Monday 16 September 2019

ಸಂವಿಧಾನವನ್ನು ಬದಲಾಯಿಸಬಹುದೇ

ಸಂವಿಧಾನವನ್ನು ಬದಲಾಯಿಸಬೇಕು ಎನ್ನುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸಬಹುದೇ? ಆಯಾ ಸರ್ಕಾರ ತಮಗೆ ಬೇಕಾದ ಸಂವಿಧಾನವನ್ನು ತಂದುಕೊಳ್ಳಬಹುದೇ?
ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಸಂವಿಧಾನವೇ ಅನುಚ್ಚೆÃದ ೩೬೮ರಲ್ಲಿ ಸಂಸತ್ತಿಗೆ ಈ ಅಧಿಕಾರವನ್ನು ನೀಡಿದೆ. ಕಳೆದ ೭೦ ವರ್ಷಗಳಲ್ಲಿ ೧೦೪ ತಿದ್ದುಪಡಿಗಳನ್ನು ಮಾಡಲಾಗಿದೆ. ಬದಲಾಗುತ್ತಿರುವ ಕಾಲಮಾನ, ಹೊಸ ಪರಿಸ್ಥಿತಿ ಹಾಗೂ ಸಮಸ್ಯೆಗಳಿಗೆ ಅನುಗುಣವಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿಗಳನ್ನು ತಂದುಕೊಳ್ಳಬಹುದು.ಆದರೆ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನವನ್ನಾಗಲಿ ಅದರ ಮೂಲತತ್ವಗಳನ್ನಾಗಲಿ ಅಮೂಲಾಗ್ರವಾಗಿ ಬದಲಾಯಿಸುವಂತಿಲ್ಲ.
ಅನುಚ್ಚೆÃದ ೩೬೮ರಲ್ಲಿ ತಿದ್ದುಪಡಿ ಮಾಡಲು ನೀಡಿರುವ ಅಧಿಕಾರವು ನಿರುಪಾಧಿಕವೇ ಅಥವಾ ನಿರ್ಬಂಧಗಳಿಗೆ ಒಳಪಟ್ಟಿದೆಯೇ ಎಂಬ ಪ್ರಶ್ನೆ ೧೯೭೩ರಲ್ಲಿ ಕೇಶವಾನಂದ ಭಾರತಿ ಮಹಾಸ್ವಾಮಿಗಳು ಎಂಬ ಪ್ರಕರಣದಲ್ಲಿ ಸರ್ವೊÃಚ್ಛ ನ್ಯಾಯಾಲಯದ ಮುಂದೆ ಬಂತು. ಈ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಸರ್ವೊÃಚ್ಚ ನ್ಯಾಯಾಲಯವು ಸಂವಿಧಾನದಲ್ಲಿ ಅಂತರ್ಗತವಾಗಿರುವ ಮೂಲತತ್ವಗಳನ್ನು ಹೆಕ್ಕಿ, ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. ಅದರಂತೆ, ಸಂವಿಧಾನದ ಪರಮಾಧಿಕಾರ, ಭಾರತದ ಸಾರ್ವಭೌಮತ್ವ, ಸಂಸದೀಯ ಪ್ರಜಾಪ್ರಭುತ್ವ, ಕಲ್ಯಾಣ ರಾಜ್ಯದ ಪರಿಕಲ್ಪನೆ, ಧರ್ಮ ನಿರಪೇಕ್ಷತೆ, ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಕಿತ್ತುಹಾಕುವ ಅಧಿಕಾರ ಸಂಸತ್ತಿಗೆ ಇಲ್ಲವೆಂದು ಘೋಷಿಸಲಾಗಿದೆ.
ಅದರಂತೆ, ಅನುಚ್ಚೆÃದ ೩೬೮ರಲ್ಲಿ ನೀಡಿರುವ ಅಧಿಕಾರವನ್ನು ಬಳಸಿ ಸಂಸತ್ತು ಈಗಿರುವ ಸಂವಿಧಾನವನ್ನು ಕಿತ್ತುಹಾಕಿ ಮತ್ತೊಂದು ಹೊಸ ಸಂವಿಧಾನವನ್ನು ತರಲು ಅವಕಾಶವಿಲ್ಲ.
ಸಂವಿಧಾನ ಜಾರಿಗೆ ಬಂದ ನಂತರ ನಾವು ಸಾಕಷ್ಟು ಸಾಧನೆಗಳನ್ನು ಮಾಡಿದ್ದೆÃವೆ. ಆದರೂ, ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ಜೊತೆಗೆ ದೇಶ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಮತ್ತು ಸಮಸ್ಯೆಗಳಿಗೆ ಕಾರಣ ನಮ್ಮ ಸಂವಿಧಾನ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ ಇದು ತಪ್ಪು ತಿಳಿವಳಿಕೆ. ನಮ್ಮ ಸಂವಿಧಾನವನ್ನು ಜಾರಿಗೊಳಿಸುತ್ತಿರುವ ಜನರಲ್ಲಿಯೇ ದೋಷವಿದೆ. ೧೯೪೯ರಲ್ಲಿ ಕರಡು ಸಂವಿಧಾನವನ್ನು ಅಂಗೀಕಾರಕ್ಕೆ ಮಂಡಿಸಿದಾಗ ಡಾ.ಅಂಬೇಡ್ಕರ್‌ರವರು ಎಚ್ಚರಿಕೆಯ ಮಾತು ಹೇಳಿದ್ದರು: ‘ಸಂವಿಧಾನ ಎಷ್ಟೆÃ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಒಳ್ಳೆಯದು ಕೂಡ ಕೆಟ್ಟದಾಗಿ ಬಿಡುತ್ತದೆ’ ಎಂದು. ಹಾಗಾಗಿ ಸಂವಿಧಾನವನ್ನು ಅನುಷ್ಠಾನಗೊಳಿಸುವ ಜನರು ಅದಕ್ಕೆ ಬದ್ಧರಾಗಿ ಇರಬೇಕು. ಅವರು ಸರಿ ಇಲ್ಲದೆ ಹೋದರೆ ಸಂವಿಧಾನವೇ ತಪ್ಪಾಗಿ ಕಾಣಿಸುತ್ತದೆ.

No comments:

Post a Comment