Tuesday 28 June 2016

ಭಾಸ್ಕರ ಮಯ್ಯ ಅವರ 4-5 ಪುಸ್ತಕಗಳು ಬಿಡುಗಡೆಗೆ ಸಿದ್ಧ



ಕುಂದಾಪುರದ ಹಿರಿಯ ಲೇಖರಾದ ಪ್ರೊ.ಭಾಸ್ಕರ ಮಯ್ಯ ಅವರ 4-5 ಪುಸ್ತಕಗಳು ಒಮ್ಮೆಲೆ ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ನಮ್ಮನ್ನೆಲ್ಲಾ ಓದಿನ ಕಡೆ ಎಳೆದವರು ಅವರು. ನಾನು ಬಿ ಎ ಯನ್ನು ಹೊನ್ನಾವರ ಕಾಲೇಜಿನಲ್ಲಿ ಓದುತ್ತಿದ್ದಾಗ SFI ಕಾರ್ಯಕರ್ತರಾಗಿದ್ದೆವು. SFI ತಾಲೂಕು ಸಮಿತಿಯಿಂದ ಸಂಘಟಿಸಲಾಗುತ್ತಿರುವ ಅಧ್ಯಯನ ಶಿಬಿರಕ್ಕೆ R K Manipal, keshava Sharma ಮತ್ತಿತರರೊಂದಿಗೆ ಬರುತ್ತಿದ್ದ ಮಯ್ಯ ಅವರು ದಿನಗಟ್ಟಲೆ ಮಾರ್ಕ್ಸವಾದದ ಕುರಿತು, ಚಾರಿತ್ರಿಕ ಭೌತವಾದದ ಕುರಿತು ಪಾಠ ಮಾಡುತ್ತಿದ್ದರು.ಅಧ್ಯಯನ ಶಿಬಿರಕ್ಕೆ ಬರುವಾಗಲೂ ಕೆಂಪಂಗಿಯನ್ನೇ ಹಾಕಿಕೊಂಡು ಬರುತ್ತಿದ್ದರು. ಮತ್ತು ಅವರ ಕೈಯಲ್ಲಿರುವ ಕರವಸ್ತ್ರವೂ ಕೆಂಪೇ ಆಗಿರುತ್ತಿದ್ದುದು ನಮಗೆಲ್ಲಾ ಇನ್ನೊಂದು ವಿಸ್ಮಯಕಾರಿ ಸಂಗತಿಯಾಗಿತ್ತು. ಕನ್ನಡ, ಇಂಗ್ಲೀಶ,ಪಾಲಿ,ಸಂಸ್ಕ್ಋತ, ಹಿಂದಿ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದ ಮಯ್ಯ ಻ವರು ಈ ಎಲ್ಲಾ ವಿಷಯದಲ್ಲಿ ಎಂ ಎ ಯನ್ನೂ ಮಾಡಿದ್ದಾರೆ.ಸದಾ ಓದಿನೊಂದಿಗೆ ನಡೆವ ಮಯ್ಯ ಅವರು ಉಳಿದವರ ಓದಿಗೂ ಸ್ಪೂರ್ತಿ ಆಗಿದ್ದಾರೆ. ಅವರ ಪುಸ್ತಕಗಳನ್ನು ಆಸಕ್ತರು ಕೊಂಡು ಓದುವ ಮೂಲಕ ಅವರನ್ನು ಗೌರವಿಸುವುದೊಳಿತು.
 

 

 

No comments:

Post a Comment