Thursday 27 June 2013

ಗಿರಿ ಪಿಕಳೆ avara ಮಕ್ಕಳ ಪದಗಳು- R V Bhandari

ಮಕ್ಕಳ ಪದಗಳು
ಗಿರಿ ಪಿಕಳೆ ಎಂದರೆ ಖ್ಯಾತ ಕಾಮರ್ಿಕ ಧುರೀಣ ಮತ್ತು ಶೈಕ್ಷಣಿಕ ವ್ಯಕ್ತಿ. ಈ ಶೇಷಗಿರಿ ಪಿಕಳೆ ಅಂಕೋಲದವರು. ತಾವು ಉದ್ಯೋಗದಿಂದ ಕವಿಗಳಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಹಾಗಾದರೆ ಈ ರೈತ-ಕಾಮರ್ಿಕ ಧುರೀಣನಿಗೂ ಈ ಮಕ್ಕಳ ಪದಗಳಿಗೂ ಎಲ್ಲಿಗೆ ಎಲ್ಲಿಯ ಸಂಬಂಧ! ಕೂಗು, ಸ್ಲೋಗನ್, ಹೊರಡಲಿ ಜಾಥಾವೆನ್ನುವ ಕಾಮರ್ಿಕ ಕಠೋರತೆ ಎಲ್ಲಿ, ಮಕ್ಕಳು ಮನಸ್ಸಿಗೆ ಮಿಡಿಯುವ ಮನಸ್ಸೆಲ್ಲಿ? ಆದರೆ ಇಲ್ಲೇ ಇರುವುದು ಶೇಷಗಿರಿ ಪಿಕಳೆಯವರ ವ್ಯಕ್ತಿತ್ವದ ವೈಶಿಷ್ಟ್ಯ. ಒಬ್ಬ ನಿಜ ನೇತಾರನ ಯೋಚನೆ ಕೇವಲ ವರ್ತಮಾನವಲ್ಲ. ಅದು ಭವಿಷ್ಯತ್ತನ್ನು ಸಮೃದ್ಧ ಕನಸನ್ನಾಗಿ ಕಟ್ಟಿಕೊಳ್ಳುವಂತಹದು. ಶೇಷಗಿರಿ ಪಿಕಳೆ ಉತ್ತರ ಕನ್ನಡ ಜಿಲ್ಲೆಯ ರೈತ ಅಂದೋಲನ ಸಂದರ್ಭದಲ್ಲಿ ಅತ್ಯಂತ ವೀರ ಮತ್ತು ತ್ಯಾಗದಿಂದ ಹೋರಾಡಿದರು. ಉತ್ತರ ಕನ್ನಡದಲ್ಲಿ ರೈತ ಹೋರಾಟವನ್ನು, ಶೈಕ್ಷಣಿಕ ಆಂದೋಲನವನ್ನು ಶುರುಮಾಡಿ ಬೆಳೆಸಿದವರಲ್ಲಿ ಡಾ. ದಿನಕರ ದೆಸಾಯಿಯವರ ಸಂಗಡ ಶ್ರಮಿಸಿದವರು.

ಹೀಗಾಗಿ ಪಿಕಳೆಯವರು ಶೈಕ್ಷಣಿಕ ವ್ಯಕ್ತಿ. ಈ ವ್ಯಕ್ತಿಗೆ ಬಾಲವಾಡಿ, ಪ್ರಾಥಮಿಕ ಶಾಲೆಯ ಮಕ್ಕಳ ಮಧ್ಯೆಯೇ ವೇಳೆ ಕಳೆಯುವ ಒತ್ತಡ. ಆದ್ದರಿಂದ ಮಕ್ಕಳ ಶೈಕ್ಷಣಿಕ ಮನೋವಿಜ್ಞಾನಿ ಕೂಡ. ಈ ಹಿನ್ನೆಲೆಯಲ್ಲಿ ಪಿಕಳೆಯವರ ಮಕ್ಕಳ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ನವೀನ ಪ್ರಯೋಗವಾಗಿದೆ. ಇಂಥ ಪ್ರಯೋಗ ಮತ್ತೆಲ್ಲೂ ನಡೆದಿಲ್ಲ.

ಪಿಕಳೆಯವರು ಚಿಕ್ಕ ಮಕ್ಕಳ ಸಹಜ ವರ್ತನೆಯನ್ನು ಅವರಲ್ಲಿ ಬೆರೆತು ಮತ್ತು ಮರೆಯಾಗಿ ನಿಂತು ನಿರೀಕ್ಷಿಸಿದರು. ಅವರ ಶಾಲೆಯ ಶಿಕ್ಷಕರು ಮಕ್ಕಳ ಸಾಹಿತ್ಯದ ಕೊರತೆ ಎಂದಾಗ, ಈ ನಿರೀಕ್ಷಣೆಯ ಹಿನ್ನೆಲೆಯಲ್ಲಿ ಪದ ರಚಿಸಿದರು.
ಅದನ್ನು ಮತ್ತೆ ಮಕ್ಕಳ ಮಧ್ಯ ಹಾಡಿದರು. ಹಾಡಿಸಿದರು. ಅವರ ಪ್ರತಿಕ್ರಿಯೆ ಪಡೆದರು. ಭಾಷೆ ಭಾವಗಳ ಅರಿತು ಮತ್ತೆ ಮರುರಚನೆ ಮಾಡಿದರು. ಮತ್ತೆ ವಾಚಿಸಿದರು. ಇಂಥ ವಾಚನದ ಮಧ್ಯ ಮೂಡಿ ಬಂದುದು ಈ ಪುಸ್ತಕದ ಮುಖಪುಟ ಮತ್ತು ಒಳ ಪುಟಗಳಲ್ಲಿಯ ಮತ್ತು ಒಳಚಿತ್ರ. ಈ ಚಿತ್ರ ಬಿಡಿಸಿದ ಹುಡುಗ ಈಗ ಮೇಲಿನ ತರಗತಿಗೆ ಹೋಗಿದ್ದಾನೆ. ಹೀಗೆ ಈ ಕಾಮರ್ಿಕ ಧುರೀಣ ಭವಿಷ್ಯದ ಕನಸು ಮಕ್ಕಳಲ್ಲಿ ಗುಡಿ ಕಟ್ಟಿದೆ.

ಕವಿ ಮನಸ್ಸಿನಲ್ಲಿ ತುಂಬಿರುವ ಪ್ರೇರಣೆಯಿಂದ ಹುಟ್ಟಿದ ಕವನಗಳು ಇವಲ್ಲ. ಕಾವ್ಯ ಸೌರಭ, ಲಾವಣ್ಯಗಳು ಈ ಚಿಕ್ಕ ಕವನಗಳಲ್ಲಿ ಇರುವುದಿಲ್ಲವೆಂದು ನನಗೆ ಗೊತ್ತು ಎಂದು ತಾವೇ ಹೇಳಿಕೊಂಡಿದ್ದಾರೆ. ಆದರೆ ಗೌರೀಶ ಕಾಯ್ಕಿಣಿಯವರು ಗುರುತಿಸಿರುವಂತೆ ಇದು ಕೆಲ ಕವನಗಳಲ್ಲಿ ಹೌದು, ಆದರೆ ಪುಟ್ಟ ಟಿ.ವಿ. ಪುಟ್ಟನ ಟೆಂಪೂ, ನನ್ನ ಮನೆ, ರವಿ ಬಂದ, ಗುಬ್ಬಚ್ಚಿ ಸಂವಾದ, ಕನ್ನಡಿಯ ಮುಂದೆ, ಕಪ್ಪೆಯ ಮದುವೆ, ಕಾಗಣ್ಣದಂತಹ ಕವನಗಳಿಗೆ ಸಂಬಂಧವಿಲ್ಲ. ಕಾವ್ಯದ ಕಲ್ಪನೆ ಮತ್ತು ವಾಸ್ತವ ಹದವಾಗೇ ಬೆರೆತು ಬಂದ ಕವಿತೆಗಳಿವು. ಈ ಎಲ್ಲದರ ಹಿಂದೆ ಒಂದು ಸಮಾಜವಾದಿ ಎಚ್ಚರವಿದೆ. ಅದು ಪಕ್ಷದ್ದಲ್ಲ, ವೈಜ್ಞಾನಿಕ ಮಾನವತೆಗೆ ಬದ್ಧತೆ ಹೊಂದಿದ್ದು, ಇಂಥ ದಿಸೆಯಲ್ಲಿ ಒಂದು ಹೊಸ ಪ್ರಯೋಗ ಕೂಡಾ ಆಗಿದೆ.

ಅನೇಕ ಪದ್ಯಗಳು ಆಹ್ಲಾದಕರವಾಗಿ ಮಕ್ಕಳ ಮನಸ್ಸನ್ನು ಮುದಗೊಳಿಸಬಲ್ಲವು. 'ಅಕ್ಕವರ' ಮಗ ಒಂದು ವಿದ್ರಾವಕ ಕವಿತೆ ಗಂಡ ಹೆಂಡರಿಬ್ಬರೂ ದುಡಿಯುತ್ತಿರುವವರೆ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮೂಡಿ ಬಂದ ಹೊಸ ಕವಿತೆ ಇದು. ಇದನ್ನು ದೊಡ್ಡವರು ಓದಬೇಕು.

ಹೀಗೆ ವೈಜ್ಞಾನಿಕಕ್ಕೊಳಪಟ್ಟು ಒಳ್ಳೆಯ ಮಕ್ಕಳ ಕವಿತೆಯನ್ನು ಕೊಡುವ ಸಂಕಲನ 'ಮಕ್ಕಳ ಪದಗಳು'.
* ಜನಮಾಧ್ಯಮ, ಸಿಸರ್ಿ 7.1.1999

No comments:

Post a Comment