Wednesday 9 April 2014

ಸಾಹಿತ್ಯ ಮತ್ತು ಚಳುವಳಿಯನ್ನು ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡ ಮಹಿಳೆಯರು ಇಲ್ಲಿ ಸಂಧಿಸಿದ್ದಾರೆ - ಎಂ ಜಿ ಹೆಗಡೆ

ಸಾಹಿತ್ಯ ಮತ್ತು ಚಳುವಳಿಯನ್ನು ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡ 
ಮಹಿಳೆಯರು ಇಲ್ಲಿ ಸಂಧಿಸಿದ್ದಾರೆ - ಎಂ ಜಿ ಹೆಗಡೆ

'ಶೋಷಣೆಯ ಮೂರ್ತರೂಪ ಅನುಭವಿಸಿದವರು ಮತ್ತು ಮೇಲ್ಮಧ್ಯಮ ವರ್ಗಗಳ ಫಲ ಅನುಭವಿಸಿದ ಜಾಗೃತ ಮಹಿಳೆಯರು ಎನ್ನುವ ಎರಡು ಜಗತ್ತಿನ ಅನಾವರಣ ಇಲ್ಲಿ ಆಗಿದೆ; ಅವು ಪರಸ್ಪರ ಸಂಧಿಸಿವೆ. ಶೋಷಣೆಯನ್ನು ಎದುರಿಸುವ ಶಕ್ತಿಯನ್ನು ಶಿಕ್ಷಣದಿಂದ ಪಡೆದ, ಶೋಷಣೆ ಸಹಿಸಿ, ಎದುರಿಸಿದ ಮಹಿಳೆಯರು ಚಳುವಳಿಯ ಭಾಷೆಯತ್ತ ಸಾಗಿದ್ದಾರೆ. ಆದರೆ ಅವರಿಗೆ ಸಾಹಿತ್ಯಿಕ ಅಭಿವ್ಯಕ್ತಿ ಕಡಿಮೆ. ಚಳುವಳಿಯ ಅಗತ್ಯತೆಯನ್ನು ಪ್ರಶ್ನಿಸುವವರು ಈಗಾಗಲೇ ಸಮಾಜದ ಮುಖ್ಯವಾಹಿನಿಯಲ್ಲಿದ್ದವರು. ಇವರು ಸಮಾನತೆಯ ಮೌನವಾಗಿರುವುದರಿಂದಲೇ, ಬದುಕಿನ ವಾಸ್ತವವನ್ನು ನಿರಾಕರಿಸಿದ್ದರಿಂದಲೇ ಪ್ರತ್ಯೇಕವಾಗಿ ಚಿಂತಿಸುವ ಅಗತ್ಯ ಬಂದಿದೆ. ಮೊದಲ ಜನಾಂಗವೇ ಇನ್ನೂ ಶಿಕ್ಷಣ ಪಡೆಯದಿರುವಾಗ ಈಗಾಗಲೇ ಮುಂದುವರಿದ ಮಹಿಳಾ ವಿಭಾಗ ಅವರ ಜೊತೆಗೆ ಹತ್ತಿರವಾದ ಸಂಬಂಧ ಕಟ್ಟಿಕೊಳ್ಳುತ್ತಾ ಸಾಗಬೇಕಿದೆ.' ಹಾಗಾಗಿ ಸಿದ್ಧ ಉಪಮೆಗಳನ್ನು ಬದಿಗೊತ್ತಿ ನೈಜ ಬದುಕನ್ನು ಚಿತ್ರಿಸುವಲ್ಲಿ ಈ ಸಮಾವೇಶ ಉಶಸ್ವಿಯಾಗಿದೆ.' ಎಂದು ಡಾ. ಎಂ.ಜಿ.ಹೆಗಡೆ ಅವರು ಇತ್ತೀಚೆಗೆ 'ಮಹಿಳೆ ಸಾಂಸ್ಕೃತಿಕ ಅಭಿವ್ಯಕ್ತಿ' ಕುರಿತು ಚಿಂತನ ಉತ್ತರ ಕನ್ನಡ ಸಂಘಟಿಸಿದ ಉತ್ತರ ಕನ್ನಡ ಜಿಲ್ಲೆಯ ಲೇಖಕಿ, ಕಲಾವಿದೆ, ಚಿಂತಕರ ಯಶಸ್ವಿ ಸಮಾವೇಶದ ಸಮಾರೋಪ ಮಾತನಾಡುತ್ತಾ ಹೀಗೆ ಹೇಳಿದರು.

.
         ಜಿಲ್ಲೆಯ ಲೇಖಕಿ, ಕಲಾವಿದೆ, ಚಿಂತಕಿಯರ ಸಮಾವೇಶದಲ್ಲಿ ದಿನ ಪೂತರ್ಿ ನಡೆದ ಚಚರ್ೆಯು  ಲೇಖಕಿಯರ ಸಂಘವೊಂದನ್ನು ರಚಿಸುವ ಅಗತ್ಯವನ್ನು ಮನದಟ್ಟು ಮಾಡಿತು. ಇದರ ಭಾಗವಾಗಿ ರಚನೆಗೊಂಡ ಉತ್ತರ ಕನ್ನಡ ಜಿಲ್ಲಾ ಲೇಖಕಿಯರ ಸಂಘವು ಮಾಧವಿ ಭಂಡಾರಿ ಕೆರೆಕೋಣ, ಡಾ.ಎಚ್.ಎಸ್.ಅನುಪಮಾ, ವಿನಯಾ ವಕ್ಕುಂದ, ದೀಪಾ ಹಿರೇಗುತ್ತಿ, ರತ್ನಾಯ ವೆಳಿಪ್, ಸುಕನ್ಯಾ ದೇಸಾಯಿ, ಲಕ್ಷ್ಮಿ ಸಿದ್ದಿ, ರೇಣುಕಾ ರಮಾನಂದ, ಅಕ್ಷತಾ ಕೃಷ್ಣಮೂತರ್ಿ, ನುಗ್ಲಿ ಗೌಡ, ಶೈಲಜಾ ಗೋರ್ನಮನೆ, ಯಮುನಾ ಗಾಂವ್ಕರ್ ಇವರನ್ನೊಳಗೊಂಡ ಸಮಿತಿಯನ್ನು  ಆಯ್ಕೆಮಾಡಿಕೊಳ್ಳಲಾಯಿತು.

. ಚಿಂತನದ ಜಿಲ್ಲಾ ಸಂಚಾಲಕ ವಿಠ್ಠಲ ಭಂಡಾರಿ ವಂದಿಸಿದರು. ಯಮುನಾ ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು.


No comments:

Post a Comment