Saturday 9 August 2014

ದಾರಿ ಯಾವುದಯ್ಯ ಮಕ್ಕಳ ಸಾಹಿತ್ಯಕೆ? -M G Hegde,Kumata

.
ಪೂರ್ವ-ಪಶ್ಚಿಮ ಮುಖಾಮುಖಿಯ ಫಲಿತವಾಗಿ ಹುಟ್ಟಿದ ಮಕ್ಕಳ ಸಾಹಿತ್ಯಕ್ಕೀಗ ನೂರು ವರ್ಷ. ಇದಕ್ಕೂ ಮೊದಲು ನಮ್ಮಲ್ಲಿ ಮಕ್ಕಳ ಸಾಹಿತ್ಯ ಇರಲಿಲ್ಲವೆಂದಲ್ಲ. ಆದರೆ ಅವುಗಳ ಸ್ವರೂಪ, ಉದ್ದೇಶಗಳಿಗೂ ಇವತ್ತು ನಾವು ಯಾವುದನ್ನು ಮಕ್ಕಳ ಸಾಹಿತ್ಯವೆಂದು ಗುರುತಿಸುತ್ತೇವೆಯೋ ಅದರ ಸ್ವರೂಪ, ಉದ್ದೇಶಗಳಿಗೂ ತುಂಬ ವ್ಯತ್ಯಾಸವಿದೆ. ಮೌಖಿಕ ಪರಂಪರೆಯ ಅಸಂಖ್ಯ ಕತೆಗಳು, ಹಾಡುಗಳು ಮಕ್ಕಳನ್ನು ರಂಜಿಸಿದರೂ ಅವನ್ನು ಮಕ್ಕಳ ಸಾಹಿತ್ಯ ಎಂಬ ವಿಭಾಗದಲ್ಲಿ ಸೇರಿಸುವ ಕ್ರಮ ಇಲ್ಲ. ಪಂಚತಂತ್ರದಂತಹ ಕಥಾಗುಚ್ಛಗಳನ್ನು ಅವುಗಳ ಮೂಲರೂಪದಲ್ಲಿ 'ಮಕ್ಕಳ ಸಾಹಿತ್ಯ' ಎಂದು ಗುರುತಿಸುವ ವಾಡಿಕೆ ಇಲ್ಲ. ಮೇಲಾಗಿ ಪಂಚತಂತ್ರದಂತಹ ಕೃತಿ ಗೃಹೀತವಾಗಿಟ್ಟುಕೊಂಡಿರುವ ಮಕ್ಕಳ ಕಲ್ಪನೆ ಎಷ್ಟು ವ್ಯಾವಹಾರಿಕ ಹಾಗೂ ಅ-ಭಾವುಕವಾದದ್ದು ಎಂದರೆ ಮಕ್ಕಳೆಂದರೆ ನಾವು ಬಯಸಿದ ರೂಪ ಕೊಡಬಹುದಾದ ಮುಗ್ಧ, ವಿಧೇಯ ಹಾಗೂ ಭಾವುಕವಾದ ಸಮರೂಪದ ವರ್ಗಎಂತಲೋ, ತಿಳುವಳಿಕೆ ಹಾಗೂ ಕಲ್ಪನಾ ಸಾಮಥ್ರ್ಯ ಪರಿಮಿತವಾಗಿರುವ ಒಂದು ಅವಸ್ಥೆ ಎಂತಲೋ ಕಲ್ಪನೆ ಇಟ್ಟುಕೊಂಡಿರುವ ಆಧುನಿಕ ಮಕ್ಕಳ ಸಾಹಿತಿಗೆ ಗಾಬರಿ ಹುಟ್ಟಿಸುವಂತಹುದಾಗಿದೆ. ಅಂದರೆ, ಶ್ರೀಮಂತವಾದ ಮೌಖಿಕ ಪರಂಪರೆಯ ಕತೆ ಹಾಗೂ ಹಾಡುಗಳಿಂದಾಗಿ, ಪಂಚತಂತ್ರದಂತಹ ಮಾಗರ್ೀಯ ಕೃತಿಗಳಿಂದಾಗಿ ಹಾಗೂ ನಮ್ಮ ಗುಹೆ ದೇಗುಲಗಳ ಚಿತ್ರಕಥಾ ಮಾಲಿಕೆಗಳಿಂದಾಗಿ ಮಕ್ಕಳ ಸಾಹಿತ್ಯದ ತೊಟ್ಟಿಲು ಎನ್ನಬಹುದಾದ ದೇಶದಲ್ಲಿ ಪೂರ್ವ-ಪಶ್ಚಿಮ ಮುಖಾಮುಖಿಯ ಫಲಿತವಾಗಿ ಒಳಬಂದ ಹೊಸ ಶಿಕ್ಷಣ ನೀತಿ ಹಾಗೂ ಮಕ್ಕಳ ಪರಿಕಲ್ಪನೆಯಿಂದಾಗಿ ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ಹೊಣೆಗಾರಿಕೆಯನ್ನು ನಾವು ಸಂಪೂರ್ಣವಾಗಿ ಹೊಸ ಶಿಕ್ಷಣ ಸಂಸ್ಥೆಗೆ ವಹಿಸಿಕೊಟ್ಟ ಕಾರಣದಿಂದಾಗಿ 'ಮಕ್ಕಳ ಸಾಹಿತ್ಯ' ಹೊಸದಾಗಿ ಹುಟ್ಟಬೇಕಾಯಿತು. ನಮ್ಮ ಹೊಸಕಾಲದ ಮಕ್ಕಳ ಸಾಹಿತ್ಯದ ಉಗಮ ಪಠ್ಯಾವಳಿಗಳು, ವಾಚಿಕೆಗಳು ಹಾಗೂ ಬಾಲಬೋಧೆಗಳಲ್ಲಿ ಕಂಡುಬರುವುದು ಮಿಶನರಿಗಳು ಶಿಕ್ಷಣದ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಂಡ ದಕ್ಷಿಣ ಕನ್ನಡದಲ್ಲೆ. ಮಕ್ಕಳ ಸಾಹಿತ್ಯದ ಮೊದಲಿಗರು ಕಂಡುಬರುವುದು ಹಾಗೂ ಸಾಹಿತ್ಯದ ನಿಮರ್ಾತೃಗಳಲ್ಲಿ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳೇ ಹೆಚ್ಚಾಗಿರುವುದು ಹೊಸ ಶಿಕ್ಷಣ ಕ್ರಮಕ್ಕೂ ಹೊಸ ಕಾಲದ ಮಕ್ಕಳ ಸಾಹಿತ್ಯಕ್ಕೂ ಇರುವ ನಂಟಿನ ಸೂಚಕವಾಗಿದೆ. ಈ ಸಾಹಿತ್ಯವು ಗೃಹೀತವಾಗಿಟ್ಟುಕೊಂಡಿರುವ ಮಕ್ಕಳ ಕಲ್ಪನೆ ಹಾಗೂ ಕಲಿಕಾ ಪ್ರಕ್ರಿಯೆಯ ಕಲ್ಪನೆ ಕೂಡ ವಸಾಹತುಶಾಹಿ ಪ್ರಣೀತ ಶಿಕ್ಷಣ ನೀತಿಗೆ ಋಣಿಯಾಗಿದೆ.

ಮಕ್ಕಳಿಗೆ ಭವಿಷ್ಯದಲ್ಲಿ ಉಪಯುಕ್ತವಾಗಬಹುದಾದದ್ದನ್ನಷ್ಟೇ ಕಲಿಸಬೇಕೆಂಬುದು ಈ ಶಿಕ್ಷಣ ನೀತಿಯ ಒಂದು ಮುಖ್ಯ ತತ್ತ್ವವಾಗಿದೆ. ಹೀಗಾಗಿ, ಮಕ್ಕಳಿಗೆ ಯಾವುದೆಲ್ಲ 'ಉಪಯುಕ್ತ' ಎಂದು ಮೊದಲು ನಿರ್ಧರಿಸಬೇಕಾಗುತ್ತದೆ ಹಾಗೂ ಇದನ್ನು ನಿರ್ಧರಿಸುವ ಅಧಿಕಾರವನ್ನು ಶಿಕ್ಷಣ ನೀಡುವ ಸಂಸ್ಥೆ ಅಥವಾ ಸರಕಾರವೇ ಕಾದಿರಿಸಿಕೊಂಡಿರುತ್ತದೆ. ಇಂತಹ 'ಉಪಯೋಗವಾದಿ ದೃಷ್ಟಿಕೋನ'ದ ಹಿಂದೆ ಮಕ್ಕಳು ಹಾಗೂ ಕಲಿಕಾ ಪ್ರಕ್ರಿಯೆಯ ಕುರಿತು ಕೆಲವು ಗೃಹಿತಗಳಿವೆ: ಇಂದಿನ ಮಕ್ಕಳೇ ನಾಳಿನ ನಾಗರಿಕರು; ಅವರು ಹೀಗೆಯೇ ಬೆಳೆಯಬೇಕು, ಬದುಕಬೇಕು; ಅದಕ್ಕಾಗಿ ನಿದರ್ಿಷ್ಟ ಕೌಶಲಗಳನ್ನು ನಿದರ್ಿಷ್ಟ ಕ್ರಮದಲ್ಲಿ ಕಲಿಯಬೇಕು, ಇತ್ಯಾದಿ. ಈ ದೃಷ್ಟಿಕೋನದ ಪ್ರಕಾರ ಮಕ್ಕಳೆಂದರೆ ನಾವು ಮೆತ್ತಿ, ಒತ್ತಿ, ಕೆತ್ತಿ, ತಿದ್ದಿ, ತೀಡಿ ಆಕಾರ ಕೊಡಬಹುದಾದ, ಸ್ವಂತವಾದದ್ದು ಸ್ವಾಜರ್ಿತವಾದದ್ದು ಏನೂ ಇಲ್ಲದ, ಚರಿತ್ರೆ ಇಲ್ಲದ ಮಣ್ಣಿನ ಮುದ್ದೆ. ಮಕ್ಕಳು ಏನನ್ನು ಕಲಿಯಲು ಸಾಧ್ಯವಿದೆಯೋ ಅದನ್ನಷ್ಟೇ ಕಲಿಸಬೇಕು ಎಂಬುದು ಹೊಸ ಶಿಕ್ಷಣ ನೀತಿಯ ಇನ್ನೊಂದು ತತ್ವವಾಗಿದೆ. ಈ 'ವ್ಯಾವಹಾರಿಕ ದೃಷ್ಟಿಕೋನ'ದ ಹಿಂದೆ ಮಕ್ಕಳೆಂದರೆ ಜ್ಞಾನ, ತಿಳಿವಳಿಕೆ, ಭಾಷಾ ಸಾಮಥ್ರ್ಯ, ಕಲ್ಪನಾ ಸಾಮಥ್ರ್ಯ ಹಾಗೂ ಆಸಕ್ತಿಯ ವ್ಯಾಪ್ತಿ ಪರಿಮಿತವಾಗಿರುವ ಹಾಗೂ ಈ ಪರಿಮಿತಿಗನುಗುಣವಾಗಿ ಹಂತಹಂತವಾಗಿ ಹನಿಹನಿಯಾಗಿ ಕೊಟ್ಟದ್ದನ್ನಷ್ಟೇ ದಕ್ಕಿಸಿಕೊಳ್ಳಬಲ್ಲ ಒಂದು ಅವಸ್ಥೆ. ಹೀಗೆ ಉಪಯುಕ್ತವಾದದ್ದನ್ನು ಹಿತಮಿತವಾಗಿ ಕೊಡಬೇಕು ಎಂಬ ವಸಾಹತುಶಾಹಿ ಪ್ರಣೀತ ಹೊಸ ಶಿಕ್ಷಣ ನೀತಿಯ ಮಕ್ಕಳಿಂದ ಶಿಸ್ತು, ವಿಧೇಯತೆ, ವಿನಮ್ರತೆಯನ್ನು ಬಯಸಿದರೆ, ಶಿಕ್ಷಕರು ಹಾಗೂ ಪಾಲಕರಿಂದ ನಿರಂತರ ಕಣ್ಗಾವಲನ್ನು ನಿರೀಕ್ಷಿಸುತ್ತದೆ. ಮಕ್ಕಳ ಶಿಕ್ಷಣವೆಂಬ ಬೃಹತ್ ಯೋಜನೆಯ ಅಂಗಸಂಸ್ಥೆಯಾಗಿ ಹುಟ್ಟಿದ ಮಕ್ಕಳ ಸಾಹಿತ್ಯ ಒಂದೆಡೆಯಲ್ಲಿ ಮಕ್ಕಳಲ್ಲಿ ವಿನಮ್ರತೆಯನ್ನು ರೂಢಿಸುವ ಹಾಗೂ ಇನ್ನೊಂದೆಡೆಯಲ್ಲಿ 'ಸೂಕ್ತ' ಅತ್ಯುತ್ತಮ ಎಂದು ಸ್ವೀಕೃತವಾದ ಮೌಲ್ಯಗಳನ್ನು ಒಳತುಂಬುವ ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಮಕ್ಕಳೆಂದರೆ ಚರಿತ್ರಾತೀತವಾದ, ಮುಗ್ಧ, ಸರಳ, ಭಾವುಕ ಸ್ಥಿತಿ ಎಂಬ ನೆಲೆಯಿಂದ ಹೊರಡುವ ಮಕ್ಕಳ ಸಾಹಿತ್ಯದಲ್ಲಿ ಯಾವುದೆಲ್ಲ 'ಸೂಕ್ತ' ಮೌಲ್ಯಗಳು ಎಂಬುದು ರಾಜಕೀಯ ನಿಸ್ಸಂಗಿಯಾದ ತ್ರಿಕಾಲ ಸತ್ಯವೆಂಬ ಭ್ರಮೆಯೂ, ಮಕ್ಕಳು ಸದಾ ವಿಧೇಯರಾಗಿರಬೇಕೆಂಬ, ಪ್ರಶ್ನೆಗಳನ್ನು ಕೇಳಿದರೂ 'ಸರಿಯಾದ' ಪ್ರಶ್ನೆಗಳನ್ನೇ ಕೇಳಬೇಕೆಂಬ ಮಧ್ಯಮ ವರ್ಗದ ಆತಂಕವೂ ಸೇರಿಕೊಂಡು ರಮ್ಯ ಜಗತ್ತೊಂದು ಸೃಷ್ಟಿಯಾಗುತ್ತದೆ.

ಇಲ್ಲಿಯೇ 'ಮಕ್ಕಳ ಸಾಹಿತ್ಯ' ಎಂಬ ವಗರ್ೀಕರಣದ ಒಂದು ವೈಶಿಷ್ಟ್ಯವನ್ನು ಗಮನಿಸಬೇಕು. ಸಾಹಿತ್ಯವನ್ನು ಅದರ ತಾತ್ವಿಕ ನಿಲುವನ್ನೋ (ನವ್ಯ, ನವೋದಯ, ಬಂಡಾಯ ಇತ್ಯಾದಿ) ಕೃತಿಯ ಪ್ರಕಾರವನ್ನೋ (ಗದ್ಯ, ಪದ್ಯ, ನಾಟಕ), ಕೃತಿ ರಚನೆಯ ಕಾಲವನ್ನೋ (ಪ್ರಾಚೀನ, ಆಧುನಿಕ, 20ನೇ ಶತಮಾನದ ಸಾಹಿತ್ಯ), ಕೃತಿಕಾರನನ್ನೋ (ಮಹಿಳಾ ಸಾಹಿತ್ಯ, ದಲಿತ ಸಾಹಿತ್ಯ ಇತ್ಯಾದಿ) ಲಕ್ಷ್ಯದಲ್ಲಿಟ್ಟುಕೊಂಡು ವಿಭಜಿಸಿ ಅಭ್ಯಾಸ ಮಾಡುವ ಕ್ರಮವಿದೆಯಾದರೂ, ವಾಚಕ ವರ್ಗವನ್ನು ಲಕ್ಷ್ಯದಲ್ಲಿಟ್ಟುಕೊಂಡು ಮಾಡಿದ ವಗರ್ೀಕರಣ 'ಮಕ್ಕಳ ಸಾಹಿತ್ಯ'ವನ್ನು ಬಿಟ್ಟರೆ ಸಾಹಿತ್ಯ ವಿಮಶರ್ೆಯಲ್ಲಿ ಇನ್ನೊಂದಿಲ್ಲ. ಯಾವುದೇ ಸಾಹಿತ್ಯ ಕೃತಿಯಾದರೂ, ತನ್ನ ವಾಚಕರು ಯಾರು ಎಂಬ ಕುರಿತು ಕೆಲವು ಗೃಹೀತಗಳನ್ನು ಇಟ್ಟುಕೊಂಡೇ ಹೊರಟಿರುತ್ತದೆ. ಆದರೆ ಈ ಗೃಹೀತಗಳೇ ಆ ಸಾಹಿತ್ಯದ ಭಾಷೆ, ವಸ್ತು ಹಾಗೂ ನಿಲುವಿನ ಆಯ್ಕೆಯನ್ನು, ಅದರ ಒಟ್ಟೂ ಚಹರೆಯನ್ನು ನಿಯಂತ್ರಿಸುವ ಶಕ್ತಿಯಾಗಿರುವುದು ಮಕ್ಕಳ ಸಾಹಿತ್ಯದಲ್ಲಿ ಮಾತ್ರ. ಹೀಗಾಗಿ ಮಕ್ಕಳ ಸಾಹಿತ್ಯದಲ್ಲಿ ಆ ಸಾಹಿತ್ಯವು ಗೃಹೀತವಾಗಿ ಇಟ್ಟುಕೊಂಡಿರುವ ಮಕ್ಕಳ ಪರಿಕಲ್ಪನೆಯಲ್ಲಿ ಮೂಲಭೂತ ಅಥವಾ ಕ್ರಾಂತಿಕಾರಿ ಬದಲಾವಣೆ ಆಗದೆ ಹೊಸ ಪ್ರವೃತ್ತಿಗಳು ಕಾಣಿಸಿಕೊಳ್ಳುವುದು ಅಸಾದ್ಯ. 19ನೇಯ ಶತಮಾನದ ಮಧ್ಯಭಾಗದಲ್ಲಿ ಪಶ್ಚಿಮದ ಸಂಪರ್ಕದಿಂದಾಗಿ ಒಳಬಂದ ಹೊಸ ಶಿಕ್ಷಣ ನೀತಿಯಿಂದ ನಮ್ಮಲ್ಲಿ ಅಂತಹುದೊಂದು ಕ್ರಾಂತಿಕಾರಿ ಬದಲಾವಣೆ ಕಂಡುಬಂದಿತು; ಮಕ್ಕಳ ಪರಿಕಲ್ಪನೆ ಬದಲಾಯಿತು. ಹೀಗಾಗಿ ಮಕ್ಕಳ ಸಾಹಿತ್ಯವೂ ಹೊಸ ಸ್ವರೂಪವನ್ನು ಪಡೆಯಿತು. ಆ ನಂತರದಲ್ಲಿ (ಸ್ವಾತಂತ್ರ್ಯ ಬಂದರೂ ಸಹಾ) ನಮ್ಮ ಶಿಕ್ಷಣ ನೀತಿಯಲ್ಲಾಗಲಿ, ಮಕ್ಕಳು ಹಾಗೂ ಕಲಿಕಾ ಪ್ರಕ್ರಿಯೆಯ ಪರಿಕಲ್ಪನೆಯಲ್ಲಾಗಲಿ ಮೂಲಭೂತ ಬದಲಾವಣೆ ಆಗಿಯೇ ಇಲ್ಲ. ಹೀಗಾಗಿ ಮಕ್ಕಳ ಸಾಹಿತ್ಯದ ಮೂಲ ಸ್ವರೂಪವೂ ಬದಲಾಗಿಲ್ಲ. ಇವತ್ತಿಗೂ 'ಶೈಕ್ಷಣಿಕ' ಎನ್ನಬಹುದಾದ ಉದ್ದೇಶವೇ ಅದನ್ನು ನಿಯಂತ್ರಿಸುತ್ತದೆ. ಅದು ಈ ತಳಿಯ 'ಸ್ವ-ಭಾವವೇ' ಆಗಿದೆ. ಪಂಜೆ, ಪುಟ್ಟಣ್ಣ, ಕುವೆಂಪು, ರಾಜರತ್ನಂ, ಹೊಯಿಸಳ ಮೊದಲಾದ ಹಿರಿಯರ ಗ್ರಹಿಕೆಯೇ ಇಂದಿನ ಮಕ್ಕಳ ಸಾಹಿತಿಗಳದೂ ಆಗಿದೆ. ಪ್ರಾದೇಶಿಕ ನುಡಿಗಟ್ಟಿನ ಬಳಕೆಯಲ್ಲೋ, ನೀತಿಯ ತಲೆಭಾರದಲ್ಲೋ ಚಿಕ್ಕಪುಟ್ಟ ಬದಲಾವಣೆ ಆಗಾಗ್ಗೆ ಕಂಡುಬಂದಿರಬಹುದು. ಆದರೆ ಈ ಬರಹಗಳ ಹಿಂದಿನ ದೃಷ್ಟಿಕೋನದಲ್ಲಿ ಮಕ್ಕಳ ಪರಿಕಲ್ಪನೆಯಲ್ಲಿ ಕಳೆದ ನೂರೈವತ್ತು ವರ್ಷಗಳಲ್ಲಿ ಬದಲಾವಣೆಯೂ ಆಗಿಲ್ಲ. ಅಂದರೆ ಮಕ್ಕಳ ಸಾಹಿತ್ಯ ನಿಂತ ನೀರಾಗಿದೆ.

ಕನ್ನಡದ ಯಾವುದೇ ಪ್ರಾತಿನಿಧಿಕ ಮಕ್ಕಳ ಸಾಹಿತ್ಯ ಸಂಕಲವನ್ನು ನೋಡಿದರೂ ಅದರಲ್ಲಿ ಸೇರಿರುವ ಬಹುತೇಕ ರಚನೆಗಳು ನವೋದಯ ಕಾಲದವು. 'ಪಾತರಗಿತ್ತಿ ಪಕ್ಕ' ದಂತಹ ಮಕ್ಕಳಿಗಾಗಿ ಎಂತಲೇ ಬರೆದಿರುವ ರಚನೆಗಳನ್ನು ಕೈಬಿಟ್ಟರೂ ನಾವು 'ಅತ್ಯುತ್ತಮ' ಎಂದು ಹೇಳಬಹುದಾದ ಬಹುತೇಕ ಕೃತಿಗಳು ನವೋದಯದ ಹಿರಿಯರು ರಚಿಸಿದ್ದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಅವರಿಗೆ 'ಮಕ್ಕಳ ಸಾಹಿತ್ಯ' ಎನ್ನುವ ಪ್ರಕಾರ, ಅದರ ಪರಿಕಲ್ಪನೆಗಳು ಹೊಸದಾಗಿ ದೊರಕಿದ್ದವು. ಅವರು ಒಳ್ಳೆಯ ಸಾಹಿತಿಗಳೂ ಆಗಿದ್ದದರಿಂದ ಆ ಪ್ರಕಾರದ ಸಾಧ್ಯತೆಗಳನ್ನೆಲ್ಲಾ ಶೋಧಿಸಿ ಅತ್ಯುತ್ತಮ ಬರಹಗಳನ್ನು ನೀಡಿದರು. ಅವರ ನಂತರದಲ್ಲಿ ಬಂದವೆಲ್ಲ ಅವರಿಂದ ಪ್ರಭಾವಿತವಾದ, ಅವರನ್ನು ಅನುಕರಿಸಿದ ರಚನೆಗಳೇ. ನಮ್ಮ ದೈನಿಕ, ಸಾಪ್ತಾಹಿಕ, ಮಾಸಿಕ ಪತ್ರಿಕೆಗಳ ಮಕ್ಕಳ ಪುಟಗಳಲ್ಲಿ, ಮಕ್ಕಳಿಗಾಗಿಯೇ ಇರುವ ಪತ್ರಿಕೆಗಳಲ್ಲಿ, ಕಣ್ಣಾಡಿಸಿದರೆ ಈ ಕ್ಷೇತ್ರದಲ್ಲಿ ಬೆಳೆಗಿಂತ ಗೊಬ್ಬರವೇ ಹೆಚ್ಚಾಗಿರುವುದು ಗಮನಕ್ಕೆ ಬರುತ್ತದೆ. ಅಜ್ಜನ ಕೋಲಿನ ಜಾಗೆಯಲ್ಲಿ ಅಜ್ಜಿಯ ಗೆಜ್ಜೆಯನ್ನೂ, ಕಾಗೆಯೊಂದು ಹಾರಿಬಂದು ಕುಳಿತಿರುವಲ್ಲಿ ಬೆಕ್ಕು ಒಂದು ಓಡಿಬಂದು ಕುಳಿತಿರುವುದನ್ನೂ ನೋಡುವಾಗ ಖೇದವೆನಿಸುತ್ತದೆ. ಸ್ವೋಪಜ್ಞವಲ್ಲದ ಇಂತಹ ರಚನೆಗಳು ಮಕ್ಕಳ ಸಾಹಿತ್ಯ ಹಾಗೂ ಹೀಗೂ ಬದುಕಿರುವಂತೆ ನೋಡಿಕೊಳ್ಳುತ್ತವೆಯಷ್ಟೇ. ಇವು ಉಳಿಸುವ, ಬೆಳೆಸುವ ರಚನೆಗಳಲ್ಲ.

ಹಾಗಾದರೆ ಕನ್ನಡ ಮಕ್ಕಳ ಸಾಹಿತ್ಯಕ್ಕೆ ದಾರಿ ಯಾವುದು? ಮೊದಲಿಗೆ ಮಕ್ಕಳ ಸಾಹಿತ್ಯ ವಿಮಶರ್ೆ ಬೆಳೆಯಬೇಕು. ಈ ಸಾಹಿತ್ಯ ವಿಮಶರ್ೆಗೆ ಸಂಪ್ರದಾಯವಿಲ್ಲ. ಅದರ ಪರಿಭಾಷೆಯಾಗಲಿ, ಮಾನದಂಡವಾಗಲಿ, ಇನ್ನೂ ದೊರಕಿಲ್ಲ. ಬೆನ್ನು ತಟ್ಟುವ ಧಾಟಿ-ಧೋರಣೆಯನ್ನು ಬಿಟ್ಟು ಅದು ಮುಂದೆ ಹೋಗಿಲ್ಲ. ಇನ್ನೊಂದು ಕೆಲಸವೆಂದರೆ, ನೂರು ವರ್ಷಗಳ ಈ ಸಾಹಿತ್ಯದಲ್ಲಿ ಮುಖ್ಯ ಪ್ರವಾಹಕ್ಕೆ ಹೊರತಾದ ಮಾದರಿಗಳನ್ನು, ಮಾಗರ್ಾಂತರವೆಂದರೆ ವಿ.ಜಿ. ಭಟ್ಟರದು. ಭಟ್ಟರು ಕಟ್ಟಿಕೊಂಡ ಮಕ್ಕಳ ಪರಿಕಲ್ಪನೆ ಕನ್ನಡ ಮಕ್ಕಳ ಸಾಹಿತ್ಯದ ಪ್ರಧಾನವಾಹಿನಿಗಿಂತ ತೀರ ಭಿನ್ನವಾದದ್ದು. ಅದಕ್ಕೆ ಹೋಲಿಕೆ ಇದ್ದರೆ ಪಂಚತಂತ್ರದ ವಿಷ್ಣುಶರ್ಮನ ಶ್ರೋತೃಗಳಲ್ಲಿ ಮಾತ್ರ. ಆದರೆ ಪ್ರಭುತ್ವ ವಿರೋಧಿ ನಿಲುವಿನಿಂದಾಗಿ ಭಟ್ಟರು ವಿಷ್ಣುಶರ್ಮನಿಗಿಂತ ಭಿನ್ನರಾಗಿದ್ದಾರೆ. ಇದೇ ರೀತಿ ವೆಂಕಟೇಶಮೂತರ್ಿಯವರು ಸಹ ವಿಭಿನ್ನ ಮಾದರಿಯೊಂದನ್ನು ರೂಪಿಸುತ್ತಿದ್ದಾರೆ. ಕನ್ನಡ ಮಕ್ಕಳ ಸಾಹಿತ್ಯ ಹೊಸದಾರಿಯನ್ನು ತುಳಿಯುವವರೆಗೂ ವಿ.ಜಿ. ಭಟ್ಟರ ತುಂಟ ಪ್ರಶ್ನೆ ಉಳಿದೇ ಇರುತ್ತದೆ.

ಕತ್ತಲೆ ಕೋಣೆಗೆ ಬೆಳಕನು ತಂದರೆ
ಕತ್ತಲೆಯೆಲ್ಲೋ ಓಡುವದು
ಬೆಳಕಿನ ಬಯಲಿಗೆ ಕತ್ತಲೆ ಬಂದರೆ
ಬೆಳಕಾದರು ಏನ್ ಮಾಡುವುದು?
                                                                                                                                     ಅಗಸ್ಟ್ 2001

No comments:

Post a Comment