Thursday 2 April 2015

ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ : ರಾಷ್ಟ್ರೀಯ ಚಿಂತನಾ ಶಿಬಿರ

ಕರ್ನಾಟಕ ಜನಸಾಹಿತ್ಯ ಸಂಘಟನೆ, ಧಾರವಾಡ
ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ : ರಾಷ್ಟ್ರೀಯ ಚಿಂತನಾ ಶಿಬಿರ
4-4-2015 ಹಾಗೂ 5-4-2015

                                             ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಗೆ ಟಿಪ್ಪಣಿಗಳು
ಮಾತೃಭಾಷೆಯಲ್ಲಿ ಶಿಕ್ಷಣ ಮಾಧ್ಯಮ ಕುರಿತಂತೆ ನ್ಯಾಯಾಲಯದ ಪ್ರತಿಕೂಲ ತೀರ್ಪು ದೊಡ್ಡ ಆಘಾತವನ್ನೇ ನೀಡಿದೆ. ಮಾತೃಭಾಷೆಯು ಶಿಕ್ಷಣದ ಮಾಧ್ಯಮವಾಗಿರಬೇಕು ಎಂದು ನಂಬಿದ್ದ ಮತ್ತು ಪ್ರತಿಪಾದಿಸುತ್ತಿದ್ದ ಎಲ್ಲರಲ್ಲಿಯೂ ನಿರಾಸೆ, ವಿಷಾದ ಹಾಗೂ ನೈತಿಕ ಪ್ರತಿರೋಧಗಳು ಕುದಿಯತೊಡಗಿವೆ. ಸವರ್ೋಚ್ಛ ನ್ಯಾಯಾಲಯದ ಪ್ರತಿಕೂಲ ತೀಪರ್ಿನ ನಂತರ ಕನರ್ಾಟಕದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮಾತೃಭಾಷಾ ಮಾಧ್ಯಮದ ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಗೆಳೆಯರು ಕ್ರಿಯಾತ್ಮಕವಾಗಿ ತೊಡಗಿಕೊಂಡಿರುವುದು ಈ ಹಾದಿಯಲ್ಲಿ ನಡೆದ ಮಹತ್ವದ ಪ್ರಯತ್ನಗಳಾಗಿವೆ. ಕನರ್ಾಟಕದ ಸಾಕ್ಷಿಪ್ರಜ್ಞೆಯಂತಿರುವ ದೇವನೂರ ಮಹಾದೇವ ಅವರು ಕನ್ನಡವು ಪ್ರಾಥಮಿಕ ಹಂತದಲ್ಲಿ ಕಲಿಕೆಯ ಮಾಧ್ಯಮವಾಗುವ ತನಕ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸ್ವೀಕರಿಸುವುದಿಲ್ಲ ಎಂದು ಪರಿಷತ್ತಿನ ಮನವಿಯನ್ನು ನಿರಾಕರಿಸುವ ಮೂಲಕ ಹೊಸಸಂಚಲನ ಸೃಷ್ಟಿಯಾಗಿದೆ. ನಂತರ ಶ್ರವಣಬೆಳಗೊಳದಲ್ಲಿ ನಡೆದ 82ನೇ ಸಾಹಿತ್ಯ ಸಮ್ಮೇಳನವು ಮಾತೃಭಾಷಾ ಮಾಧ್ಯಮ ಪರವಾದ ಚರ್ಚೆಯನ್ನು ಮಾಡಿತು ಹಾಗೂ ನಿರ್ಣಯ ಕೈಗೊಂಡಿತು. ಇದರಿಂದ ಸರಕಾರ ಮಟ್ಟದಲ್ಲೂ, ಸಾಂಸ್ಕೃತಿಕಲೋಕದಲ್ಲೂ, ಶೈಕ್ಷಣಿಕ ಬದುಕಿನ ವಿಭಿನ್ನ ಸ್ತರಗಳಲ್ಲಿಯೂ ಈ ಕುರಿತಂತೆ ತಾತ್ವಿಕ ಜಿಜ್ಞಾಸೆ ಹಾಗೂ ಹೋರಾಟದ ದಾರಿಗಳ ಹುಡುಕಾಟಕ್ಕೆ ಚಾಲನೆ ದೊರೆತಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ತಾತ್ವಿಕ ಸ್ಪಷ್ಟತೆ ಹಾಗೂ ಚಳುವಳಿಯ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೆ ಕನರ್ಾಟಕ ಜನಸಾಹಿತ್ಯ ಸಂಘಟನೆಯು ಧಾರವಾಡದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಚಿಂತನಾ ಸಮಾವೇಶವನ್ನು ಸಂಘಟಿಸುತ್ತಿದೆ. 
ಬಹುತೇಕ ಕನ್ನಡಪರ ಹೋರಾಟಗಳ ಹುಟ್ಟಿಗೆ ನೆಲೆಯಾದ ಧಾರವಾಡದಲ್ಲಿ ಮಾತೃಭಾಷಾ ಮಾಧ್ಯಮ ಪರವಾದ ಹೋರಾಟಕ್ಕೂ ಚಾಲನೆ ಸಿಗಬಹುದೆಂಬ ಆಶಾವಾದದಿಂದ ಈ ಸಮಾವೇಶವನ್ನು ಸಂಘಟಿಸಲಾಗಿದೆ. ಈ ಸಮಾವೇಶಕ್ಕೆ ಮಾತೃಭಾಷಾ ಮಾಧ್ಯಮದ ವಿಷಯದಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿರುವ ನಾಡಿನ ಚಿಂತಕರು, ಚಳುವಳಿಗಾರರು ಹಾಗೂ ಸಂಘಟನಾ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತಿದೆ. ಈ ಚಳುವಳಿಯು ಕನರ್ಾಟಕದಾಚೆಯೂ ವಿಸ್ತರಣೆಯನ್ನು ಪಡೆಯುವ ಅಗತ್ಯವಿರುವುದರಿಂದ, ಭಾರತದ ಬೇರೆಬೇರೆ ರಾಜ್ಯಗಳ ಚಿಂತಕರು ಹಾಗೂ ಚಳುವಳಿಗಾರರನ್ನು ಆಹ್ವಾನಿಸಲಾಗಿದೆ. ಒಟ್ಟಿನಲ್ಲಿ ಮಾತೃಭಾಷಾ ಮಾಧ್ಯಮದ ಪರವಾಗಿ ಚಿಂತನೆ ಹಾಗೂ ಕ್ರಿಯೆಯಲ್ಲಿ ತೊಡಗಿರುವ ಚಿಂತಕರು, ಸಾಹಿತಿಗಳು, ಕಾನೂನು ತಜ್ಞರು, ಪತ್ರಕರ್ತರು, ಕಲಾವಿದರು, ಶಿಕ್ಷಕರು, ಪಾಲಕರು, ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಅಕಾಡೆಮಿ- ಪ್ರಾಧಿಕಾರಗಳ ಅಧ್ಯಕ್ಷರು, ಮಾತೃಭಾಷಾ ಮಾಧ್ಯಮದಲ್ಲಿ ಶಾಲೆಗಳನ್ನು ನಡೆಸುತ್ತಿರುವವರು-ಹೀಗೆ ಬಹುಮುಖಿ ವಲಯಗಳ ಪ್ರತಿನಿಧಿಗಳನ್ನು ಈ ಸಮಾವೇಶವು ಒಳಗೊಳ್ಳುತ್ತಿದೆ.
ಸಮಾವೇಶದ ಮೊದಲ ದಿನ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದ ಸಾಧಕ ಬಾಧಕಗಳನ್ನು ಕುರಿತಂತೆ ತಾತ್ವಿಕ ಚಚರ್ೆ ನಡೆಸಿ ಸ್ಪಷ್ಟತೆಯನ್ನು ಪಡೆದುಕೊಳ್ಳುವದು; ಎರಡನೆಯ ದಿನ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನ ಸಾಧ್ಯತೆ ಕುರಿತಂತೆ ಚಿಂತನೆ ನಡೆಸಿ ಹೋರಾಟದ ದಾರಿಗಳನ್ನು ಕಂಡುಕೊಳ್ಳುವುದು, ಧಾರವಾಡದ ಪ್ರಮುಖ ಬೀದಿಗಳಲ್ಲಿ 'ಕನ್ನಡಕ್ಕಾಗಿ ನಡೆ'(ಜಾಥಾ) ಹಾಗೂ ಕೊನೆಯಲ್ಲಿ ಬಹಿರಂಗ ಅಧಿವೇಶನವನ್ನು ನಡೆಸುವುದು ಸಮಾವೇಶದ ವಿನ್ಯಾಸವಾಗಿದೆ. 
ಅನಿಲ್ ಸದ್ಗೋಪಾಲ್-ಭೂಪಾಲ್, ಜೋಗಾಸಿಂಗ್-ಪಟಿಯಾಲಾ, ಹರಗೋಪಾಲ-ಹೈದರಾಬಾದ್, ಪ್ರಿನ್ಸ್ ಗಜೇಂದ್ರಬಾಬು-ಮದ್ರಾಸ್, ದೇವನೂರ ಮಹಾದೇವ, ಪ್ರಸನ್ನ ಹೆಗ್ಗೋಡು, ವಿ. ಎಸ್. ಶ್ರೀಧರ್, ಅಗ್ರಹಾರ ಕೃಷ್ಣಮೂತರ್ಿ, ಎಂ.ಎಸ್. ಆಶಾದೇವಿ, ಕೆ.ವಿ.ನಾರಾಯಣ, ವಿ. ಪಿ.ನಿರಂಜನಾರಾಧ್ಯ, ಎಚ್.ವಿ. ವಾಸು, ಮಲ್ಲಿಕಾಜರ್ುನ ಮೇಟಿ, ಸ.ರ. ಸುದರ್ಶನ, ಬಿ. ಕೆ. ಎಸ್. ವರ್ಧನ್, ಬರಗೂರು ರಾಮಚಂದ್ರಪ್ಪ, ಕೆ.ಪಿ. ಸುರೇಶ್, ಕೆ.ಫಣಿರಾಜ್, ರಾಜೇಂದ್ರ ಚೆನ್ನಿ, ರವಿವರ್ಮ ಕುಮಾರ, ಜಿನದತ್ತ ದೇಸಾಯಿ, ಬಸವಪ್ರಭು ಹೊಸಕೇರಿ, ಕೋ. ಚೆನ್ನಬಸಪ್ಪ, ವೈ.ಎಸ್.ವಿ.ದತ್ತ, ಜಿ ವಿ ಶ್ರೀರಾಮ ರೆಡ್ಡಿ, ರವಿಕೃಷ್ಣಾ ರೆಡ್ಡಿ, ದಿನೇಶ್ ಅಮಿನ್ಮಟ್ಟು, ಎಲ್. ಹನುಮಂತಯ್ಯ, ಮಾವಳ್ಳಿ ಶಂಕರ್, ಸಿದ್ಧನಗೌಡ ಪಾಟೀಲ, ಲಕ್ಷ್ಮಿನಾರಾಯಣ ನಾಗವಾರ, ಮಲ್ಲಿಗ,ೆ ಗುರುಪ್ರಸಾದ ಕೆರಗೋಡು, ಕೆ.ಎಸ್.ವಿಮಲಾ, ಎಫ್ ಸಿ.ಚೇಗರೆಡ್ಡಿ, ಗುರುರಾಜ್ ದೇಸಾಯಿ, ಬಂಜಗೆರೆ ಜಯಪ್ರಕಾಶ್, ನಾ. ಡಿಸೋಜಾ, ಸಿದ್ಧಲಿಂಗಯ್ಯ, ಜಿ. ರಾಮಕೃಷ್ಣ, ಕಡಿದಾಳ್ ಶಾಮಣ್ಣ, ಮಾಲತಿ ಪಟ್ಟಣಶೆಟ್ಟಿ, ಕೆ.ಬಿ.ಸಿದ್ಧಯ್ಯ, ಕೆ.ರಾಮಯ್ಯ, ಎಸ್.ಜಿ.ಸಿದ್ದರಾಮಯ್ಯ, ಕೆ.ಎಸ್.ಪುಟ್ಟಣ್ಣಯ್ಯ, ಬಸವರಾಜ ಗುರಿಕಾರ, ಗೌರಿ ಲಂಕೇಶ್, ವಸುಂಧರಾ ಭೂಪತಿ, ರಹಮತ್ ತರೀಕೆರೆ, ಪಾಟೀಲ ಪುಟ್ಟಪ್ಪ.. ಮೊದಲಾದ ಹಿರಿಯರು, ಚಿಂತಕರು, ಹೋರಾಟಗಾರರು ಭಾಗವಹಿಸುತ್ತಾರೆ 
ಈ ಶಿಬಿರದಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ 150 ಕ್ಕೂ ಹೆಚ್ಚು ಜನ ಚಿಂತಕರು ಸಂವಾದಕ್ಕಾಗಿ ಆಗಮಿಸುತ್ತಾರೆ. ಬಹಿರಂಗ ಅಧಿವೇಶನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಗಾತಿಗಳು ಭಾಗವಹಿಸುತ್ತಾರೆ. ಎರಡು ದಿನಗಳ ಚಿಂತನ ಮಂಥನದಿಂದ ಹೋರಾಟದ ರೂಪರೇಶೆಗಳನ್ನು ಸಿದ್ಧಪಡಿಸುವುದರೊಂದಿಗೆ ಅದನ್ನು ಕಾರ್ಯಗತಗೊಳಿಸಲು ಎಲ್ಲ ಸಹಭಾಗಿ ಸಂಘಟನೆಗಳ ಒಕ್ಕೂಟವೊಂದನ್ನು ರೂಪಿಸಿಕೊಳ್ಳುವ ಸಾಧ್ಯತೆ ಇದೆ. ಬಹಿರಂಗ ಅಧಿವೇಶನದಲ್ಲಿ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಕುರಿತಂತೆ ಧಾರವಾಡ ಘೋಷಣೆಯನ್ನು ಮಂಡಿಸಲಾಗುವುದು.
ಇದೊಂದು ಕಾರ್ಯಕ್ರಮ ಮಾತ್ರವಾಗಿರದೇ ಕನ್ನಡವನ್ನೊಳಗೊಂಡಂತೆ ಪ್ರಾದೇಶಿಕ ಭಾಷೆ, ಸಂಸೃತಿಗಳ ಉಳಿವಿನ ಹೋರಾಟದ ಪೂರ್ವ ತಯಾರಿಯಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವಾರು ಚಚರ್ೆಗಳನ್ನು ಹುಟ್ಟು ಹಾಕುತ್ತ ಜಾಗೃತಿ ಮೂಡಿಸುತ್ತಿರುವ ತಾವು ನಮ್ಮೊಂದಿಗೆ ಕೈಜೋಡಿಸಬೇಕೆಂದು ವಿನಂತಿಸಿಕೊಳ್ಳುವೆ.

ವಂದನೆಗಳೊಂದಿಗೆ,

ಕರ್ನಾಟಕ ಜನಸಾಹಿತ್ಯ ಸಂಘಟನೆಯ ಪರವಾಗಿ ,
ಉತ್ತರ ಕನ್ನಡದಿಂದ

No comments:

Post a Comment