Tuesday 24 February 2015

ಮೂಲಭೂತವಾದ ಮತ್ತು ಕೋಮುವಾದ; ಮಹಿಳೆಯರ ಮುನ್ನಡೆಗೆ ನಿಯಂತ್ರಕ ಅಸ್ತ್ರಗಳು -ಯಮುನಾ ಗಾಂವ್ಕರ್

ಮೂಲಭೂತವಾದ ಮತ್ತು ಕೋಮುವಾದ; ಮಹಿಳೆಯರ ಮುನ್ನಡೆಗೆ ನಿಯಂತ್ರಕ ಅಸ್ತ್ರಗಳು
ಮೂಲಭೂತವಾದ-ಧಮರ್ಾಂಧತೆ-ಕೋಮುವಾದ ಹೆಣ್ಣಿನ ಘನತೆ ನಾಶಮಾಡುವ, ಸವರ್ಾಂಗೀಣ ಅಭ್ಯುದಯ ತಡೆಯುವ ಅಪಾಯಕಾರಿ ವಿಚಾರಗಳು. ಇವು ಒಟ್ಟಾರೆ ಮಾನವ ಸಮುದಾಯದ ಮುನ್ನಡೆಯನ್ನೇ ನಿಯಂತ್ರಿಸುವ ಅಸ್ತ್ರಗಳಾಗಿವೆ. ಇಂಥ ಅನಾಹುತಕಾರಿ ಬೆಳವಣಿಗೆಯು ದುಡಿಯುವ ವರ್ಗವನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿದೆ. ಸಮಾಜದಲ್ಲಿ ಯಾವ ರೀತಿಯ ಮೌಲ್ಯಗಳು ಪ್ರವಹಿಸುತ್ತವೆಯೋ ಅದರ ಮೊದಲ ಹಾಗೂ ಅಂತಿಮ ಪರಿಣಾಮ ಮಹಿಳೆಯರ ಮೇಲೆಯೇ ಆಗುತ್ತಿದೆ. ದೇಶ-ಪ್ರದೇಶ, ಭಾಷೆ, ಧರ್ಮ-ಜಾತಿ-ಪಂಗಡ-ಪಂಥ-ಮತ-ಜನಾಂಗ ಹಾಗೂ ಗಡಿ ಗುರುತು ಮೀರಿ ಮಾನವ ಸಮುದಾಯದ ವಿಕಾಸವನ್ನು ಬಯಸುವ ವಿಶಾಲ ಆಲೋಚನೆಯ ಒಂದು ಕಾಮರ್ಿಕ ಸಂಘಟನೆಯಾಗಿ ನಾವು ಇದುವರೆಗೆ ಜಗತ್ತಿನಲ್ಲಿ ಗಮನಿಸಿದ್ದೇನು? ಎಲ್ಲಾ ಧರ್ಮಗಳಲ್ಲೂ ಮೂಲಭೂತವಾದ, ಅದರ ಮುಂದಿನ ಹಂತವಾದ ತನ್ನದೆನ್ನುವುದು ಮಾತ್ರ ಶ್ರೇಷ್ಠವೆಂಬ ದುರಂಹಂಕಾರದ ಕೋಮುವಾದ, ಅದು ಅಂತಿಮವಾಗಿ ಬೆಳೆಸುವ ಫ್ಯಾಸಿಷ್ಟ ಧೋರಣೆಯ ಮನೋಭಾವಗಳು ಇತ್ತೀಚಿನ ವಿದ್ಯಮಾನಗಳನ್ನು ಆತಂಕಕ್ಕೆ ಗುರಿಯಾಗಿಸಿವೆ.  ಇವು ಧಾಮರ್ಿಕ, ಆಥರ್ಿಕ ಸ್ವರೂಪದಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿವೆ. ಅದರ ಪರಿಣಾಮವೇ ತಾಲಿಬಾನ್ ಕೃತ್ಯ, ಪೇಶಾವರ ಘಟನೆ, ಇಸ್ರೈಲ್-ಪ್ಯಾಲಿಸ್ಟೈನ್ ದುರ್ಘಟನೆಗಳು, ಮಕ್ಕಳು-ಮಹಿಳೆಯರು, ವೃದ್ಧರು, ಸೈನಿಕರು ಎಂದು ನೋಡದೇ ಸಜೀವ ದಹನ, ಸಾಮೂಹಿಕ ಕೊಲೆ, ಯುದ್ಧಗಳು. ಭಾರತದೊಳಗೂ ಕೂಡ ಧಾಮರ್ಿಕ ಅಸಹಿಷ್ಣುತೆ ಕೆನ್ನಾಲಿಗೆ ಚಾಚಿದೆ. ಕನರ್ಾಟಕದಲ್ಲಿ ಅದರಲ್ಲಿಯೂ ಕರಾವಳಿ ಹಾಗೂ ಮಲೆನಾಡಿನಲ್ಲಿ ಹಬ್ಬಿದ ಮೂಲಭೂತವಾದಿ, ಕೋಮುವಾದಿ ಕಚ್ಚಾಟಗಳು ಜನಸಾಮಾನ್ಯರನ್ನು ಭಯಗ್ರಸ್ಥಗೊಳಿಸುತ್ತಿವೆ.
ಹಾಗಾದರೆ ಈ ಮೂಲಭೂತವಾದ-ಕೋಮುವಾದ ಅಂದರೆ ಏನು? ಇವುಗಳ ಪರಿಣಾಮ ಮಹಿಳೆಯರ ಮೇಲೆ ಹೇಗಾಗಿದೆ? ಹೇಗಾಗುತ್ತಿದೆ? ಸಮಾಜದ ಮೇಲೆ ಅದರ ಒಟ್ಟಾರೆ ಪರಿಣಾಮ ಏನು? ಎಂಬುದನ್ನು ಅರಿಯಬೇಕಿದೆ; ಅರಗಿಸಿಕೊಳ್ಳಬೇಕಿದೆ; ಮೂಲಭೂತವಾದ ಮತ್ತು ಕೋಮುವಾದಗಳೆರಡನ್ನೂ ಗೆರೆ ಎಳೆದು ವಿಭಜಿಸಲಾಗದಷ್ಟು ಒಂದಕ್ಕೊಂದು ಹಾಸುಹೊಕ್ಕಾಗಿವೆ. ಕೋಮುವಾದ ತನ್ನ ಬೆಳವಣಿಗೆಗೆ ಆಯಾ ಧರ್ಮದಲ್ಲಿರುವ ಮೂಲಭೂತವಾದದ ಅಂಶಗಳನ್ನೇ ಬಳಸಿ ಬೆಳೆಯುತ್ತ ಹೋಗುತ್ತದೆ. ಹಾಗಾಗಿ ಇವೆರಡರಿಂದಲೂ ದುಡಿಯುವ ವರ್ಗದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಹಿಮ್ಮೆಟ್ಟಿಸುವ ಮೂಲಕ ದುಡಿಯುವ ವರ್ಗದ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ.
ಮಹಿಳೆ ಮತ್ತು ಮೂಲಭೂತವಾದ: ಹಿರಿಯ ಚಿಂತಕರು ಹೇಳುವಂತೆ ಮೂಲಭೂತವಾದವನ್ನು ಕುರಿತು ಹೀಗೆ ಹೇಳುತ್ತಾರೆ-   ಮೂಲಭೂತವಾದವು ಯಾವುದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ನಿರ್ಧರಿಸಲು ಧರ್ಮ ಸಂಹಿತೆ ಬೇಕೆನ್ನುತ್ತದೆ. ಇಲ್ಲಿ ಬೋಧಿಸಲಾಗುವ ಸಂಪ್ರದಾಯ, ಕಟ್ಟಳೆಗಳು ಮತ್ತು ಸಾಮಾಜಿಕ ರಚನೆಯ ಸೂತ್ರಗಳು ಮಾತ್ರವೇ ದಿವ್ಯವಾದವು, ಅದನ್ನು ಪ್ರಶ್ನಿಸುವಂತಿಲ್ಲ, ಅದೇ ಪರಮಜ್ಞಾನ, ಅಂತಿಮ ಸತ್ಯ. ಧರ್ಮ ಬೋಧಿಸಿದ್ದನ್ನು ಯಾವ ಒರೆಗಲ್ಲಿಗೂ ಹಚ್ಚಿ ಪರೀಕ್ಷಿಸಬಾರದು, ವಿಮಶರ್ಿಸಬಾರದು, ಹಾಗೆ ಮಾಡಿದರೆ ಅವರು ಧರ್ಮದ್ರೋಹಿಗಳು ಎನ್ನುತ್ತದೆ. ಅಂದರೆ ಅರ್ಥವಿಷ್ಟೇ, ಸಮಾಜದ ಚಲನೆಯನ್ನು ಸ್ಥಗಿತಗೊಳಿಸುವ ವಿಚಾರ ಇದಾಗಿದೆ. ಪ್ರಜಾಸತ್ತಾತ್ಮಕವಾದ ಯಾವ ಕ್ರಿಯೆಗಳನ್ನೂ ಮಾಡದಂತೆ ಕೈ-ಬಾಯಿ ಕಟ್ಟಿಹಾಕುವ ಜ್ಞಾನದ ಬೆಳವಣಿಗೆಯನ್ನು ಒಪ್ಪದ ಧರ್ಮಗಳು ಹೇಳಿದ್ದೇ ಅಂತಿಮ ಸತ್ಯ ಎಂದು ನಂಬಿಸಿ ಭಯದಲ್ಲಿರಿಸುವ ವಿಚಾರವಾಗಿದೆ.
ಧರ್ಮ-ಜಾತಿ-ವರ್ಗ-ವರ್ಣಗಳನ್ನು ಮೀರಿ ಹೆಣ್ಣನ್ನು ಬಾಧಿಸಬಹುದಾದ ಸಂಗತಿ ಇದ್ದರೆ ಅದು ಮೂಲಭೂತವಾದ. ಮಾತೃಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಯಾವುದೆಲ್ಲ ಗೌರವವಾಗಿ ಬಂತೋ ಅದು ತನ್ನ ನಿಜಾರ್ಥ ಕೆಳೆದುಕೊಂಡು ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕಾಡುವ ಸಂಗತಿಗಳಾಗಿ ಪರಿಣಮಿಸಿರುವುದು ದುರಂತ. ಸಂಸ್ಕೃತಿ ಹೆಸರಿನಲ್ಲಿ ಯಾವೆಲ್ಲ ನಂಬಿಕೆಗಳು ಆಚರಣೆಗಳು ಯಾವುದೋ ಒಂದು ಸಾರ್ವತ್ರಿಕ ಕಾಲಘಟ್ಟದಲ್ಲಿ ರೂಪುಗೊಂಡವೋ ಅವುಗಳೆಲ್ಲ ಪಿತೃಪ್ರಧಾನ ಸಮಾಜದಲ್ಲಿ ಕೇವಲ ಹೆಣ್ಣಿಗೆ ಮಾತ್ರವೇ ಆರೋಪಿಸಲ್ಪಟ್ಟವು; ವೈಭವೀಕರಿಸಲ್ಪಟ್ಟವು. ಇಡೀ ಸಂಸ್ಕೃತಿಯ ರಕ್ಷಣೆ ಹೆಣ್ಣಿನ ಹೆಗಲ ಮೇಲೆ ಹಾಕಿದ ಪುರುಷ ಸಮಾಜ ತಾನು ಮಾತ್ರ ಇದರ ಆಚೆ ನಿಂತು ಸ್ವಾತಂತ್ರ್ಯವನ್ನು ಅನುಭವಿಸಿದ, ಸಮಾಜದ ಪಾಲನೆ ಹೊರುವ ಕೆಲಸದ ನೆಪದಲ್ಲಿ ಸಮಾಜವನ್ನು ತನಗೆ ಬೇಕಾದಂತೆ ನಿಯಂತ್ರಿಸುವ ಜವಾಬ್ದಾರಿಯನ್ನೂ ತನಗೆ ತಾನೇ ಪಡೆದುಕೊಂಡ. ಆಧುನಿಕತೆ ಮತ್ತು ಅದರ ಭಾಗವಾಗಿ ಬಂದ ಶಿಕ್ಷಣ ಹೆಣ್ಣಿನ ಮೇಲೆ ಆರೋಪಿಸಲ್ಪಟ್ಟಂಥ ಸಂಸ್ಕೃತಿಯ ಹಲವು ಆಚರಣೆಗಳನ್ನು ಛೇದಿಸುತ್ತದೆ ಎಂದು ಅಂದುಕೊಳ್ಳುತ್ತಿರುವಾಗಲೇ ಅದು ಹಾಗಾಗದೇ ಸಂಸ್ಕೃತಿಯ ಹೊಸ ಮಾದರಿ ಹೆಣ್ಣಿನ ಕ್ರಿಯೆಗಳನ್ನು ಮಾತ್ರ ನಿಯಂತ್ರಿಸುವ ಹೊಸ ರೂಪದಲ್ಲಿ ಜಾರಿಗೆ ಬರುತ್ತಿದೆ. ಆಧುನಿಕತೆಯು, ಹೆಣ್ಣನ್ನು ಕಾಡುವ ಅನೇಕ ಮೂಲಭೂತವಾದಿ ಆಚರಣೆಗಳನ್ನು ಆಧುನಿಕ ಮಾಧ್ಯಮದ ಮೂಲಕ ವೈಭವೀಕರಿಸುವ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗುತ್ತಿದೆ.
ಸಂಸ್ಕೃತಿ ಎಂಬುದು ಜೀವನ ಕ್ರಮ. ಒಂದು ನಿಧರ್ಿಷ್ಟ ಕಾಲಘಟ್ಟದಲ್ಲಿ ನಿಧರ್ಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಅಥವಾ ಜನಾಂಗೀಯ ವ್ಯಾಪ್ತಿಯಲ್ಲಿರುವ ಜನಸಮುದಾಯ ರೂಢಿಸಿಕೊಂಡಿರುವ ಬದುಕಿನ ಕ್ರಮ. ಈ ಬದುಕಿನ ಕ್ರಮ ಭೂತಕಾಲದ ಜೊತೆಗೆ ಮತ್ತು ಭವಿಷ್ಯದ ಜೊತೆಗೆ ವರ್ತಮಾನವನ್ನು ಕೊಂಡಿಯಾಗಿ ಬೆಸೆಯುತ್ತದೆ. ಅದು ಅವರು ರೂಡಿಸಿಕೊಂಡು ಬಂದಿರುವ ನಂಬಿಕೆ, ಆಚರಣೆ, ಆಹಾರ ಪದ್ಧತಿ, ಉಡುಪು, ಕ್ರೀಡೆ, ಸಾಹಿತ್ಯ ಇವೆಲ್ಲವುಗಳ ಒಟ್ಟು ಮೊತ್ತ. ಈ ಎಲ್ಲವೂ ಅವರ ಬದುಕಿನ ಕ್ರಮದ ಹಿನ್ನೆಲೆಯಲ್ಲಿಯೇ ಹುಟ್ಟಿರುವುದು ಮತ್ತು ಅದೇ ಸಂದರ್ಭದಲ್ಲಿ ಅವರ ಬದುಕಿನ ಕರಮದ ಮೇಲೂ ಪರಿಣಾಮ ಬೀರಿರುತ್ತದೆ, ಬದುಕನ್ನು ನಿಧರಿಸುತ್ತಾ ಹೋಗುತ್ತದೆ. ಹೀಗೆ ರೂಪುಗೊಂಡ ಯೋಚನಾ ಕ್ರಮ ಆಯಾ ಕಾಲಕ್ಕೆ ಸ್ಪಂದಿಸುತ್ತಾ ಆ ಕಾಲದ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾ ಮುಂದುವರಿಯುತ್ತದೆ. ಈ ಹಂತದಲ್ಲಿ ಯಾವುದು 'ಚನಲಶೀಲವಾಗಿರುತ್ತದೋ' ಅದು ಸಂಸ್ಕೃತಿ. ಈ ಆಲೋಚನಾ ಕ್ರಮದಲ್ಲಿ ಯಾವುದು ಸ್ಥಗಿತವಾಗುತ್ತದೋ ಅದು ಮೂಲಭೂತವಾದ ಎನಿಸಿಕೊಳ್ಳುತ್ತದೆ.
ಹಿಂದೂ ಮೂಲಭೂತವಾದ ಭಾರತದ ಇಡೀ ಸಮಾಜವನ್ನೇ ಆಪೋಷಣ ತೆಗೆದುಕೊಳ್ಳುವಷ್ಟು ಬೆಳೆದಿದೆ. ಇದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತ ಮೂಲಭೂತವಾದ ಬೆಳೆಯಲು ಇನ್ನಷ್ಟು ಉಗ್ರವಾಗಲು ಕಾರಣವಾಗುತ್ತದೆ.
ಹಾಗಾಗಿ ಜಾತಿ, ಕೋಮುವಾದ, ಧರ್ಮ-ಧರ್ಮದ ಘರ್ಷಣೆ ಇವುಗಳನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಬೇಕು. ಉದಾ: ಒಂದೆಡೆ ಹಿಂದೂ ಸಮಾಜೋತ್ಸವ ನಡೆಯುತ್ತಲೇ ಅದರಲ್ಲಿ ಹೊಮ್ಮುವ ಅನ್ಯರ ಬಗೆಗಿನ ಧೋರಣೆ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ವಾತಾವರಣ ನಿಮರ್ಿಸುತ್ತದೆ. ಅವರು ಇನ್ನಷ್ಟು ಸಂಕುಚಿತಗೊಳ್ಳುತ್ತಾ ಹೋಗಲು ಕಾರಣವಾಗುತ್ತದೆ.  ಅಲ್ಪಸಂಖ್ಯಾತರಲ್ಲಿ ಮೂಲಭೂತವಾದದ ಸ್ವರೂಪವನ್ನು ಬುಖರ್ಾ ತೊಡುವ ಕ್ರಮದಲ್ಲಿ, ತಲಾಖ್ ಕೊಡುವಲ್ಲಿ, ಜಿಹಾದ್ನಲ್ಲಿ, ಹೆಣ್ಣನ್ನು ಹೊರಹೋಗಲು ಬಿಡದ ಪದ್ಧತಿಯಲ್ಲಿ, ವೈಜ್ಞಾನಿಕ ಶಿಕ್ಷಣ ಕೊಡಿಸಲು ಹೊಂದೇಟು ಹಾಕುವುದರಲ್ಲಿ  ಕಾಣಬಹುದು.
ಹಿಂದೂ ಮೂಲಭೂತವಾದದ ಸ್ವರೂಪವನ್ನು ವಿವಿಧ ವೃತಾಚರಣೆ ಮಾಡಿಸುವದರಲ್ಲಿ, ಮಠಗಳ, ಪುರೋಹಿತರ ಶಾಸ್ತ್ರಪದ್ಧತಿಗಳಲ್ಲಿ,  ಹಬ್ಬಹರಿದಿನಗಳಲ್ಲಿ ಮಾಡಿಸುವ ಅರ್ಥವಿಲ್ಲದ ಆಚರಣೆಗಳಲ್ಲಿ,  ಪರದಾ ಪದ್ಧತಿ, ವಿಧವಾ ವಿವಾಹಕ್ಕೆ ಸಮ್ಮತಿಸದಿರುವುದರಲ್ಲಿ, ವಾಸ್ತವಿಕ ಆಸ್ತಿಹಕ್ಕಿನ ನಿರಾಕರಣೆಯಲ್ಲಿ, ಇನ್ನೂ ಬಾಲ್ಯವಿವಾಹ ಹಾಗೂ ಕೇಶ ಮುಂಡನ ಜೀವಂತವಿರುವುದರಲ್ಲಿ ಕಾಣಬಹುದಾಗಿದೆ. ಮಡೆಮಡೆಸ್ನಾನ, ಫಲಜ್ಯೋತಿಷ್ಯ, ಶಾಸ್ತ್ರ ಹೇಳಿತೆಂಬ ಕಾರಣದಿಂದ ಹೆಣ್ಣನ್ನು ವಸ್ತುವಾಗಿ ಕಾಣುವುದು, ಎರಡನೇ ದಜರ್ೆಯಲ್ಲಿ ಕಾಣುವುದು ಮತ್ತು ಅಂಥ ಆಚರಣೆಗಳು....
ಹೆಣ್ಣು ಗಂಡಿನ ಆಸ್ತಿ ಎಂದು ಪರಿಗಣಿಸಿರುವುದರಿಂದ ಗಂಡ ಸತ್ತರೆ ಸತಿಸಹಗಮನ ಪದ್ಧತಿ ಇತ್ತು. ಆದರೆ ಹೆಂಡತಿ ಸತ್ತರೆ ಗಂಡನಿಗೆ ಯಾವುದೇ ಕಟ್ಟಳೆಗಳೇ ಇಲ್ಲದೇ ಇರುವುದು ಈ ಮೂಲಭೂತವಾದ ಹೆಣ್ಣನ್ನು ಎಷ್ಟು ಗುರಿಯಾಗಿಸಿದೆ ಎಂಬುದನ್ನು ತೋರಿಸುತ್ತದೆ. ಸಮಾಜದಲ್ಲಿ ಬೇರೂರಿರುವ ಪಾಳೆಗಾರಿತನದಿಂದಾಗಿ ಹೆಣ್ಣು ಗಂಡಿನ ಆಸ್ತಿಯಾಗಿಸಿ, ಆಕೆ ಆಭರಣ ಪ್ರಿಯೆ ಎಂದು ನಂಬಿಸಿ, ಸೌಂದರ್ಯವೇ ಭೂಷಣವೆಂದು, ಮಕ್ಕಳಿಲ್ಲದ ಬಾಳು ಯಾತಕ್ಕೆಂದು ಬಂಜೆತನಕ್ಕೆ ಹೆಣ್ಣನ್ನೇ ಗುರಿಯಾಗಿಸಿದ್ದು ಇಂದಿನ ವಿಜ್ಞಾನ ಬೆಳವಣಿಗೆ ಹಾಗೂ ಆಧುನಿಕ ಶಿಕ್ಷಣದ ನಂತರವೂ ಮುಂದುವರಿದಿದೆ. ಹಾಗಾಗಿಯೇ ಆಸಾರಾಂ ಬಾಪುರಂಥ ದೇವಮಾನವರು, ಮಠಗಳ ಅಧಿಕಾರ ಬಳಸಿ, ದೈವಿಕ ಸ್ವರೂಪದಲ್ಲಿ ತಾನಿರುವೆನೆಂದು ಹೇಳಿ ಅತ್ಯಾಚಾರ ಮಾಡುವವರನ್ನು, ಸಹೋದ್ಯೋಗಿಯ ಮೇಲೆ ಬಲಾತ್ಕಾರ ಮಾಡುವ, ಲೈಂಗಿಕ ಹಿಂಸೆ ನೀಡುವವರನ್ನು, ತನ್ನ ವಿದ್ಯಾಥರ್ಿನಿ ಎಂಬ ಅರಿವೂ ಇಲ್ಲದಂತೆ ಶಿಕ್ಷಕನೋರ್ವ ಅತ್ಯಾಚಾರ ಎಸಗುವ, ದುಡಿಯುವ ಪ್ರದೇಶದಲ್ಲಿ ಮೇಲಾಧಿಕಾರಿಗಳೇ ದೌರ್ಜನ್ಯ ಎಸಗುವಂಥ ಭೀಕರತೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತೇವೆ.
ಹೆಣ್ಣು ಹೆಚ್ಚು ಓದುವ, ಹೊರಗೆ ದುಡಿಯುವ ಸಮಾನತೆ ಬಯಸುವ, ಅಧಿಕಾರ ಪಡೆಯುವ ಯಾವೂದೂ ಮೂಲಭೂತವಾದಿಗಳಿಗೆ ಹಿಡಿಸುವುದಿಲ್ಲ. ಗಂಡು ದರ್ಪಕ್ಕೆ ಹೆಣ್ಣು ಗುರಾಣಿ ಅಥವಾ ಬಲಿಪಶುವಾಗಿ ಮಾತ್ರ ಬಳಕೆಯಾಗುತ್ತದೆ. ಈ ಅಪಾಯವನ್ನು ನಮ್ಮ ಸಮಾಜ ಅರಿಯುವುದು ಯಾವಾಗ?
ಪುರಾಣಗಳಲ್ಲಿ ಪಾತಿವ್ರತ್ಯದ ಕಲ್ಪನೆಯನ್ನು ಚಚರ್ಿಸುವಿದಾದರೆ, ಉದಾ: ಇಂದ್ರನಿಂದ ಮೋಸಹೋದ ಅಹಲ್ಯೆಯು ಶಾಪಗ್ರಸ್ತೆಯಾಗಿ ಕಲ್ಲಾಗುತ್ತಾಳೆಯೇ ಹೊರತೂ ಮೋಸಗೊಳಿಸಿದವನಿಗೆ ಏನೂ ಆಗದು. ಹಾಗೇ ಸೀತೆಯಲ್ಲಿ ಮಾತ್ರ ಶೀಲ ಶಂಕೆ. ಹೀಗೆ ಮೂಲಭೂತವಾದ ಪ್ರತಿಷ್ಠಾಪಿಲು ಪುರಾಣ, ಮಹಾಕಾವ್ಯ ಇತ್ಯಾದಿಗಳನ್ನು ಬಳಸಿಕೊಳ್ಳಲಾಗುತ್ತದೆ.
ಪ್ರಾರಂಭದಿಂದಲೂ ಮೂಲಭೂತವಾದ ಹೆಣ್ಣನ್ನು ನಿಷ್ಕ್ರಿಯಗೊಳಿಸುತ್ತ ಬಂದಿದೆ, ಅಸ್ಥಿರಗೊಳಿಸುತ್ತಾ ಬಂದಿದೆ. ಸಮಾಜ ನಿಯಂತ್ರಿಸುವ ನೆಪದಲ್ಲಿ ಕಾನೂನುಗಳೆಲ್ಲವನ್ನೂ ಹೆಣ್ಣು ಮತ್ತು ಕೆಳಜಾತಿಯವರನ್ನು ಕೇಂದ್ರೀಕರಿಸಿಯೇ ಮಾಡಲಾಯಿತು. ಗಾದೆಗಳೂ ಹಾಗೇ ಸೃಷ್ಟಿಯಾದವು. ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಹೆಣ್ಣಿಗೆ ಹೆಣ್ಣೇ ಶತ್ರು, ಸ್ತ್ರೀ ಬುದ್ಧಿ ಪ್ರಳಯಾಂತಿಕಾ, ಇತ್ಯಾದಿ. ಹಾಗೇ ಹೆಣ್ಣು ಸಮಾಜದ ಕಣ್ಣು ಎನ್ನುತ್ತಲೇ ಎಲ್ಲಾ ಧರ್ಮದಲ್ಲೂ, ಜಾತಿಯಲ್ಲೂ ಮನೆಯಲ್ಲಿ ಕೊನೆಯ ಊಟ ಮಹಿಳೆಯರದ್ದೆ; ಗಂಡು ಶ್ರೇಷ್ಟ, ಆತನೇ ಕುಟುಂಬದ ಯಜಮಾನ ಎಂಬ ಕಾರಣಕ್ಕೆ. ಅತಿ ಹೆಚ್ಚು ಅಪೌಷ್ಟಿಕತೆ ಇರುವುದೂ ಕೂಡ ಮಹಿಳೆಯರಿಗೆಯೇ.  
ಹಾಗಾಗಿ ಮಾನವ ಕುಲದ ಘನತೆಯನ್ನೇ ನಾಶಮಾಡುವ, ತಲೆತಲಾಂತರದ ವರೆಗೆ ದ್ವೇಷವನ್ನೇ ಉಸಿರಾಡುವ, ಮೂಲಭೂತವಾದ ಮಹಿಳೆಯರನ್ನು ಎಂದಿಗೂ ಗೌರವಿಸದು. ಅದು ಮಹಿಳೆಯರನ್ನು ಕೇವಲ ಗಂಡು ಮ್ಕಕಳನ್ನು ಹೆರುವ ಸಾಧನವಾಗಿ ಮಾತ್ರ ನೋಡುತ್ತದೆ. ಅತ್ಯಾಚಾರ, ಬಲಾತ್ಕಾರ, ಸಾಂಸ್ಕೃತಿಕ ಆಕ್ರಮಣಗಳು ನಡೆದಾಗ ಅದು ಅತ್ಯಂತ ಸಹಜ ಎಂಬಂತೆ ಪರಿಗಣಿಸುತ್ತದೆ. ದೇವಮಾನವರು, ಮಠಾಧೀಶರು, ಎಲ್ಲಾ ಧರ್ಮಗಳ ಪುರೋಹಿತರು, ಧನವಂತರು, ಮಹಿಳೆಯರಿಗೆ ಮಾತ್ರ ಪಾವಿತ್ರ್ಯದಿಂದಿರಬೇಕೆಂದು ಉಪದೇಶಿಸುತ್ತಾರೆ, ವಾದ ಮಂಡಿಸುತ್ತಾರೆ. ಇವರು ಪ್ರತಿಪಾದಿಸುವ ಹೆಣ್ಣಿನ ಶೀಲ ಮತ್ತು ಪಾವಿತ್ರ್ಯವನ್ನು ಕೆಡಿಸುವ ವಿಕೃತ ಮನಸ್ಸಿನ ಪುರುಷರಿಗೆ ಇವರ ಉಪದೇಶಾಮೃತ ಇಲ್ಲ. ಹಾಗೇನಾದರೂ ಬಲಾತ್ಕಾರಕ್ಕೆ ಬಂದ್ರೆ 'ಅಣ್ಣಾ ಎಂದು ಕೂಗು, ಪ್ರತಿಭಟಿಸಲಾಗದಿದ್ದರೆ ಕಣ್ಣುಮುಚ್ಚಿ ಸುಮ್ಮನೆ ಅನುಭವಿಸು, ತಾಯತ ಕಟ್ಟಿಸಿಕೋ, ಮಠ-ದೇವಸ್ಥಾನಕ್ಕೆ ಹರಕೆ ಹೊತ್ತುಕೋ, ಭವಿಷ್ಯ ಹೇಳುವವರಿಗೆ ಶರಣಾಗು, ನೀನುಟ್ಟ ಉಡುಪು ಆತನಿಗೆ ಕಾಮೋದ್ರೇಕಿಸಿತು, ನೀನು ನೀತಿಗೆಟ್ಟವಳು; ನಿನಗೆ ಸಂಸ್ಕೃತಿ ಇಲ್ಲ,' ಇತ್ಯಾದಿ ಹೆಣ್ಣಿಗೇ ತಿರುಗುಬಾಣ!
ಹೀಗೆ ಹೆಣ್ಣಿನ ಕುರಿತ ಮೂಲಭೂತವಾದಿ ದೃಷ್ಟಿಕೋನ. ಅವಳ ಜನನಾಂಗದ  ಮೇಲೆ ಮಾತ್ರ ಶೀಲ, ಸಂಸ್ಕೃತಿ ಪ್ರತಿಪಾದಿಸುವ ಮೂಲಭೂತವಾದಿಗಳು ತಮ್ಮಂತೆ ಅವಳಿಗೊಂದು ಸ್ವತಂತ್ರ ಸ್ಥಾನಮಾನ ವ್ಯಕ್ತಿತ್ವವಿದೆ ಎಂದು ಅದನ್ನು ತಾನು ರಕ್ಷಿಸಬೇಕೆಂದು ಹೇಳುವುದಿಲ್ಲ. ಇಂಥವರಿಗೆ ಹೆದರಿಕೊಂಡು ಇರುವುದರಿಂದಲೇ, ಹೆಣ್ಣಿನ ಕುರಿತು ಸತ್ಯ ಹೇಳುವ ಅವಳನ್ನು ಮನುಷ್ಯರಂತೆ ಕಾಣುವ ಚಿಂತನೆಗಳು ತೀರ ವಿರಳವಾಗಿವೆ.

ಮಹಿಳೆ ಮತ್ತು ಕೋಮುವಾದ: ಆಧುನಿಕ ಭಾರತದ ಅತ್ಯಂತ ಅಪಾಯಕಾರಿ ವಿದ್ಯಮಾನವಾಗಿರುವ 'ಕೋಮುವಾದ'ವು ಸಂಸ್ಕೃತಿಯ ಬಹುಮುಖಿತ್ವವನ್ನು ತಿರಸ್ಕರಿಸಿ, ಸನಾತನ ಏಕಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಹಾಗೆ ಪ್ರತಿಪಾದಿಸಲು, ಪ್ರತಿಷ್ಠಾಪಿಸಲು ರೂಪುಗೊಳ್ಳುತ್ತಿರುವ ಒಂದು ತಾತ್ವಿಕ ಚಚರ್ೆಯಾಗಿದೆ. ಹಲವು ಕ್ಷೇತ್ರಗಳಲ್ಲಿ ನೆಲೆ ನಿಂತಿರುವ ಪ್ರಜಾಸತ್ತಾತ್ಮಕ ಆಲೋಚನಾ ಕ್ರಮ ಮತ್ತು ಸೌಹಾರ್ದನೆಲೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ, ಪೂವರ್ಾಗ್ರಹಪೀಡಿತವಾದ ವಾದ ಸರಣಿಯನ್ನೆ ಮುಂದಿಡುತ್ತದೆ. ಹಿಂದೂ ಸಂಸ್ಕೃತಿ, ಇಸ್ಲಾಂ ಸಂಸ್ಕೃತಿ, ಸಾಂಸ್ಕೃತಿಕ ಪಾವಿತ್ರ್ಯತೆ, ದೇಶಾಭಿಮಾನ, ಭಾರತೀಯ ಸಂಸ್ಕೃತಿ ಮುಂತಾದ ಪರಿಕಲ್ಪನೆಗಳನ್ನು ಸಂಕುಚಿತಗೊಳಿಸಿ, ಅದಕ್ಕೆ ಭಾವನಾತ್ಮಕ ಚೌಕಟ್ಟನ್ನು ಕೊಡುತ್ತದೆ.
ಹಿರಿಯ ಚಿಂತಕ ಐಜಾಜ್ ಅಹ್ಮದ್ ಹೇಳುವಂತೆ, ಕೋಮುವಾದವು ಊಳಿಗಮಾನ್ಯ-ವಸಾಹತುಶಾಹಿ ಹಿನ್ನೆಲೆಯ ಮತ್ತು ಬಂಡವಾಳಶಾಹಿ ಬೆಳವಣಿಗೆಯ ಒಂದು ನಿದರ್ಿಷ್ಟ ಹಂತದಲ್ಲಿರುವ ಸಮಾಜವೊಂದರ ರಾಜಕಾರಣದ ಅವಿಭಾಜ್ಯ ಅಂಗ.
 ಇನ್ನೋರ್ವ ಸಮಾಜ ಚಿಂತಕ ಕೆ.ಎನ್.ಫಣಿಕ್ಕರ್ ಗುರುತಿಸಿದಂತೆ, ಇಂದು ಕೋಮುವಾದವು ಸಾಮಾಜಿಕ-ರಾಜಕೀಯ ವಲಯಗಳಲ್ಲಿ ಹರಡಿಕೊಂಡಿದ್ದು. ಅದು ಎರಡು ಪರಸ್ಪರ ಸಂಬಂಧವುಳ್ಳ ಕೇಂದ್ರ ಅಂಶಗಳ ಮೇಲೆ ಅವಲಂಬಿಸಿದೆ. ಮೊದಲನೇಯದು ಒಂದು ಸಮಾಜದಲ್ಲಿರುವ ಮತೀಯ ಪ್ರಜ್ಞೆಯಾದರೆ ಎರಡನೇಯದು ರಾಜಕೀಯ ಲಾಭಕ್ಕಾಗಿ ಕೋಮುವಾದವನ್ನು ಶಸ್ತ್ರವನ್ನಾಗಿ ಬಳಸುವುದು.
ಕೋಮುವಾದ ಮತ್ತು ಮತೀಯವಾದದ ಉಗಮ ಮತ್ತು ಬೆಳವಣಿಗೆಯನ್ನು ಸದ್ಯದ ಆಥರ್ಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಹಿನ್ನೆಯಲ್ಲಿ ಅರ್ಥಮಾಡಿಕೊಳ್ಳುವುದು ಹೆಚ್ಚು ಸೂಕ್ತವಾದುದು. ಆಳುವ ವರ್ಗವು ಅನುಸರಿಸುವ ನೀತಿಗೂ ಮತ್ತು ಕೋಮುವಾದ ಹುಟ್ಟಿಸುವ ಹಿಂಸೆಗೂ ಇರುವ ಸಂಬಂಧವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕಾಗಿದೆ.
- ಶೋಷಕ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಜನರನ್ನು ಮತ-ಧರ್ಮದ ಆದಾರದಲ್ಲಿ ಯಾವ ರಾಜೀಯ ಸಿದ್ಧಾಂತವು ವಿಭಜಿಸುತ್ತದೋ ಅದು ಪ್ರತಿಗಾಮಿಯಾಗಿರುತ್ತದೆ.
- ಯಾವತ್ತು ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯು ಎಲ್ಲಾ ಬಗೆಯ ವಿಚ್ಛಿದ್ರಕಾರಕ ಶಕ್ತಿಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತದೆ. ಇದರಲ್ಲಿ ಕೋಮುವಾದ ಸಮರ್ಥ ಅಸ್ತ್ರವಾಗಿದೆ. ಸಂಸದೀಯ ಪ್ರಜಾಸತ್ತೆ ತರಲು ಕಾರಣವಾದ ಬಂಡಾವಾಳಶಾಹಿಯು ಇಂದು ಆ ಆಶಯಗಳನ್ನು ದುರ್ಬಲಗೊಳಿಸಿ, ಸವರ್ಾಧಿಕಾರ ತರಲು ಪ್ರಯತ್ನಿಸುತ್ತಿದೆ. ಕೋಮುವಾದಿ ವೈಚಾರಿಕತೆಯು ಜನಾಂಗೀಯ ಸವರ್ಾಧಿಕಾರವನ್ನು ಆಯ್ದುಕೊಳ್ಳುತ್ತದೆ. ಭಾರತದ ಕೋಮುವಾದಿಗಳು ಹಿಂದುತ್ವದ ಶ್ರೇಷ್ಠತೆಯನ್ನು ಸಾಧಿಸಲು ರಾಜಕೀಯ ಪ್ರಭುತ್ವದ ಕಡೆ ಮುಖ ಮಾಡಿವೆ.
- ಕೋಮುವಾದಿಗಳು ಸುಲಭವಾಗಿ ಬಳಸುವುದು ಭಾವನಾತ್ಮಕ ವಿಷಯಗಳನ್ನೇ. ಉದಾ: ರಾಮಮಂದಿರ ನಿಮರ್ಾಣ, ಭಯೋತ್ಪಾದನೆ, ಪಾಕಿಸ್ತಾನದ ವಿಷಯ, ಬಲವಂತದ ಸಮಾನ ನಾಗರಿಕ ಸಂಹಿತೆ, ಇತ್ತೀಚೆಗೆ ಸಾಚಾರ ಸಮಿತಿ ವರದಿಯ ವಿರುದ್ಧದ ಆರೋಪ, ಹಿಂದುತ್ವ, ಮೂಢನಂಬಿಕೆಗಳ ಪ್ರಚಾರ, ದೇವರು-ಧರ್ಮ, ಹೀಗೆ ಕೋಮುವಾದಿ ರಾಜಕೀಯ ಸಿದ್ಧಾಂತವು ಜನರ ಭಾವನೆಗಳನ್ನೇ ಪ್ರಧಾನ ಬಂಡವಾಳವಾಗಿಸಿಕೊಳ್ಳುತ್ತದೆ. ಇದಕ್ಕೆ ಮಾನವೀಯ ಮುಖವೇ ಇಲ್ಲ.
- ಕೋಮುವಾದವು ಭಾರತದ ಬಹುಸಂಸ್ಕೃತಿಯನ್ನು ನಿರಾಕರಿಸುತ್ತದೆ. ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಹೇರುತ್ತದೆ. ಹೀಗೆ ಹೇರುವಾಗ ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಧರ್ಮಗಳು ಹಿಂದುತ್ವದ ಅಡಿಯಾಳಾಗಿರಬೇಕೆಂದೂ ಹೇಳುತ್ತದೆ. ಒಟ್ಟಿನಲ್ಲಿ ಕೋಮುವಾದ ಪ್ರಜಾಪ್ರಭುತ್ವದ ವಿರೋದಿಯಾಗಿದೆ.
- ಜಾಗತಿಕರಣ ಮತ್ತು ಉದಾರಿಕರಣದ ಕುರಿತು ಬೆಳೆಯುತ್ತಿರುವ ವ್ಯಾಪಕ ಅಸಂತೃಪ್ತಿ ಮತ್ತು ಅಸಮಾನತೆ ಹಾಗೂ ನಿರುದ್ಯೋಗ ಅಪಾಯಕಾರಿಯಾಗಿ ಬೆಳೆದಿವೆ. ಇದರಿಂದ ಕೋಮುವಾದಿ-ವಿಚ್ಛಿದ್ರಕಾರಿ ಶಕ್ತಿಗಳಿಗೆ ಸಕರ್ಾರದ ತಪ್ಪು ಆಥರ್ಿಕ ನೀತಿಗಳು ಫಲವತ್ತಾದ ಭೂಮಿಕೆಯನ್ನು ಸಿದ್ಧಪಡಿಸಿದಂತಾಗಿದೆ.
- ಕೋಮುವಾದ-ಭಯೋತ್ಪಾದನೆ- ಮೂಲಭೂತವಾದ ಇವು ಪರಸ್ಪರರನ್ನು ಬೆಳೆಸುತ್ತವೆ: ಪೋಷಿಸುತ್ತವೆ. ಆದರೆ ಈ ಮೂರು ವಿಷಯಗಳ ವಿರುದ್ಧವೂ ಜಾಗೃತರಾಗಿರಬೇಕಾದುದು ದುಡಿಯುವ ವರ್ಗದ ಪ್ರಧಾನ ಕೆಲಸವಾಗಬೇಕು. ಏಕೆಂದರೆ ಈ ಎರಡು ದಶಕಗಳಲ್ಲಿ ಆರ್.ಎಸ್.ಎಸ್.ನ ರಾಜಕೀಯ ಮುಖವಾಡ ಬಿ.ಜೆ.ಪಿ.ಯ ಮಾನವ ವಿರೋಧಿ ತಂತ್ರಗಾರಿಕೆ ಜಗಜ್ಜಾಹೀರಾಗಿದೆ. ಉದಾ: 1990ರ ರಥಯಾತ್ರೆಯ ಸಂದರ್ಭದಲ್ಲಿ ಅಹಮದಾಬಾದ್ನಲ್ಲಿ ಭಾರೀ ಹಿಂಸಾಚಾರ ನಡೆಸಲಾಯಿತು, ತದ ನಂತರ ಗುಜರಾತಿನಲ್ಲಿ ಹರಿಬಿಟ್ಟ ನರಮೇಧವು ಆಕ್ರಮಣಕಾರಿ ಕೋಮುವಾದಿ ಸಿದ್ಧಾಂತದ ತುತ್ತತುದಿಯಾದ ಫ್ಯಾಸಿಸ್ಟ ದಬ್ಬಾಳಿಕೆಯಾಗಿತ್ತು. ಓರಿಸ್ಸಾದಲ್ಲಿ ಚುನಾವಣೆ ಸಮೀಪಿಸಿದಾಗ 2008ರಲ್ಲಿ ನಡೆಸಲಾದ ವ್ಯಾಪಕ ಕೋಮುಹಿಂಸಾಚಾರ, ಅದಕ್ಕೂ ಮೊದಲು ಗ್ರಹಾಂಸ್ಟ್ಯೆನ್ನ ಜೀವಂತ ದಹನ, ಕನರ್ಾಟಕದಲ್ಲಿ ಅಧಿಕಾರಕ್ಕೆ ಏರುವ ಮುನ್ನ ಮತ್ತು ನಂತರ ವಿವಿಧೆಡೆ ನಡೆಸಿದ ಚಚರ್ು-ಮಸೀದಿಗಳ ಮೇಲಿನ ದಾಳಿ, ಅನ್ಯಧಮರ್ೀಯರನ್ನು ಮದುವೆಯಾಗದಂತೆ, ಮಾತಾಡದಂತೆ ಮಾಡುವ ಅಪರಾಧಿಕ ಆಕ್ರಮಣಗಳು ನಡೆದಿವೆ. ಮಹಾರಾಷ್ಟ್ರವನ್ನು ತಲ್ಲಣಗೊಳಿಸಿದ 1992-93ರ ಘಟನಾವಳಿಗಳ ನಂತರ ಇಂದಿಗೂ ಕೋಮುಹಿಂಸಾಚಾರದ ಮುಂದುವರಿಕೆ, ಮಧ್ಯಪ್ರದೇಶದ ಆದಿವಾಸಿ ಪ್ರದೇಶದ ಕ್ರಿಶ್ಚಿಯನ್ರ ಮೇಲೆ ಹಿಂಸಾತ್ಮಕ ದಾಳಿ, ಓರಿಸ್ಸಾದಲ್ಲಿ ಮತಾಂತರಗೊಂಡ ದಲಿತರು ಪುನಃ ಹಿಂದೂಧರ್ಮಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಏಳು ದಲಿತ ಮಹಿಳೆಯರ ತಲೆ ಬೋಳಿಸಿದ್ದು, ಗುಜರಾತಿನಲ್ಲಿ ಗಭರ್ಿಣಿ ಸ್ತ್ರೀಯ ಹೊಟ್ಟೆಯನ್ನು ತ್ರಿಶೂಲದಿಂದ ಸೀಳಿ, ಬ್ರೂಣವನ್ನು ಬೆಂಕಿಗೆ ಎಸೆದದ್ದು ಹೀಗೆ ಕೋಮುವಾದದ ನೀಚ ಕೃತ್ಯಗಳು ಹೆಚ್ಚುತ್ತಲೇ ಇವೆ. ಈಬಾರಿ ಅಧಿಕಾರಕ್ಕೆ ಬಂದ ನಂತರ 'ಘರ್ ವಾಪಸಿ' ಎಂಬ ಹೆಸರಿನಲ್ಲಿ ಮರುಮತಾಂತರ ಕ್ರಿಯೆಗಳು.
- ಸಾಂಸ್ಕೃತಿಕ ರಂಗದಲ್ಲಿ ಪ್ರಗತಿಪರ ಸಿನೇಮಾ, ನಾಟಕ, ಚಿತ್ರಕಲಾವಿದರ ಮೇಲೆ ಕ್ರೀಡಾಪಟುಗಳ ಮೇಲೆ ದೈಹಿಕ ದಾಳಿ ನಡೆಸಿದ್ದೂ ಇದೆ.

ದುಡಿಯುವ ಜನರ ಮೇಲೆ ಕೋಮುವಾದದ ಅಪಾಯಗಳು.
- ಭಾರತದ ಸವರ್ಾಂಗೀಣ ಪ್ರಗತಿಗೆ, ಅಭಿವೃದ್ಧಿಗೆ ಮತ್ತು ಪ್ರಜಾಪ್ರಭುತ್ವದ ಪಾವಿತ್ರ್ಯತೆಗೆ ಅತ್ಯಂತ ಕಂಟಕಪ್ರಾಯವಾದುದು ಈ ಕೋಮುವಾದ. ಇದು ಸೌಹಾರ್ದತೆ ಮತ್ತು ಜನತೆಯ ಐಕ್ಯತೆಯನ್ನು ಛಿದ್ರಗೊಳಿಸುತ್ತದೆ. ದುಡಿಯುವ ವರ್ಗದ ವಿಭಿನ್ನ ವಿಭಾಗಗಳಲ್ಲಿ ಕೋಮುವಿಷಬೀಜ ನುಸುಳುತ್ತಿದೆ.
- ಕೋಮುವಾದ-ಜಾತಿವಾದ-ಮುಲಭೂತವಾದ ಮತ್ತು ಭಯೋತ್ಪಾನೆಗಳು ಸಮಾಜದ ಧನಾತ್ಮಕ ವಿಕಾಸವನ್ನು ತಡೆಯುವುದರಲ್ಲಿ ತೊಡಗಿಕೊಂಡಿರುತ್ತವೆ.
- ಭಾರತದ ಪ್ರತಿಯೊಂದು ಸಮಸ್ಯೆಗೂ ಅಲ್ಪಸಂಖ್ಯಾರೇ ಕಾರಣವೆಂದು, ಮುಸ್ಲಿಂರನ್ನು ಖಳನಾಯಕರನ್ನಾಗಿ ಚಿತ್ರಿಸಲಾಗುತ್ತದೆ. ಇತಿಹಾಸದ ಸತ್ಯಾಂಶಗಳನ್ನು ಸಮತೋಲನವನ್ನು ಮುರಿದು, ತಿರುಚಿದ ಇತಿಹಾಸ ಬರೆದು, ಅನ್ಯಧಾಮರ್ಿಕತೆಯ ಕುರಿತು ದ್ವೇಷ ಹುಟ್ಟಿಸಲು ಪ್ರಾಥಮಿಕ ಶಾಲೆ ಹಂತದಲ್ಲೇ ಮುಂದಾಗುತ್ತದೆ. ಉದಾ: ಬಿ.ಜಿ.ಪಿ. ನೇತೃತ್ವದ ಎನ್.ಡಿ.ಎ.ಕೂಟ ಈ ಹಿಂದೆ ಕೇಂದ್ರ ಸಕರ್ಾರ ನಡೆಸಿದಾಗ ಪ್ರಾಥಮಿಕ ಶಾಲೆಗಳಲ್ಲಿ ವಿಷಯುಕ್ತ ವಿಚಾರಗಳ ಪಠ್ಯಕ್ರಮ ಸೇರಿಸಿದ್ದನ್ನು ನೋಡಿದ್ದೇವೆ. ಈಗಲೂ ಅದೇ ಕೆಲಸ ಮುಂದುವರಿದಿದೆ.
- ಕೋಮುವಾದವು ಮಹಿಳೆಯರನ್ನು ಸ್ವತಂತ್ರ ನಾಗರಿಕರಾಗಿ ಬದುಕಲು ಬಿಡದು ಮಾತ್ರವಲ್ಲ ದುಡಿಯುವ ಹಕ್ಕನ್ನು ಕೇಳದಂತೆ, ದುಡಿತಕ್ಕೆ ಪ್ರತಿಫಲ ಕೇಳದಂತೆ ಮಾಡುತ್ತದೆ.
- ಸಾಮಾಜಿಕ ಪ್ರಗತಿಗಾಗಿ ಮತ-ಧರ್ಮ, ವರ್ಗಭೇದ ಮರೆತು ಒಂದಾಗಿ ಕೆಲಸ ಮಾಡುವ ದುಡಿಯುವ ಮಹಿಳೆಯರಲ್ಲಿ ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯ ಹುಟ್ಟುಹಾಕುತ್ತದೆ. ಸಾಮಾನ್ಯ ಮಹಿಳೆ ಮತ್ತು ದುಡಿಯುವ ಮಹಿಳೆಯರಲ್ಲಿ ಕೋಮುವಾದದ ಛಿದ್ರಕಾರಿ ಅಂಶಗಳಾದ ಕಂದಾಚಾರ, ಮೂಢನಂಬಿಕೆ, ಸಾಮೂಹಿಕ ಮಂತ್ರ ಪಠಣ, ಇತ್ಯಾದಿ ಮಾಡಿಸುತ್ತದೆ.
- ಇಡೀ ಮಹಿಳಾ ಸಮುದಾಯವು ತನ್ನ ಶೋಷಣೆಯ ಬೇಡಿ ಕಳಚಿಕೊಳ್ಳಲು ನಡೆಸುತ್ತಿರುವ ಆಂದೋಲನ ಪೂರ್ಣಗೊಳ್ಳದಂತೆ, ಐಕ್ಯಚಳುವಳಿಗೆ ಅಡ್ಡಗಾಲು ಹಾಕುತ್ತದೆ. ದೇವರು, ಧಾಮರ್ಿಕತೆ ಹೆಸರಿನಲ್ಲಿ ಆತ್ಮಸ್ಥೈರ್ಯದ ಹೋರಾಟವನ್ನು ಮೊಟಕುಗೊಳಿಸುತ್ತದೆ. ಒಟ್ಟಾರೆ ಕೋಮುವಾದದ ವೈಚಾರಿಕ ದಾಳಿ ಎಲ್ಲಾ ಮಹಿಳೆಯರನ್ನು ಬಲಿತೆಗೆದುಕೊಳ್ಳುತ್ತದೆ. ಇದರಿಂದ ದುಡಿಯುವ ಮಹಿಳೆಯರು ಹೊರತಲ್ಲ.
- ಕೋಮುವಾದದ ಅಮಲಿನಲ್ಲಿರುವವರಿಂದ ನಾಗರಿಕ ಸಮಾಜದ ಮೇಲೆ ಹಿಂಸೆ, ಅತ್ಯಾಚಾರ, ಕೊಲೆಪಾತಕ ಸಂಭವಿಸುತ್ತದೆ. ಈ ದೊಂಬಿಯ ಪ್ರತಿಫಲವಾಗಿ ಅನಾವಶ್ಯಕ ಬಂದ್ಗಳುಂಟಾಗುತ್ತವೆ. ಮನೆ, ಆಸ್ತಿ-ಪಾಸ್ತಿ, ಬಟ್ಟೆ, ನೀರು ಬಂಧು ಬಳಗ ಕಳಕೊಂಡು ಬೀದಿಪಾಲಾಗುವ ಜನೆತೆಯ ರಕ್ಷಣೆಗೆ ಯಾರೂ ಬರುವುದಿಲ್ಲ.
- ಧಾಮರ್ಿಕ ಅಲ್ಪಸಂಖ್ಯಾತ ಕಾರ್ಮಿಕರನ್ನು ಸಂಘಪರಿವಾರದ ಕಾಮರ್ಿಕ ಸಂಘಟನೆಗಳು ಸಂಶಯದ ದೃಷ್ಠಿಯಿಂದ ನೋಡುವಂತೆ ಮಾಡುತ್ತವೆ ಮತ್ತು ನಿರಂತರ ಅಪಪ್ರಚಾರದಲ್ಲಿ ತೊಡಗಿವೆ. ಧಾಮರ್ಿಕ ಅಲ್ಪಸಂಖ್ಯಾತ ದುಡಿಯುವ ಮಹಿಳೆಯರ ಕುರಿತು ತುಚ್ಛವಾಗಿ ಕಾಣುತ್ತದೆ. ಕೋಮುವಾದದ ಭಾವನಾತ್ಮಕ ಅಂಶವು ಕಾಮರ್ಿಕ ಕುಟುಂಬದಲ್ಲಿ ಪ್ರತಿಬಿಂಬಿತವಾಗುತ್ತದೆ. ಅದರ ಅಪಾಯ ದುಡಿಯುವ ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೆ ಆಗುತ್ತದೆ.
- ತತ್ಪರಹಿತ-ಅವಕಾಶವಾದಿ ಕೋಮುವಾದಿ ರಾಜಕೀಯಕ್ಕೆ ಚುನಾವಣೆಯಲ್ಲಿ ಅಲ್ಪಸ್ವಲ್ಪ ಹಿನ್ನಡೆಯಾದರೂ, ಅದರ ಪ್ರಭಾವ, ವಿಷಪೂರಿತ ವಿಚಾರಗಳು ಜನಮನದಲ್ಲಿ ಉಳಿಯುತ್ತದೆ. ಅದು ಅಲ್ಲಲ್ಲಿ ಕೋಮುಗಲಭೆ, ಜನಾಂಗೀಯ ಕಲಹಗಳಾದಾಗ ಸ್ಪೋಟಗೊಂಡು ಮತ್ತೆ ಅಧಿಕಾರಕ್ಕೇರಲು ಹಪಹಪಿಸುತ್ತದೆ.

ಇಂದು ಭಾರತದ ಪ್ರಜಾಸತ್ತೆಗೆ ಅಪಾಯ ತಂದೊಡ್ಡುವ ಕೋಮುವಾದವು ಭಾರತದ ಪ್ರಭುತ್ವವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆಯುತ್ತಿರುವುದು ಮತ್ತು ಅಂತಿಮವಾಗಿ ಫ್ಯಾಸಿಸ್ಟ ಸ್ವರೂಪಕ್ಕೆ ತಲುಪುವ ಮುನ್ಸೂಚನೆಯನ್ನು ಇತ್ತೀಚೆಗೆ ಕಾಣಬಹುದಾಗಿದೆ.
ಯಾವುದೇ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಾಗ ಅದರ ಮೊದಲ ಪರಿಣಾಮ ವಾಗುವುದು ಹೆಣ್ಣಿನ ಮೇಲೆ. ಇದಕ್ಕೆ ಮೊದಲ ಕಾರಣ ಘರ್ಷಣೇಗೆ ತೊಡಗುವ ಗಂಡಸರು ಹೆಂಗಸರ ಕುರಿತು ತಳೆದಿರುವ ಧೋರಣೆಯೇ ಆಗಿದೆ. ಅವರು ಹೆಣ್ಣನ್ನು ಸಹಜೀವಿ ಎಂದು ಭಾವಿಸದೇ ಶತ್ರುವಿನ ಆಸ್ತಿ ಎಂದು ಪರಿಗಣಿಸಿರುವುದರಿಂದ ಅವನನ್ನು ಅಥವಾ ಅವನನ್ನು ಪ್ರತಿನಿಧಿಸುವ ಧರ್ಮವನ್ನು ಮಣಿಸಲು ಹೆಂಗಸರನ್ನು ಅಪಹರಿಸುವ, ಅತ್ಯಾಚಾರ ಮಾಡುವ, ಕೊಲ್ಲುವ ಮೂಲಕ ಸೇಡು ತೀರಿಸಿಕೊಳ್ಳುವುದನ್ನು ಪೌರುಷ ಎಂಧು ಭಾವಿಸುತ್ತಾರೆ. ಆದರದು ಹೇಡಿತನ ಎಂಬುದನ್ನು ತಿಳಿಯದಷ್ಟು ಹೇಡಿಗಳು ಅವರಾಗಿರುತ್ತಾರೆ.
ಅಲ್ಲದೇ ಈ ಗಲಭೆಗಳ ಪರಿಣಾಮವಾಗಿ ಹೆಂಗಸರು ಮುಕ್ತವಾಗಿ ಓಡಾಡದ, ವಿದ್ಯಾಭ್ಯಾಸ, ಉದ್ಯೋಗಗಳಿಂದ ವಂಚಿತರಾಗುವ ಸಮಸ್ಯೆ ಎದುರಾಗುತ್ತದೆ. ತಾಲಿಬಾನ್ ನಿಯಂತ್ರಣ ಸಾಧಿಸಿದಾಗ ಹೆಂಗಸರು ಹಾಡು ಹೇಳದಂತೆ, ಕೇಳದಂತೆ ಹೊರಹೋಗದಂತೆ, ಶಿಕ್ಷಣ ಪಡೆಯದಂತೆ ಇನ್ನೂ ಅನೇಕ ನಿರ್ಬಂಧ ಹೇರಿದ್ದನ್ನು ಗಮನಿಸಬಹುದು. ಇದಲ್ಲದೇ ಹೆಣ್ಣನ್ನು ಧರ್ಮದ ಅಸ್ತ್ರವಾಗಿ ಕೂಡ ಬಳಸುವುದನ್ನು ಕಾಣಬಹುದು. ಇತ್ತೀಚಿನ ಹೇಳಿಕೆಗಳನ್ನೇ ಗಮನಿಸಿ; ಹಿಂದೂ ಧರ್ಮ ಬೆಳೆಯುವುದಕ್ಕಾಗಿ ಹಿಂದೂ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಅಪ್ಪಣೆ ಕೊಡಲಾಯಿತು. ಇದಕ್ಕೆ ಅವಳ ಒಪ್ಪಿಗೆಯ ಅವಶ್ಯಕತೆಯೇ ಅವರಿಗೆ ಕಾಣಲಿಲ್ಲ.
ಎರಡು ದೇಶಗಳ ಘರ್ಷಣೆಗಳಲ್ಲಿ ಅದೂ ಧಮರ್ಾಧಾರಿತವಾದಾಗ ಹೆಣ್ಣಿನ ದೇಹವನ್ನು ಆಕ್ರಮಿತ ಭೂಮಿ ಎಂಬಂತೆ ನಡೆಸಿಕೊಂಡು ಧಾಳಿ ಮಾಡಲಾಗುತ್ತದೆ. ಉದಾ: ಬಾಂಗ್ಲಾ ದೇಶದ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಯಿತು. ಸಾವಿರಾರು ಅನಾಥ ಮಕ್ಕಳು ಜನಿಸಿದ್ದನ್ನು ನೋಡಬಹುದಾಗಿದೆ. ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಹಿಟ್ಲರ್ ಪಡೆಯು ಮಹಿಳೆಯರ ಅಂಗಾಂಗಗಳನ್ನು ಕತ್ತರಿಸಿ ನೇತುಹಾಕಿತು.  ಭಾರತ - ಪಾಕಿಸ್ತಾನ, ಪ್ಯಾಲಿಷ್ಟೈನ್-ಇಸ್ರಾಯಿಲ್ ಇತ್ಯಾದಿ ದೇಶಗಳಲ್ಲಿ ಯುದ್ಧಗಳಾದಾಗಲೂ ಇದೇ ಕತೆ. ನಮ್ಮ ದೇಶದೊಳಗೂ ಗುಜರಾತ್ ಗೋದ್ರಾ ಘಟನೆ ಹಿನ್ನೆಲೆಯಲ್ಲಿ ನಡೆದ ನರಮೇಧದಲ್ಲಿ ಗಭರ್ಿಣಿ ಮಹಿಳೆಯ ಭ್ರೂಣ ಸುಟ್ಟ ಘಟನೆ, ವಣರ್ಾಶ್ರಮ ಧರ್ಮದ ಪ್ರತೀಕವಾಗಿ ದಲಿತರನ್ನು ದಲಿತ ಮಹಿಳೆಯರ ಬೆತ್ತಲೆ ಮೆರವಣಿಗೆ, ಬಹಿಷ್ಕಾರ, ಕೊಲೆ, ಗುಡಿಸಿಗೆ ಬೆಂಕಿ ಹಚ್ಚುವುದು, ಸಜೀವ ದಹನದಂಥ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ.
ಹಾಗಾದರೆ ಸಾಮಾನ್ಯ ಮಹಿಳೆಯರಿಗೆ ಮತ್ತು ದುಡಿಯುವ ಮಹಿಳೆಯರಿಗೆ  ಭದ್ರತೆಯ ನೆಲೆ ಯಾವುದು? ಇಂದು ಮಹಿಳೆಯರು ಕೆಲಸ ಹುಡುಕಿಕೊಂಡು ದೇಶ-ವಿದೇಶಗಳಿಗೆ ಹೋಗುತ್ತಿದ್ದಾರೆ.  ಜನವಸತಿ ಇರಲಿ ಬಿಡಲಿ ಎಲ್ಲಾ ವಿಧದ ಕೆಲಸದ ಸ್ಥಳಗಳು, ತೋಟ, ಹೊಲ-ಗದ್ದೆ, ಮಂಡಿಗಳು, ಕೃಷಿ ಬಜಾರುಗಳು, ಮಾರುಕಟ್ಟೆ ಪ್ರದೇಶಗಳು, ಶಾಲೆ, ಕಾಲೇಜು, ಪ್ರಯಾಣದ ಸ್ಥಳಗಳಾದ ರೈಲು, ಬಸ್ಸು, ಕಾರು ಇತರೇ ವಾಹನಗಳಲ್ಲಿ, ಸ್ವಂತ ಕುಟುಂಬದಲ್ಲಿ, ಮದುವೆಯಾಗಿ ಸೇರಿಸ ಮನೆತನದಲ್ಲಿ, ಸಕರ್ಾರಿ ಆವರಣದಲ್ಲಿ ಹೀಗೆ ಎಲ್ಲಿ ದುಬರ್ೀನು ಹಿಡಿದರೂ ಅವಳಿಗೆ ಭದ್ರತೆಯ ತಾಣವಿಲ್ಲ.  'ಯಾರ ಬರುವಿಗೆ ಉದುರು ನೋಡುವೆ? ಯಾರ ರಕ್ಷಣೆಗೆ ನೀನು ಕಾಯುವೆ? ಶಾಸನ-ಕೋಟರ್ು-ಕಛೇರಿ ಎಲ್ಲಾ ಕನ್ನಡಿಯೊಳಗಿನ ಗಂಟಿನಂತೆ' ಭದ್ರತೆ ಎಲ್ಲಿ ಸಿಗುತ್ತದೆ? ಅದೊಂದು ಸಮಾಜದ ಎಚ್ಚೆತ್ತ ಪ್ರಜ್ಞೆಯ ಭಾಗವಾಗಿ ಮೂಡಬೇಕಾದುದು. ನೆರೆಹೊರೆಯವರಲ್ಲಿ ಹೆಣ್ಣಿನ ಬಗೆಗಿನ ಕಡೆಗಣ್ಣ ನೋಟದಲ್ಲಿ ಆಗಬೇಕಾದ ಬದಲಾವಣೆಯ ಭಾಗವಾಗಿ 'ಮಹಿಳಾ ಭದ್ರತೆ' ಇದೆ.
ಲೈಂಗಿಕ ಪ್ರವಾಸೋದ್ಯಮ, ಲೈಂಗಿಕ ರಾಜಕಾರಣ ಅಸಹ್ಯ ಹುಟ್ಟಿಸುವ ಸಂಗತಿಗಳು. ಅದರ ಭಾಗವಾಗಿ ಹೆಣ್ಣುಗಳ-ಮಕ್ಕಳ ಮಾರಾಟ ಜಾಲವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಸುಂದರ ಹೆಣ್ಣು ಮಕ್ಕಳನ್ನು -ಅವರ ಆಥರ್ಿಕ ಅಭದ್ರತೆಯನ್ನೇ ಬಂಡವಾಳವಾಗಿಸಿ- ಖರೀದಿಸಿ ತಮ್ಮ ಕಣ್ಣೋಟಕ್ಕೆ ಹೇಗೆ ಬೇಕೋ ಹಾಗೆ ನಗ್ನ-ಅರೆ ನಗ್ನವಾಗಿ ಚಿತ್ರೀಕರಿಸಿಕೊಂಡು  ಮಾಧ್ಯಮಗಳಲ್ಲಿ ಹಾಗೂ ಸಿನೇಮಾಗಳಲ್ಲಿ,  ಹಣಕಾಸು ವ್ಯವಹಾರ ಕುದುರುತ್ತಿರುವುದು ಆಘಾತಕಾರಿ ಬೆಳವಣಿಗೆ. ಇಲ್ಲಿ ಎಂತೆಂಥ ಮನಸ್ಸುಗಳು ಕೆಲಸ ಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಸಮಾಜದ ರಚನಾವಿಧಾನದ ಹಾಗೂ ಸಮಾಜದ ಬೆಳವಣಿಗೆ ಕಾಲಘಟ್ಟದಲ್ಲಿ ಸ್ತ್ರೀಯರ ಕುರಿತು ಯಾವ ಮೌಲ್ಯಗಳನ್ನು ಬಿತ್ತಲಾಗಿದೆಯೋ ಅದರ ಭಾಗವಾಗಿಯೇ ಇಂದಿಗೂ ಸಮಾನತೆಯ ವಿಷಯ ಹೇಳಿದರೆ ಮುಗಿಬೀಳುವವರ ಸಂಖ್ಯೆಯೇ ಹೆಚ್ಚು. ಹೆಣ್ಣನ್ನು ಮನುಷ್ಯನೆಂದು ಪರಿಗಣಿಸದ ಲಿಂಗ ಅಸಮಾನತೆ, ಹೆಣ್ಣಿಗೂ ಎಲ್ಲರಂತೆ ಇರುವ ಭಾವನೆ-ಶ್ರದ್ಧೆಯನ್ನು ಗೌರವಿಸದ ಧಾಮರ್ಿಕ ಅಸಮಾನತೆ, ಸಮಾಜದ ಆಗುಹೋಗುಗಳ ಕುರಿತು ನೀತಿ ನಿರೂಪಿಸಿ ಶಾಸನ ಮಾಡುವವುದನ್ನು ನಿರಾಕರಿಸುವ ರಾಜಕೀಯ ಅಸಮಾನತೆ,  ಸಮಾಜದ ಸವರ್ಾಂಗೀಣ ಬೆಳವಣಿಗೆಗೆ ಹೆಣ್ಣಿನ ಕೊಡುಗೆ ಪಡೆದೂ ಕೂಡ ಪ್ರಗತಿಯಲ್ಲಿ ಹೆಣ್ಣಿನ ದುಡಿಮೆಯನ್ನು ಗೌಣವಾಗಿಸುವ ರಾಜಕೀಯ ಅರ್ಥಶಾಸ್ತ್ರಗಳು ಹಾಗೂ ಸಿದ್ಧಾಂತ ರೂಪಿಸುವಲ್ಲಿಯ ಅಸಮಾನತೆಗಳು, ಸ್ವತಂತ್ರವಾಗಿ, ಗೌರವಯುತವಾಗಿ, ಸಮಾನ ಬದುಕು ಕಟ್ಟಿಕೊಂಡು ಹೋಗಲು ಬೇಕಾಗುವ ಆಥರ್ಿಕ ಸಬಲತೆಯನ್ನು ನಿರಾಕರಿಸುವ ಆಥರ್ಿಕ ಅಸಮಾನತೆಗಳು ಯಾವುದರ ಕೊಡುಗೆ?  ಇದೆಲ್ಲದರ ಹಿಂದೆ ಕೂಡ ಧಾಮರ್ಿಕ ಮೂಲಭೂತವಾದ ಹಾಗೂ ಕೋಮುವಾದದ ಕರಿ ಛಾಯೆಯನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ.
ಮಹಿಳೆಯರನ್ನು ಕೇವಲ ಗೃಹಕೃತ್ಯ ಮತ್ತು ಸಂತಾನೋತ್ವತ್ತಿಯ ಭಾಗವಾಗಿ ಮಾತ್ರ ಕಾಣುವ ಕೋಮುವಾದಿ ವಿಚಾರದಿಂದ ದುಡಿಯುವ ಮಹಿಳೆಯರು ತಮ್ಮ ಆಥರ್ಿಕ ಬೇಡಿಕೆಗಳಿಗಾಗಿ ಹೋರಾಡದಂತೆ ಕಟ್ಟಿಹಾಕುತ್ತದೆ. ಆ ಮೂಲಕ ಆಥರ್ಿಕ ಪ್ರಜ್ಞೆಯ ಹೋರಾಟ ಮೊಟಕುಗೊಳ್ಳುತ್ತದೆ. ಕಾಲಾನಂತರದಲ್ಲಿ ಸಮಾಜ ಬದಲಾವಣೆಯ ಕ್ರಾಂತಿಕಾರಿ ಪ್ರಜ್ಞೆ ಉದ್ಭವಿಸದಂತೆ ಪ್ರತಿಹಂತದಲ್ಲಿ ವಿಘ್ನಗಳನ್ನು ತಂದೊಡ್ಡುತ್ತದೆ ಎಂಬುದಂತೂ ಸತ್ಯ.
ಮೂಲಭೂತವಾದ-ಕೋಮುವಾದದ ವಿರುದ್ಧ ಹೋರಾಡಲು ವ್ಯೂಹೋಪಾಯಗಳು.
- ಕೋಮುವಾದವನ್ನು ನಿಯಂತ್ರಣ ಮಾಡಿ, ನಿಮರ್ೂಲನೆಗೆ ಮುಂದಾಗದಿದ್ದರೆ ದೇಶಕ್ಕೆ ಗಂಭೀರ ಅಪಾಯವಂತೂ ಇದೆ ಎನ್ನುವುದು ಸ್ಪಷ್ಟ. ಈ ಕಾರಣಕ್ಕಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ತನ್ನ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸುತ್ತದೆ. ದೇಶದ ಅತ್ಯಂತ ಸಮರಶೀಲ ಕಾಮರ್ಿಕ ಸಂಘಟನೆಯಾದ ಸಿಐಟಿಯುನ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಈ ಸಮಾಜವನ್ನು ವರ್ಗ ದೃಷ್ಠಿಕೋನದಿಂದಲೇ ವಿಶ್ಲೇಷಣೆಗೊಳಪಡಿಸುತ್ತದೆ. ಮುಖ್ಯ ಬೇಡಿಕೆಗಳ ಕುರಿತು ಹೋರಾಡುತ್ತಲೇ ಕೋಮುವಾದದ ವಿರುದ್ಧ ಕೂಡ ಸೆಣಸುವುದು ಕಾಮರ್ಿಕ ಸಂಘಟನೆಗಳ ಪ್ರಮುಖ ಅವಿಭಾಜ್ಯ ಕೆಲಸವಾಗಿದೆ ಎಂದು ನಂಬಿವೆ.
- ಕಾಮರ್ಿಕ ವರ್ಗದ ಪ್ರಮುಖ ವಿಭಾಗವಾದ ದುಡಿಯುವ ಮಹಿಳೆಯರು- ಅಂಗನವಾಡಿ ನೌಕರರು, ಅಕ್ಷರ ದಾಸೋಹ ಅಡುಗೆಯವರು, ಬೀಡಿ ಕಟ್ಟುವವರು, ಗಾಮರ್ೆಂಟ್ಸ ಹಾಗೂ ಇತರೆಡೆ  ಕೈಮಗ್ಗ-ವಿದ್ಯುತ್ ಮಗ್ಗಗಳಲ್ಲಿ ದುಡಿಯುವವರು, ಮಹಿಳಾ ಹಮಾಲಿ ಮತ್ತು ಪೌರ ಕಾಮರ್ಿಕರು, ಆಶಾ ಕಾರ್ಯಕತರ್ೆಯರು, ವಿವಿಧ ಕೈಗಾರಿಕೋದ್ಯಮಗಳಲ್ಲಿ, ಕಾಖರ್ಾನೆಗಳಲ್ಲಿ ದುಡಿಯುವ ಮಹಿಳೆಯರು, ಬೀದಿ ಬದಿ ವ್ಯಾಪಾರದಲ್ಲಿ ತೊಡಗಿರುವವರು, ಕೋಟರ್ು-ಕಛೇರಿಯಳಲ್ಲಿ ಕೆಲಸ ಮಾಡುವ ಕೇಂದ್ರ ಮತ್ತು ರಾಜ್ಯ ಸಕರ್ಾರಿ ನೌಕರರಲ್ಲಿ   ಜಾತ್ಯತೀತ ಮನೋಭಾವ ಬೆಳೆಸುವ ಕೆಲಸವು ದುಡಿಯುವ ವರ್ಗದ ವರ್ಗ ಹೋರಾಟದ ಜೊತೆಯಲ್ಲೇ ಆಗಬೇಕಾಗುತ್ತದೆ. ಭಾರತದ ಹಳ್ಳಿಗಳ ಜನಸಮುದಾಯದೊಂದಿಗೆ ದಿನನಿತ್ಯದ ಜೀವಂತ ಸಂಬಂಧ ಹೊಂದಿರುವ ಇವರು ಜಾತ್ಯಾತೀತ ವಿಚಾರ ಪ್ರಣಾಳಿಯನ್ನು ಪ್ರಚುರ ಪಡಿಸುವ ಒಂದು ಸಮರ್ಥನೀಯ ವಿಭಾಗವಾಗಿ ಮಾರ್ಪಡಬೇಕಿದೆ. ಸಿಐಟಿಯು ಮಾರ್ಗದರ್ಶನ ಮಾಡಿದಂತೆ, ನಾವು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಗಂಭೀರಹೋರಾಟ ನಡೆಸಿದರೆ ಮಾತ್ರವೇ ಮೂಲಭೂತವಾದ ಹಾಗೂ ಕೋಮುವಾದವನ್ನು ಹಿಮ್ಮೆಟ್ಟಿಸಬಹುದಾಗಿದೆ.
- ನೂರಾರು ವರ್ಷಗಳಿಂದ ಬೇರೂರಿದ ಮೂಲಭೂತವಾದಿ-ಕೋಮುವಾದಿ ಆಲೋಚನೆಯನ್ನು ತಕ್ಷಣದಲ್ಲಿ ಕಿತ್ತೆಸೆಯಲು ಅಸಾಧ್ಯವಾದ್ದರಿಂದ, ವಿಶೇಷವಾದ, ಪರಿಣಾಮಕಾರಿಯಾದ ಮತ್ತು ನಿರಂತರವಾದ ಪ್ರಯತ್ನಗಳನ್ನೇ ಹಾಕಬೇಕಾಗುತ್ತದೆ.
- ದೇಶದ ಹಲವಾರು ಪ್ರಗತಿಪರ ಬಿದ್ಧಿಜೀವಿಗಳು, ಹೋರಾಟಗಾರರು ಗುರುತಿಸಿದಂತೆ ಕೋಮುವಾದದ ನೆಲೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಜನರು ಅದರ ವಿರುದ್ಧ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಂಘಟಿತರಾಗದಿದ್ದರೆ, ಕೋಮುಪೀಡೆಯನ್ನು ಸೃಷ್ಠಿಸುವ ವ್ಯವಸ್ಥೆ ಇನ್ನಷ್ಟು ಬಲಗೊಂಡು ಇನ್ನೂ ಹೆಚ್ಚಿನ ಆಹುತಿಯನ್ನು ತೆಗೆದುಕೊಳ್ಳುತ್ತದೆ. ಅಂಥ ಮಾನಸಿಕ, ಧಾಮರ್ಿಕ ಚೌಕಟ್ಟನ್ನು ರೂಪಿಸಿಕೊಳ್ಳುತ್ತದೆ. ಇದರಿಂದ ನಮ್ಮ ಸಮಾಜದಲ್ಲಿ ಆಗಬೇಕಾಗಿರುವ ಸಾಮಾಜಿಕ, ಆಥರ್ಿಕ ಬೆಳವಣಿಗಳು ಇನ್ನೂ ಮುಂದೂಡಲ್ಪಡುತ್ತವೆ.
- ವಿನಾಶಕಾರಿ ಆಥರ್ಿಕ ನೀತಿಗಳ ವಿರುದ್ಧ, ನಿರುದ್ಯೋಗದ ವಿರುದ್ದ ಹೋರಾಡುತ್ತಲೇ ಕೋಮುವಾದಿ-ಜಾತಿವಾದಿ-ವಿಭಜನಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ಅದಕ್ಕಾಗಿ ತಳಮಟ್ಟದ ತನಕ ವ್ಯಾಪಕ ಹೋರಾಟ ನಡೆಸುವುದೊಂದೇ ದಾರಿ.
- ದುಡಿಯುವ ಮಹಿಳೆಯರು ಕೋಮುವಾದದ ಅಪಾಯಗಳ ಕುರಿತು ಸ್ವಯಂಶಿಕ್ಷಣ ಹೊಂದಬೇಕು, ಸಾಹಿತ್ಯ ಅಭ್ಯಾಸ ಮಾಡಬೇಕು, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಕೋಮುವಾದಿ ಅಪರಾಧಿಕ ಆಕ್ರಮಣಗಳಿಗೆ ತುತ್ತಾದ, ದಾಳಿಗೊಳಗಾದ ಸಂದರ್ಭಗಳ ತಿಳಿವಳಿಕೆ ಪಡೆಯಬೇಕು. ಗಲಭೆಗ್ರಸ್ತ ಪ್ರದೇಶದಲ್ಲಿ ಪರಿಹಾರಕಾರ್ಯ, ನೆರವು ನೀಡಲು ಮುಂದಾಗಬೇಕು.
- ನಮ್ಮ ಮಕ್ಕಳಿಗೆ ಬೋಧಿಸುವ ಶಿಕ್ಷಣಕ್ಕೆ ಅನ್ವಯವಾಗುವ ಚಿಕ್ಕ ಚಿಕ್ಕ ಪ್ರಗತಿಪರ ಕಥೆ, ಹಾಡು, ಮಕ್ಕಳ ನಾಟಕಗಳನ್ನು ಹೇಳಿಕೊಡುವಂತಾಗಬೇಕು. ಸೌಹಾರ್ದತೆ ಸಾರುವ ಕರಪತ್ರ, ಪೋಷ್ಟರ್ಸ್, ಬೀದಿಬದಿ ಸಭೆಗಳು, ವಿಚಾರ ಸಂಕಿರಣಗಳನ್ನು ನಡೆಸಬೇಕು.
- ಪ್ರತಿಯೊಂದು ಸಭೆ-ಸಮಾರಂಭ, ಹೋರಾಟ ಕಾರ್ಯಕ್ರಮಗಳಲ್ಲಿ ಕೋಮುವಾದದ ಅಪಾಯದ ಕುರಿತು ವಿಚಾರ-ವಿಮಶರ್ೆ ನಡೆಸುವುದು, ಅತ್ಯಂತ ಕೆಳಸ್ತರದಿಂದ ಬಂದ ದುಡಿಯುವ ಮಹಿಳೆಯರನ್ನು ಇಡಿಯಾಗಿ ಎಜ್ಯುಕೇಟ್ ಮಾಡಬೇಕು, ಅವರಿಗೆ ತಿಳಿಯುವ ರೀತಿಯಲ್ಲಿ ಸಂವಾದ-ಸಂವಹನ ನಡೆಸುವುದು. ಭಾರತದ ಜಾತ್ಯತೀತ, ಬಹುಸಂಸ್ಕೃತಿಯ ಉದ್ದೇಶಗಳಿಗೆ ಪ್ರಥಮ ಬದ್ಧತೆಯನ್ನು ಅವರಲ್ಲಿ ಮೂಡಿಸಬೇಕಾದುದು ಮುಖ್ಯ. ನಂತರ
- ದಿನನಿತ್ಯದ ನಮ್ಮ ಚಟುವಟಿಕೆಗಳಿಗೂ ಕೋಮುವಾದಕ್ಕೂ ಇರುವ ಸಂಬಂಧ ಗುರುತಿಸಲು ಮತ್ತು ತಾವು ಕೆಲಸ ಮಾಡುವ ಪ್ರದೇಶದಲ್ಲಿ ಕೋಮುವಾದಿ ಪ್ರಕ್ರಿಯೆ ಗುರುತಿಸಲು ಸಾಧ್ಯವಾಗಬೇಕು.
- ಕೋಮುವಾದದ ವಿರುದ್ಧ ಹೋರಾಟವೆಂದರೆ ಸಂವಿಧಾನದ ಆಶಯಗಳನ್ನು ಜಾರಿ ಮಾಡುವ ಹಾಗೂ ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿನ ಹೋರಾಟವೇ ಆಗಿದೆ.

ಅಂತಿಮವಾಗಿ ಅನಿಸುವುದಿಷ್ಟು: ಕುಟುಂಬದ ಹೊರೆಯನ್ನು ವಾಸ್ತವಿಕವಾಗಿ ಹೊತ್ತು, ಸಾಮಾಜಿಕವಾಗಿ ಮಾನವ ಜನಾಂಗವನ್ನು ಮುಂದೆ ಕೊಂಡೊಯ್ಯುವ ಜವಾಬ್ದಾರಿಯನ್ನು ಜೈವಿಕವಾಗಿಯೂ ಹೊತ್ತವಳು ಮಹಿಳೆ. ತಾಯಿತನ ಎನ್ನುವುದು ಕೇವಲ ಮಹಿಳೆಗೆ ಆರೋಪಿಸಿರುವ ಗುಣವಾಗಿ ಮಾರ್ಪಟ್ಟಿರುವುದು ದೌಭರ್ಾಗ್ಯ. ತಾಯಿತನ ಎನ್ನವುದು ಪರಸ್ಪರರನ್ನು ಪ್ರೀತಿ ಗೌರವದಿಂದ ಕಾಣುವ, ಸಮಾನರೆಂದು ಪರಿಗಣೀಸುವ, ಸ್ಪಂದಿಸುವ, ಒಬ್ಬರಿಗೊಬ್ಬರು ಒದಗುವ ಕ್ರಿಯೆ ಎಂದು ಅಥರ್ೈಸುವುದಾದರೆ ಈ ತಾಯಿತನ ಗಂಡು ಹೆಣ್ಣು ಎರಡರಲ್ಲೂ  ಇರಬೇಕಾದ ಸಮಾನ ಗುಣವಿಶೇಷ. ಆದರೆ ಇಂದು ಲಿಂಗ ರಾಜಕಾರಣ ಎಷ್ಟು ಪ್ರಬಲವಾಗಿ ಬೆಳೆಯುತ್ತಿದೆ ವರ್ಗಗುಣ ಆವರಿಸಿ ಸೂಕ್ಷ್ಮ ಸಂವೇದನೆಯ ತಾಯಿತನ ಮರೆಯಾಗುತ್ತಿದೆ ಎಂಬ ಆತಂಕವಂತೂ ಇದ್ದೇ ಇದೆ. ಇಂಥ ತಾಯಿತನವನ್ನು ಆಥರ್ಿಕ ಕಾರಣಗಳು ಅಪಹರಿಸಿದರೆ ರಾಜಕೀಯ-ಸಾಮಾಜಿಕ ಕಾರಣಗಳು ತಾಯಿತನವನ್ನು ಸಾಯಿಸುತ್ತಿವೆ. ಅದಕ್ಕೆ ಅತಿ ಹೆಚ್ಚು ಕೊಡುಗೆ ಕೊಡುತ್ತಿರುವುದೆಂದರೆ ನವುದಾರವಾದಿ ಆಥರ್ಿಕ ನೀತಿ ಮತ್ತು ಮೂಲಭೂತವಾದ-ಕೋಮುವಾದ-ಭಯೋತ್ಪಾದನೆ-ಧಮರ್ಾಂಧತೆಗಳು. ಇವುಗಳಿಗೆ ತಾಯಿತನವೂ ಇಲ್ಲ, ಮಾನವೀಯ ಮುಖಗಳೂ ಇಲ್ಲ.  
                                                                                   ಯಮುನಾ ಗಾಂವ್ಕರ್, ಉತ್ತರ ಕನ್ನಡ

No comments:

Post a Comment