಕದ ಮುನ್ನುಡಿಯಲ್ಲಿ ಆರ್.ವಿ. ಹೇಳುತ್ತಾರೆ. ಮಕ್ಕಳ ನಾಟಕ ಚಿಕ್ಕದಾಗಿರಬೇಕು ಸಂಭಾಷಣೆ ಚುರುಕಾಗಿರಬೇಕು. ನಟನೆಗೆ ಅನುಕೂಲವಾಗಿರಬೇಕು. ಹೆಚ್ಚು ಮಕ್ಕಳು ಭಾಗವಹಿಸುವಂತಿರಬೇಕು. ರಂಗ ರಚನೆಯಲ್ಲಿ ಸುಲಭ ತಾಂತ್ರಿಕ ಸೌಲಭ್ಯವಿರಬೇಕು. ಕತೆ ಇರಬೇಕು. ರಸಭಾವಗಳು ವಯಸ್ಸಿಗೆ ತಕ್ಕದ್ದಿರಬೇಕು ಕೊನೆಗೆ ನಾಟಕ ಶೈಕ್ಷಣಿಕವೂ ಇರಬೇಕು ಎಂಬುದು ಮುಖ್ಯ. ಅವರ ನಾಟಕಗಳು ಇವೆಲ್ಲ ಲಕ್ಷಣಗಳನ್ನು ಹೊಂದಿಯೂ ಅವನ್ನು ಮೀರಿ ಬೆಳೆದದ್ದೂ ಉಂಟು.

ಅವರ ನಾಟಕದಲ್ಲಿ ಮನುಷ್ಯನ ದೌರ್ಬಲ್ಯವನ್ನು ಮೀರಲು ನೆರವಾಗುವುದು. ಹಕ್ಕಿ ಮತ್ತು ಕನಸಿನ ರೂಪಕಗಳು. ಜತೆಗೆ ವಾಸ್ತವದ ದರಿದ್ರತೆಯನ್ನು ಮೀರಲು ಕನಸುಗಳು ನೆರವಾಗುತ್ತದೆ. ಈ ಕನಸುಗಳಾದರೋ ಆಗಸದಲ್ಲಿ ತೇಲುವ ಭ್ರಮೆಗಳಲ್ಲ ; ಮನಸ್ಸಿನಲ್ಲೇ ಮೊಳೆತು ಬದುಕುವಂತವು. ಹಕ್ಕಿಗಳು ಬಲೆಯು, ಕೊಲ್ಲುವವರೂ ಕಾಯುವವರೂ, ಬಣ್ಣದ ಹಕ್ಕಿ, ಬೆಳಕಿನೆಡೆಗೆ ಈ ಎಲ್ಲಾ ನಾಟಕಗಳಲ್ಲೂ ಈ ಅಂಶ ತುಂಬ ಸುಂದರವಾಗಿ ಮೂಡಿ ಬಂದಿದೆ.
ಇತ್ತೀಚೆಗೆ ಬಿಡುಗಡೆ ಆದ ಹೂವಿನೊಡನೆ ಮಾತುಕತೆ ಎನ್ನುವ ಮಕ್ಕಳ ಕಥಾ ಸಂಕಲನದಲ್ಲಿ ಪುಟ್ಟಿ ಕನಸಿನಲ್ಲಿ ಪುಟ್ಟಿ ಹೂವನ್ನು ಕೇಳುತ್ತಾಳೆ
ಬಿಂಬಿ ಯಾಕೆ ಬಂದಿತ್ತು?
ಮಕರಂದ ತಿನ್ನಲು
ನೀನು ಯಾಕೆ ಅವಕ್ಕೆಲ್ಲ ಮಕರಂದ ಕೊಡುತ್ತೀ?
ನಿಮ್ಮ ಮನೆಗೆ ಬಂದವರಿಗೆ ನೀವು ಕುಡಿಯಲು ನೀರು ಕೊಡುವದಿಲ್ಲವೆ?
ಓಹೋ ಹಾಗೋ? ಹೀಗೆ ಮನವನ್ನು ಉನ್ನತೀಕರಿಸಲು ಆರ್.ವಿ. ಪ್ರಯತ್ನಿಸುವುದು ಹೀಗೆ.
ಆರ್.ವಿ. ಯವರ ನಾಟಕಗಳಲ್ಲಿಯ ಚಳುವಳಿಗಳಲ್ಲಿ ಮಂಚೂಣಿಯಲ್ಲಿರುವವರೆಲ್ಲ ಹೆಣ್ಣು ಮಕ್ಕಳೇ ಆಗಿದ್ದಾರೆ. ಗಂಡಸರ ಚಿನ್ನದ ವ್ಯಾಮೋಹವನ್ನು ಮೀರಿ ಪ್ರೀತಿಯನ್ನು ಚಿಗುರೊಡೆಸಲು ಹೆಣ್ಣು ಮಕ್ಕಳೇ ಕಾರಣರಾಗುತ್ತಾರೆ. ಆರ್.ವಿ.ಯವರ ಪ್ರೊಪೆಗಂಡ ಸಹ ಇದೇ ; ಪರಿಧಿಯಲ್ಲಿರುವವರನ್ನು ಕೇಂದ್ರಕ್ಕೆ ತರುವದು. ಪಾತು ಸಾತುವಿಗೂ ಓದು ಕಲಿಸುವದು
ಅವರ ನಾಟಕದ ಮಾತಿನಲ್ಲಿಯ ಚಲನೆಯ ಗತಿಗೆ ಸಂಬಂಧಿಸಿದಂತೆ ಒಂದು ಉದಾಹರಣೆ ನೋಡಬಹುದು. ಮುದುಕನೂ ಹುಲಿಯೂ ನಾಟಕದಲ್ಲಿ ಆರಂಭದಲ್ಲಿ ಅಜ್ಜ ಮತ್ತು ಮೊಮ್ಮಕ್ಕಳ ಸಂಭಾಷಣೆ ಹೀಗಿದೆ.

ಅಜ್ಜ, ಅಜ್ಜ ಎಲ್ಲಿಗೆ
ತಿರುಪತಿ ಯಾತ್ರೆಗೆ
ಅಜ್ಜ ನಾವು ಬರ್ತೀವಿ
ನಿನ್ನ ಹಿಂದೆ ಬರ್ತೀವಿ
ಬೇಡ ಬೇಡ ಮಕ್ಕಳೆ ಮನೆಗೋಗಿ ಮಕ್ಕಳೆ
ಅಜ್ಜ ನಾವು ಬರ್ತೀವಿ ನಿನ್ನ ಹಿಂದೆ ಬತರ್ಿವಿ
ಮಳೆಗಿಳೆ ಬಪ್ಪುದು ಮನೆಗೋಗಿ ಮಕ್ಕಳೆ
ಮಳೆಗಿಳೆ ಬಂದರೆ ಮರದ ಕೆಳಗೆ ನಿಲ್ತೀವಿ
ಚಳಿಗಿಳಿ ಆಗೂದು ಮನೆಗೋಗಿ ಮಕ್ಕಳೆ
ಚಳಿಗಿಳಿ ಆದರೆ ಹೊಡಚಲನ್ನು ಹಾಕ್ತೀವಿ
ಹುಲಿಗಿಲಿ ಬಪ್ಪುದು. .
 . .
ಅಷ್ಟರಲ್ಲಿ ಹುಲಿ ಕೂಗು ಕೇಳುತ್ತದೆ. ಪಂಜರದ ಹುಲಿ ಕಾಣುತ್ತದೆ. ನಾಡಿನಿಂದ ಕಾಡಿನ ಕಡೆಗಿನ ಅಜ್ಜನ ಪಯಣವೂ ಮುಗಿಯುತ್ತದೆ.
ನಾಟಕದಲ್ಲಿ ಬರುವ ಪದ್ಯದ ಸೊಗಸಿಗೊಂದು ಉದಾಹರಣೆಯಾಗಿ ಜಾಣಕೋಳಿ ನಾಟಕದ ಈ ಪದ್ಯ ನೋಡಬಹುದು
ಕತ್ತಲೆ ಕಂಬಳಿ ಮುಸುಕಲಿ ಮಲಗಿದ
ಭೂಮಿಯ ಕಣ್ಣು ತೆರೆಯುತಿದೆ
ಬೆಳಕಿನ ಗಾಳಿಯು ಮೆಲ್ಲನೆ ಬೀಸಿ
ಹೂಗಳ ಎದೆಯ ಬಿರಿಯುತಿದೆ
                                                                      ಡಾ.ಶ್ರೀಪಾದ ಭಟ್ಟ್

Friday, 16 August 2013

SPEECH OFNELSON MANDELA, AT THE RALLY TO RELAUNCH THE SOUTH AFRICAN COMMUNIST PARTY

SPEECH OF THE DEPUTY PRESIDENT OF THE AFRICAN NATIONAL CONGRESS, NELSON MANDELA, AT THE RALLY TO RELAUNCH THE SOUTH AFRICAN COMMUNIST PARTY
Johannesburg, 29 July 1990
Comrade Chairman,
Comrades and friends.
This is an important day in the political history of our country. It is a day which should give comfort and hope to everybody in South Africa who calls himself or herself a Democrat. It is important because it marks the end of a period of exactly 40 years, during which the declared aim and practice of the state was to suppress all political opinion which was not certified by the ruling National Party as legitimate and permissible.
Surely, there are, today, happy smiles on the faces of the political thinkers who said that, though they might disagree with opposing views that some people might express, they would nevertheless defend with their lives the democratic right of such opponents to express their views.
The ANC is not a Communist Party. But as a defender of democracy, it has fought and will continue to fight for the right of the Communist Party to exist. As a movement for national liberation, the ANC has no mandate to espouse a Marxist ideology. But as a democratic movement, as a Parliament of the people of our country, the ANC has defended and will continue to defend the right of any South African to adhere to the Marxist ideology if that is their wish.
To us as a democratic movement, the lesson of our history is very clear. It is what the peoples of Europe learnt during the turbulent decade of the 1930s, when fascism began its assault on democracy by launching a violent offensive against the Communists.
It is the same lesson that the people of the United States learnt during the decade of the nineteen fifties, when the forces of Macarthyism launched an assault aimed at undermining the democratic heritage of the American people, by conducting a virulent offensive against Communist and left opinion.
Theologians of the German Church understood these processes very well when they said the Christian Church did nothing when the Nazis attacked the Communists. And again the Church did nothing when the Nazis turned their brutal attention to the Socialists. And when the Nazis turned against Christian men and women of conscience, the Church found that there was nobody to defend it.
This is a mistake the ANC never made, because we understood that the banning of the Communist Party in 1950, was but a prelude to the suppression of all democratic opinion in our country. This is a lesson that those within the National Party, who consider themselves to be Democrats, need to learn very quickly.
The lesson they need to learn is that it was fundamentally wrong to have enacted the Suppression of Communism Act in 1950. The lesson they need to learn is that it is fundamentally wrong today to seek to build an atmosphere of democratic tolerance of different views by attempting to demonise those who choose to hold Communist opinions. Such a posture leads to one thing and one thing only, namely, the denial and suppression of democracy itself.
We are here today to participate with you in the public launch of the Communist Party, 40 years after it was banned. We do this because during the nearly 70 years of its existence, the Communist Party has distinguished itself as an ally in the common struggle to end the racial oppression and exploitation of the black masses of our country. It has fought side by side with the ANC for the common objective of the National Liberation of people, without seeking to impose its views on our movement.
It has been and is a dependable friend who respected our independence and our policy. Its members have been devoted Congressites who, as members of the ANC, have propagated and defended the policies of our movement, including the Freedom Charter, without hesitation. They have therefore given strength to our own movement, whatever their separate perspectives might be as an independent political formation.
Its leaders have been close friends and colleagues of the leaders of our movement. The general secretary of the Communist Party, comrade Joe Slovo, is an old friend. There is an old established friendship between his family and mine. We went to university together. We were co-accused in the Treason Trial of 1956 to 1961.
Over the years, we have shared the same views on fundamental issues to do with ending the criminal system of apartheid and the democratic transformation of our country. Today we share the same views about the vital importance and urgency of arriving at a political settlement through negotiations, in conditions of peace for all our people.
This personal and political relationship has been able to endure over the decades precisely because Joe Slovo and his colleagues in the Communist Party have understood and respected the fact that the ANC is an independent body. They have never sought to transform the ANC into a tool and a puppet of the Communist Party.
They have fought to uphold the character of the ANC as the Parliament of the oppressed, containing within it people with different ideological views, who are united by the common perspective of national emancipation represented by the Freedom Charter.
Even when we got together with comrade Joe Slovo and others in 1961 to form the People's army, Umkhonto we Sizwe, we understood the specific role that Umkhonto had to play. We understood that despite the fact that state repression had compelled us to take up arms, this did not make the ANC a slave to violence.
We knew that the cadres who made up Umkhonto we Sizwe would have to be men and women who would respect the political authority of the ANC, and always proceed from the position that they took up arms precisely to help establish a democratic order in which the people would have the right to free political opinion and expression, without fear of intimidation from any quarter.
Such are the views of the men and women in who make up our glorious army. To suggest, as some are doing these days, that these outstanding sons and daughters of our people harbour ideas of unilateral military action against the peace process, is an insult manufactured by the enemies of democracy who have built conspiratorial nests within the interstices of the power structures of this country.
Everybody, including the government, also knows that the ANC is the political formation that determines the strategic use of the weapons in the hands of the People's army. Our movement, which has a distinguished and unchallenged history of commitment to peaceful solutions, has itself never abandoned the strategy of non-violent struggle, even when the apartheid regime did everything in its power to make such struggle impossible. It cannot now turn against the peaceful resolution of the conflict in our country, precisely at the moment when such a peaceful resolution seems possible.
Those who today pose as experts on the structure and strategy of our broad movement for national liberation must understand these ABCs of our struggle. What these ABCs point to is the commitment of the alliance led by the ANC to do everything in its power to bring about a peaceful solution of the problems facing our country.
Dear comrades and friends:
The objective we have pursued since our formation 78 years ago remains unchanged. We must move with all possible speed to abolish the apartheid system and to transform South Africa into a united, democratic, non-racial and non-sexist country. We have entered into talks with the government for the realisation of these goals.
Because we have an urgent task to attain our emancipation, we insist that the talks must go on. Our freedom should not be postponed or denied simply because some people have a secret agenda to sustain an anti-democratic crusade against Communist opinion.
But we also insist that the talks must proceed in conditions of peace. Therefore the violence of the police against the people must come to an end. The violence of the black and white vigilantes against the people must come to an end. If it is genuinely interested in peace and negotiations, the government must act to bring about this result.
We wish to repeat here what the entire democratic movement of our country has said in the past - that in the context of an end to state violence against the people and a political process leading to the liquidation of the apartheid system, we ourselves are ready to discuss the suspension of our own armed actions to ensure that peace and stability prevails throughout our country.
We call on the government to respond positively to these positions, to abandon the attempt to create new obstacles by whipping up an anti-communist hysteria, to act in a responsible manner in the interests of all our people, in the interest of the cause of justice and peace.
Dear friends of the Communist Party:
We know we can count on you to stand with us as we pursue these goals. It is our profound desire that you, like all other political formations in our country, should be active participants in the historic process which should lead to the peaceful resolution of the problems confronting our country and people. We extend to you the best wishes of the People's Movement, the ANC, and look forward to continuing co-operation in the common struggle to bring freedom, peace and security to all the people of our country.
The struggle continues!
Victory is certain!
Amandla ngawethu!


Friday, 2 August 2013

ನಾಗೇಶ ಹೆಗಡೆಯವರ ವಿಜ್ಞಾನ ಬರೆಹ: ಕೆಲವು ಟಿಪ್ಪಣೆಗಳು -vittal bhandari


ನಾಗೇಶ ಹೆಗಡೆಯವರ ಬರಹ ಓದುವುದೆಂದರೆ ನಮಗೆ ಅಷ್ಟೊಂದು ಅರಿವಿಲ್ಲದ ಹೊಸಲೋಕವೊಂದನ್ನು ಪ್ರವೇಶಿಸಿದಂತೆ. ಪ್ರೀತಿಯಿಂದ, ಕಾಳಜಿಯಿಂದ ಈ ಲೋಕದಲ್ಲಿ ತಿರುಗಾಡಿಸುತ್ತಾರೆ. ಇಲ್ಲೇನು ನೋಡುವುದಿದೆ ಎಂದುಕೊಂಡ ಸ್ಥಳದಲ್ಲಿ ಹೊಸದನ್ನು ತೋರಿಸುತ್ತಾರೆ. ಸಾಮಾನ್ಯವಾದುದೆಂದು ನಾವು ತಿಳಿದುಕೊಂಡ ಹಲವು ಸಂಗತಿಗಳ ಅಸಾಮಾನ್ಯ ಮಗ್ಗುಲನ್ನು ಪರಿಚಯಸಿಕೊಡುತ್ತಾರೆ. ಅವರ ಲೇಖನಗಳು ನಮ್ಮ ಅರಿವನ್ನು ವಿಸ್ತರಿಸುವುದು ಮಾತ್ರವಲ್ಲ ಅರಿವಿಗೆ ಅಗತ್ಯವಾದ ಹೊಸ ದೃಷ್ಟಿಕೋನವನ್ನು ನೀಡುತ್ತವೆ.

ಸಾಮಾನ್ಯವಾಗಿ ಕವಿಗಳನ್ನೋ, ಕಾದಂಬರಿಕಾರರನ್ನೋ, ಕತೆಗಾರರನ್ನೋ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸುತ್ತಾರೆ. ಆದರೆ ವಿಜ್ಞಾನ ಅಂಕಣ ಬರೆಹಗಾರ ನಾಗೇಶ ಹೆಗಡೆಯವರನ್ನು ಸಿದ್ದಾಪುರ ತಾಲೂಕು ಸಾಹಿತ್ಯಸಮ್ಮೇಳನದ ಸವರ್ಾಧ್ಯಕ್ಷರನ್ನಾಗಿ ಮಾಡಿದ್ದೀರಿ. ಮೌಢ್ಯ-ಕಂದಾಚಾರಗಳೇ ಸಾಹಿತ್ಯ-ಸಾಂಸ್ಕೃತಿಕ ರಂಗವನ್ನು ಬಳಸುದಾರಿಯಲ್ಲಿ ತುಂಬಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹೆಗಡೆಯವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿಸುವುದೆಂದರೆ ಪ್ರತಿಯೊಂದು ಸಂಗತಿಯನ್ನೂ ವೈಜ್ಞಾನಿಕವಾಗಿ, ವೈಚಾರಿಕವಾಗಿ ನೋಡುತ್ತಿರುವ, ಹಾಗೆ ಬದುಕುತ್ತಿರುವ ಅವರ ಆಲೋಚನೆಗೆ ಕೊಟ್ಟ ಮಾನ್ಯತೆ ಎಂದೇ ಭಾವಿಸುತ್ತೇನೆ. ಒಂದು ರೀತಿಯಲ್ಲಿ ಈ ಸಮ್ಮೇಳನ ಸಾಹಿತ್ಯ ಮತ್ತು ವಿಜ್ಞಾನದ ಸಂಬಂಧವನ್ನು ಘಟ್ಟಿಗೊಳಿಸುವ ಪ್ರಯತ್ನ ಎಂದೇ ನಾನು ಭಾವಿಸಿದ್ದೇನೆ. ಅದಕ್ಕಾಗಿ ಸಾಹಿತ್ಯ ಪರಿಷತ್ತಿಗೂ, ಸಮ್ಮೇಳನದ ಅಧ್ಯಕ್ಷರಾಗಿ ಒಪ್ಪಿ ಬಂದ ನಾಗೇಶ ಹೆಗಡೆಯವರಿಗೂ ವಂದನೆಗಳು.

ಟಿಪ್ಪಣೆ-1

ಸಾಮಾನ್ಯವಾಗಿ 'ವಿಜ್ಞಾನ ಬರೆಹ' ಶುಷ್ಕವಾದದ್ದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ಎಲ್ಲ ಕಾಲಕ್ಕೂ ನಿಯಮ, ಸೂತ್ರ ಮತ್ತು ಭೌತಿಕ ಸಂಬಂಧಗಳ ಮೂಲಕ ನಿರ್ವಚನೆಗೊಳ್ಳುವ  ವಿಜ್ಞಾನ ಬಹುತೇಕವಾಗಿ ಅನ್ಯಭಾಷೆಯಲ್ಲಿಯೇ ಪ್ರಕಟವಾಗುತ್ತಿತ್ತು. ಅಲ್ಲಿ ಬಳಸುವ ಅನೇಕ ಪರಿಭಾಷೆಗಳು ನಮಗೆ ಅನ್ಯವಾಗಿಯೇ ಉಳಿದುಕೊಂಡವು. ಭಾಷೆಯ ತೊಡಕಿನಿಂದ ಇದಕ್ಕೆ ಜನಸಾಮಾನ್ಯರನ್ನು ಒಳಗೊಳ್ಳಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಭಾರತೀಯರು ವಿಜ್ಞಾನದ ಪ್ರಯೋಜನವನ್ನು ನಮ್ಮದಾಗಿಸಿಕೊಳ್ಳುವಲ್ಲಿ ಆಸಕ್ತಿವಹಿಸಿದರೇ ಹೊರತು ವೈಜ್ಞಾನಿಕ ಮನೋಭಾವವನ್ನು ನಮ್ಮದಾಗಿಸಿಕೊಳ್ಳಲು ಆಸಕ್ತಿ ವಹಿಸಲೇ ಇಲ್ಲ. ಹಾಗಾಗಿ ಇಂದು ಮೌಢ್ಯ, ಕಂದಾಚಾರಗಳನ್ನು ಬೆಳೆಸಲೂ ನಾವು ವಿಜ್ಞಾನದ ಆವಿಷ್ಕಾರವನ್ನೇ ಬಳಸಿಕೊಳ್ಳುವಂತಾಯಿತು. ಪ್ರಸ್ತುತ ವಿಜ್ಞಾನ-ತಂತ್ರಜ್ಞಾನದ ಇತ್ತೀಚಿನ ಉತ್ಪನ್ನಗಳನ್ನು ತನ್ನದಾಗಿಸಿಕೊಳ್ಳುತ್ತಲೇ ಆಂತರ್ಯದಲ್ಲಿ ಸನಾತನವಾದಿಯಾಗಿ ದೇಶಕ್ಕೆ ಅಪಾಯಕಾರಿಯಾಗುವ ಹಲವರನ್ನು ನಾವೇ ನೋಡುತ್ತಿದ್ದೇವೆ. (ಅಥವಾ ಬಹುತೇಕರು ಹಾಗೇ ಇದ್ದಾರೆ.)

ಇನ್ನೊಂದೆಡೆ ವಿಜ್ಞಾನವನ್ನು ಕನ್ನಡದಲ್ಲಿ ತಿಳಿಯಾಗಿ ಹೇಳಲು ಸಾಧ್ಯವಿಲ್ಲವೆಂದೇ ಹಲವು ವರ್ಷಗಳ ಕಾಲ ನಂಬಿಕೊಳ್ಳಲಾಗಿತ್ತು. ಹಾಗಾಗಿ ಬಹುತೇಕ ಬರಹಗಳು ಇಂಗ್ಲಿಷ್ನಲ್ಲಿಯೇ ಇರುತ್ತಿದ್ದವು. ಇದು ಜನಸಾಮಾನ್ಯರ ಓದಿಗೆ ಎಟುಕುತ್ತಿರಲಿಲ್ಲ. ಹಾಗಾಗಿ ಇದನ್ನು ಸಾಹಿತ್ಯದ ಒಂದು ಭಾಗವೆಂದು ನಾವು ಪರಿಗಣಿಸಲೇ ಇಲ್ಲ. ಹೀಗೆ ಕನ್ನಡದಲ್ಲಿ ವಿಜ್ಞಾನವನ್ನು ತಿಳಿಯಾಗಿ ಹೇಳದಿರುವುದು ಕೇವಲ ಆಕಸ್ಮಿಕವೆಂದು ನಾವು ತಿಳಿಯಬೇಕಾಗಿಲ್ಲ. ಇದರ ಹಿಂದೆ ಇರುವ ವರ್ಗ ಹಿತಾಸಕ್ತಿಯನ್ನು ನಾವು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ.

'ವಿಜ್ಞಾನ' ಮತ್ತು 'ಸಾಹಿತ್ಯ' ವಿರೋಧಾತ್ಮಕವಾದದ್ದೇನೂ ಅಲ್ಲ. ಇವೆರಡೂ ಮನುಷ್ಯನ ಬದುಕಿನ ಸತ್ಯಾನ್ವೇಷಣೆಯ ಎರಡು ಭಿನ್ನ ಮಾರ್ಗಗಳು ಅಷ್ಟೆ. ವಿಜ್ಞಾನ ಅಂಕಿ-ಅಂಶಗಳ ಮೂಲಕ, ಸಾಕ್ಷಾಧಾರಗಳ ಮೂಲಕ ಹೊರಟರೆ ಸಾಹಿತ್ಯವು ಭಾವನಾತ್ಮಕ ತರ್ಕ ಮತ್ತು ಬದುಕಿನ ಅನುಭವದ ರೂಪಕದ ಮೂಲಕ ಹೊರಡುತ್ತದೆ. ಅಂತಿಮವಾಗಿ ಎರಡೂ ಸ್ಪಂದಿಸುವುದು ಮನುಷ್ಯನ ಬದುಕಿನ ಸುಂದರ ಸ್ಥಿತಿಯ ನಿಮರ್ಾಣದಲ್ಲಿಯೆ. ಹಾಗೆನ್ನುವಾಗ ವಿಜ್ಞಾನಕ್ಕೂ ಕಲ್ಪನೆಗೂ ಸಂಬಂಧವೇ ಇಲ್ಲವೇ? ಸಾಹಿತ್ಯಕ್ಕೆ ಮಾತ್ರ ಅಗಾಧ ಕಲ್ಪನೆಯ ಅಗತ್ಯತೆಯಿದೆ ಎಂಬುದು ಅಷ್ಟು ಸರಿಯಲ್ಲ. ನಿಜವಾಗಿ ನೋಡಿದರೆ ವಿಜ್ಞಾನಕ್ಕೆ ಈ ಕಲ್ಪನೆಯ ಅವಶ್ಯಕತೆ ಮತ್ತೂ ಹೆಚ್ಚಿನದು. ಕಣ್ಣಿಗೆ ಕಾಣದ ಪರಮಾಣು ಒಳಗಿನ ಜಗತ್ತನ್ನು ಕೇವಲ ಕಲ್ಪನೆಯ ಕಣ್ಣುಗಳಿಂದ ಊಹಿಸಬೇಕು. ಅದರ ಹೊರ ಪರಿಣಾಮಗಳನ್ನು ಅಧ್ಯಯಿಸಿ ಒಳಅಂತರಂಗವನ್ನು ಅರಿಯಬೇಕು (ನೇಮಿಚಂದ್ರ: 1993, ಪು.3) ಎಂದು ನೇಮೀಚಂದ್ರ ಹೇಳುತ್ತಾರೆ. ಸಾಹಿತ್ಯವೂ ಹಾಗೆಯೇ. ಕೇವಲ ಕಲ್ಪನೆಯ ಕತೆಯಲ್ಲ, ವಸ್ತುನಿಷ್ಠತೆಯನ್ನು ಬಯಸುತ್ತದೆ. ಹಾಗಾಗಿ ಸಾಹಿತ್ಯ ಮತ್ತು ವಿಜ್ಞಾನಗಳು ಪರಸ್ಪರ ಪೂರಕವೇ ಆಗಿದೆ.

 ಟಿಪ್ಪಣೆ -2

ನಾಗೇಶ ಹೆಗಡೆಯವರ ಬರಹದಲ್ಲಿ ವಿಜ್ಞಾನದ ವಸ್ತುನಿಷ್ಠತೆ, ಕಾವ್ಯದ ಭಾವನಾತ್ಮಕತೆ ಒಟ್ಟೊಟ್ಟಿಗೆ ಇದೆ. ವಿಜ್ಞಾನದ ನಿಷ್ಠುರತೆಯಷ್ಟೇ ಕಾವ್ಯದ ಭಾಷೆಯ ಲಾಲಿತ್ಯವೂ ಇದೆ. ಹಾಗಾಗಿ ಇವರ ಬರಹಕ್ಕೆ ತನ್ನ ಓದುಗರನ್ನು ಸೃಷ್ಟಿಸಿಕೊಳ್ಳುವ ತಾಕತ್ತಿದೆ. ಕನ್ನಡದಲ್ಲಿ ಇಂತಹ ಓದುಗರನ್ನು ಸೃಷ್ಟಿಸಿಕೊಂಡ ವಿಜ್ಞಾನ ಬರಹಗಾರರ ಸಂಖ್ಯೆ ತೀರಾ ಅಪರೂಪ. ಬಿ.ಜಿ.ಎಲ್.ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಸಿ.ಆರ್. ಚಂದ್ರಶೇಖರ, ನೇಮಿಚಂದ್ರ ಹೀಗೆ........ ಬೆರಳಣಿಕೆಯಷ್ಟು ಜನ ಮಾತ್ರ. ಈ ಪರಂಪರೆಯ ಸಾರ್ಥಕ ಕೊಂಡಿಯೆಂದರೆ ನಾಗೇಶ ಹೆಗಡೆಯವರು.......
ಇವರ ಲೇಖನದ ಹರವು ತೀರಾ ವಿಸ್ತಾರವಾದದ್ದು, ವಿಜ್ಞಾನ, ಪ್ರಕೃತಿ, ಅಣುಸ್ಥಾವರ, ಪರಿಸರ, ಜಾಗತೀಕರಣ, ಭಾಷೆ, ಆಹಾರ, ಔಷಧ, ವೈದ್ಯಕೀಯ, ಕಾಡು, ನದಿ, ಪ್ರಾಣಿ ಪ್ರಪಂಚ, ಆಧುನಿಕತೆ, ಹೀಗೆ ವೈವಿಧ್ಯಪೂರ್ಣವಾದ ಲೇಖನಗಳು. ಬಹುತೇಕ ಲೇಖನಗಳು ಒಂದು 'ಅಂಕಣ'ದ ಮಿತಿಗೆ ಒಳಪಟ್ಟಿದೆ. 2-3 ಪುಟಗಳಲ್ಲಿ ಲೇಖನ ಮುಗಿಸಬೇಕಾಗಿರುವುದರಿಂದ ಪ್ರತಿ ವಿವರದಲ್ಲೂ ಕಂಜೂಸುತನ ಇದೆ. ಅನವಶ್ಯಕ ವಾಚಾಳಿತನ ಎಲ್ಲೂ ಇಣುಕುವುದಿಲ್ಲ. ಇದು ಇವರ ಬರೆಹದ ಹೆಚ್ಚುಗಾರಿಕೆಯೂ ಹೌದು.
ಸಾಹಿತ್ಯವು ಕಲ್ಪನೆ ಮತ್ತು ಭಾವನಾತ್ಮಕ ಸಂಬಂಧದ  ಮೂಲಕ ಸತ್ಯದೆಡೆಗೆ ಪಯಣಿಸಿದರೆ ವಿಜ್ಞಾನವು ಪ್ರಶ್ನೆ, ಕುತೂಹಲ ಮತ್ತು ಭೌತಿಕ ಸಂಬಂಧದ ಮೂಲಕ ಸತ್ಯದೆಡೆಗೆ ಪ್ರಯಾಣ ಬೆಳೆಸುತ್ತವೆ. ಸಾಹಿತ್ಯ ರೂಪಕದ ಮೂಲಕ ಮಾತನಾಡಿದರೆ ವಿಜ್ಞಾನವು ನೇರನುಡಿಯಲ್ಲಿ ಮಾತನಾಡುತ್ತದೆ. ಹಾಗಾಗಿ ಒಬ್ಬ ಸಾಹಿತಿ ಮತ್ತು ಒಬ್ಬ ವಿಜ್ಞಾನಿ - ಇವರಿಬ್ಬರ ನಡುವೆ ಇರುವ ಸೃಜನಶೀಲ ಚಿಂತನೆ ಮೂಲತಃ ಒಂದೇ ಮೂಲದಿಂದ ಹೊರಟಿದ್ದು. ಅದು ಮೂಲ ಮನುಷ್ಯನ ಬದುಕಿನ ಸೌಂದರ್ಯಕ್ಕೆ ಸಂಬಂಧಿಸಿದ್ದು ; ಸೌಂದರ್ಯವನ್ನು ಆಗು ಮಾಡುವ ಕನಸಿಗೆ ಸಂಬಂಧಿಸಿದ್ದು. ಹಾಗಾಗಿ ಸಾಹಿತಿಗೆ ಕನಸಿರಬೇಕು ; ಬದುಕು ಕಟ್ಟುವ ಕನಸಿರಬೇಕು. ವಿಜ್ಞಾನಿಗೂ ಕನಸಿರಬೇಕು ; ಬದುಕು ಎತ್ತರಿಸುವ ಕನಸಿರಬೇಕು. ನಾಗೇಶ ಹೆಗಡೆಯವರ ವಿಜ್ಞಾನ ಲೇಖನಗಳು ಹೊರಡುವುದು ಈ ಕನಸಿನ ಮೂಲದಿಂದಲೇ. ಅದು ವಿಸ್ತರಿಸಿಕೊಳ್ಳುವುದು ಕೂಡ ಬದುಕು ಕಟ್ಟುವ ವಿನ್ಯಾಸದ ಅರಸುವಿಕೆಯಲ್ಲಿಯೇ. ಹಾಗಾಗಿ ಇದು ಆಪ್ತವೂ, ಅರ್ಥಪೂರ್ಣವೂ ಆಗುತ್ತದೆ.

ಟಿಪ್ಪಣೆ-3

ವೈಯಕ್ತಿಕವಾಗಿ ನನಗೆ ನಾಗೇಶ ಹೆಗಡೆಯವರ ಲೇಖನ ಇಷ್ಟ ಆಗುವುದು ಅವರ ಸೈದ್ಧಾಂತಿಕ ಖಚಿತತೆ ಮತ್ತು ಶೈಲಿಯ ಆಪ್ತತೆಯಿಂದಾಗಿ. ಒಂದು ಸಣ್ಣ ಘಟನೆ, ಒಂದು ಸಣ್ಣ ಕತೆ, ಒಂದು ಸಣ್ಣ ತಮಾಷೆ ಎನ್ನಬಹುದಾದ ಸಂಗತಿಗಳಿಂದ ಪ್ರಾರಂಭವಾಗುವ ಲೇಖನ ('ಪಶ್ಚಿಮ ಘಟ್ಟದ ಪತನ' 'ಬಿಸಿ ಪ್ರಳಯದ ಬಾಗಿಲಲ್ಲಿ' ಪ್ರಳಯ ನಿರೋಧಕ ಬೀಜದ ತಿಜೋರಿ' 'ಬಾಯೊಳಗಿನ ಪ್ರಚಂಡ ಪ್ರಪಂಚ' ಇತ್ಯಾದಿ) ಬೆಳೆಯುತ್ತಾ ಹೋದಂತೆ ಅದು ಪಡೆದುಕೊಳ್ಳುವ ಸೈದ್ಧಾಂತಿಕ ತಿರುವು ('ಗೋವಿನ ಸುತ್ತ........ಮುಗಿಯದ ವೃತ್ತ', 'ಫುಕುವೋಕಾ ಎಂಬ ಡೆಂಜರ ಸಿಗ್ನಲ್' 'ಪತ್ರಿಕಾ ಸ್ವಾತಂತ್ರ್ಯದ ಐದು ಮುಜುಗರದ ಮುಖಗಳು' 'ಜಾಗತೀಕರಣದ ದು:ಕಿ ಮುಖಗಳು' ಎಂದೂ ಮರೆಯಬಾರದು ಎಂಡೋ ಸಲ್ಫಾನ' 'ತುತ್ತಿನ ಮೇಲೆ ಶಸ್ತ್ರಾಸ್ತ್ರ' ) ಮತ್ತು ಒದಗಿಸುವ ಅಪರೂಪದ ಮಾಹಿತಿಯನ್ನೊಳಗೊಂಡ('ಅನ್ವೇಶಕರ ಶಕ ವರ್ಷಗಳು' 'ಗೋವಿನ ಸುತ್ತ........ಮುಗಿಯದ ವೃತ್ತ', 'ಅಸ್ವಸ್ಥ ಭಾಷೆಗಳಿಗೆ ಆಮ್ಲಜನಕ' 'ಜೀವಕಣದೊಳಗಿನ ಅದ್ಭುತ ಪ್ರಪಂಚ' 'ಐಕ್ಯೂ ಮತ್ತು ಈಕ್ಯೂ' 'ವಯಸ್ಸು ಮತ್ತು ಆಯಸ್ಸು' ಇತ್ಯಾದಿ ಬಹುತೇಕ ಲೇಖನಗಳು)  ಬರವಣಿಗೆ ಸಮಕಾಲೀನ ಜಗತ್ತಿನ ವ್ಯಾಖ್ಯಾನವೂ ಆಗುತ್ತದೆ.
ಇದನ್ನೆ ಸ್ವಲ್ಪ ವಿಸ್ತರಿಸುವುದಾದರೆ:
1.)ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಮಾಹಿತಿಯನ್ನು ನೀಡುವವರ ಸಂದಿಗ್ಧತೆಯ ಬಗ್ಗೆ ಹೆಗಡೆಯವರು ಬರೆಯುತ್ತಾ ವಿಜ್ಞಾನ ಎಂಬುದು ವಜ್ರದ ಕಡಲೆ ಎಂಬುದು ಮೊದಲನೆ ಅಡೆತಡೆ. ಎರಡನೆಯದಾಗಿ, ಅದನ್ನು ತುಸು ಸರಳಗೊಳಿಸಬಲ್ಲ ನಿಘಂಟುಗಳು, ಆಕರ ಗ್ರಂಥಗಳು ಲಭ್ಯವಿಲ್ಲ.ಎನ್ನುತ್ತಾರೆ. (ವಿಶೇಷ ಜ್ಞಾನಕ್ಕೆ ಗಿರಾಕಿಗಳು ಕಮ್ಮಿ - ಲೇಖನ ಪುಟ.53) ಈ ಲೇಖನದಲ್ಲಿ ಅವರು ವಿಜ್ಞಾನ ಎಷ್ಟೊಂದು ವೇಗವಾಗಿ ಬೆಳೆಯುತ್ತಿದೆಯೆಂದರೆ ಸುಲಭವಾಗಿ ಅದು ಪಂಡಿತರಿಗೂ ಅರ್ಥವಾಗುವುದಿಲ್ಲ. ಅವರು ರೂಢಿಸಿಕೊಂಡ ತಾಂತ್ರಿಕ ಭಾಷೆಗಳು, ಇಂಗ್ಲೀಷ್ ಬಲ್ಲವರಿಗೂ ಅರ್ಥವಾಗದಿರುವಾಗ ಜನಸಮಾನ್ಯರಿಗೆ ಅರ್ಥವಾಗುವುದಾದರೂ ಹೇಗೆ ಎನ್ನುವ ಕಡೆ ಗಮನ ಸೆಳೆಯುತ್ತಾ ನಾನು ಯಾರಿಗಾಗಿ ಬರೆಯಬೇಕು? ಹಳ್ಳಿಯವರಿಗೆ ಅರ್ಥ ಆಗೋದಿಲ್ಲ. ನಗರದಲ್ಲಿ ವೆಬ್ಸಫರ್ಿಂಗ್ ಮಾಡುವ ಕನ್ನಡಿಗರಿಗೆ ಇದು ನಿರರ್ಥಕ ಬರಹ (ಅದೇ ಪು. 54) ಎನ್ನುತ್ತಾರೆ. ಅಂದರೆ ಜ್ಞಾನವನ್ನು ಗ್ರಹಿಸುವಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವೆ ಇಷ್ಟೊಂದು  ಗ್ಯಾಪ್ ಇರುವುದು ಕೂಡ ಇಲ್ಲಿ ಗಮನಾರ್ಹ. ಹೀಗೆ ವಿಜ್ಞಾನ ಬರವಣಿಗೆ ಕೇವಲ ಬರವಣಿಗೆಯ ತೊಡಕಾಗಿ ಮಾತ್ರ ನಿಲ್ಲುವುದಿಲ್ಲ. ಸ್ಟ್ಯಾನ್ ಫೋರ್ಟ ಯುನಿವಸರ್ಿಟಿಯ ಯಾವುದೋ ತಜ್ಞನೊಬ್ಬ ಪ್ರೋಟಾನ್ ಅವಸಾನ ಸ್ಥಿತಿಯನ್ನು ತನ್ನ ಉಪಕರಣದಲ್ಲಿ ದಾಖಲು ಮಾಡಿದರೆ ಅದು ಸುದ್ದಿಯಾಗುತ್ತದೆ. ನಮ್ಮ ಮಧ್ಯಪ್ರದೇಶದ ಹಳ್ಳಿಯ ಇಂಜಿನಿಯರನೊಬ್ಬ ತನ್ನ ಊರಿನ ಕೆರೆಯ ಜೊಂಡು ಕಳೆಯನ್ನೇ ಕೊಳೆಯಿಸಿ ಶಕ್ತಿ ಉತ್ಪಾದನೆ ಮಾಡಿ, ಅದೇ ಜೊಂಡಿನ ನಾರಿನಿಂದ ಕಾಗದ ತಯಾರಿಸಿದರೆ ಅದು ಸುದ್ದಿಯಾಗುವುದಿಲ್ಲ. ನಮ್ಮವರ ಬದುಕಿಗೆ ಹತ್ತಿರವಾದ ಅವರ ಜೀವನ ಮಟ್ಟವನ್ನು ತುಸು ಮಟ್ಟಿಗೆ ಸುಧಾರಿಸಬಲ್ಲ ವಿಜ್ಞಾನ ತಂತ್ರಜ್ಞಾನ ವಾತರ್ೆಗಳು ಬೆಳಕು ಕಾಣುವ ಸಂಭವ ತೀರಾ ಕಮ್ಮಿ (ಪು.53) ಎನ್ನುವಲ್ಲಿ ಸುದ್ದಿಯ ಹಿಂದಿರುವ ಸಾಂಸ್ಕೃತಿಕ ಪ್ರಶ್ನೆಯನ್ನು ಕೂಡ ಕೆದಕುತ್ತಾರೆ. ಗ್ರಾಮೀಣ ಮತ್ತು ನಗರದ ನಡುವಿನ ಬಿರುಕು ಇಂಡಿಯಾದಲ್ಲಿ ಇನ್ನೂ ತೀವ್ರವಾಗಿಯೇ ಇದೆ. ಗ್ರಾಮೀಣ ಜ್ಞಾನವು ಜ್ಞಾನವೆಂದು ಇಲ್ಲಿ ಪರಿಗಣಿಸಲ್ಪಟ್ಟಿಲ್ಲ ಎನ್ನುವ ವಾಸ್ತವ ಇಲ್ಲಿಯದು. ಹಾಗೆ ನೋಡಿದರೆ ವಿಜ್ಞಾನದ ಲಾಭವನ್ನು ಅತಿ ಹೆಚ್ಚು ಪಡೆದವರು ಈ ದೇಶದಲ್ಲಿ ನಗರವಾಸಿಗಳು ಮತ್ತು ಶ್ರೀಮಂತರು. ಹೆಚ್ಚು ಕಳೆದುಕೊಂಡವರು ಗ್ರಾಮೀಣರು ಮತು ಬಡವರು.

ಇದೇ ಲೇಖನದಲ್ಲಿ ಕನ್ನಡದ ಯಾವ ಪತ್ರಿಕೆ ಕೂಡ ಒಬ್ಬ ವಿಜ್ಞಾನ ವರದಿಗಾರನನ್ನು ನೇಮಕ ಮಾಡಿಕೊಂಡಿಲ್ಲದಿರುವುದರ ಕಡೆಗೆ ಗಮನ ಸೆಳೆಯುತ್ತಾರೆ. ಕನರ್ಾಟಕದಲ್ಲಿ ಈವರೆಗೆ ಇವರು 'ಹೊಸ' ವಿಜ್ಞಾನ ಲೇಖಕರು ಸೃಷ್ಟಿಯಾಗಿಲ್ಲ ಎಂಬ ವಿಷಾದವನ್ನು ಲೇಖಕರು ವ್ಯಕ್ತಪಡಿಸುವುದರಲ್ಲಿ ಅರ್ಥ ಇದೆ. ಯಾಕೆಂದರೆ ನಿಂತರೆ, ಕುಳಿತರೆ, ಕಿವಿ ತೆರೆದರೆ, ಕಣ್ಣು ಮುಚ್ಚಿದರೆ ವಿಜ್ಞಾನದ ಹೊಸ ಹೊಸ ಸಾಧನೆಗಳು ನಮ್ಮನ್ನು ತಟ್ಟುತ್ತಿರುತ್ತದೆ. ಮಾರಗೊಂಡನ ಹಳ್ಳಿಯ ಅಲ್ಪಾಕ್ಷರಿ ಕೃಷಿಕ ರಾಮಯ್ಯನ ನಾಲಿಗೆಯ ಮೇಲೂ ಮೊಬೈಲ್ನ 'ಮಿಸ್ಕಾಲ್' ಉಲಿಯುತ್ತದೆ. ವಿಜ್ಞಾನ ತಂತ್ರಜ್ಞಾನದ ಸಾಧನೆಗಳು ಕಾಲಿಟ್ಟಲ್ಲೆಲ್ಲಾ ಇಂಗ್ಲೀಷ್ ಭಾಷೆಯೂ ದಾಂಗುಡಿ ಇಡುತ್ತಾ ಬರುತ್ತಿದೆ. ಕನ್ನಡ ಹೊಸಕಿ ಹೋಗದಂತೆ ನೋಡಿಕೊಳ್ಳುವ ಹೊಣೆ ಕನ್ನಡ ಸಮೂಹ ಮಾಧ್ಯಮಗಳ ಮೇಲೆಯೇ ಇವೆ ಎನ್ನುವ ಮೂಲಕ ಕನ್ನಡದಲ್ಲಿ ವಿಜ್ಞಾನ ಬರವಣಿಗೆ ಕೇವಲ ಜ್ಞಾನದ ಪ್ರಸರಣ ಮಾತ್ರವನ್ನು ಅದನ್ನು ದಾಟಿ ಆದು ಭಾಷೆಯ ಭವಿಷ್ಯದ ಪ್ರಶ್ನೆಯೂ ಹೌದು ಎನ್ನುವ ಮಹತ್ವದ ಸಂಗತಿ ತೆರೆದಿಡುತ್ತಾರೆ.
2.) 'ಅಸ್ವಸ್ಥ ಭಾಷೆಗಳಿಗೆ ಆಮ್ಲಜನಕ, ಪ್ರಾಣವಾಯು' ಎಂಬ ಲೇಖನದಲ್ಲಿ ಜೀವ ವೈವಿಧ್ಯತೆಗೂ ಭಾಷಾ ವೈವಿಧ್ಯತೆಗೂ ಇರುವ ಸಂಬಂಧವನ್ನು ಅರ್ಥಪೂರ್ಣವಾಗಿ ವಿವರಿಸುತ್ತಾರೆ. ಭಾಷಾ ವಿಜ್ಞಾನಿಗಳ ಅಂದಾಜಿನ ಪ್ರಕಾರ, ಪ್ರಪಂಚದಲ್ಲಿ ಸರಾಸರಿ ಇಪ್ಪತ್ತು ದಿನಗಳಿಗೆ ಒಂದೊಂದು ಭಾಷೆ ಸಾಯುತ್ತಿದೆ. ಜಗತ್ತಿನ ಅರ್ಧಕ್ಕರ್ಧ ಅಂದರೆ ಸುಮಾರು ಮೂರೂವರೆ ಸಾವಿರ ಭಾಷೆಗಳು ಮುಂದಿನ ಮೂರು ವರ್ಷಗಳಲ್ಲಿ ಶಾಶ್ವತವಾಗಿ ಕಣ್ಮರೆಯಾಗಲಿವೆ ಎನ್ನುತ್ತಾ ಇದರೊಂದಿಗೆ ಅಲ್ಲಿನವರ ಜಾನಪದ ಹಾಡು ಹಸೆ ಕಲೆ, ದೇಸೀ ಔಷಧ ಪದ್ಧತಿ, ಬೇಟೆಯ ಕೌಶಲ ಎಲ್ಲ ಸಾಯುತ್ತವೆ ಎನ್ನುವಲ್ಲಿ ಭಾಷೆ ಸಾಯುವುದೆಂದರೆ ಒಂದು ಜೀವನ ಪದ್ಧತಿಯೇ ಸಾಯುವುದೆನ್ನುವುದನ್ನು ಹೇಳುತ್ತಾರೆ. ಜಗತ್ತಿನ ಹಲವು ದೇಶಗಳ, ಭಾಷೆಗಳ ಉದಾಹರಣೆ ಕೊಡುತ್ತಾರೆ. ತಂತ್ರಜ್ಞಾನ ವಿಸ್ತರಿಸುತ್ತಾ ಹೋದಂತೆಲ್ಲಾ ಜೈವಿಕ ವೈವಿಧ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಜಗತ್ತಿನಲ್ಲಿ ಏಕರೂಪದ ಒಲೆ, ಏಕರೂಪದ ಅಡಿಗೆ ವಿಧಾನ, ಏಕರೂಪದ ಪಾಕ ಪುಸ್ತಕ ಬಂದಂತೆಲ್ಲಾ ಒಂದೇ ಬಗೆಯ ಕೃಷಿ ವಿಧಾನದಿಂದಾಗಿ ಗೋಧಿ, ಮೆಕ್ಕೆಜೋಳ, ಸೋಯಾ ಭತ್ತದ ಬೆಳೆಗಳಷ್ಟೇ ವಿಸ್ತರಿಸುತ್ತಾ ಹೋಗಿ ಸ್ಥಳೀಯ ತಳಿಗಳಾದ ಸೆಜ್ಜೆ, ನವಣೆ, ಬಾಲರ್ಿ ಆರಕಗಳೆಲ್ಲ್ಲಾ ಅವನತಿಯತ್ತ ಸಾಗುತ್ತಿದೆ. ಭಾಷೆಯ ಸ್ಥಿತಿಯೂ ಅಷ್ಟೇ. ಏಕರೂಪ ಶಾಲೆ, ಏಕರೂಪ ಪಠ್ಯಕ್ರಮ, ಏಕರೂಪ ಶಿಕ್ಷಣ ವಿಧಾನ, ಜಾರಿಗೆ ಬರುತ್ತಾ, ಜಗತ್ತಿಗೆಲ್ಲಾ ಇಂಗ್ಲಿಷ್, ಸ್ಪ್ಯಾನಿಷ್, ಚೀನಿ, ರಷ್ಯನ್ ಮತ್ತು ಹಿಂದಿ ಭಾಷೆ ವ್ಯಾಪಿಸುತ್ತವೆ (72) ಹೀಗೆ ಎಲ್ಲದರಲ್ಲಿಯೂ ವೈವಿಧ್ಯತೆ ನಾಶವಾಗಿ ಏಕರೂಪತೆಯ ಕಡೆ ಹೊರಳುತ್ತಿರುವ ಅಪಾಯದ ಬಗ್ಗೆ ಗಮನ ಸೆಳೆದಿದ್ದಾರೆ. ನಾವು ಕನ್ನಡವೇ ಸತ್ಯ, ನಿತ್ಯವೆಂದು ಹೇಳಿ ಸ್ಥಳೀಯ ಹಲವು ಭಾಷೆಗಳನ್ನು ಕಡೆಗಣಿಸಿದ್ದನ್ನು ಇಲ್ಲಿ ಗಮನಿಸಬಹುದು. ಉತ್ತರಕನ್ನಡದಲ್ಲಿಯೇ ಹಾಲಕ್ಕಿ ಭಾಷೆ, ಅಗೇರ ಭಾಷೆ, ಕುಣಬಿ ಭಾಷೆ, ಗೌಳಿ ಭಾಷೆ........... ಹೀಗೆ ಹಲವು ಭಾಷೆಗಳು ಕೀಳರಿಮೆಯಿಂದ ಮತ್ತು ಪ್ರೋತ್ಸಾಹದ ಕೊರತೆಯಿಂದ ಅಪ್ರಸ್ತುತವಾಗುತ್ತಿರುವುದನ್ನು ನೋಡಬಹುದು. ಹಾಗಾಗಿ ಭಾಷೆ ಉಳಿಸುವುದೆಂದರೆ ಜೀವನ ವಿಧಾನ ಉಳಿಸುವುದು, ಅವನ ಕಲೆ, ಸಾಹಿತ್ಯ ಇತ್ಯಾದಿ ಜೀವನ ಮೌಲ್ಯ ಉಳಿಸುವುದು. ಜೀವನ ಮೌಲ್ಯಗಳು ರೂಪಿತವಾದ ಪರಿಸರವನ್ನು ಗೌರವಿಸುವುದು. ಅದಕ್ಕೇ ಅವರು ಹುಲಿಯನ್ನು ಮೃಗಾಲಯದಲ್ಲೂ, ಭಾಷೆಯನ್ನು ಗ್ರಂಥಾಲಯದಲ್ಲೂ ಸಂರಕ್ಷಿಸಲು ಸಾಧ್ಯವೇ? ಎಂದು ಕೇಳುತ್ತಾ ಜೀವಿ ಮತ್ತು ಭಾಷೆ ಎರಡನ್ನು ಉಳಿಸಿಕೊಳ್ಳಲು ಅನುಸರಿಸುತ್ತಿರುವ ವಿಧಾನವನ್ನು ವ್ಯಂಗ್ಯವಾಡುತ್ತಾರೆ. ಆಧುನಿಕತೆ, ಅಭಿವೃದ್ಧಿಯ ಹುಚ್ಚು ವೇಗವನ್ನು ಅನುಸರಿಸಿಕೊಂಡಿರುವ ಮನುಷ್ಯ 'ನಮ್ಮೊಳಗಿನ ಜೈವಿಕ ಗಡಿಯಾರ ಕೆಟ್ಟು ಕೂತಿರುವುದನ್ನು ಗ್ರಹಿಸಲಾರದ ಸ್ಥಿತಿಯಲ್ಲಿದ್ದಾನೆ ಎಂದು ವಿಷಾದಿಸುತ್ತಾರೆ.

ಟಿಪ್ಪಣೆ-4

ಇತ್ತೀಚಿನ ದಶಕದಲ್ಲಿ ಈ ದೇಶವನ್ನು ಕಾಡುತ್ತಿರುವ ಜಾಗತಿಕರಣದ ಅಪಾಯಕಾರಿ ಬೆಳವಣಿಗೆಯ ಕುರಿತು, ಅದು ವಿಜ್ಞಾನದ ಮೇಲೆ, ಅಭಿವೃದ್ಧಿಯ ಸ್ವರೂಪದ ಮೇಲೆ, ಶಿಕ್ಷಣದ ಮೇಲೆ, ಆರೋಗ್ಯದ ಮೇಲೆ ಬೀರುತ್ತಿರುವ ಕೆಟ್ಟ ಪ್ರಭಾವದ ಕುರಿತು ಹಲವು ಲೇಖನದಲ್ಲಿ ಗಮನ ಸೆಳೆಯುತ್ತಾರೆ. ಮುಖ್ಯವಾಗಿ ಇಲ್ಲಿ  'ಜಾಗತೀಕರರಣದ  ದು:ಖಿ ಮುಖಗಳು' ಲೇಖನ ನೋಡಬಹುದು.
ಇದರಲ್ಲಿ ವಾಣಿಜ್ಯೋದ್ಯಮವೇ ಇಂದಿನ ಸಮಾಜದ ಮೂಲಮಂತ್ರವಾಗುತ್ತಿದೆ. ಹಿಂದೆಲ್ಲಾ ಅಪ್ರತಿಮ ಯೋಧರು, ಮಹಾಮುತ್ಸದ್ದಿಗಳು, ಕಲಾವಿದರು, ಲೇಖಕರು, ವಿದ್ವಾಂಸರು ಆಯಾ ಸಮಾಜದ ಹೀರೋಗಳೆನಿಸುತ್ತಿದ್ದರು. ಈಗ ಅವರೆಲ್ಲ ಮೂಲೆ ಗುಂಪಾಗುತ್ತಾರೆ. ಬಿಲ್ ಗೇಟ್ಸ, ಅಜೀಂ ಪ್ರೇಮ್ಜಿ, ನಾರಾಯಣ ಮೂತರ್ಿಯಂಥವರು ಹೀರೋಗಳಾಗುತ್ತಿದ್ದಾರೆ. ಮಾಧ್ಯಮಗಳು ಹಾಡಿ ಹೊಗಳುತ್ತವೆ. ಎನ್ನುವ ಹೆಗಡೆಯವರು ಪಾಶ್ಚಾತ್ಯ ಸಮಾಜದ ಕೊಳ್ಳುಬಾಕತನವನ್ನೂ ಲಾಭಕೋರ ಮನೋವೃತ್ತಿಯನ್ನೂ ಟೀಕಿಸುತ್ತಿದ್ದ ಭಾರತ, ಬ್ರೆಜಿಲ್, ಚೀನಾದಂಥ ರಾಷ್ಟ್ರಗಳು ಈಗ ಪೈಪೋಟಿ ಮೇಲೆ ಅಂಥದ್ದಕ್ಕೆ ಪ್ರೋತ್ಸಾಹ ನೀಡುವ ರಫ್ತು ಕಾರಿಡಾರ್ಗಳನ್ನೂ ಏಕಗವಾಕ್ಷಿಗಳನ್ನೂ ಟೇಕ್ ಪಾರ್ಕಗಳನ್ನೂ ನಿಮರ್ಿಸತೊಡಗಿವೆ. ಎನ್ನುವ ವಿಷಾದಕ್ಕೆ ಅರ್ಥ ಇದೆ. ಮುಂದುವರಿದು ಭಾರತಕ್ಕೆ 1429 ದಿನಬಳಕೆ ವಸ್ತುಗಳನ್ನು ವಿದೇಶಿಕಂಪನಿಗಳು ಭಾರತಕ್ಕೆ ತಂದು ಮಾರಾಟ ಮಾಡುವ ಒಪ್ಪಂದಕ್ಕೆ ಸಹಿಹಾಕಿದ ಘಟನೆಯ ಅಪಾಯವನ್ನು ಇವರು ಇಲ್ಲಿ ವಿವರಿಸುತ್ತಾರೆ. .......ಇದು ಭಾರತದ ನೆಲ ನಡುಗಿಸಬಲ್ಲ ಸಂಗತಿ ಏಕೆಂದರೆ, ಸ್ವಾತಂತ್ರ್ಯ ಬಂದ ಲಾಗಾಯ್ತೂ ಇವೆಲ್ಲಾ ಸಾಮಗ್ರಿಗಳನ್ನು ವಿದೇಶೀಯರು ನಮ್ಮಲ್ಲಿ ತಂದು ಸುರಿಯದ ಹಾಗೆ ನಾವು ನಿರ್ಭಂಧ ಹಾಕಿಕೊಂಡಿದ್ದೆವು. ಇವು ಬಂದಿದ್ದೇ ಆದರೆ ನಮ್ಮ ರೈತರು, ನಮ್ಮ ಕೂಲಿಕಾರರು, ನಮ್ಮ ಕುಶಲಕಮರ್ಿಗಳು, ನಮ್ಮ ಕಿರು ಕೈಗಾರಿಕೋದ್ಯಮಿಗಳು ಅಪ್ಪಚ್ಚಿ ಆಗುತ್ತಾರೆ. ವಿದೇಶಿ ವಸ್ತುಗಳೊಂದಿಗೆ ಪೈಪೋಟಿ ನಡೆಸಲಾರದೇ ಸೋಲುತ್ತಾರೆ ಎಂಬ ಭಾವನೆ ಇತ್ತು. ಈಗ ಹಾಗೆಯೇ ಆಗಿದೆ ಕೂಡ. ವಿದರ್ಭನ್ನೊಳಗೊಂಡಂತೆ ದೇಶದಲ್ಲಿ ನಡೆದ ರೈತರ ಆತ್ಮಹತ್ಯೆ, ತೀವೃಗೊಡ ನಿರುದ್ಯೋಗ, ಕೆಲಸದ ಅಭದ್ರತೆ, ಬೆಲೆ ಏರಿಕೆ. . . ಸಾಮಾನ್ಯ ಜನರ ಬದುಕನ್ನು ದುಸ್ತರಗೊಳಿಸಿದೆ. ಮತ್ತೆ ಇತ್ತೀಚೆಗೆ ಸಕರ್ಾರ ಜಾರಿಗೆ ತಂದ ಸಗಟು  ವ್ಯಾಪಾರದಲ್ಲಿ ವಿದೇಶಿ ಭಂಡವಾಳಕ್ಕೆ ಅವಕಾಶದಿಂದಾಗಿ ಮತ್ತ್ತಿಷ್ಟು ಜನ ಬೀದಿಗೆ ಬೀಳುತ್ತಿದ್ದಾರೆ.  . . . ಇದು ರೈತರ ಸ್ಥಿತಿಯಾದರೆ ಚಿಕ್ಕ ಉದ್ಯಮಿಯ ಪರಿಸ್ಥಿತಿ ಇನ್ನೂ ಗಂಭೀರವಾಗುವ ಸಾಧ್ಯತೆ ಕಾಣುತ್ತದೆ. ಕಳೇದ ಮೂರು ವರ್ಷಗಳಲ್ಲಿ ನಮ್ಮ ದೇಶದ 40% ಚಿಕ್ಕ ಉದ್ಯಮಗಳು ಸ್ಥಗಿತಗೊಂಡಿವೆ. ಮನೆ ಬಳಕೆಯ ಅದೆಷ್ಟೋ ಉಪಕರಣಗಳನ್ನು ಸಿದ್ಧ ಪಡಿಸುತ್ತಿದ್ದ ಲಕ್ಷಾಂತರ ಘಟಕಗಳು, ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆಯಿದೆ. ಎನ್ನುತ್ತಾ ವಿದೇಶಿ ಸರಕುಗಳು ದೇಶಕ್ಕೆ ಬಂದಾಗ ಆಗುವ ಅಪಾಯದ ಬಗ್ಗೆ ಸೋದಾಹರಣ ವಿವರಿಸುತ್ತಾರೆ.

ಹಾಗೆಯೇ ಜಾಗತಿಕರಣದಿಂದ ಜಾಗತಿಕವಾಗಿ ಬಡವ ಬಲ್ಲಿದನ ನಡುವೆ ಹೆಚ್ಚುತ್ತಿರುವ ಕಂದಕದ ಬಗ್ಗೆ ಗಮನ ಸೆಳೆಯುತ್ತಾರೆ. ಶ್ರೀಮಂತರು ಎಷ್ಟು ಶ್ರೀಮಂತರಾಗುತ್ತಿದ್ದಾರೆಂದರೆ ಮೈಕ್ರೋಸಾಫ್ಟ ಕಂಪನಿಯ ಬಿಲ್ ಗೇಟ್ಸನ ಸಂಪತ್ತು ಜಗತ್ತಿನ 85 ದೇಶಗಳ ಒಟ್ಟೂ ನಿವ್ವಳ ಉತ್ಪನ್ನಕ್ಕಿಂತ ಹೆಚ್ಚಿರುವುದನ್ನು ಉದಾಹರಿಸುತ್ತಾರೆ. ಜಾಗತೀಕರಣದ ಇನ್ನೊಂದು ಅಪಾಯದ ಬಗ್ಗೆ ಗಮನ ಸೆಳೆಯುತ್ತಾ ವಾಣಿಜ್ಯ ಸಂಸ್ಥೆಗಳೇ ಮುಂದಿನ ಭವಿಷ್ಯವನ್ನು ರೂಪಿಸಲು ಹೊರಟಿವೆ. ಆ ಜಗತ್ತಿನಲಿ ದಯೆ, ದಾಕ್ಷಿಣ್ಯ, ಸಹಿಷ್ಣುತೆ ಅನುಕಂಪಗಳಂಥ ಕೋಮಲ ಭಾವನೆಗಳಿಗೆ ಸ್ಥಾನವಿಲ್ಲ. ಲಾಭಗಳಿಕೆ, ನಿರ್ದಯ ಆಥರ್ಿಕ ದಕ್ಷತೆ, ನಿರಂತರ ಅಭಿವೃದ್ಧಿ ಇವು ಈ ಜಗತ್ತಿನ ಲಾಂಛನಗಳಾಗಿರುತ್ತವೆ. ಅಸಮಾನತೆ, ಅನ್ಯಾಯ, ಅಶಕ್ತತೆ, ಅಭದ್ರತೆ ಇವುಗಳತ್ತ ಲಕ್ಷ್ಯಕೊಡಲು ಯಾರಿಗೂ ಬಿಡುವಿರುವುದಿಲ್ಲ. ಹೀಗೆ ದೇಶವೊಂದರ ಭವಿಷ್ಯವಿರುವುದು ಈ ಜಾಗತೀಕರಣದ ಜಾರಿಯಲ್ಲಿ ಎನ್ನುವ ಬಂಡವಾಳಶಾಹಿ ಮತ್ತು ಅಮೇರಿಕನ್ ಸಾಮ್ರಾಜ್ಯಶಾಹಿಯ ಒಳ ಹಿತಾಸಕ್ತಿಯನ್ನು ಆಧಾರ ಸಹಿತ ಬಯಲಿಗಿಡುತ್ತಾರೆ.

  ಕನರ್ಾಟಕ ಗಡಿಯಲ್ಲಿರುವ 'ಪಡ್ರೆ' ಎಂಬ ಊರಿನಲ್ಲಿ ಎಂಡೋಸಲ್ಫಾನ್ನಿಂದ ನಡೆದ ಅಪಾಯಕಾರಿ ಬೆಳವಣಿಗೆ ಕುರಿತು, ಭಾರತದಲ್ಲಿ ಶೀಘ್ರವಾಗಿ ಕ್ಷೀಣಿಸುತ್ತಿರುವ ಕಪ್ಪೆಗಳ ಸಂತತಿಯ ಕುರಿತು, ಬಾಯೊಳಗೆ ಅಸಂಖ್ಯ ಪ್ರಮಾಣದಲ್ಲಿರುವ ಏಕಾಣು ಜೀವಿಗಳ ಕುರಿತು....... ವಿದೇಶಿ ಯಾತ್ರೆಗೆ ಹೊರಟಿರುವ ಬಸವನ ಹುಳುವಿನ ಕುರಿತು........ ಮನುಷ್ಯನ ಪ್ರಯೋಗಕ್ಕೆ ಬಲಿಯಾದ ಮಂಗಗಳ ಕುರಿತು, ಭೂದಿನದ ಕುರಿತು, ಪ್ರನಾಳ ಶಿಶುವಿನ ಕುರಿತು, ವಿಶ್ವ ವಿಜ್ಞಾನದ ದಿನ, ಕುಲಾಂತರಿ ತಳಿ, ಬಾಯ್ಯಾಕಾಶಕ್ಕೆ ಕ್ಷಿಪಣಿ ಪ್ರಯಾಣ. . . . ಹೀಗೆ ನೂರಾರು ವಿಷಯಗಳ ಕುರಿತು ಬರೆಯುವಾಗ ನಾಗೇಶ ಹೆಗಡೆಯವರು ಅದಕ್ಕಿರುವ ಸಮಾಜೋಆಥರ್ಿಕ ಮುಖವನ್ನು ಕಡೆಗಣಿಸುವುದಿಲ್ಲ. ಇಡೀ ಜಾಗತಿಕ ಹಂತದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಕಣ್ಣೋಟದಲ್ಲಿಯೇ ಇದು ವಿಸ್ತಾರ ಪಡೆದುಕೊಳ್ಳುತ್ತವೆ.

ಟಿಪ್ಪಣೆ-5

 'ಭವಿಷ್ಯದ ವಿರುದ್ಧ ಬಂಡಾಯ' ಇನ್ನೊಂದು 'ಪತ್ರಿಕಾ ಸ್ವಾತಂತ್ರ್ಯದ ಐದು ಮುಜುಗರದ ಮುಖಗಳು' ಎನ್ನುವ ಎರಡು ಲೇಖನ ಅವರ ಬರಹದ ಸೈದ್ಧಾಂತಿಕ ಖಚಿತತೆಯನ್ನು ಸ್ಪಷ್ಟಪಡಿಸುತ್ತದೆ. ಬಂಡವಾಳಶಾಹಿ ತಂತ್ರಜ್ಞಾನ ಎಂಥ ಪ್ರಬಲ ಗಣತಂತ್ರವನ್ನೂ ತನ್ನ ಅಡಿಯಾಳಾಗಿಸಿಕೊಳ್ಳುತ್ತದೆ. ಜಾಗತೀಕರಣದ ನಂತರವಂತೂ ಅದು ನಿಚ್ಚಳವಾಗಿ ಕಾಣಿಸತೊಡಗಿದೆ ಎನ್ನುವ ನಾಗೇಶ ಹೆಗಡೆಯವರು ಬಂಡವಾಳಶಾಹಿ ಲಾಭಕೋರ ವ್ಯವಸ್ಥೆ ಪ್ರತಿಭಟನೆಯನ್ನು ಗೌಣಗೊಳಿಸುವ ಹಲವು ತಂತ್ರಗಳನ್ನು ಅನುಸರಿಸುತ್ತವೆ. ಸಂಘಟನೆಯಲ್ಲಿ ಒಡಕು ಹುಟ್ಟಿಸುವುದು, ಮುಂದಾಳುಗಳನ್ನು ಖರೀದಿಸುವುದು, ವಿರೋಧಿಗಳು ವಿಜ್ಞಾನಿಗಳಾದರೆ ಅಂಥವರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಬಾಯಿ ಮುಚ್ಚಿಸುವುದು, ಸ್ಥಳೀಯರಿಗೆ ಅಷ್ಟಷ್ಟು ಉದ್ಯೋಗ ಭರವಸೆ ನೀಡುವುದು, ದೇವಾಲಯ ಕಟ್ಟಿಸುವುದು, ಆಸ್ಪತ್ರೆ ಮತ್ತು ಶಾಲೆಗೆ ಗ್ರಂಥಾಲಯದಂಥ ಮುಖಲೇಪನ ಮಾಡುವುದು, ಪರಿಸರವಾದಿಗಳಾದರೆ ಅಲ್ಲಲ್ಲಿ ಗಿಡಮರಗಳನ್ನು ನೆಟ್ಟು ಕಣ್ಣೊರೆಸುವುದು ಮುಂತಾದ ಪರೋಕ್ಷ ಮಾರ್ಗವನ್ನು ಅನುಸರಿಸುವುದನ್ನು ವಿವರಿಸುತ್ತಾರೆ ಮತ್ತು ಸಂಘಟಿತ ಕಾಮರ್ಿಕರು ಎಲ್ಲೆಲ್ಲಿ ಬಂಡಾಯ ಏಳುತ್ತಾರೋ ಅಲ್ಲೆಲ್ಲ ವಿಕೇಂದ್ರೀಕರಣವನ್ನು ಜಾರಿಗೆ ತಂದು ಬಿಡುವುದು ಕೂಡ ಇನ್ನೊಂದು ತಂತ್ರ ಎನ್ನುತ್ತಾರೆ. ಇದಕ್ಕೆ ಅವರು ಮುಂಬೈ ಮತ್ತು ಕನರ್ಾಟಕದ ದಾವಣಗೆರೆಯ ಜವಳಿ ಕಾಮರ್ಿಕರ ಸ್ಥಿತಿಯನ್ನು ಉದಾಹರಿಸುತ್ತಾರೆ. ಹೀಗೆ ಲಾಭದ ಬೆನ್ನು ಹತ್ತಿ ಕಾಮರ್ಿಕರನ್ನು, ಪ್ರತಿಭಟನೆಕಾರರನ್ನು, ಆಪೋಷಣೆ ತೆಗೆದುಕೊಳ್ಳುತ್ತಲೇ ಮುನ್ನುಗ್ಗುತ್ತಿರುವ ಬಂಡವಾಳಶಾಹಿ ಅಭಿವೃದ್ಧಿ  ಸ್ವರೂಪವನ್ನು ನಾಗೇಶ ಹೆಗಡೆಯವರು ಸರಿಯಾಗಿಯೇ ಗುರುತಿಸಿದ್ದಾರೆ. ಇಂದು ಈ ದೇಶದಲ್ಲಿ ನಡೆಯುತ್ತಿರುವುದೂ ಇದೇ ಅಲ್ಲವೆ? ಮಾನವ ಸಂಪನ್ಮೂಲಗಳನ್ನು ಸಂಪೂರ್ಣ ಕಡೆಗಣಿಸಿ ಯಂತ್ರಾಧಾರಿತ ಅಭಿವೃದ್ಧಿಯು ದೇಶವನ್ನು ಆಕ್ರಮಿಸಿದೆ. ಇಂದು ಈ ದೇಶಕ್ಕೆ ಲಗ್ಗೆ ಇಡುತ್ತಿರುವ ಮಲ್ಟಿನ್ಯಾಶನಲ್ ಕಂಪನಿಗಳಂತೂ ಆಳುವ ಸಕರ್ಾರವನ್ನೇ ಕೊಂಡುಕೊಂಡು ದೇಶವನ್ನು ಲೂಟಿ ಹೊಡೆಯುವುದನ್ನು ನೋಡುತ್ತಿದ್ದೇವೆ. ಈ ದೇಶದ ಯಾವುದೇ ಕಾನೂನುಗಳೂ- ಕಾಮರ್ಿಕ ಕಾನೂನು, ಪರಿಸರ ಸಂಬಂಧಿ ಕಾನೂನು ಇತ್ಯಾದಿ- ಇವರಿಗೆ ಬೈಂಡಿಂಗ ಆಗುತ್ತಿಲ್ಲ. ದೇಶವನ್ನು ಕೊಳ್ಳೆ ಹೊಡೆಯಲು ನಮ್ಮದೇ ಸರಕಾರ ಬೆಂಗಾವಲಾಗಿ ನಿಂತಿರುವುದು ಮಾತ್ರ ಕೇದಕರ.ಹೀಗೆ ಬಂಡವಾಳಶಾಹಿ ಅಭಿವೃದ್ದಿಯ ಸ್ವರೂಪದ ಅಪಾಯ ಹೇಳುವ ಹೆಗಡೆಯವರು ಆಗಾಗ ಸಮಾಜವಾದಿ ಅಭಿವೃದ್ದಿಯ ಸ್ವರೂಪವನ್ನೂ ಇದರೊಂದಿಗೆ ಸೇರಿಸಿದ್ದು ಆಶ್ಚರ್ಯವನ್ನುಂಟು ಮಾಡುತ್ತದೆ.

ಅವರ ಬರವಣಿಗೆಯ ನಿಷ್ಠುರತೆಯನ್ನು ಹೇಳುವ ಇನ್ನೊಂದು ಮುಖ್ಯ ಲೇಖನ 'ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು'. ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯವೆಂದರೆ ಏನು? ಎನ್ನುವ ಕುರಿತು 5 ನೀತಿಪಾಠವನ್ನು ಮುಂದಿಡುತ್ತಾರೆ.
1) ಪತ್ರಿಕಾ ಸ್ವಾತಂತ್ರ್ಯವೆಂದರೆ ಸಂಪಾದಕರ ಸ್ವಾತಂತ್ರ್ಯವಷ್ಟೆ. ವರದಿಗಾರರ ಸ್ವಾತಂತ್ರ್ಯ ಅಲ್ಲ.
2) ಪತ್ರಿಕಾ ಸ್ವಾತಂತ್ರ್ಯವೆಂದರೆ ಅದು ಸಂಪಾದಕರ ಸ್ವಾತಂತ್ರ್ಯವಲ್ಲ ಅದು ಪತ್ರಿಕಾ ಮಾಲಿಕನ ಸ್ವಾತಂತ್ರ್ಯ.
3) ಪತ್ರಿಕಾ ಸ್ವಾತಂತ್ರ್ಯವೆಂದರೆ ಅದು ಪತ್ರಿಕಾ ಮಾಲಿಕನ ಸ್ವಾತಂತ್ರ್ಯ ಅಲ್ಲ .ಅದು ಪತ್ರಿಕಾ ಪ್ರಸರಣಾಧಿಕಾರಿಗಳ ಸ್ವಾತಂತ್ರ್ಯ.
4) ಪತ್ರಿಕಾ ಸ್ವಾತಂತ್ರ್ಯವೆಂದರೆ ಅದು ಜಾಹಿರಾತು ವಿಭಾಗದ ಮುಖ್ಯಸ್ಥರ ಸ್ವಾತಂತ್ರ್ಯ.
 ಎಂಬುದನ್ನು ವಿವಿಧ ಉದಾಹರಣೆಯ ಮೂಲಕ ಸಾಬೀತು ಪಡಿಸುತ್ತಾ ಬರುತ್ತಾರೆ. ಲೇಖನದ ಕೊನೆಗೆ ಬಂದಾದ ಪತ್ರಿಕಾ ಸ್ವಾತಂತ್ರ್ಯವೆಂದರೆ ವರದಿಗಾರನ ಸ್ವಾತಂತ್ರ್ಯವೂ ಅಲ್ಲ, ಸಂಪಾದಕರ ಸ್ವಾತಂತ್ರ್ಯವೂ ಅಲ್ಲ. ಪತ್ರಿಕಾ ಮಾಲಿಕರ ಸ್ವಾತಂತ್ರ್ಯವೂ ಅಲ್ಲ. ಅದು ದುಡ್ಡಿನ ದೊರೆಗಳ ಸ್ವಾತಂತ್ರ್ಯ(5 ನೇ ನೀತಿ) ಎನ್ನುತ್ತಾರೆ. ಸ್ವತಃ ಪತ್ರಿಕೆಯೊಂದರ ಉಪಸಂಪಾದಕರಾಗಿರುವಾಗಲೇ ಇಂಥದೊಂದು ಲೇಖನ ಬರೆಯುವ ಧೈರ್ಯ ತೋರಿದವರು ಹೆಗಡೆಯವರು. ಪತ್ರಿಕೆ ಎನ್ನುವುದು ಇಂದು ಜನಸಾಮಾನ್ಯರ ಮುಖವಾಣಿಯಾಗಿ ಉಳಿದಿಲ್ಲ. ಉಳ್ಳವರ ಮಜರ್ಿ ಕಾಯುವ ಅಸ್ತ್ರವಾಗಿಬಿಟ್ಟಿದೆ. ಕಾಣದ ಕೈ ಇಡೀ ಪತ್ರಿಕೆಯ ಸುದ್ದಿಸ್ವರೂಪವನ್ನು, ಸುದ್ದಿ ಭವಿಷ್ಯವನ್ನು ನಿರ್ಧರಿಸುವ ಹಂತಕ್ಕೆ ಬಂದಿದೆ. ಎಲೆಕ್ಟ್ರಾನಿಕ್ ಮಾಧ್ಯಮವೂ ಸೇರಿದಂತೆ ಇಂದು ಬಹುತೇಕ ಮಾಧ್ಯಮಗಳು ಕೋಟ್ಯಾಧಿಪತಿ ರಾಜಕಾರಣಿಗಳ, ಉದ್ಯಮಪತಿಗಳ ಒಡೆತನಕ್ಕೆ ಸೇರಿವೆ. ವಿದೇಶಿ ಪತ್ರಿಕೆಗಳನ್ನು ಇಲ್ಲಿ ಪ್ರವೇಶಿಸಲು ವೇದಿಕೆ ಸಿದ್ಧವಾಗುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮಗಳ ಸಾವಕಾಶವಾಗಿ ತನ್ನ ಎಲ್ಲಾ ಸ್ವಾತಂತ್ರ್ಯವನ್ನು ಕಳೆದುಕೊಂಡು ಜಾಗತೀಕರಣದ ಮುಖವಾಣಿಯಾಗುತ್ತಿರುವ ಅಪಾಯವನ್ನು ಇಲ್ಲಿ ದಿಟ್ಟವಾಗಿಯೇ ವಿವರಿಸಿದ್ದಾರೆ.

ಉದ್ದಿಮೆಪತಿಗಳೇ ಈ ದೇಶವನ್ನಾಳುವ ಹುನ್ನಾರ ಒಂದೆಡೆಯಾದರೆ ಅವರ ಪೂರಕವಾಗಿ ಲಾಭ ತರುವ ನೀತಿಯನ್ನು ಜಾರಿಗೊಳಿಸುವ ಸರಕಾರದ ಕ್ರಮ ಇನ್ನೊಂದು ಕಡೆ. 'ಚನರ್ೊಬಿಲ್ ಚಂಡಿಯ ರುಂಡ ಮಾಲೆ', 'ಗಣಿಗಳ ಕಪ್ಪುಹಣ ಮತ್ತು ಕಾಮರ್ಿಕರ ಬಿಳಿ ಮೃತ್ಯು' 'ತುತ್ತಿನ ಮೇಲೆ ಶಸ್ತ್ರಾಸ್ತ್ರ' -ಹೀಗೆ ಹಲವು ಲೇಖನಗಳು ಇಲ್ಲಿ ಗಮನಾರ್ಹ.ಬಂಡವಾಳಶಾಹಿ ಜಗತ್ತಿನ ಕೌರ್ಯವನ್ನು ತೆರೆದಿಡುತ್ತದೆ.

ಟಿಪ್ಪಣೆ-6

ನಾಗೇಶ ಹೆಗಡೆಯವರ ಬರಹ ಎಂದೂ ಕೋಮುವಾದದ ಜೊತೆ ನಿಂತಿಲ್ಲ. ಸಾಧ್ಯವಾದಲೆಲ್ಲಾ ಕೋಮುಗಲಭೆಗೆ ಕಾರಣವಾಗಬಹುದಾದ ಸಂಗತಿಗಳನ್ನು ವೈಜ್ಞಾನಿಕವಾಗಿ ವಿವರಿಸುತ್ತಾರೆ. ಇಂಥ ಒಂದು ಲೇಖನ 'ಗೋವಿನ ಸುತ್ತ........ಮುಗಿಯದ ವೃತ್ತ'. ಒಂದು ಕಾಲದಲ್ಲಿ ಗೋವು ಕೃಷಿಕರ ಆಪ್ತ 'ಸಖ' ನಾಗಿತ್ತು. ಇಂದು ಅದು ಕೋಮು ಗಲಭೆಗೆ ಒಂದು ನೆಪ ಆಗಿದೆ. ಗೋಹತ್ಯಾ ನಿಷೇದ ಕಾನೂನು ಜಾರಿ ಮಾಡುವ ಹುನ್ನಾರ ಜೋರಾಗಿ ನಡೆಯುತ್ತಿರುವ ಕಾಲದಲ್ಲಿ ನಾಗೇಶ ಹೆಗಡೆಯವರ ಈ ಲೇಖನ ಸನಾತನವಾದಿಗಳಿಗೆ ಕೊಟ್ಟ ತಣ್ಣನೆಯ ಉತ್ತರದಂತಿದೆ.
ತಲೆತಲಾಂತರದಿಂದ ಆಹಾರವಾಗಿ ಉಪಯೋಗಿಸುತ್ತಿರುವ ಗೋವು ಇತ್ತೀಚೆಗೆ 'ಗೋಮಾತೆ'ಯಾಗಿ ದಲಿತ ಮತ್ತು ಮುಸ್ಲಿಂರ ವಿರುದ್ಧ ಹಿಂದೂ ಕೋಮುವಾದಿಗಳು ನಡೆಸುತ್ತಿರುವ ಸಂಚಿನ ಭಾಗವಾಗಿದೆ. ದಲಿತರು ಮತ್ತು ಮುಸ್ಲೀಮರು ಇದನ್ನು ಆಹಾರವಾಗಿ ಉಪಯೋಗಿಸಿದರೆ ಹಿಂದುಗಳ ಭಾವನೆಗೆ ದಕ್ಕೆ ಆಗುತ್ತದೆಯೆಂದು ಬೊಬ್ಬೆ ಹಾಕುತ್ತಿರುವಾಗ ಆಧುನಿಕ ಕೈಗಾರಿಕೆಯಲ್ಲಿ ,ಔಷಧೀಯ ರಂಗದಲ್ಲಿ, ಆಹಾರದಲ್ಲಿ, ಬಣ್ಣದಲ್ಲಿ ಹೇಗೆ ಗೋವಿನ ಉತ್ಪನ್ನಗಳು ಬಳಕೆಯಾಗುತ್ತವೆ ಎಂದು ವಿವರಿಸಿದ್ದಾರೆ.,

ಬ್ರೇಕು,ಟಯರು, ಡಾಂಬರಿನಲ್ಲಿ ಮಾತ್ರವಲ್ಲ ಇನ್ನು ಮೂಳೆ ಗೊರಸು ಮತ್ತು ಕೊಂಬುಗಳನ್ನು ಕಾಯಿಸಿದಾಗ ಭಕ್ಷ್ಯ ಯೋಗ್ಯ ಟ್ಯಾಲೆ ಎಣ್ಣೆ ದೊರಕುತ್ತದೆ. ಇದು ಚ್ಯುಯಿಂಗ್ ಗಮ್, ಬೇಕರಿ ಖಾದ್ಯಗಳಲ್ಲಿ ಬಳಕೆಯಾಗುತ್ತದೆ. ದನದ ಅಂಗಾಂಶಗಳನ್ನು ಜೋಡಿಸುವ ಕೊಲಾಜಿನ್ ಎಂಬ ದ್ರವ್ಯಕ್ಕೆ ಭಾರೀ ಬೇಡಿಕೆಯಿದೆ. ಚರ್ಮವನ್ನು ಹಿಂಡಿದಾಗಲೂ ಕೊಲಾಜಿನ್ ಸಿಗುತ್ತದೆ. ಇದರ ವೈದ್ಯಕೀಯ ಉಪಯೋಗದ ಪಟ್ಟಿಯೇ ಸಾಕಷ್ಟು ದೀರ್ಘವಿದೆ. ಹಿರಿಯ ನಾಗರಿಕರಿಗೆ ಮೂತ್ರವಿಸರ್ಜನೆ ಅನಿಯಂತ್ರಿತವಾದಾಗ ಇದನ್ನೇ ಚುಚ್ಚು ಮದ್ದಿನ ಔಷಧವಾಗಿ ಕೊಡುತ್ತಾರೆ. ಗಾಯಗಳಿಗೆ ಸುತ್ತಲೆಂದು ನಂಜುನಿರೋಧಕ ಬ್ಯಾಂಡೇಜ್ಗಳ ತಯಾರಿಕೆಗೆ ಇದೇ ಬೇಕು. ಎಂದು ಒಂದಲ್ಲಾ ಒಂದು ರೀತಿಯಲ್ಲಿ ಮನುಷ್ಯ ದನದ ಕೊಬ್ಬಿನ ಉತ್ಪನ್ನ ಬಳಸುವುದು ಅನಿವಾರ್ಯ ಅನ್ನುತ್ತಾರೆ. ಮುಂದುವರಿದು ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳಪೊರೆಯಿಂದ ಹೆಪಾರಿನ್ ಎಂಬ ಔಷಧವನ್ನು ತಯಾರಿಸುತ್ತಾರೆ. ವಿಶೇಷವಾಗಿ ಗ್ಯಾಂಗ್ರಿನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಅಡ್ರೆನಾಲಿನ್ ಗ್ರಂಥಿಗಳಿಂದ ತಯಾರಾದ ಸ್ಟಿರಾಯಿಡ್ ತೀವ್ರ ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಾರೆ. ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ, ರಕ್ತದ ಒತ್ತಡವನ್ನು ಹೆಚ್ಚಿಸಲು ಹೃದ್ರೋಗ ಚಿಕಿತ್ಸೆಗೆ ಮಧುಮೇಹಿಗಳ ಇನ್ಸುಲಿನ್ ಗೆ ಸಂಧಿವಾತ, ಕೀಲು ನೋವುಗಳಿಗೆ ಇದನ್ನು ಬಳಸುತ್ತಾರೆ. ಗ್ರಿಸರಿನ್, ನೋವುನಿವಾರಕ ಎಣ್ಣೆ,ಸೌಂದರ್ಯವರ್ಧಕ ಕೋಲಾಜಿನ್ ಕ್ರೀಮ್, ಫೋಟೊ ಫಿಲ್ಮ ಹೀಗೆ ಇದರ ಕತೆ ಮುಂದುವರಿಯುತ್ತದೆ. 'ಇದು ಮುಗಿಯುವ ಕಥೆಯಲ್ಲ ಎನ್ನುತ್ತ ಪುಟ ಮಗುಚಿ ಎದ್ದು ಹೊರಟಿರಾ? ಹೊರಡುವ ಮುನ್ನ ಮುದ್ರಿತವಾದ ಅಕ್ಷರಗಳತ್ತ ಒಮ್ಮೆ ಕಣ್ಣು ಹಾಯಿಸಿ. ಇದಕ್ಕೆ ಬಳಸಿದ ಇಂಕಿನಲ್ಲಿಯೂ ಗೋವಿನಂಶವಿದೆ.' ಎನ್ನುವ ಮೂಲಕ ವೈಜ್ಞಾನಿಕವಾಗಿ ಎಲ್ಲರು ದನವನ್ನು ಸೇವಿಸುವವರೆ ಎನ್ನುತ್ತಾರೆ.

ಟಿಪ್ಪಣೆ - 7

ಆದರೆ ಕೆಲವು ಸಂದರ್ಭದಲ್ಲಿ ಅವರ ಕೆಲವು ತೀಮರ್ಾನಗಳು ಇನ್ನಷ್ಟು ಹೆಚ್ಚು ಚಚರ್ೆ ಬಯಸುತ್ತವೆ. ಉದಾಹರಣೆ ಸ್ಥಳೀಯ ಭಾಷೆ ಉಳಿದಷ್ಟು ದಿನ ಮಾತ್ರ ಅಲ್ಲಿ ಏನಿದೆ ಎಂಬುದು ಗೊತ್ತಿರುತ್ತದೆ. ಅಂಥ ಆದಿವಾಸಿಗಳ ಮಕ್ಕಳು ಶಾಲೆಯ ಮೆಟ್ಟಿಲು ಹತ್ತಿ ಹೊರಪ್ರಪಂಚಕ್ಕೆ ಕಾಲಿಟ್ಟರೆ ಸಾಕು. ಭಾಷೆಯ ನೆನಪು ಮರೆಯಾಗುತ್ತದೆ. ಜ್ಞಾನದ ಅವಸಾನವಾಗುತ್ತದೆ (ಪು.71) ಎಂದು ವಿಷಾದದಿಂದ ಹೇಳುತ್ತಾರೆ. ಹಾಗಾದರೆ ಆದಿವಾಸಿಗಳ ಮಕ್ಕಳು ಹೊರಪ್ರಪಂಚಕ್ಕೆ ತೆರೆದುಕೊಳ್ಳದೆ ಎಷ್ಟು ದಿನ ಹಾಗೇ ಇರಬೇಕು? ಅವರು ಹೊರ ಪ್ರಪಂಚಕ್ಕೆ ತೆರೆದುಕೊಂಡೂ ಭಾಷೆ, ಕಲೆ, ಜ್ಞಾನ ಉಳಿಸಿಕೊಳ್ಳುವುದು ಹೇಗೆ? ಎಂದು ಆಲೋಚಿಸಬೇಕಾಗಿದೆ.

ಹಲವು ಸಂದರ್ಭದಲ್ಲಿ ಅವರು ಈಗಿರುವ 'ಅಭಿವೃದ್ಧಿ' ಯ ಕಲ್ಪನೆಯನ್ನು ಸಂಪೂರ್ಣ ವಿರೋಧಿಸುತ್ತಾರೆ. ಅಂದರೆ ಅಭಿವೃದ್ಧಿಯ ವಿಕಾರ ಮುಖವನ್ನು ತಿರಸ್ಕರಿಸಬೇಕೆನ್ನುವುದು ಆಶಯ. ಇದಕ್ಕೆ ಬದಲಾಗಿ ಮಾನವ ಮುಖಿ ತಂತ್ರಜ್ಞಾನ ಹೇಗಿರಬೇಕು ಎನ್ನುವಾಗ ಗಾಂಧೀಜಿ ಹೇಳಿದ ಹೊಸ ತಂತ್ರಜ್ಞಾನ ಹೇಗಿರಬೇಕೆಂದರೆ ನಮ್ಮ ಶರೀರದಂತಿರಬೇಕು. ನಮ್ಮ ಬಾಯಲ್ಲಿ ಅಗಿಯುವ ಯಂತ್ರವಿದೆ. ಅದಕ್ಕೆ ಬೇಕಾದ ಶಕ್ತಿ ಮೂಲವನ್ನು ದೇಹವೇ ಒದಗಿಸುತ್ತದೆ. ಈ ದೇಹದಿಂದ ಹೊರ ಬರುವ ತ್ಯಾಜ್ಯ ವಸ್ತುಗಳು ಇನ್ನೊಂದು ಜೀವಿಯ ಬದುಕಿಗೆ ಆಧಾರವಾಗುತ್ತದೆ (ಪು.32) ಆದರೆ ಈಗಿನ ಅಭಿವೃದ್ಧಿ ಸಮುದಾಯಕ್ಕಷ್ಟೇ ಅಲ್ಲ, ತನ್ನ ತ್ಯಾಜ್ಯದಿಂದ ಇತರ ಜೀವಿಗಳಿಗೂ ಮಾರಕ ಎನಿಸಿದೆ ಎನ್ನುತ್ತಾರೆ. ಇದನ್ನು ಒಪ್ಪಿಕೊಳ್ಳಬಹುದಾದರೂ ಅವನು ಎಲ್ಲದಕ್ಕೂ ಕೊಡುವ ಗಾಂಧಿಮಾರ್ಗ, ಫುಕೋಮಾರ್ಗ  ಇಂದು ಪರ್ಯಾಯವಾಗಬಲ್ಲವೆ? ಎಂಬ ಬಗ್ಗೆ ನನಗೆ ನನ್ನದೇ ಆದ ಸಂಶಯ ಉಳಿದುಕೊಂಡಿದೆ. ಬಡವರಿಗೆ ಆಹಾರ ತಲುಪದಿರುವುದು ಆಹಾರ ಕೊರತೆಯಿಂದಲ್ಲ. ಬದಲಾಗಿ ಇದನ್ನು ತಲುಪಿಸಲಾದ ಜನರ ನಡಾವಳಿಯಿಂದಾಗಿ ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತಲೇ ಆಧುನಿಕ ಕೃಷಿ ಬಿಟ್ಟು ಹಳೆಯ ಪದ್ಧತಿಯನ್ನೇ ಅನುಸರಿಸಿದರೆ ಕೋಟಿ ಕೋಟಿ ಹಸಿದ ಹೊಟ್ಟೆಗೆ ಸಾಕಾಗುವಷ್ಟು ಆಹಾರ ಬೆಳೆಯಲು ಸಾಧ್ಯವೇ? ಎಂದು ಸಂಶಯ ಕಾಡುತ್ತದೆ. ಪರಿಸರದ ಕುರಿತು ಅವರ ಕಾಳಜಿ ಒಪ್ಪತಕ್ಕದ್ದೆ. ಆದರೆ ಯಂತ್ರ ನಾಗರಿಕತೆಯನ್ನು ಬಿಟ್ಟು ನಾವು ಬದುಕು ಸಾಗಿಸಬಹುದೇ? ಅಥವಾ ಯಂತ್ರಗಳನ್ನು ಜನಸಾಮಾನ್ಯರ, ಪರಿಸರದ, ಸಕಲಜೀವಿಗಳ ಪರವಾಗಿ ಬಳಸುವ ಕಾಳಜಿಯನ್ನು ಬದ್ಧತೆಯನ್ನು ಹೊಂದಿರುವ ಪ್ರಭುತ್ವವನ್ನು ಸ್ಥಾಪಿಸಲು ಮುಂದಾಗುವುದು ಒಳ್ಳೆಯದೆ? ಎನ್ನುವ ಕಡೆ ಚಚರ್ೆ ಬೆಳೆಸಬೇಕಾಗಿದೆ.                
                                                                                                                   -  ವಿಠ್ಠಲ ಭಂಡಾರಿ