Thursday 30 October 2014

ವಿಡಂಬಾರಿ ಅವರ ಪ್ರಕಟಿತ ಪುಸ್ತಕದ ಕುರಿತು………


Standard
vidambari
ವಿಡಂಬಾರಿ
ಒಗ್ಗರಣೆ ಕುರಿತು ಡಾ. ಶಾಲಿನಿ ರಘುನಾಥ
ವ್ಯಾಪಕವಾದ ರೀತಿಯಲ್ಲಿ ಚುಟುಕು ಸಾಹಿತ್ಯ ಪ್ರಕಾರವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡ ಜನಪ್ರಿಯ ಕವಿಗಳಲ್ಲಿ ದಿನಕರ ದೇಸಾಯಿಯವರನ್ನು ಬಿಟ್ಟರೆ, ವಿಡಂಬಾರಿಯವರ ಹೆಸರು ವಿಶೇಷವಾಗಿ ಕೇಳಿ ಬರುತ್ತಿದೆ. ಅವರು ಈಗಾಗಲೇ 2000 ಕ್ಕೂ ಹೆಚ್ಚು ಚುಟುಕುಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮೊದಲ ಕಂತಾಗಿ 500 ಚುಟುಕುಗಳ ಒಗ್ಗರಣೆ ಸಂಕಲನ ಹೊರಬಂದಿದೆ. ಈ ಕವಿ ಶಾಲೆಗೆ ಹೋಗಿ ಕಲಿತದ್ದು ವಿಶೇಷವಲ್ಲದಿದ್ದರೂ ಬದುಕಿನಿಂದ ಕಲಿತದ್ದು ಅಪಾರ. ಇದನ್ನು ನಾವು ಅವರ ಚುಟುಕುಗಳಿಂದಲೇ ಅರಿಯಬಹುದು. ಶೋಷಣೆಗೆ ಒಳಗಾದ ನಿಮ್ಮ ವರ್ಗದ ಕವಿಯ ಆಕ್ರಂದನವನ್ನೂ ಆಂತಕವನ್ನೂ ಅವರ ಚೌಪದಿಗಳಲ್ಲಿ ನಾವು ಕಾಣುತ್ತೇವೆ.
ಇದ್ದವರು ಬರೆಬರೆದು ಮುದ್ರಣವ ಮಾಡಿ
ಸದ್ದು ಗದ್ದಲದಿಂದ ಹಂಚುವರು ನೋಡಿ
ನಾನೇನ ಮಾಡುವೆನು ಬಡ ಬೋರೆಗೌಡ
ಮೂಲೆಯಲಿ ಕುಳಿತಲ್ಲೆ ಹಾಡುವೆನು ಹಾಡ (ಬೋರೆಗೌಡ)
– ಎಂದು ಪ್ರಾರಂಭದಲ್ಲಿಯೇ ನಿವೇದಿಸಿಕೊಳ್ಳುತ್ತಾರೆ.
ಚುಟುಕಗಳನ್ನು ಬರೆಯಲಿಕ್ಕೆ ಸ್ಫೂತರ್ಿ ದಿನಕರ ದೇಸಾಯಿಯವರೇ ಆದರೂ ತಮ್ಮತನವನ್ನು ಉಳಿಸಿಕೊಂಡಿರುವೆನೆಂಬ ಆತ್ಮ ವಿಶ್ವಾಸವು ಅವರಿಗಿದೆ.
ಚೌಪದಿಗೆ ಜನಕನೇ ದಿನಕರನು ನೋಡಿ
ಬರೆಯುವೆನು ದಿನಕರನ ಸ್ಮರಣೆಯನು ಮಾಡಿ
ಆದರೂ ಇನ್ನೊಂದು ಮಾತುಂಟು ಕೇಳಿ
ತುಂಬಿಹೆನು ಇದರೊಳಗೆ ನನ್ನದೇ ಗಾಳಿ (ಸ್ಮರಣೆ)
ಆತ್ಮೀಯತೆ, ತಿಳಿಯಾದ ಆತ್ಮ ವಿಮಶರ್ೆ, ಹರಿತವಾದ ವಿಡಂಬನೆ ಇವೆಲ್ಲ ಒಗ್ಗರಣೆಯ ಚುಟುಕುಗಳಲ್ಲಿವೆ. ಈ ವಿಷಯದಲ್ಲಿ ಕವಿಯ ಪ್ರಾಮಾಣಿಕತೆ ಧೈರ್ಯ ಮೆಚ್ಚುವಂತಹದೇ. ತಮ್ಮ ಹೆಸರನ್ನೇ ವಿಡಂಬಿಸಿಕೊಂಡವರು ಅವರು! ಸಾಮಾಜಿಕ ವಿಷಮತೆ ಅನ್ಯಾಯಗಳನ್ನು ಕಂಡಾಗ ಮನ ಕುದಿ ಕುದಿದು ಸಿಡಿದುಕ್ಕಿ ಹೊರಚೆಲ್ಲಿದ ಪರಿಣಾಮ, ಕೆಲವು ಚುಟುಕುಗಳು; ಮತ್ತೆ ಕೆಲವಂತೂ ಯಾವ ಮುಲಾಜಿಲ್ಲದೆ ಕೆತ್ತುರುಳಿಸುವ ಬುಲ್ಡೋಜರ್ ಗಾಡಿಗಳು. ಒಟ್ಟಿನಲ್ಲಿ ನಮ್ಮ ಸಮಾಜದಲ್ಲಿ ತಾವು ಕಂಡುದನ್ನು ಅವರು ಬರೆದಿದ್ದಾರೆ; ಬರೆದು ತೊಡಕಿನಲ್ಲಿ ಸಿಲುಕಿಸಿಕೊಂಡಿದ್ದಾರೆ; ಆದರೆ ತೊಡಕು ಹೆಚ್ಚಾಯಿತೆಂದು ಬರೆಯುವ ಹುಚ್ಚನ್ನು ಮಾತ್ರ ಬಿಟ್ಟಿಲ್ಲವಾದ್ದರಿಂದಲೇ ಅವರು ಮಹತ್ವದ ಕವಿಯೆನಿಸುತ್ತಾರೆ.
ಒಗ್ಗರಣೆಯಲ್ಲಿ ಪ್ರಸ್ತಾವನೆ, ವ್ಯಕ್ತಿಗತ, ಜಾತಿ, ರಾಜಕೀಯ, ಕಾಳ ಸಂತೆ, ಸಂಕೀರ್ಣ ಎಂಬ ಆರು ವಿಭಾಗಗಳನ್ನು ಮಾಡಿದ್ದರೂ ಕೊನೆಯ ಸಂಕೀರ್ಣದಲ್ಲಿ ಉಳಿದ ಐದುಬಗೆಯ ವಿಭಾಗಗಳಿಗೆ ಸೇರಬಹುದಾದ ಚುಟುಕುಗಳಿವೆ. ಸಂಪಾದನಾಕಾರ್ಯದಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಿದ್ದರೆ, ಸಮರ್ಪಕತೆಯ ಪ್ರಮಾಣವನ್ನು ಏರಿಸಲು ಸಾಧ್ಯವಾಗುತ್ತಿತ್ತು. ಜೊತೆಗೆ ಕೆಲವು ಚುಟುಕುಗಳ ಹಾಗೂ ಚುಟುಕುಗಳ ತಲೆಬರಹಗಳ ಪುನರುಕ್ತಿಗಳನ್ನೂ ತಪ್ಪಿಸಬಹುದಿತ್ತು. ಇದರಿಂದ ಒಗ್ಗರಣೆ ಹೆಚ್ಚು ವ್ಯವಸ್ಥಿತವಾಗುತ್ತಿತ್ತು. ಇಷ್ಟಾದರೂ ತಮ್ಮ ಸುತ್ತಲಿನ ಸಮಾಜದ ನಿತ್ಯದ ಆಗುಹೋಗುಗಳಿಗೆ ಜೀವಂತವಾಗಿ ಹಾಗೂ ಸತ್ವಯುತವಾಗಿ ಪ್ರತಿಕ್ರಿಯಿಸುತ್ತಿರುವ ವಿಡಂಬಾರಿಯವರು ತಮ್ಮ ಒಗ್ಗರಣೆಯ ಕಂಪಿನಿಂದ ಸಹೃದಯರನ್ನು ದೂರದಿಂದಲೇ ಆಕರ್ಷಿಸುತ್ತಾರೆ.
(ಸೌಜನ್ಯ : ಗ್ರಂಥಲೋಕ)
@@@@@@@@@@@@
???????????????????????????????
ವಿಡಂಬಾರಿ
ವಿಡಂಬಾರಿ ಅವರ “ಕವಳ” 
ಡಾ. ಪುರುಷೋತ್ತಮ ಬಿಳಿಮಲೆ
ದಿನಕರ ದೇಸಾಯಿಯವರ ಅನಂತರ ಚೌಪದಿಗಳ ಕಾಲ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇದೀಗ ವಿಡಂಬಾರಿಯವರು ಕವಳದ ಮೂಲಕ ಆ ಮಾತನ್ನು ಸುಳ್ಳಾಗಿಸಿದ್ದಾರೆ. ಚೌಪದಿಗಳಿಗೆ ಉತ್ತರ ಕನ್ನಡ ಇನ್ನೂ ಫಲವತ್ತಾದ ಭೂಮಿಯಾಗಿದೆ ಎಂಬುದಕ್ಕೆ ಇದೊಂದು ದೃಷ್ಟಾಂತ.
ಚೌಪದಿಗಳ ಪ್ರಧಾನ ಗುಣ ಎರಡು. ಮೊದಲನೆಯದಾಗಿ ಮಿತವಾದ ಮಾತುಗಳಲ್ಲಿ ಗಂಭೀರವಾದ ಅರ್ಥವನ್ನು ಹಿಡಿದಿಡುವುದು ಮತ್ತು ಎರಡನೆಯದಾಗಿ ಚೌಪದಿಯ ಕೊನೆ ಸಾಲಿನಲ್ಲಿ ಮಾಮರ್ಿಕವಾದ ತಿರುವೊಂದನ್ನು ತುಂದಿರುವುದು. ಈ ಕೊನೆಯ ಸಾಲು ಅನೇಕ ಬಾರಿ ವಿಡಂಬನಾ ಪ್ರಧಾನವಾಗಿದ್ದು, ಅದಕ್ಕಿಂತ ಮೊದಲಿನ ಮೂರು ಸಾಲುಗಳಿಗೆ ಹೊಸ ಅರ್ಥವನ್ನು ಕೊಡುವಷ್ಟು ಸಶಕ್ತವಾಗಿರುವುದು. ದೇಸಾಯಿಯವರು ಈ ಎರಡನೆಯ ಗುಣವನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದರು. ಕನ್ನಡದ ತ್ರಿಪದಿಗಳ ಸಾರ್ವಭೌಮನಾದ ಸರ್ವಜ್ಞನು ಮೊದಲನೇ ಗುಣಕ್ಕೆ ಹೆಸರಾದವನು.
ವಿಡಂಬಾರಿಯವರು, ಅವರ ಕಾವ್ಯನಾಮದಂತೆ, ವಿಡಂಬನೆಯಲ್ಲಿ ಪ್ರಸಿದ್ಧರು. ಇದು ಚೌಪದಿಯ ಕೊನೆ ಸಾಲಿನಲ್ಲಿ ಬರುತ್ತಿದ್ದದ್ದು, ಇವರಲ್ಲಿ ಆರಂಭದಲ್ಲಿ ಬಂದು ಬಿಡುತ್ತದೆ.
ಉದಾ : ಕನರ್ಾಟಕ ರಾಜ್ಯ ಸೋರಿಗೆಯ ಗಾಡಿ
ಗುರಿಯ ಮುಟ್ಟುವುದುಂಟೆ ಒಂದು ಕಡೆ ಓಡಿ
ಪ್ರಯಾಣಿಕರ ಮಾತ್ರ ಬೋಳಿಸುವ ದಾರಿ
ಚೆನ್ನಾಗಿ ಗೊತ್ತುಂಟು ಮಿತಿಯನ್ನು ಮೀರಿ. (337)
ಇಲ್ಲೂ ಮೊದಲ ಸಾಲಿನಲ್ಲಿ ಬರುವ ರಾಜ್ಯ ಸೋರಿಗೆ ಎಂಬುದು ವಿಡಂಬನೆಗಾಗಿಯೇ ಬಂದಿದೆ. ಚೌಪದಿಯ ಮುಂದಿನ ಸಾಲುಗಳು ಇದನ್ನು ಮೀರಿ ಬೆಳೆಯುವುದಿಲ್ಲದ ಕಾರಣ ಈ ವಿಡಂಬನೆ ಹೆಚ್ಚು ಯಶಸ್ವಿಯಾಗುವುದಿಲ್ಲ. ಆದರೆ ಸಾಮಾಜಿಕ ಕಳಕಳಿ ಹೆಚ್ಚು ಇರುವ ಚೌಪದಿಗಳಲ್ಲಿ ಈ ವಿಡಂಬನಾ ಗುಣ ಅತ್ಯಂತ ಸಲೀಸಾಗಿ ಬಂದು ಬಿಟ್ಟಿದೆ.
ತೋಡಿರುವ ಪ್ರತಿಯೊಂದು ಬಾವಿಯಲಿ ನೀರು
ಬಂದೇ ಬರುವುದೆಂದು ಕಂಡವರು ಯಾರು
ಹೀಗಾಗಿ ಹಲವಾರು ಬಾವಿಗಳು ಇಲ್ಲಿ
ತುಂಬುವುವು ಸಂಪೂರ್ಣ ಮಳೆಗಾಲದಲ್ಲಿ.
ಇಲ್ಲಿಯ ಕೊನೆ ಸಾಲು ಚೌಪದಿಯನ್ನು ಅತ್ಯಂತ ಅರ್ಥವಾತ್ತಾಗಿಸಿದೆ. ಇಂಥ ಅನೇಕ ಚೌಪದಿಗಳು ವಿಡಂಬಾರಿಯವರ ಕಾವ್ಯಶಕ್ತಿಯನ್ನು ಪ್ರಕಟಪಡಿಸುತ್ತವೆ. 76, 82, 88, 104, 137, 210, 47, 259, 265, 309, 385, 416, 513, 568, 603, 614, 813, 782, 831, 814 ಈ ಚೌಪದಿಗಳು ವಿಡಂಬನಾ ಗುಣಕ್ಕಾಗಿ ಹಾತೊರೆಯುತ್ತಿರುವುದರಿಂದ ಮುಖ್ಯವಾಗುತ್ತವೆ.
ಕವನ ಸಂಕಲನವನ್ನು ಐದು ಭಾಗಗಳಲ್ಲಿ ಹಂಚಿದ್ದಾರೆ. ಈ ವಿಭಾಗ ಅಭ್ಯಾಸದ ಸೌಕರ್ಯಕ್ಕೆ ಹೇಗೋ ಹಾಗೇ ವಸ್ತುವಿನ ದೃಷ್ಟಿಯಿಂದಲೂ ಹೌದು. ಮೊದಲ ಭಾಗ ಆತ್ಮ ನಿವೇದನೆಯಲ್ಲಿ 55 ಚೌಪದಿಗಳಿದ್ದು, ಎಲ್ಲವೂ ತೀರಾ ಸಾಮಾನ್ಯ ರಚನೆಗಳಾಗಿವೆ. ಕವಿಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಇವು ಮುಖ್ಯ ಅಷ್ಟೇ. ಒಂಥರಾ ಆತ್ಮ ಚರಿತ್ರೆಯ ಲೇಪ ಇದರಲ್ಲಿದೆ. ಎರಡನೆಯದಾದ ಸಾಮಾಜಿಕದಲ್ಲಿ 400 ಚೌಪದಿಗಳಿದ್ದು ಹೆಚ್ಚಿನವು ವ್ಯಂಗ್ಯ ಇಲ್ಲವೇ ಕಟಕಿಯಿಂದ ಯಶಸ್ವಿಯಾಗಿವೆ. ಮೂರನೇ ಭಾಗ ನೀತಿಪರವಾದದ್ದು. ಅದರಲ್ಲಿ ಒಟ್ಟು 92 ಚೌಪದಿಗಳಿದ್ದು ಕವಿಯ ನೈತಿಕ ದೃಷ್ಟಿಕೋನವನ್ನು ವಿವರಿಸಿ ಹೇಳುತ್ತದೆ. ಇಂಥ ಕಡೆ ಚೌಪದಿಗಳು ಬರೇ ಹೇಳಿಕೆಗಳಾದದ್ದೂ ಇದೆ. ಆದರೂ ಕವಿಯ ಮಾನವೀಯ ಕಳಕಳಿಯನ್ನು ಆಕ್ಷೇಪಿಸುವಂತಿಲ್ಲ. ನಾಲ್ಕನೆಯದಾದ ರಾಜಕೀಯ ಎಂಬ ಭಾಗದಲ್ಲಿ 113 ಚೌಪದಿಗಳಿದ್ದು, ಅವೆಲ್ಲವೂ ರಾಜಕೀಯ ವಿಡಂಬನೆಯಲ್ಲಿ ಯಶಸ್ವಿಯಾಗಿದೆ. ಅಧಿಕಾರ ಲಾಲಸೆ, ಮತಬೇಡಿಕೆಯ ಹಿಂದಿನ ಧೂರ್ತತನ, ಬಡವರುದ್ಧಾರದ ಸೋಗು ಇವನ್ನೆಲ್ಲ ಬಯಲಿಗೆಳೆಯಲಾಗಿದೆ.
ವಿಡಂಬಾರಿಯವರಿಗೆ ಚೌಪದಿಯ ಗುಣಗಳು ಗೊತ್ತಿವೆ. ಸಹಜವಾದ ಪ್ರಾಸ ಮತ್ತು ಲಯ ವಿನ್ಯಾಸ ಅವರಿಗೆ ಸಿದ್ಧಿಸಿದೆ. ಸಮಾಜವನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾಗಾಗಿ ಚೌಪದಿಗಳಲ್ಲಿ ಅವರು ಇನ್ನೂ ಕೆಲವು ಪ್ರಯೋಗಗಳನ್ನು ಮಾಡಬಲ್ಲರು. ಕವಳ ಅವರ ಸಾಧನೆಯ ಮೈಲಿಗಳಲ್ಲು.
(ಸೌಜನ್ಯ : ಮಂಗಾರು ದೈನಿಕ)
@@@@@@@@@
DSCN5638
ವಿಡಂಬಾರಿ
 ಅಂಚೆಪೇದೆಯ ಆತ್ಮಕಥನ -       ಪ್ರಕಾಶ ಕಡಮೆ
ಈ ಕೃತಿ ಶ್ರೀ ರಾಘವೇಂದ್ರ ಪ್ರಕಾಶನದ 1995ರ ಬೆಳ್ಳಿ ಸ್ಮರಣೆಮಾಲೆಯಿಂದ ಹೊರಬಂದಿದೆ. ಶ್ರೀಯುತ ವಿ.ಜಿ. ಭಂಡಾರಿಯವರು ವಿಡಂಬಾರಿಯಾದ ಕಥೆ ಈ ಕೃತಿಯಲ್ಲಿದೆ. ಇವರ ಪ್ರಥಮ ಚುಟುಕು ಸಂಕಲನ ಒಗ್ಗರಣೆಗೆ ಮುನ್ನುಡಿ ಬರೆಯುತ್ತ ಹಿರಿಯ ಸಾಹಿತಿಗಳಾದ ಶ್ರೀ ಯಶವಂತ ಚಿತ್ತಾಲರು, ಮಹಾರಾಷ್ಟ್ರದ ದಲಿತ ಲೇಖಕ ದಯಾ ಪವಾರ್ ಬರೆದ ಆತ್ಮಕಥೆ ಬಲೂತಕ್ಕೆ ಹಿಂದೆ ಬೀಲದ ಸಾಹಿತ್ಯ ಕೃತಿಯೊಂದು ನಿಮ್ಮ ಆತ್ಮಕಥೆಯಲ್ಲಿ ಸಿಗುವಂತಾಗಲಿ ಎಂದು ಈ ಕೃತಿ ರಚಿಸಲು ಪ್ರೋತ್ಸಾಹಿಸಿದ್ದರಂತೆ. ಅದರಿಂದ ಸ್ಫೂತರ್ಿ ಹೊಂದಿ ಈ ಬರವೆಣಿಗೆಗೆ ತೊಡಗಿಕೊಂಡಿರುವದಾಗಿ ವಿಡಂಬಾರಿಯವರೇ ಹೇಳಿಕೊಂಡಿದ್ದಾರೆ.
ಆತ್ಮ ಕಥೆಯುದ್ದಕ್ಕೂ ಅವರು ಹೆಸರಿಸಿದ ಕೃತಜ್ಞತೆಯ ಪಟ್ಟಿ ತುಂಬ ದೊಡ್ಡದಿದೆ. ಅದು ವಿಡಂಬಾರಿಯವರ ದೊಡ್ಡತನ. ತಾನು ಚಿಕ್ಕವನಿದ್ದಾಗ ಎಲ್ಲದಕ್ಕೂ ಹೌದ್ರಾ ಒಡೆಯಾ ಎನ್ನುವ ಕಾಲವಿತ್ತು. ಇಲ್ರಾ ಒಡೆಯಾ ಎನ್ನುವುದಕ್ಕೆ ಅವಕಾಶವಿದ್ದದ್ದು ಯಾವಾಗೆಂದರೆ ಅದು ನನ್ನ ಅಜ್ಜನನ್ನು ಒಡೆಯರು, ಊಟ ಆಯ್ತಾ ವೆಂಕಪ್ಪಾ? ಅಂತ ಕೇಳಿದಾಗ ಮಾತ್ರ ಎಂದು ಬಡತನದ ರೂಪಕದಿಂದ ಪ್ರಾರಂಭವಾಗುವ ಈ ಆತ್ಮಕಥೆಯನ್ನು ಓದುತ್ತಿದ್ದಂತೆ ಸಹಜವಾಗಿ ಮನದುಂಬಿ ಬರುತ್ತದೆ. ವೆಂಕಪ್ಪಜ್ಜನ ಮುಗ್ಧತನದಿಂದ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟವರ ಸ್ವಾರ್ಥದಿಂದ ಲೇಖಕರ ತಾಯಿ ಗಣಪಿ ದೇವರ ಹೆಸರಿನಲ್ಲಿ ದೇವದಾಸಿಯಾದ ಪ್ರಕರಣವಂತೂ ಮೈಯಲ್ಲಿ ಮುಳ್ಳೇಳಿಸುವಂಥದು.
1938 ರಲ್ಲಿ ಅಮವಾಸ್ಯೆಯ ದಿನ ಹುಟ್ಟಿದ ಲೇಖಕರು ಚಿಕ್ಕಮ್ಮನಿಗೆ ದತ್ತಕ ಹೋದದ್ದು, ಆ ಚಿಕ್ಕಮ್ಮ ತೀರಿಕೊಂಡ ನಂತರ ಮಲತಾಯಿಯ ಕಾರುಬಾರಿನಲ್ಲಿ ಕಂಡ-ಉಂಡ ದುಃಖ, ನೋವು-ಸಂಕಟ ವಿಡಂಬಾರಿಯವರ ಬಾಲ್ಯದ ದಾರುಣತೆ.
ಅಂದು ಮೂರನೇ ಇಯತ್ತೆವರೆಗೆ ಓದಿದವರಾದ ಲೇಖಕರು ಇಂಗ್ಲಿಷ್ ವಿಳಾಸ ಓದಲು-ಬರೆಯಲು ಬರುತ್ತದೆಂಬ ಸಟರ್ಿಫಿಕೇಟಿನೊಂದಿಗೆ ಅಂಚೆಪೇದೆಯ ಜಾಗೆಗೆ ಅಜರ್ಿ ಹಾಕಿದರು. ಕೆಲವು ದಿನ ವಾದ್ಯ ಬಾರಿಸುವ ಕೆಲಸವನ್ನೂ ಸಹ ಕೈಕೊಂಡರು. ನಂತರ ಶಿರಾಲಿ-ಅಂಕೋಲೆಗಳಲ್ಲಿ ಅಂಚೆಪೇದೆಯಾಗಿ ಪ್ರಾಮಾಣಿಕ ಕಾರ್ಯನಿರ್ವಹಿಸುತ್ತಲೇ ದಿನಕರ ದೇಸಾಯರ ಗರಡಿಯಲ್ಲಿ ಚುಟುಕು ರಚಿಸಲು ಪಳಗಿದ ವಿಡಂಬಾರಿವರು ನಮಗೆಲ್ಲ ಗೊತ್ತಿರುವಂತೆ ಅತ್ಯಂತ ಸನ್ನಡತೆಯ, ವಿನಯಶೀಲ, ನಿಸ್ವಾಥರ್ಿ ಹಾಗೂ ಪ್ರೇಮಮಯಿಯಾದ ವ್ಯಕ್ತಿಯಾಗಿದ್ದಾಎ. ಇವರು ಮೂಢನಂಬಿಕೆ ಡಂಬಾಚಾರಗಳ ವಿರುದ್ಧ ನಡೆಸಿದ ಪ್ರಾಮಾಣಿಕ ಅಭಿವ್ಯಕ್ತಿ ಇಲ್ಲಿದೆ. ಇವರ ಬಾಳಿನ ಸಂಕಷ್ಟಗಳು, ಹೆಂಡತಿಯ ಅನಾರೋಗ್ಯ, ತನ್ನದಲ್ಲದ ತಪ್ಪಿಗೆ ಪಡಬೇಕಾದ ಮಾನಸಿಕ ಯಾತನೆಯನನು ಈ ಬರವಣಿಗೆಯ ಮೂಲಕ ತಮ್ಮದೇ ಆದ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಎಂಥ ಪರಿಸ್ಥಿತಿಯಲ್ಲೂ ಧೃತಿಗೆಡದೇ ಬದುಕುವ ಛಲ ಹೊತ್ತ ಅವರ ಆತ್ಮ ಬಲ ಇನ್ನು ಮುಂದೆಯೂ ಅವರಿಗೆ ರಕ್ಷೆಯಾಗಿರಲಿ.

No comments:

Post a Comment