Sunday 18 August 2013

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀಪಾದ ಅವರ ಸಂದರ್ನನ -ವಿಠ್ಠಲ ಭಂಡಾರಿ

1 . ಪ್ರಶಸ್ತಿ ಬಂದ ಈ ಸಂದರ್ಭ ತಮಗೆ ಏನೆನಿಸುತ್ತದೆ? 
ಇಂದಿನ ಸ್ಥಿತಿಗಳಲ್ಲಿ ಪ್ರಶಸ್ತಿ ಸ್ವಲ್ಪ ಮುಜುಗರ ತರುವಂತದ್ದೇ. ಸಂತೋಷ ಆಗಿಲ್ಲ ಅಂದರೆ ತಪ್ಪಾಗುತ್ತದೆ. ಹೆಚ್ಚಿದ ಹೊಣೆಗಾರಿಕೆಗಾಗಿ ಇನ್ನೂ ಸಿದ್ಧಗೊಳ್ಳಬೇಕಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಸ್ನೇಹಿತರು ಸಂತೋಷಪಟ್ಟು ಕರೆ ಮಾಡುತ್ತಿದ್ದಾರೆ. ಬಹುಶ: ಇದೇ ದೊಡ್ಡ ಸಂತೋಷ.
2 ನಿಮಗೆ ಈ ಮೊದಲೂ ಪ್ರಶಸ್ತಿಗಳು ಸಿಕ್ಕಿವೆ
ಹೌದು ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಶಿಕ್ಷಕ ಕೇಂದ್ರದ ಉತ್ತಮ ಶಿಕ್ಷಕ ಪ್ರಶಸ್ತಿ, ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಕನರ್ಾಟಕ ನಾಟಕ ಅಕಾಡೆಮಿಯ ಸಿ.ಜಿ.ಕೆ. ಪ್ರಶಸ್ತಿ, ಸದಾನಂದ ಸುವರ್ಣ ಪ್ರಶಸ್ತಿ ಕೆಲವು ನಾಟಕಗಳ ನಿದರ್ೇಶನಕ್ಕಾಗಿ ರಾಜ್ಯ, ರಾಷ್ಟ್ರಪ್ರಶಸ್ತಿಗಳು ಬಂದಿವೆ.
3 ಹೊಸ ಜವಾಬ್ದಾರಿ ಏನು? 
ತರಗತಿಯ ಕೋಣೆಗಳು, ಆಚೆಯ ಬದುಕನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಮೂಡಿಸುವಂತ ಹಂತ ತಲುಪಬೇಕಿದೆ. ಹಾಗಾಗಿ ಅದಕ್ಕೆ  ಸಜ್ಜುಗೊಳಿಸಬೇಕಾದುದೇ ದೊಡ್ಡ  ಜವಾಬ್ದಾರಿ ಅನಿಸುತ್ತಿದೆ.
4 . ಶಿಕ್ಷಕ ವೃತ್ತಿಯ ಬಗ್ಗೆ ಗೌರವ ಮೂಡಿದ್ದು ಹೇಗೆ? ಪ್ರಭಾವ ಬೀರಿದ ಶಿಕ್ಷಕರು ಯಾರು?
ನನ್ನ ತಂದೆ ಗಜಾನನ ಭಟ್ ಯಕ್ಷಗಾನ ಕಲಾವಿದರು, ಶಿಕ್ಷಕರೂ ಆಗಿದ್ದರು. ಯಕ್ಷಗಾನದಲ್ಲಿ ಅವರು ನಿರ್ವಹಿಸುತ್ತಿದ್ದ ಪಾತ್ರದಷ್ಟೇ ತರಗತಿಯಲ್ಲಿಯೂ ಆಕರ್ಷಕ ಪಾಠ ಮಾಡುತ್ತಿದ್ದರು. ಅಂತಯೇ ಪಿ.ಯು.ಸಿ. ಓದುತ್ತಿದ್ದಾಗ ಜಿ.ಆರ್. ಭಟ್ ಅನ್ನೋ ಶಿಕ್ಷರರು ರನ್ನನ ಗದಾಯುದ್ಧ ಪಾಠ ಮಾಡುತ್ತಿದ್ದ ರೀತಿ, ಕಾಲೇಜು ಓದುತ್ತಿದ್ದಾಗ ಸಾಹಿತಿ-ಉಪನ್ಯಾಸಕರಾಗಿದ್ದ ಶ್ರೀ ಜಿ.ಎಸ್. ಅವಧಾನಿ ಹಾಗೂ ತರಗತಿ ಕೋಣೆಗಳ ಹೊರಗೆ ಡಾ. ಆರ್.ವಿ. ಭಂಡಾರಿ- ಇವರೆಲ್ಲರ ವ್ಯಕ್ತಿತ್ವ ನನಗೆ ಶಿಕ್ಷಕ ವೃತ್ತಿಯ ಕುರಿತು ಗೌರವ ಮೂಡಿಸಿದೆ.
4. ಶಿಕ್ಷಕ ವೃತ್ತಿಯ ಮೇಲೆ ಸಮಾಜದಲ್ಲಿ ಗೌರವ ಕಡಿಮೆಯಾಗಿದೆ ಅನಿಸುತ್ತಿದೆಯೇ? ಏಕೆ? 
ಮೇಲು ನೋಟಕ್ಕೆ ಶಿಕ್ಷಣ ಕ್ಷೇತ್ರ ಹೆಚ್ಚು ವ್ಯಾಪಕವಾಗಿ ತೆರೆದುಕೊಂಡಿದೆ ಎನಿಸುತ್ತದೆ. ತಾಂತ್ರಿಕವಾಗಿ ತರಗತಿಗಳು ಶ್ರೀಮಂತಗೊಂಡಿವೆ. ಆದರೆ ಶಿಕ್ಷಣ ವಿಪತ್ತಿನಲ್ಲಿದೆ. ಯಾವೊಬ್ಬ ಪಾಲಕರೂ ಮಕ್ಕಳ ವ್ಯಕ್ತಿತ್ವ ನಿರೂಪಣೆಗೆ ಶಿಕ್ಷಣ ಬೇಕು ಎಂದು ಕೇಳುತ್ತಿಲ್ಲ. ಗರಿಷ್ಟ ಸಂಬಳ ತರುವ ಉದ್ಯೋಗಕ್ಕಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಬೇಕು ಎನ್ನುತ್ತಿದ್ದಾರೆ. ಈ ಮಾರುಕಟ್ಟೆಯ ಸರಕನ್ನು ತಯಾರಿಸುವ ಭರದಲ್ಲಿ ಶಿಕ್ಷಕರೂ ಮುಂದಾಗುತ್ತಿದ್ದಾರೆ. ಇದು ದೊಡ್ಡ ವಿಪತ್ತು ಎಂದು ನನಗನಿಸುತ್ತಿದೆ. ಮಾರುಕಟ್ಟೆಯ ಸರಕಿನಲ್ಲಿ ಶಿಕ್ಷಕನೂ ಒಬ್ಬನಾದ ಮೇಲೆ ಅವನಿಗೆ ವಿಶೇಷ ಗೌರವ ಸಿಗಲು ಹೇಗೆ ಸಾಧ್ಯ?
ಬಹಳ ಮುಖ್ಯವಾಗಿ ಶಿಕ್ಷಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಡೆಗಣಿಸುತ್ತಿದ್ದಾರೆ. ಸಮುದಾಯದ ಸಾಂಸ್ಕೃತಿಕ ಕಾರ್ಯಗಳ ನೇತಾರರಾಗಬೇಕಿದ್ದ ಶಿಕ್ಷಕರು ಅದರಿಂದ ಪಲಾಯನ ಮಾಡುತ್ತಿದ್ದಾರೆ. ಇದೂ ಸಹ ಶಿಕ್ಷಕರ ಗೌರವ ಕಡಿಮೆಯಾಗಲು ಕಾರಣವಾಗಿದೆ.
5. ರಂಗ ಭೂಮಿಯ ನಂಟು ಯಾವಾಗಿನಿಂದ ಪ್ರಾರಂಭವಾಯಿತು? ಹೇಗೆ? 
ತಂದೆಯ ಜೊತೆ ಯಕ್ಷಗಾನಕ್ಕೆ ಬಂದೆ. ಅಣ್ಣ ಕಿರಣನ ಜೊತೆ ಆಧುನಿಕ ರಂಗಭೂಮಿಗೆ ಬಂದೆ. ಸುತ್ತಲಿನ ಸಾಂಸ್ಕೃತಿಕ ಹಬ್ಬಗಳು ಬಹು ದೊಡ್ಡ ಪ್ರೇರಣೆ ನೀಡಿದುವು. ಚಿಂತನ ಉತ್ತರ ಕನ್ನಡ ಸಂಘಟನೆ ಅಸ್ತಿತ್ವ ಒದಗಿಸಿತು. ಮುಂದೆ ರಂಗ ಕೆಲಸ ವಿಸ್ತಾರ ಪಡೆಯಿತು.  ಈಗ ಹೊರ ರಾಜ್ಯಗಳಲ್ಲೂ ರಂಗಭೂಮಿಯ ಕೆಲಸಕ್ಕಾಗಿ ಪ್ರಯಾಣ ಮಾಡುತ್ತಲೇ ಇರುತ್ತೇನೆ. ಚಿಕ್ಕಂದಿನಲ್ಲಿ ಪ್ರಭಾವ ಬೀರಿದ ಯಕ್ಷಗಾನ, ನಂತರದಲ್ಲಿ ಉದ್ದೀಪಿಸಿದ ಸಾಹಿತ್ಯ ಕೃತಿಗಳು, ಮೊದಲಿನಿಂದಲೂ ಒದಗಿ ಬಂದ ಸಂಗೀತ ಸಂಬಂಧ ಇವೆಲ್ಲ ಬಣ್ಣಗೊಂಡು, ಪಾಕಗೊಂಡು ರಂಗಭೂಮಿಯಲ್ಲಿ ನೆಲೆ ನಿಲ್ಲಲು ಕಾರಣವಾಗಿವೆ.
6. ರಂಗಭೂಮಿ ಮತ್ತು ಶಿಕ್ಷಣದ ಸಂಬಂಧ ಹೇಗಿರಬೇಕು? ರಂಗಭೂಮಿಯ ನಿಮ್ಮ ಸಂಬಂಧ ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಕ್ಕೆ ಬಂದಿದೆಯೇ ?
ಮೂಲಭೂತವಾಗಿ ರಂಗಭೂಮಿಯ ಕೆಲಸ ಶಿಕ್ಷಕನ ಕೆಲಸಕ್ಕಿಂತ ಬೇರೆಯಲ್ಲ. ರಂಗಭೂಮಿಯಲ್ಲಿ ನಟ ಪಠ್ಯವನ್ನು ಪ್ರೇಕ್ಷಕರಿಗೆ ಮುಟ್ಟಿಸುತ್ತಾನೆ, ಸಂಸ್ಕಾರಗೊಳಿಸುತ್ತಾನೆ. ಶಿಕ್ಷಕನೂ ಪಠ್ಯವನ್ನು ವಿದ್ಯಾಥರ್ಿಗಳಿಗೆ ಮುಟ್ಟಿಸುತ್ತಲೇ ಅವರ ಸಂಸ್ಕಾರಕ್ಕೆ ಕಾರಣನಾಗುತ್ತಾನೆ. ರಂಗಶಿಕ್ಷಣ ಪಡೆಯದ ವ್ಯಕ್ತಿ ಅಥವಾ ಆ ಕುರಿತು ಆಸಕ್ತಿಯನ್ನು ಮೂಡಿಸಿಕೊಳ್ಳದ ಶಿಕ್ಷಕ ಉತ್ತಮ ಶಿಕ್ಷಕನಾಗಲಾರ ಎಂದೇ ನನ್ನ ಭಾವನೆ. ಶಿಕ್ಷಕ ತರಗತಿಗೆ ಪ್ರವೇಶಿಸುವ ಕ್ರಮ, ವಿದ್ಯಾಥರ್ಿಗಳೊಂದಿಗಿನ ಸ್ಪಂದನೆ, ಚಟುವಟಿಕೆಗಳೊಂದಿಗೆ ಇರಿಸಿಕೊಳ್ಳಬೇಕಾದ ಸುಸಂಬಂಧ, ಪಠ್ಯದ ಓದುವಿಕೆ, ಸ್ವರಭಾರ ಇವೆಲ್ಲವುಗಳೂ ರಂಗಭೂಮಿಯ ಪ್ರಾಥಮಿಕ ಸಂಗತಿಗಳು. ಶಿಕ್ಷಕ ಇವುಗಳಿಂದ ಪ್ರೇರಣೆ ಪಡೆದರೆ ದಿನನಿತ್ಯದ ತರಗತಿಗಳೂ ನಲಿ-ಕಲಿಯೇ ಆಗುತ್ತದೆ.
7. ಹಾಗಾದರೆ ಬಹಳಷ್ಟು ಜನ ರಂಗ ಭೂಮಿಯನ್ನು ಒಂದು ಪಠ್ಯೇತರ ಚಟುವಟಿಕೆ ಅಂತ ಭಾವಿಸುತ್ತಾರಲ್ಲ ?
 ರಂಗಭೂಮಿಯೇ ನಿಜವಾದ ಪಠ್ಯ. ಅದು ವ್ಯಕ್ತಿಗಳ ದೇಹ- ಮನಸ್ಸನ್ನು ಏಕತ್ರವಾಗಿ ಸುಂದರಗೊಳಿಸುತ್ತದೆ. ಬಿ.ಎಡ್, ಎಂ.ಎಡ್ ಗಳಲ್ಲಿ ರಂಗಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಶಿಕ್ಷಕರ ತರಬೇತಿಯ ಸ್ವರೂಪವೂ ಬದಲಾಗುತ್ತದೆ. ಇಂದು ರಂಗಶಿಬಿರಗಳಲ್ಲಿ ತೆರೆದುಕೊಳ್ಳುವಷ್ಟು ಪ್ರಭುದ್ಧವಾಗಿ ಮಕ್ಕಳು ತರಗತಿಗಳಲ್ಲಿ ತೆರೆದುಕೊಳ್ಳಲಾರರು ಎಂಬುದನ್ನು ನಾವು ಗಮನಸಿದರೆ ಶಿಕ್ಷಣವು ರಂಗಭೂಮಿಯ ಸಂಬಂಧವನ್ನು ಹೇಗೆ ಧರಿಸಿಕೊಳ್ಳಬಹುದೆಂಬುದು ತಿಳಿದುಬರುತ್ತದೆ.
8. ನಿಮ್ಮ ನಿದರ್ೇಶನದ ಪಾಠ ನಾಟಕ ಪ್ರಯೋಗದ ಉದ್ದೇಶ ಸಫಲವಾಯಿತೇ?
ಪಾಠ ನಾಟಕ ನನ್ನ ಕನಸಾಗಿತ್ತು. 100ಕ್ಕೂ ಹೆಚ್ಚು ಪ್ರದರ್ಶನ ನಡೆದ ಪಾಠ ನಾಟಕ ಪ್ರದರ್ಶನಗಳು ವಿದ್ಯಾಥರ್ಿಗಳನ್ನು ಮಾತ್ರವಲ್ಲ ಶಿಕ್ಷಕರನ್ನೂ ಸಾಕಷ್ಟು ಪರಿಭಾವಿಸಿದೆ.
9. ನೀವು ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇಕೆ? ಇದು ಅಂತಹ ಖ್ಯಾತಿ ತಂದು ಕೊಡುವ ವಿಭಾಗ ಅಲ್ಲವಲ್ಲ.!
ನಿಜ. ಮಕ್ಕಳ ರಂಗ ಭೂಮಿಯು ಅಂಥ ಖ್ಯಾತಿ ತಂದುಕೊಡುವ ಕ್ಷೇತ್ರವಲ್ಲ. ಆದರೆ ಮಕ್ಕಳ ರಂಗಭೂಮಿ ನನಗೆ ಕಲಿಸಿಕೊಟ್ಟ ಪಾಠ, ನಾನು ದೊಡ್ಡವರ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಲು ಕಾರಣವಾಗಿದೆ. ಮೂಲತಃ ಮಕ್ಕಳ ರಂಗಭೂಮಿ ಜೀವನದ ಹಲವು ಪೂರ್ವಗ್ರಹೀತ ಕಲ್ಪನೆಯನ್ನು ಒಡೆದುಹಾಕುತ್ತದೆ. ತರ್ಕದ ಆಚೆ ಜಿಗಿಯುವ ಶಕ್ತಿಯನ್ನು, ಮುರಿದು ಕಟ್ಟುವ ಬಗೆಯನ್ನು ಮಕ್ಕಳ ರಂಗಭೂಮಿ ನನಗೆ ಕಲಿಸಿದೆ. ಗೋವಿನ ಹಾಡು ನಾಟಕ ಮಾಡಿಸುವಾಗ ಅಂತಹ ಒಳ್ಳೆಯ ಹುಲಿ ಯಾಕೆ ಸಾಯಬೇಕು? ಎಂದು ಕೇಳಿದ ಬಾಲಕಿಯೊಬ್ಬಳ ಪ್ರಶ್ನೆ ನನ್ನನ್ನು ಪಠ್ಯ ಬಗೆಯುವ ಹೊಸ ಕ್ರಮಕ್ಕೆ ತೆರೆದುಕೊಳ್ಳಲು ಅನುವು ನೀಡಿತು. ನನಗೆ ನನ್ನ ಶಕ್ತಿ ಮತ್ತು ಮಿತಿ ಎರಡೂ ಗೋಚರವಾಗುವುದು ಮಕ್ಕಳ ರಂಗಭೂಮಿಯಲ್ಲಿಯೇ. ಅಲ್ಲದೇ ಖ್ಯಾತಿ ಇಲ್ಲವೇ ಇಲ್ಲವೆಂದಲ್ಲ. `ಕಂಸಾಯಣವನ್ನು ಮಕ್ಕಳಿಗಾಗಿ ನಿದರ್ೇಶಿಸಿದೆ. ದೆಹಲಿಯಲ್ಲಿ ಪ್ರದರ್ಶನಗೊಂಡಿತು. ಅದು ನನಗೆ ಬಹಳ ಖ್ಯಾತಿಯನ್ನು ತಂದುಕೊಟ್ಟಿದೆ.
10. ನೀವು ವಿದ್ಯಾಥರ್ಿಗಳೊಂದಿಗೆ ನಡೆಸಿದ ಹೊಸ ಪ್ರಯೋಗ ?
ಪಠ್ಯಾಧಾರಿತ ವಿಚಾರಸಂಕಿರಣ, ಕವನಗಳಿಗೆ ಚಿತ್ರ ಸ್ಪಂದನೆ, ವಿದ್ಯಾಥರ್ಿಗಳು ಶಿಕ್ಷಕರಾಗಿ ಪಾಠ ನಿರ್ವಹಿಸಲು ಬಿಡುವುದು, ಓದಿನ ಗುಂಪು ಸಿದ್ಧಪಡಿಸುವುದು ಇತ್ಯಾದಿ. ಕೆಲವು ಕಾಲೇಜುಗಳಲ್ಲಿ ನಾನು ನಡೆಸಿದ ಹಾಗೂ ಈಗಲೂ ನಡೆಸುತ್ತಿರುವ ವಾಚನಾಭಿರುಚಿ ಕಮ್ಮಟ ನನ್ನ ಪ್ರಿಯ ಕಾರ್ಯಕ್ರಮಗಳಲ್ಲಿ ಒಂದು.
11. ವಿದ್ಯಾಥರ್ಿಗಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಬೆಳೆಸುವಲ್ಲಿ ಶಿಕ್ಷಕರು ವಹಿಸಬೇಕಾದ ಪಾತ್ರ ಏನು?
 ಶಿಕ್ಷಕರೆಲ್ಲರೂ ತೊತ್ತೋಚಾನ್ ಪುಸ್ತಕದಲ್ಲಿ ಮೂಡಿಬಂದಂತಹ ಶಾಲೆಯೊಂದನ್ನು ಸಿದ್ಧಗೊಳಿಸಲು ಪ್ರಯತ್ನ ಪಟ್ಟರೆ ಸಾಕು.
12. ನೀವು ವೃತ್ತಿಗೆ ಸೇರಿದಾಗಿನ ಮಕ್ಕಳ ಮನಃಸ್ಥಿತಿಗೂ ಈಗಿನ ಮಕ್ಕಳ ಮನಃಸ್ಥಿತಿಗೂ ಇರುವ ವ್ಯತ್ಯಾಸ ಏನು? 
ನಾನು ವೃತ್ತಿಗೆ ಸೇರಿದಾಗ ನಮ್ಮ ಮತ್ತು ವಿದ್ಯಾಥರ್ಿಗಳ ಸಂಬಂಧ ಹೆಚ್ಚು ಭಾವನಾತ್ಮಕವಾಗಿದ್ದರೆ, ಈಗ ಹೆಚ್ಚು ಹೆಚ್ಚು ಯಾಂತ್ರಿಕವಾಗುತ್ತಿದೆ. ನಮಗೆ ಮಕ್ಕಳು ಹಾಗೂ ಮಕ್ಕಳಿಗೆ ನಾವು ಸರಕುಗಳಾಗಿ ಕಾಣಿಸುತ್ತಿದ್ದೇವೇನೋ ಎನಿಸುತ್ತಿದೆ. ಆದರೂ ಇಂದಿನ ಮಕ್ಕಳು ತುಂಬ ಸೂಕ್ಷ್ಮರು. ಕೆಲವೊಮ್ಮೆ ನನಗನ್ನಿಸುತ್ತದೆ, ನಾವು ಶಿಕ್ಷಕರು ಕೆಟ್ಟ ಬೋರ್ ಹೊಡೆಸುವ ಧಾರಾವಾಹಿಗಳಂತಿದ್ದೇವೆ; ಮಕ್ಕಳು ಜಾಹೀರಾತಿನಂತಿದ್ದಾರೆ ಎಂದು.
13. ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ತುತರ್ು ಬದಲಾವಣೆ ಕುರಿತು ಹೇಳಿ? 
ಸಮಾಜದ ಅವಶ್ಯಕತೆಗೆ ಶಿಕ್ಷಣ ಸ್ಪಂದಿಸುತ್ತಲೇ ಶಿಕ್ಷಣದ ನಿಜ ಕನಸುಗಳೇನಿದೆಯೋ ಅದು ರೂಪಿತ ಆಗಬಹುದಾದ ಸಮಾಜವನ್ನು ನಿಮರ್ಿಸುವುದು ಇಂದಿನ ತುತರ್ು.
14. ಶಾಲೆ-ಪಾಠ-ಕಾಗದ ಪತ್ರದ ನಡುವೆ ಬೇರೆ ಕೆಲಸ ಸಾಧ್ಯವೇ ಇಲ್ಲ ಅನ್ನುತ್ತಾರಲ್ಲ! ನೀವು ಹೇಗೆ ಕೆಲಸ ಮಾಡುತ್ತೀರಿ? 
ಕಾಗದ ಪತ್ರಗಳ ನಡುವಿನಿಂದ ಹೊರ ಕೆಲಸಗಳಿಗೆ ಬರುವಾಗ ಅನಿವಾರ್ಯವಾದ ಕೆಲವು ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ. ಕೆಲವೊಮ್ಮೆ ಆರೋಗ್ಯ-ಹಣ ಎರಡನ್ನೂ ತ್ಯಾಗ ಮಾಡಬೇಕಾದ ಪ್ರಸಂಗ ನನಗೆ ಒದಗಿದೆ. ಆದರೆ ಅದರಿಂದ ಆಗಿರುವ ತೃಪ್ತಿಗೆ ಬೇರಾವುದೂ ಸಾಟಿಯಲ್ಲ.
13. ವಿದ್ಯಾಥರ್ಿಗಳಿಗೆ ನೈತಿಕ ಮೌಲ್ಯದ ಬಗ್ಗೆ ಇತ್ತೀಚಿಗೆ ಹೇಳಲಾಗುತ್ತಿದೆ. ಏನಿದು ಈ ನೈತಿಕ ಮೌಲ್ಯ ? 
ನೀತಿ ಎನ್ನುವುದು ಹೇರಿಕೆಯ ವಸ್ತುವಲ್ಲ. ಅಥವಾ ಅದಕ್ಕಾಗಿಯೇ ತರಗತಿಯನ್ನು ಪ್ರತ್ಯೇಕವಾಗಿ ಸಿದ್ಧಗೊಳಿಸಬೇಕಿಲ್ಲ. ಒಳ್ಳೆಯ ಸಾಹಿತ್ಯದ ಓದಿಗಿಂತ ಉತ್ತಮ ನೀತಿ ಬೇರೊಂದಿಲ್ಲ. ಆದರೆ ಇಂದು ನೀತಿಯ ಹೆಸರಿನಲ್ಲಿ ಮತೀಯ ಶಿಕ್ಷಣದ ಹುನ್ನಾರವೂ ಸೇರಿಕೊಳ್ಳುತ್ತಿರುವುದರಿಂದ ನೀತಿ ಶಿಕ್ಷಣ ಅಂದ ಕೂಡಲೇ ಯಾರ ನೀತಿ? ಯಾವ ನೀತಿ? ಎಂಬೆಲ್ಲ ಪ್ರಶ್ನೆಗಳನ್ನು ಹಾಕಿಕೊಂಡೇ ಮುಂದುವರಿಯಬೇಕಾಗುತ್ತದೆ.
14 . ಶಿಕ್ಷಕ ಪಠ್ಯಕೇಂದ್ರಿತವಾಗಿರಬೇಕೋ? ಸಮಾಜ ಕೇಂದ್ರಿತವಾಗಿರಬೇಕೋ? 
ಶಿಕ್ಷಕ ಪಠ್ಯ ಕೇಂದ್ರಿತನಾದಾಗ ಯಾರೋ ಒಬ್ಬರ ಸಾಧನ (ಣಠಠಟ) ಮಾತ್ರ ಆಗಲು ಸಾಧ್ಯ. ಸಮಾಜ ಕೇಂದ್ರಿತವಾದ ಚಿಂತನೆ ಶುರು ಮಾಡಿದಾಗ ಮನುಷ್ಯನಾಗಲು ಸಾಧ್ಯ. ನಿಜವಾಗಿ ಪಠ್ಯ ಎನ್ನುವುದೇ ಒಂದು ಣಠಠಟ. ಅದರಾಚೆ ಜಿಗಿಯದೇ ಯಾವ ಸೃಜನ ಕ್ರಿಯೆಯೂ ಸಾಧ್ಯವಿಲ್ಲ 

No comments:

Post a Comment