ಆ ಒಂದು ಜಗಲಿ ಕಟ್ಟೆ..

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

ನೆನಪು 12
ಹಕ್ಕೆ ಜಗಲಿ ಪುರಾಣ
ನಮ್ಮಲ್ಲಿ ‘ಹಕ್ಕೆ ಜಗುಲಿ ಪುರಾಣ’ ಎಂದರೆ ಕೆಲಸಕ್ಕೆ ಬಾರದ ಮಾತುಕತೆ ಎಂದರ್ಥ. ಅಂಗಳಕ್ಕೆ ಇಳಿಯದೇ ಮನೆಯ ಒಳಗೇ ಕುಳಿತು ಮಾಡುವ ಕಾಲಹರಣ. ಉತ್ತರನ ಪೌರುಷ ಎಂತಲೂ ಬಳಕೆ ಇದೆ.
ಅದು ಏನೇ ಇರಲಿ. ನಮ್ಮ ಹಳ್ಳಿಯಲ್ಲಿ ಪ್ರತಿ ಮನೆಯಲ್ಲಿ ಒಂದು ಜಗಲಿ ಮತ್ತು ಹೊರಗೆ ಕುಳಿತುಕೊಳ್ಳಲು ಒಂದು ಹಕ್ಕೆ ಜಗುಲಿ (ಹಕ್ಕೆ ಚಿಟ್ಟೆ ಅಂತಲೂ ಹೇಳುತ್ತಾರೆ) ಇದ್ದೇ ಇರುತ್ತದೆ. ಸಾಮಾನ್ಯವಾಗಿ ಸಂಜೆ ಹೊತ್ತು ಈ ಹಕ್ಕೆ ಜಗುಲಿಯಲ್ಲಿ ಕುಳಿತೇ ಸುದ್ದಿ ಹೇಳುವುದು.
ಆದರೆ ನಮ್ಮ ಮನೆಯಲ್ಲಿ ಹಕ್ಕೆ ಜಗುಲಿ ಇರಲಿಲ್ಲ. ಮಣ್ಣಿನ ಗೋಡೆಯಿರುವ ಸಣ್ಣ ಮನೆ. ನಮ್ಮ ಮನೆಯ ಹಿಂದಿನ ಮನೆಯಲ್ಲಿರುವ ಸುಬ್ರಾಯ ಶೆಟ್ಟರು ಈ ಗೋಡೆ ನಾನೇ ಹಾಕಿದ್ದು ಎಂದು ವರ್ಣಿಸುತ್ತಿದ್ದರು. ಮನೆಯಲ್ಲಿ ಸಣ್ಣ ಹೊಳ್ಳಿ (ಜಗಲಿ); ಅದಕ್ಕೆ ಕಟ್ಟಿಗೆ ರೀಪಿನ ಶಿರವಾಳ್ತೆ (ಕಡಕಟ್ಟು, ಕಟಾಂಜನ); ಶಿರವಾಳ್ತೆಗಿರುವ ಬಾಗಿಲು ದಾಟಿದರೆ ಅಂಗಳ. ಹೊಳ್ಳಿ ಕೂಡ ಸಣ್ಣದು. ಆಚೆ ಈಚೆ ಎರಡು ಖುರ್ಚಿ ಹಾಕಿದರೆ ಮೂರನೆಯವರು ಸ್ವಲ್ಪ ಅಡ್ಡಾಡುವುದೂ ಕಷ್ಟವೇ.
ನಮ್ಮ ಮನೆಗೆ ಬಂದುಹೋಗುವವರು ಸ್ವಲ್ಪ ಹೆಚ್ಛೇ ಅನ್ನಬೇಕು. ಅಣ್ಣ ಮಾಸ್ತರ್ ಆಗಿರುವುದು ಒಂದಾದರೆ ಒಬ್ಬ ಲೇಖಕನಾಗಿರುವದರಿಂದಲೂ ಸ್ನೇಹದಿಂದ, ಗೌರವದಿಂದ ಆತನ ಸಲಹೆ ಕೇಳಲು, ಮಾತಾಡಿಸಲು ಬರುತ್ತಿದ್ದರು. ಹಾಗಾಗಿ ಹೊಳ್ಳಿಯನ್ನು ಸ್ವಲ್ಪ ವಡಾಯಿಸಲು (ವಿಸ್ತರಿಸಲು) ನಿರ್ಧರಿಸಿ, ಯಾವಾಗಲೂ ನಮ್ಮ ಮನೆಯ ಕೆಲಸ ಮಾಡಿಕೊಡುತ್ತಿದ್ದ ಅಯ್ಯನಿಗೆ ಹೇಳಲಾಯಿತು.
ಇದರ ಭಾಗವಾಗಿ ಒಂದಿಷ್ಟು ಕಡಗಲ್ಲು (ಚೀರೆ ಕಲ್ಲು) ಮನೆ ಎದುರು ಬಂದಿತು. ಮನೆಯ ಮುಂದಿನ ಮಾಡನ್ನು (ಚಾವಣಿ) ಉದ್ದ ಮಾಡಲು “ಕಟ್ಟಿಗೆ ತರುವುದು ಬೇಡ; ಕಾಡಿನ ಮರ ನಾಶ ಮಾಡುವುದು ಸರಿ ಅಲ್ಲ” ಎಂದು ಅಣ್ಣನ ಆದೇಶ ಆಗಿರುವುದರಿಂದ ತೆಂಗಿನ ಪಟ್ಟಿ ತರಲಾಯಿತು. ಹೊಳ್ಳಿಯ ತುದಿಗೆ 2 ಫೂಟಿನಲ್ಲಿ ಕಲ್ಲುಕಟ್ಟಿ ಅದರ ಮೇಲೆ ಶಿರವಾಳ್ತೆ ಕಟ್ಟುವುದು, ಅದರ ಮುಂದೆ ಬೇಸಿಗೆಯಲ್ಲಿ ಕುಳಿತುಕೊಳ್ಳಲು ಅನುಕೂಲ ಆಗುವಂತೆ ಒಂದುವರೆ ಫೂಟಿನ ಹಕ್ಕೆ ಜಗುಲಿ ಕಟ್ಟುವುದೆಂದು ನಾವು ತೀರ್ಮಾನಿಸಿ, ಅದರಂತೆ ಕಲ್ಲು ಕಟ್ಟಲು ಪ್ರಾರಂಭಿಸಿದರು.
ಮಧ್ಯಾಹ್ನದೊಳಗೆ ಸುಮಾರು ಅರ್ಧ ಕೆಲಸ ಮುಗಿದಿರಬೇಕು. ಶಾಲೆ ಬಿಟ್ಟು ಬಂದ ಅಣ್ಣ ಹಿಂದೆ ಮುಂದೆ ಅಡ್ಡಾಡಿ ಹೊರಗೆ ಕಟ್ಟುತ್ತಿರುವುದು ಏನು ಎಂದು ವಿಚಾರಿಸಿದ. ಹೊರಗೆ ಒಂದು ಕಟ್ಟೆ, ಯಾರಾದರೂ ಬಂದರೆ, ನೀವು ಸಂಜೆ ಒಂದು ಗಳಿಗೆ ಕುಳಿತುಕೊಳ್ಳುವುದಕ್ಕೆ ಒಂದು ಕಟ್ಟೆ ಕಟ್ಟುತ್ತೇವೆ; ಚೆನ್ನಾಗಿರುತ್ತದೆ ಎಂದು ಅಯ್ಯ ಹೇಳಿದ.
ಇದಕ್ಕೆ ಅಣ್ಣ ಗ್ರೀನ್ ಸಿಗ್ನಲ್ ನೀಡಲಿಲ್ಲ. ಯಾವುದೇ ಕಾರಣಕ್ಕೂ ಈ ಕಟ್ಟೆ ಕಟ್ಟ ಬಾರದೆಂದು ಅಣ್ಣ ಹಠ ಹಿಡಿದ. ತಾನು ಮಾಡುವ ಕೆಲಸಕ್ಕೆ ಶಹಬ್ಬಾಸ್ ಗಿರಿ ಪಡೆಯಬೇಕೆಂದುಕೊಂಡು ಉತ್ಸಾಹದಿಂದ ವಿವರಿಸಿದ ಅಯ್ಯನಿಗೆ ನಿರಾಶೆಯಾಯಿತು.
ನಮಗೂ ನಿರಾಸೆಯೇ.
ನಮಗೂ ನಿರಾಸೆಯೇ.
ಯಾಕೆ ಬೇಡ ಎಂದು ನಾವೂ ಕೇಳಿದೆವು. ಆದರೆ ಆತ ಅದಕ್ಕೆ ಕಾರಣ ಹೇಳಲು ತಯಾರಿರಲಿಲ್ಲ. ಅಂತೂ ಇಂತೂ ತುಂಬಾ ಒತ್ತಾಯಿಸಿದ ಮೇಲೆ ಆತ “ಮನೆಗೆ ಯಾರೇ ಬಂದರೂ ಇಷ್ಟು ದಿನ ಒಳಗೆ ಹೊಳ್ಳಿಯ ಮೇಲೆ ಕುಳ್ಳಿರಿಸಿಕೊಳ್ಳುವುದು, ಅಲ್ಲಿಯೇ ನಮ್ಮೊಂದಿಗೆ ಚಹ ತಿಂಡಿ ಕೊಡುವುದು ಮಾಡುತ್ತಿದ್ದೆವು. ಇನ್ನು ಬೇರೆ ಬೇರೆ ಜಾತಿಯವರು ಬಂದರೆ ಹೊರಗೆ ಹಕ್ಕೆ ಜಗುಲಿಯ ಮೇಲೆ ಕುಳ್ಳಿರಿಸಿ ಚಾ ತಿಂಡಿ ಕೊಡುವುದಿಲ್ಲ ಎಂದು ಯಾವ ಗ್ಯಾರಂಟಿ? ನಮ್ಮೂರಲ್ಲಿ ಹಲವು ಮನೆಗಳಲ್ಲಿ ಜಾತಿಯಲ್ಲಿ ಕೀಳು ಎಂದು ಪಟ್ಟಕಟ್ಟಿ ಹೊರಗೆ ಕುಳ್ಳಿರಿಸಿ ಚಾ ಕೊಡುತ್ತಾರೆ. ಅದು ನಮ್ಮಲ್ಲಿ ಆದರೆ ನಮಗೂ ಉಳಿದವರಿಗೂ ಏನು ವ್ಯತ್ಯಾಸ?” ಎಂದು ತನ್ನ ಭಯ,ಆತಂಕ ವ್ಯಕ್ತಪಡಿಸಿದ.
ಎಂಥ ಅದ್ಭುತ ಆಲೋಚನೆ ಅನ್ನಿಸಿತು. ಹೊರಗೆ ಹಕ್ಕೆ ಜಗಲಿ ಇಲ್ಲದಿದ್ದರೆ ಹೊರಗೆ ಕೂಡ್ರಿಸುವ ಪ್ರಶ್ನೆಯೇ ಇರುವುದಿಲ್ಲ. ಅನಿವಾರ್ಯವಾಗಿಯಾದರೂ ಯಾವುದೇ ಜಾತಿಯವರು ಬಂದರೂ ಒಳಗೇ ಕರೆಯಬೇಕಲ್ಲಾ ಎನ್ನುವುದು ಆತನ ಆಶಯ.
ಹಾಗಾಗುವುದಿಲ್ಲವೆಂದು ನಾವೆಲ್ಲಾ ಭರವಸೆ ಕೊಟ್ಟು ಅವನನ್ನು ಒಪ್ಪಿಸಲಾಯಿತು.
ಹಾಗಾಗುವುದಿಲ್ಲವೆಂದು ನಾವೆಲ್ಲಾ ಭರವಸೆ ಕೊಟ್ಟು ಅವನನ್ನು ಒಪ್ಪಿಸಲಾಯಿತು.
ಹಕ್ಕೆ ಜಗಲಿ ಕಟ್ಟಿದ ಮೇಲೂ ಯಾವುದೇ ಜಾತಿಯವರು, ದಲಿತರು ಮನೆಗೆ ಬಂದರೂ ಒಳಗೆ ಕರೆದು ಚಹಾ ಕೊಟ್ಟಾಗಲೇ ಅವನಿಗೆ ಸಂಶಯ ಪರಿಹಾರವಾಗಿದ್ದು. ಬೇಸಿಗೆಯಲ್ಲಿ ಚಪ್ಪರ ಹಾಕಿದ್ದಾಗ ಆತನೂ ಹೊರಗೆ ಬಂದು ಕುಳಿತುಕೊಳ್ಳುತ್ತಿದ್ದ. ಮೊಮ್ಮಕ್ಕಳೊಂದಿಗೆ ಆಟವಾಡುವಾಗಲೂ ಇಲ್ಲಿ ಕುಳಿತಿರುತಿದ್ದ. ಆತ ಹೊರಗೆ ಕುಳಿತಿರುವಾಗ ಯಾರಾದರೂ ಬಂದರೆ ತಕ್ಷಣ ಒಳಗೆ ಕರೆದುಕೊಂಡು ಹೋಗಿ ಮಂಚದ ಮೇಲೆ ಅಥವಾ ಖುರ್ಚಿಯ ಮೇಲೆ ಕುಳ್ಳಿರಿಸಿ ಮಾತನಾಡುತ್ತಿದ್ದ.
ಹೀಗೆ ಆತನ ಪ್ರತಿ ವ್ಯವಹಾರವೂ ಅತ್ಯಂತ ಸೂಕ್ಷ್ಮವಾಗಿರುತ್ತಿತ್ತು. ಜಾತಿನಿಷ್ಠ ಸಮಾಜದ ಬದಲಾವಣೆಗೆ ತುಡಿಯುವ ಆತನ ಮನಸ್ಸು ಇಂತಹ ಸಣ್ಣ ಸಣ್ಣ ಕಾರ್ಯದಲ್ಲಿಯೂ, ವಿವರಗಳಲ್ಲಿಯೂ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತಿತ್ತು.
ಪ್ರಶಸ್ತಿ ಬಂದಿಲ್ಲವೆಂದು ಅವನ ಆತ್ಮೀಯರು ಬೇಸರ ಪಟ್ಟಿದ್ದಿದೆಯೇ ಹೊರತು ಅವನೆಂದೂ ತಲೆಕೆಡಿಸಿಕೊಂಡಿದ್ದಿಲ್ಲ. ಒಂದೆರಡು ಬಾರಿ ಆತನ ಇಲಾಖೆಯಿಂದ ಸೂಚನೆ ಬಂದಾಗಲೂ ಅರ್ಜಿ ಹಾಕಿ ಪಡೆಯುವ ಪ್ರಕ್ರಿಯೆಯನ್ನೇ ಆತ ವಿರೋಧಿಸಿದ್ದ.
ಆತ ಒಪ್ಪಿದ್ದು ನನಗಂತೂ ತುಂಬಾ ಖುಷಿಯಾಯಿತು. ಆಗ ತಾನೆ ಎಂ.ಎ ಮುಗಿಸಿ ಬಂದಿದ್ದೆ. ಹಲವು ದಾಖಲೆ ಸಂಗ್ರಹಿಸುವಲ್ಲಿ ನಾನೂ ಸಹಕರಿಸಿದೆ. ಪ್ರತಿಗಳನ್ನು ಮಾಡಿ ನಾನು ಕಾರವಾರ ಡಿ.ಡಿ.ಪಿ.ಐ ಕಛೇರಿಗೆ ಸಲ್ಲಿಸಿ ಬಂದೆ. “ನಿನ್ನ ಅಪ್ಪನಿಂದ ಈ ಕೆಲಸ ಮಾಡಿಸಲು ನಾನು ಸುಸ್ತಾದೆ” ಎಂದು ಹೇಳಿ ತಂದ ದಾಖಲೆಯನ್ನು ಟೇಬಲ್ ಮೇಲೆ ಇರಿಸಲು ಹೇಳಿದರು. ಇಷ್ಟರ ಒಳಗೇ ಕೆಲವು ಶಿಕ್ಷಕರು ಯಾವ ಒತ್ತಾಯವೂ ಇಲ್ಲದೇ ತಾವೇ ಸಿದ್ಧಪಡಿಸಿಕೊಂಡು ಬಂದು ಸಲ್ಲಿಸಿದ 3-4 ಅರ್ಜಿಗಳು ಅವರ ಟೇಬಲ್ ಮೇಲೆ ಅನಾಥವಾಗಿ ಬಿದ್ದಿದ್ದವು.
ಎಚ್ ನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ಸಿಕ್ಕ ಪ್ರಶಸ್ತಿಯೆನ್ನುವ ಕಾರಣಕ್ಕೂ ಲಂಚ, ಪ್ರಭಾವ ಮುಂತಾದ ಕೆಟ್ಟ ರಾಜಕೀಯವೇ ಪ್ರಶಸ್ತಿ ಕೊಡುವಲ್ಲಿ ಕೆಲಸ ಮಾಡುತ್ತದೆ ಎಂಬ ಪ್ರಚಾರದ ವಾತಾವರಣ ಇರುವಾಗ ಅದ್ಯಾವುದೂ ಇಲ್ಲದೇ ತನ್ನನ್ನು ಗುರುತಿಸಿದ ಬಗ್ಗೆ ಆತನಿಗೆ ಖುಶಿಯಿತ್ತು. ಹಾಗೆ ನೋಡಿದರೆ ಪ್ರಶಸ್ತಿ ಬಂದಿರುವುದು ಆತನಿಗಿಂತ ಆತನ ಸ್ನೇಹಿತರಿಗೆ ಖುಶಿ ಕೊಟ್ಟಿತ್ತು.
ಇದೆಲ್ಲದರ ಆಚೆಯೂ ಅವನಿಗೆ ವಾಜಂತ್ರಿ ಪ್ರಶಸ್ತಿ, ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯ ಶಿಕ್ಷಣ ಕಲ್ಯಾಣ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ, ಸಿಸು ಸಂಗಮೇಶ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಫೆಲೋಶಿಪ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಮತ್ತು ವಾರ್ಷಿಕ ಗೌರವ ಪ್ರಶಸ್ತಿ…. ಹೀಗೆ ಹಲವು ಪ್ರಶಸ್ತಿಗಳು ಅವನ ಬದುಕಿನ ಕೊನೆಯ ಹಂತದಲ್ಲಿ ಬಂದಿದ್ದವು.
“ಅಧಿಕಾರಕ್ಕಾಗಿ ಬಿಜೆಪಿಯ ಜೊತೆಗೆ ಕೈಜೋಡಿಸಿದ್ದು ಈ ನಾಡಿಗೆ ಜಾತ್ಯಾತೀತ ಜನತಾದಳ ಬಗೆದ ದ್ರೋಹ ಇದು. ಸಾಂಸ್ಕೃತಿಕ ಐಕ್ಯತೆಗೆ ಇದು ಅಪಾಯಕಾರಿ. ಇತ್ತೀಚಿನ ರಾಜಕೀಯ ನಡೆಯ ಬಗ್ಗೆ ನನ್ನ ಮನಸ್ಸು ಕಳವಳದಲ್ಲಿದೆ. ಇಂಥ ಹೊತ್ತಿನಲ್ಲಿ ಒಮ್ಮೆ ಪ್ರಶಸ್ತಿ ಬಂದುಬಿಟ್ಟರೆ …. ಮನಸ್ಸು ಒಪ್ಪುತ್ತಿಲ್ಲ, ಬೇಡ” ಎಂದು ಹೇಳಿದ.
ನನ್ನ ಭಾಷಣವನ್ನು ಅಣ್ಣನ ಭಾಷಣಕ್ಕೆ ಹೋಲಿಸುತ್ತಿದ್ದರು. ಆತನ ಮರ್ಯಾದೆ ಕಾಪಾಡಲು ಸ್ಟೇಜಿನ ಮೇಲೆ ನಿಲ್ಲುವುದು ಅನಿವಾರ್ಯವಾಯಿತು. ಬಹುಶಃ 6 ನೇ ತರಗತಿಯಲ್ಲಿ “ಉತ್ಥಾನಪಾದ ಮತ್ತು ಸುರುಚಿಯ ಮಗ ಧ್ರುವ. ಅವನೆದುರು ಪ್ರತ್ಯಕ್ಷನಾದ ದೇವರು ‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಮಗು. . . .’ ಎಂದು ಒಂದಿಷ್ಟು ಕಂಠಪಾಠ ಮಾಡಿಕೊಂಡು ಹೊನ್ನಾವರದಲ್ಲಿ ಎರಡೋ ಮೂರೋ ಬಹುಮಾನ ತಂದೆ. ಒಂದಿಷ್ಟು ವಿಶ್ವಾಸ ಬಂತು.
ಈ ಸಂಸ್ಥೆಯೊಂದಿಗೆ ಅವನಿಗೆ ಒಂದು ಸಣ್ಣ ಭಾವನಾತ್ಮಕ ಸಂಬಂಧ ಕೂಡ ಇತ್ತು. ಯಾಕೆಂದರೆ ಏಳನೇ ತರಗತಿ ಮುಗಿದು ಬೇರೆ ಕಡೆ ಶಾಲೆಗೆ ಹೋಗಲು ಸಾಧ್ಯವೇ ಆಗದೆ ಬೇರೆ ಮನೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ಹೈಸ್ಕೂಲು ಪ್ರಾರಂಭ ಆಯ್ತು. ಈತ ಮೊದಲ ಬ್ಯಾಚಿನ ವಿದ್ಯಾರ್ಥಿ ಆಗಿದ್ದನು. ಇಲ್ಲಿಯ ಶಿಕ್ಷಕರಾದ ಜಿ. ಆರ್ ಭಟ್, ಲೋಕೇಶ್ವರ ಮಾಸ್ತರರು.. ಇವರೆಲ್ಲಾ ಇವನ ಪ್ರೀತಿಯ ಶಿಕ್ಷಕರಾಗಿದ್ದರು. ಈ ಆರ್ ಭಟ್ ಅವರು ಈತನ್ನು ತೆಗೆದುಕೊಳ್ಳು ತುಂಬಾ ಪ್ರಯತ್ನ ಮಾಡಿದ್ದರೂ ಬ್ರಾಹ್ಮಣರ ಲಾಬಿಯಿಂದ ಅದು ಸಾಧ್ಯ ಆಗಲಿಲ್ಲ.