Thursday 28 November 2013

ಜನರ ಬದಕು ಮತ್ತು ಪಶ್ಚಿಮ ಘಟ್ಟ ಉಳಿಸಿ, ಕಸ್ತೂರಿ ರಂಗನ್ ಸಮಿತಿ ವರದಿ ತಿರಸ್ಕರಿಸಿ- kprs

                                                                                                                               
               
                               ಅಖಿಲ ಭಾರತ ಕಿಸಾನ್ ಸಭಾ   4 ಅಶೋಕಾ ರಸ್ತೆ, ನವ ದೆಹಲಿ = 110001
                                                        ಪತ್ರಿಕಾ ಹೇಳಿಕೆ                                      20-11-2013                                                                                                                                                
ಜನರ ಬದಕು ಮತ್ತು ಪಶ್ಚಿಮ ಘಟ್ಟ ಉಳಿಸಿ,
 ಕಸ್ತೂರಿ ರಂಗನ್ ಸಮಿತಿ ವರದಿ ತಿರಸ್ಕರಿಸಿ

      ಭಾರತ ಸಕರ್ಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ದಿನಾಂಕ: 16-11-2013ರಂದು ಕಛೇರಿ ಸುತ್ತೋಲೆ ಹೊರಡಿಸಿ ಕಸ್ತೂರಿರಂಗನ್ ಸಮಿತಿ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತಿದ್ದೇವೆ ಎಂದು ಹೇಳಿರುವುದನ್ನು ಅಖಿಲ ಭಾರತ ಕಿಸಾನ್ ಸಭಾ ಬಲವಾಗಿ ಖಂಡಿಸುತ್ತದೆ.  ಹೈ ಲೆವೆಲ್ ವಕರ್ಿಂಗ್ ಗ್ರೂಪ್ (ಊಐಐಘಉ)  ಅಥವಾ ಕಸ್ತೂರಿ ರಂಗನ್ ಸಮಿತಿ ಎಂದು ಕರೆಯುವ ಸಮಿತಿಯು ನೀಡಿರುವ ವರದಿಯು ಪಶ್ಚಿಮ ಘಟ್ಟದ 4,156  ಹಳ್ಳಿಗಳಲ್ಲಿ ಕೃಷಿ ಮತ್ತು ಇತರೆ ಮೂಲಭೂತ ಅಭಿವೃದ್ದಿ ಕಾರ್ಯಗಳನ್ನು ನಿಯಂತ್ರಿಸಲು ಹೇಳುತ್ತದೆ. ಹಾಗಾಗಿ ತಕ್ಷಣವೇ ಈ ವರದಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸುತ್ತೇವೆ. ರೈತರು ಮತ್ತು ಇತರೆ ಜನ ವಿಭಾಗಗಳ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಸವರ್ಾಧಿಕಾರಿ ಮಾದರಿಯಲ್ಲಿ ಆದೇಶವನ್ನು ನೀಡಿರುವುದು ಆಕ್ಷೇಪಾರ್ಹವಾಗಿದೆ. ಡಾ. ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ಪಶ್ಚಿಮ ಘಟ್ಟ ಜೈವಿಕ ತಜ್ಞರ ಸಮಿತಿ ಅಥವಾ ಮಾಧವ ಗಾಡ್ಗೀಳ್ ಸಮಿತಿ ನೀಡಿದ್ದ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ಶಿಫಾರಸ್ಸು ನೀಡಬೇಕೆಂದು  ಮತ್ತು ಅಲ್ಲಿಯ ಸ್ಥಳೀಯ ಹಾಗೂ ಮೂಲ ನಿವಾಸಿಗಳ ಅಗತ್ಯ ಮತ್ತು ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಗಾಡ್ಗೀಳ್ ಸಮಿತಿಯ ವರದಿಯನ್ನು ಪರಿಶೀಲಿಸಬೇಕೆಂದು ರಚಿಸಲಾಗಿತ್ತು.  ಆದರೆ ಈ ಸಮಿತಿಯು ರೈತರು ಮತ್ತು ಪಶ್ಚಿಮ ಘಟ್ಟ ಪ್ರದೇಶದ ಜನವಿಭಾಗಗಳು ಎತ್ತಿದ ದೂರುಗಳನ್ನು ಪರಿಹರಿಸಲು ಸಂಪೂರ್ಣವಾಗಿ ವಿಫಲಾಗಿದೆ.

     ಎರಡೂ ವರದಿಗಳು ತದ್ವಿರುದ್ದ ಶಿಫಾರಸ್ಸುಗಳನ್ನು ನೀಡಿರುವ ಹಿನ್ನಲೆಯಲ್ಲಿ ಒಂದನ್ನು ಪಕ್ಕಕ್ಕೆ ಇಟ್ಟು ಇನ್ನೊಂದನ್ನು ಏಕ ಪಕ್ಷೀಯವಾಗಿ ಆರಿಸಿಕೊಳ್ಳುವುದು ಪಶ್ಷಿಮಘಟ್ಟದ ಅತಿ ಸೂಕ್ಷ್ಮ ಜೈವಿಕ ಪರಿಸರದ ವಿರುದ್ದ ಶತಶತಮಾನಗಳಿಂದ ಅಲ್ಲಿನ ಪರಿಸರದ ಜೊತೆ ಬದುಕಿಕೊಂಡು ಬಂದಿರುವ ಜನರನ್ನು ಎತ್ತಿ ಕಟ್ಟುವ ಕೆಲಸವಾಗಿದೆ. ಎರಡು ವರದಿಗಳು ಅಲ್ಲಿಯ ಜನರು ಪಶ್ಚಿಮ ಘಟ್ಟದ ಪರಿಸರವನ್ನು ಉಳಿಸುವಲ್ಲಿ ಮತ್ತು ವನ್ಯ ಜೀವಿಗಳು ಮತ್ತು ಜೈವಿಕ ವೈವಿದ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ವಹಿಸುತ್ತಿರುವ ಪಾತ್ರವನ್ನು ನಿರ್ಲಕ್ಷಿಸಿವೆ. ಈ ವರದಿಗಳು ಅಧಿಕಾರಶಾಹಿ ವರದಿಗಳಾಗಿದ್ದು ಯಾವುದೇ ಪ್ರಜಾಸತಾತ್ಮಕ ಕಣ್ಣೋಟವನ್ನು ಹೊಂದಿಲ್ಲವಾಗಿದೆ. ಹಾಗಾಗಿ ಅವು ಅಲ್ಲಿನ ಜನತೆ ಮತ್ತು ಪರಿಸರದ ನಡುವಿನ ಸಂಬಂಧವನ್ನು ವೈಜ್ಞಾನಿಕವಾಗಿ ಅಂದಾಜಿಸುವಲ್ಲಿ ವಿಫಲವಾಗಿವೆ. ಹಾಗಾಗಿ ಸಮಾಜ ವಿಜ್ಞಾನಿಗಳು, ಪರಿಸರ ತಜ್ಞರು, ರೈತ ಸಂಘಟನೆಗಳು ಮತ್ತು ಸಂಬಂಧಿಸಿದ ರಾಜ್ಯಗಳ ವಿವಿಧ ರಾಜಕೀಯ ಪಕ್ಷಗಳ ಸರಿಯಾದ ಪ್ರಾತಿನಿದ್ಯ ಇರುವ ವಿಶಾಲ ವ್ಯಾಪ್ತಿಯ ಸಮಿತಿಯಿಂದ ವೈಜ್ಞಾನಿಕ ಅಂದಾಜಿಗೆ ಬರಲು ಅಖಿಲ ಭಾರತ ಕಿಸಾನ್ ಸಭಾ ಒತ್ತಾಯಿಸುತ್ತದೆ. ಅತಿ ಸೂಕ್ಷ್ಮ ಜೀವ ವೈವಿಧ್ಯ ಮತ್ತು ಬದುಕಿನ ರಕ್ಷಣೆಯ ಬಗ್ಗೆ ಒಂದು ಸಮಗ್ರ ಅಭಿಪ್ರಾಯಕ್ಕೆ ಬರುವ ಮುನ್ನ ಅಲ್ಲಿಯ ಜನರು ಮತ್ತು ಸಂಬಂಧಿಸಿದ ಎಲ್ಲರೊಡನೆ ವಿಶಾಲ ವ್ಯಾಪ್ತಿಯ ಸಮಾಲೋಚನೆ ನಡೆಯಬೇಕಿದೆ.
     ವ್ಯಾಪಕ ಪ್ರಮಾಣದ ಪ್ರಮಾಣದ ಪ್ರತಿಭಟನೆಗಳನ್ನು ಗಮನಕ್ಕೆ ತೆಗೆದುಕೊಳ್ಳದ ಪರಿಸರ ಮತ್ತು ಅರಣ್ಯ ಸಚಿವಾಲಯವು. ಆರು ರಾಜ್ಯಗಳ 4,156 ಹಳ್ಳಿಗಳನ್ನು (ಗೋವಾ-99, ಗುಜರಾತ್-64, ಕನರ್ಾಟಕ-1576, ಕೇರಳ-123, ಮಹಾರಾಷ್ಟ್ರ-2159, ಮತ್ತು ತಮಿಳುನಾಡು-135) ಒಳಗೊಂಡ ಪ್ರದೇಶವನ್ನು ಜೈವಿಕ ಸೂಕ್ಷ್ಮ ವಲಯಗಳು ಎಂದು ಘೋಷಿಸಿ ಮತ್ತು ಆ ಮೂಲಕ ಅಲ್ಲಿ ಕೃಷಿ ಹಾಗೂ ಇನ್ನೀತರೆ ಮೂಲಭೂತ ಚಟುವಟಿಕೆಗಳನ್ನು ನಿಯಂತ್ರಿಸಿ ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳನ್ನು  ಕಾರ್ಯಚರಣೆಗೆ ತರಲು ಹೊರಟಿದೆ. ಕಂದಾಯ ಹಳ್ಳಿಗಳನ್ನು ಆದರಿಸಿ ಜೈವಿಕ ಸೂಕ್ಷ್ಮ ವಲಯಗಳು ಎಂದು ಘೋಷಿಸಿರುವುದು ಕೂಡ ಅವೈಜ್ಞಾನಿಕವಾಗಿದೆ.

     ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇವಲ ಜನವಸತಿಗಳನ್ನು ವಿಸ್ತರಿಸುವ ಉದ್ದೇಶವಲ್ಲದೇ ಬೇರಾವುದೇ ಉದ್ದೇಶಕ್ಕೆ ಭೂಮಿಯ ಬಳಕೆಯನ್ನು ನಿಷೇದಿಸುವ ಗಾಡ್ಗೀಳ್ ವರದಿಯ ಶಿಫಾರಸ್ಸು ಮತ್ತು ಅದನ್ನು ಅನುಮೋದಿಸುವ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಭಾರತ ಸಕರ್ಾರವು ಅಂಗೀಕರಿಸಿದೆ. ಈ ಕ್ರಮವು ಆ ಹಿಂದುಳಿದ ಪ್ರದೇಶದಲ್ಲಿ ಆಸ್ಪತ್ರೆ ಮತ್ತು ಶಾಲೆಯಂತಹ ಮೂಲಭೂತ ಸವಲತ್ತುಗಳನ್ನು ನೀಡಲು ನಿಯಂತ್ರಣ ಹೇರುತ್ತದೆ. ಇದನ್ನು ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ.  ಕಾಫಿಯನ್ನು ಒಳಗೊಂಡಂತೆ ಒಂದೇ ರೀತಿಯ ಬೆಳೆಯನ್ನು ಒಳಗೊಂಡ ಕೃಷಿ ಚಟುವಟಿಕೆ ಮೇಲೆ ನಿಯಂತ್ರಣ,  ರಸಗೊಬ್ಬರಗಳ ಬಳಕೆ, ಜೈವಿಕ ಕೃಷಿ ಕಡ್ಡಾಯ ಎಂಬ ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ.  ನವೆಂಬರ್-16ರ ಆಧೇಶದ ಮೂಲಕ ಸಚಿವಾಲಯವು ಅಂಗೀಕರಿಸಿರುವ ಶಿಫಾರಸ್ಸುಗಳು ರೈತರ ಬದುಕಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದಿಲ್ಲ ಎಂದು  ಹೇಳಿರುವ ಕೇಂದ್ರ ಸಚಿವೆ ಜಯಂತಿ ನಟರಾಜನ್ರವರ ಹೇಳಿಕೆ ಆಧಾರರಹಿತವಾಗಿದೆ.

     ಪರಿಸರ ರಕ್ಷಣೆಗೆ ತನ್ನ ಆಳವಾದ ಬದ್ದತೆಯನ್ನು ಪುನರುಚ್ಚರಿಸುವಾಗಲೇ ಪ್ರಾಂತ ರೈತ ಸಂಘವು ಜನರ ಬದುಕು ಮತ್ತು ನಾಗರಿಕತೆಯಿಂದ ಪರಿಸರದ ಪ್ರಶ್ನೆಗಳನ್ನು ಪ್ರತ್ಯೇಕಿಸಬೇಕೆಂಬ ನಿಲುವುವನ್ನು ತಿರಸ್ಕರಿಸುತ್ತದೆ.  ಪರಿಸರಕ್ಕೆ ಪೂರಕವಾದ ಅಭಿವೃದ್ದಿಯು ಆ ಪ್ರದೇಶದ ಜನತೆಯ ಬದುಕು ಮತ್ತು ಆಥರ್ಿಕ ಆಯ್ಕೆಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಗಾಡ್ಗೀಳ್ ವರದಿಯು ತನ್ನ ಶಿಫಾರಸ್ಸುಗಳಲ್ಲಿ ಈ ಪ್ರಶ್ನೆಗೆ ಸಂಬಂಧಿಸಿರುವ ಸಮಾಜೋ ಆಥರ್ಿಕ ಅಂಶಗಳನ್ನು ಪರಿಶೀಲಿಸಲು ವಿಫಲವಾಗಿದೆ. ಎರಡು ವರದಿಗಳು ವಿವಿಧ ಸಾಮಾಜಿಕ ವಿಭಾಗಗಳ ಜೀವನದ ಮೇಲೆ ಪರಿಸರದ ನಾಶವು ಉಂಟು ಮಾಡುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿಲ್ಲ. ಈ ವರದಿಗಳು ಪಶ್ಷಿಮ ಘಟ್ಟ ಪ್ರದೇಶದಲ್ಲಿ ಮಾನವ ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟಲು, ಸಂರಕ್ಷಿತ ಪ್ರದೇಶದಲ್ಲಿ ಪ್ರಾಣಿ ಮತ್ತು ಸಸ್ಯ ಸಂಕುಲಗಳ ರಕ್ಷಣೆ, ಭತ್ತದ ಗದ್ದೆಗಳು ಮತ್ತು ನೀರಿನ ಸೆಲೆಗಳನ್ನು ರಕ್ಷಿಸುವಲ್ಲಿ ಪರಿಣಾಮಕಾರಿ ಪರಿಹಾರಾತ್ಮಕ ಸಲಹೆಗಳನ್ನು ನೀಡುವಲ್ಲಿ ವಿಫಲವಾಗಿವೆ.

     ಗಣಿ ಮತ್ತು ಅರಣ್ಯ ಮಾಫಿಯಗಳ ಜೊತೆ ರೈತರು ಕೂಡ ಪರಿಸರವನ್ನು ಹಾಳು ಮಾಡುತ್ತಾರೆಂದು ವಿಭಾಗಿಕರಿಸಿರುವ ನಿಲುವನ್ನು ರೈತ ಸಂಘ ತಿರಸ್ಕರಿಸುತ್ತದೆ.  ಪರಿಸರ ಸಂರಕ್ಷಣೆಯಲ್ಲಿ ರೈತರು ಯಾವಾಗಲೂ ಮುಂದು ಎಂದು ರೈತ ಸಂಘ ನಂಬಿದೆ. ಪಶ್ಚಿಮ ಘಟ್ಟ ಪ್ರದೇಶದ ಸಂರಂಕ್ಷಣೆಯಲ್ಲಿ ಸ್ಥಳೀಯ ರೈತಾಪಿ ಮತ್ತು ಜನಗಳ ಬೆಂಬಲ  ಹಾಗೂ ಪ್ರಜ್ಞಾ ಪೂರ್ವಕ ಪಾಲ್ಗೋಳ್ಳುವಿಕೆ ಅಗತ್ಯ ಎಂಬುದನ್ನು ಭಾರತ ಸಕರ್ಾರ ಅರ್ಥ ಮಾಡಿಕೊಳ್ಳಬೇಕು.

     ಕಸ್ತೂರಿ ರಂಗನ್ ಸಮಿತಿಯ ವರಧಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತೇವೆ ಎಂಬ ಪರಿಸರ ಮತ್ತು ಅರಣ್ಯ ಸಚಿವಾಲಯದ ತಿಮರ್ಾನವು ಸಂಬಂಧಿಸಿದ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿದೆ. ಎರಡೂ ಸಮಿತಿಗಳ ಜನವಿರೋಧಿ, ರೈತ ವಿರೋಧಿ, ಶಿಫಾರಸ್ಸುಗಳ ವಿರುದ್ದದ ಪ್ರತಿಭಟನೆಗಳಿಗೆ ರೈತ ಸಂಘ ಬೆಂಬಲಿಸುತ್ತದೆ ಮತ್ತು ಈ ಪ್ರತಿಭಟನೆಗಳಲ್ಲಿ ಸೇರಿಕೊಳ್ಳುವಂತೆ ತನ್ನೆಲ್ಲಾ ಘಟಕಗಳಿಗೆ ಕರೆ ನೀಡುತ್ತದೆ.

     ಹಾಗಾಗಿ ಎರಡೂ ಸಮಿತಿಗಳ ಜನ ವಿರೋಧಿ ಮತ್ತು ರೈತ ವಿರೋಧಿ ಶಿಫಾರಸ್ಸುಗಳನ್ನು ಕೈಬಿಡಲು ಹಾಗೂ ಪರಿಸರ ಮತ್ತು ಅರಣ್ಯ ಸಚಿವಾಲಯವು ರೈತ ಸಂಘಟನೆಗಳು ಮತ್ತು ಇತರೆ ಸಂಬಂಧಿಸಿದ ಎಲ್ಲರ ಜೊತೆ ಚಚರ್ಿಸಿ ಪಶ್ಚಿಮ ಘಟ್ಟದ ಅಭಿವೃದ್ದಿಗೆ ಒಂದು ಸಮಗ್ರ ಕಾರ್ಯ ಯೋಜನೆ ರೂಪಿಸಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಆ ಪ್ರದೇಶದ ಜನತೆಯ ಮನಸ್ಸಿನಲ್ಲಿ ಅನುಮಾನ ಮತ್ತು ಅಭದ್ರತೆಯನ್ನು ಹುಟ್ಟಿ ಹಾಕಿವೆ. ಆದ್ದರಿಂದ ಆ ಅನುಮಾನಗಳನ್ನು ಹೋಗಲಾಡಿಸಲು ಹಾಗೂ  ಜೀವನದ ಭದ್ರತೆಯನ್ನು ಕಾಪಾಡುವ ಪ್ರಾಮಾಣಿಕ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ
.
     ಆಮ್ರ ರಾಂ                                                                                 ಹನನ್ ಮೊಲ್ಲಾ                
    ಅಧ್ಯಕ್ಷರು                                                                        ಪ್ರಧಾನ ಕಾರ್ಯದಶರ್ಿ

No comments:

Post a Comment