Saturday 12 July 2014

ಮಧ್ಯಮ ವರ್ಗದ ವಿವೇಕ ಪ್ರಜ್ಞೆ - ಪರ್ವತವಾಣಿ- ಡಾ.ಶ್ರೀಪಾದ ಭಟ್

                                             ಮಧ್ಯಮ ವರ್ಗದ ವಿವೇಕ ಪ್ರಜ್ಞೆ - ಪರ್ವತವಾಣಿ

       ಭಾಷೆಯನ್ನು ಕಲಿಯುತ್ತಿರುವವರಿಂದ ರಂಗಭೂಮಿಯನ್ನು ದೂರವಾಗಿಸಿ, ಅದನ್ನು ಉತ್ಸವದ ಸರಕನ್ನಾಗಿಮಾತ್ರವೇ ಗೃಹಿಸುತ್ತ ಭಾಷೆ ಮತ್ತು ಸಂಸ್ಕೃತಿಗಿರುವ ಸಹಜ ಸಂಬಂಧವನ್ನು ಅಥರ್ೈಸಿಕೊಳ್ಳಲಾರದೇ ಏದುಸಿರು ಬಿಡುತ್ತಿರುವ ಕನ್ನಡರಂಗಭುಮಿಗೆ - ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದ ಪರ್ವರವಾಣಿಯವರು ನೆನಪಾಗುತ್ತಿರುವದು ಸಕಾಲಿಕ.
             50 - 60 ರ ದಶಕದಲ್ಲಿ ಆಧುನಿಕ ರಂಗವ್ಯಾಕರಣವನ್ನೂ, ಭಾಷಾಬಳಕೆಯ ವಿವಿಧ ಸಾಧ್ಯತೆಗಳನ್ನೂ ಬಹುದೊಡ್ಡಮಟ್ಟದಲ್ಲಿ ಪರಿಚಯಿಸಿದ್ದು ಪರ್ವತವಾಣಿ ಮತ್ತವರ ಸ್ನೇಹಿತರು. ಶಾಲಾಕಾಲೇಜುಗಳಲ್ಲಿ ಕನ್ನಡ ರೂಪುಗೊಳ್ಳತ್ತಿರುವ ಕಾಲದಲ್ಲಿ, ಊರಿನ ಶಲಾಕಾಲೇಜುಗಳ ವಾಷರ್ಿಕೋತ್ಸವವೇ ಸುಶೀಕ್ಷಿತವಲಯದ ಬಹುಮುಖ್ಯ ಮನರಂಜನೆಯ ತಾಣವಾಗಿದ್ದ ಹೊತ್ತಿನಲ್ಲಿ ಪರ್ವರವಾಣಿಯವರು ಪ್ರವೇಶಿಸಿದ್ದರು. ಕಂಪನಿಗಳ ಸಾಮಾಜಿಕ ನಾಟಕಗಳು ಜನಪ್ರಿಯವಾಗುತ್ತಿದ್ದ ಕಾಲವದು. ಶಾಲಾ ಕಾಲೇಜುಗಳಿಗೆ ಈ ಕಂಪನಿ ನಾಟಕಗಳು ಆಡುವುದಕ್ಕೆ ತುಂಬದೀರ್ಘವೂ, ಹಲವು ಅತಿರೇಕಗಳ ಅಡ್ಡೆಯೂ ಅನಿಸಿದ್ದ ಆದರೆ ಅದರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾರದ ಹೊತ್ತಿನಲ್ಲಿ ಸೂಕ್ತ ಮಧ್ಯಪ್ರವೇಶಿಕೆ ಮಾಡಿದ್ದು ಪರ್ವತವಾಣಿ ಮತ್ತವರ ಸ್ನೇಹ ವಲಯ. ಕಡಿಮೆ ಅವಧಿಯ,ಸರಳವಾಗಿ ಆಡಬಹುದಾದ,ಸೀಮಿತ ಪರಿಕರ ಮತ್ತು ಪರಿಸರದಲ್ಲಿ ನಿಭಾಯಿಸಬಹುದಾದ ಇವರ ನಾಟಕಗಳು ಬಹುಬೇಗ ಜನಪ್ರಿಯಗೊಂಡವು. ಬುದ್ದಿಗೆ ಕಚಕುಳಿ ಇಡುವಂತಿರುವ ಕಥಾ ಸಂವಿಧಾನ, ಭಾಷೆಯನ್ನು ಹಲವುಬಗೆಯಲ್ಲಿ ಬಳಸುವ ಪರಿ ಇವೆಲ್ಲವುಗಳಿಮದ ಖುಷಿಗೊಂಡ ಈ ಸಮುದಾಯ ರಂಗಭೂಮಿಯನ್ನು ವಾಷರ್ಿಕ ಕ್ರಿಯಾವಿಧಿಯನ್ನಾಗಿಸಿಕೊಂಡಿತ್ತು. ಅಲ್ಲದೇ ಪರ್ವತವಾಣಿ ಕಂಪನಿ ನಾಟಕಗಳಲ್ಲಿಯ ಟಿಪಿಕಲ್ ಆದ ಸ್ಥಾಯಿ ಪಾತ್ರಗಳಾದ ಅಣ್ಣ,ತಂಗಿ,ಅನಾರೋಗ್ಯದ ಅಪ್ಪ,ಕೆಡುಕಿನ ಧನಿಕ - ಇಂತಹ ಮಾದರಿಗಳನ್ನು ಬಿಟ್ಟು ಯಾವ ಮಧ್ಯಮವರ್ಗದ ಕುಟುಂಬಗಳಲ್ಲಿಯೂ ಇರಬಹುದಾದ ಪಾತ್ರಗಳನ್ನು ಸೃಷ್ಟಿಸಿದ್ದರಿಂದ ಅದರ ವಾಸ್ತವದ ಸಾಮೀಪ್ಯತೆ ನೂತನ ಶಿಕ್ಷಿತವಲಯಕ್ಕೆ ಆತ್ಮೀಯವೆನಿಸಿತು.
              ಕೈಲಾಸಂ ಆರಂಭಿಸಿದ ಆಧುನಿಕ ನಾಟಕ ಪರಂಪರೆಯನ್ನು ಮುಂದುವರಿಸಿ ಅಷ್ಟೇ ಅಲ್ಲದೇ ಅದನ್ನು ವಿಸ್ತರಿಸಿದವರು ಪರ್ವತವಾಣಿ. ಕೈಲಾಸಂ ಅವರ ಕನ್ನಡಾಂಗ್ಲವನ್ನು ಒಂದು ಹದಕ್ಕೆ ತಂದು , ಪಟ್ಟಣಿಗರ ಆಡುಮಾತಿನ ಲಯ, ಅದಕ್ಕೆ ಗ್ರಂತಸ್ಥ ಭಾಷೆಯ ಲೇಪ - ಮುಂದೆ ಅದೇ ಒಂದು ಮಾದರಿಯಾಗಿ ಭಾಷಾ ಪ್ರಕಾರವಾಗಿ ಪಟ್ಟಣದ ಭಾಷಿಕವಲಯದಲ್ಲಿ ಜನಪ್ರಿಯಗೊಂಡು, ಸಿನೆಮಾದ ಮೂಲಕ ವ್ಯಾಪಕತೆ ಪಡೆದದ್ದು ದಾಖಲಾರ್ಹ ಇತಿಹಾಸ. 
           ಪರ್ವತವಾಣಿ ಸಾಕಷ್ಟು ಪ್ರಗತಿಪರರು. ಈ ನಿಟ್ಟಿನಲ್ಲಿ ಕೆಲವೊಮ್ಮೆ ಅವರ ಗುರು ಕೈಲಾಸಂ ಎಲ್ಲಿ ನಿಂತುಬಿಡುತ್ತಾರೋ ಅಲ್ಲಿ ಇವರು ಮುಂದಡಿ ಇಡುತ್ತಾರೆ. ನಾಟಕ ಕ್ಷೇತ್ರದ ಪ್ರಗತಿಶೀಲರೆಂದು ಇವರನ್ನು ಕರೆದರೆ ತಪ್ಪಿಲ್ಲ. ಒಂದುರೀತಿಯಲ್ಲಿ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಪ್ರಗತಿಶೀಲರು ನೀಡಿದ ಕೊಡುಗೆಯನ್ನೇ ನಾಟಕಕ್ಷೇತ್ರಕ್ಕೆ ಪರ್ವತವಾಣಿಯವರು ನೀಡಿದ್ದರೆ. ಪಠ್ಯದ ಸಾಮಾಜಿಕ ಜವಾಬ್ದಾರಿಯನ್ನೂ ಜನಪ್ರಿಯತೆಯನ್ನೂ ಹೆಚ್ಚಿಸಿದ್ದಾರೆ.
              ನಿಜ. ಅವರದ್ದು ಮಧ್ಯಮವರ್ಗದ ಪ್ರಪಂಚ. ಮಧ್ಯಮವರ್ಗದ ನೈತಿಕತೆಯ ಒಳಗೆ ಎಷ್ಟು ಸಾಧ್ಯವೋ ಅಷ್ಟು ಪ್ರಗತಿಪರತೆಯನ್ನು ಸಾಧಿಸಿದವರು ಅವರು. ಆದರೆ ಈ ನೈತಿಕ ಜವಾಬ್ದಾರಿಗಾಗಿ ರಂಗಭುಮಿಯ ' ಈಠಡಿಟ 'ನ್ನು ಬಲಿಕೊಟ್ಟವರಲ್ಲ ಅವರು. ಈ  ಕುರಿತು ಅವರಲ್ಲಿ ಖಚಿತ ನಿಲುವು ಇತ್ತು. ಮೋಲಿಯೇರ್ನ ನಾಟಕಗಳ ರೂಪಾಂತರದ ಮುನ್ನುಡಿಯಲ್ಲಿ ಅವರು ಹೇಳಿದ ಮಾತುಗಳಿವು.  . . . ನಾಟಕಕಲೆಯಲ್ಲಿ ಹೆಚ್ಚು ಜನರನ್ನು ಸಂಪಕರ್ಿಸುವ . . . ಹೀಗೆ ಸಂಪಕರ್ಿಸಿ ಸನ್ಮಾರ್ಗಕ್ಕೆ ಎಳೆಯುವ ಪ್ರಯತ್ನ ಮಾಡುವ ಅವಕಾಶವಿದೆ. . . ಆದರೆ ಕಪ್ಪುನಾಯಿಯನ್ನು ಬಿಳಿನಾಯಿ ಮಾಡುತ್ತೇವೆಂದು ಅತಿ ಉತ್ಸಾಹದಿಂದ ಹೊರಟು ನಾಯಿಯನ್ನೇ ಮಂಗ ಮಾಡಿದ್ದೇವೆ. . . . ನಾಟಕ ಕಲೆ. ಇದಕ್ಕೆ ಪ್ರಥಮ ಸ್ಥಾನ. ನಂತರ ತಲೆ. ಎರಡೂ ಕೂಡಿದರೆ ಹೆಚ್ಚು ಬೆಲೆ. ಬರಿ 'ತಲೆ'ಯಷ್ಟನ್ನೇ ರಂಗಮಂಚದ ಮೇಲಿಟ್ಟರೆ ಪ್ರೇಕ್ಷಕರು ನೋಡುವುದಿಲ್ಲ. ಓಡುತ್ತಾರೆ. ತಲೆ - ಕಲೆ ಎರಡೂ ಕೂಡಿದ ಬೆಲೆಯುಳ್ಳ ಸಪ್ತಪದಿ ಯಂತಹನಾಟಕಗಳನ್ನು ಪರ್ವತವಾಣಿ ರಚಿಸಿದ್ದಾರೆ.
  ಸ್ವತಂತ್ರ ನಾಟಕಗಳ ಜತೆ ಅನೇಕ ರೂಪಾಂತರಗಳನ್ನೂ ನೀಡಿ ರಂಗಭೂಮಿಯನ್ನು ಸಮೃದ್ಧಿಗೊಳಿಸಿದ  ಪರ್ವತವಾಣಿಯವರನ್ನು ವಿಮರ್ಶಕರು ಅಷ್ಟಾಗಿ ಗಮನಿಸಿಲ್ಲ. ಜನಪ್ರಿಯತೆಯನ್ನು ಅನುಮಾನದಿಂದ ನೋಡಲು ಆರಂಭಿಸಿದ ಕಾಲಘಟ್ಟದಿಂದ ಇಂತವರ ಕೊಡುಗೆಯನ್ನು ಗೌರವಿಸದಿರುವ ಒಂದು ಸಂಕಥನವೇ ರೂಪುಗೊಂಡಿರುವ ಹಿನ್ನೆಲೆಯಲ್ಲಿಯೇ ನಾವಿದನ್ನು ಕಾಣಬಹುದಾಗಿದೆ. ಹೀಗೆ ಅನಾದರಕ್ಕೊಳಗಾಗಿದ್ದು ಪರ್ವತವಾಣಿ ಮಾತ್ರವಲ್ಲ ಶಲಾ ಕಾಲೇಜುಗಳ ರಂಗಭೂಮಿಯೂ ಹೌದು. ಈಗ ಶತಮಾನೋತ್ಸವದ ಶುಭ ಅವಸರದಲ್ಲಿ ಪರ್ವತವಾಣಿಯವರ ನಾಟಕಗಳನ್ನು ಪುನರವಲೋಕಿಸುತ್ತಿದ್ದೇವೆ. ಇದು ಕನ್ನಡ ರಂಗಭೂಮಿಗೆ ಸಕಾಲಿಕ. ಪರ್ವತವಾಣಿಯವರ 3 ನಾಟಕಗಳ ಕಿರು ಅವಲೋಕನದೊಂದಿಗೆ ಈ ನಿಲುವನ್ನು ಮುಂದುವರಿಸಬಹುದು.   
                              ತಪ್ಪು ಹೆಜ್ಜೆ
ತಾರಾನಾಥ - ತಾರಾಬಾಯಿ ಇವರ ಮಗ ರವಿ. ಸೊಸೆ ರೂಪಾ. ರೂಪಾಳಿಗೆ ಮಕ್ಕಳಿಲ್ಲ. ಗಂಡ ರವಿಗೆ ಮಕ್ಕಳಾಗುವ ಯೋಗವಿಲ್ಲ. ವೈದ್ಯರು ಹೀಗೆಂದು ಕೊಟ್ಟ ರಿಪೋರ್ಟನ್ನು ಆತ ಯಾರಿಗೂ ತೋರಿಸದೇ ಮುಚ್ಚಿಟ್ಟಿದ್ದಾನೆ. ಯಥಾ ಪ್ರಕಾರ ಅತ್ತೆಯ ನಿಂದನೆಗೆ, ಆಚೆ ಈಚೆಯವರ ಕುತ್ಸಿತ ನುಡಿಗೆ ರೂಪಳ ಬಲಿ. ಬಂಜೆ ತನದ ಬಿರುನುಡಿಗೆ ಆಘಾತಗೊಂಡು ದಾರಿಹೋಕನೊಬ್ಬನನ್ನು ಕೂಡಿ ಆಕೆ ಗಭರ್ಿಣಿಯಾಗುತ್ತಾಳೆ. ಹೆಂಡತಿ ಗಭರ್ಿಣಿಯಾದದ್ದು ಗಂಡನಿಗೆ ಆಘಾತ ತಂತು. ಸತ್ಯ ಹೊರಬಿತ್ತು. ಆದರೆ ರೂಪ ನಿಸ್ಸಹಾಯಕಳದಳು. ಈ  ಪರಿಸ್ಥಿತಿಯಿಂದ ಪಾರಾಗಲು ಆಕೆ ನಿದ್ದೆಗುಳಿಗೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ವಿವೇಕಿಯಾದ ಮಾವ ತಾರಾನಾಥರ ಔಚಿತ್ಯದ ನಡೆಯಿಂದ ಅತ್ತೆ, ಗಂಡ ರೂಪಾಳನ್ನು ಅವಳ ಮಗುವಿನ ಸಮೇತ ಒಪ್ಪಿಕೊಳ್ಳುತ್ತಾರೆ. ಇದು ನಾಟಕದ ಸಂವಿಧಾನ. ರೂಪಾ ಇಟ್ಟಿದ್ದು ಮಾತ್ರ ತಪ್ಪುಹೆಜ್ಜೆ ಆಗದೇ ಅವಳನ್ನು ಆ ಸಂದರ್ಭಕ್ಕೆ  ನೂಕಿದ ಸಮಾಜದ ಹೆಜ್ಜೆಗಳ ತಪ್ಪನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ನಾಟಕ ಸಂಕಲನದ ಭರತವಾಕ್ಯದಲ್ಲಿ ಬೇಂದ್ರೆ ಹೇಳುವಂತೆ  ತಪ್ಪು ಹೆಜ್ಜೆಯಲ್ಲಿ ತಪ್ಪೇನಿದೆ? ಬೆಪ್ಪಿದೆ. ಬೆರಗಿದೆ. ಅದೂ ಕರಗಿದೆ. ಸಹ್ಯ ಜೀವನದ ವಿವೇಕ
                   ಜೀವನವನ್ನು ಸಹ್ಯಗೊಳಿಸುವುದು ಕಲೆಗಳ ಉದ್ದೇಶಗಳಲ್ಲೊಂದು. ಲೋಕಾರೂಢಿಯ ಹಲವು ಸ್ವಭವಗಳು ಇಲ್ಲಿ ಚಿತ್ರಿತಗೊಂಡಿದೆ. ತಾರಾ ನಾಥರಾಯರ ಪಾತ್ರ ನಾಟಕದ ಒಟ್ಟೂ ಪ್ರದರ್ಶನಕ್ಕೆ ಒಂದು ಲವಲವಿಕೆಯನ್ನು, ಬದುಕಿಗೊಂದು ಔಚಿತ್ಯವನ್ನೂ ಕೊಡುತ್ತದೆ. ಮಾತೂ ಅಷ್ಟೆ ಹಲವು ಅರ್ಥಗಳನ್ನು ವ್ಯಂಜಿಸಲು ಆಗಾಗ ಪ್ರಯತ್ನಿಸುತ್ತದೆ. ಉಧಾ .- ರೂಪಾಳಿಗೆ ಕೊನೆಯಲ್ಲಿ ಎಚ್ಚರ ಬಂದಾಗ ಅತ್ತೆ ತಾರಾಬಾಯಿ  'ಜ್ಞಾನಬಂತು . . ಜ್ಞಾನಬಂತು ' ಎಂದು ಹೇಳುವದು ಕೇವಲ ರೂಪಾಳಿಗೆ ಬಂದ ಭೌತಿಕ ಜ್ಞಾನದ ಕುರಿತಾದ  ಮಾತಾಗದೇ ಅವಳಿಗೇ ಬಂದ ಜ್ಞಾನದ ಕುರಿತೂ ಆಡುವ ಮಾತಾಗುವಂತೆ ನಾಟಕಕಾರ ಬಳಸಿದ್ದಾನೆ.

                                                                           ಸಪ್ತಪದಿ
ಈ ಸಂಕಲನದ ಅತ್ಯುತ್ತಮ ನಾಟಕ. ತಾಂತ್ರಿಕವಾಗಿಯೂ ತುಂಬ ಬಿಗಿಯಾದ ಬಂಧದ ನಾಟಕವಿದು. ವಸ್ತುವಿನಲ್ಲಿಯೂ ತುಂಬ ಪ್ರಗತಿಪರವಾದ ನಿಲುವಿನ, ಸಂಪ್ರದಾಯವಾದಿಗಳಿಗೆ 'ಠಞ ' ನೀಡುವ ನಾಟಕ. ಹೀಗೆ ಆಶಯ - ಆಕೃತಿ ಎರಡರಲ್ಲೂ ಛಂದದ ನಾಟಕ.
       ನಾಟಕ ನಡೆಯುವುದು ಮದುವೆ ಮಂಟಪದಲ್ಲಿ. ನಾಟಕ ನಡೆಸುವ ಸೂತ್ರಧಾರ, ಮದುವೆಯ ಸೂತ್ರಧಾರನಾದ ಪುರೋಹಿತ. ರಾಜು ಮತ್ತು ಸರಸು ಎನ್ನುವವರು ಮದುವೆ ಮನೆಯ ಗಂಡು ಹೆಣ್ಣು. ಮಾಂಗಲ್ಯ ಕಟ್ಟಿ ಮುಗಿದಿದ್ದರೂ ಸಪ್ತಪದಿ ತುಳಿಯುವ ಕ್ರಿಯೆ ಇನ್ನೂ ಆಗ ಬೇಕಿದೆ.  ಪುರೋಹಿತರ ಪ್ರಕಾರ ಮಾಂಗಲ್ಯ ಧಾರಣೆ ಆದರೂ ಮದುವೆ ಆದಂತಲ್ಲ. ಇನ್ನೂ ಅವರು ಗಂಡು - ಹೆಣ್ಣ ಅಷ್ಟೆ. ಸಪ್ತಪದಿ ತುಳಿದ ಮೇಲೆಯೇ ಗಂಡ ಹೆಂಡತಿ. ಅವರಿಗೆ ಅರ್ಥವಾಗುವಂತೆ ಆತ ಸಂಸ್ಕೃತದ ಸಪ್ತಪದಿಯ ಮಂತ್ರಗಳನ್ನು ಕನ್ನಡದಲ್ಲಿಯೂ ಅನುವಾದಿಸಿ ಹೇಳುತ್ತಾನೆ. 7 ಹೆಜ್ಜೆಗೆ 7 ಮಂತ್ರ. ರಾಜೂ ಸರಸು ಇವರ ವಲ್ಲಿ ಮತ್ತು ಸೆರಗಿಗೆ ಗಂಟು ಹಾಕಲಾಗಿದೆ. ಪುರೋಹಿತರ ಮಂತ್ರದೊಂದಿಗೆ ಒಂದೊಂದೇ ಹೆಜ್ಜೆ ಆರಂಭ. ನಿಜವಾದ ನಾಟಕ, ನಾಟಕದೊಳಗಿನ ನಾಟಕ ಆರಂಭಗೊಳ್ಳುತ್ತದೆ.
   ಪ್ರತಿ ಮಂತ್ರ ಮತ್ತು ಹೆಜ್ಜೆಗು ಸರಸು ಮತ್ತು ರಾಜು ಒಬ್ಬರಾದ ಮೇಲೆ ಒಬ್ಬರಂತೆ ತಮ್ಮ ಗತ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿ ಮಂತ್ರದ ಹೆಜ್ಜೆಗೊಮ್ಮೆ ಹಿನ್ನೋಟ. ಈ ಹಿನ್ನೋಟದಲ್ಲಿಯೂ ಕ್ರಮವಿದೆ. ಆ ನೆನಪಿಗೂ ಒಂದು ತಾಕರ್ಿಕಗತಿಯಿದೆ. ಅದು ಸಪ್ತಪದಿಯ ಪ್ರತಿಹೆಜ್ಜೆಯ ಮಂತ್ರದ ಅರ್ಥವನ್ನು ಆಧರಿಸಿದೆ. ಉಧಾ:'ಸಂಸಾರಕ್ಕೆ ನೆರವಾಗು' ಎಂದು ಗಂಡು ಹೆಣ್ಣನ್ನು ಕೇಳಿಕೊಳ್ಳುವ ಮೊದಲ ಹೆಜ್ಜೆಯ ಮಂತ್ರವನ್ನು ಪುರೋಹಿತರು ಹೇಳಿದಾಗ ಸರಸುವಿಗೆ, ವರದಕ್ಷಿಣೆ ಕೇಳಲು ಬಂದ ಗಂಡೊಬ್ಬನ ತಂದೆಯ ಜೊತೆಗಿನ ಮನಸ್ತಾಪದ ಘಟನೆ ನೆನಪಾಗುತ್ತದೆ. 'ಶರೀರ ಕ್ರಿಯೆಗೆ ನೆರವಾಗು' ಎಂಬ ಮಂತ್ರಕ್ಕೆ ಹೆಜ್ಜೆಹಾಕುವಾಗ ರಾಜುವಿಗೆ, ತಾನು ವಾರಾನ್ನ ಉಣ್ಣುತ್ತಿದ್ದ ಮನೆಯ ಯಜಮಾನನ ಹೆಂಡತಿ ತನ್ನ ಶರೀರಕ್ಕೆ ಸೋತು ಆಕ್ರಮಿಸ ಬಂದ ನೆನಪು - ಹೀಗೆ ಆರು ಹೆಜ್ಜೆಗೆ ಆರು ನೆನಪು. ಈ ನೆನಪುಗಳಿಗೆ ಇನ್ನೊಂದು ತರ್ಕವೂ ಇದೆ. ಅದೆಂದರೆ ಸರಸು ಕಾಣುವ ನೆನಪು ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ್ದರೆ ರಾಜು ಕಾಣುವ ನೆನಪು ಹೆಣ್ಣಿನ ತಪ್ಪಿನ ನಡೆಗೆ ಸಂಬಂಧಿಸಿದ್ದಾಗಿರುತ್ತದೆ. ಏಳನೇ ಹೆಜ್ಜೆ ಇನ್ನೇನು ಆರಂಭವಾಗಬೇಕು ಆಗ ಇಬ್ಬರೂ ಪುರೋಹಿತರಲ್ಲಿ ಮಂತ್ರ ನಿಲ್ಲಿಸಲು ಹೇಳಿ, ಕೋಣೆಯೊಂದರಲ್ಲಿ ಮನಬಿಚ್ಚಿ ಮಾತನಾಡಿಕೊಳ್ಳುತ್ತಾರೆ. ಇಬ್ಬರೂ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಇಬ್ಬರ ಮಾತುಗಳಲ್ಲಿಯೂ ಅವರ ಗತದ ನೆನಪಿನ ಕಹಿ ಇದೆ. ಹೆಣ್ಣು ಗಂಡಿನ ಸಮಾನತೆ,ದುಡಿಯುವ ಹಕ್ಕಿನ ಸಂಬಂಧದ ಚಚರ್ೆಯನಂತರ ಇಬ್ಬರೂ ಒಮ್ಮತದಿಂದ ಹೊರಬಂದು ಎಲ್ಲರೆದುರೂ ನಾಟಕೀಯವಾಗಿ ತಮ್ಮ ವಲ್ಲಿ - ಸೆರಗಿನ ಕೊನೆಗೆಹಾಕಿದ ಗಂಟನ್ನು ಬಿಡಿಸಿಕೊಂಡು, ಸೇರಿದವರೆಲ್ಲ ಛೀ ಎನ್ನುತ್ತರುವಂತೆ ಮದುವೆಯಿಂದ ದೂರ ಸರಿಯುತ್ತಾರೆ.
     ರಂಗ ತಂತ್ರ, ಸಂಭಾಷಣೆ, ನಾಟಕದ ಸಂವಿಧಾನ ಇವೆಲ್ಲ ತುಂಬ ಆಸ್ಥೆಯಿಂದ ಒಂದರೊಳಗೊಂದು ಹೊಂದಿಕೊಂಡ ನಾಟಕವಿದು. ಮಾತು-ಕ್ರಿಯೆ ಎರಡರಲ್ಲೂ ಒಂದು ಬಂದವಿದೆ. ನಾಟಕದ ಸೂತ್ರಧಾರನೇ ಆದ ಮದುವೆಯ ಸುತ್ರಧಾರ ಪುರೋಹಿತ ಆರಂಭದಲ್ಲಿಯೇ ಆಡುವ ಮಾತು ನಾಟಕದ ಕುರಿತ ಮುಂದಿನ ನಡೆಯನ್ನು ಸುಚಿಸುತ್ತದೆ.  . . . ನೀವು ಏಳನೇ ಹೆಜ್ಜೆ ಇಡುವುದರೊಳಗೆ ಏನಾದರೂ ಆಕಸ್ಮಿಕ ಆಗಿ ಈ ಶಾಸ್ತ್ರ ನಿಂತಿತೂ . . .  ನಾಟಕದಲ್ಲಿ ಈ ಶಾಸ್ತ್ರ ನಿಂತೇ ಹೋಗುತ್ತದೆ. ಅಲ್ಲದೇ ನಟಕದಲ್ಲಿ ಪುರೋಹಿತರಾಡುವ ಮಾತು ಈ ನಾಟಕದ ಆಶಯವನ್ನೂ ಧ್ವನಿಸುತ್ತದೆ.  . . . ಹೆಂಗಸಿಗೆ ಮೀಸೆ ಇಲ್ಲ. ಗಂಡಸಿಗಿದೆ. ಆದ್ದರಿಂದ ಅವನು ಕೂತಿರ ಬೇಕು, ಅವಳು ಓಡಾಡುತ್ತಿರಬೇಕು ಅನ್ನುವ ಪದ್ಧತಿ ತಪ್ಪು. ಶಾಸ್ತ್ರದ ಸರಿಯದ ಅಥ್ ತಿಳಿದುಕೊಂಡರೆ ಇಬ್ಬರು . . . ಹೆಜ್ಜೆಯಿಡಬೇಕು.
ತಮ್ಮ ಚಚರ್ೆಯನಂತರ ಕೋಣೆಯೊಳಗಿನಿಂದ ಹೊರಬರುವಾಗ ರಾಜು ಮತ್ತು ಸರಸು ಇವರಾಡುವ ಮತುಗಳನ್ನು ನೋಡಿ.
ರಾಜು: ನಡೆಯಿರಿ
ಸರಸು: ನೀವು ಮುಂದೆ
ರಾಜು: ಉಂಟೆ? ಲೇಡೀಸ್ ಫಸ್ಟ್. ನಿವು ಮುಂದೆ
ಸರಸು:  . . . ಬೆಡ . . ಬೇಡ . . . ಒಟ್ಟಿಗೆ . . .
  ನಾಟಕದಲ್ಲಿ 17 ದೃಶ್ಯಗಳಿವೆ. ಯಾವ ದೃಶ್ಯವೂ ದೀರ್ಘವಾಗದೇ ವೇಗವಾಗಿ ಸಾಗುತ್ತದೆ. ಕೇವಲ ಕ್ರಿಯೆಯೊಂದನ್ನೇ ಸೂಚಿಸುವ, ಮತಿಲ್ಲದ ದೃಶ್ಯವೂ ಇದೆ.  ಮಾತು, ನಟಕದ ಲಯವನ್ನು ಕೊಂಡೊಯ್ಯುವ ರೀತಿ ಗಮನಾರ್ಹವಾದುದು. ಉಧಾ: ದೃಶ್ಯ 1ರ ಕೊನೆಯ ಮಾತು  . . ಮೊದಲ ಹೆಜ್ಜೆ ಎಂದಿದ್ದರೆ 2ನೇ ದೃಶ್ಯದ ಮೊದಲ ಮಾತು 'ಮೊದಲ ಹೆಜ್ಜೆ'ಯನ್ನು ಒಳಗೊಂಡಿದೆ. ನಾಟಕದುದ್ದಕ್ಕೂ ಇಂತಹ ಲಯವನ್ನು ಸಂಬಾಳಿಸಲಾಗಿದೆ.

                               ಫೋರೆನ್ ಮಾಲು
ಮುದುಕನೊಬ್ಬ ಪ್ರೇಕ್ಷಕರಿಗೆ ವಿದೇಶೀ ಸರಕಿನ ವ್ಯಾಮೋಹದಿಂದ ತೊಂದರೆಗೊಳಗಾದವರ ಕತೆಗಲನ್ನು ತೋರಿಸುತ್ತ ಸಗುವ ನಾಟಕವಿದು. ವಿದೇಶೀ ಸೀರೆಗೆ ಮರುಳಾಗುವ ಹೆಂಗಸರು, ವಿದೇಶದಲ್ಲಿಯೇ ಉತ್ತಮ ಪ್ರಶಂಸೆಗೆ ಒಳಗಾಗುವ ದೇಶೀ ಗಡಿಯಾರ, ಫಾರಿನ್ ಅಳಿಯನನ್ನು ಮಡಿಕೊಳ್ಳುವ ಹುಚ್ಚಿನಲ್ಲಿ ಮೋಸ ಹೋದ ಅಪ್ಪ, ತಾಯಂದಿರನ್ನು ತುಳಸೀಕಟ್ಟೆಯ ಅಮ್ಮಂದಿರೆಂದು ಜರಿಯುವ ಹುಡುಗಿಯರು, ಮಮ್ಮಿ - ಡ್ಯಾಡಿ ಉಲಿಯುವ ಮಕ್ಕಳು, ಫಾರಿನ್ ಸಿನೆಮ ನೊಡಿ ಅನುಕರಿಸ ಹೊರಟು ಸಿಕ್ಕಿಬಿದ್ದ ಕಳ್ಳ, ವಿದೇಶೀ ನಾಟಕದ ಅನುಕರಣೆಯಲ್ಲಿ ಸಿಕ್ಕಿದ ಅಸಂಗತ ನಾಟಕದ ದೃಶ್ಯ, - ಇವೆಲ್ಲವನ್ನು ಕಾಣಿಸಲು ಪ್ರಯತ್ನಿಸುತ್ತದೆ. ಸ್ವದೇಶಿ ಆಂದೋಲನದ ಹರಿಕಾರರಾದ ಗಾಂಧಿಯನ್ನು ಮರೆತ ಸಮಕಾಲೀನ ಸಮಾಜದ ವಿಡಂಬನೆ ಇದರ ಉದ್ದೇಶ. 
     ಸ್ವದೇಶಿ - ವಿದೇಶಿಯನ್ನು ತುಸು ಸರಳೀಕರಿಸಿದ ನಟಕ ಎಂದೆನಿಸಿದರೂ ಕೆಲವು ಆಸಕ್ತಿದಾಯಕ ಸಂಗತಿಗಳೂ ಈ ನಾಟಕದಲ್ಲಿದೆ. ಆರಂಭದಲ್ಲಿ ಪ್ರೇಕ್ಷಕರೊಂದಿಗೆ ಮಾತನಾಡುವ ಮುದುಕ ಸೂತ್ರಧಾರನಾಗಿ ಬೆಳೆಯುವದು ಪ್ರಯೋಗದ ಕುತೂಹಲ ಹೆಚ್ಚಿಸುತ್ತದೆ. ಆ ಕಾಲದಲ್ಲಿ ಪ್ರಚಾರಕ್ಕೆ ಬಂದ ಅಸಂಗತ ನಾಟಕವನ್ನು ಲೇಖಕರು ಸಾಹಿತ್ಯದ ಫೋರೆನ್ ಮಾಲು ಎಂದು ಕರೆದಿರುವದು, ನಾಟಕ-ಪ್ರೇಕ್ಷಕರನ್ನು ಕುರಿತ ಮಾತುಗಳು ಚಚರ್ೆಗೆ ಅವಕಾಶ ನೀಡುತ್ತದೆ. ಫಾರಿನ್ ಅಳಿಯನಿಗೆ ಮಗಳನ್ನು ಕೊಟ್ಟು ಬೇಸ್ತು ಬಿದ್ದ ಅಪ್ಪನಿಗೆ ಮಗಳು ಬರೆದ ಕಾಗದದಲ್ಲಿ ಬದುಕಿನ ವಿವೇಕವೂ ಇದೆ. ಆಕೆ ಅಂತಾಳೆ  . . . . ಆದರೂ ನಾನು ಆತ್ಮಹತ್ಯೆ ಮಾಡಿಕೊಳ್ಳೊಲ್ಲ .

           'ಸಪ್ತಪದಿ', 'ತಪ್ಪುಹೆಜ್ಜೆ','ಫೋರೆನ್ ಮಾಲು' - ಈ ಮೂರೂ ನಾಟಕಗಳ ವಸ್ತು ವಿನ್ಯಾಸ ಬೇರೆ ಬೇರೆಯಾಗಿದ್ದರೂ ಇವುಗಳ ಆಶಯದಲ್ಲಿ ಸಾಮ್ಯತೆಗಳಿವೆ. ಇವು ಮೂರೂ 'ಸರಿ ಪಡಿಸಿಕೊಳ್ಳ ಬಹುದಾದ ತಪ್ಪುಗಳ'ಕುರಿತು ಮಾತನಾಡುತ್ತದೆ. 'ಸಪ್ತಪದಿ' ವ್ಯಕ್ತಿಗತವಾಗಿ ಗಂಡು ಹೆಣ್ಣಿನ ಕುರಿತು, ಹೆಣ್ಣು ಗಂಡಿನ ಕುರಿತು ತಳೆಯುವ ತಪ್ಪು ಅಭಿಪ್ರಾಯವನ್ನು ದೂರ ಮಡಿಕೊಳ್ಳಲು ಇರುವ ಅವಕಾಶದ ಕುರಿತು ಹೇಳಿದರೆ, 'ತಪ್ಪುಹೆಜ್ಜೆ' ಕುಟುಂಬವೊಂದು ತಳೆಯುವ ತಪ್ಪು ನಿಧರ್ಾರವನ್ನು ಸರಿಪಡಿಸುತ್ತದೆ. 'ಫಾರಿನ್ ಮಾಲು' ಸಮಾಜ ಇಡುತ್ತಿರುವ ತಪ್ಪು ಹೆಜ್ಜೆಯಕುರಿತು ಎಚ್ಚರಿಸುತ್ತದೆ. ಹೀಗೆ ವ್ಯಕ್ತಿ,ಕುಟುಂಬ,ಸಮಾಜ - ಈ ಮೂರೂ ಸ್ತರಗಳಲ್ಲಿಯೂ ಇಡುತ್ತಿರುವ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳಬೇಕಾದ ವಿವೇಕದ ಕುರಿತು ಇವು ಗಮನ ಸೆಳೆಯುತ್ತವೆ.
             ಬದುಕಿನ ಬಗ್ಗೆ ಗಾಢವಾದ ಪ್ರೀತಿ, ವ್ಯವಸ್ಥೆಯ ಒಳಗಿದ್ದೇ ಅದರ ಪರಿಧಿ ಹಿಗ್ಗಿಸುವ ಪ್ರಯತ್ನ ಅವರ ನಟಕಗಳ ಸ್ಥಾಯಿಭಾವ. ಮಧ್ಯಮತನ ಕೇವಲ ಅವರ ವರ್ಗಪ್ರಜ್ಷೆಗೆ ಮಾತ್ರ ಸಂಬಂಧಿಸಿದುದಲ್ಲ. ಅದು ಅವರ ನಿಲುವಿಗೂ ಸಂಬಂಧಿಸಿದುದು.ಹಾಗಾಗಿ ಕೆಲವೊಮ್ಮೆ ಅವರು ತೀರ ಬಿಸಿಯಲ್ಲ ಅನಿಸುತ್ತದೆ. ಆದರೆ ಅವರು ತೀರ ತಂಪೂ ಅಲ್ಲ. ಅವರು ಉಗುರು ಬೆಚ್ಚನೆಯ ಅನುಭವ ನೀಡುವಂತವರು.
          ಹೆಚ್ಚು ಅರ್ಥ ವ್ಯಂಜಕತೆಗೆ ಆಸ್ಪದ ಮಾಡಿಕೊಡುವ ಚಿಕ್ಕಚಿಕ್ಕ ಮಾತುಗಳು, ಕುತೂಹಲ ಹುಟ್ಟಿಸುವ ಆರಂಭಗಳು, ಚಿಕ್ಕದಾದ ಒಗಟೊಂದನ್ನು ಒಡಲಲ್ಲಿರಿಸಿಕೊಂಡು ಅದನ್ನು ಬಿಡಿಸುತ್ತಹೋಗುವಂತಿರುವ ನಾಟಕದ ಬೆಳವಣಿಗೆ,ಅನವಶ್ಯಕ ಮಾತು ಪಾತ್ರಗಳು ಬರದಂತೆ ಕಾದುಕೊಳ್ಳುವ ಶುಚಿತ್ವ, ಇವು ಪರ್ವತವಾಣಿಯವರ ನಾಟಕಗಳ ಕೆಲವು ಲಕ್ಷಣಗಳು.
          ನಿಜ, ಇವು ಮಾತಿನ ನಾಟಕಗಳು.ಅದನ್ನೇ ಪ್ರಧಾನವಾಗಿಟ್ಟುಕೊಂಡವು.ರಂಗಭೂಮಿಯ ಎಲ್ಲ ಸಾಧ್ಯತೆಗಳನ್ನೂ ಇವು ಪೂರೈಸಿಬಿಟ್ಟಿದ್ದವು ಎಂದಲ್ಲ ಆದರೆ ಇವು ಪೂರೈಸಿಕೊಟ್ಟ ಆದರೆ ಇಂದು ಅಭಾವವಾಗುತ್ತಿರುವ ಹಲವು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಇಂದಿನ ರಂಗಭೂಮಿಯ ಹಿತಕ್ಕೆ ಪೂರಕ.
          ಹೀಗೆ ರಂಗಭೂಮಿಯ ಇತಿಹಾಸದ ಒಂದು ಕಾಲಘಟ್ಟದಲ್ಲಿ ತಮ್ಮ ಪಾತ್ರವನ್ನು ತುಂಬಸಮರ್ಥವಾಗಿ ನಿರ್ವಹಿಸಿದವರು ಪರ್ವತವಾಣಿ.ಸ್ವತಂತ್ರ,ರೂಪಾಂತರ - ಹೀಗೆ ಹಲವು ನಾಟಕಗಳ ರಚನೆಯ ಮೂಲಕ ಕಾಲದ ಕರೆಗೆ ಓಗೊಟ್ಟವರು. ಇಂದಿನ ಯುವ ಜನತೆಯಲ್ಲಿ ರಂಗವ್ಯಾಕರಣದ ಪರಿಚಯವೇ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅವರ ನಡುವೆ ಸುಲಭವಾಗಿ, ಸರಳವಾಗಿ, ಒಂದುಚಟುವಟಿಕೆಯಾಗಿ ರಂಗಪ್ರದರ್ಶನಗಳು ಬೆಳೆಯಬೇಕಾದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚು. ಇದನ್ನು ಪರ್ವತವಾಣಿ ಚೆನ್ನಾಗಿ ಸಾಧಿಸಿದ್ದರು.
            ಹೀಗಾಗಿ ಪರ್ವತವಾಣಿಯವರನ್ನು ಕೇವಲ ಕಲಾ ಇತಿಹಾಸದ ಕಣ್ಣಿನಿಂದ ನೋಡಲಾಗದು. ಸಾಮಾಜಿಕ ಸ್ವಾಸ್ಥ್ಯ, ಒಪ್ಪಂದಗಳು, ಸಂಸ್ಕೃತಿ, ಭಾಷೆ - ಈ ನಿಟ್ಟಿನಿಂದಲೂ ಗಮನಿಸಬೇಕು.
     
                                                         - ಡಾ.ಶ್ರೀಪಾದ ಭಟ್
                                                               ಶಿರಸಿ
                       

Friday 11 July 2014

ವಿಡಂಬಾರಿ ಅವರ ಕವಳ -- ಡಾ. ಪುರುಷೋತ್ತಮ ಬಿಳಿಮಲೆ


ವಿಡಂಬಾರಿ ಅವರ ಕವಳ
ಡಾ. ಪುರುಷೋತ್ತಮ ಬಿಳಿಮಲೆ

ದಿನಕರ ದೇಸಾಯಿಯವರ ಅನಂತರ ಚೌಪದಿಗಳ ಕಾಲ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇದೀಗ ವಿಡಂಬಾರಿಯವರು ಕವಳದ ಮೂಲಕ ಆ ಮಾತನ್ನು ಸುಳ್ಳಾಗಿಸಿದ್ದಾರೆ. ಚೌಪದಿಗಳಿಗೆ ಉತ್ತರ ಕನ್ನಡ ಇನ್ನೂ ಫಲವತ್ತಾದ ಭೂಮಿಯಾಗಿದೆ ಎಂಬುದಕ್ಕೆ ಇದೊಂದು ದೃಷ್ಟಾಂತ. 
ಚೌಪದಿಗಳ ಪ್ರಧಾನ ಗುಣ ಎರಡು. ಮೊದಲನೆಯದಾಗಿ ಮಿತವಾದ ಮಾತುಗಳಲ್ಲಿ ಗಂಭೀರವಾದ ಅರ್ಥವನ್ನು ಹಿಡಿದಿಡುವುದು ಮತ್ತು ಎರಡನೆಯದಾಗಿ ಚೌಪದಿಯ ಕೊನೆ ಸಾಲಿನಲ್ಲಿ ಮಾಮರ್ಿಕವಾದ ತಿರುವೊಂದನ್ನು ತುಂದಿರುವುದು. ಈ ಕೊನೆಯ ಸಾಲು ಅನೇಕ ಬಾರಿ ವಿಡಂಬನಾ ಪ್ರಧಾನವಾಗಿದ್ದು, ಅದಕ್ಕಿಂತ ಮೊದಲಿನ ಮೂರು ಸಾಲುಗಳಿಗೆ ಹೊಸ ಅರ್ಥವನ್ನು ಕೊಡುವಷ್ಟು ಸಶಕ್ತವಾಗಿರುವುದು. ದೇಸಾಯಿಯವರು ಈ ಎರಡನೆಯ ಗುಣವನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದರು. ಕನ್ನಡದ ತ್ರಿಪದಿಗಳ ಸಾರ್ವಭೌಮನಾದ ಸರ್ವಜ್ಞನು ಮೊದಲನೇ ಗುಣಕ್ಕೆ ಹೆಸರಾದವನು.
ವಿಡಂಬಾರಿಯವರು, ಅವರ ಕಾವ್ಯನಾಮದಂತೆ, ವಿಡಂಬನೆಯಲ್ಲಿ ಪ್ರಸಿದ್ಧರು. ಇದು ಚೌಪದಿಯ ಕೊನೆ ಸಾಲಿನಲ್ಲಿ ಬರುತ್ತಿದ್ದದ್ದು, ಇವರಲ್ಲಿ ಆರಂಭದಲ್ಲಿ ಬಂದು ಬಿಡುತ್ತದೆ.
ಉದಾ : ಕನರ್ಾಟಕ ರಾಜ್ಯ ಸೋರಿಗೆಯ ಗಾಡಿ
ಗುರಿಯ ಮುಟ್ಟುವುದುಂಟೆ ಒಂದು ಕಡೆ ಓಡಿ
ಪ್ರಯಾಣಿಕರ ಮಾತ್ರ ಬೋಳಿಸುವ ದಾರಿ
ಚೆನ್ನಾಗಿ ಗೊತ್ತುಂಟು ಮಿತಿಯನ್ನು ಮೀರಿ. (337)
ಇಲ್ಲೂ ಮೊದಲ ಸಾಲಿನಲ್ಲಿ ಬರುವ ರಾಜ್ಯ ಸೋರಿಗೆ ಎಂಬುದು ವಿಡಂಬನೆಗಾಗಿಯೇ ಬಂದಿದೆ. ಚೌಪದಿಯ ಮುಂದಿನ ಸಾಲುಗಳು ಇದನ್ನು ಮೀರಿ ಬೆಳೆಯುವುದಿಲ್ಲದ ಕಾರಣ ಈ ವಿಡಂಬನೆ ಹೆಚ್ಚು ಯಶಸ್ವಿಯಾಗುವುದಿಲ್ಲ. ಆದರೆ ಸಾಮಾಜಿಕ ಕಳಕಳಿ ಹೆಚ್ಚು ಇರುವ ಚೌಪದಿಗಳಲ್ಲಿ ಈ ವಿಡಂಬನಾ ಗುಣ ಅತ್ಯಂತ ಸಲೀಸಾಗಿ ಬಂದು ಬಿಟ್ಟಿದೆ. 
ತೋಡಿರುವ ಪ್ರತಿಯೊಂದು ಬಾವಿಯಲಿ ನೀರು
ಬಂದೇ ಬರುವುದೆಂದು ಕಂಡವರು ಯಾರು
ಹೀಗಾಗಿ ಹಲವಾರು ಬಾವಿಗಳು ಇಲ್ಲಿ
ತುಂಬುವುವು ಸಂಪೂರ್ಣ ಮಳೆಗಾಲದಲ್ಲಿ.
ಇಲ್ಲಿಯ ಕೊನೆ ಸಾಲು ಚೌಪದಿಯನ್ನು ಅತ್ಯಂತ ಅರ್ಥವಾತ್ತಾಗಿಸಿದೆ. ಇಂಥ ಅನೇಕ ಚೌಪದಿಗಳು ವಿಡಂಬಾರಿಯವರ ಕಾವ್ಯಶಕ್ತಿಯನ್ನು ಪ್ರಕಟಪಡಿಸುತ್ತವೆ. 76, 82, 88, 104, 137, 210, 47, 259, 265, 309, 385, 416, 513, 568, 603, 614, 813, 782, 831, 814 ಈ ಚೌಪದಿಗಳು ವಿಡಂಬನಾ ಗುಣಕ್ಕಾಗಿ ಹಾತೊರೆಯುತ್ತಿರುವುದರಿಂದ ಮುಖ್ಯವಾಗುತ್ತವೆ.
ಕವನ ಸಂಕಲನವನ್ನು ಐದು ಭಾಗಗಳಲ್ಲಿ ಹಂಚಿದ್ದಾರೆ. ಈ ವಿಭಾಗ ಅಭ್ಯಾಸದ ಸೌಕರ್ಯಕ್ಕೆ ಹೇಗೋ ಹಾಗೇ ವಸ್ತುವಿನ ದೃಷ್ಟಿಯಿಂದಲೂ ಹೌದು. ಮೊದಲ ಭಾಗ ಆತ್ಮ ನಿವೇದನೆಯಲ್ಲಿ 55 ಚೌಪದಿಗಳಿದ್ದು, ಎಲ್ಲವೂ ತೀರಾ ಸಾಮಾನ್ಯ ರಚನೆಗಳಾಗಿವೆ. ಕವಿಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಇವು ಮುಖ್ಯ ಅಷ್ಟೇ. ಒಂಥರಾ ಆತ್ಮ ಚರಿತ್ರೆಯ ಲೇಪ ಇದರಲ್ಲಿದೆ. ಎರಡನೆಯದಾದ ಸಾಮಾಜಿಕದಲ್ಲಿ 400 ಚೌಪದಿಗಳಿದ್ದು ಹೆಚ್ಚಿನವು ವ್ಯಂಗ್ಯ ಇಲ್ಲವೇ ಕಟಕಿಯಿಂದ ಯಶಸ್ವಿಯಾಗಿವೆ. ಮೂರನೇ ಭಾಗ ನೀತಿಪರವಾದದ್ದು. ಅದರಲ್ಲಿ ಒಟ್ಟು 92 ಚೌಪದಿಗಳಿದ್ದು ಕವಿಯ ನೈತಿಕ ದೃಷ್ಟಿಕೋನವನ್ನು ವಿವರಿಸಿ ಹೇಳುತ್ತದೆ. ಇಂಥ ಕಡೆ ಚೌಪದಿಗಳು ಬರೇ ಹೇಳಿಕೆಗಳಾದದ್ದೂ ಇದೆ. ಆದರೂ ಕವಿಯ ಮಾನವೀಯ ಕಳಕಳಿಯನ್ನು ಆಕ್ಷೇಪಿಸುವಂತಿಲ್ಲ. ನಾಲ್ಕನೆಯದಾದ ರಾಜಕೀಯ ಎಂಬ ಭಾಗದಲ್ಲಿ 113 ಚೌಪದಿಗಳಿದ್ದು, ಅವೆಲ್ಲವೂ ರಾಜಕೀಯ ವಿಡಂಬನೆಯಲ್ಲಿ ಯಶಸ್ವಿಯಾಗಿದೆ. ಅಧಿಕಾರ ಲಾಲಸೆ, ಮತಬೇಡಿಕೆಯ ಹಿಂದಿನ ಧೂರ್ತತನ, ಬಡವರುದ್ಧಾರದ ಸೋಗು ಇವನ್ನೆಲ್ಲ ಬಯಲಿಗೆಳೆಯಲಾಗಿದೆ.
ವಿಡಂಬಾರಿಯವರಿಗೆ ಚೌಪದಿಯ ಗುಣಗಳು ಗೊತ್ತಿವೆ. ಸಹಜವಾದ ಪ್ರಾಸ ಮತ್ತು ಲಯ ವಿನ್ಯಾಸ ಅವರಿಗೆ ಸಿದ್ಧಿಸಿದೆ. ಸಮಾಜವನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾಗಾಗಿ ಚೌಪದಿಗಳಲ್ಲಿ ಅವರು ಇನ್ನೂ ಕೆಲವು ಪ್ರಯೋಗಗಳನ್ನು ಮಾಡಬಲ್ಲರು. ಕವಳ ಅವರ ಸಾಧನೆಯ ಮೈಲಿಗಳಲ್ಲು.
                     (ಸೌಜನ್ಯ : ಮಂಗಾರು ದೈನಿಕ)

.ಮಕ್ಕಳ ರಂಗಭೂಮಿ ಮತ್ತು ನಾಟಕ -Dr. R V Bhandari


ರಂಗಭೂಮಿಯ ಕುರಿತು ಅನೇಕ ಪರಿಕಲ್ಪನೆಗಳಿವೆ. ಒಂದು ವಿಶಾಲವಾದ ಅರ್ಥದಲ್ಲಿ ಇವೆಲ್ಲವುಗಳನ್ನು ಒಳಗೊಂಡಿದ್ದೇ 'ರಂಗಭೂಮಿ' ಎಂಬ ಪರಿಕಲ್ಪನೆ ಕೂಡ. 'ರಂಗಭೂಮಿ' ಎನ್ನುವುದು ಸರ್ವತಂತ್ರ ಸ್ವತಂತ್ರವಲ್ಲ. ಅದಕ್ಕೆ ವಸ್ತು ಸಿಕ್ಕಿದಾಗಲೇ 'ರಂಗಭೂಮಿ' ಎನ್ನಿಸಿಕೊಳ್ಳುವುದು. ಪ್ರಸ್ತುತವಾಗಿ 'ರಂಗಭೂಮಿ' ಎಂದು ಕರೆಯುವುದು ನಾಟಕ ರಂಗಭೂಮಿಯೇ ಆದ್ದರಿಂದ ರಂಗಭೂಮಿ ನಾಟಕಾವಲಂಬಿ.
ರಂಗಭೂಮಿಯಲ್ಲಿ ಅಭಿಜಾತ ಮತ್ತು ಜಾನಪದ ಎಂಬೆರಡು ಬಗೆ. ಅಭಿಜಾತದಲ್ಲಿ ಪೌರಾತ್ಯ ಮತ್ತು ಪಾಶ್ಚಾತ್ಯ ಎಂಬುದು. ಇನ್ನು ಇದರಲ್ಲಿಯ ಪ್ರಕಾರಗಳು ಎಷ್ಟೋ ಇದ್ದರೂ ಇಂದು ಇವೆಲ್ಲ ಹತ್ತಿರ ಬಂದಿವೆ. ಪೌರಾತ್ಯದಲ್ಲಿ, ಪಾಶ್ಚಾತ್ಯ, ಅಭಿಜಾತ, ಜಾನಪದ ಹೀಗೆ ಯಾವುಯಾವುದು ಉದ್ದೇಶ ಪೂರಕವೆನಿಸುತ್ತದೋ ಅವೆಲ್ಲ ಒಂದೆಡೆ ಬಂದು ಸೇರಿಕೊಳ್ಳುತ್ತಿವೆ. ಆದ್ದರಿಂದ ನಮ್ಮ ಆಧುನಿಕ ರಂಗಭೂಮಿಯ ಬಗ್ಗೆ ಶಾಸ್ತ್ರ ವ್ಯಾಖ್ಯೆ ಮಾಡಲು ಮತ್ತೊಬ್ಬ 'ಭರತ ಮುನಿ' ಹುಟ್ಟಿ ಬರಬೇಕು. ಅಲ್ಲಿಯ ತನಕವೂ ವಿವಿಧ ಪ್ರಯೋಗ ಆಕರವನ್ನು ನಿಮರ್ಿಸುತ್ತಲೇ ಹೋಗಬೇಕಾಗುತ್ತದೆ. ಆ ಮೇಲೂ ಶಾಸ್ತ್ರಕ್ಕಿಂತ ಪ್ರಯೋಗವೇ ಸ್ವಾಭಾವಿಕ.
ಮಕ್ಕಳ ನಾಟಕ ಹೇಗೆ ಹೊಸ ಕಲ್ಪನೆಯೋ ಹಾಗೇ ಮಕ್ಕಳ ರಂಗಭೂಮಿ ಎನ್ನುವುದೂ ಕೂಡ. ಪಾಶ್ಚಾತ್ಯರಲ್ಲಿ, ರಷ್ಯಾದಲ್ಲಿ ಇದು ಒಂದು ಪರಿಕಲ್ಪನೆಯಾಗಿ ಪ್ರಯೋಗವಾಗುತ್ತಿದೆ ಎಂದು ಕೇಳಿದ್ದೇನೆ. ಅದರಂತೆ ಆಧುನಿಕ ಶಿಕ್ಷಣ ಮತ್ತಿತರ ವಿದ್ಯಮಾನದಬೆನ್ನು ಹಿಡಿದು ನಮ್ಮಲ್ಲೂ ಬಂದುದು ಈ ಮಕ್ಕಳ ರಂಗಭೂಮಿ ಎಂಬ ಹೊಸ ಕಲ್ಪನೆ.
ಮಕ್ಕಳ ರಂಗಭೂಮಿಗೂ ವಯಸ್ಕರ ರಂಗಭೂಮಿಗೂ ಇರುವ ವ್ಯತ್ಯಾಸ ಮನಃಶಾಸ್ತ್ರಕ್ಕೆ ಸಂಬಂಧಿಸಿ ನಿರೂಪಣೆಗೊಳ್ಳಬೇಕಾದುದು. ದೊಡ್ಡವರ 'ರಂಗಭೂಮಿ'ಯ ಎಲ್ಲ ಪರಿಕರಗಳೂ ಮಕ್ಕಳ ರಂಗಭೂಮಿಗೂ ಇರುತ್ತವೆ. ಆದರೆ ಅದು 'ವಾಸ್ತವಿಕ' ರಂಗಭೂಮಿಗಿಂತ ತೀರ ಭಿನ್ನ. ಅದರಲ್ಲಿ ಹಾಡು, ಕುಣಿತ, ಭ್ರಾಮಕ ಕಲೆ (ಫೆಂಟಸಿ) ಕತೆ, ಕನಸು, ಮನೋರಂಜನೆ, ವೇಷಭೂಷಣ, ಬಣ್ಣ ಬೆಡಗು, ಮುಖವಾಡ, ಬೆಳಕಿನ ವ್ಯವಸ್ಥೆ ಎಲ್ಲವೂ ಇರಬಹುದು. ಇವು ದೊಡ್ಡವರ ರಂಗಭೂಮಿಯಲ್ಲೂ ಇರುತ್ತದೆ. ಆದರೆ ಮಕ್ಕಳ ರಂಗಭೂಮಿಯ ತಿರುಳು ಇರುವುದು ಇವುಗಳನ್ನು ದುಡಿಸಿಕೊಳ್ಳುವ ರೀತಿಯಲ್ಲಿ ಅಥವಾ ಇವು ಪ್ರತ್ಯಕ್ಷವಾಗುವ ಸ್ವರೂಪದಲ್ಲಿ ಇವು ಜನಪದ ರಂಗಭೂಮಿಯ ಉತ್ಸವ ಸ್ವರೂಪಿಯಾದುದು. ಲವಲವಿಕೆ ಚಟುವಟಿಕೆ ಮತ್ತು ರಂಜನೆಯಿಂದ ವೈಶಿಷ್ಟ್ಯ ಪೂರ್ಣವಾದುದು.
ಮಕ್ಕಳ 'ರಂಗಭೂಮಿ'ಯ ಪರಿಕಲ್ಪನೆಯಲ್ಲಿ ಬರುವ ಮಕ್ಕಳು ಯಾರು? ಇವು ಬಹಳ ಮುಖ್ಯವಾದ ಪ್ರಶ್ನೆ. ನಮಗೆಲ್ಲ ಗೊತ್ತಿರುವಂತೆ ಮಕ್ಕಳ ಬೆಳವಣಿಗೆ ಸಂಕೀರ್ಣವಾದುದು. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ವೇಗಪೂರ್ಣ. ಈ ಬೆಳವಣಿಗೆಯನ್ನು ಶಾರೀರಿಕ ಮತ್ತು ಮಾನಸಿಕ ಎರಡನ್ನೂ ಒಟ್ಟಿಗೇ ನೋಡಬೇಕು. ಪರಿಸರ ಕೂಡ ಪ್ರಭಾವಶಾಲಿಯಾಗಿದ್ದರೂ ಮುಖ್ಯವಾಗಿ ಗಮನಿಸಬೇಕಾದುದು ಈ ಎರಡನ್ನೇ. ಇದನ್ನು ಗ್ರಹಿಸುವಾಗ ಒಂದು ಸ್ಥೂಲ ಸ್ವರೂಪ ಮಾತ್ರ ಸಾಧ್ಯ. ಇದು ಮನಃಶಾಸ್ತ್ರದಲ್ಲೂ ಸರಿ. ಆದ್ದರಿಂದ ಮನೋವಿಜ್ಞಾನದ ಅನುಸರಿಯಾಗಿ ಲೆಕ್ಕಹಾಕಬೇಕಾಗುತ್ತದೆ.
ಮೊದಲನೆಯದಾಗಿ ಮಕ್ಕಳೆಂದರೆ ದೊಡ್ಡವರಲ್ಲ. ನಮ್ಮ ಯಕ್ಷಗಾನದಲ್ಲಿ ಬರುವ ಪ್ರಹ್ಲಾದ, ಲೋಹಿತಾಶ್ವ ಮುಂತಾದವೆಲ್ಲ ಸಣ್ಣವರ ರೂಪದಲ್ಲಿರುವ ದೊಡ್ಡವರೇ ಹೊರತು ಮಕ್ಕಳಲ್ಲ. ಮಕ್ಕಳ ಮಾನಸಿಕ ಸ್ಥಿತಿಯ ರೀತಿಯೇ ಬೇರೆ. ಇಲ್ಲಿ ಬರುವ ಕತೆ, ಹಾಡು, ಕುಣಿತ, ಕನಸು, ಭ್ರಮೆ, ರಂಜನೆ ಇವೆಲ್ಲ ಮಕ್ಕಳ ಮನೋಭೂಮಿಕೆಯ ರಂಜನೀಯ ಸ್ಥಿತಿಯಿಂದ ಪೋಷಣೆಗೊಂಡಿರಬೇಕು. ಹಾಗೆಯೇ ಅದರ ಪ್ರತಿಬಿಂಬ ಗತಿಬಿಂಬ ಕೂಡ ಆಗಿರಬೇಕು. 'ಬುಶ್ಕೋಟು, ಮದುವೆ ಪತ್ತಲ, ಸದಾರಮೆ, ಸತ್ಯಾವಾನ ಸಾವಿತ್ರಿ, ಸಂಗ್ಯಾಬಾಳ್ಯ, ಶೋಕ ಚಕ್ರ ಇಂಥವೆಲ್ಲ ಇಲ್ಲಿ ಸಲ್ಲದು. ಇದು ಪ್ರದರ್ಶನ ದೃಷ್ಟಿಯಿಂದಲೂ ಮಕ್ಕಳ ರಂಗಭೂಮಿಗೆ ಸಲ್ಲದು. ನೋಡುವುದರಿಂದ ಕೆಲ ಅಂಶ ಮಕ್ಕಳಿಗೂ ರಂಜನೆಗೆ ಸಲ್ಲಬಹುದು. ಮಕ್ಕಳು ಮೀಸೆ ಬರೆದೋ, ಸೀರೆ ಉಟ್ಟೋ ಅಭಿನಯಿಸುವದರಿಂದ ದೊಡ್ಡವರಿಗೆ ಒಂದು ನಗೆಯಾಟ ದೊರಕಬಹುದು. ಆದರೆ ಇದು ಅರ್ಥಪೂರ್ಣವಲ್ಲ. ಯಾಕೆಂದರೆ ಇವು ಮಕ್ಕಳ ಮಾನಸಿಕ ಬೆಳವಣಿಗೆ ಹಂತದಲ್ಲಿ ಪ್ರತಿಕ್ರಿಯಿಸಲಾರವು.
ಮಕ್ಕಳು ಎಂದು ನಾವು ನಿರ್ಣಯಿಸುವಲ್ಲೂ ಯಾವ ವಯಸ್ಸಿನ ಮಕ್ಕಳು ಎಂಬುದು ಮುಖ್ಯವಾಗಿರುತ್ತದೆ. ಯಾಕೆಂದರೆ 'ಮಕ್ಕಳ' ಬೆಳವಣಿಗೆಯಲ್ಲಿ ಅನೇಕ ಹಂತಗಳಿವೆ. ಆಯಾ ಹಂತದ ಬೇಡಿಕೆ ಮತ್ತು ಅರ್ಹತೆ ಬೇರೆ ಬೇರೆಯೇ ಆಗಿರುತ್ತದೆ. ಇದನ್ನು ಗಮನಿಸಿ ಮನೋವಿಜ್ಞಾನದ ನೆರವಿನಿಂದ ಸ್ಥೂಲವಾಗಿ ಹೀಗೆ ವಿಂಗಡಿಸಿಕೊಳ್ಳಬಹುದು.
1) 6 ರಿಂದ 9 ವರ್ಷ
2) 10 ರಿಂದ 13 ವರ್ಷ
3) 14 ರಿಂದ 17 ವರ್ಷ
ಮೊದಲಹಂತದಲ್ಲಿ ಮುಗ್ಧತೆ, ಕ್ರಿಯಾಶೀಲತೆ, ಹಾಡು, ಕುಣಿತ, ಗುಂಪುಕ್ರಿಯೆ, ರಂಜನೆ, ಭ್ರಾಮಕತೆ, ಬಣ್ಣಬೆಡಗು ಸೂಕ್ಷ್ಮವಲ್ಲದ ನಟನೆ ಮುಖ್ಯ. ಕಲ್ಲು, ಮಣ್ಣು, ನೀರು, ಮರ, ಮಳೆ, ಸೂರ್ಯ, ಚಂದ್ರ, ಬೆಕ್ಕು, ಹುಲಿ, ಹಾವು ಇತ್ಯಾದಿಗಳು ಜೀವ ತಳೆದು ಮಾತಾಡಬಲ್ಲವು. ಅವು ಮನುಷ್ಯರೂಪಿ ಪದಾರ್ಥಗಳೂ ಪದಾರ್ಥರೂಪಿ ಮನುಷ್ಯರೋ ಆಗಬಲ್ಲವು. ಒಂದನ್ನೊಂದು ಸ್ಪಂದಿಸಬಲ್ಲವು. ಇಲ್ಲಿ ಲಘು ಸಂಗೀತ ಹಾಡು ಅಪೇಕ್ಷಣೀಯ.
ಎರಡನೆಯ ಹಂತದಲ್ಲಿ ಇವೆಲ್ಲವೂ ಇರುತ್ತದೆ. ಆದರೂ ಇಲ್ಲಿ ವಾಸ್ತವಿಕತೆಯ ಗ್ರಹಿಕೆ ಬೆಳೆದಿರುತ್ತದೆ. ಹೀಗೆ ಮಾಡುವುದಕ್ಕಿಂತ ಹೀಗೆ ಮಾಡಿದರೆ ಚೆನ್ನಲ್ಲವೇ ಎಂಬ ಕುತೂಹಲ. ಮುಖವಾಡಕ್ಕಿಂತ ನೇರ ಪ್ರದರ್ಶನ ಇಚ್ಛೆ, ಪ್ರದರ್ಶನದಲ್ಲಿ ಹೆಚ್ಚು ಶಿಸ್ತು ಇವೆಲ್ಲ ಇಲ್ಲಿ ಮುಖ್ಯ. ನಟನೆ ಕೂಡ ಕಲಾತ್ಮಕತೆ, ಸೂಕ್ಷ್ಮತೆಯ ಕಡೆ ಒಲಿಯುತ್ತದೆ. ಭ್ರಾಮಕತೆಯಿದ್ದು ತಾಕರ್ಿಕ ಮನೋಭಾವ ಬೆಳೆದಿರುತ್ತದೆ. ಕತೆಯಲ್ಲಿ (ವಸ್ತುವಿನಲ್ಲಿ) ಒಂದು ಸುಸಂಬದ್ಧತೆ ಇಲ್ಲಿಯ ನಿರೀಕ್ಷೆ.
ಮೂರನೇ ಹಂತದಲ್ಲಿ ಇನ್ನೂ ಪ್ರೌಢಾವಸ್ಥೆ. ಹಿಂದಿನ ಎಲ್ಲ ರಂಜನೀಯ ಅಂಶ ಇಲ್ಲಿಯೂ ಇರುತ್ತದೆ. ಆದರೆ ಬಣ್ಣ ಬೆಡಗಿನಕ್ಕಿಂತ ಚಿಂತನೆ, ಗಾಂಭೀರ್ಯದ ಕಡೆ ಒಲವು ಜಾಸ್ತಿ. ವಾಸ್ತವದ ಪ್ರಜ್ಞೆಯೊಂದಿಗೆ ಆದರ್ಶವಾದಿ ಮತ್ತು ಸಾಹಸದ ಕನಸು ಗರಿಗೆದರುತ್ತದೆ. ಕಲಾತ್ಮಕತೆಯಲ್ಲಿ ಹೆಚ್ಚು ಸ್ವಾತಂತ್ರ್ಯ, ವೈಯುಕ್ತಿಕ ಮೆಚ್ಚಿಕೆಯೆಲ್ಲ ಇಲ್ಲಿ ಜಾಸ್ತಿ. ರಸಭಾವದ ದೃಷ್ಟಿಯಿಂದ ವೀರ, ರೌದ್ರ, ಶಾಂತ, ಕರುಣೆ ಇಂಥವುಗಳ ಬೆಳವಣಿಗೆ.
ಈ ಹಂತದ ಹುಡುಗಿಯರ ಮನೋಭಾವದಲ್ಲಿ ಇನ್ನೂ ಹೆಚ್ಚಿನ ರಸಾತ್ಮಕತೆ ಕಾಣಲು ಸಾಧ್ಯ. ಶೃಂಗಾರ ರಸದ ಪರಿಭಾವನೆಯ ಪಟುತ್ವ ಕಾಣಿಸಿಕೊಳ್ಳುತ್ತದೆ. ಶೀಲಾಶ್ಲೀಲಗಳ ದೃಷ್ಟಿಯಿಂದ ಸಾಮಾಜಿಕ ಅಪೇಕ್ಷೆಯ ಅರಿವು ಹೆಚ್ಚಿರುತ್ತದೆ. ಹಾಗೆಯೇ ವಾಸ್ತವತೆಯನ್ನು ಮೀರುವ ಅಲ್ಲಿ ನಿರುಂಬಳವಾಗುವ ಆಕಾಂಕ್ಷೆ ಹೆಚ್ಚಿರುತ್ತದೆ. ಇಲ್ಲಿ ಹೆಚ್ಚು ಕಲಾತ್ಮಕತೆಯ ಅಪೇಕ್ಷೇ ಕೂಡ ಇರುತ್ತದೆ. ಭಾವಸ್ಪಂದನ ಜಾಸ್ತಿ ಹಾಗೂ ಕಲ್ಪನಾವಿಹಾರ.
ಹಿಂದೆ 'ಮಕ್ಕಳು' ದೊಡ್ಡವರಲ್ಲ ಎಂದೇ ಹೇಳಿದೆ. ಹಾಗಿದ್ದಾಗಲೂ ಅವು ಬಿಡಿಬಿಡಿಯಾದ ಪ್ರತ್ಯೇಕ ಘಟಕಗಳಲ್ಲ. ಅದು ಕೈಯಲ್ಲಿ ಕೈಸೇರಿಕೊಂಡ ಮಾನವ ಸರಪಳಿ. ಒಂದು ಹಂತದ ಬುತ್ತಿ ಮತ್ತೊಂದು ಹಂತದಲ್ಲಿಯೂ ಸಲ್ಲುತ್ತದೆ. ಅದರಿಂದ ಪುಷ್ಟಿಗೊಂಡು ಮುಂದಿನ ಹಂತ ಸಿದ್ಧವಾಗುತ್ತದೆ. 'ಮಗುವೆ ಮಾನವನ ತಂದೆ' ಎಂಬ ವಡ್ಸ್ವತರ್್ ಕವಿಯ ಮಾತು ಕೇವಲ ಕವಿತೆಯ ಮಾತಲ್ಲ. ಮನೋವೈಜ್ಞಾನಿಕವಾಗಿ ಮತ್ತು ಸಾಮಾಜಿಕ ಮನೋಜ್ಞಾನದ ದೃಷ್ಟಿಯಿಂದಲೂ ಅರ್ಥಪೂರ್ಣವಾಗಿದೆ. ಆದ್ದರಿಂದ ಇಲ್ಲಿಯ ವಸ್ತುವಿನ ಆಯ್ಕೆ ಕಲ್ಲಲ್ಲ. ಹರಿವ ಹಳ್ಳದ ನೀರೂ ಅಲ್ಲ. ಅದು ಉಕ್ಕಿನ ಹಾಗೆ ಸೆಟೆದು ಮೇಣದ ಹಾಗೆ ಮಿದುವಾಗಬಲ್ಲದು. ಮನಸ್ಸಿನಲ್ಲಿ ಮೂಡಿಸಿಕೊಳ್ಳುವ ಶಕ್ತಿ ಒಳಗಿನದಾದರೆ, ಮೂಡಿಸುವ ಪ್ರಭಾವ ಹೊರಗಿನದು. ಅಂದರೆ ಆನುವಂಶಿಕ ಒಲವು ಚೆಲುವು ಮತ್ತು ನಿಲುವು ವೈಶಿಷ್ಟ್ಯ ಪೂರ್ಣವಲ್ಲದ್ದು, ದುರ್ಬಲವಾದುದು, ಅಸ್ಪತಂತ್ರವಾದುದು ಎಂದಲ್ಲ. ಆದರೆ ಆ ಪರಿವರ್ತನೀಯವಾದ ಸ್ಥಾವರ ಅಲ್ಲವೆಂದು ಮಾತ್ರ. ಆದ್ದರಿಂದ ಶೈಕ್ಷಣಿಕ ಮನೋವಿಜ್ಞಾನದ ನೆರವು ಇಲ್ಲಿ ಸಾಪೇಕ್ಷಣಿಯವಾದುದು.
ಆದರ್ಶವನ್ನು ಬೆಳೆಸುವುದಕ್ಕಾಗಿ ಮಕ್ಕಳ ರಂಗಭೂಮಿ ಇರಬೇಕೆಂದು ನಾನು ಹೇಳುತ್ತಿಲ್ಲ. 'ವಿಜ್ಞಾನಕ್ಕಾಗಿ ವಿಜ್ಞಾನ ಅಲ್ಲ' ಕಲೆಗಾಗಿ ಕಲೆ ಅಲ್ಲ. ಅದು ಇಡಿಯಾಗಿ ಮಾನವತೆಯ ಆವಿಭರ್ಾವಕ್ಕಾಗಿ, ಹೊರೆಯುವುದಕ್ಕಾಗಿ ಇರಬೇಕು. ನಾವು ಇಂದು 'ನಾನು' ಕ್ಕಿಂತ 'ನಾವು' ಎಂಬ ಪ್ರಜ್ಞೆಯ ಕಡೆಗೆ ಸಾಗುತ್ತಿದ್ದೇವೆ. ಈ 'ನಾವು' ಅಲ್ಲಿ 'ನಾನು' ಕೂಡ ಅಷ್ಟೇ ಮುಖ್ಯ. ಇದರ ಸಮತೋಲನ ಸಂಕೀರ್ಣವಾದುದು ಎಂದು ಒಪ್ಪಿದಾಗಲೂ ನಿರಾಕರಣೆಯದಲ್ಲ. ಗಾಂಧಿಯಂತೆ ಅನೇಕ ಜನ ಶ್ರವಣಕುಮಾರರ ಚರಿತ್ರೆಯನ್ನು ಓದಿದ್ದಾರೆ. ಹರಿಶ್ಚಂದ್ರ ನಾಟಕ ನೋಡಿದ್ದಾರೆ. ಆದರೆ ಯಾರೂ 'ಗಾಂಧಿ' ಆಗಲಿಲ್ಲ. ಆದರೆ ಗಾಂಧಿ ಮಾತ್ರ 'ಗಾಂಧಿ' ಆದರು. ಇದು ಅವರ ವ್ಯಕ್ತಿ ವೈಶಿಷ್ಟ್ಯ. ಆದರೆ ಗಾಂಧಿ 'ಗಾಂಧಿ' ಆಗುವಲ್ಲಿ ಭಾಗವಹಿಸಿದ್ದು ಹದಗೊಳಿಸಿದ್ದು ಸಮಾಜ. ಆದ್ದರಿಂದ ಮಕ್ಕಳ ನಾಟಕ ಮತ್ತು ರಂಗಭೂಮಿ ಕೂಡ ಕಾಲದ ಅವಶ್ಯಕತೆಯನ್ನು ನಿರಾಕರಿಸಬಾರದು. ಹಾಗೆ ನಿರಾಕರಿಸಿದರೆ ಅದಕ್ಕೊಂದು ವೈಶಿಷ್ಟ್ಯವೇ ಇರುವುದಿಲ್ಲ. ಆದ್ದರಿಂದ ಪ್ರಜಾಪ್ರಭುತ್ವದ ವಿಕಾಸಕ್ರಿಯೆಯಲ್ಲಿ ಇವೆಲ್ಲ ಸೇರಬೇಕಾಗಿದೆ. ಸಮಾಜವಾದಿ ಮನೋಭಾವದ ವಿಕಸನ ಶೀಲತೆ ಇಂದಿನ ಸಾಮಾಜಿಕ ಅವಶ್ಯಕತೆ. ಸೂತ್ರ ರೂಪವಾಗಿ ಹೇಳುವುದಾದರೆ ನಮ್ಮ ಮುಂದೆ ಎರಡು ಸಾಹಸ ಆದರ್ಶಗಳಿವೆ. ಒಂದು : ಗಾಂಧಿ, ನೆಹರು, ಮೌಲಾನಾ ಅಬುಲ್ ಕಲಾಮ್ ಆಝಾದ್, ಅರುಣ ಅಸಫ್ ಆಲಿ, ಸುಭಾಶ್ಚಂದ್ರ ಭೋಸ್, ಭಗತ್ಸಿಂಗ್, ಮದರ್ ತೆರೇಸಾ, ಎ.ಕೆ. ಗೋಪಾಲನ್, ವಿವೇಕಾನಂದ, ನಾರಾಯಣ ಗುರು ಹೀಗೆ ಹೀಗೆ. ಎರಡು : ಸುಖರಾಮ್, ಜಯಲಲಿತಾ, ಚಂದ್ರಸ್ವಾಮಿ, ದಾವೂದ್, ಹರ್ಷದ್ ಮೆಹೆತಾ, ವೀರಪ್ಪನ್ ಹೀಗೆ ಹೀಗೆ. ನಮ್ಮ ಮಕ್ಕಳ ಮುಂದೆ ಇಡಬೇಕಾದ ಮಾದರಿ ಯಾವುದೆಂಬುದರ ಬಗ್ಗೆ ಜಗಳ ಇರಲಾರದು ಅಂದುಕೊಂಡಿದ್ದೇನೆ. ರಂಗಭೂಮಿ ಕೂಡ ಶೈಕ್ಷಣಿಕ ಎನ್ನುವ ನಿಲುವು ಇಲ್ಲಿಯದು.
ಇಲ್ಲಿಯವರೆಗೆ ಪ್ರಸ್ತಾಪಿತವಾದ ಮಕ್ಕಳ ರಂಗಭೂಮಿಯ ವಸ್ತುವನ್ನು ನಾವು ಗಮನಿಸಿದಾಗ ಮಧ್ಯಮ ವರ್ಗದ ಒಲವು ಚೆಲುವುಗಳ ಬಗ್ಗೆ ಹೆಚ್ಚು ಗಮನಿಸಿದ್ದು ಕಂಡು ಬರುತ್ತವೆ. ಆದರೆ ಕೆಳಸ್ಥರದ ಮಕ್ಕಳ ಮನೋಭೂಮಿಕೆಯ ಚಿತ್ರಣ ಹಾಗೂ ಭಾಗವಹಿಸುವಿಕೆ ನಮ್ಮ ನಿಲುಕಿನ ಹೊರಗೇ ಇದೆ. ಕೆಳಜಾತಿಯ, ಕೆಳವರ್ಗದ, ಬಾಲಕಾಮರ್ಿಕರ, ಅಸ್ಪೃಶ್ಯ ಮತ್ತು ಕೊಳಚೆ ಮಕ್ಕಳ ರಂಗಭೂಮಿಗೆ ವಿಶೇಷವಾದ ಆಹ್ವಾನವಾಗಿದೆ. ಅದರ ಅಭ್ಯಾಸ ಮತ್ತು ಪ್ರಯೋಗ ಅದ್ಭುತ ಲೋಕವೇ ಹೊರತಂದೀತು. ಸಾಮಾಜಿಕವಾಗಿಯಂತೂ ಅದರ ಮಹತ್ವ ಇಷ್ಟು ಎಂದು ಹೇಳಲಸಾಧ್ಯ.
'ಮಕ್ಕಳ ರಂಗಭೂಮಿ'ಯ ಕುರಿತಾಗಿ ಮಾತನಾಡುವಾಗ ನಾವು ಇನ್ನೊಂದು ಬಹಳ ಮಹತ್ವದ ಪ್ರಶ್ನೆಯ ಕಡೆ ಗಮನಿಸಬೇಕು. ಪ್ರಶ್ನೆ ಇಷ್ಟೇ, ಮಕ್ಕಳ ರಂಗಭೂಮಿ ಮಕ್ಕಳಿಂದಲೆ ನಿರ್ವಹಿಸಲ್ಪಡಬೇಕೋ ಅಥವಾ ಮಕ್ಕಳಿಗಾಗಿ ದೊಡ್ಡವರಿಂದ ನಿರ್ವಹಿಸಲ್ಪಡುತ್ತದೆಯೋ? ಪಾತ್ರ ನಿರ್ವಹಣೆಯಲ್ಲಿ ದೊಡ್ಡವರ ಪಾತ್ರವನ್ನು ಮಕ್ಕಳು ನಿರ್ವಹಿಸಬಹುದೇ?
ಇದಕ್ಕೆ ಎರಡೂ ರೀತಿಯಲ್ಲಿ ಉತ್ತರ ಸಾಧ್ಯ. ಮಕ್ಕಳೇ ಮಕ್ಕಳ ರಂಗಭೂಮಿಯ ನಿವರ್ಾಹಕರು. ಅಂದರೆ ಕೆಲವು ತಾಂತ್ರಿಕ ವ್ಯವಸ್ಥೆಯನ್ನು ಹೊರತುಪಡಿಸಿ. ಅದರಂತೆ ದೊಡ್ಡವರು ಮಕ್ಕಳಿಗಾಗಿ ರಂಗಭೂಮಿಯನ್ನು ನಿರ್ವಹಿಸಬಹುದು. ಆದರೆ ಮಕ್ಕಳೇ ಪಾತ್ರ ನಿರ್ವಹಣೆ, ಹಾಡು ಇತ್ಯಾದಿ ಕಲೆಗೆ ಸಂಬಂಧಿಸಿದ ವಿಷಯದಲ್ಲಿ ಭಾಗವಹಿಸುವುದು ಹೆಚ್ಚು ಅಪೇಕ್ಷಣೀಯ ಮತ್ತು ಪರಿಪೂರ್ಣ ಕೂಡ. 'ಕಲೆ' ಎಂಬುದು ಕಲಿತದ್ದು ಕೂಡ ಹೌದು. ಅದೊಂದು ಯಶಸ್ವೀ ಅನುಕರಣೆ. ಹಾಗಿರುವಾಗ ಮಕ್ಕಳೇ ದೊಡ್ಡವರ ಪಾತ್ರವನ್ನು ಅಜ್ಜ, ರೈತ. ಆರಕ್ಷಕ, ರಾಜ ಇತ್ಯಾದಿ. ವಹಿಸಬಹುದು ಅದನ್ನು ಯಶಸ್ವಿಗೊಳಿಸಬಹುದು. ಮನೋವಿಜ್ಞಾನದ ದೃಷ್ಟಿಯಿಂದ ತೀರ ಅಭಾಸಪೂರ್ಣವಾಗಿ ಮಾತ್ರ ಇರಬಾರದು. ಅಷ್ಟೇ, ದೊಡ್ಡವರ ಪಾತ್ರವನ್ನು ದೊಡ್ಡವರೇ ವಹಿಸಬಹುದು.
ಇನ್ನೊಂದು ವಿಷಯವನ್ನು ಇಲ್ಲಿಯ ನಿದರ್ೆಶಕರು ಗಮನಿಸಬೇಕಾಗಿದೆ. ನಾವು ಮಕ್ಕಳಿಗೆ ಕಥೆಕೊಟ್ಟು ಅಥವಾ ಕೊಡದೆ ಅವರನ್ನು ಅಭಿನಯಕ್ಕೆ ಹಚ್ಚಿ ನೋಡಿದ್ದೇವೆಯೇ? ರಂಗಕ್ರಿಯೆ ಕುರಿತು ಸ್ವಾತಂತ್ರ್ಯ ಕೊಟ್ಟು ಪರಿಣಾಮ ನೋಡಿದ್ದೇಯೇ? ನಮ್ಮ ನಿದರ್ೆಶನದ ಕುರಿತು ಅವರ (ವಿವಿಧ ಹಂತಕ್ಕೆ ತಕ್ಕಾಗಿ) ಅಭಿಪ್ರಾಯ ಸಂಗ್ರಹಿಸಿದ್ದೇವೆಯೇ?
ಇದು ಮುಖ್ಯ ಆದರೂ ರಂಗಭೂಮಿ ಕಲೆಗೆ ಸಂಬಂಧಿಸಿರುವಂತೆ ತರಬೇತಿ, ನಿದರ್ೆಶನ ಅವಶ್ಯ.
ನಮ್ಮ ಜಿಲ್ಲೆಯ ಕುರಿತಾಗಿ ಹೇಳುವುದಾದರೆ 'ಮಕ್ಕಳ ರಂಗಭೂಮಿ'ಯ ಕೆಲಸ ಬಹಳ ಆಗಿದೆ. ಆದರೆ ಅದರ ದಾಖಲೆ ಮತ್ತು ವಿಶ್ಲೇಷಣೆ ಆದದ್ದು ಮಾತ್ರ ಏನೂ ಸಾಲದು. ನಮ್ಮಲ್ಲಿ ರಂಗಸಂಗದ ಗೆಳೆಯರನ್ನೊಳಗೊಂಡು ಕಿರಣ ಭಟ್ಟ, ಜಿ.ಎಂ. ಹೆಗಡೆ, ವಿ. ಎಂ. ಹೆಗಡೆ, ಚಂದ್ರು ಉಡುಪಿ, ಶ್ರೀಪಾದ ಭಟ್ಟ, ಎಸ್. ಪಿ. ಹೆಗಡೆ, ಕೆ. ಆರ್. ಪ್ರಕಾಶ ಇನ್ನೂ ಅನೇಕರು ಮಕ್ಕಳ ನಾಟಕ ಆಡಿಸಿದ್ದಾರೆ. ಒಟ್ಟಾರೆಯಾದ ಮಕ್ಕಳ ರಂಗಭೂಮಿಗೆ ಅವರ ಕೊಡುಗೆ ಗಣನೀಯ. ಅದರಲ್ಲೂ ಗ್ರಾಮೀಣ ಪ್ರದೇಶದ ವಿಶಿಷ್ಟವಾದ ಅನುಭವ ಅವರದ್ದು. ಸಾಮಾಜಿಕರ ಮಧ್ಯೆ, ಶಿಕ್ಷಕರ ಮಧ್ಯೆ ಮತ್ತು ಮುಖ್ಯವಾಗಿ ಮಕ್ಕಳ ಮಧ್ಯೆ ಅವರ ಅನುಭವ ಪ್ರತ್ಯಕ್ಷ ಮತ್ತು ಪ್ರಾಯೋಗಿಕವಾದದ್ದು. ಅದನ್ನು ಚಾಚೂ ತಪ್ಪದೆ ಟಿಪ್ಪಣಿ ಮಾಡಬೇಕು. ಅದರ ವಿಶ್ಲೇಷಣೆಯೂ ರಂಗಾಸಕ್ತರ ಮಧ್ಯೆ ನಡೆಯಲಿ. ಇದರಿಂದ ಅನೇಕ ಹೊಸ ಅಂಶಗಳು ಬೆಳಕಿಗೆ ಬರುತ್ತವೆ. ಹಾಗೆಯೇ ಮಕ್ಕಳ ರಂಗಭೂಮಿಯ ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆಯಾಗುತ್ತದೆ.
ಕೊನೆಯದಾಗಿ ಖಲೀಲ್ ಗಿಬ್ರನ್ನ ಒಂದು ಉಕ್ತಿಯನ್ನು ಹೇಳಬಯಸುತ್ತೇನೆ.
'ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಜೀವನ ಸ್ವ ಪ್ರೇಮದ ಪುತ್ರ ಪುತ್ರಿಯರವರು 
ಅವರು ನಿಮ್ಮ ಜೊತೆಗೆ ಇರುವುದಾದರೂ 
ಅವರು ನಿಮಗೆ ಸೇರಿದವರಲ್ಲ
ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು
ಆದರೆ ನಿಮ್ಮ ಆಲೋಚನೆಗಳನ್ನಲ್ಲ
ಅವರಂತಿರಲು ನೀವು ಪ್ರಯತ್ನಿಸಬಹುದು
ಆದರೆ ಅವರನ್ನು ನಿಮ್ಮಂತೆ ಮಾಡದಿರಿ
ಜೀವನ ಹಿಮ್ಮುಖವಾಗಿ ಹರಿಯದಿರಲಿ'

ಗೋಡೆ ದಶಾವತಾರ 'ಗೋಡೆ ಚಿತ್ತಾರ' --ಡಾ. ವಿಠ್ಠಲ್ ಭಂಡಾರಿ,



ಮೂಲತಃ ಯಕ್ಷಗಾನ ಮೌಖಿಕ ಪರಂಪರೆಗೆ ಸೇರಿದ್ದು. ಹಲವು ವರ್ಷಗಳ ಕಾಲದ ಬೆಳವಣಿಗೆ ಮತ್ತು ಬದಲಾವಣೆಗಳು ಮಾತ್ರದಲ್ಲಿ ಅದರ ವಿಮಶರ್ೆಯೂ ಮೌಖಿಕವಾಗಿಯೇ ಇತ್ತು. ಅನಕ್ಷರಸ್ಥನೂ ಗ್ರಾಮೀಣ ಎನಿಸಿಕೊಂಡ ಸಾಮಾನ್ಯ ನೋಡುಗನೂ ತಾನು ನೋಡಿದ ಯಕ್ಷಗಾನದ ನಡೆ ಮತ್ತು ನಟನಾ ಸಾಮಥ್ರ್ಯದ ಕುರಿತು ತೌಲನಿಕವಾಗಿ ಮಾತನಾಡಬಲ್ಲ. ನಟನೊಬ್ಬನ ಕುಣಿತ ಅಭಿನಯ, ಮಾತುಗಾರಿಕೆಯ ಬಗ್ಗೆ ಪ್ರತಿ ಪಾತ್ರದಲ್ಲಿ ಆತ ಮಾಡಿಕೊಂಡ ಬದಲಾವಣೆಯ ಪ್ರಸ್ತುತತೆಯ ಬಗ್ಗೆ, ಪಾತ್ರಪೋಷಣೆಯ ಬಗ್ಗೆ, ಒಟ್ಟಾರೆಯಾಗಿ ಕಲಾವಿದನೊಬ್ಬನ ಅನನ್ಯತೆಯ ಕುರಿತು ಸಾಮಾನ್ಯ ನೋಡುಗ ಕೂಡ ವಿವರಿಸಬಲ್ಲ. ಹಾಗಾಗಿಯೇ ಯಾವುದೇ ಯಕ್ಷಗಾನ, ತಾಳಮದ್ದಳೆಯ ಒಂದೇ ಪ್ರಸಂಗವನ್ನು ಹತ್ತಾರು ಸಲ ಮಾಡಿದರೂ ನೋಡಲು ಹೋಗುತ್ತಾರೆ. ನೋಡುಗನಿಗೆ ಕಿಂಚಿತ್ತಾದರೂ ವಿಮರ್ಶಕ ಪ್ರಜ್ಞೆ ಇಲ್ಲದಿದ್ದರೆ ಇದು ಸಾಧ್ಯವಿಲ್ಲ. ಪ್ರೇಕ್ಷಕರಲ್ಲಿ ನಡೆದ ಚಚರ್ೆ ಮತ್ತು ಅವರ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಕಲಾವಿದ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಿದ್ದ.
ಹಾಗಾಗಿಯೇ ನಮ್ಮಲ್ಲಿ ಲಿಖಿತ ಕೃತಿಗಳಿಗೆ ಬಂದಂತೆ ಮೌಖಿಕ ಪರಂಪರೆಗೆ ಸೇರಿದ ಯಕ್ಷಗಾನ, ಸಣ್ಣಾಟ, ದೊಟ್ಟಾಟಗಳಿಗೆ ದೊಡ್ಡರೀತಿಯ ವಿಮಶರ್ೆಗಳಾಗಲೀ ವಿಶ್ಲೇಷಣೆಗಳಾಗಲೀ ಲಿಖಿತವಾಗಿ ಬಂದಿಲ್ಲ. ಆದರೆ ಇಂದು ಕಲಾವಿದರ ಜೀವನ ಚರಿತ್ರೆ, ಜೀವನ ನಿರೂಪಣೆ, ಅಭಿನಂದನಾ ಗ್ರಂಥಗಳ ಮೂಲಕ ಯಕ್ಷಗಾನ ಕಲಾಪ್ರಕಾರದ ವಿಮಶರ್ೆ, ಪಾತ್ರ ವಿಶ್ಲೇಷಣೆ ನಡೆಯುತ್ತಿವೆ. ಶತಮಾನಗಳ ಕಾಲದ ಮೌಖಿಕ ಪರಂಪರೆ ಲಿಖಿತ ರೂಪವನ್ನು ಪಡೆಯುತ್ತಿದೆ. ಸಹಜವಾಗಿಯೆ ಜಾನಪದ ಕಲಾಪ್ರಕಾರವೊಂದು ಲಿಖಿತ ರೂಪಕ್ಕೆ ಬರುವಾಗ ಒದಗುವ ಬಿಕ್ಕಟ್ಟು ಇತ್ತೀಚಿನ ಎಲ್ಲಾ ಕೃತಿಯಲ್ಲಿ ಇದೆ. ನಮ್ಮ ಬಹುತೇಕ ಕಲಾವಿದರು ಅನಕ್ಷರಸ್ಥರು ಮತ್ತು ಅಕ್ಷರಸ್ಥರಾದ ಬಹುತೇಕರು ಬರವಣಿಗೆಯನ್ನು ಒಗ್ಗಿಸಿಕೊಂಡವರಲ್ಲ. ಹಾಗಾಗಿಯೇ ಕಲಾವಿದನೊಬ್ಬನ ಶ್ರೀಮಂತ ಅನುಭವ ಅದೇ ಸಹಜತೆ ಮತ್ತು ವಸ್ತು ನಿಷ್ಠತೆಯಿಂದ ಹೊರಬರಲಾರದು. ಬಂದ ಹಲವು ಬರವಣಿಗೆಗಳು ಬೇರೊಂದು ಕೃತಿಯ 'ಅನುವಾದ' ವಿದ್ದಂತೆ ಇರುತ್ತವೆ. ಈ ಬಿಕ್ಕಟ್ಟು ತಿಳಿಯಾಗಲು ಇನ್ನಷ್ಟು ಕಾಲ ಬೇಕಾಗಬಹುದು. ನಮ್ಮ ನಡುವಿನ ಪ್ರಸಿದ್ಧ ಕಲಾವಿದ ಗೋಡೆ ನಾರಾಯಣ ಹೆಗಡೆಯವರ 'ಬದುಕು ಬಣ್ಣದ ಕಥನ' 'ಗೋಡೆ ಚಿತ್ತಾರ' ಕೃತಿಯಲ್ಲಿ ನಾವು ಕಾಣುವ ಕೆಲವು ತೊಡಕುಗಳು ಕೇವಲ ಈ ಲೇಖಕರದ್ದಲ್ಲ. ಈ ಕಾಲದ್ದೂ ಹೌದು ಎನ್ನುವದನ್ನು ನಾವು ಗಮನಿಸಬೇಕಾಗಿದೆ. ಯಕ್ಷಗಾನ ರಂಗಭೂಮಿಯಲ್ಲಿ ಹಲವು ಬದಲಾವಣೆಗಳು ನಡೆದಿವೆ. ಶಿಷ್ಟ ಪರಂಪರೆಯ ಚಹರೆಗಳನ್ನು ಅದು ಸಾಧ್ಯಂತವಾಗಿ ರೂಪಿಸಿಕೊಳ್ಳುತ್ತಿವೆ. ಅದರ ಜಾನಪದ ಸ್ವರೂಪ ಬದಲಾಗುತ್ತಿದೆ. ಇಲ್ಲಿ ಆದ ಬದಲಾವಣೆ ಸರಿ ಅಥವಾ ತಪ್ಪು ಎಂದೇನೂ ನಾನು ಇಲ್ಲಿ ವಾದ ಮಂಡಿಸುತ್ತಿಲ್ಲ. ಅದೊಂದು ಪ್ರಕ್ರಿಯೆ. (ಪ್ರೋಸೆಸ್). ಐದು ಹತ್ತು ಶತಮಾನಗಳ ಹಿಂದಿನಂತೆ ಈಗಲೂ ಇರಬೇಕು, ಇರುತ್ತದೆ ಎಂದು ನಾವೇನಾದರೂ ಎಣಿಸಿದರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಆದರೆ ಈ ಬದಲಾವಣೆಯ ಹಿಂದಿನ ಒತ್ತಡದ ಬಗ್ಗೆ, ಈ ಬದಲಾಗುವ ಪ್ರಕ್ರಿಯೆಯ ಹಿಂದೆ ಇರುವ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಮಾತ್ರ ಎಚ್ಚರ ಇರಲೇ ಬೇಕು. ಮತ್ತು ಅದನ್ನು ಗುರುತಿಸುವದು ಕೂಡ ಇಂದಿನ ವಿಮಶರ್ೆಯ ಅಗತ್ಯವಾಗಿದೆ. 'ಗೋಡೆ ಚಿತ್ತಾರ' ಕೃತಿಯನ್ನು ಸೂಕ್ಷ್ಮವಾಗಿ ನೋಡಿದಾಗ ಆ ಕಾಲದ ಸಾಂಸ್ಕೃತಿಕ ರಾಜಕಾರಣದ ಹೊಳಹುಗಳನ್ನು ಗುರುತಿಸಬಹುದಾಗಿದೆ.
ಗೋಡೆ ನಾರಾಯಣ ಹೆಗಡೆಯವರ ದಶಾವತಾರದ ಕಥೆ ಇದು. ಅನಾಥ ಬಾಲಕ, ನಾಟಕದ ನಟ, ಸ್ತ್ರೀ ವೇಷಧಾರಿ, ಅಂಗಡಿಕಾರ, ಹೋಟೆಲ್ ಮಾಲಿಕ, ಬಾಣಸಿಗ, ಮೇಳದ ಯಜಮಾನ, ಕೃಷಿಕ, ಮೇಳದ ಪ್ರಮುಖ ವೇಷಧಾರಿ, ಸಂಸಾರಿ ಹೀಗೆ ತಮ್ಮ 70 ವರ್ಷಗಳಲ್ಲಿ ಕಂಡ ಏಳು ಬೀಳುಗಳನ್ನು ನೋವು ನಲಿವುಗಳನ್ನು ಗೋಡೆಯವರು ಇಲ್ಲಿ ಭಾಸ್ಕರ ರಾವ್ ಮೂಲಕ ತೆರೆದಿಟ್ಟಿದ್ದಾರೆ. ನಿಜವಾದ ಬದುಕಿನಲ್ಲಿ ಕಂಡುಂಡ ಅನುಭವ ಅವರ ಅರ್ಥಗಾರಿಕೆಯಲ್ಲಿ ಯಾವಾಗಲೂ ಪ್ರತಿಧ್ವನಿಸುತ್ತಿರುವುದನ್ನು ನೋಡಬಹುದಾಗಿದೆ.
ಒಂದರ್ಥದಲ್ಲಿ ಈ ಪುಸ್ತಕ ಚರಿತ್ರೆ ಕೂಡ ಹೌದು. ಒಂದು ಕಾಲದ ಯಕ್ಷಗಾನ ಕಲೆಯ ನಡೆಯನ್ನು ನಮ್ಮೆದುರು ಇದು ತೆರೆದಿಡುತ್ತದೆ. ಒಬ್ಬ ಕಲಾವಿದನೊಂದಿಗೆ ಆತನ ಬದುಕಿನ ಕಾಲದ ಅನೇಕ ದಾಖಲೆಗಳು ಹೊರಟು ಹೋಗಿಬಿಡುತ್ತದೆ. ಅದು ಮತ್ತೆಲ್ಲೂ ಸಿಗಲಾರದು. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಅಂತಹ ದಾಖಲೆಗಳು ಮರೆಯಾಗಿ ಹೋಗಿದೆ. ಕೆಲವೊಂದನ್ನು ಮಾತ್ರ ಒಂದು ಮಿತಿಯೊಳಗೆ ದಾಖಲಿಸಲಾಗಿದೆ. ಗೋಡೆಯವರು ಇಲ್ಲಿ ಎಷ್ಟೊಂದು ಮೇಳಗಳನ್ನು, ನಟರನ್ನು, ಪ್ರಯೋಗಗಳನ್ನು, ಪಾತ್ರ ವೈವಿಧ್ಯಗಳನ್ನು ಹೆಸರಿಸುತ್ತಾರೆ! ಸಿದ್ಧಿವಿನಾಯಕ ಯಕ್ಷಗಾನ ನಾಟ್ಯ ಕಲಾಸಂಘ, ಕೆರೆಮನೆ ವೆಂಕಟಾಚಲ ಮಿತ್ರ ಮಂಡಳಿ, ಕೊಳಗಿಬೀಸ್, ಹಣಜಿಬೈಲ್ ಮೇಳ, ಪಂಚಲಿಂಗ ಹೀಗೆ 12-13 ಮೇಳಗಳ ಕುರಿತು, ಮೇಳಗಳ ಸ್ಥಿತಿಗತಿ, ಮೇಳ ಹುಟ್ಟುವ ಅಗತ್ಯತೆ, ಕಲಾಪೋಷಕರ ಸ್ವಭಾವ, ಸ್ವರೂಪ, ಕಲಾವಿದ - ಯಜಮಾನರ ಸಂಬಂಧ ಇತ್ಯಾದಿ ಕುರಿತು ವಿವರಿಸಿದ್ದಾರೆ. ಇಲ್ಲಿ ಹೆಸರಿಸಿರುವ ಬಹುತೇಕ ಮೇಳಗಳು ಈಗ ಅಸ್ತಿತ್ವದಲ್ಲಿಲ್ಲ. ಆದರೆ ಅವೆಲ್ಲ ಯಕ್ಷಗಾನ ರಂಗಭೂಮಿಯ ಏಳ್ಗೆಗೆ ತಮ್ಮದೇ ಆದ ಕೊಡುಗೆ ನೀಡಿವೆ.
ಇದರೊಂದಿಗೆ ತೀರಾ ಮಹತ್ವದ ಭಾಗವೆಂದರೆ ಇವರ ಅವಧಿಯಲ್ಲಿ ರೂಢಿಸಲ್ಪಟ್ಟ ಹಲವು ಪೌರಾಣಿಕ ಪಾತ್ರಗಳ ಬಗ್ಗೆ ಹೇಳುತ್ತಾರೆ. ಋತುಪರ್ಣ, ಬ್ರಹ್ಮ, ಕೌರವ, ಪ್ರಚಂಡ ವಿಶ್ವಾಮಿತ್ರ, ಸಹಸ್ರಾನೀಕ, ದೃಮಿಳಾಸುರ ಮುಂತಾದ ಹೊಸ ಪಾತ್ರಗಳನ್ನು ತಾನು ನಿರ್ವಹಿಸಿದ್ದಾಗಿ ಮತ್ತು ಅದಕ್ಕೊಂದು ಹೊಸತನವನ್ನು, ಮೆರಗನ್ನು ತಂದುಕೊಟ್ಟಿರುವುದಾಗಿ ಹೇಳುತ್ತಾರೆ. ಇದನ್ನು ಸರಿಯಾಗಿ ಯಾರೂ ಗುರುತಿಸಲಿಲ್ಲವಲ್ಲ ಎಂಬ ಕೊರಗೂ ಇಲ್ಲಿ ವ್ಯಕ್ತವಾಗಿದೆ. ಅದನ್ನು ತನ್ನ ದುದರ್ೈವ ಎಂದು ನೊಂದುಕೊಳ್ಳುತ್ತಾರೆ. ಆದರೆ ಪಾತ್ರಗಳಲ್ಲಿ ಮಾಡಿಕೊಂಡ ಬದಲಾವಣೆಯ ಕುರಿತು ಪ್ರಾಸಂಗಿಕವಾಗಿ ಬಂದಿದೆ. ಆದರೆ ಇದು ಇನ್ನಷ್ಟು ಹೆಚ್ಚು ದೀರ್ಘವಾಗಿದ್ದರೆ ಅಧ್ಯಯನಕ್ಕೆ ಅನುಕೂಲವಾಗುತ್ತಿತ್ತು (ಜಿ. ಎಸ್. ಭಟ್ಟ ಅವರು ಶಂಭು ಹೆಗಡೆಯವರ ಪಾತ್ರದ ಕುರಿತು ಮಾಡಿದ ವಿಶ್ಲೇಷಣೆಯ ರೀತಿ). ಆ ಸಂದರ್ಭ ಬಂದಾಗಲೆಲ್ಲ ಅವರು ಅವಸರವಾಗಿ ಮುಂದೆ ಹೋಗಿಬಿಡುತ್ತಾರೆ.
ತನ್ನ ವೃತ್ತಿ ಬದುಕಿನಲ್ಲಿ ದುರಂತ ಪಾತ್ರವನ್ನೇ ಜನ ಇಷ್ಟಪಟ್ಟಿದ್ದನ್ನು ಮತ್ತು ಒಂದು ಹಂಗಾಮಿನಲ್ಲಿ 90ಕ್ಕೂ ಅಧಿಕ 'ಗದಾಯುದ್ಧ' ಪ್ರಸಂಗದ ಆಟ ನಡೆದುದನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಸಲ ಕೌರವ ಪಾತ್ರ ನಿರ್ವಹಿಸಿದ್ದು ಒಂದು ದಾಖಲೆಯೇ ಸರಿ.
ಶಿವರಾಮ ಹೆಗಡೆ, ಕೊಂಡದಕುಳಿ, ಮಹಾಬಲ ಹೆಗಡೆ, ಚಿಟ್ಟಾಣಿ, ಶಂಭು ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ಮುಂತಾದ ಕಲಾವಿದೊಂದಿಗಿನ ಜೋಡಿ ಪಾತ್ರ, ಒಡನಾಟಗಳ ಸ್ವಾರಸ್ಯದ ಕುರಿತು ಲೇಖಕರು ಇಲ್ಲಿ ಪ್ರಸ್ತಾಪಿಸುತ್ತಾರೆ. ಗೋಡೆಯವರು ನಿರ್ವಹಿಸಿದ ಕೆಲವು ಪಾತ್ರಗಳಿಗೆ ಸಿದ್ಧಮಾದರಿಗಳಿದ್ದವು (ಉದಾ: ಗದಾಯುದ್ಧದ ಕೌರವ). ಆದರೆ ಬ್ರಹ್ಮ, ಋತುಪರ್ಣ, ಅಕ್ರೂರ, ತ್ರಿಶಂಕು ಮೊದಲಾದ ಪಾತ್ರಗಳಿಗೆ ಇಂತಹ ಸಿದ್ಧ ಮಾದರಿಗಳಿರಲಿಲ್ಲ. ಗೋಡೆಯವರೇ ರೂಪಿಸಿದರು. ಟಿಕೆಟ್ ಕೌಂಟರಿನಲ್ಲಿ ಗೋಡೆಯವರು ಇದ್ದಾರೆಯೇ ಎನ್ನುವುದನ್ನು ಕೇಳಿ ಅವರಿಲ್ಲ ಎಂದಾದರೆ ಹಿಂದಿರುಗುತ್ತಿದ್ದ ಪ್ರೇಕ್ಷಕ ಸಮುದಾಯವಿತ್ತೆಂದರೆ ಅವರ ಪಾತ್ರದ ಪರಿಣಾಮ ಎಷ್ಟೆತ್ತರಕ್ಕೆ ಬೆಳೆದಿತ್ತೆನ್ನುವುದನ್ನು ತಿಳಿಯಬಹುದು ಎನ್ನುತ್ತಾರೆ ಲೇಖಕರಾದ ಭಾಸ್ಕರ ರಾವ್ ಅವರು. 
ಇಡೀ ಕೃತಿ ಆ ಕಾಲದ ಪ್ರಮುಖ ವಾಗ್ವಾದಗಳನ್ನು ಅನಾವರಣ ಮಾಡುತ್ತದೆ. ಇಂದೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಘಟ್ಟದ ಮೇಲೆ, ಘಟ್ಟದ ಕೆಳಗೆ ಎನ್ನುವ ಭೌಗೋಲಿಕ ಬೇಧ, ಸಾಂಸ್ಕೃತಿಕ ಬೇಧವಾಗಿ ಪರಿಣಮಿಸಿ ಘಟ್ಟದ ಮೇಲಿನ ಕಲಾವಿದರು ತಾತ್ಸಾರಕ್ಕೆ ಒಳಗಾಗಿದ್ದು, ಮೂರುತಾಸಿನ ಯಕ್ಷಗಾನವನ್ನು ತಾವೇ ಮೊದಲು ಪ್ರಾರಂಭಿಸಿದರೂ ಕೆರೆಮನೆ ಮೇಳಕ್ಕೆ ಅದರ ಕ್ರೆಡಿಟ್ ಹೋಗಿದ್ದು, ಪ್ರಸಂಗಕರ್ತನಿಗೆ ನಿಷ್ಠನಾಗಿ ಬ್ರಹ್ಮನ ಪಾತ್ರ ನಿರ್ವಹಿಸಿದರೂ ಶೇಣಿಯವರಿಂದ 'ಬೀದಿಕಾಮಣ್ಣ'ನಂತಹ ಬ್ರಹ್ಮ ಎನಿಸಿಕೊಂಡಿದ್ದು, ಮಲೆನಾಡಿನ ಯಕ್ಷಗಾನ ಸಮಾವೇಶಕ್ಕೆ ತನ್ನನ್ನು ಕರೆಯದಿದ್ದುದು, ಶಿರಸಿಯಲ್ಲಿ ಚಿಟ್ಟಾಣಿಯವರೊಂದಿಗೆ ಸ್ಪಧರ್ೆಗಿಳಿಸಿ ಚೆನ್ನಾಗಿ ಮಾಡಿದರೂ ಬಹುಮಾನ  ಕೊಡದಿದ್ದುದು, ಸಿದ್ದಾಪುರದ ಭುವನೇಶ್ವರೀ ತಾಳಮದ್ದಳೆ ಕೂಟ ತನ್ನ ಮೇಲೆ ಹಗೆ ಸಾಧಿಸಿದ್ದು, ಕೆರೆಮನೆ ಮೇಳ, ಅಮೃತೇಶ್ವರೀ ಮೇಳ ಸೇರಿದ್ದು ಬಿಟ್ಟಿದ್ದು, ಅದಕ್ಕಿರುವ ಕಾರಣಗಳು ಇತ್ಯಾದಿ ಇತ್ಯಾದಿ ಅನೇಕ ಚಚರ್ೆಗಳನ್ನು ಈ ಕೃತಿ ಒಳಗೊಂಡಿದೆ. ಪುಸ್ತಕದ ತುಂಬ ಹರಡಿಕೊಂಡಿರುವ ಅವರ ಅನುಭವದಲ್ಲಿ ಅರಸಿದರೂ ಒಂದೆರಡು ಹೆಸರನ್ನು (ಜಲವಳ್ಳಿ, ಗಜಾನನ ಭಂಡಾರಿ ಇತ್ಯಾದಿ) ಹೊರತುಪಡಿಸಿದರೆ ಉಳಿದಂತೆ ಶೂದ್ರ ಕಲಾವಿದರ ಹೆಸರಿನ ಪ್ರಸ್ತಾಪವೇ ಇಲ್ಲದಿರುವುದು ಕೂಡ ಆಶ್ಚರ್ಯ ಹುಟ್ಟಿಸುತ್ತದೆ. ಅಥವಾ ಮೇಲ್ಜಾತಿಯನ್ನು ಹೊರತುಪಡಿಸಿದರೆ ಬೇರೆ ಜನಸಮುದಾಯದಿಂದ ಆ ಕಾಲದಲ್ಲಿ ಕಲಾವಿದರಾಗಿ ಕಲಾವಿದರು ರೂಪುಗೊಂಡಿರಲಿಲ್ಲವೇ ಎಂಬ ಚಚರ್ೆಯನ್ನು ಇದು ಹುಟ್ಟುಹಾಕುತ್ತದೆ. ಪ್ರಾಜ್ಞರು ಈ ಕುರಿತು ಮುಕ್ತವಾಗಿಯೇ ಚಚರ್ಿಸಬೇಕಾಗಿದೆ. ಪ್ರಾಜ್ಞರು ಈ ಕುರಿತು ಮುಕ್ತವಾಗಿಯೇ ಚಚರ್ಿಸಬೇಕಾಗಿದೆ. ಯಾಕೆಂದರೆ ಈ ವಾಗ್ವಾದ ಅಂತಿಮವಾಗಿ ಅಸ್ತಿತ್ವದಲ್ಲಿರುವ ಕಲ್ಚರಲ್ ಪಾಲಿಟಿಕ್ಸ್ನ ಸೂಕ್ಷ್ಮವನ್ನು ತೆರೆದಿಡಬಹುದು ಮತ್ತು ಕಲೆಯ ಬೆಳವಣಿಗೆಗೂ ಅನುಕೂಲವಾಗಬಹುದು.
ಏಕೋ ಓದುವುದು ನನ್ನ ತಲೆಗೆ ಹತ್ತಲೇ ಇಲ್ಲ ಎಂದು ಬಾಲ್ಯವನ್ನು ನೆನಪಿಸುವ ಗೋಡೆಯವರು ನಂತರದ ಕಲಿಕೆಯೇನಿದ್ದರೂ ಜೀವನ ಶಾಲೆಯಲ್ಲಿಯೇ ಎನ್ನುವರು. ಅವರದು ಯಕ್ಷಗಾನ ಕಲಾವಿದರ ಪರಂಪರೆಯುಳ್ಳ ಕುಟುಂಬವೇನಲ್ಲ. ಬಡತನವೊಂದನ್ನು ಹೊರತುಪಡಿಸಿದರೆ ಉಳಿದದ್ದೆಲ್ಲ ಅವರ ಸ್ವಯಾಜರ್ಿತವೇ. ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅನಾಥ ಮಗು ನಾರಾಯಣ, ಮುಂದಿನ ಹಲವು ವರ್ಷ ಕಾಲ ಅವರು ಉಸಿರಾಡಿದ್ದು, ತಿಂದಿದ್ದು, ಉಂಡಿದ್ದೆಲ್ಲ ಬಡತನವನ್ನೇ. ಒಂದು ಹೊತ್ತಿನ ಕೂಳಿಗೂ ತತ್ವಾರವಾಗಿದ್ದ ಅಂಥ ಸ್ಥಿತಿಯಲ್ಲಿ ಅವರಿಗೆ ಯಕ್ಷಗಾನ ಬಯಲಾಟ ನೋಡುವ ಅದೃಷ್ಟ ಎನ್ನಬಹುದಾದ ಅವಕಾಶವೊಂದು ಹೇಗೋ ದೊರೆಯಿತು. ಆಮೇಲೆ ಕಲಾವಿದರಾಗಿ, ಸಂಸಾರಿಯಾಗಿ ಗೋಡೆಯವರು ಖ್ಯಾತನಾಮರಾದುದನ್ನು ಲೇಖಕರು ವಿವರವಾಗಿಯೇ ನಮೂದಿಸಿದ್ದಾರೆ.
ಈ ಮಧ್ಯೆ ನಡೆದ ಹಲವು ಸ್ವಾರಸ್ಯಕರ ಘಟನೆಗಳನ್ನು ಲೇಖಕರು ಗೋಡೆಯವರ ಸ್ಮೃತಿಪಟಲದಿಂದ ಹೊರತೆಗೆದಿಟ್ಟಿದ್ದಾರೆ.
1. ಯಕ್ಷಗಾನವನ್ನು ಸಮಯ ಮಿತಿಯೊಳಗೆ ಪ್ರದಶರ್ಿಸುವುದರಿಂದ ಪ್ರೇಕ್ಷಕರ ಹತ್ತಾರು ಸಮಸ್ಯೆ ನೀಗುತ್ತದೆ. ಪ್ರಸಂಗದ ಕಲಾವಿದರ ಶ್ರಮವೂ ತಗ್ಗುತ್ತದೆ ಎಂಬ ತೀಮರ್ಾನವೇ ಯಕ್ಷಗಾನವನ್ನು ಮೂರು ತಾಸಿನ ಆಟವಾಗಿಸಲು ಉತ್ತೇಜನವಾಯಿತು. ಈ ಹಿನ್ನೆಲೆಯಲ್ಲಿ ಸಮಯ ಮಿತಿಯ ಪ್ರಯೋಗಕ್ಕೆ 1954-55 ರಲ್ಲಿಯೇ ಶ್ರೀಕಾರ ಹಾಕಿದ್ದು ಗೋಡೆ, ಕೊಳಗಿ ಮತ್ತಿತರ ಗೆಳೆಯರು ಆದರೆ ಇದು 'ಮೂರುಕಾಸಿನ ಪ್ರಯೋಗ' ಎಂಬ ಮೂದಲಿಕೆಗೆ ಒಳಗಾಯಿತು. 2. ಶ್ರೀ ಸಿದ್ಧಿವಿನಾಯಕ ನಾಟ್ಯ ಕಲಾಸಂಘ ಆರಂಭವಾಗಿದ್ದು ಒಂದು ಅಮಾವಾಸ್ಯೆಯ ದಿವಸ! ಮೂರು ತಾಸಿನ ಪ್ರಯೋಗ ಮಾಡಿ ಮೂರು ಕಾಸಿನ ಪ್ರಯೋಗ ಎಂಬ ಮೂದಲಿಕೆಗೆ ಒಳಗಾಗಿದ್ದ ಗೆಳೆಯರು ಈಗ 'ಅಮಾವಾಸ್ಯೆ ಮೇಳ ಇದು. ಆಯುಷ್ಯ ಬಹಳವಿಲ್ಲ' ಎಂಬ ಮಾತನ್ನೂ ಕೇಳಬೇಕಾಗಿ ಬಂತು. 3. ಇದು ಒಂದೆರಡು ಪ್ರಸಂಗ ಮಾತ್ರ. ಇನ್ನುಳಿದಂತೆ ಶಿವರಾಮ ಹೆಗಡೆಯವರ ಮುಂದೆ ಸೈರಂದ್ರಿ ಪಾತ್ರಮಾಡಿ 'ಮಾಣಿಗೆ ಉತ್ತಮ ಭವಿಷ್ಯವಿದೆ' ಎಂತ ಹೊಗಳಿಸಿಕೊಂಡಿದ್ದು, ಶೇಣಿಯವರ ವಿಮಶರ್ೆಯಲ್ಲಿ ಬ್ರಹ್ಮನ ಪಾತ್ರ ಬೀದಿಕಾಮಣ್ಣನಾಗಿದ್ದು, ರಂಗದಲ್ಲಿ ವಲಲ ಭೀಮ ಮನೆಯಲ್ಲಿ ಸೌಟು ಹಿಡಿದು ಅಡಿಗೆ ಮಾಡಿದ್ದು, ರಾತ್ರಿಯಿಡೀ ರಂಗದಲ್ಲಿ ಮೀನಾಕ್ಷಿಯಾಗಿ ತಲೆಸುತ್ತಿ ಬಂದು ಗಟಾರ ಸೇರಿದ್ದು, ಪೇಟೆಗೆ ಅವಲಕ್ಕಿ ಮಾರಾಟಕ್ಕೆ ಹೋಗುತ್ತಿದ್ದುದು, ಮೊದಲಬಾರಿಗೆ ಆಟಕ್ಕೆ 15 ರೂ. ವೀಳ್ಯ ಪಡೆದಿದ್ದು, 'ದ್ರೌಪದಿ ಪ್ರತಾಪ' ನಡೆದಾಗ ಭೂಕಂಪವಾದರೂ ಜನಕ್ಕೆ ಅರಿವಿಗೆ ಬರದಿರುವುದು..... ಹೀಗೆ ಕೆಲವು ಲಹರಿ, ಕೆಲವು ಪುಳಕ, ಕೆಲವು ಎಚ್ಚರಿಕೆ, ಕೆಲವು ಕಟುವಾಸ್ತವ ತಿಳಿಸುವ ಘಟನೆಗಳು.
'ಪ್ರಕೃತಿ ನಮ್ಮಿಚ್ಛೆಯಂತೆ ಇರುವುದಿಲ್ಲ' ಎನ್ನುವುದು ಸ್ವತಃ ಅರಿವಿಗೆ ಬರುವ ಹೊತ್ತಿಗೆ ನಾರಾಯಣ ಹೊಳೆಯ ಅರ್ಧಕ್ಕೆ ಬಂದಾಗಿತ್ತು. ಆ ಕಡೆ ಇಲ್ಲವೇ ಈ ಕಡೆ ದಡ ಅಷ್ಟು ದೂರ. ಹಸಿವು, ನೀರಡಿಕೆ ನಮ್ಮನ್ನು ಕೇಳಿ ಬರುವುದಿಲ್ಲ. ಹಸಿವಿಗೆ ಪರಿಹಾರ ಹುಡುಕುತ್ತಾ ಹೊರಟ ನಾರಾಯಣ ಹೋಟೇಲ್ ಸೇರಿದ, ಹೋಟೇಲ್ ಕಾಮರ್ಿಕನಾಗಿ ಚಹಾ ಸಿದ್ಧಪಡಿಸಿ ಗಿರಾಕಿಗಳಿಗೆ 'ಸಪ್ಲೈ' ಮಾಡುವ ಮಾಣಿಯಾಗಿ, ಅಡುಗೆ ಭಟ್ಟನಾಗಿ...... ಏನೆಲ್ಲ ಪಾತ್ರಗಳನ್ನು ನಾರಾಯಣ ಮಾಡಿದ. ಈ ಇತಿಹಾಸ ಈಗ ಸ್ವತಃ ಗೋಡೆಯವರಿಗೂ ವಿಸ್ಮಯ ಬರಿಸುತ್ತದೆ. ಇದು ಭಾಸ್ಕರ ರಾವ್ ಅವರ ಬರವಣಿಗೆಯ ಶೈಲಿಗೆ ಒಂದು ಉದಾಹರಣೆ ಅಷ್ಟೇ. ಭಾಸ್ಕರ ರಾವ್ ಅವರು ಯಕ್ಷಗಾನದ ಒಳಹೊರಗನ್ನು ಒಳಗಿನವರಾಗಿಯೇ ಅನುಭವಿಸಿದವರಾದ್ದರಿಂದ ನಿರೂಪಣೆಯಲ್ಲಿ ಸಹಜತೆಯೂ ಆಪ್ತತೆಯೂ ಒಡಮೂಡಿದೆ.
ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಮಕಾಲೀನರೂ, ಸಮಬಲರೂ ಆದ ಗೋಡೆಯವರು ಜನಪ್ರಿಯತೆಯ ತಕ್ಕಡಿಯಲ್ಲಿ ಸ್ವಲ್ಪ ಸೋತರೆನ್ನಬೇಕು. ಇದಕ್ಕೆ ಕಾರಣ ಏನಿರಬಹುದು? ಅದರಲ್ಲಿ ಗೋಡೆಯವರ ಪಾಲೆಷ್ಟು? ಉಳಿದವರ ಪಾಲೆಷ್ಟು? ಎಂದು ವಿಶ್ಲೇಷಿಸಿ ಗೋಡೆಯವರ ಈವರೆಗಿನ ಸಾಧನೆಯನ್ನು ತೆರೆದಿಡಬೇಕೆನ್ನುವ ಲೇಖಕರ ಹಂಬಲ ಈ ಕೃತಿಯ ಆಳದಲ್ಲಿದೆ. ಕಲಾವಿದನೊಬ್ಬ ಹೇಳಿದಂತೆ ಇಲ್ಲಿ ದಾಖಲಾಗಿಲ್ಲ. ಆದರೆ ಲೇಖಕ, ಒದಗಿಸಿದ ಮಾಹಿತಿಯನ್ನ ಬಳಸಿಕೊಂಡೇ ತನ್ನ ಅಭಿಪ್ರಾಯವನ್ನೂ ಒಳನೋಟವನ್ನು ಜೊತೆ ಜೊತೆಗೆ ನೀಡಿದ್ದಾರೆ. ಕೆಲವೊಮ್ಮೆ ಗೋಡೆಯವರ ಹೇಳಿಕೆ ಯಾವುದು? ಭಾಸ್ಕರ ರಾವ್ ಅವರ ವ್ಯಾಖ್ಯಾನ ಯಾವುದು ಎನ್ನುವ ಗೊಂದಲ ಕೂಡ ಎದುರಾಗುತ್ತದೆ. ಇಲ್ಲಿ ಲೇಖಕರ ಆಶಯ ಗೋಡೆಯವರನ್ನು ಮಾತ್ರವೇ ಚಿತ್ರಿಸುವುದಲ್ಲ ಬದಲಾಗಿ ಗೋಡೆಯವರ ಮೂಲಕ ಆ ಕಾಲಘಟ್ಟದ ಯಕ್ಷಗಾನವನ್ನೂ, ಆಗಿನ ಜನಮನವನ್ನೂ ದಾಖಲೆಗೊಳಿಸುವ ಒಂದು ಯತ್ನವಾಗಿ ಈ ಕೃತಿ ಇರಬೇಕೆನ್ನುವುದು ನನ್ನ ಆಶಯ ಎನ್ನುವ ಅವರ ಹಂಬಲ ತೀರಾ ಮಹತ್ವವಾದದ್ದೇ. ಒಂದು ಕೃತಿಯ ಸಫಲತೆ ಇರುವುದೂ ಇಲ್ಲಿಯೇ.
www.sahayana.wordpress.com
ಇದರ ಪ್ರಯತ್ನವಾಗಿ ಲೇಖಕಕರು ಸ್ವಾತಂತ್ರ್ಯ ಚಳುವಳಿಯೊಂದಿಗೆ (ಅಧ್ಯಾಪ ಲಕ್ಷ-ಅಲಕ್ಷ್ಯ), ತುತರ್ುಪರಿಸ್ಥಿತಿಯ ಕಾಲದೊಂದಿಗೆ (ಕೆರೆಮನೆ ದೂರ), ಜೆ.ಪಿ.ಚಳುವಳಿಯೊಂದಿಗೆ, ಜನತಾಪಕ್ಷದ ಉಗಮದೊಂದಿಗೆ ಯಕ್ಷಗಾನ ಕ್ಷೇತ್ರದಲ್ಲಿ ಆದ ಬದಲಾವಣೆಯನ್ನು ಇಟ್ಟು ನೋಡುವ ಮಹತ್ವದ ಪ್ರಯತ್ನವನ್ನು ಅಲ್ಲಲ್ಲಿ ನೋಡಬಹುದು. ಆದರೆ ಈ ಪ್ರಯತ್ನವನ್ನು ಇನ್ನಷ್ಟು ವಿಸ್ತರಿಸಬಹುದಾಗಿತ್ತು. ಹಾಗೆಯೇ ಪಾತ್ರ ವಿಶ್ಲೇಷಣೆ ಕೂಡ ಇನ್ನಷ್ಟು ವಸ್ತು ನಿಷ್ಟಗೊಳ್ಳಬಹುದಾಗಿತ್ತು ಎನ್ನುವುದು ನನ್ನ ಆಶಯವೇ ಹೊರತು ಪುಸ್ತಕದ ಮಿತಿಯನ್ನು ಹೇಳಲು ಇದನ್ನು ಹೇಳುತ್ತಿಲ್ಲ.
ಗೋಡೆಯವರಿಗೂ 'ಗೋಡೆ ಚಿತ್ತಾರ'ವನ್ನು ಬರೆದ ಎಂ. ಕೆ. ಭಾಸ್ಕರ ರಾವ್ ಅವರಿಗೂ ಅಭಿನಂದನೆಗಳು.

                                                                              - ಡಾ. ವಿಠ್ಠಲ್ ಭಂಡಾರಿ, ಉಪನ್ಯಾಸಕರು, ಸಿದ್ದಾಪುರ.

Wednesday 9 July 2014

ಜಾನಪದ ಲೇಖನ ಕುಂಜ--ಮಾಧವಿ ಭಂಡಾರಿ ಕೆರೆಕೋಣ

ಜಾನಪದ ಲೇಖನ ಕುಂಜ

      ಶಾಂತಿ ನಾಯಕರು ಎಂದೊಡನೆ ನನ್ನ ಸುತ್ತ ಸುತ್ತಿಕೊಳ್ಳುವುದು ಔಷಧೀಯ ಕಂಪು; ಜಾನಪದೀಯ ಇಂಪು. ಅವರ ಮನೆಯ ಅಂಗಳಕ್ಕೆ ಕಾಲಿಟ್ಟರೆ ನಮ್ಮ ಕಣ್ಸೆಳೆಯುವುದು ಅವರ ಪ್ರೀತಿಯ ಆರೈಕೆಯಲ್ಲಿ ಬೆಳೆದ ನೂರಾರು ಔಷಧೀಯ ಗಿಡಗಳು ಮನೆಯೊಳಗೆ ಕಾಲಿಟ್ಟರೆ ಕೊಡುವ ಪಾನಕ, ನೀಡುವ ಕಷಾಯ, ಬಡಿಸುವ ತಂಬಳಿ ಎಲ್ಲವೂ ಸಸ್ಯ ಜನ್ಯವೆ. ಆಧುನಿಕರೆಲ್ಲ ಫಾಸ್ಟ್ಫುಡ್ನ ಬೆನ್ನತ್ತಿ ಓಡುತ್ತಿರುವಂತಹ ಸಂದರ್ಭದಲ್ಲಿ ಜಾನಪದೀಯ ಅಡುಗೆಗಳ ಶುಚಿ-ರುಚಿಯ ಗುಟ್ಟನ್ನು ತಮ್ಮ ಮನೆಯ ಅತಿಥಿಗಳ ಆತಿಥ್ಯದಿಂದಲೇ ತಿಳಿಸುತ್ತ ಬಂದವರು ಅವರು. ಅವರು ತಲೆಗೆ ಹಚ್ಚುವ ಎಣ್ಣೆಯೂ ಯಾವುದೋ ಸೊಪ್ಪು-ಬೇರಿನಿಂದಲೇ ತಯಾರಿಸಿದ್ದು. ಹೀಗಾಗಿ ನಮ್ಮನ್ನು ನಾಚಿಸುವ ಕಪ್ಪು ಮಿರಿ ಮಿರಿ ಕೂದಲು ಶಾಂತಿನಾಯಕರದು.

ಜಾನಪದ ಕಥೆ, ಜಾನಪದ ಅಡುಗೆ, ಜಾನಪದ ಆಟ, ಜಾನಪದ ಒಗಟು, ಜಾನಪದ ಹಾಡು, ಹಸೆ ಎಲ್ಲವೂ ಇವರ ಆಸಕ್ತಿಯ ಕ್ಷೇತ್ರ. ಕೇವಲ ಸಂಗ್ರಹ ಕಾರ್ಯವನ್ನಷ್ಟೇ ಮಾಡದೆ ಆ ಎಲ್ಲ ಸಂಗತಿಗಳಲ್ಲಿ ಸ್ತ್ರೀಯ ಪ್ರಾಧಾನ್ಯತೆ, ಸಂಪ್ರದಾಯ ಆಚರಣೆಯ ಹೆಸರಲ್ಲಿ ಇರುವಂತಹ ಸ್ತ್ರೀ ವಿರೋಧಿ ನಿಲುವು, ಸಾಹಿತ್ಯದೊಳಗೆ ಅಡಗಿರುವ ಹೆಣ್ಣಿನ ಕಲಾತ್ಮಕ ಪ್ರತಿಭಟನೆ ಎಲ್ಲವನ್ನು ಅದರ ಜೊತೆ ಜೊತೆಗೇ ಮಾಡಿದ್ದಾರೆ. ಮಾತೃ ಪ್ರಾಧಾನ್ಯತೆ ಹೇಗೆ ಪುರುಷ ಪ್ರಧಾನ್ಯತೆಯತ್ತ ತಿರುಗಿತೆನ್ನುವ ಹೊಳಹನ್ನು ನೀಡುವ ಅವರು ಸದಾ ನನಗೆ ಮಾತೆಯಂತೆ ಕಂಡವರು.

ಜಾನಪದ ಪ್ರಕಾಶನದ ಬೆಳ್ಳಿಹಬ್ಬದ ಪ್ರಕಟಣೆಯಡಿ ಮೂಡಿ ಬಂದ ಶ್ರೀಮತಿ ಶಾಂತಿ ನಾಯಕರ 'ಜಾನಪದ ಲೇಖನ ಕುಂಜ' ಕೂಡ ಅವರ ಸಹಜ ಸೂಪಶಾಸ್ತ್ರ, ರಂಗೋಲಿ, ಕ್ರೀಡೆ, ಚವತಿಹಬ್ಬ, ಜಲ ಸಂಸ್ಕೃತಿಯ ಲೇಖನಗಳನ್ನು ಒಳಗೊಂಡಿದೆ.
1) 'ಮಂಗರಸನ ಸೂಪಶಾಸ್ತ್ರ' ಓದುತ್ತಿದ್ದಂತೆ ಚಿಕ್ಕವರಾಗಿದ್ದಾಗ ಕೇಳಿ ಕುಪ್ಪಳಿಸಿದ, ಈಗಲೂ ಅದೇ ಪ್ರೀತಿಯಿಂದ ಕೇಳಿ ಜೊಲ್ಲು ಸುರಿಸುವ ಹೊನ್ನಪ್ಪ ಭಾಗವತರು ಹಾಡಿದ ಒಂದು ಹಾಡು ನೆನಪಿಗೆ ಬಂತು. 'ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಬೀಗರಿಗೆ ಔತಣವಿದು....... ಎಂದು ಹಾಡುತ್ತ ಹತ್ತಾರು ತಿನಿಸುಗಳನ್ನು ಪರಿಚಯಿಸಿದಂತೆ ಇಲ್ಲಿಯ ಅನೇಕ ಹೊಸ ಹೊಸ ಕಜ್ಜಾಯಗಳು ನಮ್ಮ ವರದಿಯಲ್ಲಿ ಸೇರುವಂತೆ ಮಾಡಿತು.

ಈಗಿನ ಯಾಂತ್ರಿಕ ಬದುಕಿನಲ್ಲಿ ಮಾಡಿದ್ದೇ ಮಾಡಿ ಮಾರು ದೂರ ಸರಿಯುವಂತೆ ಮಾಡುವ ಜಿಲೇಬಿ, ಜಾಮೂನು, ಶ್ಯಾವಿಗೆ ಖೀರು, ಮೈಸೂರಪಾಕುಗಳಿಗಿಂತ ಆ ಹಳೆಯ ಕಜ್ಜಾಯಗಳ ಹೆಸರೇ ಎಷ್ಟು ಆಪ್ಯಾಯಮಾನ! ನೋಡಿ ಅಮೃತ ಪಿಂಡರೊಟ್ಟಿ, ಜಿವ್ವಾಮೃತ ರೊಟ್ಟಿ, ಹಾಲುಗಾರಿಗೆ, ತುಪ್ಪ ಗಾರಿಗೆ, ಮೊಸರೊಡೆ, ಸಿತಪಾಕದೊಡೆ, ಸ್ವಲ್ಪ ಕಷ್ಟವಾದರೂ ಇಷ್ಟವಾಗುವ ಭುಕ್ತಿಕಾಂಚಿಕತಕ್ರೋದನ, ಮಂಡಕ್ ಮಿಶ್ರ ರಂಭಾ ಕುಸುಮ ಕೂಷ್ಮಾಂಡ ಖಂಡ ಶೂಲ್ಯಕ ಇತ್ಯಾದಿಗಳು. ಇಡ್ಡಲಿಗೆ, ಉಂಡಲಿಗೆ, ಕಡಬು, ಕಡಿವಡೆ, ಕರಜಿಗೆ, ಕಳತಿ, ಕೊಣಬು, ಗಾರಿಗೆ, ಲಡ್ಡುಗೆ ಈ ಎಲ್ಲ ಹಳೆಯ ತಿನಿಸುಗಳು ಈಗಲೂ ಅಲ್ಪಸಲ್ಪ ಬದಲಾವಣೆಯೊಂದಿಗೆ ನಮ್ಮ ಜೊತೆ ಇರುವುದು ಖುಷಿಯೆನಿಸುತ್ತದೆ. ಮೊಸರು ಮಾಡುವ ವಿವಿಧ ವಿಧಾನಗಳಂತೂ ಆಶ್ಚರ್ಯದಾಯಕವೆನಿಸುತ್ತದೆ. ಅಡಿಗೆಯ ಕುರಿತಾಗಿ ಎಂತಹ ಕಲಾತ್ಮಕ ವಿವರಣೆ ಮಂಗರಸನದು. ಉದಾಹರಣೆಗೆ ಕಳಿತ ಬಾಳೆಯ ಹಣ್ಣು ಖಜರ್ೂರದ ತನಿವಣ್ಣು
ಬಿಳಿಯ ಸಕ್ಕರೆ ಮಾವಿನಿನಿವಣ್ಣು ಪಲಸುವ
ಣ್ತೊಳಪ ದೀಪದ್ರಾಕ್ಷೆಗಳ ಹಣ್ಣಿನೊಂದಾಗಿ ಕೂಡಿ ತುಪ್ಪದೊಳು ಕಲಸಿ.... 
ಓದುತ್ತಿದ್ದಂತೆ ಕಜ್ಜಾಯದ ಪರಿಮಳ ಮುತ್ತಿಕೊಂಡು ಬಾಯಲ್ಲಿ ನೀರೂರುವಂತೆ ಮಾಡುತ್ತದೆ.
ಧಾರಾಳವಾದ ಹಾಲು, ಮೊಸರು, ತುಪ್ಪ, ಹಣ್ಣುಗಳಿಂದ ಕೂಡಿದ ಇವು ಬಡವರಿಗೆ ಕೈಗೆಟುಕದ ರಾಜಭೋಜ್ಯಗಳು ಎನ್ನುವುದನ್ನು ಲೇಖಕರು ಹೇಳಲು ಮರೆತಿಲ್ಲ. 'ಹೆಂಗಸರದೇನು ಅಡಿಗೆ? ಇಂದಿಗೂ ಹೆಸರಿಸುವುದು ನಳಭೀಮರೇ.....' ಎಂದು ಹೆಂಗಸರ ಅಡುಗೆಯನ್ನು ಸಸಾರ ಮಾಡುವ ಜನರಿಗೆ ಮಂಗರಸ 'ಗೌರಿ ಪಾರ್ವತಿ'ಯರನ್ನೂ ಹೆಸರಿಸಿದ್ದಾನೆ ಎಂದು ಹೇಳಿ ಬಾಯ್ಮುಚ್ಚಿಸಿದ್ದಾರೆ ಲೇಖಕರು.

ಅನ್ನ ಕಲಸಿ ಬಾಯ್ಗಿಡಲು ಪುರುಸೊತ್ತಿಲ್ಲದ ಈ ಸಂದರ್ಭದಲ್ಲಿ ಪ್ರಾಚೀನ ಪಾಕ ಸಂಸ್ಕೃತಿಯ ದೊಡ್ಡ ಗ್ರಂಥ ಪರಿಚಯಿಸಿ, ಪ್ರಚಲಿತ ಅಡುಗೆಗೆ ಪ್ರಾಚೀನತೆಯ ಟಚ್ ಕೊಡಲು ಲೇಖಕರು ಅವಕಾಶ ಮಾಡಿ ಕೊಟ್ಟಿದ್ದಾರೆ.
2) ಹಳೆಯ ಜನ ಸಂಸ್ಕೃತಿಯ ಪ್ರತಿನಿಧಿಯಂತೆ ಕೆಲಸ ಮಾಡಿದ ರಂಗೋಲಿ ಕಲೆ ಇಂದು ನೀಟಾಗಿ ಅಲಂಕಾರಗೊಂಡು ಪೇಂಟು ಅಥವಾ ರಂಗೋಲಿ ಜಾಲರಿಗಳಿಂದ ಕೆಳಗಿಳಿದು ಏನನ್ನು ಮಾತಾಡದೆ ಸಿಂಗಾರಗೊಂಡ ಮೌನಗೌರಿಯಾಗದೆ ಎಂದು ಹೇಳುವ ಲೇಖಕರು ನಿಜವಾಗಿಯೂ ನಮ್ಮನ್ನು ಮಾತಿಗೆ ಹಚ್ಚುವದು ಜನಪದ ರಂಗೋಲಿಯೇ ಎಂದು 'ರಂಗೋಲಿಗಳು ಮಾತನಾಡುತ್ತವೆ' ಲೇಖನದಲ್ಲಿ ಹೇಳಿದ್ದಾರೆ.

ಜನಪದ ರಾಮಾಯಣದ ರಾಮನ ರಕ್ಷಣೆಗೆ ಹೊರಟ ಲಕ್ಷ್ಮಣ ಸೀತೆಯ ರಕ್ಷಣೆಗಾಗಿ ಎಳೆವ ಏಳು ಗೆರೆಗಳನ್ನು ಹೆಸರಿಸುತ್ತ ಈ ಶೇಡಿಯ ರಂಗೋಲಿ ಅನಿಷ್ಟ ನಿವಾರಕಗಳಾಗಿದ್ದವೆಂದು ಹೇಳಿದ್ದಾರೆ.
ಬೂರೆ ಹಬ್ಬ (ದೀಪಾವಳಿ)ದಂದು ಬೋರಜ್ಜಿ ಬಲಿಯಂದರರ ಆರಾಧನಾ ಸ್ಥಳದಲ್ಲಿ ಬಿಡಿಸುವ ಹಲಿ, ಸಿಂಗಾರೆಳೆಯ ರಂಗೋಲಿ, ಅರಳಿ ಮರದ ಚಿತ್ರ, ಗೋವಿನ ಹಬ್ಬದಲ್ಲಿ ಬರೆಯುವ ಕೊಳಚಿನ ಚಿತ್ರ ಇವೆಲ್ಲವೂ ಜನಪದದ ಕೃಷಿ ಸಂಸ್ಕೃತಿ ಹಾಗೂ ಪಶುಪಾಲನಾ ಸಂಸ್ಕೃತಿಯ ಕುರುಹುಗಳಾಗಿವೆ ಎನ್ನುತ್ತಾ ಸಸ್ಯಕೊಟಿಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಭೂದೇವಿಯಂತೆ ಔಷಧೀಯ ಸಸ್ಯಗಳಾದ ನಾರು ಬೇರುಗಳಿಂದ ತುಂಬಿದ ಕರಗೇ (ಬೂರಜ್ಜಿ)ಯ ಪೂಜೆ ಮಾತೃಮೂಲೀಯ ಸಂಸ್ಕೃತಿಯ ಆರಾಧನೆ ಎಂದ ಲೇಖಕರು ಈ ಲೇಖನದ ಮೂಲಕ ಅಧ್ಯಯನ ಶೀಲರಿಗೆ ಆಮಂತ್ರಣ ನೀಡಿದ್ದಾರೆ.

3) ಇಂದಿಗೂ ಮಹಾ ವೈಭವಪೂರ್ಣವಾಗಿ ನಡೆಯುವ ಗಣೇಶ ಚತುಥರ್ಿ ಅಂದಿನ ಚವತಿಯಾಗಿದ್ದು, ಗಣೇಶ ಜಾನಪದದ ಆರಾಧ್ಯ ದೈವವಾಗಿದ್ದಾನೆ. ದೈತ್ಯ ಪ್ರಾಣಿಯಾದ ಆನೆಯಲ್ಲಿ ಕೃಷಿಯನ್ನು ನಾಶಮಾಡಬಾರದೆಂಬ ಪೂರ್ವಜರ ಕೋರಿಕೆಯೇ ಬೆನುಮಣ್ಣನ ಪೂಜೆಯಾಗಿದ್ದು ಪುರಾಣ ಸೇರಿದ ಬಳಿಕ ಕೃಷಿಕರ ಆರಾಧನಾ ದೇವರ ಸ್ಥಾನ ದ್ವಿತೀಯ ದಜರ್ೆಗಿಳಿದು, ಆರಾಧನಾ ಪ್ರಾಣಿಗಳು ಪುರಾಣದೇವರ ವಾಹನಗಳಾಗಿದ್ದು ಗಣೇಶನಿಗೆ ಇಲಿ ವಾಹನವಾದುದು ಕುತೂಹಲಕಾರಿಯಾಗಿದೆ. ಮಣ್ಣಿನ ಹೆಜ್ಜೆಯಾಗಿ ಹಾದಿ ಬೀದಿ ಗಣಪನಾಗಿದ್ದವನು ಈಗ ಮನೆ ಮಠವನ್ನು ಪ್ರವೇಶಿಸಿ ಮತೀಯ ಸಂಘರ್ಷಕ್ಕೂ ಕಾರಣನಾಗಿರುವುದು ಆಧುನಿಕ ಆರಾಧನೆಯ ಉಪನ್ಯಾಸವೇ ಆಗಿದೆ.

ಗಣೇಶನಿಗೆ ಅಪರ್ಿಸುವ ದಭರ್ೆ, ಕಟ್ಟುವ ಫಲಾವಳಿ ಎಲ್ಲವೂ ಪ್ರಕೃತಿಯ ಆರಾಧನೆಯಾಗಿದ್ದು, ಅಂದು ಮಾಡುವ ಪಂಚಕಜ್ಜಾಯ, ಮೋದಕ, ಸುಟ್ಟೇವು, ಸುಖಿನುಂಡೆ, ಕಡಬು, ಎಳ್ಚಿಗಳಿ, ಉಂಡೆ, ವಡೆ, ಅತ್ರಾಸ, ಚಕ್ಕಲಿ, ಸೀವ್ರಿ, ಪತ್ರೊಡೆ, ಉಂಡ್ಲೆಕಾಳು, ಪನ್ನೀರ ಕಾಳು ಮುಂತಾದ ಇಪ್ಪತ್ತೊಂದು ಬಗೆಯ ನೈವೇದ್ಯಗಳೆಲ್ಲ ಶುದ್ಧ ಜಾನಪದೀಯ ಕಜ್ಜಾಯಗಳೇ ಆಗಿವೆ.

ಈ ಎಲ್ಲಾ ಸಂಭ್ರಮಾಚರಣೆಯ ಜೊತೆಗೆ ವೈಧ್ಯವ್ಯಾಚರಣೆಯ ಕಡೆಗೂ ಗಮನ ಸೆಳೆದಿದ್ದಾರೆ ಲೇಖಕರು. ಚವತಿಯ ದಿನ ಹಸಿದಿರಬಾರದು ಎಂದು ಒತ್ತಾಯಪೂರ್ವಕವಾಗಿ ಬಾಳೆ ತುಂಬ ಬಡಿಸುವ, ತಿಂದು ತೇಗುವ ಜನಕ್ಕೆ ಹವ್ಯಕ ವಿಧವೆಯರಿಗೆ ಉಪವಾಸ ವ್ರತವನ್ನು ವಿಧಿಸುವ ಮನಸ್ಸಾದರೂ ಹೇಗೆ ಬಂತು? ಚರಿತ್ರೆಯುದ್ದಕ್ಕೂ ಹೆಣ್ಣಿನ ಹಸಿವು ಯಾರನ್ನೂ ಕಾಡಲಿಲ್ಲ ಎನ್ನುವುದು ಸ್ತ್ರೀಸಂವೇದನೆ ಉಳ್ಳ ಎಲ್ಲರನ್ನೂ ಕಾಡುವ ಅಂಶವಾಗಿದೆ.
ಒಟ್ಟಿನಲ್ಲಿ ಪರಿಸರ ಸ್ನೇಹ ಆಚರಣೆಗೆ ಮಣ್ಣಿನ ಗಣಪತಿ ಆರಾಧಕರಿಗೆ ಲೇಖಕಿ ಕರೆ ನೀಡಿದ್ದಾರೆ. 

4) ಆಟವೆಂದರೆ ಹೆಣ್ಣು ಗಂಡೆನ್ನದೆ ಎಲ್ಲರಿಗೂ ಪ್ರಿಯವಾದ ಕ್ರಿಯೆ. ಕುಂಟಾಟ, ಗಜ್ಜುಗದಾಟ, ಜಿಬ್ಲಿ, ಚೆನ್ನೆಮಣೆ, ಚೌಕಾಬಾರಾ, ಪಗಡೆ, ಹುತುತು, ಹಾಣೆ, ಸೋಡಿ ಆಟಗಳೆಲ್ಲ ಪ್ರಾರಂಭದಲ್ಲಿ ಲಿಂಗಭೇದವಿಲ್ಲದೆ ಆಡುವ ಆಟವಾದರೂ ಬೆಳೆಯುತ್ತ ಹೆಣ್ಣಿಗೆ ವಿಧಿಸುವ ಸಾಮಾಜಿಕ ಕಟ್ಟುಪಾಡುಗಳಿಂದ ಲಿಂಗ ಪ್ರತ್ಯೇಕತೆಯನ್ನು ಕಲ್ಪಿಸಿವೆ. ಹೆಣ್ಣು ಕೂಸು ಸಹಜವಾಗಿ ಅಮ್ಮನ ಅಡುಗೆ ಆಟ, ಮಕ್ಕಳ ಆಟ ಆಡುತ್ತದೆಯಾದರೂ ಸಹಜವಾಗಿ ಸ್ತ್ರಿಯರು ಶಿಕ್ಷಕರು, ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡಾಗ ಆ ಆಟವನ್ನೇ ಆಕೆ ಆಡುತ್ತಾಳೆ. ಹೆಣ್ಣು ಮಕ್ಕಳ ಮೃದುವಾದ ಸೂಕ್ಷ್ಮ ಆಟವನ್ನು ಗಂಡು ಮಕ್ಕಳು ಕಠಿಣವಾದ ಬಲಪ್ರದರ್ಶನದ ಆಟಗಳನ್ನು ಆರಿಸಿಕೊಳ್ಳುತ್ತಾರೆಂಬ ಶರೀರವಾದಿಗಳ ವಾದವನ್ನು ಅಲ್ಲಗಳೆಯುತ್ತ ಎಲ್ಲ ಜನಪದೀಯ ಆಟಗಳೂ ಬಯಲಿಗೆ ಬಂದು ಲಿಂಗ ಭೇದವಿಲ್ಲದೆ ಆಡುವಂತಾಗಬೇಕು. ಕ್ರಿಕೆಟ್ನಂತಹ ಸಮಯ ವ್ಯರ್ಥದ ಆಟಕ್ಕಿಂತ ಅತ್ಯಲ್ಪ ವೇಳೆಯಲ್ಲಿ ಸಾಕಷ್ಟು ವ್ಯಾಯಾಮ ನೀಡುವ ಜಾನಪದ ಆಟಗಳನ್ನು ಉಳಿಸಿಕೊಳ್ಳುವ ಆಶಯವನ್ನು 'ಮಹಿಳೆಯರ ಜನಪದ ಕ್ರೀಡೆಗಳು' ಲೇಖನದಲ್ಲಿ ಲೇಖಕರು ವ್ಯಕ್ತಪಡಿಸಿದ್ದಾರೆ.
5) ಕಪ್ಪೆ ಅರೆಭಟ್ಟನ ಶಾಸನದಲ್ಲಿ ಬರುವ ತಾಯಿ ಮಗುವಿಗೆ ಹಾಲನ್ನೂಡುವಾಗ ಕಿವಿಯಲ್ಲಿ 'ಕೆರೆಯಂಕಟ್ಟಿಸು ಬಾವಿಯಂ ಸವೆಸು........                        ಎನ್ನುವ ಮಾತು ನಮ್ಮ ಪೂವರ್ಿಕರ ಜಲ ಪ್ರೀತಿಯನ್ನು ತಿಳಿಸುವಂತೆ ಶಾಂತಿ ನಾಯಕರ 'ಜಲ ಸಂಸ್ಕೃತಿ ಮತ್ತು ನಂಬಿಕೆ' ಲೇಖನ ಜಲಸಂಸ್ಕೃತಿಗೂ, ಜನ ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ಮಳೆಯ ನಕ್ಷತ್ರದ ಕುರಿತಾದ ವಿವಿಧ ಪ್ರದೇಶದಲ್ಲಿರುವ ನಂಬಿಕೆ, ಮಾತು, ಮಳೆಯ ಮುನ್ಸೂಚನೆ ನೀಡುವ ಸಂಗತಿಗಳು, ಜಲ ಮೂಲದ ಆರಾಧನೆ ಎಲ್ಲವನ್ನು ಶಿವಗಂಗೆಯ ಕಲೆಯ ಮೂಲಕ ಕತೆಯಂತೆ ಹೇಳಿದ್ದಾರೆ. 'ಹುಬ್ಬೆ ಹೊಯ್ದರೆ ಅಬ್ಬೆ ಹಾಲು', 'ಚಿತ್ತ ಚಿತ್ತ ತಿರುಗಿದತ್ತ ಬೀಳುತ್ತದೆ', 'ಮಘಾ ಮಳೆಯಲ್ಲಿ ಮೊಗೆಯಲ್ಲಿ ನೀರು ಕುಡಿಯಬೇಕು', 'ವಿಶಾಖಾ ಮಳೆ ವಿಷದ ಮಳೆ' ಅನುರಾಧಾ ಮಳೆ 'ಅನುರಾಜ'ನೆಂಬ ಗೌರವಕ್ಕೆ ಪಾತ್ರವಾದ ರೀತಿ ಕುತೂಹಲ ಕೆರಳಿಸುತ್ತದೆ.
ಅಜ್ಜಿ ಗಿಡಗಳಿಗೆ ನೀರನ್ನು ಹನಿಸುತ್ತಾಳೆ (ಮಳೆ), ಅಜ್ಜ ಕವಳ ಜಪ್ಪುತ್ತಾನೆ (ಗುಡುಗು) ಮೊಮ್ಮಗ ದೀಪ ಹಚ್ಚುತ್ತಾನೆ (ಮಿಂಚು) ಎಂಬ ಮಳೆಯ ವರ್ಣನೆ ಖುಷಿ ನೀಡುತ್ತದೆ.

'ಹರಿಯುವ ನದಿಗೆ ಶಾಸ್ತ್ರವಿಲ್ಲ'ವೆಂಬ ನಂಬಿಕೆಯಿದ್ದ ನಾಡಿನಲ್ಲಿ ನದಿಗಳು ಗಟಾರವಾದುದರ ಕುರಿತು ಖೇದ ವ್ಯಕ್ತ ಪಡಿಸುವ ಲೇಖಕಿ ಕೆರೆ, ಬಾವಿ, ತೀರ್ಥ, ಕಲ್ಯಾಣಿಗಳೆಲ್ಲ ನಾಶವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಮಘಾ ಮಳೆಯ ಮೊಗೆ ನೀರ ಕುಡಿತ ಕಣ್ಮರೆಯಾದುದಕ್ಕೆ ಖೇದ ವ್ಯಕ್ತಪಡಿಸುವ ಇವರು ತೀರ್ಥ ಸ್ನಾನದ ಹೆಸರಿನಲ್ಲಿ ಕಲುಷಿತ ನೀರ ಸ್ನಾನದ ನಿಷೇಧದ ಅಗತ್ಯವನ್ನು ಸಾರಿ ಹೇಳಿದ್ದಾರೆ. ಜಲಮೂಲ ಕಾಪಾಡಲು ಮಳೆಯ ನೀರನ್ನು ಸಂಗ್ರಹಿಸಲು ತಿಳಿಸುವ ಅವರ ಕೋರಿಕೆ ಅನುಕರಣೀಯವಾಗಿದೆ. ಇಲ್ಲಿಯೂ ಅವರು ಭಾಗೀರಥಿಯ ಬಲಿ ಕತೆಯನ್ನೂ ಹೇಳದೆ ಬಿಟ್ಟಿಲ್ಲ.

6) 'ತಾರ್ಕಣೆ'ಯ ತಾರ್ಕಣೆ ತಾಬನದಲ್ಲಿ ವಿ.ಗ ನಾಯಕರ ವಿಮಶರ್ಾ ಗ್ರಂಥದ ಕುರಿತು ಮಾತನಾಡಿದ್ದಾರೆ. ಜನಪದ ಸಾಹಿತ್ಯದಲ್ಲಿ ಜನಪರ ಕಾಳಜಿಗಳನ್ನು 'ರಾಜನ ಸಂತರ್ಪಣೆ' ಕತೆಯಲ್ಲಿ ಬರುವ ಚಮಗಾರನೊಂದಿಗೆ ರಾಜ ಕುಳಿತು ಊಟಮಾಡುವ, ಬಡಬ್ರಾಹ್ಮಣ ಬಾಳೆ ಎತ್ತುವ ಕಲ್ಪನೆಯ ಕತೆಗಳ ಮೂಲಕ' ದಲಿತರು ತೃಪ್ತಿ ಹೊಂದುವ ಆದರೆ ಇದು ಸಾಧ್ಯವಾಗಬೇಕಾದ ಜನಪದರ ಆಶಯವು ವಿ. ಗ. ನಾಯಕರ ಆಶಯವಾದುದನ್ನೂ ಯಾರ್ಹೆಚ್ಚು ಒಂದು ವಿಶ್ಲೇಷಣೆ' 'ಜಾನಪದದಲ್ಲಿ ಮದುವೆ' ಲೇಖನದಲ್ಲಿ ವಿ. ಗ. ನಾಯಕರು ಒಬ್ಬ ಮಹಿಳಾವಾದಿ ಚಿಂತಕರಾಗಿ ನಿಂತಿದ್ದನ್ನು ಶಾಂತಿ ನಾಯಕರು ಮೆಚ್ಚುತ್ತ ಪುರಷ ಪ್ರಧಾನ ವ್ಯವಸ್ಥೆಯ ವಿರುದ್ಧ ಪುರುಷನೇ ಪ್ರಶ್ನೆ ಎತ್ತುವುದು ಹೆಚ್ಚು ಸೂಕ್ತ ಮತ್ತು ಪರಿಣಾಮಕಾರಿ ಎಂಬ ಅಭಿಪ್ರಯವನ್ನು ವ್ಯಕ್ತ ಪಡಿಸಿದ್ದಾರೆ.

ಹೀಗೆ 'ಜಾನಪದ ಲೇಖನ ಕುಂಜ' ಜನಪದದ ಬದುಕನ್ನು ತೆರೆದಿಡುತ್ತ ಹೆಚ್ಚಿನ ಸಂಶೋಧನೆಗೆ ನಮ್ಮನ್ನು ಆಹ್ವಾನಿಸುತ್ತದೆ. ಈ ಎಲ್ಲ ಲೇಖನಗಳನ್ನು, ವಸ್ತು ವೈವಿಧ್ಯ, ವಿಷಯ ಸಂಗ್ರಹವನ್ನು ಓದಿದಾಗ ಲೇಖಕರಾದ ಶಾಂತಿ ನಾಯಕರಿಗೆ ಜಾನಪದ ಅಧ್ಯಯನ ಕೇವಲ ಒಂದು ಪ್ಯಾಶನ್ ಆಗದೆ ಅಂತರಂಗದ ತುಡಿತವೇ ಆಗಿರುವುದು ಪ್ರಿಯವೆನಿಸುತ್ತದೆ. ಅವರ ತುಡಿತ ನಮ್ಮ ಮಿಡಿತವೂ ಆಗಲೆಂಬುದೇ ಇಲ್ಲಿಯ ಆಶಯ.

                                                                                                                   ಮಾಧವಿ ಭಂಡಾರಿ ಕೆರೆಕೋಣ
                                                                                                                                07.04.2010

2. ನಾವು ಮಾತಾಡತೊಡಗಿದರೆ -R V Bhandari

2. ನಾವು ಮಾತಾಡತೊಡಗಿದರೆ


ನಾವು ಮಾತಾಡತೊಡಗಿದರೆ
ಮ್ಯಾಗ್ನಾಟಿಕ್
ಸಿಡಿಯುವ ಹಾಗೆ ಆಸ್ಪೋಟಿಸುತ್ತದೆ ವರ್ತಮಾನ.
ಕಟ್ಟಿರುವೆಗಳ ಮಧ್ಯ ಸಿಕ್ಕ
ನಂಜುಳ್ಳೆಯ ಹಾಗೆ
ಮಿಡುಕಾಡುತ್ತಾನೆ ಬೇಟೆಗಾರ

ಯಾಕೆಂದರೆ:
ದೀರ್ಘಕಾಲೀನ ಸಂಭಾವಿತ ಸಂಸ್ಕೃತಿಯ
ಯಜ್ಞ ಸತ್ರದ ಪೂಣರ್ಾಹುತಿಗೆ
ಬಲಿಪಶುಗಳಾದವರು ನಾವು

ಯಾಕೆಂದರೆ:
ಬಂಡುವಾಳಶಾಹಿಗಳ ಬಂಗಲೆಗಳ
ನೆಲಗಟ್ಟಿನ ಕಲ್ಲಾಗಿ
ಉಸಿರು ಸತ್ತವರು ನಾವು.

ಯಾಕೆಂದರೆ:
ಹಿತಾಸಕ್ತ ನೇಮ-ನೀತಿಗಳ
ಕಾಯ್ದೆ ಕಾನೂನುಗಳ
ಬಲೆಯಲ್ಲಿ ಸಿಕ್ಕ ಪಾರಿವಾಳಗಳು ನಾವು.

ನಾವು ಮಾತಾಡತೊಡಗಿದರೆ
ಮೈ ಮೆಲೆ ದೆವ್ವ ಬಂದವರ ಹಾಗೆ
ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡ ಹಾಗೆ
ಬಯಲಾಟದ ಕೋಡಂಗಿಗಳ ಹಾಗೆ
ಕುಣಿದು ಕುಪ್ಪಳಿಸುತ್ತಾರೆ.


ನಾವು ಮಾತಾಡತೊಡಗಿದರೆ
ಗೋಮುಖ ವ್ಯಾಘ್ರಗಳೆಲ್ಲ
ಬಟಾಂಬಯಲಾಗಿ ಘಜರ್ಿಸತೊಡಗುತ್ತವೆ.

ಯಾಕೆಂದರೆ:
ನಾವು ಕಾಲಡಿ ಮಣ್ಣಾಗಿ ಬಿದ್ದವರು;
ಕಲ್ಲಾಗಿ ಚುಚ್ಚತೊಡಗಿದ್ದೇವೆ.

ನಾವು ಮಾತಾಡತೊಡಗಿದರೆ
ಹಳೆ-ಹರಕು ಸಿಂಹಾಸನಗಳೆಲ್ಲ
ಫಿನೈಲ್ ಸಿಂಪಡಿತ ಹುಳು
ಹಿಂಡಾಗಿ ಉದುರುವ ಹಾಗೆ
ಪಟ ಪಟ ಉದುರುತ್ತಾರೆ.

ನಾವು ಬಿತ್ತಿದ ಹೊಲದ ಕದರು ದೋಚುವ
ದಣಿಗಳ ವಕೀಲರುಗಳೆಲ್ಲ
ಕುದಿಯೆಣ್ಣೆ ಮೈಮೇಲೆ ಬಿದ್ದವರ ಹಾಗೆ
ಪ್ಯಾಂಟು ಕಳಚಿ ಕುಣಿಯ ತೊಡುತ್ತಾರೆ.

ನಾವು ಮಾತಾಡತೊಡಗಿದರೆ
ಗುಳ್ಳೆನರಿಗಳೆಲ್ಲ ಅಡವಿ ಸೇರುತ್ತವೆ
ಮತ್ತು ನಾವು
ಹೊಸಕಾಲದ ಹರಿಕಾರರಾಗುತ್ತೇವೆ.


24-10-1982


ನನ್ನ ಕವಿತೆ R. V Bhandari


1. ನನ್ನ ಕವಿತೆ


ನನಗೆ ಮಾತಾಡ ಬೇಕಿದೆ
ನನ್ನ ಜನಗಳ ಬಗ್ಗೆ
ತಮ್ಮ ಕಣ್ಣೀರಿಗೆ ಕಾರಣ ಹೇಳಲಾರದ
ಭೀತರ ಬಗ್ಗೆ
ಸುಗ್ಗಿ ಕುಣಿತಕ್ಕೆ ಕೆಂಪು ತುರಾಯ ಕಟ್ಟಿ
ಕುಣಿದು ಕುಪ್ಪಳಿಸಿ
ರಾಪು ತೋರಿದ ಚಣಕಾಲದ ಸುಖದ ಬಗ್ಗೂ
ದಾರಿಯುದ್ದಕ್ಕೂ ತಲೆ ತಗ್ಗಿಸಿಯೇ
ಗೇಟು ದಾಟಿ ಹೋದ
ನನ್ನ ದಲಿತ ಬಂಧುಗಳ ಬಗ್ಗೆ.

ನೀನು ಕವಿಯಲ್ಲ
ಮಾತುರಸಾತ್ಮಕವಲ್ಲ
ಸಂಕೀರ್ಣ, ಸಮಗ್ರತೆಯಿಲ್ಲ
ಎಂದೆನ್ನಬಹುದು ಪ್ರಭುಗಳೇ
ದೇವರಾಣೆ ನನಗೆ ಸೌಡಿಯಿಲ್ಲ
ನಿಮ್ಮ ಪಠಣದ ಕೊಠಡಿಯಲ್ಲಿ
ಗಾಳಿ ಪಂಖದ ಎದುರು ಕುಳಿತು
`ಸ್ವಾಂತ ಸುಖಾಯಕ್ಕೆ ಸೌಡಿಯಿಲ್ಲ.

ನೋಡಿ ಹೊನ್ನ ಕುಳಿತಿದ್ದಾನೆ
ದಿನವಿಡೀ ದುಡಿದುಡಿದು
ಜೀವವಕೆ ದಣಿದಣಿದು
ಕೊನೆಗೊಮ್ಮೆ ಕರೆಂಟಿಗೆ ಕೈ ಒಡ್ಡಿ
ಸತ್ತವನು
ಚಳಿ ಮಳೆಯ ಲೆಕ್ಕಿಸದೆ
ಒಡೆಯರ ಅಡಿಕೆ ಕೊಳೆ
ತೊಳೆಯುತ್ತಲೇ ಸತ್ತ ಪುಟ್ಟಣ್ಣ.
ಮದುವೆ ಸಂಭ್ರಮದಲ್ಲಿ ಸುದ್ದಿಯಾಗದೇ
ಉಂಡಿಟ್ಟ ತಪ್ಪಲೆ ಚರಗಿ ತಿಕ್ಕಲು ಹೋಗಿ
ಕಾಲ್ಜಾರಿ ಕೆರೆಗೆ ಹಾರ ಚೊಬ್ಬಕ್ಕ.
ನಮ್ಮ ವಿದ್ಯಾಲಯದ ಮೊದಲ ಕಟ್ಟಡ ಕಟ್ಟಿ
ಜನತಾ ಮನೆಯಲ್ಲಿ ಬಿದ್ದಿರುವದು ಮಗ್ಯಾ.
ಕಂಡಿರಾ ಕಳೆಸತ್ತ ಕಣ್ಣುಗಳ
ಸುಕ್ಕೆಟ್ಟ ದೇಹಗಳ
ಬೆಂದುರಿದ ಆತ್ಮಗಳೆ?

ಯಾರ ಕಡಿಯಲು ಕೊಡಲಿ ಎತ್ತಿದವರು
ಮರಕಡಿದು ಮನೆ ಕಟ್ಟಿದರು,
ಅವರು ವಾಸಿಸಲಿಲ್ಲ.
ಹೊಲ ಉತ್ತಿ ಬೆಳೆ ಎತ್ತಿದರು,
ಅದರ ಫಲ ಉಣ್ಣಲಿಲ್ಲ.
ಅಡ್ಡ ಪಲ್ಲಕ್ಕಿಗೆ ಹೆಗಲು ಕೊಟ್ಟರು
ಧರ್ಮದ ಬಗ್ಗೆ ವ್ಯಾಖ್ಯಾನ ಬರೆಯಲಿಲ್ಲ.

ಅವರ ಎದೆಯಲ್ಲಿ ಸಿಟ್ಟಿತ್ತು
ಆದರೆ ಕೆಂಡ ಕಾರಲಿಲ್ಲ.
ಅವರ ಎದೆಯಲ್ಲಿ ಕವಿತೆ ಇತ್ತು
ಗಂಟಲಿನ ಹೊರ ಬರಲಿಲ್ಲ.

ಅವರು ನಡೆದ ನೆಲ ಪಿಸುಗುಡುತ್ತಿದೆ
ಕತ್ತಲಿನ ಲೋಕಕ್ಕೆ ದನಿ ಕೊಡುತ್ತಲಿದೆ
ಆದ್ದರಿಂದ ಕವಿತೆಗಳ ಬಗ್ಗೆ ನನ್ನಲ್ಲಿ ಮಾತುಗಳಿಲ್ಲ
ಯಾಕೆಂದರೆ ಅವರೇ ಮಾತಾಡುತ್ತಾರೆ
ಅವರ ಶತ್ರುಗಳ ಬಗ್ಗೆ
ಮತ್ತು ಕೆಟ್ಟ ವೆವಸ್ತೆಯ ಬಗ್ಗೆ.


31-1-1982

ನಮಗಿರುವುದು ಅವಧಾನಿಯವರ 'ನಮು-ನಮೂನೆ'ಯ ನೆನಪುಗಳು ಮಾತ್ರ. - ಮಾಧವಿ ಭಂಡಾರಿ, ಕೆರೆಕೋಣ


 ನಮಗಿರುವುದು ಅವಧಾನಿಯವರ 'ನಮು-ನಮೂನೆ'ಯ ನೆನಪುಗಳು ಮಾತ್ರ. 

ಹೊತ್ತು ಮುಳುಗುವ ಮುನ್ನ ಹೊತ್ತು ನಡೆಯುವ ಬನ್ನಿ
ಜಿಗಿದು ಅಡಿಗೆ ದೇವರ ಕೋಣೆಯ ತುಳಿದು
ಉಪ್ಪರಿಗೆಯನ್ನೇರಿ ಅಗಳಿ ಮುರಿದು
ಕುದಿವ ಸಹಸ್ರ ಕಿರಣಗಳ
ಎಸಳು ಎಸಳಿಗೆ ಉಜ್ಜಿ ಪ್ರೀತಿ ಮುಕ್ಕುವುದಕ್ಕೆ
ಹೆಪ್ಪು ಕರಗಲೇ ಬೇಕು, ದ್ರವಿಸಿ ಪಾರಜವಾಗಿ
ಜುಟ್ಟ-ಜನಿವಾರಗಳ, ಗೋಸುಂಬೆ ಬಾಯಿಗಳ
ಕಚ ಕಚ ಕೊಚ್ಚಿ ಬೇಲಿ ಬಿಚ್ಚುವುದಕ್ಕೆ
ಮತ್ತೆ ಮತ್ತೆ ಕಾಯುವುದಿಲ್ಲ...

ಎಂದು ಭಾರತ ದೇಶದಲ್ಲಿ ಇರುವ ಜಾತಿ ವ್ಯವಸ್ಥೆಯನ್ನು ಕಂಡು ಮೈ ಉರಿದವರು ಕವಿ ಜಿ.ಎಸ್.ಅವಧಾನಿಯವರು. ಇದು ಅವರ 'ಗಂಗೋತ್ರಿಯ ಹಕ್ಕಿಗಳು' ಕವನ ಸಂಕಲನದ 'ಕಾಯುವುದಿಲ್ಲ' ಕವಿತೆಯ ಸಾಲುಗಳು. ಜಾತಿಯ ಹೆಸರಿನಲ್ಲಿ ಅಮಾನವೀಯವಾಗಿ ವತರ್ಿಸುವ, ಮನುಷ್ಯ ಮನುಷ್ಯರ ನಡುವೆ ಗೊಡೆ ಕಟ್ಟುವ ಗೋಸುಂಬೆಗಳ ಕಂಡರಾಗದ  ಕಟು ವಿಮರ್ಶಕರಿವರು. ಈ ಜಾತಿಯ ಕಟ್ಟಳೆಗಳನ್ನು ಕೊಚ್ಚಿ ಬೇಲಿ ಬಿಚ್ಚುವುದಕ್ಕೆ ಹೊರಟ ಇವರು ಮನುಷ್ಯ ಮನುಷ್ಯರನ್ನು ಬೆಸೆಯುವ ಮಾನವೀಯ ಭಾವದ ಕವಿ ಅವಧಾನಿಯವರಾಗಿದ್ದಾರೆ.

  ಜಿ.ಎಸ್.ಅವಧಾನಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಡಗೇರಿಯಲ್ಲಿ 11ನೇ ಅಗಸ್ಟ 1948 ರಂದು ಶಿವರಾಮ ಹಾಗೂ ಸಾವಿತ್ರಿ ದಂಪತಿಗಳ ಮಗನಾಗಿ ಹುಟ್ಟಿದರು. ಗಣಪತಿ ಶಿವರಾಮ ಅವಧಾನಿ ಎನ್ನುವುದು ಅವರ ಪೂರ್ಣ ಹೆಸರು. ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅದೇ ತಾಲೂಕಿನ ಸ.ಹಿ.ಪ್ರಾ.ಶಾಲೆ ಹೆಬ್ಬಾರ್ನಕೆರೆಯಲ್ಲಿ ಪೂರೈಸಿ ಮುಂದೆ ಕೊಲ್ಲಾಪುರ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ(ಕನ್ನಡ)ಯನ್ನು ಪಡೆದರು. 

ಅವರ ವೃತ್ತಿ ಜೀವನ ಕುಮಟಾ ತಾಲೂಕಿನ ಕತಗಾಲದ ಜನತಾ ವಿದ್ಯಾಲಯ ಪ್ರೌಢ ಶಾಲೆಯ ಮೂಲಕ ಪ್ರಾರಂಭವಾಯಿತು. ಅಲ್ಲಿ 1969 ರಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ ಅವರು ಮುಂದೆ 1972 ರಲ್ಲಿ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿಯೂ, 1973 ರಲ್ಲಿ ಧರ್ಮಸ್ಥಳದ ನೆಲ್ಯಾಡಿ ಶಾಲೆಯಲ್ಲಿಯೂ ಸೇವೆ ಸಲ್ಲಿಸಿ, 1974 ರಲ್ಲಿ ತಾವು ಕಾಲೇಜು ವ್ಯಾಸಾಂಗ ಮಾಡಿದ ಎಸ್.ಡಿ.ಎಮ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಮುಂದುವರಿಸಿದರು. 

1971 ರಲ್ಲಿ ಕವಿ ಮೆಚ್ಚಿ ಕೈ ಹಿಡಿದ ಕನ್ನೆ ಅನಸೂಯ. ಹೆಸರಿಗೆ ತಕ್ಕಂತೆ ಅಸೂಯೆ ಇಲ್ಲದವರೇ. ಅವಧಾನಿಯವರ ಶಿಷ್ಯಂದಿರನೇಕರಿಗೆ ಕೈಅಡಿಗೆ ಉಣ್ಣಿಸಿದ ಇವರದು ಅವಧಾನಿಯವರ ಶಿಷ್ಯಪ್ರಿಯತೆಯಲ್ಲಿ ಬಹುದೊಡ್ಡ ಪಾತ್ರ. ಮಗಳು ಸಂಗೀತಾ ತಂದೆಯಂತೆ ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದರೆ, ಮಗ ಸಂತೋಷ ಎಂಜಿನೀಯರ್. ಅವರೇ ಪ್ರೀತಿಯಿಂದ ಹೆಸರಿಸಿದ 'ಇಳಾ' ಮುದ್ದಿನ ಮೊಮ್ಮಗಳು. ಕಥೆ ಹಾಗೂ ಕಾವ್ಯ ಕ್ಷೇತ್ರಗಳಲ್ಲಿ ಕೃಷಿ ಗೈಯುತ್ತಿರುವ ಉಪನ್ಯಾಸಕರಾದ ರಾಜು ಹೆಗಡೆ ಅವರ ಅಳಿಯ. ಈಗ ಎಲ್ಲರು ಅವರ ನೆನಪಿನಲ್ಲಿ.

ಜಿ.ಎಸ್.ಅವಧಾನಿಯವರು ಶಿಕ್ಷಕರೆಂದರೆ ಬರೀ ಶಿಕ್ಷಕರಲ್ಲ. ಶಿಕ್ಷಕ ವೃತ್ತಿಗೆ ಹೊಸ ವ್ಯಾಖ್ಯಾನವನ್ನು ಕೊಟ್ಟವರು. ಈಗಲೂ ಉಪನ್ಯಾಸ-ಉಪನ್ಯಾಸಕರೆಂದರೆ ನಮ್ಮಂಥ ಶಿಷ್ಯಂದಿರಿಗೆ ನೆನಪಾಗುವದು ಅವಧಾನಿಯವರೆ. ಅವರು ಉಪನ್ಯಾಸಕ್ಕೆ ನಿಂತರೆ ಹೊತ್ತು ಹೋದುದರ ಪರಿವೇ ಮಕ್ಕಳಿಗಿರುತ್ತಿರಲ್ಲಿಲ್ಲ. ಮಕ್ಕಳನ್ನು ತಲ್ಲೀನರಾಗಿಸುವ, ಕೇಳಿದಂತೆಲ್ಲಾ ಮತ್ತೆ ಕೇಳ ಬಯಸುವ ಅಧ್ಯಾಪನ ಶೈಲಿ ಅವರದು. ಅದಕ್ಕಾಗೆ ಮಕ್ಕಳಾರು ಅವರ ತರಗತಿಗೆ ಚಕ್ಕರ್ ಹೊಡೆಯುತ್ತಿರಲಿಲ್ಲ. ಅವರೆ ಬಂದಿಲ್ಲವೆಂದರೆ 'ಕಾಲೇಜಿಗೆ ಬರುವುದಕ್ಕೆ ಕೊಟ್ಟ ಬಸ್ಚಾರ್ಜ ಎಲ್ಲಾ ವೇಸ್ಟ್' ಎಂದು ಗೊಣಗುವಷ್ಟರ ಮಟ್ಟಿಗೆ ಮಕ್ಕಳನ್ನು ಮೋಹಿಸಿದ ಅಧ್ಯಾಪಕರಿವರು.

ಅವರು ಕಲಿಸುವದೆಂದರೆ ಗದ್ಯಕ್ಕೆ ಭಾವ ಉಕ್ಕಿದಂತೆ, ಕವಿತೆ ಸಾಕ್ಷಾತ್ಕರಿಸಿದಂತೆ, ನಾಟಕಕ್ಕೆ ಜೀವ ಬಂದಂತೆ. ಹೀಗಾಗಿ ಮಕ್ಕಳಿಗೆಲ್ಲ ಅವರು ಪದ್ಯದ ಹುಚ್ಚು ಹಿಡಿಸಿದರು, ನಟನೆಯ ಗೀಳು ಹಚ್ಚಿದರು, ಸುತ್ತ ಬಂದವರಿಗೆಲ್ಲ ಸಾಹಿತ್ಯದ ನೆಚ್ಚ ಬಿತ್ತಿದರು. ಇಂದು ಅವರಿಂದ ಸ್ಪೂತರ್ಿ ಪಡೆದ ಅವರ ಅನೇಕ ಶಿಷ್ಯಂದಿರು ಕವಿ-ಸಾಹಿತಿಗಳಾಗಿ, ನಟ-ನಿದರ್ೇಶಕರಾಗಿ ತಮ್ಮ ಗುರುವಿನ ನೆನಪಿನೊಂದಿಗೆ ನಾಡಿನಾದ್ಯಂತ ನಾಮಾಂಕಿತರಾಗಿದ್ದಾರೆ. 

ಅವರ ಅಧ್ಯಾಪನ ಕೇವಲ ಪಠ್ಯಕ್ಕಷ್ಟೇ ಸೀಮಿತವಾಗಿರುತ್ತಿರಲಿಲ್ಲ. ಆ ಪಠ್ಯದ ಮೂಲಕವಾಗಿ ಇಡೀ ಸಾಮಾಜಿಕ ವ್ಯವಸ್ಥೆಯನ್ನೇ ಕೈಗೆತ್ತಿಕೊಳ್ಳುತ್ತಿದ್ದರು. ಮೇಲು-ಕೀಳು, ಬಡವ-ಬಲ್ಲಿದ, ಗಂಡು-ಹೆಣ್ಣು ಎನ್ನುವ ಅಸಮಾನತೆಯಿಂದ ಕೂಡಿದ ಸಮಾಜ ಜೀವನ ಅವರನ್ನು ಕೆರಳಿಸುತ್ತಿತ್ತು. ಇದನ್ನೇ ಪೋಷಿಸುವ ಧರ್ಮ, ಮಠಮಾನ್ಯರುಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಬಸವಣ್ಣ ಬಯಸಿದಂತಹ ವರ್ಗ-ವರ್ಣ-ಲಿಂಗ ಅಸಮಾನತೆಗಳಿಲ್ಲದ ಸುಖೀ ಸಮಾಜದ ಕನಸು ಕಂಡವರು ಅವರು. ಅವರ ಸಿಟ್ಟು, ಆಕ್ರೋಶ, ವ್ಯಂಗ್ಯ ಎಲ್ಲವೂ ಸಮಾಜದ ಶೋಷಣೆಯ ವಿರುದ್ಧವೇ. ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲವೆಂದು ನಂಬಿದ ಅವರು ಈ ಜಡ್ಡುಗಟ್ಟಿದ ತರತಮ ನೀತಿಯ ಸಮಾಜದಲ್ಲಿ ಕಳೆದುಹೋಗದಂತೆ ವಿದ್ಯಾಥರ್ಿಗಳ ಕಣ್ಣು ತೆರೆಸಿ, ಮಾನವೀಯ ಸೆಲೆ ತುಂಬಿದ ಅವಧಾನಿಯವರು ಮಕ್ಕಳ ಅಚ್ಚುಮೆಚ್ಚಿನ ಪ್ರಾಧ್ಯಾಪರರಾಗಿದ್ದರು. 

ಪಾಠದಂತೆ ಅವರ ಭಾಷಣವೂ ಕೂಡಾ ವೈಶಿಷ್ಟ್ಯಪೂರ್ಣ. ನೆರೆದ ಜನರನ್ನೆಲ್ಲ ಮೋಡಿ ಮಾಡುವ ಧ್ವನಿ, ಭಾಷೆ, ಲಯ, ಗತ್ತು ಎಲ್ಲವೂ ಅವರಿಗಿತ್ತು. ಯಾರೇ ಇರಲಿ, ಎಲ್ಲೇ ಇರಲಿ ಅವರು ಸಮಾಜದ ಕಟು ವಿಮರ್ಶಕರೆ, ಪಟ್ಟಭದ್ರ ಹಿತಾಸಕ್ತರ ವಿರೋಧಿಗಳೇ. ಯಾರಿಗೂ ಹೆದರಿ ತಮ್ಮ ಅಂತರಂಗದ ಧ್ವನಿಯ ಕಳಕೊಂಡವರೂ ಅಲ್ಲ; ಅನುಕೂಲಸಿಂಧುರಾಜಕೀಯಕ್ಕೆ ತಮ್ಮ ತಾತ್ವಿಕ ಬದ್ಧತೆಯನ್ನು ಮಾರಿಕೊಂಡವರು ಅಲ್ಲ. ಬದುಕಿನುದ್ದಕ್ಕೂ ತಮ್ಮ ಪಾಠ-ಪ್ರವಚನ, ಸಾಹಿತ್ಯ- ಸಂವಾದದ ಮೂಲಕ ಹೊಸ ಸಮಾಜ ನಿಮರ್ಾಣಕ್ಕೆ ಹೊಸ ಮನಸ್ಸುಗಳನ್ನು ಸೃಷ್ಟಿಸುವ ಕಾರ್ಯವನ್ನು ಮಾಡಿದರು. 'ಕೊಡುವುದೇನು ಕೊಂಬುದೇನು ಒಲವು ಸ್ನೇಹ ಪ್ರೇಮ' ಎಂಬ ಬೇಂದ್ರೆಯವರ ಕವಿ ವಾಣಿಯನ್ನು ಮತ್ತೆ ಮತ್ತೆ ಗುನುಗುತ್ತಿದ್ದ ಅವಧಾನಿಯವರು ಸುತ್ತಮುತ್ತಲಿನವರಲ್ಲಿ ಸ್ನೇಹ ಪ್ರೀತಿಯನ್ನೆ ಸುರಿಸಿದ್ದ ಅಗಾಧ ಜೀವನ ಪ್ರೀತಿಯುಳ್ಳ ಮನುಷ್ಯರಾಗಿದ್ದರು. 

ಇಂಥ ಸಮಾಜಮುಖೀ ಧೋರಣೆಯುಳ್ಳ ಆದ್ರ್ರ ಹೃದಯದ ವ್ಯಕ್ತಿ ಸಾಹಿತಿಯಾಗದೆ ಇರಲು ಸಾದ್ಯವೆ? ಅವಧಾನಿಯವರು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ನವ್ಯದ ಧಾಟಿಯಲ್ಲಿ ಕಾವ್ಯ ಪ್ರಾರಂಭವಾದರೂ ಇವರನ್ನು ಗುರುತಿಸುವುದು ಖ್ಯಾತ ಬಂಡಾಯ ಸಾಹಿತಿ ಎಂದೇ. ಕವಿ ಹಾಗೂ ವಿಮರ್ಶಕರಾದ ಜಿ.ಎಸ್. ಅವಧಾನಿಯವರು ಈಗ ನಮ್ಮ ಮುಂದೆ ಇರುವುದು ಅವರ ಕೃತಿ ಕೊಡುಗೆಗಳಿಂದ. 

'ಬೆಂಕಿಬಳ್ಳಿ' ಕವನ ಸಂಕಲನ 1969ರಲ್ಲಿಯೂ 'ಹೊಕ್ಕಳು' ಕವನ ಸಂಕಲನ 1971ರಲ್ಲಿಯೂ 'ಕ್ವಾಸಾರ' ಕಾದಂಬರಿ 1979 ರಲ್ಲಿಯೂ 'ಹೊತ್ತು ಮುಳುಗುವ ಮುನ್ನ' ಕವನ ಸಂಕಲನ 1984ರಲ್ಲಿಯೂ 'ಪರಸ್ಪರ' ವಿಮಶರ್ಾ ಸಂಕಲನ 1990ರಲ್ಲಿಯೂ 'ಗಂಗೋತ್ರಿಯ ಹಕ್ಕಿಗಳು' ಕವನ ಸಂಕಲನ 1996ರಲ್ಲಿಯೂ 'ಎಲ್ಲಾ ಕವಿತೆಗಳು' ಎಂಬ ಅವರ ಸಮಗ್ರ ಕವನ ಸಂಕಲನ 2007 ರಲ್ಲಿಯೂ 'ಕಣಗಿಲ' ಕಾದಂಬರಿ 2007ರಲ್ಲಿಯೂ ಪ್ರಕಟವಾಯಿತು. ಅವರ 'ಗಂಗೋತ್ರಿಯ ಹಕ್ಕಿಗಳು' ಕವನ ಸಂಕಲನ 'ದಿನಕರ ಪ್ರತಿಷ್ಠಾನ ಪ್ರಶಸ್ತಿ'ಗೆ ಭಾಜನವಾದುದು ಅವರ ಕಾವ್ಯ ಕಸುವಿಗೆ ಸಾಕ್ಷಿಯಾಗಿದೆ. 

ಜೊತೆಗೆ ಸಂಪಾದಿತ ಕೃತಿಗಳೂ ಹಲವಿವೆ. 'ವಿ.ಸೀ.71' ಸಂಭಾವನಾ ಗ್ರಂಥ, 'ನೀಲಾಂಜನ' ಸಂಭಾವನಾ ಗ್ರಂಥ, 'ದೀಪಾರಾಧನೆ' ಸಂಭಾವನಾ ಗ್ರಂಥ, 'ರಸರಾಜ' ಸಂಭಾವನಾ ಗ್ರಂಥಗಳೂ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ 'ಸಾಹಿತ್ಯ ವಿಮಶರ್ೆ 1991' ಹಾಗೂ 'ಕಾವ್ಯ ಸೃಷ್ಠಿಯ ಸ್ವರೂಪ' ಗ್ರಂಥಗಳು ಸೇರಿವೆ.

ನಾಡಿನಾದ್ಯಂತ ನಡೆದ ಅನೇಕ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಚಾರ ಸಂಕೀರ್ಣಗಳಲ್ಲಿ ಅವರು ಭಾಗವಹಿಸಿದ್ದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ದಸರಾ ಕವಿ ಸಮ್ಮೇಳನ, ಆಕಾಶವಾಣಿ ಕವಿಗೋಷ್ಠಿ, ಕದಂಬೋತ್ಸವ, ಬಂಡಾಯ ಸಾಹಿತ್ಯ ಸಮ್ಮೇಳನ ಹೀಗೆ ರಾಜ್ಯ-ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ತಮ್ಮ ಕಾವ್ಯ ಹಾಗೂ ವಿಚಾರ ಧಾರೆಗಳನ್ನು ಹರಿಯಬಿಟ್ಟಿದ್ದಾರೆ. ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕನರ್ಾಟಕ, ಉದಯವಾಣಿ, ಜನಾಂತರಂಗ, ಮುಂಗಾರು, ಸುಧಾ, ತರಂಗ, ತುಷಾರ, ಕನರ್ಾಟಕ ಭಾರತಿ, ಸಂಕ್ರಮಣ, ಸಾಕ್ಷಿ, ಮೊದಲಾದ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಅವರ ಲೇಖನ ಕವಿತೆಗಳು ಪ್ರಕಟವಾಗಿವೆ. 

ಸದಾ ಜನಪರ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದ ಅವರು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದು, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯ ರಚನಾ ಸಮಿತಿಯ ಸದಸ್ಯರಾಗಿ, ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಎಲ್ಲ ಸಾಂಸ್ಕೃತಿಕ ಮತ್ತು ಪ್ರಗತಿಪರ ಕಾರ್ಯದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಜಿ.ಎಸ್.ಅವಧಾನಿಯವರು ನಾಡಿನಲ್ಲಿ ಉತ್ತರ ಕನ್ನಡಕ್ಕೊಂದು ಕಳೆಯನ್ನು ಕೊಟ್ಟವರು. 

ಇದಲ್ಲದೇ ಅವರ ಆಸಕ್ತಿಯ ಕ್ಷೇತ್ರಗಳೂ ಹಲವಾರು. ಶಾಸ್ತ್ರೀಯ ಸಂಗೀತಾಸಕ್ತರಾಗಿದ್ದರು. ಅಪ್ಪಟ ಯಕ್ಷಾಭಿಮಾನಿಯಾಗಿದ್ದರು. ಶಿಕ್ಷಕನೊಬ್ಬ ನಾಟಕಾಸಕ್ತನೂ, ಉತ್ತಮ ನಟನೂ ಆದರೆ ವಿದ್ಯಾಥರ್ಿಗಳ ಭಾಗ್ಯಕ್ಕೆ ಎಡೆಯೆಲ್ಲಿ! ರಂಗ ಭೂಮಿಯಲ್ಲಿ ಆಸಕ್ತರಾದ ಅವರು ಕಲಿಕೆಯ ಜೊತೆ ಜೊತೆಗೆ ವಿದ್ಯಾಥರ್ಿಗಳಿಗೆ ರಂಗ ಭೂಮಿಕೆಯನ್ನು ನಿಮರ್ಿಸಿ ತಮ್ಮ ನಟನಾ ಕೌಶಲ್ಯವನ್ನು ಗುರುತಿಸಿಕೊಳ್ಳಲು, ಬೆಳೆಸಿಕೊಳ್ಳಲು ಅನುವು ಮಾಡಿಕೊಟ್ಟರು. ರಾಜ್ಯ-ರಾಷ್ಟ್ರ ಮಟ್ಟದ ಉತ್ತಮ ನಿದರ್ೇಶಕರನ್ನು ಕಾಲೇಜಿಗೆ ಆಹ್ವಾನಿಸಿ ಮಕ್ಕಳನ್ನು ತರಬೇತುಗೊಳಿಸಿದರು. ತಿಂಗಳಾನುಗಟ್ಟಲೆ ಆ ಎಲ್ಲ ಮಕ್ಕಳನ್ನು ತಮ್ಮ ಮನೆಯಲ್ಲೇ ಹಗಲು ರಾತ್ರಿ ಉಳಿಸಿಕೊಂಡು ಗುರು ಶಿಷ್ಯ ಪರಂಪರೆಯನ್ನು ಮರೆದರು. ಸ್ವತಃ ತಾವೂ 'ಅಂಧಯುಗ', 'ಸಂಕ್ರಾಂತಿ', 'ಜೋಕುಮಾರಸ್ವಾಮಿ' ಮುಂತಾದ ನಾಟಕಗಳಲ್ಲಿ ನಟನಾಗಿ ಅಭಿನಯಿಸಿ ಪ್ರೇಕ್ಷಕರಿಂದ ಸೈಎನಿಸಿಕೊಂಡರು. ಹೀಗೆ ತಾವೂ ಕುಣಿದು ಮಕ್ಕಳನ್ನು ಕುಣಿಸಿದ ಅಪರೂಪದ ಶಿಕ್ಷಕರು. 

ಅವಧಾನಿಯವರ ಮನಸ್ಸು ಹಾಗೂ ಆಶಯಗಳು ಹೇಗೆ ಸುಂದರವೊ ಹಾಗೇ ಇಂದಿಗೂ ಅತ್ಯಂತ ಪ್ರಸ್ತುತವಾದದ್ದು. ನಾನು ಆಗಲೇ ಅವರೊಬ್ಬ ಬಂಡಾಯ ಸಾಹಿತಿಯೆಂದೆನಲ್ಲ, ಬಂಡಾಯದ ವ್ಯಾಖ್ಯಾನವನ್ನು ಅವರದೇ ಮಾತುಗಳಲ್ಲಿ ನೋಡೋಣ. 
"ನಾನು ಮುಖ್ಯವಾಗಿ ಒಬ್ಬ ಬರಹಗಾರ. ನನ್ನ ಸಾಹಿತ್ಯದ ಮುಖ್ಯ ಆಶಯ ಹಾಗೂ ಕಾಳಜಿ ಬಂಡಾಯ. ಬಂಡಾಯ ಅದೊಂದು ಮನೋಧರ್ಮ. ವ್ಯವಸ್ಥೆಯ ಅನ್ಯಾಯ, ಕ್ರೌರ್ಯ ,ಹಿಂಸೆಗಳ ವಿರುದ್ಥ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಹಾಗೂ ಅಖಂಡ ಮಾನವೀಯತೆಯನ್ನು ಎತ್ತಿ ಹಿಡಿಯುವುದೆ ಬಂಡಾಯದ ಮೂಲ ದ್ರವ್ಯ" ಎಂದು ಬರಹಗಾರರೆಲ್ಲರ ಕಾಳಜಿಯನ್ನು ನೆನಪಿಸಿದವರು ಅವರು.

ಹೀಗಾಗಿ "ಜೀವನ ಎಲ್ಲರಿಗೂ ಸಮಾನವಾಗಿರಬೇಕು, ಸಹ್ಯವಾಗಿರಬೇಕು. ವಿಶ್ರಾಂತ ಹಾಗೂ ವಿಶ್ರಾಂತರಹಿತ ಜನ ವರ್ಗಗಳಿರಬಾರದು. ಹಗಲು-ಬೆಳದಿಂಗಳಿನ ಹಾಗೆ ಬದುಕಿನ ಸಮಸ್ತ ವಸ್ತುಗಳನ್ನು ಎಲ್ಲರೂ ಸಮಾನವಾಗಿ ಪಡೆಯುವಂತಿರಬೆಕು" ಎಂದು ಸದಾ ತುಡಿದವರು, ದುಡಿದವರು ಅವರು.

ಸಮಾಜವಾದಿ ಆಶಯ ಅವರದು. "ಕಮ್ಯೂನಿಷ್ಟ ಪಕ್ಷವೊಂದೆ ಸದ್ಯ ಇದ್ದುದರಲ್ಲಿ ಅರ್ಹ ಅನ್ನಿಸಿಕೊಂಡಿದೆ. ಎಷ್ಟೇ ಅರೆಕೊರೆಗಳಿದ್ದರೂ ಅದು ಒಟ್ಟು ಸಮುದಾಯದ; ಬಡವರ-ಕೃಷಿ ಕೂಲಿಕಾರರ ಅಂದರೆ ಜನಪರವಾದ ಪಕ್ಷವಾಗಿದೆ. ದುಡಿಯುವ ವರ್ಗಗಳ ಧ್ವನಿಗೆ ಧ್ವನಿ ಕೂಡಿಸುವ ಆರೋಗ್ಯಕರ ತಾತ್ವಿಕತೆ ಅದರದು. ಸಮಾನತೆ, ಸ್ವಾತಂತ್ರ್ಯ, ಸಹಬಾಳ್ವೆಗೆ ಅದು ಒತ್ತು ಕೊಡುತ್ತದೆ. ಅಸಮಾನತೆ, ಸವರ್ಾಧಿಕಾರ, ಕೇಂದ್ರೀಕರಣ, ಬಂಡವಾಳಶಾಹಿಯ ವಿರುಧ್ಧ ನಿಂತಿದೆ. ಅಂದರೆ ಸಮಾಜವಾದಿ ವಾಸ್ತವ ಸಮಾಜ ವ್ಯವಸ್ಥೆಯೇ ಅದರ ಆಶಯವಾಗಿದೆ" ಎಂದು ಅಪ್ಪಿ ನಡೆದ ಅವರು "ಮಾಕ್ರ್ಸವಾದ ನಿರಂತರ ಚಲನಶೀಲವಾದದ್ದು; ಜಡವಾದುದ್ದಲ್ಲ. ಅದೆಂದು ಸತ್ತಿಲ್ಲ. ಮಾಕ್ರ್ಷವಾದಿ ಅಂತಂದುಕೊಂಡವರ ವೈಯಕ್ತಿಕ ವೈಫಲ್ಯ ಕಂಡು ಮಾಕ್ರ್ಸವಾದವೆ ಸತ್ತು ಹೋಯಿತು ಎನ್ನುವುದು ಮೂರ್ಖತನವಾಗುತ್ತದೆ" ಎಂದು ಮಾಕ್ರ್ಸವಾದದ ನಿರಂತರತೆಯನ್ನು ಬಯಸಿದ ಅವಧಾನಿಯವರು ಎಡಪಂಥೀಯ ಒಲವುಳ್ಳ ಲೇಖಕರು. 

ಅಂತಹ ಮನಸ್ಸು ಮಾತ್ರ "ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು. ಧರ್ಮ ವ್ಯಕ್ತಿಯ ವೈಯಕ್ತಿಕ ಬದುಕಿನ ವಿಕಾಸದ ಮೌಲ್ಯ; ರಾಜಕೀಯ ಸಮಷ್ಠಿ ಬದುಕಿಗೆ ಸಂಬಂಧಿಸಿದ್ದು. ಆದ್ದರಿಂದ ಧರ್ಮರಹಿತ ರಾಜಕೀಯವೇ ಅನಿವಾರ್ಯ" ಎಂದು ಬಯಸಲು ಸಾಧ್ಯ. ಧರ್ಮ ರಾಜಕೀಯದ ಮೇಲೆ ಸವಾರಿ ನಡೆಸುತ್ತ ರಾಡಿಯೆಬ್ಬಿಸಿದ ಇಂದಿನ ರಾಜಕಾರಣದಲ್ಲಿ ಇವರ ವೈಚಾರಿಕತೆ ಎಷ್ಟೊಂದು ಪ್ರಸ್ತುತ! "ಇವೆರಡೂ ಮೂಲಭೂತವಾದೀ ಸ್ವಾರ್ಥ ಸಾಧಕರ ಹುನ್ನಾರ. ದೇಶಪ್ರೇಮ, ದೇವರು-ಧರ್ಮಗಳೆಲ್ಲ ಕೇವಲ ಈ ಜನಕ್ಕೆ ನೆಪ ಮಾತ್ರ ಆಗಿದೆ. ಇವೆಲ್ಲ ಕೇವಲ ಸ್ಯೂಡೊ ಭಾವನೆಗಳು. ಸಮೂಹ ಸನ್ನಿಗಳಾದವರಿಗೆ ವಿವೇಕ, ನೈತಿಕತೆ, ಮೌನ ಮಾನವೀಯತೆಗಳಾವವೂ ಇರುವುದಿಲ್ಲ" ಎಂದ ವಿವೇಕಿಗಳು. ಆದ್ದರಿಂದಲೇ "'ಹಿಂದೂ' ಒಂದು ಮತವೇ ವಿನಾ 'ಧರ್ಮ' ಅಲ್ಲ. ಅಂದರೆ ಅದೊಂದು ಮೌಲ್ಯ ಅಲ್ಲ. ಆದ್ದರಿಂದ ಮಾನವಧರ್ಮವೇ ನಮಗೆ ಕೊನೆಯ ಧರ್ಮ. ಈ ಮೌಲ್ಯವನ್ನೇ ಭಾರತೀಯ ಸಂಸ್ಕೃತಿ ತನ್ನ ಗರ್ಭದಲ್ಲಿರಿಸಿಕೊಂಡಿದೆ. ಅದನ್ನು ಅರಿಯಬೇಕಾದದ್ದು ನಮ್ಮ ಹೊಣೆ" ಎನ್ನುತ್ತ ಕೋಮುವಾದಿಗಳನ್ನು ಎಚ್ಚರಿಸುವ ಹೊಣೆಗಾರಿಕೆ ಹೊತ್ತ ಬರಹಗಾರರು ನಮ್ಮಲ್ಲಿ ಎಷ್ಟಿದ್ದಾರೆ? ಅವರೂ ಸಮೂಹ ಸನ್ನಿಗೆ ಒಳಗಾಗುತ್ತಿರುವುದು ಆಘಾತಕರ ಸಂಗತಿಯಾಗಿದೆ. 

ನಮ್ಮ ರಾಜಕೀಯದ ಅಧೋಗತಿಗೆ ಕೇವಲ ರಾಜಕಾರಣಿಗಳಷ್ಟೇ ಕಾರಣರಲ್ಲ. ಆಳುವವರು, ಧಾಮರ್ಿಕ ನೇತಾರರು, ಬುದ್ಧಿಜೀವಿಗಳು ಹಾಗೂ ಜನಸಮುದಾಯದ ಪಾಲುಂಟೆಂದು ಹೇಳಿದ ಇವರು ಅದಕ್ಕೆ ಎಲ್ಲರನ್ನೂ ಸಜ್ಜು ಮಾಡುವ ಶಿಕ್ಷಣ ವ್ಯವಸ್ಥೆ ಇರಬೇಕೆನ್ನುತ್ತಾರೆ. ಅವರು "ವ್ಯಕ್ತಿಯ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವಂತ ಶಿಕ್ಷಣ ಪದ್ಧತಿ ಇರಬೇಕು. ವ್ಯಕ್ತಿಯಲ್ಲಿ ಮನುಷ್ಯತ್ವ ಸೃಷ್ಟಿಸುವುದು ಶಿಕ್ಷಣದ ಗುರಿಯಾಗಬೇಕು" ಎಂದು ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಮಾರ್ಗದಶರ್ಿಯನ್ನು ಸೂಚಿಸಿದವರಿವರು.

"ಇಂದಿನ ವಿದ್ಯಾಥರ್ಿ ಹೀಗೇ ಇರಬೇಕೆಂದು ಸೂತ್ರ ರೂಪದಲ್ಲಿ ಶರಾ ಬರೆಯುವ ಹಾಗಿಲ್ಲ. ಆತನಿಗೆ ತನ್ನ ಕರ್ತವ್ಯ, ಮಿತಿ ಹಾಗೂ ಉದ್ದೇಶವೇನೆಂಬುದರ ಪರಿಜ್ಞಾನದ ಅರಿವಿರಬೇಕು. ವಿದ್ಯಾಥರ್ಿ ವಿದ್ಯಾಥರ್ಿಯೇ ಆಗಿದ್ದು ಸದಾ ಜ್ಞಾನದ ಹಸಿವು ಇರಬೇಕಾದ್ದು ನ್ಯಾಯ" ಎಂದ ಇವರು ತಾವೂ ಕೂಡಾ "ಅಧ್ಯಾಪನದ ಮುಖಾಂತರವಾಗಿ ನನ್ನ ಅನುಭವ ಹಾಗೂ ಅರಿವನ್ನು ವಿಸ್ತರಿಸಿಕೊಳ್ಳುವುದಕ್ಕಾಗುತ್ತದೆ ಎಂಬ ಕಾರಣಕ್ಕಾಗಿಯೆ ಶಿಕ್ಷಕನಾದವನು. ಯಾಕೆಂದರೆ ನಿಜವಾದ ಅಧ್ಯಾಪಕ ಆಗುವುದೆಂದರೆ ಆತ ನಿಜವಾದ ವಿದ್ಯಾಥರ್ಿಯಾಗುವುದು ಎಂತಲೇ ಅರ್ಥ" ಎನ್ನುತ್ತ ಸದಾ ಜ್ಞಾನದಾಹಿಯಾದ ಇವರು ತಾನೂ ಓದುತ್ತ ಇತರರ ದಾಹವನ್ನೂ ತಣಿಸುತ್ತ ನಡೆದ ಆದರ್ಶ ಅಧ್ಯಾಪಕರು. "ವಿದ್ಯಾಥರ್ಿ ಹಾಗೂ ಶಿಕ್ಷಣ(ಕ) ಸಂಬಂಧ ನೀರು ಸಕ್ಕರೆಯಂತೆ. ಒಂದರೊಳಗೊಂದು ಎರಕವಾಗಿರಬೇಕು" ಎಂದು ತನ್ನ ಅಧ್ಯಾಪನ ವೃತ್ತಿಯುದ್ದಕ್ಕೂ ಮಕ್ಕಳಲ್ಲಿ ಪ್ರೀತಿ-ಸ್ನೇಹದ ಎರಕ ಹೊಯ್ದ ಗುರು ಶ್ರೇಷ್ಠ ಜಿ.ಎಸ್.ಅವಧಾನಿಯವರು.
"ಹೊತ್ತು ಮುಳುಗುವ ಮುನ್ನ ಹೊತ್ತು ನಡೆಯುವ ಬನ್ನಿ
ನಮ್ಮ ಸೃಷ್ಟಿಯ ಹದದ ಹೊಸತು ಬಿತ್ತುಗಳನ್ನ
ಭೂಮಿಯೊಡಲಿನ ತುಂಬ ಹಸಿರು ಕದಿರುಗಳನ್ನು"
ಎಂದು ಕಾವ್ಯದ ಕರೆಕೊಟ್ಟ ನೀವು ಹೊತ್ತು ಮುಳುಗುವ ಮುನ್ನ ಬಿಟ್ಟು ಹೋದಿರಿ ಎಲ್ಲಿಗೆ? ಕಾಯುವದಿಲ್ಲವೆಂದು ಹೇಳಿದ ನೀವು ಹೀಗೆ ಒಂದು ಸೂಚನೆಯನ್ನೂ ನೀಡದೆ ಜಿಗಿದು ಬಿಡುವುದೆ? 'ಅಲ್ಲ ಸ್ವಾಮಿ' ನೀವು ಹೊಸ ಬಿತ್ತುಗಳನ್ನ ಬಿತ್ತುವುದಕ್ಕಾದರೂ ಹಸಿರೊಡೆವ ಕದಿರುಗಳನ್ನು ನೋಡುವುದಕ್ಕಾದರೂ ಕಾಯಲೇ ಬೇಕಾಗಿತ್ತು. 

ಜಿ.ಎಸ್.ಅವಧಾನಿಯವರು 20 ಅಗಸ್ಟ 2000 ರಂದು ತಮ್ಮ 52ನೇ ವಯಸ್ಸಿನಲ್ಲಿ ವೃತ್ತಿಯಲ್ಲಿರುವಾಗಲೇ ಹೃದಯಾಘಾತದಿಂದ ತೀರಿಕೊಂಡರು. ಈಗ ನಮಗಿರುವುದು ಅವಧಾನಿಯವರ 'ನಮು-ನಮೂನೆ'ಯ ನೆನಪುಗಳು ಮಾತ್ರ.

                                                                                                            - ಮಾಧವಿ ಭಂಡಾರಿ, ಕೆರೆಕೋಣ