Friday 15 May 2015

`ಜಾನಪದ:ಹೊಸ ತಲೆಮಾರು' ವಿಷಯದ ವಿಚಾರ ಸಂಕಿರಣ

0.05.2015 ರಂದು ಹೊನ್ನಾವರ ಸಮೀಪದ ಕೆರೆಕೋಣದ ಸಹಯಾನ(ಆರ್.ವಿ.ಭಂಡಾರಿ ಅವರ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ `ಜಾನಪದ:ಹೊಸ ತಲೆಮಾರು' ವಿಷಯದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ ಮೌಲ್ಯಯುತವಾಗಿತ್ತು. ಒಂದು ಒಳ್ಳೆಯ ದಿನ ಕಳೆದ ಅನುಭವ. ಕಾರ್ಯಕ್ರಮ ಆಯೋಜಿಸಿದ ವಿಠ್ಠಲ ಬಂಡಾರಿ, ಮಾಧವಿ ಬಂಡಾರಿ ಒಳಗೊಂಡಂತೆ ಸಹಯಾನದ ಎಲ್ಲಾ ಸಂಗಾತಿಗಳು ಶ್ರಮವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿದ್ದರು. ಎಲ್ಲಾ ಸಂಗಾತಿಗಳಿಗೂ ಸಲಾಂ.
ಸಹಯಾನದಲ್ಲಿ ಕಂಡ ಚಿತ್ರಗಳು
 — ಅರುಣ

No comments:

Post a Comment