Friday 28 October 2016

ಸ್ವತಂತ್ರ ಕರ್ನಾಟಕದ ಹರಿಕಾರ, ಹುತಾತ್ಮ ಟಿಪ್ಪು ಸುಲ್ತಾನ್ : 3


October 26, 2016
ಪರ ವಿರೋಧಗಳಿಂದ ಹೊರತಾದ  ಟಿಪ್ಪು ಸುಲ್ತಾನ್ ಕುರಿತ  ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು  ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ  ಚರ್ಚೆಯಲ್ಲಿ ನೆರವಾಗುವ ಉದ್ದೇಶ ಈ ಬರಹದ ಹಿಂದಿದೆ. ಈ ಅಂಶಗಳನ್ನು ನಿಮ್ಮ ಚರ್ಚೆಯಲ್ಲಿ ಉಲ್ಲೇಖಿಸುವ, ಬರೆಹಗಳಲ್ಲಿ ತರುವ ಪ್ರಯತ್ನಗಳಾಗುವುದು ಈ ಹೊತ್ತಿನ ಅಗತ್ಯ ಎಂಬ ಅಭಿಪ್ರಾಯ ನಮ್ಮದು. ನಾವು ಈ ಕುರಿತು ಮಾತಾಡೋಣ, ಬರೆಯೋಣ. ಚರಿತ್ರೆಯನ್ನು ತಿರುಚುವ, ಆ ಮೂಲಕ ದ್ವೇಷ ಹರಡುವ ಕೋಮುವಾದಿ ಹುನ್ನಾರವನ್ನು ವಿಫಲಗೊಳಿಸೋಣ.
~ ಬಿ.ಪೀರ್‌ಬಾಷ

ಅಧ್ಯಾಯ ~ 2 : ಹೊಸ ಯುಗದ ಹರಿಕಾರ
೧೭೯೨ರಲ್ಲಿ ಬ್ರಿಟಿಷರ ವಿರುದ್ಧ ಮೂರನೇ ಯುದ್ಧದಲ್ಲಿ ಸೋತು ಮಕ್ಕಳನ್ನು ಅಡವಿಟ್ಟರೂ ಎದೆಗುಂದದ ಟಿಪ್ಪು ಅದೇ ವರ್ಷ ‘ಭೂ ಕಂದಾಯ ಕಾಯ್ದೆ’ಯನ್ನು ಜಾರಿಗೆ ತಂದ. ಎಂತಹ ಅಡೆತಡೆಗಳೂ ಟಿಪ್ಪುವಿನ ಐತಿಹಾಸಿಕ ಊಳಿಗಮಾನ್ಯ ವಿರೋಧಿ ಉಪಕ್ರಮಗಳನ್ನು ನಿಲ್ಲಿಸುವಂತಿರಲಿಲ್ಲ. ಕಬೀರ್ ಕೌಸರ್ ಎಂಬುವರು ಗುರುತಿಸಿರುವಂತೆ "ರೈತನ ಜಾತಿ, ಧರ್ಮ, ಪಂಥವೇನೆ ಇದ್ದರೂ ಉಳುವವನಿಗೇ ಭೂಮಿ ಸಿಗಬೇಕು" ಎನ್ನುವುದು ಟಿಪ್ಪುವಿನ ಕೃ ನೀತಿಯಾಗಿತ್ತು. ಇದರೊಡನೆ, ಹಿಂದಿನ ಪ್ರಭುತ್ವಗಳು ಜಹಗೀರುಗಳನ್ನು ನೀಡುವಮೂಲಕ ಪರಾವಲಂಬಿ ವರ್ಗವನ್ನು ಸೃಷ್ಟಿ ಮಾಡುತ್ತಿದ್ದುದನ್ನು ಹೈದರನು ಕಡಿತಗೊಳಿಸಿದರೆ ಟಿಪ್ಪು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟ.

ಹೈದರ್ - ಟಿಪ್ಪು ಆಳ್ವಿಕೆಗೆ ಮುನ್ನ ಮೈಸೂರು ಸಂಸ್ಥಾನದಲ್ಲಿನ ಜೀವಿತವೂ ಇತರೆಡೆಗಳಿಗಿಂತ ಅಷ್ಟೇನೂ ಭಿನ್ನವಾಗಿರಲಿಲ್ಲ. ವಿಜಯನಗರದ ಪತನಾನನಂತರ ಅದರಡಿ ಇದ್ದ ನಾಯಕರುಗಳು ಸ್ವಾತಂತ್ರ್ಯ ಘೋಸಿಕೊಂಡರು. ನಂತರದ ದಿನಗಳಲ್ಲಿ ಈ ಹಲವಾರು ಸಣ್ಣ-ಪುಟ್ಟ ನಾಯಕರುಗಳಿಗೂ ಹಳ್ಳಿಯ ಗೌಡರುಗಳಿಗೂ ನಡುವೆ ರೈತರನ್ನು ಸುಲಿಯುವ 'ಪಾಳೆಗಾರ'ರೆಂಬ ಮತ್ತೊಂದು ಪದರ ಹುಟ್ಟಿಕೊಂಡಿತು. ಸಾಧಾರಣವಾಗಿ ದಕ್ಷಿಣ ಕರ್ನಾಟಕದ ಈ ಪಾಳೆಗಾರರು ೧೦ರಿಂದ ೫೦ಹಳ್ಳಿಗಳನ್ನು ನಿಯಂತ್ರಣ ದಲ್ಲಿಟ್ಟುಕೊಂಡಿರುತ್ತಿದ್ದರು. ರೈತರ ಸುಲಿಗೆಯನ್ನು ಸಲೀಸಾಗಿ ನಡೆಸಲು ಅವರು ಅಶ್ವದಳಗಳನ್ನು, ಕಾಲಾಳುಗಳನ್ನು ತಮ್ಮೊಡನೆ ಇಟ್ಟುಕೊಂಡಿರುತ್ತಿದ್ದರು. ಇತರ ಪಾಳೆಗಾರರಿಂದ ಹಾಗೂ ಕೆಲವೊಮ್ಮೆ ತಮ್ಮ ಜನರಿಂದಲೇ ತಮ್ಮನ್ನು ರಕ್ಷಿಸಿಕೊಳ್ಳಲು ಬೆಟ್ಟದ ಮೇಲೆ ದುರ್ಗಗಳನ್ನು ಕಟ್ಟಿಕೊಂಡಿರುತ್ತಿದ್ದರು. ತಮ್ಮ ಈ ಸೇನಾ ಬಲದಿಂದ ಈ ಜನಕಂಟಕ ಪಾಳೆಗಾರರು ರೈತರ ಮೇಲೆ, ಕುಶಲಕರ್ಮಿಗಳ ಮೇಲೆ, ವ್ಯಾಪಾರಿಗಳ ಮೇಲೆ ಅಪಾರ ತೆರಿಗೆ ವಿಧಿಸಿ ಅವರ ರಕ್ತ ಹೀರುತ್ತಿದ್ದರು. ಈ ಶೋಷಕ ಪಾಳೆಗಾರರ ಕೋಟೆಗಳು ನಾಡಿನಾದ್ಯಂತ ಎಷ್ಟೊಂದು ವಿಸ್ತೃತವಾಗಿ ಹರಡಿ ಹೋಗಿದ್ದವೆಂದರೆ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಅಂಥ ೧೨೦ಕೋಟೆಗಳು ಇದ್ದುದನ್ನು ದಾಖಲಿಸಲಾಗಿದೆ.
ಸಕಲ ಸರ್ವಾಧಿಕಾರವನ್ನು ಪಡೆದುಕೊಂಡಿದ್ದ ಈ ಪಾಳೆಗಾರರು ಸುಲಿಗೆ, ಯುದ್ದಗಳಿಂದ ಅರಾಜಕತೆಯನ್ನುಂಟುಮಾಡಿ ಒಟ್ಟಾರೆ ಕರ್ನಾಟಕದ ವಿಕಾಸದ ಗತಿಗೂ ಪೆಟ್ಟು ಕೊಟ್ಟು ದೊಡ್ಡ ಬಿಕ್ಕಟ್ಟನ್ನೇ ಉಂಟು ಮಾಡಿದ್ದರು. ವ್ಯಾಪಾರಿಗಳು, ಕುಶಲಕರ್ಮಿಗಳು ಸ್ವತಂತ್ರ ಉತ್ಪಾದನೆಂದ ವಿಕಸನಗೊಂಡು ಆರ್ಥಿಕತೆಯನ್ನು ಬೆಳೆಸಲಾಗದೇ ಊಳಿಗಮಾನ್ಯ ವ್ಯವಸ್ಥೆ ಒಳಗೊಳಗೆ ಉಸಿರುಗಟ್ಟಿತು. ಉದಾಹರಣೆಗೆ ಇಡೀ ನಾಡಿನಾದ್ಯಂತ ಬಲವಾದ ವಾಣಿಜ್ಯ ಸಂಬಂಧಗಳನ್ನು ಅಭಿವೃದ್ದಿಪಡಿಸಿದ್ದ ಸಾಲುಮೂಲೆ ಬಣಜಿಗರು ಹತ್ತಿಪ್ಪತ್ತು ಮೈಲಿಗೊಬ್ಬ ಪಾಳೆಗಾರ ತಲೆಎತ್ತಿಕೊಂಡಿದ್ದರಿಂದ ದೂರದೂರಕ್ಕೆ ವಾಣಿಜ್ಯ-ವಹಿವಾಟು ನಡೆಸಲಾರದೆ ಹೋದರು. ಇದರಿಂದ, ನಿಧಾನವಾಗಿ ಒಂದುಗೂಡುತ್ತಿದ್ದ ಕರ್ನಾಟಕ ಮತ್ತೆ ತುಂಡು ತುಂಡಾಗಿದ್ದಲ್ಲದೇ ನಿಧಾನವಾಗಿ ವಿಕಸಿಸುತ್ತಿದ್ದ ವ್ಯಾಪಾರಿ ವರ್ಗ ಮತ್ತೆ ಊಳಿಗಮಾನ್ಯತೆಯ ತೆಕ್ಕೆಯಲ್ಲಿ ಸಿಲುಕುವಂತಾತು.
ಇದರ ವಿರುದ್ದ ಕ್ರಮೇಣ ಬಲಿಷ್ಠ ಕೇಂದ್ರವಾಗಿ ಪ್ರಭಲಗೊಂಡ ಮೈಸೂರಿನ ಒಡೆಯರ ಮನೆತನದ ಚಿಕ್ಕ ದೇವರಾಜ ಒಡೆಯರ (ಕ್ರಿ.ಶ.೧೬೪೫-೧೭೦೪) ಮೊದಲ ಬಾರಿಗೆ ನಿರ್ಣಾಯಕ ಯುದ್ದ ಸಾರಿ ಪಾಳೆಗಾರರನ್ನು ಮಣಿಸಿ ಕೇಂದ್ರ ಪ್ರಭುತ್ವವನ್ನು ಸ್ಥಾಪಿಸಿದರೂ, ರೈತರ ಸುಲಿಗೆಯನ್ನು ನಿಲ್ಲಿಸಲಿಲ್ಲ. ಇದು ರೈತರಿಗೆ ಪಾಳೆಗಾರರ ಕ್ರೌರ್ಯವನ್ನೇ ನೆನಪಿಗೆ ತರಿಸುತ್ತಿತ್ತು. ಉದಾಹರಣೆಗೆ ಈ ಶೋಷಣೆಯನ್ನು ತಡೆಯಲಾರದೇ ನಂಜನಗೂಡಿನ ರೈತರು ಚಿಕ್ಕ ದೇವರಾಜನ ವಿರುದ್ದ ದಂಗೆಯದ್ದರು. ಆದರೂ ಚಿಕ್ಕ ದೇವರಾಜ ಕ್ರೂರ ದಬ್ಬಾಳಿಕೆಂದ ದಂಗೆಯನ್ನು ಹತ್ತಿಕ್ಕಿ ಸಾವಿರಕ್ಕೂ ಹೆಚ್ಚು ಜನರನ್ನು ನೇಣಿಗೆ ಹಾಕಿದ. ಹೀಗಿದ್ದರೂ, ಚಿಕ್ಕ ದೇವರಾಜ ಒಡೆಯರ ತಂದ ಬದಲಾವಣೆಂದ ವ್ಯಾಪಾರಿ ವರ್ಗ ಊರ್ಜಿತವಾಗಿ ತಮ್ಮ ಐತಿಹಾಸಿಕ ಊಳಿಗಮಾನ್ಯ ವಿರೋಧಿ ಪಾತ್ರವನ್ನು ನಿರ್ವಹಿಸಲು ಪ್ರಾರಂಭಿಸಿದ್ದರು. ಚಿಕ್ಕ ದೇವರಾಜ ಒಡೆಯರ್‌ನ ಪ್ರಭುತ್ವ ಅದಕ್ಕೆ ಸಹಕಾರ ನೀಡಿದರೂ ರೈತರಮೇಲೆ ಆತನಡೆಸಿದ ಸುಲಿಗೆಯಿಂದ ಊಳಿಗ ಮಾನ್ಯತೆ  ಮುರಿಯಲು ಸಹಕಾರಿಯಾಗದೆ ರೈತರು ದಮನಕ್ಕೀಡಾಗಿದ್ದರು. ಮತ್ತೊಂದೆಡೆ ಕಡಲ ಕಿನಾರೆಯಿಂದ ಕರ್ನಾಟಕದೊಳಗೆ ಕಾಲಿಟ್ಟ ವಸಾಹತುಶಾಹಿಗಳು ಊಳಿಗಮಾನ್ಯ ಶಕ್ತಿಗಳೊಡನೆ  ರಾಜಿಮಾಡಿಕೊಂಡು ದೇಶಪ್ರೇಮ ಹಾಗೂ ರಾಷ್ಟ್ರೀಯತೆಯ ಸೊಂಕಿಲ್ಲದ ದಲ್ಲಾಳಿ ವ್ಯಾಪಾರಿ ವರ್ಗದ ಸೃಷ್ಟಿಗೆ ಕಾರಣರಾದರು.
ಕರ್ನಾಟಕದ ಈ ಐತಿಹಾಸಿಕ ಘಟ್ಟದಲ್ಲಿ ಕರ್ನಾಟಕವನ್ನು ಆಳಿದ ಹೈದರ್ ಹಾಗೂ ಟಿಪ್ಪು ಸೃಷ್ಟಿಸಿದ ಕೇಂದ್ರೀಯ ಪ್ರಭುತ್ವ ಹಾಗೂ ಆರ್ಥಿಕ-ರಾಜಕೀಯ-ಸಾಮಾಜಿಕ ನೀತಿಗಳು ಕರ್ನಾಟಕದಲ್ಲಿ ಕುಡಿಯೊಡೆಯುತ್ತಿದ್ದ ಎಲ್ಲಾ ಅಧುನಿಕ ಪ್ರಗತಿಶೀಲ ಧೋರಣೆಗಳಿಗೂ ಇಂಬುಕೊಟ್ಟು ಕರ್ನಾಟಕವನ್ನು ಊಳಿಗಮಾನ್ಯ ವಿರೋಧಿ ಕ್ರಾಂತಿಯ ಹೊಸ್ತಿಲಲ್ಲಿ ತಂದು ನಿಲ್ಲಿಸಿತು. ಹೈದರ್ ಹಾಗೂ ಟಿಪ್ಪೂ ಇವರುಗಳ ನೀತಿಯೂ ಊಳಿಗಮಾನ್ಯತೆಯನ್ನು ವಿರೋಧಿಸುವ, ವಸಾಹತುಶಾಹಿ ವಿರೋಧಿ ರಾಷ್ಟ್ರೀಯ ವ್ಯಾಪಾರಿ-ಉದ್ಯಮಿ ವರ್ಗದ ಸೃಷ್ಟಿಗೆ ಕಾರಣವಾಯಿತು. ಜನತೆಯಲ್ಲಿ ಪ್ರಬಲ ಊಳಿಗಮಾನ್ಯ ವಿರೋಧಿ ಪ್ರಜ್ಞೆಯನ್ನೂ, ಹೋರಾಟದ ಬಗ್ಗೆ, ಸ್ವಾವಲಂಬಿ ಭ"ಷ್ಯದ ಬಗ್ಗೆ ಭರವಸೆಯನ್ನೂ ತಂದುಕೊಟ್ಟಿತು.

ಪಾಳೆಗಾರಿ ವರ್ಗದ ನಿರ್ಮೂಲನ
ತಾವು ರಾಜ್ಯಾಧಿಕಾರ ಪಡೆದುಕೊಂಡ ನಂತರ ಹೈದರ್-ಟಿಪ್ಪು ಮಾಡಿದ ಮೊದಲ ಕೆಲಸವೆಂದರೆ ರೈತರ ರಕ್ತ ಹೀರುತ್ತಿದ್ದ ಪರಾವಲಂಬಿ ಪಾಳೆಗಾರ ವರ್ಗವನ್ನು ನಾಮಾವಶೇಷಗೊಳಿಸಿದ್ದು. ಹೈದರಾಲಿ ಹಾಗೂ ಟಿಪ್ಪು ಸುಲ್ತಾನರು ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಧಾರವಾಡ, ತುಮಕೂರು ಹಾಗೂ ಕೊಲಾರಗಳಲ್ಲಿ ಇಂತಹ ಸುಮಾರು ೨೦೦ಪಾಳೆಗಾರರನ್ನು ಸೆದೆಬಡಿದರು ಇಲ್ಲವೇ ನಾಮಾವಶೇಷ ಗೊಳಿಸಿದರು. ಕೇರಳದ ಉತ್ತರ ಮಲಬಾರಿನಲ್ಲಿ ಸುಲಿಗೆ ಮಾಡುತ್ತಿದ್ದ ಎಲ್ಲಾ ೪೨ಪಾಳೆಗಾರರನ್ನು ಹೈದರಾಲಿ ನಾಶಮಾಡಿದ. ಹೀಗಾಗಿ ೧೭೯೯ರ ಟಿಪ್ಪುವಿನ ಪತನದ ನಂತರ ಮೈಸೂರು ಪ್ರಾಂತ್ಯದ ಸಂಪೂರ್ಣ ಅಧ್ಯಯನ ಮಾಡಿದ ಬ್ರಿಟಿಷ್ ತಜ್ಞ ಫ್ರಾನ್ಸಿಸ್ ಬುಕಾನನ್ ಗುರುತಿಸಿದಂತೆ "ಮೈಸೂರು ಅರಸರಾದ ಹೈದರ್-ಟಿಪ್ಪು ಅವರ ಪಾಳೆಗಾರ-ವಿರೋಧಿ ಸೈನಿಕ ಕಾರ್ಯಚರಣೆಗಳಿಂದಾಗಿ ಮೈಸೂರು ಪ್ರಾಂತ್ಯದಲ್ಲಿ ಊಳಿಗಮಾನ್ಯ ವ್ಯವಸ್ಥೆ ಕುಸಿದು ಬಿದ್ದಿತು."
ಹೈದರಾಲಿಯೂ ಕೆಲವು ಶರಣಾದ ಪಾಳೆಗಾರರಿಂದ ಮೈಸೂರಿಗೆ ನಿಷ್ಠೆ ಉಳಿಸಿಕೊಳ್ಳುವ ಹಾಗೂ ಕಪ್ಪಕಟ್ಟ್ಟುವ ಪ್ರಮಾಣ ಪಡೆದು ಉಳಿಯಗೊಡುತ್ತಿದ್ದರೆ, ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಪಾಳೆಗಾರರ ವರ್ಗದ ದಮನ ಮತ್ತೊಂದು ಹೆಜ್ಜೆ ಮುಂದೆ ಹೋಯಿತು. ಪಾಳೆಗಾರರ ಹಿಡಿತವನ್ನು ಸಂಪೂರ್ಣವಾಗಿ ಮುರಿಯಲಾತಲ್ಲದೆ, ಆ ಭೂಮಿಯನ್ನು ರೈತಾಪಿಗೆ ಹಂಚಲಾಗುತ್ತಿತ್ತು ಅಥವಾ ರಾಜಪ್ರಭುತ್ವವೇ ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿತ್ತು. ಈ ಹೊಸ ಪದ್ದತಿಯಲ್ಲಿ ಪ್ರಭುತ್ವಕ್ಕೂ-ರೈತಾಪಿಗೂ ನಡುವೆ ಇದ್ದ ಪರಾವಲಂಬಿ ವರ್ಗವು ಸಂಪೂರ್ಣವಾಗಿ ಕಣ್ಮರೆಯಾಗಿ ಮೊಟ್ಟಮೊದಲ ಬಾರಿಗೆ ಪ್ರಭುತ್ವವೇ ನೇರವಾಗಿ ತನ್ನ ರೈತಾಪಿಯೊಡನೆ ಸಂಬಂಧವಿರಿಸಿಕೊಂಡಿತು. ಇದರಿಂದ ಪಾಳೆಗಾರರ ಪ್ರಭಾವ ಹಾಗೂ ಹಿಡಿತದಿಂದ ರೈತಾಪಿ ಸಂಪೂರ್ಣವಾಗಿ ಮುಕ್ತವಾತು.
ಈ ಹಿಂದಿನ ಊಳಿಗಮಾನ್ಯ ರಾಜಪ್ರಭುತ್ವಗಳ ಆಕ್ರಮಣ, ಗೆಲುವು-ಸೋಲುಗಳ ರೈತಾಪಿಯ ಬದುಕಿನಲ್ಲಿ, ಸಾಮಾಜಿಕ ಸಂಬಂಧಗಳಲ್ಲಿ ಯಾವುದೇ ಬದಲಾವಣೆ ತಂದಿರಲಿಲ್ಲ. ಆದರೆ, ಹೈದರಾಲಿ ಹಾಗೂ ಟಿಪ್ಪುಇವರುಗಳು ನಡೆಸಿದ ಸಾಮ್ರಾಜ್ಯದ ವಿಸ್ತರಣೆಯಲ್ಲಿ, ಅವರ ಆಳ್ವಿಕೆಯಡಿ ಬಂದ ಜನತೆಯ ಬದುಕಿನಲ್ಲಿ ಪ್ರಗತಿಪರ ಬದಲಾವಣೆಯೇ ಬಂದುಬಿಟ್ಟಿತು. ಏಕೆಂದರೆ ಅವರ ಪ್ರಭುತ್ವ ಯಾವಾಗಲೂ ಪರಾವಲಂಬಿ ಪಾಳೆಗಾರಿ ವರ್ಗವನ್ನು ನಾಶಗೊಳಿಸಿ ರೈತಾಪಿ, ಕುಶಲಕರ್ಮಿ ಹಾಗೂ ವ್ಯಾಪಾರಿ ವರ್ಗಗಳ ಮೇಲಿನ ಭಾರವನ್ನು ಹಗುರಗೊಳಿಸುತ್ತಿತ್ತು. ಈ ಪಾಳೆಗಾರರು ಎಷ್ಟು ಜನಕಂಟಕರಾಗಿದ್ದರೆಂದರೆ ಹಲವಾರು ಕಡೆ ಸೆರೆಯಾಳುಗಳು ಹಾಗೂ ಗ್ರಾಮದ ಜನತೆಯೇ ಅತ್ಯಂತ ಉತ್ಸಾಹದಿಂದ ಮೈಸೂರಿನ ಸೈನ್ಯವನ್ನು ಸ್ವಾಗತಿಸುತ್ತಿದ್ದರು.

ಭೂ ಸುಧಾರಣೆ
೧೭೯೨ರಲ್ಲಿ ಬ್ರಿಟಿಷರ ವಿರುದ್ಧ ಮೂರನೇ ಯುದ್ಧದಲ್ಲಿ ಸೋತು ಮಕ್ಕಳನ್ನು ಅಡವಿಟ್ಟರೂ ಎದೆಗುಂದದ ಟಿಪ್ಪು ಅದೇ ವರ್ಷ ‘ಭೂ ಕಂದಾಯ ಕಾಯ್ದೆ’ಯನ್ನು ಜಾರಿಗೆ ತಂದ. ಎಂತಹ ಅಡೆತಡೆಗಳೂ ಟಿಪ್ಪುವಿನ ಐತಿಹಾಸಿಕ ಊಳಿಗಮಾನ್ಯ ವಿರೋಧಿ ಉಪಕ್ರಮಗಳನ್ನು ನಿಲ್ಲಿಸುವಂತಿರಲಿಲ್ಲ. ಕಬೀರ್ ಕೌಸರ್ ಎಂಬುವರು ಗುರುತಿಸಿರುವಂತೆ "ರೈತನ ಜಾತಿ, ಧರ್ಮ, ಪಂಥವೇನೆ ಇದ್ದರೂ ಉಳುವವನಿಗೇ ಭೂಮಿ ಸಿಗಬೇಕು" ಎನ್ನುವುದು ಟಿಪ್ಪುವಿನ ಕೃ ನೀತಿಯಾಗಿತ್ತು. ಇದರೊಡನೆ, ಹಿಂದಿನ ಪ್ರಭುತ್ವಗಳು ಜಹಗೀರುಗಳನ್ನು ನೀಡುವಮೂಲಕ ಪರಾವಲಂಬಿ ವರ್ಗವನ್ನು ಸೃಷ್ಟಿ ಮಾಡುತ್ತಿದ್ದುದನ್ನು ಹೈದರನು ಕಡಿತಗೊಳಿಸಿದರೆ ಟಿಪ್ಪು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟ. ತನ್ನ ಇಡೀ ಜೀವಿತಾವಧಿಯಲ್ಲಿ ಟಿಪ್ಪು ಕೇವಲ ಎರಡು ಹಳ್ಳಿಗಳನ್ನು ಮಾತ್ರ ಜಹಗೀರಾಗಿ ನೀಡಿದ್ದ. ಪ್ರಾಕ್ಸಿ ಫರ್ನಾಂಡೀಸ್ ಎಂಬುವವರು ಬರೆಯುವಂತೆ "ದಕ್ಷಿಣ ಮರಾಠ ಪ್ರಾಂತ್ಯದ ಧಾರವಾಡ-ಬಿಜಾಪುರಗಳಲ್ಲಿ ದೇಶಮುಖರ ಪರಿಸ್ಥಿತಿ ದಯನೀಯವಾಗಿತ್ತು. ಹಲವಾರು ಕಡೆಗಳಲ್ಲಿ ಟಿಪ್ಪು ಭೂಮಿಯ ಮೇಲಿನ ಅವರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡು ರೈತರಿಗೆ ಹಂಚಿದ್ದ". ಅದೇ ರೀತಿ ಹೆಚ್.ಜೆ.ಸ್ಟೋಕ್ಸ್ ಎಂಬುವವರು ಬರೆದಂತೆ "ಟಿಪ್ಪುವಿನ ಕಾಲಾವಧಿಯಲ್ಲಿ ದೇಸಾಯರುಗಳಿಗೆ ನೀಡಿದ್ದ ಎಲ್ಲಾ ಜಾಗೀರನ್ನು ಟಿಪ್ಪುವಿನ ಸೇನಾಧಿಕಾರಿ ಜಮಾಲ್ ಖಾನ್ ವಾಪಸ್ ಪಡೆದಿದ್ದಲ್ಲದೇ ಕೇವಲ ಅವರ ಬಾಳ್ವಿಕೆಗೆ ಬೇಕಾದಷ್ಟು ಭೂಮಿಯನ್ನು ಮಾತ್ರ ಬಿಟ್ಟುಕೊಡಲಾಗಿತ್ತು."

ಮಠ-ಮಾನ್ಯಗಳ ರೆಕ್ಕೆಗಳಿಗೆ ಕತ್ತರಿ 
ಕರ್ನಾಟಕದಲ್ಲಿ ಆಗ ಅಸ್ತಿತ್ವದಲ್ಲಿದ್ದ ಊಳಿಗಮಾನ್ಯ ಪದ್ದತಿಯ ಮತ್ತೊಂದು ಮಾದರಿ, ಬ್ರಾಹ್ಮಣ-ಮಠ ಮಾನ್ಯಗಳಿಗೆ ನೀಡುತ್ತಿದ್ದ ದತ್ತಿಗಳು. ವಾಸ್ತವವಾಗಿ ಆಗ ಬ್ರಾಹ್ಮಣ ಮಠಗಳೇ ಅತಿದೊಡ್ಡ ಜಾಗೀರದಾರಿ ಊಳಿಗಮಾನ್ಯ ಶಕ್ತಿಗಳಾಗಿದ್ದವು. ಅತಿದೊಡ್ಡ ಸಂಖ್ಯೆಯ ಶೂದ್ರ ರೈತಾಪಿಯನ್ನು ಈ ಮಠ ಮಾನ್ಯಗಳು ದೈವದ ಹೆಸರಿನಲ್ಲಿ ಶೋಷಿಸುತ್ತಿದ್ದವು. ಟಿಪ್ಪು ಸುಲ್ತಾನನ ರಾಜಖಡ್ಗ ಮಠ ಮಾನ್ಯಗಳ ಈ ಹಕ್ಕನ್ನು ಕತ್ತರಿಸಿತು. ಅಷ್ಟು ಮಾತ್ರವಲ್ಲ, ಹಲವಾರು ಕಡೆ ಟಿಪ್ಪು ದೇವಸ್ಥಾನದ ಭೂಮಿಯನ್ನು ಶೂದ್ರ ರೈತಾಪಿಗೆ ಹಂಚಿ ಕ್ರಾಂತಿಕಾರಿ ಬದಲಾವಣೆಗೆ ಕಾರಣನಾದ. ಉದಾಹರಣೆಗೆ ಬ್ರಿಟೀಷ್ ಇತಿಹಾಸಕಾರ ಬುಕಾನನ್ ದಾಖಲಿಸಿರುವಂತೆ "ನಂಜನಗೂಡಿನಲ್ಲಿ ೫೦೦ಬ್ರಾಹ್ಮಣ ಮನೆಗಳಿದ್ದೂ ರ್ವಾಕ ೧೪,೦೦೦ ಪಗೋಡಾಗಳಷ್ಟು ಆದಾಯ ತರುತ್ತಿದ್ದ ಜಮೀನನ್ನು ಹೊಂದಿದ್ದವು. ಅದೇ ಊರಿನಲ್ಲಿ ೭೦೦ ಶೂದ್ರ ಮನೆಗಳಿದ್ದೂ ಅವರು ಈ ಭೂ"ಯಲ್ಲಿ ಚಾಕರಿ ಮಾಡಿದರೂ ಊರ ಹೊರಗೆ ಬದುಕಬೇಕಾಗಿತ್ತು. ಟಿಪ್ಪು ಬ್ರಾಹ್ಮಣರ ಅಧಿಕಾರವನ್ನು ಮೊಟಕುಗೊಳಿಸಿದ್ದಲ್ಲದೆ ಅವರಿಗೆ ಕೇವಲ ೧೦೦ ಪಗೋಡಾಗಳಷ್ಟು ಮಾಸಿಕ ನಿವೃತ್ತಿ ವೇತನ ನೀಡಿದ".
ಇದನ್ನೇ ದೊಡ್ಡ ಬ್ರಾಹ್ಮಣ ವಿರೋಧಿ ಮತಾಂಧ ಕ್ರಮವೆಂದು ಈಗಿನ ಬ್ರಾಹ್ಮಣ ಶಾಹಿಗಳು ಬಣ್ಣಿಸುತ್ತಿದ್ದಾರೆ. ಆದರೆ ಟಿಪ್ಪು ಬ್ರಾಹ್ಮಣರಲ್ಲೂ ಸಹ ವೈದಿಕ ಹಾಗೂ ಲೌಕಿಕ ಬ್ರಾಹ್ಮಣರೆಂಬ ವಿಧಗಳನ್ನು ಗುರುತಿಸಿದ. ಶ್ರಮದ ಕೊಡುಗೆ ನೀಡಿ ಸಮಾಜದ ಅಭಿವೃದ್ದಿಗೆ ಪೂರಕವಾಗಿದ್ದ ಲೌಕಿಕ ಬ್ರಾಹ್ಮಣರಿಗೆ ಟಿಪ್ಪುವಿನಿಂದ ತೊಂದರೆ ಇರಲಿಲ್ಲ. ಕಿಂಚಿತ್ತೂ ಶ್ರಮವಹಿಸದೇ ರೈತರ ಶೋಷಣೆ ಹಾಗೂ ಶ್ರಮದ ಮೇಲೆ ಬಾಳ್ವೆ ಮಾಡುತ್ತಿದ್ದ ವೈದಿಕ ಬ್ರಾಹ್ಮಣರು ಮಾತ್ರ ಟಿಪ್ಪುವಿನ ಸುಧಾರಣಾ ಕ್ರಮಗಳಿಗೆ ನೇರವಾಗಿ ಗುರಿಯಾದರು. ಅದೆ ರೀತಿ ಮೂಡಬಿದ್ರೆಯಲ್ಲಿ ಜೈನ ಮಠದಡಿ ೩೬೦ ಪಗೋಡಗಳಷ್ಟು ವಾರ್ಷಿಕ ಆದಾಯ ತರುತ್ತಿದ್ದ ಬಸದಿ ಭೂಮಿಯನ್ನು ಟಿಪ್ಪು ಸಂಪೂರ್ಣ ವಶಪಡಿಸಿಕೊಂಡು ಅವರನ್ನು ರ್ವಾಕ ೯೦ಪಗೋಡಗಳ ವೇತನದ ಮೇಲೆ ಜೀವಿಸುವಂತೆ ಮಾಡಿದ.

ಪಟೇಲ ಊರ ಗೌಡನಲ್ಲ,  ಸಾಮಾನ್ಯ ರೈತ!
ಅದೆ ರೀತಿ ಹಳ್ಳಿಗಳಲ್ಲಿ ರಾಜಪ್ರಭುತ್ವದ ಪರವಾಗಿ ರೈತರನ್ನು ಸುಲಿಯುತ್ತಿದ್ದ ಕೊನೆಯ ಕೊಂಡಿ ಊರ ಪಟೇಲನಾಗಿದ್ದ. ಇದೊಂದು ವಂಶಪಾರಂಪರ್ಯ ಸ್ಥಾನವಾಗಿದ್ದು ಈ ಪ್ರಭುತ್ವದ ಪ್ರತಿನಿಧಿಯ ಸ್ಥಾನವು ಉಳ್ಳವರಿಗೆ ಹಾಗೂ ಮೇಲ್ಜಾತಿಗಳಿಗೆ ದೊರೆಯುತ್ತಿತ್ತು. ಆದರೆ ಟಿಪ್ಪು ಇದನ್ನು ಅಮೂಲಾಗ್ರವಾಗಿ ಬುಡಮೇಲು ಮಾಡಿದ. ಟಿಪ್ಪು ಜಾರಿಗೆ ತಂದ "ಭೂ ಕಂದಾಯ ಕಾಯ್ದೆಯ" ೧೧ನೇ ಕಲಮು ಹೀಗೆ ಹೇಳುತ್ತದೆ; 
“ತುಂಬಾ ವರ್ಷಗಳಿಂದ ಪ್ರತಿಯೊಂದು ಹಳ್ಳಿಗೂ ಪಟೇಲನೊಬ್ಬನನ್ನು ನೇಮಿಸಲಾಗುತ್ತಿದೆ. ಇನ್ನು ಮುಂದೆ ಎಲ್ಲೆಲ್ಲಿ ಆ ಸ್ಥಾನಕ್ಕೆ ಈಗಿರುವ ಪಟೇಲರು ಅರ್ಹರಾಗಿಲ್ಲವೋ ಅವರನ್ನು ತೆಗೆದು ಹಾಕಿ ಆ ಸ್ಥಾನಕ್ಕೆ ರೈತನಿಂದಲೇ ಸಮರ್ಥರಾದವರನ್ನು ನೇಮಕ ಮಾಡಬೇಕು ಮತ್ತು ಹಳೆಯ ಪಟೇಲ, ರೈತನ ಸ್ಥಾನಕ್ಕಿಳಿದು ನೇಗಿಲು ಹಿಡಿದು ನೆಲ ಉಳಬೇಕು". ಇದೇ ಕಾಯ್ದೆಯ ೧೨ನೆಯ ಕಲಮು ಹೇಳುವುದು ಹೀಗೆ; "ಹಳ್ಳಿಯ ವ್ಯವಹಾರಗಳಲ್ಲಿ ಇನ್ನು ಮುಂದೆ ಶಾನುಭೋಗರು ಮೂಗು ತೂರಿಸುವ ಅಗತ್ಯವಿಲ್ಲ. ಅವರಿಗೆ ಭೂಮಿ ಕೊಡಲಾಗುವುದಿಲ್ಲ. ಆದರೆ ಅವರನ್ನು ಕರಣಿಕರಂತೆ ಮಾತ್ರ ವೇತನದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು".
ಅದೇ ರೀತಿ ಭೂ ಕಂದಾಯ ಕಾಯ್ದೆಯ ೫ನೇ ಕಲಮಿನಂತೆ; "ಬಹಳ ಸಮಯದಿಂದ ಈ ಪಟೇಲರುಗಳು ಸರ್ಕಾರಿ ಭೂಮಿಗೆ ಸಂಪೂರ್ಣವಾಗಿ ಕಂದಾಯವನ್ನು ಸಂದಾಯ ಮಾಡುತ್ತಿಲ್ಲ. ಇದನ್ನು ಕೂಡಲೇ ತನಿಖೆ ಮಾಡಿ ಇತರ ರೈತರ ಜಮೀನಿನಂತೆ ಅದನ್ನು ಅಂದಾಜು ಮಾಡಿ ತೆರಿಗೆ ನಿಗದಿಮಾಡಬೇಕು. ರೈತರು ಪಟೇಲರ ಜಮೀನನ್ನು ಉಳಬೇಕಿಲ್ಲ. ಪಟೇಲರೇ ತಮ್ಮ ಜಮೀನನ್ನು ಖುದ್ದು ಉಳಬೇಕು. ಒಂದುವೇಳೆ ಅವರೇನಾದರೂ ರೈತರನ್ನು ಉಳುವಂತೆ ಮಾಡಿದರೆ ಸಂಪೂರ್ಣ ಉತ್ಪನ್ನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು. ಒಂದು ವೇಳೆ ಶಾನಭೋಗರು ತಮ್ಮ ಕೂಲಿಯ ಬದಲಿಗೆ ಸರಿಸಮನಾದ ಭೂಮಿ ಕೇಳಿದರೆ ಅವರಿಗೆ ಉಳುಮೆ ಮಾಡಿರದ ಬೆದ್ದಲು ಭೂಮಿ ನೀಡಲಾಗುವುದು".

ಸೈನಿಕರಿಗೆ ಭೂಮಿ
ಟಿಪ್ಪುವಿನ ಆಳ್ವಿಕೆ ಪರಿಚಯಿಸಿದ ಮತ್ತೊಂದು ಮುಖ್ಯ ಸುಧಾರಣೆಯೆಂದರೆ ಸೈನಿಕರಿಗೆ ಭೂಮಿ ನೀಡಿದ್ದು. ಸುಮಾರು ೩ಲಕ್ಷ ಸೈನಿಕರಿಗೆ ಈ ರೀತಿ ಭೂಮಿ ನೀಡಲಾಯಿತು. ಇದೊಂದು ಬೃಹತ್ ಸುಧಾರಣೆಯಾಗಿದ್ದು ಆ ಕಾಲದ ಕೃ ವ್ಯವಸ್ಥೆಯ ಪ್ರಧಾನ ಭಾಗವಾಗಿತ್ತು. ಇದರಿಂದಾಗಿ ಒಂದೆಡೆ ಬೃಹತ್ ಸಂಖ್ಯೆಯಲ್ಲಿ ಸಣ್ಣ ರೈತರು ಉಗಮವಾಗಿ ಊಳಿಗಮಾನ್ಯ ಹಿಡಿತದಿಂದ ಮುಕ್ತವಾದರೆ ಮತ್ತೊಂದೆಡೆ ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದ ಶೋಷಿತ ಜಾತಿಗಳಾದ ಬೇಡ, ಕುರುಬ, ಈಡಿಗ, ಒಕ್ಕಲಿಗ ಮತ್ತು ಲಿಂಗಾತ ರೈತ ಮಕ್ಕಳು ಜಾತಿ ಶೋಷಣೆಂದಲೂ ಸ್ವಲ್ಪ ಮಟ್ಟಿಗೆ ಬಿಡುಗಡೆ ಹೊಂದಿದರು.

No comments:

Post a Comment