Thursday 13 February 2020

ಪ್ರೀತಿ ಗೀತೆ

ಮೋಡ
ನೀನು

ಗುಡುಗು
ನೀನು

ಮಿಂಚು 
ನೀನು

ಸುರಿವ ಮಳೆ 
ನೀನು

ಕನಸ ಬೀಜ 
ನೆನೆ ಹಾಕಿದವನು
ನಾನು

ಮೊಳಕೆ
ನೀನು

ಚಿಗುರು
ನೀನು

ಹೂವು
ನೀನು

ಪರಿಮಳವ 
ಸೇವಿಸುವ 
ಖುಷಿ ನಾನು.

Friday 7 February 2020

ಸಿನೆಮಾ : ಹೊಸ ತಲೆಮಾರು” ಕುರಿತು ಸಹಯಾನ ಸಾಹಿತ್ಯೋತ್ಸವ-೧೦





ಸಿನೆಮಾ : ಹೊಸ ತಲೆಮಾರು” ಕುರಿತು
ಸಹಯಾನ ಸಾಹಿತ್ಯೋತ್ಸವ-೧೦
೦೯ ಫೆಬ್ರುವರಿ, ೨೦೨೦, ರವಿವಾರ

೯-೨-೨೦೨೦ ರಂದು ರವಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆೆರೆಕೋಣದಲ್ಲಿ ಸಮುದಾಯ ಕರ್ನಾಟಕ, ಬೆಂಗಳೂರು, ಚಿಂತನ ಉತ್ತರ ಕನ್ನಡ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಸಿನೆಮಾ : ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ ೧೦ ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸಂಸ್ಕೃತಿ ಚಿಂತಕ ಕೆ. ಫಣಿರಾಜ ಅವರ ಸರ್ವಾಧ್ಯಕ್ಷತೆ ಯಲ್ಲಿ ನಡೆಯಲಿದೆ. ಹಿರಿಯ ಸಂಸ್ಕೃತಿ ಚಿಂತಕರಾದ ಪ್ರೊ. ಫಣಿರಾಜ ಅವರು ಸಧ್ಯ ಮಣಿಪಾಲದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸಿನೆಮಾ ನೋಡುಗರಾದ ಇವರು ಕರ್ನಾಟಕದ ಕೆಲವೇ ಕೆಲವು ಸಿನೆಮಾ ವಿಮರ್ಶಕರಲ್ಲಿ ಪ್ರಮುಖರು. ಕರ್ನಾಟಕದ ಜನಪರ ಚಳುವಳಿಗಳಲ್ಲಿ ಪ್ರಾರಂಭದಿAದ ತೊಡಗಿಸಿಕೊಂಡಿರುವ ಇವರು ೧೦ ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ.


ಸಿನೆಮಾ : ಹೊಸ ತಲೆಮಾರು
ದಿನಾಂಕ: ೦೯ ಫೆಬ್ರುವರಿ, ೨೦೨೦ ರವಿವಾರ ಸ್ಥಳ: ಸಹಯಾನ, ಕೆರೆಕೋಣ
ಸರ್ವಾಧ್ಯಕ್ಷರು
ಪ್ರೊ. ಕೆ. ಫಣಿರಾಜ್, ಮಣಿಪಾಲ
ಉದ್ಘಾಟನೆ: ೧೦:೦೦         
ಉದ್ಘಾಟಕರು : ಎಂ. ಎಸ್. ಪ್ರಕಾಶ ಬಾಬು, ನಿರ್ದೇಶಕರು
ಅತಿಥಿಗಳು : ಅಮ್ಮೆಂಬಳ ಆನಂದ, ಪತ್ರಕರ್ತರು
ಆಶಯ : ಪ್ರದೀಪ ಶೆಟ್ಟಿ, ಬೈಂದೂರು, ಅಧ್ಯಾಪಕರು
ಆರ್. ವಿ. ಕುರಿತು : ಎಂ. ಜಿ. ಹೆಗಡೆ, ಕುಮಟ,ಅಧ್ಯಾಪಕರು
ಮೊದಲ ಸಂವಾದ : ೧೨:೩೦
ಸಿನೆಮಾ: ಸೌಂದರ್ಯ ಮೀಮಾಂಸೆಯ ಅಭಿವ್ಯಕ್ತಿ - ಅಭಯ ಸಿಂಹ ನಿರ್ದೇಶಕರು
ಎರಡನೇ ಸಂವಾದ : ೨:೦೦ ಗುಂಪು ಸಂವಾದ
ಸಿನಿಮಾ: ನೋಡುವ, ವಿಮರ್ಶಿಸುವ ಬಗೆ  -  ಟಿ. ಕೆ. ದಯಾನಂದ, ಕತೆಗಾರ
ಮೂರನೇ ಸಂವಾದ : ೩-೦೦
ಹೆಣ್ಣಿನ ನೆಲೆಯಲ್ಲಿ ಸಿನೆಮಾ- ಅನನ್ಯ ಕಾಸರವಳ್ಳಿ, ನಟಿ ನಿರ್ದೇಶಕಿ
ನಾಲ್ಕನೇ ಸಂವಾದ : ೪-೦೦

                  ಡಿಜಿಟಲ್ ಸಿನಿಮಾ ವೇದಿಕೆಯ ಹೊಸ ಸಾಧ್ಯತೆಗಳು - ವಿಶಾಖ, ದಾವಣಗೆ
       ಸಮಾರೋಪ : ೫-೦೦ ಅತಿಥಿಗಳು: ವಿನಯಾ ಒಕ್ಕುಂದ, ಕವಯತ್ರಿ
ಸಂವಾದದಲ್ಲಿ: ಮೋಹನ ಹಬ್ಬು, ಹನುಮಂತ ಹಾಲಗೇರಿ, ಕಿರಣ ನಾಯ್ಕ, ಸಿನೆಮಾ ನಟ, ಚಿನ್ಮಯ ಹೆಗಡೆ, ಗೋಪಾಲ ಹಳ್ಳೇರ, ಸಂತೋಷ ಸಂಕೊಳ್ಳಿ, ಯೋಗೀಶ ಬಂಕೇಶ್ವರ, ಎಂ ಎಚ್ ಗಣೇಶ, ಗೋವರ್ಧನ್ ನವಿಲೇಹಾಳ, ಶಂಕರ ಕೆಂಚನೂರು, ಪ್ರಿಯಾಂಕ ಮಾವಿನಕರ, ತಿಮ್ಮಪ್ಪ ಗುಲ್ವಾಡಿ
 
೬ ಗಂಟೆಯಿAದ : ಸಿನೆಮಾ ಪ್ರದರ್ಶನ