Wednesday, 6 June 2018

ಆತ ನನಗೆ ಹೊಡೆದದ್ದು ಮಾತ್ರ ಇನ್ನೂ ನೆನಪಿದೆ..ವಿಠ್ಠಲ ಭಂಡಾರಿ

ಆತ ನನಗೆ ಹೊಡೆದದ್ದು ಮಾತ್ರ ಇನ್ನೂ ನೆನಪಿದೆ..

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ಒಮ್ಮೆ ಮಾಧವಿಗೆ  (ಸಣ್ಣ ಅಕ್ಕ- ಮಾಧವಿ ಭಂಡಾರಿ ಕೆರೆಕೋಣ) ಅಣ್ಣ ಅವಳಿಗೆ ಹೊಡೆಯಲು ಬಂದಿದ್ದನಂತೆ. ಆದರೆ ಓಡುವುದರಲ್ಲಿ ಜೋರಿದ್ದಳು ಆಕೆ. ಊರೆಲ್ಲ ಓಡಿದರೂ ಆಕೆ ಆತನ ಕೈಕೆ ಸಿಗಲಿಲ್ಲ. ಅಥವಾ ಸಿಕ್ಕಾಗ ಆತ ಸುಸ್ತಾಗಿ ಬಿಟ್ಟಿರಬೇಕು.
ಇನ್ನಕ್ಕ (ಹಿರಿಯ ಅಕ್ಕ) ಇವನಿಗೆ ಬಹು ಪ್ರಿಯಳಾಗಿದ್ದಳು. ಮತ್ತು ಅವಳೆಂದೂ ನಮ್ಮಂತೆ ಅಧಿಕ ಪ್ರಸಂಗಿಯಾಗಿರಲಿಲ್ಲ. ಮಕ್ಕಳಿಗೆ ದಿನ ನಿತ್ಯ ಬೈಯುವುದನ್ನು ಮತ್ತೆ ಮತ್ತೆ ಹೊಡೆಯುವುದನ್ನೂ ಆತ ವಿರೋಧಿಸುತ್ತಿದ್ದ. ನಾನು ಓದುವುದಿಲ್ಲ, ಬರೆಯುವುದಿಲ್ಲ, ಬರೇ ಆಟ ಆಡುತ್ತಿರುತ್ತೇನೆಂದು ಅಕ್ಕ (ಅಮ್ಮ) ಬೈದರೆ ಆತನಿಗೆ ಸಿಟ್ಟು ಬರುತ್ತಿತ್ತು. ಒಮ್ಮೆ ಹೊಡೆದರೆ ಅಥವಾ ಬೈದರೆ ಹಲವು ವರ್ಷ ನೆನಪಿರಬೇಕು ಎನ್ನುವುದು ಆತನ ನಿಲುವು.
ಆತ ನನಗೆ ಹೊಡೆದದ್ದು ಮಾತ್ರ ಇನ್ನೂ ನೆನಪಿದೆ. ನನ್ನ ಜೀವನದಲ್ಲಿ ಎರಡು-ಮೂರು ಬಾರಿ ಮಾತ್ರ ಹೊಡೆತ ಬಿದ್ದಿದ್ದು. ಎರಡು ಬಾರಿಯೂ ಉಚ್ಚೆ ಹೊಯ್ದುಕೊಂಡಿದ್ದೆ.
ಒಮ್ಮೆ ನಾನು ತೀರಾ ಸಣ್ಣವನಿದ್ದಾಗ. ಆಯಿ ನನ್ನನ್ನು ಸ್ನಾನ ಮಾಡಿಸಿಕೊಂಡು ಬರುವಂತೆ ಅಣ್ಣನಿಗೆ ಹೇಳಿದಳು. ಚಕ್ರ ಪಟ್ಟೆ (ಚಕ್ಕಪಾಟಿ) ಹಾಕಿ ಕುಳಿತ ನನ್ನನ್ನು ಬಕ್ಕಾಣೆ (ರಮಿಸುತ್ತಾ) ಮಾಡುತ್ತಾ ಸ್ನಾನ ಮಾಡಿಸಲು ಹಾಗೇ ಎತ್ತಿಕೊಂಡು ತನ್ನ ಹೆಗಲಮೇಲೆ ಕುಳ್ಳಿರಿಸಿ ಬಚ್ಚಲ ಕಡೆ ಹೋಗುತ್ತಿದ್ದ. ಸ್ನಾನ ಬೇಡವೆಂದು ಹಠ ಹಿಡಿದ ನಾನು (ನನಗೆ ಈಗಲೂ ಸ್ನಾನವೆಂದರೆ ಆಗದು; ಅಪರೂಪಕ್ಕೆ ಒಮ್ಮೆ ಸ್ನಾನ ತಪ್ಪಿಸಿಕೊಳ್ಳುವುದೆಂದರೆ ಕದ್ದು ತಿಂಡಿ ತಿಂದಷ್ಟೇ ಖುಷಿ.) ಜೋರಾಗಿ ಮಿಸುಕಾಡಿದೆ, ನನ್ನ ಕಾಲು, ಕೈ ಅವನ ಮುಖಕ್ಕೆ, ಕಣ್ಣಿಗೆ ತಾಗಿರಬೇಕು.
ಆತನಿಗೆ ಎಲ್ಲಿಂದ ಸಿಟ್ಟು ಬಂತೋ ಏನೋ ಗೊತ್ತಿಲ್ಲ. ಮೈಗೆ ಬಾಸುಂಡೆ ಬರುವಂತೆ ಹೊಡೆದಿದ್ದ, ಆಯಿ, ಅಕ್ಕ ತಪ್ಪಿಸಬಂದರೂ ಕೇಳಿರಲಿಲ್ಲ. ಹೊಡೆತದ ಉರಿಗೆ ಉಚ್ಚೆ ಹೊಯ್ದುಕೊಂಡಿದ್ದೆ; ಭಯಕ್ಕೆ ಇಡೀ ದಿನ ಮಲಗಿಯೇ ಕಳೆದಿದ್ದೆ.
ಸಂಜೆ ಆತ ಶಾಲೆ ಬಿಟ್ಟು ಬಂದಾಗಲೂ “ಇನ್ನು ನಾನು ಹಾಗೆ ಮಾಡುವುದಿಲ್ಲ. ಹೊಡೆಯಬೇಡ” ಎಂದು ನಾನು ಕನಸಿನಲ್ಲಿಯೂ ಅಂಗಲಾಚುತ್ತಿದ್ದೆನಂತೆ. ಆತ ಆಮೇಲೆ ತಾನು ಕೊಟ್ಟ ಹೊಡೆತದ ಬಗ್ಗೆ ತಾನೇ ಬೇಸರಪಟ್ಟುಕೊಂಡಿದ್ದನಂತೆ.
ಇನ್ನೊಮ್ಮೆ ನಾನು 5-6ನೇ ತರಗತಿ ಓದುತ್ತಿದ್ದೆ. ನಮ್ಮದು ಹಂಚಿನ ಮನೆ, ಮಣ್ಣು ಗೋಡೆ, ಮಣ್ಣು ನೆಲ. 2-3 ವರ್ಷಕ್ಕೊಮ್ಮೆ ಹೊಸದಾಗಿ ನೆಲವನ್ನು ಮಾಡುತ್ತಿರಬೇಕು. ಇಲ್ಲದಿದ್ದರೆ ಕೂಡ್ರಲು ಆಗದಷ್ಟು ಮಣ್ಣೇಳುತ್ತದೆ. ಮನೆಯ ಒಳಗಡೆಯ ನೆಲ ಮಾಡುತ್ತಿದ್ದರು. ಕೆಮ್ಮಣ್ಣು ಹಾಕಿ ನಂತರ ಹೊಳೆ ಬೇಲೆಯಿಂದ ತಂದ ನುಣುಪು ಕಲ್ಲಿನಿಂದ ಒರೆಯುತ್ತಿದ್ದರು (ತಿಕ್ಕುವುದು).
ಹೀಗೆ ಮಾಡುವುದರಿಂದ ನೆಲಕ್ಕೆ ಹೊಳಪು ಬರುತ್ತಿತ್ತು. ಮೇಲಿಂದ ರೆಡಾಕ್ಸೈಡ್‍ನ್ನು ಸಿಮೆಂಟಿನಲ್ಲಿ ಕಲಸಿ ತೆಳ್ಳಗೆ ಬಟ್ಟೆಯಲ್ಲಿ ಹಚ್ಚುತ್ತಿದ್ದರು. ಮತ್ತು ಕಲ್ಲಿನಿಂದ ಮತ್ತೆ ವರೆಯುತ್ತಿದ್ದರು. ಕೆಂಪಾದ ನೆಲ ಚಕಚಕನೆ ಹೊಳೆಯುತ್ತಿತ್ತು. ಹೀಗೆ ಹಾಕಿದ ಮಣ್ಣು, ಬಣ್ಣ ಒಣಗುವವರೆಗೆ ಹೆಜ್ಜೆ ಹಾಕಿದರೆ ಹಾಗೇ ಹೆಜ್ಜೆ ಮೂಡುತ್ತದೆ. ಮೇಲಿಂದ ಕಸ ಬಿದ್ದರೆ ಹಾಗೇ ಕಸ ನೆಲಕ್ಕೆ ಅಂಟಿಕೊಂಡುಬಿಡುತ್ತದೆ, ಹಾಗಾಗಿ ತೀರಾ ಕಾಳಜಿ ವಹಿಸುತ್ತಾರೆ.
ಮನೆಗೆ ಮೆತ್ತಿರಲಿಲ್ಲ. (ಮೆತ್ತು=ಮಾಳಿಗೆ) ಅಡಿಕೆ ದಬ್ಬೆ ಹಾಕಿ ಅಟ್ಟ ಮಾಡಿದ್ದರು. ಕೆಳಗೆ ಬೇಡದಿರುವ ಹರಗಣಗಳನ್ನು (ಸಾಮಾನುಗಳನ್ನು) ಅಲ್ಲಿಡುತ್ತಿದ್ದರು. ಹೀಗೆ ನೆಲ ಮಾಡಿ ಮುಗಿಸುವಾಗ ನಾನು ಅಟ್ಟ ಹತ್ತಿ ಏನೋ ಮಾಡುತ್ತಿದ್ದೆ. ನೆಲಕ್ಕೆ ಕಸ, ಮಣ್ಣು ಬೀಳುವುದೆಂದು ಅಕ್ಕ (ಅಮ್ಮ) ಬೈಯುತ್ತಿದ್ದಳು.
ನಾನು ನನ್ನ ಪಾಡಿಗೆ ಅಟ್ಟದ ಮೇಲೆಯೇ ಕುಳಿತು ಕಸ ಉದುರಿಸುವ ಕಾಯಕವನ್ನು ಮುಂದುವರಿಸಿದ್ದೆ. ಕೆಳಗಿಳಿ ಎಂದು ಎಷ್ಟೋ ಸಲ ಹೇಳಿದರೂ ನಾನು ಇಳಿದಿರಲಿಲ್ಲ. ಎರಡು ಗಂಟೆಯಾದರೂ ಊಟಕ್ಕೆ ಆಗಿರಲಿಲ್ಲ. ಊಟ ತಡವಾದ ಬಗ್ಗೆ, ಅಕ್ಕ ನನ್ನ ಬೈದ ಬಗ್ಗೆ ಅಣ್ಣ ಮೊದಲೇ ಸಿಟ್ಟುಗೊಂಡಿದ್ದನು. ನನ್ನನ್ನು ಊಟಕ್ಕೆ ಕರೆದರು; ನಾನು ಊಟಕ್ಕೆ ಬಾರದೇ ಏನೋ ಉದ್ದಟತನದ ಮಾತನ್ನು ಆಡಿದ್ದಿರಬೇಕು.
ಸಿಟ್ಟು ಬಂದು ಅಣ್ಣ ಒಳ ಬಂದು ನನ್ನ ಎತ್ತಿಕೊಂಡು ಹೊರಬಾಗಿಲಿಗೆ ಬಂದು ಹಾಗೇ ಆಂಗಳಕ್ಕೆ ದೂಡೇ ಬಿಟ್ಟ. ನನ್ನ ಪುಣ್ಯ, ನನ್ನ ದೊಡ್ಡಮ್ಮ ಅಂಗಳದಲ್ಲಿದ್ದವರು ನನ್ನ ಹಾಗೇ ಕೈಯಲ್ಲಿ ಹಿಡಿದು ಅಪ್ಪಿಕೊಂಡರು. ಹಾಗಾಗಿ ನಾನು ಇಂದು ಕೈಕಾಲು ಊನವಾಗದೇ ಬಚಾವಾದೆ. ಆಗಲೂ ಭಯದಿಂದ ಚಡ್ಡಿಯೆಲ್ಲಾ ಒದ್ದೆಯಾಗಿತ್ತು.

ಅಣ್ಣನಿಗೆ ಕೋಳಿ, ಸೋಯಾಬೀನ್ ವ್ಯತ್ಯಾಸವೇ ಗೊತ್ತಾಗಲಿಲ್ಲ....ವಿಠ್ಠಲ ಭಂಡಾರಿ

ಅಣ್ಣನಿಗೆ ಕೋಳಿ, ಸೋಯಾಬೀನ್ ವ್ಯತ್ಯಾಸವೇ ಗೊತ್ತಾಗಲಿಲ್ಲ..

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ಊಟದಲ್ಲೂ ಅಂತಹ ವೈಯಾರ ಇದ್ದ ಮನುಷ್ಯ ಅಲ್ಲ.
ಗಡಿಬಿಡಿಯಲ್ಲಿ ಊಟ ಮುಗಿಸುತ್ತಿದ್ದ. ಅವನೊಂದಿಗೆ ಊಟಕ್ಕೆ ಕುಳಿತವರ ಅರ್ಧ ಊಟ ಮುಗಿಸುತ್ತಿದ್ದಂತೆ ಈತನದು ಊಟ ಮಾಡಿ ಕೈ ತೊಳೆದು ಮುಗಿಯುತ್ತಿತ್ತು.
ಅಷ್ಟು ಜೋರು ಊಟ ಮಾಡಿದರೆ ಮನೆಗೆ ಊಟಕ್ಕೆ ಬಂದವರಿಗೆ ಮುಜುಗರ ಆಗಬಹುದೆಂದು ಎಷ್ಟೇ ಎಚ್ಚರಿಕೆ ಕೊಟ್ಟರೂ ಊಟ ಸಾವಕಾಶ ಆಗುತ್ತಿರಲಿಲ್ಲ. ಸಾಹಿತ್ಯ-ಸಂಘಟನೆಯವರಾಗಿದ್ದರೆ ಊಟ ಆದ ಮೇಲೂ ಕುಳಿತು ಚರ್ಚಿಸುತ್ತಿದ್ದ. ಖಾಲಿ ನೆಂಟರಾಗಿದ್ದರೆ ‘ನೀವು ಸಾವಕಾಶ ಊಟ ಮಾಡಿ, ನಾನು ಕೈತೊಳೆದುಕೊಳ್ಳುತ್ತೇನೆ’ ಎಂದು ಹೇಳಿ ಎದ್ದು ಹೋಗುತ್ತಿದ್ದ.
ಊಟಕ್ಕೆ ಏನೇ ಮಾಡಿದರೂ ಯಾವ ತಕರಾರೂ ಇಲ್ಲ. ಆದರೆ ಬೇಳೆ-ತರಕಾರಿ ಇಲ್ಲದ ಸಾರು ಮಾತ್ರ ಮಾಡಬಾರದಾಗಿತ್ತು. ಹಾಗೆ ಪದಾರ್ಥಕ್ಕೆ ಬೆಲ್ಲ ಹಾಕಬಾರದಾಗಿತ್ತು. ಅದರಲ್ಲೂ ಯಾರಾದರೂ ಅತಿಥಿಗಳು ಬಂದಾಗಲಂತೂ ಮೀನು, ಕೋಳಿ ಅಥವಾ ತರಕಾರಿ ಹಾಕಿದ ಸಾರೇ ಆಗಬೇಕು. ಊಟದ ಕೊನೆಗೆ ಬಟ್ಟಲ ತುಂಬಾ ತಂಬಳಿ ಅಥವಾ ಮಜ್ಜಿಗೆ ಹಾಕಿಕೊಂಡು ಕುಡಿದನೆಂದರೆ ಊಟ ಮುಗಿದಂತೆ.
ಒಮ್ಮೊಮ್ಮೆ ಓದಿದ್ದನ್ನೋ ಮುಂದೆ ಬರೆಯುವುದನ್ನೋ ಯೋಚನೆ ಮಾಡುತ್ತಾ ಮುಕ್ಕಾಲು ಪಾತ್ರೆ ತಂಬಳಿ ಕುಡಿದು ಬಿಡುತ್ತಿದ್ದ. ಕೊನೆಗೆ ಕೇಳಿದರೆ ಹೌದಾ? ನನಗೆ ಗೋತ್ತೇ ಆಗಲಿಲ್ಲವೆಂದು ಮುಖ ಪೆಚ್ಚು ಮಾಡಿಕೊಳ್ಳುತ್ತಿದ್ದ.
ಆತ ಎಷ್ಟು ಯೋಚನಾ ಮಗ್ನ ಆಗುತ್ತಿದ್ದನೆಂದರೆ ಊಟ ಆದ ಮೇಲೆ ತಮಾಷೆಗಾಗಿ ಏನು ಊಟ ಮಾಡಿದೆ? ಏನು ಸಾರು ಎಂದು ಕೇಳಿದರೆ ನೆನಪಿಲ್ಲದೆ ನಗುತ್ತಿದ್ದ. ನಮಗೆ ಇದೇ ತಮಾಷೆಯ ವಸ್ತುವಾಗಿತ್ತು. ಮುಸಿಮುಸಿ ನಗುತ್ತಿದ್ದೆವು. ಒಮ್ಮೊಮ್ಮೆ ಪದಾರ್ಥಕ್ಕೆ ಉಪ್ಪು ಹೆಚ್ಚಾಗಿದೆ ಎನ್ನುತ್ತಿದ್ದ. ಆದಿನ ಉಪ್ಪೇ ಆಗಿರುತ್ತಿರಲಿಲ್ಲ; ಆತ ಚಪ್ಪೆ ಎಂದ ದಿನ ಚಪ್ಪೇ ಆಗುತ್ತಿರಲಿಲ್ಲ. ಆದರೆ ನಮ್ಮ ಅತ್ತೆಯ ಗಂಡ (ತಂದೆಯವರ ತಂಗಿಯ ಗಂಡ) ಯಾವಾಗಲೂ ಊಟ ಮಾಡುವಾಗ ಏನಾದರೂ ತಕರಾರಿಲ್ಲದೇ- ಚಪ್ಪೆ..ಉಪ್ಪು..ಬೆಂದಿಲ್ಲ..ಅನ್ನ ಕರಗಿದೆ..ಇತ್ಯಾದಿ- ಉಣ್ಣುತ್ತಿರಲಿಲ್ಲ. “ನನ್ನ ಅಣ್ಣನ್ನು ನೋಡಿ ಕಲಿಯಿರಿ. ಒಂದಿನವಾದರೂ ತಕರಾರು ಮಾಡಿದ್ದಿದೆಯಾ ನಿಮ್ಮಂತೆ? ಅಂಥವರಿಗೆ ಅಡಿಗೆ ಮಾಡಿ ಹಾಕುವುದು ಖುಷಿ.” ಎಂದು ಬೈದಾಗ ಆತ “ನಿನ್ನಣ್ಣನಿಗೆ ನಾಲಿಗೆ ರುಚಿ ಎಂದರೆ ಏನೆಂದು ಗೊತ್ತಿರಬೇಕಲ್ಲಾ. ಹಾಕಿದ್ದೆಲ್ಲಾ ತಿನ್ನುತ್ತಾನೆ.” ಎಂದು ತಮಾಷೆ ಮಾಡುತ್ತಿದ್ದ.
ಒಮ್ಮೆ ಇನ್ನೊಂದು ತಮಾಷೆ ನಡೆಯಿತು.
ಮನೆಯಲ್ಲಿ ಕೋಳಿ ಪದಾರ್ಥ (ಸಾರು) ಮಾಡಿದ್ದರು. ಊಟ ಮಾಡುವಾಗ ಆಗಾಗ ಕೋಳಿ ಪೀಸನ್ನು ಬೆಕ್ಕಿಗೆ ಹಾಕುತ್ತಲೇ ಇದ್ದ. ಹಾಕಿದ್ದರಲ್ಲಿ ಬಹುಭಾಗ ಬೆಕ್ಕಿನ ಪಾಲಾಯ್ತು. ಊಟ ಮುಗಿಸಿ ಹೊರ ಬಂದವ ಸಿಟ್ಟಿನಲ್ಲಿಯೇ ಇದ್ದ. ಯಾಕೆ ಗೊತ್ತಾಗಲಿಲ್ಲ. ಕೋಳಿ ಸಾರು ಮಾಡಿದಾಗ ಚೆನ್ನಾಗಿದೆ ಎಂದು ಯಾವಾಗಲಾದರೂ ಹೇಳುವ ಕ್ರಮ ಇತ್ತು.
ಮಾಧವಿ ಮನೆಯಲ್ಲಿದ್ದಾಗ ಕೋಳಿ ಸಾರಿಗೂ ಬೆಲ್ಲ ಹಾಕಿ ಬಿಡುತ್ತಾಳೆಂಬ ಸಂಶಯ ಅವನಿಗೆ ಇದ್ದೇ ಇತ್ತು. ಆಕೆ ಯಾವಾಗಲೂ ಎಲ್ಲಾ ಪದಾರ್ಥಕ್ಕೂ ಬೆಲ್ಲ ಹಾಕುತ್ತಾಳಾದರಿಂದ ಇದಕ್ಕೂ ಹಾಕದೇ ಮಾಡುತ್ತಾಳೆಯೇ ಎಂಬ ತರ್ಕ ಆತನನ್ನು ಕಾಡುತ್ತಿತ್ತು. ಮಾಧವಿ ಏನೇ ಮಾಡಿದರೂ ಸ್ವಲ್ಪ ಸಿಹಿಯಾಗಿದೆ ಎಂದೇ ಹೇಳುತ್ತಿದ್ದ. ಆದರೆ ದೊಡ್ಡಕ್ಕ ಇನ್ನಕ್ಕ ಪದಾರ್ಥಕ್ಕೆ ಬೆಲ್ಲ ಹಾಕಿದರೂ ಆಕೆ ಹಾಕುವುದಿಲ್ಲ ಎಂಬ ಬಲವಾದ ನಂಬಿಕೆಯಿಂದ ಪದಾರ್ಥ ರುಚಿಯಾಗಿದೆ ಎಂದೇ ಹೇಳುತ್ತಿದ್ದ.
ನಾನು ಕೋಳಿ ಸಾರಿನ ಪ್ರಕರಣ ಹೇಳುತ್ತಿದ್ದವನು ಎಲ್ಲೋ ಹೋದೆ… ಆತ ಸಿಟ್ಟುಗೊಂಡಿದ್ದು ಯಾಕೆಂದು ಆನಂತರ ತಿಳಿದು ನಕ್ಕುನಕ್ಕು ಸಾಕಾಯಿತು. ಆತನ ಬಾಯಲ್ಲಿರುವುದು ಹಲ್ಲು ಸೆಟ್ಟಾಗಿರುವುದರಿಂದ(ಕೃತಕ ಹಲ್ಲು) ಜಗಿಯಲು ಆಗುವುದಿಲ್ಲವೆಂದು ನಾವು ಎಲುಬಿಲ್ಲದ ಮೆದುವಾದ ಕೋಳಿಪೀಸನ್ನು ಹಾಕಿದ್ದೆವು. ಆದರೆ ಆತ ಅದನ್ನು ಸೋಯಾಬಿನ್ (ಕೋಳಿ ಮಾಂಸದಂತೆ ಕಾಣುವ ಇದನ್ನು ಹಲವರು ಸಾರಿಗೆ ಹಾಕಿಡುತ್ತಾರೆ ಮಾಂಸ ಒದಗಿದಂತೆ ಕಾಣಬೇಕೆಂದು. ನೀವು ಅದನ್ನು ಮಾಂಸವೆಂದು ತಿಳಿದು ಬಾಯಿಗೆ ಹಾಕಿ ಅಗಿದ ಮೇಲೇ ತಿಳಿಯಬೇಕು. ಇದು ಸೋಯಾಬಿನ್ ಎಂದು) ಎಂದು ತಿಳಿದು ಸಿಟ್ಟಿನಿಂದ ಅದನ್ನೆಲ್ಲ ತೆಗೆದು ಬೆಕ್ಕಿಗೆ ಹಾಕುತ್ತಿದ್ದ.
ಎರಡು ದಿನ ಬಿಟ್ಟು “ಯಾಕೆ ಮೊನ್ನೆ ಕಡಿಮೆ ಕೋಳಿ ತಂದಿದ್ದೀರಿ? ಇನ್ನೊಂದು ಕೆ.ಜಿ. ತರಬಾರದಿತ್ತೇ? ಕೋಳಿಗೆ ಬದಲು ಆ ಸೋಯಾಬಿನ್ ಹಾಕಿದ್ದೀರಿ” ಎಂದು ಬೈದಾಗಲೇ ನಮಗೆ ಗೊತ್ತಾಗಿದ್ದು. ಆತನಿಗೆ ಹಾಕಿದ ಎಲ್ಲಾ ಒಳ್ಳೆಯ ಕೋಳಿಪೀಸನ್ನು ಆತ ಸೋಯಾಬಿನ್ ಎಂದು ತಿಳಿದು ಬೆಕ್ಕಿಗೆ ಹಾಕಿ ಬರೀ ಸಾರು ತಿಂದು ಎದ್ದು ಹೋಗಿದ್ದ. ಇದು ಆತನ ಪಾಕಶಾಸ್ತ್ರ ಪ್ರಾವೀಣ್ಯತೆ. ಬೇರೆ ಮನೆಗೆ ಹೋದಾಗಲಂತೂ ಏನೇ ಹಾಕಿದರೂ ತಲೆತಗ್ಗಿಸಿ ಊಟ ಮಾಡಿ ಬರುತ್ತಿದ್ದ.
ಮನೆಯಲ್ಲಿ ಮೀನು ಸಾರು ಮಾಡಿದ್ದರೂ ಹಾಕಿಕೊಳ್ಳುವುದು ಒಂದೆರಡು ಪೀಸು ಅಷ್ಟೆ. ನಂತರ ಊಟ ಮಾಡುವವರಿಗೆ ಇಲ್ಲದಿದ್ದರೆ ಎಂಬ ಚಿಂತೆ. ತನಗೆ ಕಡಿಮೆ ಆದರೂ ಬೇರೆಯವರಿಗೆ ಹೊಟ್ಟೆ ತುಂಬಾ ಇರಬೇಕನ್ನುವ ಆಶಯ ಆತನದು.
ಮನೆಯಲ್ಲಿ ಯಾರಿಲ್ಲದಿದ್ದರೆ ಆತ ಉಪವಾಸ ಇರುವುದೇ! ಒಂದೇ ಒಂದು ಕಪ್ ಟೀ ಮಾಡಿಕೊಳ್ಳಲೂ ಬರುತ್ತಿರಲಿಲ್ಲ. ಎಲ್ಲಾ ಮಾಡಿ ಟೇಬಲ್ ಮೇಲೆ ಮುಚ್ಚಿಟ್ಟರೆ ಕಷ್ಟಪಟ್ಟು ಬಡಿಸಿಕೊಂಡು ಊಟ ಮಾಡುತ್ತಿದ್ದ ಅಷ್ಟೇ. ಒಲೆ ಒಟ್ಟಲೂ ಬರುತ್ತಿರಲಿಲ್ಲ. ಗ್ಯಾಸ್ ಹಚ್ಚಲೂ ಬರುತ್ತಿರಲಿಲ್ಲ; ಆದರೆ ಹಲವು ವರ್ಷಗಳ ಅನಾರೋಗ್ಯಕ್ಕೆ ತುತ್ತಾಗುವವರೆಗೂ ತನ್ನ ಬಟ್ಟಲನ್ನು ಮತ್ತು ತನ್ನ ಬಟ್ಟೆಯನ್ನು ತಾನೇ ತೊಳೆದುಕೊಳ್ಳುತ್ತಿದ್ದ. ಹಾಗೆ ತೊಳೆದುಕೊಳ್ಳುವಂತೆ ನಮಗೂ ಹೇಳುತ್ತಿದ್ದ. ಆದರೆ ಆಲಸಿಗಳಾದ ನಾವು ಅದನ್ನು ಕೇಳಿಸಿಕೊಳ್ಳಲೇ ಇಲ್ಲ.

ಮಾರ್ಕ್ಸ್ ಕಾರ್ಡ್ ಓದುವ ಬದಲು ಮಾರ್ಕ್ಸ್ ವಾದ ಓದಲು ಹೇಳುತ್ತಿದ್ದ-ವಿಠ್ಠಲ ಭಂಡಾರಿ


ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನಾನು ಒಂದಿಷ್ಟಾದರೂ ಒಳ್ಳೆಯವನಾಗದೇ ಬೇರೆ ದಾರಿಯೇ ಇರಲಿಲ್ಲ
ಅಣ್ಣನ ವ್ಯಕ್ತಿತ್ವವೇ ಹಾಗಿತ್ತು. ಯಾರನ್ನೂ ಪ್ರಭಾವಿಸುವಂತಹುದು. ಹಾಗೂ ಆತ ಸಂಬಂಧದಲ್ಲಿ ಮಾತ್ರ ಅಲ್ಲ, ಬದುಕಿನಲ್ಲೂ ನಮದೊಂದು ‘ಮಾಡೆಲ್’ ಆಗಿದ್ದ. ಶುದ್ಧ ಪ್ರಾಮಾಣಿಕೆ; ಒಮ್ಮೊಮ್ಮೆ ನನಗೇ ಸಿಟ್ಟು ಬರುವಷ್ಟು, ಅತಿ ಅನ್ನಿಸುವಷ್ಟು ಪ್ರಾಮಾಣಿಕನಾಗಿದ್ದ. ಅವನ ವ್ಯಕ್ತಿತ್ವದಿಂದ ತಪ್ಪಿಸಿಕೊಂಡು ಬರುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ ಮತ್ತು ಹಾಗೆ ತಪ್ಪಿಸಿಕೊಳ್ಳಬೇಕಾದ ಅಗತ್ಯವೂ ಇರಲಿಲ್ಲ.
ನಾನೂ ಹೈಸ್ಕೂಲು ಓದುವಾಗ ಪುಂಡನಾಗಿಯೇ ಬೆಳೆದೆ. ಬುದ್ಧಿವಂತ ಹುಡುಗನೇನೂ ಆಗಿರಲಿಲ್ಲ(ಈಗಲೂ ಅಲ್ಲ ಎನ್ನುವುದು ಬೇರೆ ಮಾತು). ಪಾಠಕ್ಕಿಂತ ಆಟ ಕೀಟಲೆಯಲ್ಲಿಯೇ ಹೆಚ್ಚು ಆಸಕ್ತಿ. ಜಗಳ, ಹೊಡೆದಾಟವೆಂದರೆ ಬಲು ಇಷ್ಟ. ಹೊಡೆದಾಡುವಷ್ಟು ಶಕ್ತಿಯಾಗಲೀ, ದೇಹ ದಾಢ್ಯವಾಗಲೀ ಇರಲಿಲ್ಲ, ಆದರೆ ಜಗಳಕ್ಕೆ ಒಂದು ತಂಡ ಕಟ್ಟಿಕೊಳ್ಳಬಹುದಾದಷ್ಟು ಸಾಮರ್ಥ್ಯ ಇತ್ತು. ಹಾಗಾಗಿ ಉದ್ಧಟ ಹುಡುಗರ ತಂಡದ ಒಬ್ಬ ಸದಸ್ಯನಾಗಿದ್ದೆ. ಬಹಿರಂಗವಾಗಿ ಪೂರ್ತಿಯಾಗಿ ಹಾಗೆ ತೋರಿಸಿ ಕೊಳ್ಳುವಂತಿರಲಿಲ್ಲ.
ಯಾಕೆಂದರೆ ನನ್ನ ಅಣ್ಣ ಕೂಡ ನಾನು ಓದುತ್ತಿರುವ ಅರೇಅಂಗಡಿಯ ಎಸ್.ಕೆ.ಪಿ ಹೈಸ್ಕೂಲಿನ ವಿದ್ಯಾರ್ಥಿ; ಶಿಕ್ಷಕರೆಲ್ಲ ಅವನ ಸ್ನೇಹಿತರು. ಅವನ ವಿದ್ವತ್ತಿನ ಬಗ್ಗೆ, ಅವನ ಭಾಷಣ, ಬರಹದ ಬಗ್ಗೆ ಅಪಾರ ಗೌರವ ಉಳ್ಳವರು ಮತ್ತು ಕೆಲವರು ಅಸೂಯೆ ಉಳ್ಳವರು.
ಆತ ಒಂದೇ ಒಂದು ದಿನ ನನ್ನ ಪರವಾಗಿ ಶಾಲೆಗೆ ಬಂದಿದ್ದಿಲ್ಲ, ಅಥವಾ ನನ್ನ ಪರವಾಗಿ ಶಿಕ್ಷಕರಿಗೆ ಹೇಳಿದ್ದಿಲ್ಲ, ಆದರೂ ಕೆಲವು ಪರೀಕ್ಷೆಯಲ್ಲ್ಲಿ ಆರ್.ವಿ. ಭಂಡಾರಿಯವರ ಮಗ ಎಂದೇ ನಾಲ್ಕು ಅಂಕ ಹೆಚ್ಚು ಹಾಕುತ್ತಿದ್ದರೆಂದು ಕಾಣುತ್ತದೆ. ಕೆಲವರು ಆರ್.ವಿ. ಭಂಡಾರಿ ಬ್ರಾಹ್ಮಣ ವಿರೋಧಿ ಎಂದು ನನಗೆ ನಾಲ್ಕು ಅಂಕ ಕಡಿಮೆ ಒಗೆದದ್ದು ಇದೆ.
ಆದರೆ ಅಣ್ಣನ ನಾಮ ಬಲದಿಂದಲೇ ನನ್ನನ್ನು ಹಲವರು ಗುರುತಿಸುತ್ತಿದ್ದರು. ಒಮ್ಮೊಮ್ಮೆಯಂತೂ “ಅಪ್ಪ ನೋಡಿದರೆ ಅಷ್ಟು ಬುದ್ಧಿವಂತ; ನೀನೋ..” ಎಂದು ರಾಗ ಎಳೆದದ್ದೂ ಇದೆ; ಮೂಗು ಮುರಿದದ್ದೂ ಇದೆ; ಮತ್ತು ಅಂತೂ ದಡ್ಡ ಮಗ ಹುಟ್ಟಿದ ಎಂದು ಖುಷಿಯಿಂದ ಕರುಣೆ ತೋರಿಸಿದವರೂ ಇದ್ದರು.
ಒಂದು ದಿನವಂತೂ ನಮ್ಮ ಮಂಗಾಟ ತಾರಕಕ್ಕೇರಿತು. ತರಗತಿಯಲ್ಲಿ ಹಿಂದಿನ ಬೇಂಚಿನಲ್ಲಿ ಕುಳಿತು ಮುಂದಿದ್ದವರಿಗೆ ಕಿಸೆಯಲ್ಲಿ ತುಂಬಿಕೊಂಡು ಬಂದ ಕಲ್ಲಿನಿಂದ ಹೊಡೆಯುತ್ತಿದ್ದೆವು. ಮಾಸ್ತರರು ಬೋರ್ಡಿನ ಕಡೆ ತಿರುಗಿದಾಗಲೆಲ್ಲ ನಮ್ಮ ಕಿಸೆಯಲ್ಲಿದ್ದ ಕಲ್ಲು ಮುಂದಿದ್ದವರ ತಲೆಗೆ, ಗುರಿ ತಪ್ಪಿದರೆ ಅವನ ಬೆನ್ನಿಗೆ ಬೀಳುತ್ತಿತ್ತು. ಹಿಂದಿನಿಂದ ಹೊಡೆಯುತ್ತಾರೆಂದು ಹೇಳುವ ಧೈರ್ಯವನ್ನು ಮುಂದಿನ ಹುಡುಗರಾರೂ ತೋರಿರಲಿಲ್ಲವಾದರೂ ಕಲ್ಲು ಗುರಿತಪ್ಪಿ ಬೋರ್ಡಿನವರೆಗೂ ಹೋಗಿತ್ತು.
ಒಮ್ಮೆ ಮಾಸ್ತರರು ನಮ್ಮನ್ನು ಮಾಲು ಸಹಿತ ಹಿಡಿದೇ ಬಿಟ್ಟರು. 4-5 ಜನರನ್ನು ಕರೆದುಕೊಂಡು ಪ್ರಾಚಾರ್ಯರ ಕೊಠಡಿಗೆ ಹೋದರು. ಆಗ ಪ್ರಾಚಾರ್ಯರಾಗಿದ್ದವರು ಹೆಸರಾಂತ ಕನ್ನಡ ಪಂಡಿತ ಜಿ.ಆರ್. ಭಟ್ ವಾಲಗಳ್ಳಿಯವರು. ಅದ್ಭುತ ಮಾಸ್ತರರು. ಅವನ ಬಾಯಲ್ಲಿ ಕೇಳಿದ ವ್ಯಾಕರಣ, ಕಾವ್ಯ ಭಾಗ, ಕುಮಾರವ್ಯಾಸನ ಕರ್ಣ-ಕೃಷ್ಣರ ಸಂಭಾಷಣೆ, ಆತನ ಕೊನೆ, ರತ್ನನ ಕೌರವ.. ಅವರ ಬಾಯಿಂದಲೇ ಕೇಳಬೇಕಾಗಿತ್ತು.
ಸಾಹಿತ್ಯದ ಬಗ್ಗೆ ಒಂದಿಷ್ಟು ಆಸಕ್ತಿ ಬೆಳೆಯುವಲ್ಲಿ ಇವರ ಕೊಡುಗೆಯೂ ಇತ್ತು. ನಮಗಂತೂ ಅವರ ಮೇಲೆ ಅಪಾರ ಗೌರವ, ಅವನ ಎದುರು ಅಪರಾಧಿಯಾಗಿ ಕೈ ಕಟ್ಟಿ ನಿಂತಾಗಲೇ ಅರ್ಧ ಸತ್ತಿದ್ದೆನು. ಅವರು ನನ್ನ ಅಣ್ಣನ ಪರಮಾತ್ಮಮ ಗುರುಗಳು ಮತ್ತು ಸ್ನೇಹಿತರು. ದಿನಕ್ಕೊಂದು ಬಾರಿ ಇಬ್ಬರ ಭೇಟಿ ಆಗದೇ ಇರುತ್ತಿರಲಿಲ್ಲ. (ಅಣ್ಣ ತಾನು ಬರೆದ ಇಂಗ್ಲೀಶ್ ವ್ಯಾಕರಣ ಪುಸ್ತಕವನ್ನು ಅವರಿಗೇ ಅರ್ಪಿಸಿದ್ದಾನೆ)
ಅವರು ನನ್ನನ್ನು ನೋಡಿದ್ದೇ ಕರೆದು ಕೊಂಡು ಬಂದ ಮಾಸ್ತರರನ್ನು ಕುರಿತು “ಈತನನ್ನು ಯಾಕೆ ಕರೆತಂದಿರಿ. ಈತ ಅಂತವನಲ್ಲ, ಸಾಹಿತಿ ಆರ್.ವಿಯವರ ಮಗ ಈತ. ಅವನ ಅಪ್ಪ ನನ್ನ ಆದರ್ಶ ವಿದ್ಯಾರ್ಥಿ. ಅವನ ಮಗ ಹಾಗೆ ಮಾಡಲಿಕ್ಕಿಲ್ಲ. ನಿಮ್ಮ ಕಣ್ಣು ಸುಳ್ಳು ಹೇಳಿರಬೇಕು” ಎಂದು ಹೇಳಿದವರೇ ನನ್ನನ್ನು ಕ್ಲಾಸಿಗೆ ಕಳುಹಿಸಿದರು.
ಅಂದು ನನಗೆ ಖುಷಿ ಆಗುವ ಬದಲು ಬೇಸರ ಆಯಿತು.
ಅಣ್ಣನ ಮಾನ ಎಷ್ಟು ದೊಡ್ಡದೆಂದೂ, ಅದನ್ನು ನಾನು ಕೆಡಿಸುತ್ತಿರುವ ಅನುಭವ ಆಯಿತು; ತಪ್ಪಿನ ಅರಿವಾಯಿತು. ಅಂದೇ ಕೊನೆ, ಮತ್ತೆ ಇಂತಹ ಕೃತ್ಯಕ್ಕೆ ಕೈ ಹಾಕಲಿಲ್ಲ, ಅಂದಿನಿಂದ ಅಣ್ಣನನ್ನು ಸರಿಯಾಗಿ ಗಮನಿಸುತ್ತಾ ಬಂದೆ. ಪ್ರತಿ ತಪ್ಪು ಮಾಡುವಾಗಲೂ ಅಣ್ಣ ದುತ್ತನೆ ಎದುರು ಬಂದಂತಾಗುತ್ತಿತ್ತು. ಇದು ನನ್ನದು ಮಾತ್ರವಲ್ಲ, ನಮ್ಮೂರಲ್ಲಿ ಅವನ ಸಖ್ಯದಲ್ಲಿರುವ ಹಲವರ ಪಾಡು ಕೂಡ ಆಗಿತ್ತು.
ಕಾಲೇಜಿಗೆ ಬರುವಾಗಲೂ ಹಾಗೆ. ಶ್ರೀಧರ ಪ್ರೆಸ್‍ನ ಎದುರು ಜಿ.ಎಸ್. ಅವಧಾನಿಯವರು ಭೇಟಿಯಾದರು, ಅವರ ಪರಿಚಯ ನನಗೆ ಮೊದಲೇ ಇತ್ತು. ಎದುರಿಗೆ ಡಾ. ಎನ್.ಆರ್. ನಾಯಕ ಅವರು ಬಂದರು. ಅವರು ಹೊನ್ನಾವರ ಕಾಲೇಜಿನ ಪ್ರಾಚಾರ್ಯರಾಗಿದ್ದರು. ನನ್ನನ್ನು ಡಾ. ನಾಯಕರಿಗೆ ಪರಿಚಯಿಸುತ್ತಾ “ಈತ ಆರ್.ವಿ. ಯವರ ಮಗ. ಈ ವರ್ಷ ನಮ್ಮ ಕಾಲೇಜಿಗೆ ಬರುತ್ತಾನೆ. ಅಪ್ಪನಂತೆ ಬುದ್ಧಿವಂತ. ನಮ್ಮ ಕನ್ನಡ ಸಂಘಕ್ಕೆ ಸೂಕ್ತ ವ್ಯಕ್ತಿ. ಚೆನ್ನಾಗಿ ಓದಿಕೊಂಡಿದ್ದಾನೆ” ಎಂದೆಲ್ಲಾ ಹೇಳಿದರು. ಹೊಟ್ಟೆಯಲ್ಲೆಲ್ಲಾ ಸಂಕಟ ಸುರುವಾಯ್ತು.
ಯಾಕೆಂದರೆ ಆ ಕ್ಷಣದವರೆಗೂ ನಾನು ಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ಓದಿದವನಾಗಿರಲಿಲ್ಲ.
ಪಿ.ಯು.ಸಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಸಂಘಟನೆ ಸೇರಿದ್ದರಿಂದ ಅಣ್ಣ ತಂದುಕೊಟ್ಟ ‘ಮಾರ್ಕ್ಸ್ ವಾದ ಎಂದರೇನು?’ ‘ಸಮಾಜವಾದದ ತತ್ವಗಳು’ ‘ನಾನೇನೆ ನಾಸ್ತಿಕ’ ಇತ್ಯಾದಿ ಸಣ್ಣ ಪುಟ್ಟ ಪುಸ್ತಕ ಓದಿದ್ದೆ. ಗೋರಾ, ಚಿರಸ್ಮರಣೆ, ‘ಜೇಡರ ಬಲೆ’ ‘ಡಾ.ಅಂಬೇಡ್ಕರ’ ‘ಪ್ರೇಮಚಂದ್ರ ಕತೆ’ಗಳನ್ನು ಮೇಲ್ಮಟ್ಟದಲ್ಲಿ ಓದಿದ್ದೆ ಅಷ್ಟೇ.
ಆದರೆ ಅವಧಾನಿಯವರ ಈ ಪರಿಚಯ ನನಗೆ ಕಷ್ಟಕ್ಕೆ ತಂದಿತು. “ಆರ್.ವಿ.ಯ ಮಗ ಓದದಿರಲು ಹೇಗೆ ಸಾಧ್ಯ” ಎನ್ನುವ ಅವರ ನಂಬಿಕೆಯನ್ನು ನಾನು ಸ್ವಲ್ಪ ಮಟ್ಟಿಗಾದರೂ ಈಡೇರಿಸಲೇಬೇಕಾಯ್ತು. ನನ್ನ ಸಲುವಾಗಿ ಅಲ್ಲದಿದ್ದರೂ ಅಣ್ಣನ ಸಲುವಾಗಿ ನಾನು ಓದಲೇ ಬೇಕಾಯ್ತು.
ಕಾಲೇಜಿನಲ್ಲಿ ಯಾವ ಕಾರ್ಯಕ್ರಮವಾಗಲಿ, ಭಾಷಣ ಸ್ಪರ್ಧೆಯಾಗಲಿ, ಸಂಘಟನೆಯ ಸಭೆಯಾಗಲಿ, ನಾಟಕದ ತರಬೇತಿಯಾಗಲಿ ನಾನು ಭಾಗವಹಿಸುವುದು ಅನಿವಾರ್ಯವಾಯಿತು. ಆರ್.ವಿ. ಭಂಡಾರಿಯವರ ಮಗನೆಂದು ಕಾಲೇಜಿನ ಸ್ಟಾಫಿನಲ್ಲಿ ಪ್ರಚಾರ. ಹಾಗಾಗಿ ನಾನು ಅನ್ಯ ಮಾರ್ಗವನ್ನು ಹಿಡಿಯಲು ಅವಕಾಶವೇ ಇರಲಿಲ್ಲ. ಶಿಕ್ಷಕರಿಗೆ ಗೌರವ ಕೊಡಬೇಕಾಯಿತು. ತರಗತಿಗೆ ಕುಳಿತುಕೊಳ್ಳಬೇಕಾಯಿತು. ಓದಬೇಕಾಯಿತು, ಗ್ರಂಥಾಲಯದಲ್ಲಿ ಕೂಡ್ರಬೇಕಾಯಿತು.. ಹೀಗೆ..
ಹೀಗೆ ನಾನು ಅನಿವಾರ್ಯವಾಗಿ ಉಳಿದವರ ನಂಬಿಕೆ ಹುಸಿ ಮಾಡಲಾಗದ ಇಕ್ಕಟ್ಟಿಗೆ ಸಿಲುಕಿದೆ. ಆದರೆ ಒಂದು ದಿನವೂ ಮಗ ಹೇಗೆ ಓದುತ್ತಾನೆಂದಾಗಲೀ, ಎಷ್ಟು ಅಂಕ ಪಡೆದನೆಂದಾಗಲೀ ಕಾಲೇಜಿಗೆ ಬಂದು ಕೇಳಿಲ್ಲ.
ಪ್ರಾಥಮಿಕ ಶಾಲೆಗೆ ಹೋಗುವಾಗಲೂ ಹಾಗೆ. ಎಂದೂ ಮಾರ್ಕ್ಸ್ ಕಾರ್ಡ್ ನೋಡಿದ್ದಿಲ್ಲ. ಕವಳ ಬಾಯಲ್ಲಿರುವಾಗ ಅಥವಾ ಆತ ಶಾಲೆಗೆ ಹೊರಟು ನಿಂತಾಗ ಮಾರ್ಕ್ಸ್ ಕಾರ್ಡ್ ತೋರಿಸುತ್ತಿದ್ದೆ. ಗಡಿಬಿಡಿಯಲ್ಲಿ ಕಣ್ಮುಚ್ಚಿ ಸಹಿ ಹಾಕುತ್ತಿದ್ದ. ಅಥವಾ ಅಕ್ಕನ ಹತ್ತಿರ ಸಹಿ ಹಾಕಿಕೋ ಅಂತ ಹೇಳುತ್ತಿದ್ದ.
ಬಹುತೇಕ ಸಂದರ್ಭದಲ್ಲಿ ಅಕ್ಕನೇ ‘ಸುಬ್ಬಿ ಕೋಂ ರೋಹಿದಾಸ ಭಂಡಾರಿ’ ಎಂದು ಸಹಿ ಹಾಕಿಕೊಡುವುದು. ಪರೀಕ್ಷೆಯ ಫಲಿತಾಂಶ ಬರುವ ದಿನ “ಆತನ ರಿಸಲ್ಟನ್ನು ಯಾರೂ ಕೇಳಬಾರದು. ಪಾಯಸ ಮಾಡಿಡು’ ಎಂದು ಆದೇಶ ಇರುತ್ತಿತ್ತು. ಹಾಗಾಗಿ ಮಾರ್ಕ್ಸ್ ಎಷ್ಟೇ ಬೀಳಲಿ ಮನೆಯಲ್ಲಿ ಪಾಯಸವಂತೂ ಇದ್ದೇ ಇರುತ್ತಿತ್ತು.
ತುಂಬಾ ಜನ ಪಾಲಕರು ‘ಭಂಡಾರಿ ಮಾಸ್ತರರ ಹತ್ತಿರ ರಿಸಲ್ಟ್ ಹೇಳಿ ಕೈಮುಗಿದು ಬಾ’ ಎಂದು ತಮ್ಮ ಮಕ್ಕಳಿಗೆ ಹೇಳಿ ಕಳಿಸುತ್ತಿದ್ದರು. ಆದರೆ ಆತ ಯಾರನ್ನೂನ ಕಾಲಿಗೆ ಬೀಳಿಸಿಕೊಳ್ಳುತ್ತಿರಲಿಲ್ಲ. ಬಂದ ಮಕ್ಕಳು 35 ಪರ್ಸಂಟೇಜಿನಿಂದ 90 ಪರ್ಸಂಟೇಜ್‍ವರೆಗೆ ಹೇಳಿದರೂ ಖುಷಿಯಿಂದ “ಗೂsssಡ್” ಎನ್ನುತ್ತಿದ್ದ. ಮುಂದೆ ಚೆನ್ನಾಗಿ ಓದು ಅನ್ನುತ್ತಿದ್ದ.
ಏನೇ ಮಾಡು ಒಳ್ಳೆಯ ಮನುಷ್ಯನಾಗಬೇಕೆನ್ನುವುದು, ಆ ಮೂಲಕ ಸಮಾಜಕ್ಕೆ, ನಾಲ್ಕು ಜನಕ್ಕೆ ಒಳಿತನ್ನು ಮಾಡಬೇಕೆನ್ನುವುದು ಆತನ ನಿಲುವಾಗಿತ್ತು.
ಹಾಗಾಗಿ ಆತ ನನಗೆ ಮೊದಲಿಂದಲೂ ಮಾರ್ಕ್ಸ್ ಓದುವ ಬದಲು ಮಾರ್ಕ್ಸ್ ವಾದ, ಲೆನಿನ್ ವಾದ, ಅಂಬೇಡ್ಕರ್ ವಾದ ಓದಲು ಹೇಳುತ್ತಿದ್ದ. ಇವರನ್ನು ಓದಿ ಅರಗಿಸಿಕೊಂಡ ಈತನೆದುರು ನಾನು ಒಂದಿಷ್ಟಾದರೂ ಒಳ್ಳೆಯವನಾಗದೇ ಬೇರೆ ದಾರಿ ಇರಲಿಲ್ಲ.

ನನ್ನ ಅಪ್ಪ ಆರ್ ವಿ ಭಂಡಾರಿ.-.ನೆನಪು 1 ವಿಠ್ಠಲ ಭಂಡಾರಿ

ನನ್ನ ಅಪ್ಪ ಆರ್ ವಿ ಭಂಡಾರಿ..

ಆರ್ ವಿ ಭಂಡಾರಿ ಎಂದರೆ ತಕ್ಷಣ ನನಗೆ ನೆನಪಾಗುವುದು ಅವರ ವಿನಾಕಾರಣ ಪ್ರೀತಿ ಹಾಗೂ ಅವರ ಎಲ್ಲವನ್ನೂ ಒಂದೇ ಪೋಸ್ಟ್ ಕಾರ್ಡ್ ನಲ್ಲಿ ಹೇಳಿಬಿಡಬೇಕು ಎನ್ನುವ ತವಕ.
ಅವರು ನನಗೆ ವರ್ಷಗಟ್ಟಲೆ ಬರೆದ ಪತ್ರಗಳು ನನ್ನೊಂದಿಗೆ ಇವೆ. ಅದರಲ್ಲಿ ಅತಿ ಹೆಚ್ಚಿನದ್ದು ಪೋಸ್ಟ್ ಕಾರ್ಡ್ ಗಳೇ. ಅವರಿಗೆ  ಮಾತನಾಡುವ, ಚರ್ಚಿಸುವ, ಸಂವಾದಿಸುವ ತವಕ ಎಷ್ಟಿತ್ತು ಎನ್ನುವುದಕ್ಕೆ ಆ ಪೋಸ್ಟ್ ಕಾರ್ಡ್ ಗಳೇ ಸಾಕ್ಷಿ. ಅವರು ಬರೆಯುವ ಕಾರ್ಡ್ ನಲ್ಲಿ ಒಂದಕ್ಷರಾದಷ್ಟೂ ಜಾಗ ಅವರು ಉಳಿಸುತ್ತಿರಲಿಲ್ಲ. ಬರದೇ ಬರೆಯುತ್ತಿದ್ದರು.
ನಮ್ಮ ಪುಸ್ತಕದ ಬಗ್ಗೆ, ಅವರು ಓದಿದ್ದರ ಬಗ್ಗೆ, ಅವರ ಪುಸ್ತಕಗಳ ಬಗ್ಗೆ ಹೀಗೆ ಸದಾ ನನ್ನ ಅವರ ನಂಟು
ಇದು ನನ್ನೊಬ್ಬನಿಗೆ ಮಾತ್ರವಲ್ಲ. ಅವರ ಹತ್ತಿರಕ್ಕೆ ಬಂದವರ ಎಲ್ಲರ ಅನುಭವವೂ ಹೌದು. ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ. ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ನಾನು ಮಂಗಳೂರಿಗೆ ಹೋದ ಮೇಲೆ ಅವರು ನೆರೆಯವರೇ ಆದ ಕಾರಣ ಇನ್ನಷ್ಟು ಅವರನ್ನು ಗಮನಿಸಲು ಸಾಧ್ಯವಾಯಿತು. ನಂತರ ಗುಲ್ಬರ್ಗದಲ್ಲಿದ್ದಾಗಲೂ ಅವರ ಕಾರ್ಡ್ ಚಳವಳಿಯಿಂದಾಗಿ ಆ ಸ್ನೇಹದ ತಂತು ಕಡಿದು ಹೋಗಲೇ ಇಲ್ಲ.
ಅವರು ಮೊದಲು ಬದಲಾವಣೆ ತಂದದ್ದು ತಮ್ಮ ಮನೆಯೊಳಗೇ. ಮನೆಯನ್ನು ಮೌಢ್ಯದೊಳಕ್ಕೆ ತಳ್ಳಿ ಸಮಾಜವನ್ನು ಮಾತ್ರ ಬದಲಾಯಿಸಲು ಹೊರಟವರ ನಡುವೆ ಇವರು ತೀರಾ ಭಿನ್ನ. ಹಾಗಾಗಿಯೇ ವಿಠ್ಠಲ, ಮಾಧವಿ, ಯಮುನಾ ಇವತ್ತು ಥೇಟ್ ಅಪ್ಪನಂತೆಯೇ ವಿಚಾರದ ದೀವಿಗೆಗಳು
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
-ಜಿ ಎನ್ ಮೋಹನ್ 
ಇದು ನನ್ನ ‘ಅಣ್ಣನ ನೆನಪು’
ನೆನಪು 1
ವಿಠ್ಠಲ ಭಂಡಾರಿ
ಅಣ್ಣ ನಮ್ಮನ್ನು ಮುದ್ದಿಸಿದ ನೆನಪು ನನಗಿಲ್ಲ.
ಮೊದಲಿಂದ ಆತ ಒಬ್ಬ ಗಂಭೀರ ವ್ಯಕ್ತಿಯಾಗಿಯೇ ನನಗೆ ಕಾಣಿಸುತ್ತಿದ್ದ.
ಯಾರೊಂದಿಗೂ ಹರಟೆ ಹೊಡೆಯುವುದಾಗಲೀ, ಅನವಶ್ಯಕ ಮಾತುಕತೆಯಾಡುತ್ತಾ ಸಮಯ ಕಳೆಯುವುದಾಗಲೀ, ಲೋಕಾಭಿರಾಮವಾಗಿ ಇನ್ನೊಬ್ಬರನ್ನು ಟೀಕೆ ಮಾಡುತ್ತಾ ಕುಳಿತುಕೊಳ್ಳುವುದಾಗಲೀ ನಾನು ನೋಡೇ ಇಲ್ಲ. ಹಾಗೆ ಅವನನ್ನು ನಾನು ಕಲ್ಪಿಸಲಾರೆ.
ಗೆಳೆಯರೊಂದಿಗೆ ಆತ ನಕ್ಕಾಗ ನಾವು ಕಿಡಕಿಯಲ್ಲಿ ನೋಡಿ ಖುಷಿಪಟ್ಟ ದಿನಗಳಿದ್ದವು. ನಾನು ಯಾರನ್ನಾದರೂ ಟೀಕೆ ಮಾಡುವಾಗಲೆಲ್ಲಾ ಆತನ ನೆನಪು ನನ್ನ ನಾಲಿಗೆಗೆ ಬ್ರೇಕ್ ಹಾಕುತ್ತಿರುತ್ತದೆ.
ಆತನನ್ನು ನಾನು ತೀರಾ ಪ್ರೀತಿಸತೊಡಗಿದ್ದು ಸೈದ್ಧಾಂತಿಕವಾಗಿಯೇ ಎನ್ನಬಹುದು. ಅಂದರೆ ನಾನು ಕಾಲೇಜಿಗೆ ಹೋಗಲು ಪ್ರಾರಂಭಿಸಿದಾಗಲೇ. ಇದಕ್ಕಿಂತ ಮೊದಲು ಅವನನ್ನು ಕಂಡರೆ ವಿಚಿತ್ರ ಭಯ, ಗೌರವ ಮಾತ್ರ ಇತ್ತೆಂದು ಕಾಣುತ್ತದೆ. ಅವನ ಸಹನಾಶೀಲ ಬದುಕಿನ ಬಗ್ಗೆ… ವಿಶ್ವ ಕೋಶದಂತಿರುವ ಜ್ಞಾನದ ಬಗ್ಗೆ… ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಓದುವ ಅವನ ಆಸಕ್ತಿಯ ಬಗ್ಗೆ… ಈ ಗೌರವ ಇತ್ತು. ಆದರೆ ಪ್ರೀತಿ ಇತ್ತೇ?
ನಾನಾಗಲೀ ನನ್ನ ಹಿರಿಯಕ್ಕ ಇಂದಿರಾ ಆಗಲಿ ಅಣ್ಣನ ಎದುರು ಕುಳಿತುಕೊಳ್ಳುತ್ತಿರಲೇ ಇಲ್ಲ; ಅಷ್ಟು ಭಯ. ಮಾಧವಿ ಮಾತ್ರ ಭಯ ಇಲ್ಲದೇ ಕೂಡ್ರುತ್ತಿದ್ದಳು. ಹಾಗೆ ಆತ ಆರಾಮ ಕುರ್ಚಿಯಲ್ಲಿ ಕುಳಿತಿರುವಾಗ ಅವನೆದುರು ಭಯವಿಲ್ಲದೆ ಮಂಚದ ಮೇಲೆ ಕುಳಿತು ಕೊಂಡಿದ್ದು ಎಂ.ಎ. ಓದಲು ವಿಶ್ವವಿದ್ಯಾಲಯಕ್ಕೆ ಹೋದ ಮೇಲೆಯೆ. ಇಲ್ಲದಿದ್ದರೆ ನಿಂತೇ ಇರುವುದು.
ಆತ ಯಾವಾಗಲೂ ಒಬ್ಬನೇ ಊಟ ಮಾಡುವುದು. ಅವನಾದ ಮೇಲೆ ನಮ್ಮೆಲ್ಲರ ಊಟ. ಯಾಕೆಂದರೆ ಅವನೊಂದಿಗೆ ಊಟಕ್ಕೆ ಕುಳಿತರೆ ಹರಟೆ ಹೊಡೆಯಲು ಆಗುತ್ತಿರಲಿಲ್ಲ. ಊಟದ ಬಗ್ಗೆ ಏನೂ ಕತೆ ಕಟ್ಟಲು ಸಾಧ್ಯ ಆಗುತ್ತಿರಲಿಲ್ಲ. ತಮಾಷೆಗೆ, ಹರಟೆಗೆ ಅವಕಾಶ ಇರಲಿಲ್ಲ. ಒಂದೂ ಮಾತು ಆಡದೇ ಊಟ ಮಾಡುವುದೆಂದರೆ ಅದು ರುಚಿಸದು. ಆತ ಊಟಕ್ಕೆ ಮತ್ತು ತಿಂಡಿಗೆ ಒಳ ಬಂದರೆ ನಾವು (ನಾನು ಮತ್ತು ಅಕ್ಕ) ಹೊರಗೆ, ಆತನ ಆರಾಮ ಕುರ್ಚಿಯಲ್ಲಿ ಕೂಡ್ರಲು ಸ್ಪರ್ಧೆ ನಮ್ಮೊಳಗೆ; ಆತ ಹೊರಗೆ ಬಂದರೆ ನಾವು ಅಲ್ಲಿಂದ ಮಾಯ.
ಅವನೊಂದಿಗೆ ನನ್ನ ಯಾವ ಬೇಡಿಕೆಯನ್ನು ಮಾತನಾಡುವುದಿದ್ದರೂ ಒಂದು ನಿರ್ದಿಷ್ಟ ಸಮಯವನ್ನು ಎದುರು ನೋಡುತ್ತಿದ್ದೆ. ಅದು ಊಟದ ನಂತರ ಆತ ಹಾಕುವ ಕವಳದ ಗಳಿಗೆ.

‘ಈ ಮಾಸ್ತರು ಉದ್ಧಾರ ಆಗುದಿಲ್ಲ’ಎಂದು ತಮಾಷೆ ಮಾಡುತ್ತಿದ್ದರು..ನೆನಪು 3 ವಿಠ್ಠಲ ಭಂಡಾರಿ

ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

ನೆನಪು  3
ಕಳ್ಳ ನಾಟಿನ ಮಂಚ
ಕಳ್ಳ ನಾಟೆಂದರೆ ಆತನಿಗೆ ಆಗುತ್ತಿರಲಿಲ್ಲ. ಅವರ ಬದ್ದ ವಿರೋಧಿ ಆತ.
ಕಾಡಿನ ಮಧ್ಯೆಯೇ ಇದ್ದು ಒಂದು ಇಂಚು ಕಟ್ಟಿಗೆಯನ್ನು ಕೂಡ ಆತ ಕಾಡಿನಿಂದ ತರಿಸಿಕೊಳ್ಳುತ್ತಿರಲಿಲ್ಲ. ಏನನ್ನು ಆತ ಸಮಾಜದಲ್ಲಿ ವಿರೋಧಿಸುತ್ತಿದ್ದನೋ ಅದನ್ನು ಮನೆಯಲ್ಲಿಯೂ ವಿರೋಧಿಸುತ್ತಿದ್ದ. ಒಬ್ಬನೇ ಇದ್ದಾಗಲೂ ವಿರೋಧಿಸುತ್ತಿದ್ದ.
ನಮ್ಮ ಮನೆ ಮಣ್ಣಿನ ಗೋಡೆ ಮತ್ತು ಅಡಿಕೆ ದಬ್ಬೆಯ ಅಟ್ಟ ಇತ್ತು. ಅದಕ್ಕೆ ಹಾಕಿದ ಅಡ್ಡಪಟ್ಟಿ ಕೂಡ ಅಡಿಕೆ ಮರದ್ದೆ, 2-3 ವರ್ಷಕ್ಕೆ ಇದನ್ನು ಬದಲಾಯಿಸಲೇಬೇಕು. ಬದಲಾಯಿಸಲು ಅಡಿಕೆ ಮರ ಸೇರಿಸಲು ತೋಟ ಇದ್ದವರ ಮನೆಗೆ ಹೋದಾಗೆಲ್ಲಾ “ಈ ಭಂಡಾರಿ ಮಾಸ್ತರರಿಗೆ ಮಳ್ಳು, ಮಾರಾಟಕ್ಕೆ ಬೇಡ,  ಸ್ವಂತ ಮನೆಗೆ ಜಂಟಿ ಹಾಕುವುದಕ್ಕೂ ನಾಟ (ಕಟ್ಟಿಗೆ ಜಂತಿ) ಬೇಡ ಅನ್ನುತ್ತಾರಲ್ಲ. ಪ್ರತೀ ವರ್ಷ ಮನೆಮನೆ ಅಡ್ಡಾಡುವ ಬದಲು ತಿಂಗಳ ಪಗಾರದಲ್ಲಿ ವರ್ಷಕ್ಕೆ 4-4 ಜಂಟಿ ಹಾಕಿದರೂ ಮುಗಿದು ಹೋಗುತ್ತಿತ್ತು. ಬೇರೆ ಮನೆಗೆ ಕೂಲಿಗೆ ಹೋಗುವವರೂ ಮಾಳಿಗೆ ಜಂತಿ, ಮಂಚ ಮಾಡಿಕೊಂಡಿದ್ದಾರೆ. ಈ ಮಾಸ್ತರು ಉದ್ಧಾರ ಆಗುದಿಲ್ಲ” ಎಂದು ತಮಾಷೆ ಮಾಡುತ್ತಿದ್ದರು.
ಯಾರು ಏನೇ ಹೇಳಿದರೂ ಒಂದೇ ಒಂದು ತುಂಡು ಕಳ್ಳ ನಾಟಾವನ್ನು ಮನೆಗೆ ಸೇರಿಸಲು ಆತ ಒಪ್ಪಲಿಲ್ಲ. ಒಮ್ಮೆ ಆತನ ಸ್ನೇಹಿತರಾದ ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಚಂಪಾ ಮುಂತಾದವರು ಮನೆಗೆ ಬರುತ್ತಾರೆಂದು ತಿಳಿದಾಗ ಒಂದು ಡೈನಿಂಗ್ ಟೇಬಲ್ ಮಾಡಿಸಲು ತೀರ್ಮಾನಿಸಲಾಯಿತು. ಆತನಿಗೂ ಮೊಣಕಾಲು ನೋವಿರುವುದರಿಂದ ನೆಲಕ್ಕೆ ಕುಳಿತು ಊಟ ಮಾಡುವುದು ಕಷ್ಟವೆನಿಸುತ್ತಿತ್ತಾದ್ದರಿಂದ ಒಪ್ಪಿಗೆಯಂತೂ ಸಿಕ್ಕಿತು.
ಆಗ ಮಾಧವಿ ನೌಕರಿ ಮಾಡುತ್ತಿರುವುದರಿಂದ ಸಣ್ಣ ಆರ್ಥಿಕ ಸಹಾಯವೂ ಅವಳಿಂದ ಸಿಗಬಹುದೆಂಬ ಧೈರ್ಯ ಇತ್ತು. ಆಚಾರಿ ಊರಿನಲ್ಲಿಯೇ ಇದ್ದ. ಕಟ್ಟಿಗೆಯೂ ಊರಿನಲ್ಲಿಯೇ ಇತ್ತು. ನಮ್ಮೂರಿನ ಪಾರೆಸ್ಟ್ರು ಗೌಡರು ಮನೆಗೆ ಬಂದು ‘ಏನಾದರೂ ಫರ್ನಿಚರ್ ಮಾಡಿಕೊಳ್ಳಿ ಮಾಸ್ತರೆ. ನಾವಂತೂ ತಕರಾರು ಮಾಡುವುದಿಲ್ಲ’ ಎಂದು ಹೇಳಿ ಹೋಗಿದ್ದರು.
ಅಕ್ಕನಿಗೆ (ಆಯಿ) ಏನಾದರೂ ಮಾಡಿಸಿಕೊಳ್ಳೋಣ ಎಂಬ ಆಸೆ. ಆದರೆ ಅಣ್ಣ ಒಪ್ಪಲಿಲ್ಲ. ಹೊನ್ನಾವರದ ಮಿಲ್ಲಿನಿಂದ ‘ಪಾಸ್’ ಇರುವ ಕಟ್ಟಿಗೆಯನ್ನೇ ತರಬೇಕೆಂದು ‘ಹಠ’ ಹಿಡಿದ. ಕೊನೆಗೂ ಹಾಗೆಯೇ ಮಾಡಲಾಯಿತು. ಆಚಾರಿ ಬರೆದು ಕೊಟ್ಟ ಸೈಜ್ ಒಂದು, ಅಲ್ಲಿ ಸಿಕ್ಕಿದ್ದೊಂದು.. ಹೀಗೆ ರಾಮಾಯಣವಾದರೂ ಸರಿಯೇ ‘ಪಾಸ್’ ಇದ್ದ ಕಟ್ಟಿಗೆಯಿಂದಲೇ ಒಂದು ಡೈನಿಂಗ್ ಟೇಬಲ್ ಬಂತು. (ಈಗಲೂ ನಮ್ಮ ಮನೆಯಲ್ಲಿರುವುದು ಇದೇ).
ಮಳೆಗಾಲ ಬಂದರೆ ನೆಲವೆಲ್ಲಾ ಥಂಡಿ ಥಂಡಿ. ಖುರ್ಚಿ ಇಟ್ಟಲ್ಲೆಲ್ಲಾ ಕುಳಿ ಬೀಳುತ್ತಿತ್ತು. ಹಾಗಾಗಿ ಖುರ್ಚಿ ಕಾಲಿಗೆ ಬಟ್ಟೆ ಸುತ್ತಿಡುತ್ತಿದ್ದರು; ಕಾಲೊಡೆ ಬಂದ ಆಕಳ ಕಾಲಿಗೆ ಬಟ್ಟೆ ಸುತ್ತಿದಂತೆ. ಮಣ್ಣಿನ ಮನೆ ಯಾರು ಬಂದರೂ ನೆಲಕ್ಕೆ ಮಲಗಬೇಕು, ಒಂದು ಮಂಚ ಮಾಡಿಸಿದರೆ ಹ್ಯಾಗೆ ಎಂಬ ಆಲೋಚನೆ ಮನೆಯಲ್ಲಿ ಪ್ರಸ್ತಾಪ ಆಯಿತು.
ಮಿಲ್ಲಿನಿಂದ ಕಟ್ಟಿಗೆ ತಂದು 8-10 ಸಾವಿರ ಹಣ ಹಾಕಲು ಸಾಧ್ಯವಿಲ್ಲವೆಂದು ಅಲ್ಲಿಗೆ ಕೈ ಬಿಡಲಾಯಿತು. ಆದರೆ ನನ್ನ ಒಬ್ಬ ಸ್ನೇಹಿತ 3-4 ಸಾವಿರ ರೂಪಾಯಿಗಳನ್ನು ನನ್ನಿಂದ ಕೈಗಡ ಪಡೆದಿದ್ದ. ವರ್ಷಗಳಿಂದ ಕೊಟ್ಟಿರಲಿಲ್ಲ. ಮತ್ತೆ ಕೇಳಿದಾಗ ಆತ ತನ್ನ ಅಸಹಾಯಕತೆ ವ್ಯಕ್ತಪಡಿಸಿ ನನ್ನ ಹಣಕ್ಕೆ ಶ್ರದ್ಧಾಂಜಲಿ ಮಾಡ ಹೊರಟ. ಆದರೆ ನನ್ನ ವಿನಯವಾದ ಮಾತು ಕೇಳಿ, ಇಷ್ಟು ಹಣ ಸೇರಿಸಲು ನಾನು ಪಟ್ಟ ಕಷ್ಟವನ್ನೆಲ್ಲ ಕೇಳಿ ಆತನ ಮನಸ್ಸೂ ಕರಗಿರಬೇಕು. ಅದಕ್ಕೆ ಆತ ಪರಿಹಾರ ಸೂಚಿಸಿದ.
ಇತ್ತೀಚೆಗೆ ನಾನು ಮಾಡಿಸಿದ ಕಾಟ್ (ಮಂಚ) ಒಂದಿದೆ. ಅದೂ ‘ಪಾಸ್’ ಕಟ್ಟಿಗೆಯದೆ, ಕೊಟ್ಟ ಹಣಕ್ಕೆ ಬದಲಾಗಿ ಇವನ್ನು ಬೇಕಾದರೆ ಕೋಡುತ್ತೇನೆ ಎಂದ. ಒಳಗೊಳಗೆ ಮಂಚದ ಮೇಲಿನ ಆಸೆಯೂ ಇತ್ತು; ಹಣವೂ ವಾಪಾಸು ಬಂದಂತಾಯಿತು. ಈ ಎರಡು ಖುಷಿಗಾಗಿ ಮಾಧವಿಯನ್ನು ಕೇಳಿದೆ. (ಅರ್ಧದಷ್ಟು ಒತ್ತಾಯ ಅವಳದೇ ಆಗಿತ್ತು.) ಅವಳೂ ಒಪ್ಪಿಗೆ ಕೊಟ್ಟಳು.
ಅಣ್ಣ ಬೆಂಗಳೂರಿಗೆ ಹೋದಾಗ ಮಂಚ ಮನೆ ಸೇರಿತು. ಮಜಬೂತ್ ಮಂಚ, ಇಬ್ಬರೂ ಆರಾಮಾಗಿ ಮಲಗಬಹುದು. ಚೌಕಟ್ಟು ಬಿಟ್ಟರೆ ಉಳಿದೆಲ್ಲ ಹುಳು ಹಿಡಿದ ಕಟ್ಟಿಗೆಯೆ. ಹಾಸಿಗೆ ಹಾಸಿದ ಮೇಲೆ ಅದೇನೂ ಕಾಣುವುದಿಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡು ಮನೆಯ ಒಳಕೋಣೆಯಲ್ಲಿ ಹಾಕಿದೆವು. ಗೋಡೆಗೆ ತಾಗಿಸಿದರೆ ಒರಲೆ ಹುತ್ತ ಬೆಳೆಯಬಹುದು; ಮಧ್ಯ ಹಾಕಿದರೆ ಓಡಾಡಲು ಆಗುವುದಿಲ್ಲ; ಮೂಲೆಯಲ್ಲಿ ಹಾಕಿದರೆ ಬಂದವರಿಗೆ ಅದರ ಡಿಸೈನ್ ಕಾಣುವುದಿಲ್ಲ; (ಯಾರಿಗೂ ಕಾಣದಿದ್ದರೆ ತಂದೇನು ಪ್ರಯೋಜನ. ನಮ್ಮ ಅನೇಕ ಬೇಡಿಕೆಗಳು ನೋಡುವ ಜನರಿಗಾಗಿಯೇ ಅಲ್ಲವೇ?) ಅಳೆದು-ಸುರಿದು ಅದರ ಮೇಲೆ ಮಲಗಿ ಟಿ.ವಿ. ನೋಡಲು ಅನುಕೂಲ ಆಗುವಂತೆ ಇಡಲಾಯಿತು.
ಅಣ್ಣನೆದುರು ಯಾರಾದರೂ ಕೇಳಿದರೆ ಹೇಳುವಂತೆಯೂ ಇಲ್ಲ. ಅವನಿಗೆ ಕಾಣದಂತೆ ಏನೇನೋ ಉಪಾಯ ಮಾಡಿದೆವು. ಸಾಮಾನ್ಯವಾಗಿ ಆತ ಇದನ್ನೆಲ್ಲಾ ಗಮನಿಸುತ್ತಿರಲಿಲ್ಲ. ಒಂದು ಸಾಮಾನು ಬಂದರೂ ಗೊತ್ತಾಗುವುದಿಲ್ಲ. ಒಂದು ಸಾಮಾನು ಮನೆಯಿಂದ ಆಚೆಗೆ ಹೋದರೂ ತಿಳಿಯುವುದಿಲ್ಲ. (ಒಂದು ಪುಸ್ತಕ ಆಚೀಚೆ ಆದರೆ ಮಾತ್ರ ತಕ್ಷಣ ಗೊತ್ತಾಗುತ್ತದೆ.)
ಆದರೆ ಒಂದು ದಿನ ಯಾರೋ ಟಿ.ವಿ ನೋಡಲು ಬಂದವರು ಮಂಚ ನೋಡಿ ಸುಮ್ಮನಾಗುವ ಬದಲು “ರೋಹಿದಾಸ ಭಾವ ಮಂಚ ಚೆನ್ನಾಗಿವೆ. ಹೊರಗಿನ ಮಂಚದ ಮೇಲೆ ನೀನು ಮಲಗುವುದಕ್ಕಿಂತ ಒಳಗಿನ ಮಂಚದ ಮೇಲೆ ಮಲಗು” ಎಂದುಬಿಟ್ಟರು. ಆಗ ಆತ ಏನು? ಎತ್ತ? ಎಂದೆಲ್ಲಾ ಕೇಳಿ ವಿಚಾರಿಸಿ ಮಂಕು ಬಡಿದವರಂತೆ ಒಂದೆಡೆ ಕುಳಿತುಬಿಟ್ಟ.
ಸಿಟ್ಟುಗೊಂಡು ಬೈದದ್ದೂ ಆಯಿತು; ಇಂದು ಸುಧಾರಿಸುತ್ತಾನೆ, ನಾಳೆ ಸುಧಾರಿಸುತ್ತಾನೆಂದು ತಿಳಿದರೆ ಹಾಗಾಗಲೇ ಇಲ್ಲ. ಯಾರೊಂದಿಗೂ ಮಾತಿಲ್ಲ. ತಾನು ಈವರೆಗೆ ಕಟ್ಟಿಕೊಂಡಿರುವ ನೈತಿಕತೆಯ ಮೌಲ್ಯವೇ ಕುಸಿದು ಬಿದ್ದಾಗ ಆಗುವ ಆಘಾತವನ್ನು ನಾವೇ ಊಹಿಸಿಕೊಳ್ಳಬೇಕು. ಅವನ ನಂಬಿಕೆ, ಮೌಲ್ಯಕ್ಕೆ ಪೆಟ್ಟು ಕೊಟ್ಟವರು ಬೇರೆ ಯಾರೂ ಅಲ್ಲ. ಶಿಕ್ಷಕಿಯಾದ ಮಗಳು, ಜನಪರ ಸಂಘಟನೆಯಲ್ಲಿ ತೊಡಗಿಕೊಂಡ ಕಮ್ಯುನಿಷ್ಟ ಚಿಂತನೆಯನ್ನು ಪ್ರತಿಪಾದಿಸುವ ಮಗ. ಎಂಥಹ ಭ್ರಮ ನಿರಸನ ಆಗಿರಬೇಕು. ಮನೆಯಲ್ಲಿ ಎಲ್ಲರೂ ಇದ್ದೂ ಆತನಿಗೆ ಯಾರೂ ನನ್ನೊಂದಿಗೆ ಅನ್ನಿಸತೊಡಗಿರಬೇಕು. ಉಸಿರುಗಟ್ಟಿಸುವ ವಾತಾವರಣ. ಅದರ ಬಿಸಿ ನಮಗೂ ತಟ್ಟತೊಡಗಿತು. ಯಾಕಾದರೂ ಈ ಮಂಚ ತಂದೆವು ಅನ್ನಿಸಿತು. ಸುಖದ ಹೊಸ ಕಲ್ಪನೆಗಾಗಿ ಇದ್ದ ಸುಖವನ್ನೂ ಕಳೆದುಕೊಂಡಂತಾಯಿತು.
ಇದೇ ಸಂದರ್ಭದಲ್ಲಿಯೇ ಆತ ‘ಮಂಚ’ ಎನ್ನುವ ಕತೆ ಬರೆದ. ಈ ಕತೆಯ ನಾಯಕ ನಾಗೇಶ ಸಾಯುವ ಕಾಲದಲ್ಲಿ ಮಗಳು ಮಾಡಿಕೊಟ್ಟ ಮಂಚದಲ್ಲಿ ಮಲಗದೇ ಸತ್ತು ಹೋಗುತ್ತಾನೆ. ಅವನಿಗೆ ಹೊಸ ಮಂಚ ಸಾವಿನ ಮಂಚವಾಗುತ್ತದೆ. (ಇದು ಮೀನ್ಪಳ್ದಿ ಸಂಕಲನದಲ್ಲಿವೆ). ಇದು ಅವನ ಕತೆ.
ನನಗೂ ಏನು ಮಾಡಬೇಕೆಂದು ತಿಳಿಯಲಿಲ್ಲ. ಮಂಚಕೊಟ್ಟವನ ಹತ್ತಿರ ಕಟ್ಟಿಗೆಯ ಪಾಸ್ ಕೇಳಿದೆ. ಆತ ಇನ್ನೇನೋ ಕತೆ ಹೇಳಿದ. ಇದು ಪಾಸ್ ಇಲ್ಲದ ಕಟ್ಟಿಗೆಯೆಂದು ಆಗ ಗೊತ್ತಾಯಿತು. ಕೊನೆಗೆ ಹೊನ್ನಾವರದ ಆರ್. ಎಫ್. ಓ ಅವರಲ್ಲಿ ಹೋದೆ. ನಮ್ಮ ಹೋರಾಟ, ವನಮಹೋತ್ಸವ ಇತ್ಯಾದಿಯ ಮೂಲಕ ಅವರು ತುಂಬಾ ಪರಿಚಯದವರು. ಅವರಿಗೆ ನಡೆದ ಕತೆ ಹೇಳಿದೆ. ಅವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕರು.
ಪ್ರಪಂಚದಲ್ಲಿ ಇಂಥವರೆಲ್ಲ ಇರುತ್ತಾರಲ್ಲಾ ಎಂದು ಖುಷಿಪಟ್ಟರು. ನಿಮ್ಮ ಕುಟುಂಬದ ಬಗ್ಗೆ ಗೌರವ ಮೂಡುತ್ತಿದೆ ಎಂದರು. (ಆಮೇಲೆ ಅವರು ಅಣ್ಣನನ್ನು ಭೇಟಿ ಕೂಡ ಆದರು.) ಅದೆಲ್ಲಾ ಸರಿ ಇದಕ್ಕೇನು ಪರಿಹಾರ ಎಂದು ಕೇಳಿದೆ. ಅವರಿಗೂ ತೋಚಲಿಲ್ಲ. ಮನೆಗೆ ಬಂದು ತುಂಬಿಕೊಂಡು ಹೋದರೆ ಜಗತ್ತಿಗೇ ಸುದ್ದಿ ಆಗಬಹುದು. ಯಾಕೆಂದರೆ ಆರ್.ವಿ. ಭಂಡಾರಿ ಮಾಡಬಹುದಾದ ಸಣ್ಣ ತಪ್ಪಿಗೆ ಇಡೀ ಊರಲ್ಲಿ ಅವನಿಗಾಗದವರು ಹಲವು ವರ್ಷದಿಂದ ಕಾಯುತ್ತಿದ್ದರು.
ಹಾಗೆ ಹೊನ್ನಾವರದ ಕೆಲವು ಪತ್ರಕರ್ತರು ಕೂಡ. ಮತ್ತೇನು ಮಾಡುವುದು.? ನಾನೇ ಪರಿಹಾರ ಹೇಳಿದೆ. ಒಂದಿಷ್ಟು ಹಣವನ್ನು ಮುಂದಿಟ್ಟು ಒಂದು ದಂಡದ ಪಾವತಿ ಹರಿದು ಕೊಡಿ. ಹಣವನ್ನು ಸರ್ಕಾರಕ್ಕೆ ತುಂಬಿ ಎಂದೆ. ಅವರು ಬೇಡವೆಂದರೂ ನನ್ನ ಒತ್ತಾಯಕ್ಕೆ ಒಪ್ಪಿ ಕಟ್ಟಿಗೆಯನ್ನು ಲೆಕ್ಕ ಹಾಕಿ ಅದರ ಮೌಲ್ಯ 1500/- ಮಾತ್ರ ಎಂದು ಹೇಳಿ ಪಾವತಿ ಕೊಟ್ಟರು.
ಅಣ್ಣನಿಗೆ ತಂದು ತೋರಿಸಿದೆ. ಅಲ್ಲಿಂದ ಆತನ ಮನಸ್ಥಿತಿ ಸುಧಾರಿಸಿತು. ನೀನು ಇನ್ನು ಈ ತಪ್ಪು ಮಾಡಬಾರದು ಎಂದು ತಾಕೀತು ಮಾಡಿದ. ಅಲ್ಲಿಗೆ ‘ಮಂಚ’ದ ಕತೆ ಮುಗಿಯಿತು. ಮಿಲ್ಲಿನಿಂದ ತಂದು ಮಾಡಿದ್ದರೆ 4 ಸಾವಿರದೊಳಗೆ ಮುಗಿಯುತ್ತಿತ್ತು. ಆದರೆ ಈಗ 5500/- ರೂ ಖರ್ಚಾಯಿತು. ಈಗಲೂ ಆ ಮಂಚದ ಮೇಲೆ ಮಲಗುವಾಗ ಅಣ್ಣ, ಆತನ ಮುಗ್ದತೆ, ಪ್ರಾಮಾಣಿಕತೆ, ಮೌಲ್ಯಗಳು ನೆನಪಾಗುತ್ತಲೇ ಇರುತ್ತದೆ. ಅಣ್ಣ ದಿನನಿತ್ಯ ನನ್ನೆದುರು ಜೀವಂತವಾಗಿರುತ್ತಾನೆ.

Wednesday, 28 March 2018

²æÃ UÀuÉñÀ £ÁAiÀÄÌ ªÀÄÄUÁé EªÀjUÉ ¢. f. J¸ï. ¨sÀlÖ, zsÁgÉñÀégÀ £É£À¦£À ¸ÀºÀAiÀiÁ£À ¸ÀªÀiÁä£À


²æÃ UÀuÉñÀ £ÁAiÀÄÌ ªÀÄÄUÁé EªÀjUÉ ¢. f. J¸ï. ¨sÀlÖ, zsÁgÉñÀégÀ
£É£À¦£À ¸ÀºÀAiÀiÁ£À ¸ÀªÀiÁä£À
¥Àæw ªÀµÀð ¸ÀºÀAiÀiÁ£À (Dg.ï «. ¨sÀAqÁj £É£À¦£À ¸ÀA¸ÀÌøw CzsÀåAiÀÄ£À PÉÃAzÀæ) PÉgÀPÉÆÃt ¤ÃqÀÄvÁÛ §A¢gÀĪÀ  ¢. f. J¸ï. ¨sÀlÖ, zsÁgÉñÀégÀ CªÀgÀ  £É£À¦£À 2018 £É ¸Á°£À “¸ÀºÀAiÀiÁ£À ¸ÀªÀiÁä£À” UËgÀªÀPÉÌ AiÀÄPÀëUÁ£À ¹Ûçà ªÉõÀzsÁjUÀ¼ÁzÀ UÀuÉñÀ £ÁAiÀÄÌ ªÀÄÄUÁé EªÀgÀ£ÀÄß DAiÉÄÌ ªÀiÁqÀ¯ÁVzÉ. ¸ÀºÀAiÀiÁ£À ¸ÀªÀiÁä£ÀªÀÅ ¸À£Áä£À ¥ÀvÀæ, £É£À¦£À PÁtÂPÉ ªÀÄvÀÄÛ  5000-00 gÀÆ £ÀUÀzÀ£ÀÄß M¼ÀUÉÆArgÀÄvÀÛzÉ JAzÀÄ ¸ÀºÀAiÀiÁ£ÀzÀ CzsÀåPÀëgÁzÀ ±ÁAvÁgÁªÀÄ £ÁAiÀÄPÀ »ZÀÌqÀ, PÁAiÀiÁðzsÀåPÀëgÁzÀ «µÀÄÚ £ÁAiÀÄÌ, PÁAiÀÄðzÀ²ð  «oÀ×® ¨sÀAqÁj w½¹zÁÝgÉ.







01-06-1965 gÀ°è ªÀÄÄUÁézÀAvÀºÀ ¸ÀtÚ ºÀ½îAiÀİè d¤¹zÀ UÀuÉñÀ £ÁAiÀÄÌ CªÀgÀÄ EAzÀÄ £Ár£À UÀªÀÄ£À ¸É¼ÉzÀÀ AiÀÄPÀëUÁ£À ¥Àæw¨sÉ. ¨Á®åzÀ®èAiÉÄà AiÀÄPÀëUÁ£À PÀ¯ÉAiÀÄ PÀÄjvÀÄ ¦æÃw ¨É¼É¹PÉÆAqÀ EªÀgÀÄ 10 £Éà vÀgÀUÀwAiÀÄ ªÀgÉUÉ ªÀiÁvÀæ «zÁå¨sÁå¸À ªÀiÁr 1982-83gÀ°è GqÀĦAiÀÄ AiÀÄPÀëUÁ£À PÉÃAzÀæªÀ£ÀÄß ¸ÉÃj vÀgÀ¨ÉÃw ¥ÀqÉzÀgÀÄ. PÀ£ÁðlPÀzÀ CzÀÄãvÀUÀ¼À°è MAzÁzÀ qÁ. ²ªÀgÁªÀÄ PÁgÀAvÀgÀ ªÀiÁUÀðzÀ±Àð£ÀzÀ°è C«¸ÀägÀtÂÃAiÀÄ PÀ°PÉ CªÀgÀzÀÄ. ªÀÄÄAzÉ CªÀgÀ ¨Áå¯ÉAiÀÄ°è ªÀÄvÀÄÛ GqÀĦ AiÀÄPÀëUÁ£À PÉÃAzÀæzÀ SÁAiÀÄA PÀ¯Á«zÀgÁV ¸ÉÃªÉ ¸À°è¹zÁÝgÉ.
¹Ûçà ªÉõÀzsÁjAiÉÄAzÀÄ ¥Àæ¹zÀÞgÁVgÀĪÀ EªÀgÀÄ ¥ÀÄgÀĵÀ ªÀÄvÀÄÛ ¹æöÛà ªÉõÀUÀ¼ÉgÀqÀgÀ®Æè ¸ÉÊ J¤ß¹PÉÆAqÀªÀgÀÄ. CA¨É, zÁPÁë¬ÄtÂ, ¸ÀĨsÀzÉæ, ¥Àæ¨sÁªÀw, ¸ÉÊgÀA¢æ, gÀÄaªÀÄw, ¸ÀvÀå¨sÁªÉÄ, zÉë, avÁæAUÀzÉ,  ªÀÄÄAvÁzÀ ¸ÀÛjà ¥ÁvÀæªÀ®èzÉà gÁªÀÄ, PÀȵÀÚ, §®gÁªÀÄ, ¸ÀAdAiÀÄ ªÀÄÄAvÁzÀ ¥ÀÄgÀĵÀ ¥ÁvÀæUÀ¼À°è PÀÆqÀ £Ár£ÁzÀåAvÀ SÁåw ¥ÀqÉ¢zÁÝgÉ. ºÀ®ªÀÅ ªÀµÀðUÀ¼À PÁ® ºÀªÁå¹ PÀ¯Á«zÀgÁV zÀÄrzÀ EªÀgÀÄ ¸ÀzsÀå PÀ¯ÁzsÀgÀ AiÀÄPÀëUÁ£À ªÀÄAqÀ°, d®ªÀ½î EzÀgÀ°è PÀ¯Á«zÀgÁV wgÀÄUÁlzÀ°èzÁÝgÉ.
                                  
»jAiÀÄ AiÀÄPÀë£ÀlgÁzÀ ªÀĺÁ§® ºÉUÀqÉ PÉgÀªÀÄ£É, amÁét gÁªÀÄZÀAzÀæ ºÉUÀqÉ, UÉÆÃqÉ £ÁgÁAiÀÄt ºÉUÀqÉ, PÀĪÀÄmÁ UÉÆÃ«AzÀ £ÁAiÀÄÌ, ¦.«. ºÁ¸ÀåUÁgÀ, §¼ÀÆîgÀÄ PÀȵÀÚAiÀiÁf, PÉÆAqÀzÀPÀĽ gÁªÀÄZÀAzÀæ ºÉUÀqÉ, JA.J¯ï. ¸ÁªÀÄUÀ, JA.J. £ÁAiÀÄÌ, ¨sÁ¸ÀÌgÀ eÉÆÃ¶ ²gÀ¼ÀV ªÀÄÄAvÁzÀªÀgÉÆqÀ£É ¹æöÛà ¥ÁvÀæ ¤ªÀð»¹zÁÝgÉ.
gÀµÁå, zÀĨÉÊ (C§ÄzÁ©), EAUÉèAqï, ¸Ëvï CªÉÄÃjPÁ ¥ÉgÀÄ, ¨Éæf¯ï, dªÀÄð¤, ¸ÁÌmï¯ÁåAqï, ¹éÃqÀ£ï, D¸ÉÖçðAiÀiÁ, ¹édgï¯ÁåAqï, ¹AUÁ¥ÀÄgÀ, Lgï¯ÁåAqï »ÃUÉ 15 PÀÆÌ ºÉZÀÄÑ gÁµÀÖçUÀ¼À°è ¥ÀæzÀ±Àð£À ¤ÃrzÁÝgÉ. ¨sÁgÀvÀzÀ §ºÀÄvÉÃPÀ J¯Áè gÁdåUÀ¼À°è EªÀgÀÄ AiÀÄPÀëUÁ£À ¥ÀæzÀ±Àð£À ¤ÃrzÁÝgÉ.
£ÁUÀ²æÃ zÀwÛ¤¢ü ¥Àæ±À¹Û M¼ÀUÉÆAqÀAvÉ £Ár£À ºÀ®ªÀÅ ¸ÀAWÀl£ÉUÀ¼ÀÄ CªÀgÀ£ÀÄß ¸À£Á䤹ªÉ.

EAvÀºÀ ªÀĺÀvÀézÀ PÀ¯Á«zÀgÁzÀ UÀuÉñÀ £ÁAiÀÄÌ ªÀÄÄUÁé EªÀjUÉ ¢£ÁAPÀ 24-03-2018 gÀAzÀÄ PÉgÉPÉÆÃtzÀ ¸ÀºÀAiÀiÁ£ÀzÀ°è £ÀqÉAiÀÄĪÀ ¸ÀªÀiÁgÀA¨sÀzÀ°è ¸À£Áä£À ¤ÃqÀ¯ÁUÀĪÀÅzÀÄ.                
14-3-2018                                     «oÀ×® ¨sÀAqÁj,   PÁAiÀÄðzÀ²ð, ¸ÀºÀAiÀiÁ£À

ಶ್ರೀ ಗಣೇಶ ನಾಯ್ಕ ಮುಗ್ವಾ ಇವರಿಗೆ ಜಿ. ಎಸ್. ಭಟ್ಟ, ಧಾರೇಶ್ವರ ನೆನಪಿನ ಸಹಯಾನ ಸಮ್ಮಾನ ಪ್ರದಾನ


ಶುದ್ಧ ಯಕ್ಷಗಾನದ ಪ್ರತಿನಿಧಿ ಗಣೇಶ ನಾಯ್ಕ ಮುಗ್ವಾ-ರಾಮ ಹೆಗಡೆ ಕೆರೆಮನೆ
ಪ್ರತಿ ವರ್ಷದಂತೆ ಸಹಯಾನ (ಆg.ï ವಿ. ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ) ಕೆರಕೋಣ ನೀಡುತ್ತಾ ಬಂದಿರುವ   ಜಿ. ಎಸ್. ಭಟ್ಟ, ಧಾರೇಶ್ವರ ಅವರ  ನೆನಪಿನ 2018 ನೆ ಸಾಲಿನ “ಸಹಯಾನ ಸಮ್ಮಾನ” ಗೌರವವನ್ನು ಇತ್ತಿಚೆಗೆ ಕೆರೆಕೋಣದಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ  ಯಕ್ಷಗಾನ ಸ್ತ್ರೀ ವೇಷಧಾರಿಗಳಾದ ಗಣೇಶ ನಾಯ್ಕ ಮುಗ್ವಾ ಇವರಿಗೆ ನೀಡಲಾಯಿತು. ಅತಿಥಿಗಳಾಗಿ ಭಾಗವಹಿಸಿದ ಕೆರೆಮನೆ ರಾಮ ಹೆಗಡೆ, ಅಧ್ಯಕ್ಷತೆ ವಹಿಸಿದ ಶ್ರೀ ವಿಷ್ಣು ನಾಯ್ಕ ಅಂಕೋಲಾ, ಉದಯ ಭಟ್ ಇವರು ಗಣೇಶ ನಾಯ್ಕ ಅವರಿಗೆ ಶಾಲು, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು  5000-00 ರೂ ನಗದನ್ನು ನೀಡಿ ಗೌರವಿಸಿದರು. 

ಸಹಯಾನ, ಚಿಂತನ ರಂಗ ಅಧ್ಯಯನ ಕೇಂದ್ರ ಉತ್ತರ ಕನ್ನಡವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನೆರವಿನೊಂದಿಗೆ ಸಂಘಟಿಸಿದ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಕಲಾವಿದರನ್ನು  ಸನ್ಮಾನಿಸಿ ಮಾತನಾಡಿದ ರಾಮ ಹೆಗಡೆ ಕೆರೆಮನೆಯವರು “ಈಗಲೂ ಪಾರಂಪರಿಕ ಯಕ್ಷಗಾನದ ಭಾವಾಭಿನಯ, ಕುಣಿತವನ್ನು ಕಾಯ್ದುಕೊಂಡು ಬಂದ ಗಣೇಶ ನಾಯ್ಕ ಒಬ್ಬ ಶುದ್ಧ ಯಕ್ಷಗಾನದ ಪ್ರತಿ ನಿಧಿ. ಇಂದು ಸಾಂಸ್ಕøತಿಕ ರಾಜಕಾರಣ ಮಾಡುವವರೆ ಹೆಚ್ಚಾಗಿದ್ದಾರೆ. ಯಕ್ಷಗಾನ ಕ್ಷೇತ್ರ ಅದಕ್ಕೆ ಹೊರತಾಗಿಲ್ಲ. ಆದರೆ ಗಣೇಶ ನಾಯ್ಕ ಅವರು ಇದ್ಯಾವುದರ ಗೊಡವೆಗೂ ಹೋಗದೆ ತನ್ನಷ್ಟಕ್ಕೆ ತಾನು ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಶಿವರಾಮ ಕಾರಂತರೊಟ್ಟಿಗೂ ಪಳಗಿದ್ದಾರೆ. ಹೀಗೆ ಅಪರೂಪದ ಕಲಾವಿದರಾದರಾಗಿಯೂ ನಿರ್ಲಕ್ಷಿಸಲ್ಪಟ್ಟವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ.” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ ನಾಯ್ಕ “ಇಂತಹ ಪ್ರಶಸ್ತಿಗಳು ಬಂದಾಗ ಖುಷಿಗೊಳ್ಳುವುದು ಸಹಜ. ಆದರೆ ಇದು ಕಲಾವಿದನ ಖ್ಯಾತಿಗೊಂದು ಗರಿ ಆಗುವುದಕ್ಕಿಂತ ಆತನ ಕರ್ತವ್ಯವನ್ನು ನೆನಪಿಸುವ ಸಂಗತಿ ಆಗಬೇಕು. ನನ್ನನ್ನು ಯಾವ ಕಾರಣಕ್ಕಾಗಿ ಗುರುತಿಸಲಾಗಿದೆಯೋ ಅದಕ್ಕೆ ಕಿಂಚಿತ್ತು ಊನ ಬರದಂತೆ ನಾವು ನಡೆದುಕೊಳ್ಳಬೇಕಾದ ಜವಾಬ್ದಾರಿ ಇದು ಅಂದುಕೊಂಡು ಈ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ. ನನ್ನ ಎಳೆವೆಯಲ್ಲಿ ನನ್ನನ್ನು ರಂಗದ ಮೇಲೂ, ಚೌಕಿಯಲ್ಲೂ ತಿದ್ದಿದ ಧಾರೇಶ್ವರ ಮಾಸ್ತರರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ಇದೆನ್ನುವ ಖುಷಿ ಒಂದೆಡೆಯಾದರೆ ಆನಂತರದ ದಿನದಲ್ಲಿ ನನ್ನ ಅರ್ಥಧಾರಿಕೆಯನ್ನು ತಿದ್ದಿದ, ಹೊಸ ಮಾದರಿಯನ್ನು ಹೇಳಿಕೊಟ್ಟ ಡಾ. ಆರ್ ವಿ ಭಂಡಾರಿಯವರ ಸಂಸ್ಮರಣೆಯ ಸಂಸ್ಥೆಯಾದ ಸಹಯಾನ ಇದನ್ನು ನೀಡುತ್ತಿರುವುದು ಕೂಡ ಸಂತೋಷವನ್ನು ಇನ್ನಷ್ಟು ಹೆಚ್ಚಿಸಿದೆ. ಈಗಲೂ ನಾನು ಪ್ರತಿಯೊಬ್ಬರಿಂದಲೂ ಕಲಿಯ ಬಯಸುತ್ತೇನೆ. ಹಲವರಿಂದ ಕಲಿತಿದ್ದೇನೆ.” ಎಂದು ಹೇಳಿದರು.
ಡಾ.ಶ್ರೀಪಾದ ಭಟ್ ಅವರು ಅಭಿನಂದನಾ ಮಾತುಗಳನ್ನಾಡಿ ಯಕ್ಷಗಾನ ಕ್ಷೇತ್ರಕ್ಕೆ ಗಣೇಶ ನಾಯ್ಕ ಅವರ ಕೊಡುಗೆಯನ್ನು ವಿವರಿಸಿದರು. ವೇದಿಕೆಯಲ್ಲಿ ಉದಯ ಭಟ್ ಉಪಸ್ಥಿತರಿದ್ದು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಯಾನದ ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ “ಮುಗ್ವಾದಂತಹ ಸಣ್ಣ ಹಳ್ಳಿಯಲ್ಲಿ ಜನಿಸಿದ ಗಣೇಶ ನಾಯ್ಕ ಅವರು ಇಂದು ನಾಡಿನ ಗಮನ ಸೆಳೆದÀ ಯಕ್ಷಗಾನ ಪ್ರತಿಭೆ. ಬಾಲ್ಯದಲ್ಲಯೇ ಯಕ್ಷಗಾನ ಕಲೆಯ ಕುರಿತು ಪ್ರೀತಿ ಬೆಳೆಸಿಕೊಂಡ ಇವರು ಸ್ತ್ರೀ ವೇಷಧಾರಿಯೆಂದು ಪ್ರಸಿದ್ಧರಾಗಿದ್ದಾರೆ. ಕರ್ನಾಟಕದ ಅದ್ಭುತಗಳಲ್ಲಿ ಒಂದಾದ ಡಾ. ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ಅವಿಸ್ಮರಣೀಯ ಕಲಿಕೆ ಅವರದು. ಮುಂದೆ ಅವರ ಬ್ಯಾಲೆಯಲ್ಲಿ ಮತ್ತು ಉಡುಪಿ ಯಕ್ಷಗಾನ ಕೇಂದ್ರದ ಖಾಯಂ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಗ್ರಾಮೀಣ ಪ್ರತಿಭೆಯನ್ನು ಗೌರವಿಸುವುದು ನಮ್ಮ ಕರ್ತವ್ಯ” ಎಂದರು. ಚಿಂತನ ರಂಗ ಅಧ್ಯಯನ ಕೇಂದ್ರದ ಕಿರಣ ಭಟ್ ಸ್ವಾಗತಿಸಿದರು. ವಿದ್ಯಾಧರ ನಾಯ್ಕ ವಂದಿಸಿದರು. ಗಣೇಶ ಭಂಡಾರಿ, ದಾಮೋದರ ನಾಯ್ಕ, ಮಾಸ್ತಿ ಗೌಡ ಅವರು ನೆನಪಿನ ಕಾಣಿಕೆ ವಿತರಿಸಿದರು. ಸಹಯಾನದ ಕಾರ್ಯದರ್ಶಿ ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.



ಸನ್ಮಾನ ಕಾರ್ಯಕ್ರಮದ ನಂತರ ತೊಳಸಾಣಿಯ ಕುಂಬಿ ಮರಾಠಿ ಸಮುದಾಯದ ಮಕ್ಕಳಿಂದ ಕನಕದಾಸರು ರಚಿಸಿದ ಪ್ರಸಿದ್ದ ಕಾವ್ಯವಾದ “ರಾಮಧಾನ್ಯ ಚರಿತ್ರೆ” ಯನ್ನು ಆಧರಿಸಿದ ಯಕ್ಷಗಾನ ಪ್ರಸಂಗವನ್ನು ಗಣೇಶ ಭಂಡಾರಿಯವರ ನಿರ್ದೇಶನದಲ್ಲಿ ಅತ್ಯುತ್ತಮವಾಗಿ ಪ್ರಯೋಗಿಸಿದರು.ಕೃಷ್ಣ ಭಂಡಾರಿಯವರು ಭಾಗವತರಾಗಿ ಮಂಜುನಾಥ ಭಂಡಾರಿ ಕರ್ಕಿ ಮತ್ತು ಮಂಜುನಾಥ ಭಂಡಾರಿ ಕಡತೋಕ ಅವರು ಮದ್ದಲೆ ವಾದಕರಾಗಿ ಭಾಗವಹಿಸಿದರು. ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿಯರಾದ ಶ್ರೀ ಗಿರೀಶ ಪದಕಿಯವರ ಕಲಾವಿದರಿಗೆ ನೆನಪಿನ ಕಾಣಿಕೆ ವಿತರಿಸಿದರು.