Friday 25 October 2019

ನಾದ ಲಯಗಳ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ*



ನಾದ ಲಯಗಳ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ

ನಾದ ಲಯದ ಸೂಕ್ಷ್ಮವನ್ನು ಇಂದಿನ ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಪಾಲಕರಾದ ನಾವೂ ಇಂದು ಅದರಿಂದ ದೂರ ಆಗುತ್ತಿದ್ದೇವೆ. ಯಾವ ಸ್ವರಕ್ಕೆ ರಾಗವಿಲ್ಲವೋ ಅದನ್ನು ವಿಕೃತ ಸ್ವರ ಅನ್ನುತ್ತೇವೆ. ಅದು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಒಳ್ಳೆಯದನ್ನು ಆಲಿಸುವ, ಗ್ರಹಿಸುವ, ಚಿಂತಿಸುವ ಮತ್ತು ಮನನ ಮಾಡುವವರ ಕೊರತೆ ನಮ್ಮಲ್ಲಿ ಇದೆ. ಒಬ್ಬ ಸಂಗೀತಗಾರ ವೇದಿಕೆಯಲ್ಲಿ ಪ್ರದರ್ಶನ ನೀಡುವುದಕ್ಕೆ ಮಾತ್ರ ಸೀಮಿತನಲ್ಲ. ಬದಲಾಗಿ ಸಮಾಜದೊಟ್ಟಿಗಿನ ಬದುಕಿನಲ್ಲಿ ಕೂಡ ಆತ ಹೆಚ್ಚು ಪ್ರಸ್ತುತ ಆಗಬೇಕು.” ಎಂದು ಎಸ್.ಡಿ.ಎಂ ಕಾಲೇಜಿನ ಸಂಗೀತ ಉಪನ್ಯಾಸಕ ಕಲ್ಬಾಗ ಗೋಪಾಲಕೃಷ್ಣ ಹೆಗಡೆ ಹೇಳಿದರು. ಅವರು ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಸಹಯಾನ ಹಮ್ಮಿಕೊಂಡ *ಬಣ್ಣಬಣ್ಣದ ಮಕ್ಕಳ ರಜಾ ಶಿಬಿರದ ಸಮಾರೋಪ ಸಮಾರಂಭದ* ಅತಿಥಿಯಾಗಿ ಮಾತನಾಡುತ್ತಿದ್ದರು.


ರಂಗ ಶಿಬಿರದ ಮೂಲಕ ಪ್ರಕೃತಿಯೆಡೆಗೆ ಕೊಂಡೊಯ್ಯುತ್ತಿದ್ದೇವೆ. ನಾವು ಮಕ್ಕಳಿಗೆ ಕಲಿಸುವುದಿಲ್ಲ. ನಾವೇ ಮಕ್ಕಳಿಂದ ಕಲಿಯುತ್ತೇವೆ. ಮಕ್ಕಳಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಈ ಶಿಬಿರಗಳು ಕ್ರಿಯಾಶೀಲವಾಗಿರುತ್ತವೆ.” ಎಂದು ಶಿಬಿರದ ನಿರ್ದೇಶಕಿ ಎಂ.ವಿ. ಪ್ರತಿಭಾ ಹೇಳಿದರು. ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಿರಣ ಭಟ್ ಸ್ವಾಗತಿಸಿದರು. ಗಣೇಶ ಭಂಡಾರಿ ವಂದಿಸಿದರು. ಪ್ರಮೋದ ನಾಯ್ಕ ಕಡತೋಕ ನಿರೂಪಿಸಿದರು.
ಮಕ್ಕಳಲ್ಲಿ ನಾಯಕತ್ವ ಬೆಳೆಸುವ ಪ್ರಾಮಾಣಿಕ ಜವಾಬ್ದಾರಿ ಹೆಚ್ಚಿಸುವ ನಿಟ್ಟಿನಲ್ಲಿ ‘ಮಕ್ಕಳ ಸಹಯಾನ’ ಎನ್ನುವ ಸಮಿತಿಯನ್ನು ರಚಿಸಲಾಯಿತು. ವಿಠ್ಠಲ ಭಂಡಾರಿಯವರು ಅದರ ಅವಶ್ಯಕತೆ ಮತ್ತು ಸ್ವರೂಪದ ಬಗ್ಗೆ ವಿವರಿಸಿದರು.
ನಂತರದಲ್ಲಿ ಎಂ.ವಿ. ಪ್ರತಿಭಾ ರವರು ನಿರ್ದೇಶಿಸಿದ *ಕೋಟಿಗಾನಳ್ಳಿ ರಾಮಯ್ಯ ಬರೆದ “ಹಕ್ಕಿ ಹಾಡು” ನಾಟಕವನ್ನು* ಮಕ್ಕಳು ಸುಂದರವಾಗಿ ಪ್ರದರ್ಶಿದರು. ಚಿಂತನ ರಂಗ ಅಧ್ಯಯನ ಕೇಂದ್ರದ ಯುವ ಕಲಾವಿದರು ದ.ರಾ ಬೇಂದ್ರೆಯವರು ಬರೆದ ‘ *ಸಾಯೋ ಆಟ’* ನಾಟಕ ಪ್ರದರ್ಶಿಸಿದರು.

No comments:

Post a Comment